ಶುಕ್ರವಾರ, ಜನವರಿ 28, 2011

ಕನ್ನಡ ಜಾತ್ರೆ...ಜನಮನಗಳ ಯಾತ್ರೆ

ಪುನಃ ಪ್ರತಿ ವರ್ಷದಂತೆ ಈ ಭಾರಿಯು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಮ್ಮ ಕರ್ನಾಟಕದ ಹೆಮ್ಮೆಯ ರಾಜಾಧಾನಿಯಾದ ಬೆಂಗಳೂರಿನಲ್ಲಿ ಪೆಬ್ರವರಿ ಮೊದಲ ವಾರದಲ್ಲಿ ನಡೆಸುತ್ತಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ ಹಿರಿಯರು ಕನ್ನಡ ಪಂಡಿತರು ನಡೆದಾಡುವ ಕನ್ನಡ ನಿಘಂಟು ಎಂದು ಮನೆ ಮಾತಾಗಿರುವ ಜಿ. ವೆಂಕಟಸುಬ್ಬಯ್ಯರವರನ್ನು ಆರಿಸಲಾಗಿದೆ. ಅವರ ಬಹು ಜನಪ್ರಿಯ ಅಂಕಣವಾದ ಇಗೋ ಕನ್ನಡ ಪ್ರಜಾವಾಣಿಯಲ್ಲಿ ಹಲವಾರು ವರ್ಷಗಳ ಕಾಲ ಜನಸಾಮಾನ್ಯರ ಕನ್ನಡ ಪದಗಳ ಉಪಯೋಗ ಮತ್ತು ಅದರ ಪ್ರಾಮುಖ್ಯತೆಯನ್ನು ಓದುಗರ ಪ್ರಶ್ನೆಗಳ ಮೊಲಕ ಉತ್ತರವನ್ನು ಪ್ರತಿ ವಾರ ಕೊಡುತ್ತಾ ಕನ್ನಡವನ್ನು ಬೆಳೆಸುವ ಕೆಲಸವನ್ನು ನಡೆಸಿದರು.



ಹೀಗೆ ಕನ್ನಡ ನಾಡು ನುಡಿಯ ಬೆಳವಣಿಗೆಗೆ ಅಪಾರವಾದ ಪರಿಶ್ರಮವನ್ನು ಪಟ್ಟಿರುವವರನ್ನು ಈ ರೀತಿಯ ದೊಡ್ಡ ಕನ್ನಡ ಸಮ್ಮೇಳನದಲ್ಲಿ ಸನಿಹದಿಂದ ಕಾಣುವುದು ಕನ್ನಡಿಗರ ಅದೃಷ್ಟ.




ನಾನು ಸ್ವತಃ ಬಾಗಿಯಾದ ಕನ್ನಡದ ಸಮ್ಮೇಳನಗಳೆಂದರೇ ಶಿವಮೊಗ್ಗ ಮತ್ತು ಚಿತ್ರದುರ್ಗದ ಸಮ್ಮೇಳನಗಳು. ಮೊದಲನೆಯದರಲ್ಲಿ ಕೊನೆಯ ದಿನ ಬಾಗವಹಿಸಿ ಒಂದೀಷ್ಟು ಪುಸ್ತಕಗಳನ್ನು ಖರೀದಿಸಿಕೊಂಡು ಬಂದಿದ್ದೇ. ಆದರೇ ಚಿತ್ರದುರ್ಗದ ಸಮ್ಮೇಳನದಲ್ಲಿ ಪೂರ್ಣವಾಗಿ ಮೂರು ದಿನಗಳು ಹೋಗಿ ಅಲ್ಲಿ ನಡೆಯುತ್ತಿದ್ದ ಸಾಹಿತ್ಯ ಕಾರ್ಯಕ್ರಮಗಳಲ್ಲಿ, ಗೋಷ್ಠಿಗಳಲ್ಲಿ ಹಿರಿಯರುಗಳು ಮಾತನಾಡಿದ ನುಡಿಗಳನ್ನು ಕಿವಿಗೆ ಹಾಕಿಕೊಂಡಿದ್ದೇ.


ಇತ್ತೀಚೆಗೆ ಸಾಹಿತ್ಯ ಸಮ್ಮೇಳನಗಳು ಕೇವಲ ಪೂರ್ಣವಾಗಿ ಸಾಹಿತ್ಯ ಸಮ್ಮೇಳನವಾಗಿ, ಸಾಹಿತಿಗಳಿಗೆ, ವಿದ್ಯಾವಂತರಿಗೆ ಮಾತ್ರ ಸೀಮಿತವಾಗಿಲ್ಲ. ಅದು ಅನಕ್ಷರರುಗಳಿಗೂ, ಸಾಮಾನ್ಯರಿಗೂ ಇಷ್ಟವಾಗುವ ರೀತಿಯಲ್ಲಿ ಒಂದು ಕನ್ನಡ ಜಾತ್ರೆಯಾಗಿ ಮಾರ್ಪಟಾಗಿದೆ. ಅದು ಒಂದು ರೀತಿಯಲ್ಲಿ ಉತ್ತಮ. ಅಂದ ಕ್ಷಣಕ್ಕೆ ಅದು ಪೂರ್ಣವಾಗಿ ಗದ್ದಲದಲ್ಲಿಯೇ ಮತ್ತು ಜನಜಂಗುಳಿಯಲ್ಲಿಯೇ ಕಳೆದು ಹೋಗಬಾರದು. ವರ್ಷಕ್ಕೆ ಒಮ್ಮೆ ನಡೆಯುವ ಈ ರೀತಿಯ ಮುಖ್ಯ ಸಮ್ಮೇಳನಗಳಲ್ಲಿ. ನಮ್ಮ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯ ಬಗೆಗೆ, ಇಂದಿನ ನಮ್ಮ ಈ ಹೈಟೆಕ್ ಯುಗದಲ್ಲಿ ನಮ್ಮ ಮಾತೃ ಭಾಷೆಯ ಉಳಿವು ಅದರಿಂದ ನಮ್ಮ ತರುಣ ಜನಾಂಗದ ಬದುಕು ಅಸನು ಮಾಡುವ ಮತ್ತು ಅದರೊಡನೆ ಅವರುಗಳ ಮನಸ್ಸು ನಮ್ಮ ಕನ್ನಡ ಭಾಷೆಯ ಕಡೆಗೆ ಪ್ರೀತಿಯನ್ನು ಹರಿಸುವಂತೆ ಮಾಡುವಲ್ಲಿ ಯಾವ ರೀತಿಯ ಮುಂದಿನ ಹೆಜ್ಜೆಗಳನ್ನು ಸಾಮಾನ್ಯ ಜನ, ಸಾಹಿತಿಗಳು, ಸರ್ಕಾರಗಳು, ಸಂಘ ಸಂಸ್ಥೆಗಳು ಮಾಡಬಹುದು ಎಂಬುದರ ಬಗ್ಗೆ ಚರ್ಚೆಯನ್ನು ಮಾಡುವ ಕಡೆಗೆ ನೋಟ ಹರಿಸಬೇಕು ಎಂಬುದು ಇಂದಿನ ಸಮಯದಲ್ಲಿ ಅತ್ಯಗತ್ಯ.


ಕೇವಲ ಕನ್ನಡ ಎಂದರೇ ಅದು ನಮ್ಮ ಹಳ್ಳಿಯ ಭಾಷೆ ಎಂಬ ಭಾವನೆಯನ್ನು ತೊಳೆಯಬೇಕು. ಅದಕ್ಕಿರುವ ನಿಜವಾದ ತಾಕತ್ತನ್ನು ಇಂದು ಇಂಗ್ಲೀಷ್ ಮತ್ತು ಕಾನ್ವೇಂಟ್ ಎಂದು ದಾಂಗುಡಿಯನ್ನು ಇಡುತ್ತಿರುವ ನಮ್ಮ ಬೆಂಗಳೂರು ಮಂದಿ ಮತ್ತು ಎಲ್ಲಾ ನಗರದ ಜನರುಗಳಿಗೆ ಮನನ ಮಾಡಿಕೊಡುವ ಕೆಲಸ ನಮ್ಮ ಸಾಂಸ್ಕೃತಿಯ ನೆತಾರರ ಬಹುಮುಖ್ಯ ಜವಾಬ್ದಾರಿಯಾಗಿದೆ.
ಕನ್ನಡವೆಂದರೇ ಕೇವಲ ಕಾರ್ಪೋರೇಶನ್ ಶಾಲೆಯಲ್ಲಿ ಸಿಗುವ ಒಂದು ಶಿಕ್ಷಣ ಮಾದ್ಯಮವಾಗಬಾರದು.




ನಾನು ಗಮನಿಸಿದಂತೆ ಮೂರು ದಿನಗಳಲ್ಲಿ ನಡೆಯುವ ಮುಂಜಾನೆಯಿಂದ ಸಂಜೆಯವರೆಗೆ ನಡೆಯುವ ವಿವಿಧವಾದ ಕನ್ನಡ ಕಾರ್ಯಕ್ರಮಗಳು,ಗೋಷ್ಠಿಗಳು ಮತ್ತು ಅದರಲ್ಲಿ ಬಾಗವಹಿಸುವ ಹಿರಿಯರು, ಸಂಸ್ಕೃತಿಯ ಪ್ರತಿಭೆಗಳು ಅವರ ಮಾತುಗಳು.. ನಿಜವಾಗಿಯೂ ತಲುಪವವರಿಗೆ ಸರಿಯಾಗಿ ತಲುಪುತ್ತಿದೀಯಾ ಎಂಬುದನ್ನು ಸಂಘಟಕರುಗಳು ನೋಡಬೇಕು. ಮತ್ತೇ ಅದೇಯಾದ ಪುನರಪಿ ಕಾರ್ಯಕ್ರಮಗಳು.. ಅಲ್ಲಿ ಯಾವುದೇ ರೀತಿಯಲ್ಲಿ ಸಾಮಾನ್ಯ ಜನರುಗಳಿಗೆ ಕೂತು ಕೇಳಿಸಿಕೊಳ್ಳೋಣ ಎನಿಸುವಂತೆ ಇಲ್ಲದಿರುವುದು. ಒಂದೊಂದು ಕಾರ್ಯಕ್ರಮಗಳಲ್ಲಂತೂ ವೇದಿಕೆಯ ಮೇಲೆ ಆಸೀನರಾದ ಸಂಖ್ಯೆಗೂ ಕಮ್ಮಿಯಾಗಿ ವೇದಿಕೆಯ ಮುಂದೆ ಇರುವುದು ನೋಡಿದರೇ ಯಾವ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿರುತ್ತಾರೆ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ.


ಈ ರೀತಿಯ ಸಾಹಿತ್ಯ ಸಂಸ್ಕೃತಿಯ ಚಿಂತನೆಯನ್ನು ಮಾಡುವ ಬಹುಮುಖ್ಯ ಕಾರ್ಯಕ್ರಮಗಳು ಹೆಚ್ಚು ಆಕರ್ಷಕವಾಗಿರುವಂತೆ ಮಾಡಬೇಕು. ಮತ್ತು ಸಾಮಾನ್ಯ ಜನರುಗಳನ್ನು, ತರುಣರನ್ನು ಸೆಳೆಯುವಂತೆ ಮಾಡಬೇಕು. ಸಾಹಿತ್ಯ ಎಂದರೇ ತುಂಬ ಸೀರಿಯಸ್ ಆಗುವಂತೆ ಆಗಬಾರದು. ಯಾಕೆಂದರೇ ಜನಸಾಮಾನ್ಯರುಗಳ ನಿತ್ಯವಾದ ಜೀವನ ಮತ್ತು ಅವರುಗಳು ಈ ಸಾಹಿತ್ಯದ ಮೂಲಕ ತಮ್ಮ ಅರಿವು, ಸಂತೋಷ ಬದುಕಿಗೊಂದು ಅರ್ಥವನ್ನು ಕಂಡುಕೊಳ್ಳುತ್ತಾರೆ.



ಒಂದೊಂದು ಕಾರ್ಯಕ್ರಮಗಳು ಎಷ್ಟೊಂದು ಬೋರ್ ಒಡೆಸೂತ್ತವೇ ಎಂದರೇ.. ಆ ವೇದಿಕೆಯ ಮೇಲೆ ಕುಳಿತಿರುವ ಬಹು ದೊಡ್ಡ ಕ್ಯೂ ನೋಡಿದರೇ ಸಭೀಕರುಗಳು ಹೆದರಿಕೊಳ್ಳುವಂತಾಗುತ್ತದೆ. ಆ ರೀತಿಯಲ್ಲಿ ಯಾಕಾದರೂ ಸಂಘಟಕರುಗಳು ಈ ರೀತಿಯ ಕಾರ್ಯಕ್ರಮಗಳನ್ನು ಯಾವ ಭರವಸೆಯ ಮೇಲೆ ಸೇರಿಸಿರುತ್ತಾರೋ.. ಇವೇ ಗೋಷ್ಠಿಗಳು ಇರಬೇಕು.. ಇಷ್ಟು ಜನರುಗಳು ಬೇಕೆ ಬೇಕು ಎಂಬಂತೆ ಈ ಕಾರ್ಯಕ್ರಮಗಳು ಇರಬಾರದು.



ಬಹು ದೂರದ ಊರುಗಳಿಂದ ಸಹೃದಯರುಗಳು ತಮ್ಮ ಪ್ರೀತಿ ಪಾತ್ರ ಕಣ್ಣಿಗೆ ಕಾಣದ ತನ್ನ ನೆಚ್ಚಿನ ಲೇಖಕರುಗಳನ್ನು, ಕವಿಗಳನ್ನು, ವಿಮರ್ಶಕರುಗಳನ್ನು, ಸಾಹಿತಿಗಳನ್ನು ಹತ್ತಿರದಿಂದ ತಮ್ಮ ಕಣ್ಣಾರೆ ಕಾಣಬೇಕು.. ಅವರ ಹಸ್ತಲಾಘವನ್ನು ಮಾಡಬೇಕು. ಅವರ ಮುಂದಿನ ಹೊಸ ಪುಸ್ತಕಗಳ ಬಗ್ಗೆ ವಿಚಾರಿಸಬೇಕು... ಎಂಬ ಆಸೆಯಿಂದ ಬರುತ್ತಾರೆ. ಆದರೇ ಅಲ್ಲಿ ಅವರುಗಳು ಯಾರನ್ನು ಅರಿಸಿ ಬರುತ್ತಾರೋ ಅವರುಗಳ ದರ್ಶನವೇ ಸಿಗದೇ .. ಹ್ಯಾಪು ಮೊರೆಯನ್ನು ಹಾಕಿಕೊಂಡು ಹೋಗುವಂತಾಗುತ್ತದೆ.


ಇಂಥ ಕಾರ್ಯಕ್ರಮಗಳು ಕಡಿಮೆ ದಿನಗಳಾದರೂ ಸಹ ವ್ಯವಸ್ಥಿತವಾಗಿ ನಡೆದು. ಕನ್ನಡದ ಪ್ರತಿಯೊಬ್ಬ ಹಿರಿ ಕಿರಿಯ ಸಾಹಿತಿಗಳು ಓದುಗರ ಜೊತೆ ಅಸಕ್ತಿಕರವಾಗಿ ಬಾಗವಹಿಸುವಂತಾಗಬೇಕು. ಅವರುಗಳ ಗೈರು ಹಾಜರಿ ನಿಜವಾಗಿಯೂ ಬೇಸರದ ಸಂಗತಿ. ಇದರ ಬಗ್ಗೆ ಸಾಹಿತ್ಯ ಪರಿಷತ್ ತಕ್ಕ ಕ್ರಮಗಳನ್ನು ತೆಗೆದುಕೊಂಡು ನಮ್ಮ ಕನ್ನಡ ಸಾಹಿತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ಮಾಡು ಕೆಲಸವನ್ನು ಮಾಡಬೇಕು.


ಕನ್ನಡ ನುಡಿಯ ಬೆಳವಣಿಗೆಯ ನಾಡಿ ಇರುವುದು ಸಾಮಾನ್ಯ ಕನ್ನಡ ಪ್ರಜೆಯ ಕೈಯಲ್ಲಿರುವುದು. ಅವನು ಮನಸ್ಸು ಮಾಡಿದರೇ ಯಾವುದು ಅಸಾಧ್ಯವಲ್ಲ. ಇಂದು ಕನ್ನಡ ಪುಸ್ತಕದ ಲೋಕದಲ್ಲಿ ಆಗುತ್ತಿರುವ ಬೆಳವಣಿಗೆಗಳು .. ಈ ರೀತಿಯ ಸಾಮಾನ್ಯ ಸಹೃದಯಿಯ ಅಸಕ್ತಿಯಿಂದ.. ಯಾವುದೇ ಇಂಗ್ಲೀಷ್ ಪುಸ್ತಕಗಳಿಗೆ ಸ್ಪರ್ದೆಯನ್ನು ನೀಡುವ ರೀತಿಯಲ್ಲಿ ಆಕರ್ಷಕವಾಗಿ ಪುಸ್ತಕಗಳು ಪ್ರಕಾಶನಗೊಳ್ಳುತ್ತಿರುವುದು ನಾವುಗಳು ಹೆಚ್ಚು ಸಂತೋಷಪಡುವ ಸಂಗತಿ.



ದಾಖಲೆಯ ರೀತಿಯಲ್ಲಿ ಹಿಂದಿನ ಎಲ್ಲಾ ಸಮ್ಮೇಳನಗಳಲ್ಲಿ ಪುಸ್ತಕಗಳ ಭರದ ಮಾರಾಟವಾಗುತ್ತಿರುವುದು.. ಇನ್ನೂ ನಮ್ಮ ಕನ್ನಡಿಗರ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡತನದ ಬಗ್ಗೆ ಇರುವ ಅಗಾಧ ಒಲವು. ಅದು ಇನ್ನೂ ಹೆಚ್ಚು ಹೆಚ್ಚು ಬೆಳೆಯುವಂತೆ ಉಳಿಸುವುದು ಮತ್ತು ಕಾಯುವುದು ಎಲ್ಲಾ ಸಾಂಸ್ಕೃತಿಕ ರಂಗದ ಕನ್ನಡಿಗರ ಕರ್ತವ್ಯ.


ಕನ್ನಡ ಎಂದರೇ ಪರಕಿಯ ಭಾಷೆಯಾಗಿ ಕಾಣುವ ಎಲ್ಲಾ ನಮ್ಮ ಕನ್ನಡ ನೆಲವನ್ನು, ಗಾಳಿಯನ್ನು, ನೀರನ್ನು ಸೇವಿಸುವ ಹೈಟೆಕ್ ಮಂದಿಯ ಮನಸ್ಸನ್ನು ಪರಿವರ್ತಿಸುವ ಕೆಲಸವನ್ನು ಸರಿಯಾದ ರೀತಿಯಲ್ಲಿ ಆ ಕನ್ನಡ ಭುವನೇಶ್ವರಿಯ ಸಾಥ್ ತೆಗೆದುಕೊಂಡು ನಾವುಗಳು ಮಾಡಬೇಕಾಗಿರುವುದು ಇಂದು ಅತ್ಯವಶ್ಯ.


ಜೈ ಕನ್ನಡ ರಾಜರಾಜೇಶ್ವರಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ