ಗುರುವಾರ, ಡಿಸೆಂಬರ್ 31, 2020

ಹೊಸ ವರುಷಕ್ಕೆ ಹೊಸ ರಂಗಿನ ಚಿಂತನೆ

 ಹೊಸ ವರುಷದ ಹೊಸ್ತಿಲಿನಲ್ಲಿ ನಿಂತಿರುವಾಗ ಹಳೆಯ ವರುಷ ಹೇಗಿತ್ತು ಎಂದು ಹಿಂತಿರುಗಿ ನೋಡಿದರೇ ಕೊಂಚಾ ಬೇಜಾರು, ಸ್ವಲ್ಪವೆ ಖುಷಿ, ಸಾಕಷ್ಟು ದುಃಖ ದುಗುಡದ ಮಹಾನ್ ಬೋರು ದಿನಗಳನ್ನು ಕಳೆದೆವು ಅನಿಸುತ್ತದೆ. ಹತ್ತಿರವಿದ್ದರೂ ದೂರವಿದ್ದಂತಹ ಮಹಾನ್ ಜೈಲು ದಿನಗಳೇ ಸರಿ.. ಉಫ್!!!


ಈ ೨೦೨೦ ಯಾವ ವರುಷದಂತೆಯೂ  ಹಿಂದಿನ ವರ್ಷಗಳಂತಿರಲಿಲ್ಲ. ಇದು ಸಂಪೂರ್ಣ ವಿಭಿನ್ನವಾದ ವರುಷವೇ ಸರಿ. ಇಡೀ ಮನುಕುಲದ ಜೀವನ ಶೈಲಿಯನ್ನೆ ಬದಲಾಯಿಸಿದ ಸಂವತ್ಸರ.


ಕೇವಲ ರೋಗ ರೋಗ... ಕರೋನಾವೆಂದು ತಲೆಕೇಡಿಸಿಕೊಂಡು ಕೂರುವ ಮಟ್ಟಿಗೆ! ನಮ್ಮೆಲ್ಲಾರ ಜೀವನ ಅಯೋಮಯವಾಗಿಸಿದ ಭಯಾನಕವಾದ ವರುಷ. 


ಯಾರೊಬ್ಬರ ಕಲ್ಪನೆಗೂ ನಿಲುಕದ ರೀತಿಯಲ್ಲಿ ತಮ್ಮಲ್ಲಾದ ಬದುಕಿನ ಚಿತ್ರಣವನ್ನು ಕೇವಲ ಮನೆಯಲ್ಲಿಯೇ ತಿರುಗ ಮುರುಗ ನೋಡಿಕೊಂಡು ಕಳೆಯುವಂತೆ ಮಾಡಿಬಿಟ್ಟಿತು.


ಮುದ್ದು ಮುದ್ದು ಮಕ್ಕಳಿಂದ ಹಣ್ಣು ಹಣ್ಣು ಮುದುಕರವರೆಗೂ ಪ್ರತಿಯೊಬ್ಬರೂ ಹೀಗೂ ತಮ್ಮ ಜೀವನವನ್ನು ಒಂದು ದಿನ  ಯಾಕೆ? ವರುಷಗಳಟ್ಟಲೆ ಕಳೆಯಬಹುದು ಎಂಬುದನ್ನು ತಿಳಿಸಿಕೊಟ್ಟಿತು. 


ಎಷ್ಟೋ ವರುಷಕ್ಕೆ ಹಿಮ್ಮುಕವಾಗಿ ಚಲಿಸಿದಂತಹ ಅನುಭವವನ್ನು ಕೊಟ್ಟಿತು. 


ಏನಿದ್ದರೂ ಏನೂ ಪ್ರಯೋಜನವಿಲ್ಲವೆನಿಸಿದ್ದಂತೂ ನಿಜ!!


ಶಾಲಾ ಕಛೇರಿಗಳು, ಮದುವೆ ಸಮಾರಂಭಗಳು, ಸಂಚಾರ ವಾಹಾನಗಳು,ರೈಲು, ವಿಮಾನಗಳು ಎಲ್ಲಾವನ್ನು , ಎಲ್ಲಾ ದೇಶಗಳನ್ನು ಜಬರದಸ್ತ ಬಂದ ಮಾಡಿ ನೀವಾಯಿತು ನಿಮ್ಮ ಸಂಸಾರವಾಯಿತು ಎಂಬಂತೆ ಆದಷ್ಟು ಕಡಿಮೆ ಜನರಿದ್ದರೇ ಸೇಫ್! ಮನೆಯೇ ಸುರಕ್ಷತೆಯೆಂಬ ಪಾಠವನ್ನು ಕಲಿಸಿದ ವೈರಸ್ ವರುಷ.


ಎಂಥೆಂತಹ ಬ್ಯುಸಿನೇಸ್ ಸಾಮ್ರಾಜ್ಯಗಳಿಗೆ ದುಃಸಪ್ನವಾದ ವರುಷ. ಆರ್ಥಿಕತೆಯ ಏಳ್ಗೆಯ ಬಗ್ಗೆ ಜಗತ್ತಿನ ಪ್ರತಿಯೊಂದು  ದೇಶದ ಸರ್ಕಾರಗಳು ಚಿಂತಾಜನಕವಾಗಿ ಯೋಚಿಸುವಂತೆ ಮಾಡಿದ ವರುಷ.


ಈ ವರುಷದವರೆಗೂ ಜಗತ್ತಿನಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಸಾವಿರ ಪರಿಹಾರ ಕಂಡುಹಿಡಿಯುವ ವಿದ್ವಾಂಸಪಡೆಗೆ ತಲೆನೋವಾದ ವರುಷ. 


ಆರೋಗ್ಯವೊಂದೇ ಸರ್ವತ್ರ ಸಾಧನ ಎಂಬುದನ್ನು ಕಠೋರವಾಗಿ ತಿಳಿಸಿಕೊಟ್ಟ ವರುಷ.


ಒಂದಷ್ಟು ಜನಕ್ಕೆ ಶುರುವಿನಲ್ಲಿ ಖುಷಿಯಾಗಿ ಮನೆಯಲ್ಲಿರಬಹುದು, ಚಿಕ್ಕ ಬ್ರೇಕ್ ಆದ ಮೇಲೆ ಈ ಲಾಕ್ ಡೌನ್ ಕಳೆಯುತ್ತದೆ ಅನಿಸಿತ್ತು. ಆದರೇ ಒಂದು ದಿನ, ವಾರ, ತಿಂಗಳುಗಳು ಕಳೆದ ಮೇಲೆ ಬೋರ್ ಅನಿಸತೊಡಗಿತು. 


ಮನೆಯಿಂದಲೇ ಎಲ್ಲಾ ನಡೆಸಲುಸಾಧ್ಯವಿಲ್ಲ ಅಲ್ಲವಾ? 


ಸಾಪ್ಟವೇರ್- ಆನ್ ಲೈನ್ ಎಂಬುದು ಸುಲಭ ಮತ್ತು ಅದೇ ಒಂದು ಕಾರ್ಯ ಕ್ಷೇತ್ರ ಹೇಗೋ ನಡೆಯುತ್ತಿದೆ. ಆದರೇ ಬೇರೆ ಬೇರೆ ಉದ್ಯೋಗಳಿಗೆ ಭಾರಿ ಆಘಾತವನ್ನುಂಟು ಮಾಡಿದ್ದಂತೂ ನಿಜ. ನಿರುದ್ಯೋಗವನ್ನು ಹೆಚ್ಚಿಸಿ ಜನರನ್ನು ದಿಕ್ಕರಿಸಿದ ವರುಷ ವೈರಸ್ ಜನನದ ಈ ಕಾಲ.


ಇಷ್ಟಾದರೂ ೨೦೨೧ ಭವಿಷ್ಯದ ಸುಂದರ ವರುಷವಾಗಿರುವುದು ಎಂಬುದನ್ನು ಮರೆಸುವಂತೆ ಈಗ ಅದೇ ವೈರಸ್ ಹೊಸ ರೂಪದಲ್ಲಿ ಈ ವರುಷದ ಕೊನೆ ತಿಂಗಳಿನಲ್ಲಿ ಇದೀಗ ಕಾಣಿಸಿಕೊಳ್ಳುತ್ತಿರುವುದು ಪ್ರತಿಯೊಬ್ಬರನ್ನು ವ್ಯಾಕ್ಸಿನ್ ಬರುತ್ತಿರುವ ಈ ಸಮಯದಲ್ಲೂ ಮತ್ತೆ ಬೆವರುವಂತೆ ಮಾಡಿದೆ.


ಪ್ರತಿಯೊಬ್ಬರ ವೈಕ್ತಿಕ ಜೀವನಗಳು ಬಹಳ ಬೀಕರವೆನಿಸತೊಡಗಿದೆ. ಈ ಒಂದು ಕಾಯಿಲೆ ಬೇರೆ ರೋಗಗಳಿಗೆ ದಾರಿ ಮಾಡಿಕೊಟ್ಟಂತೆ ಅನಿಸುತ್ತಿದೆ. ಈ ಭಯದ ವಾತವರಣ ಅದು ಹೇಗೆ ಸರಿಯಾಗುವುದೋ? ಬಂದಿರುವ ಈ ಲಸಿಕೆಗಳು ಈ ರೋಗದ ವರುಷಕ್ಕೆ ಮುಂದಿನ ವರುಷದಲ್ಲಿ ರಾಮಬಾಣವಾಗುವುದೊ ಇಲ್ಲವೋ ಎಂಬುದನ್ನು ಆ ದೇವರೇ ವರ ರೊಪದಲ್ಲಿ ಕೊಡಬೇಕಾಗಿರುವುದು.


ಆದರೂ ಬದುಕಿನಲ್ಲಿ ಯಾವುದೂ ಮುಖ್ಯ ಮತ್ತು ಅಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿಯುವಂತೆ ಮಾಡಿದ ಕೀರ್ತಿ ಕರೋನಾಕ್ಕೆ ಸಲ್ಲಬೇಕು. ಆದರೂ ಯಾವುದು ಸತ್ಯ ಯಾವುದು ನಿತ್ಯ ಎಂಬುದನ್ನು ಮರೆತು ಬದುಕುವುದಲ್ಲವಲ್ಲಾ?


ಹೊಸ ವರುಷಕ್ಕೆ ಹೊಸ ರಂಗಿನ ಚಿಂತನೆ ನಿತ್ಯವಿರಲಿ!!!



ಗುರುವಾರ, ನವೆಂಬರ್ 26, 2020

2020 - Kid Dairy

 ಮೊದ ಮೊದಲು ಶಾಲೆಗಳಿಗೆ ಕೇವಲ ಕೆಲವೇ ದಿನಗಳವರೆಗೆ ರಜಾವಿರಬೇಕು ಅನಿಸಿತ್ತು. ರಜೆ ಇದ್ದರೇ ಮಕ್ಕಳಾದ ನಮಗೆ ಖುಷಿಯೇ ಸರಿ.  


ಆದರೂ ಅಮೆರಿಕಾದಲ್ಲಿ ಶಾಲೆಗಳಿಗೆ ಹೋಗುವ ಸಂತಸವೇ ಬೇರೆ. ನನ್ನಂತ ಯಾವೊಂದು ಚಿಕ್ಕ ಚಿಕ್ಕ ಮಕ್ಕಳು ಸ್ಕೂಲಿಗೆ ಹೋಗವ ಮಜಾವನ್ನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಅದೂ ಇದೇ ಜೀವನದಲ್ಲಿ ಪ್ರಥಮ ಬಾರಿಗೆ ಶಾಲಾ ಬಸ್ ನಲ್ಲಿ ಹೋಗುವುದು, ಹೊಸ ಶಾಲೆಯಲ್ಲಿನ ವಾತಾವರಣ ನಮ್ಮ ಮಗು ಮನಸ್ಸುಗಳಿಗೆ ವಿಸ್ಮಯವನ್ನೇ ಉಂಟು ಮಾಡಿತ್ತು. 


ನಿಮಗೆ ಗೊತ್ತಾ ಶಾಲೆ ಶುರುವಾದ ದಿನದಿಂದ ಈ ಉದ್ದನೆಯ ಆಕಸ್ಮಿಕ ರಜೆಯನ್ನು ಕೊಡುವವರೆಗೂ ನಾನೆಂದೂ ಒಂದು ದಿನವೂ ರಜೆ ಯನ್ನು ತೆಗೆದುಕೊಂಡಿರಲಿಲ್ಲ!


ಮುಂಜಾನೆಯಲ್ಲಿ ಶಾಲೆಗೆ ಹೋಗಬೇಕೆಂದು ಬೇಗ ಎದ್ದೇಳುವುದು, ಸ್ನಾನ ಮಾಡುವುದು, ಬ್ರೇಕ್ ಪಾಸ್ಟ ಎಂದು ದೋಸೆಯನ್ನು ತಿಂದು, ರೇಡಿಯಾಗಿ ನಮ್ಮ ಅಕ್ಕಪಕ್ಕದ ಸ್ನೇಹಿತರೊಡಗೂಡಿ ಬಸ್ ಬರುವುದಕ್ಕೆ ಮುಂಚೆ ಬಸ್ ಸ್ಟಾಪ್ ಗೆ ಹೋಗುವುದು. ಇರುವ ಇಷ್ಟು ಸಮಯದಲ್ಲಿ ಮಾಡುತ್ತಿದ್ದ ನಮ್ಮ ತರಲೆಗಳಿಗೆ ಹೆತ್ತವರು ಶಾಕ್ ಆಗುತ್ತಿದ್ದರು. 


ಅದು ಹೇಗೆ ಈ ಮಕ್ಕಳು ಬಸ್ ನಲ್ಲಿ ಮತ್ತು ಶಾಲೆಯಲ್ಲಿ ನಡೆದುಕೊಳ್ಳುತ್ತಾರೋ ಎಂದು ತಲೆ ಕೆರೆದುಕೊಂಡು ನಮ್ಮನ್ನು ಬಸ್ ಹತ್ತಿಸಿ ಮನೆಗೆ ಬರುತ್ತಿದ್ದರು. ಆ ಮಜವೇ ಈಗ ಇಲ್ಲ. ಬೇಗ ಏಳುವುದು ಬೇಕಾಗಿಲ್ಲ. ಬೇಗ ಬೇಗ ಸ್ನಾನ ಮಾಡಿ , ತಿಂಡಿ ತಿನ್ನುವ ಜರೂರತೆ ಇಲ್ಲದ ಮಕ್ಕಳ ಬದುಕಾಗಿದೆ. 


ಉಫ್ ತರಾವೇರಿ ಒಂದು ವರುಷವಾಯಿತು. ಶುರುವಲ್ಲಿ ಸಮ್ ರ್ ಬ್ರೇಕ್ ಮುಗಿದ ಮೇಲೆ ಮತ್ತೆ ಶಾಲೆಗಳು ಶುರುವಾಗಬಹುದು ಎಂದು ಅನಿಸಿತ್ತು. ಆದರೇ ಈ ಕಾಯಿಲೆ ಎಲ್ಲದಕ್ಕೂ ಗೋಲಿಯನ್ನು ಹೊಡೆದುಬಿಟ್ಟಿದೆ. ಕರೊನಾ ಕರೋನಾ ಎಲ್ಲಿಯು ಈ ಒಂದು ಶಬ್ಧ ಬಿಟ್ಟರೆ ಬೇರೆ ಮಾತಿಲ್ಲ. ತಲೆ ಕೆಟ್ಟು ಹೋಗುವಷ್ಟು ಈ ಶಬ್ಧ ಆಕ್ಸ್ ಪರ್ಡ್ ಡಿಕ್ಷನರಿ ಸೇರಿಬಿಟ್ಟಿರಬೇಕು.


ನಮ್ಮಂತೆಯೇ ನಮ್ಮ ಅಪ್ಪನಿಗೂ ಧೀರ್ಘವಾದ ಮನೆಯಿಂದಲೇ ಕೆಲಸ ಮಾಡಿ ಎಂದು ಹೇಳಿದ್ದಾರೆ. ಅವರು ಸಹ ಬೆಳಿಗ್ಗೆ ಬೆಳಿಗ್ಗೆ ಎದ್ದು ಕೆಲಸ ಶುರುಮಾಡುತ್ತಾರೆ. ಅವರುಗಳ ಕೆಲಸ ದೇವರಿಗೆ ಪ್ರೀತಿ. ಹಗಲು ರಾತ್ರಿ ಕೆಲಸ ಮತ್ತು ಕೆಲಸ. ಅದು ಏನೂ ಕಂಪ್ಯೂಟರನಲ್ಲಿ ಕುಟ್ಟುತ್ತಾರೋ ಗೊತ್ತಿಲ್ಲ. 


ಶುರುವಲ್ಲಿ ಶಾಲೆಯಿಂದ ಸ್ವಲ್ಪ ಓದುವುದಕ್ಕೆ ಕೊಡುತ್ತಿದ್ದರು. ಅದನ್ನು ನಮ್ಮ ಅಮ್ಮ ಸ್ವಲ್ಪ ಓದಿಸಿ ಪೂರ್ತಿ ಆಟವಾಡುವುದಕ್ಕೆ ಬಿಟ್ಟು ಬಿಡುತ್ತಿದ್ದರು. ಖುಷಿಯಿಂದ ಮನೆಯಲ್ಲಿಯೇ ಎಲ್ಲಾ ಜೀವನ. ಅದೇ ಬೇಜಾರು ವಿಷಯ. ಹೊರಗೆ ಯಾರೂ ಗುಂಪು ಗೂಡಿ ಹೋಗುವಾಗಿಲ್ಲ. ಪಾರ್ಕ್ ಇಲ್ಲ. ಗೇಮ್ ಇಲ್ಲ. ಸ್ನೇಹಿತರಂತೂ ಇಲ್ಲವೇ ಇಲ್ಲ. ಯಾಕೇ ಬೇಕು ಈ ರಜಾ ಅನಿಸಲೂ ಜಾಸ್ತಿ ದಿನಗಳೇನು ಬೇಕಾಗಲಿಲ್ಲ. 


ಶಾಲೆಯವರೂ ಏನೂ ಮಾಡದಂತಾಗಿ ಕರೋನಕ್ಕೆ ಹೆದರಿದಂತೆ ಕಾಣಿಸುತ್ತದೆ. ನಿಮ್ಮ ಕಿಂಡರ್ ಗಾರ್ಡ್ ನ್ ಶೈಕ್ಷಣಿಕ ವರುಷ ಪೂರ್ತಿಯಾಗಿದೆ ಮತ್ತು ನಿಮ್ಮನು  ತೆರ್ಗಡೆ ಮಾಡಿ ಒಂದನೇ ತರಗತಿ ಕಳಿಸಿದ್ದೇವೆ. ಮುಂದಿನ ಶೈಕ್ಷಣಿಕ ವರುಷದಲ್ಲಿ ಮತ್ತೆ ಸಿಗೋಣವೆಂದು ಒಂದು ಮೈಲ್ ಕಳಿಸಿ ಹ್ಯಾಪು ಮೊರೆ ಮಾಡಿಕೊಂಡು ಊಶ್ ಎಂದಿರಬೇಕು. ಪುನಃ ನನ್ನ ನೆಚ್ಚಿನ ಟೀಚರ್ಸ್ ಗಳನ್ನು ನೋಡುವ ಅವಕಾಶವೇ ಇಲ್ಲದಂತಾಯಿತು.


ಯಾವಾಗ ಈ ಕರೋನಾ ಶಬ್ಧ ಕಣ್ ಮರೆಯಾಗುವುದು ಎಂದು ಕಾದಿದ್ದೇ ಬಂದಿದ್ದು. ಸಮ್ಮರ್ ರಜೆಯೊತ್ತಿಗೆ ಏನಾದರೂ ಆಗಿ ಶಾಲೆ ಶುರುವಾಗುವುದು ಅನಿಸಿದ್ದು ಸುಳ್ಳಾಯಿತು. 


ನನ್ನ ಜೀವನದ ಮೊದಲನೇ ತರಗತಿಗೆ ಶಾಲೆಗೆ ನಲಿಯುತ ಕುಣಿಯುತ ಬಸ್ ನಲ್ಲಿ ಹೋಗುವ ಅದೃಷ್ಟ ಪುನಃ ಇಲ್ಲವಾಯಿತು. ಎಲ್ಲಾ ಶಾಲೆಗಳು ಪೂರ್ತಿ ಆನ್ ಲೈನ್ ಎಂದು ಆಗಸ್ಟನಲ್ಲಿ ಪ್ರಾರಂಭಿಸಿದರು.  ತಾಯಿಯೇ ಮೊದಲ ಗುರು ಎಂಬಂತೆ ನಮ್ಮ ಅಮ್ಮನೇ ನನ್ನ ಗುರುಗಳು. ಅವಳೇ ಎಲ್ಲಾ ಸಬ್ಜಕ್ಟಗಳನ್ನು ಹೇಳಿ ಕೊಡುವ ಆಲ್ ರೌಂಡರ್ ಮೇಡಮ್.


ಈ ಒಂದು ಚಿಕ್ಕ ವೈರ್ ಸ್ ಬಗ್ಗೆ ಟಿ.ವಿ ಯಲ್ಲಿ ಕೇಳಿ ಕೇಳಿ ಸಾಕಾಗಿದೆ. ನಮ್ಮ ಪೂರ್ತಿ ಜೀವನ ಶೈಲಿಯೇ ಬದಲಾಗಿದೆ. ಎಲ್ಲಿಯೂ ಹೊರಗಡೆ ಹೋಗದೇ ಆಟವಾಡದ ಪೂರ್ತಿ ಒಂದು ವರುಷ ನೆನಸಿಕೊಂಡರೇ ಇಂದಿನ ಮಕ್ಕಳೇ  ಮುಂದಿನ ಪ್ರಜೆಗಳು ಎಂದು ಹೇಳುವ ಕೋಟ್ ಬದಲಿಸಬೇಕು. ನಾವುಗಳು ಹೀಗಾಗಲೇ ಕಿರಿ ವಯಸ್ಸಿನಿಂದ ಹಿರಿ ವಯಸ್ಸಿಗೆ ಬಂದಂತಾಗಿದ್ದೇವೆ.  


ನಾನಯಿತು ನನ್ನ ಪುಟ್ಟ ಪುಟ್ಟ ಆಟದ ಸಾಮನುಗಳು, ಟಾಯ್ಸ್ ಗಳಲ್ಲಿ ನಿತ್ಯ ಆಟವಾಡುವುದು. ನನ್ನ ಮಮ್ಮಿ ಪಪ್ಪರ ಜೊತೆಯಲ್ಲಿ ನಿತ್ಯ ಕಾಲ ಕಳೆಯುವುದಾಗಿದೆ. ಸಿಕ್ಕಾಗ ಓದುವುದು, ಬೇಜಾರಾದಾಗ ಆಟವಾಡುವುದು, ಟಿವಿ ನೋಡುವುದು ಹೀಗೆ ನಿತ್ಯ ಜೀವನ.


ಯಾರೊಬ್ಬರೂ ಖುಷಿಯಾಗಿ ಈ ದಿನಗಳನ್ನು ನೆನೆಯುವುದಿಲ್ಲವೆನಿಸುತ್ತದೆ. ಹೌದು ಅನುಮಾನವಿಲ್ಲದೆ ಹೊರಗೆ ಹೋಗಿ ಅಡ್ಡಾಡುವ ದಿನಗಳನ್ನು ಕಿತ್ತುಕೊಂಡ ವೈರಸ್ಗೆ ನನ್ನ ದಿಕ್ಕಾರವಿರಲಿ.


ಮನುಷ್ಯ ಸಂಘ ಜೀವಿ ಎಂದು ಎಲ್ಲೊ ಓದಿದ ಸಾಲು.. ಆದರೇ ಅದನ್ನೇ ಸುಳ್ಳು ಮಾಡುವಂತೆ ಈ ಒಂದು ವರುಷ ನೀನಾಯಿತು ನಿನ್ನ ಮನೆಯವರಾಯಿತು ಎಂದು ಮನೆಯಲ್ಲಿಯೇ ಉಳಿಯುವಂತಾಗಿದ್ದು ದುಃಖಕರ ಸಂಘತಿ. 


ಎಲ್ಲಿಯು ಟೂರ್ ಇಲ್ಲದ, ಯಾರ ಜೊತೆಯಲ್ಲಿಯು ಖುಷಿಯ ಕ್ಷಣಗಳನ್ನು , ಪಾರ್ಟಿಗಳನ್ನು, ಹಬ್ಬ ಹರಿ ದಿನಗಳನ್ನು, ದೇವರು ದೇವಸ್ಥಾನಗಳನ್ನು ನೋಡದೇ ಈ ವರುಷವನ್ನು ಕಳೆದಿದ್ದು ಬೇಜಾರು ವಿಷಯ.


ನಾಲ್ಕು ಗೋಡೆಯಲ್ಲಿ ಹೇಗೆ ಜೀವನವನ್ನು ಕಳೆಯಬಹುದು? ಅದು ಖುಷಿಯಾಗಿ ಹಿರಿ ತಲೆಗಳಂತೆ ಎನ್ನುವುದನ್ನು ಚೆನ್ನಾಗಿಯೇ ಈ ರೋಗ ಇಡೀ ಜಗತ್ತಿಗೆ ಕಲಿಸಿಕೊಟ್ಟಿದೆ. ಜೈಲ್ ಜೀವನಕ್ಕೂ ನಮ್ಮ ಜೀವನಕ್ಕೂ ಯಾವುದೇ ವ್ಯತ್ಯಾಸವಂತು ಕಾಣುತ್ತಿಲ್ಲ.  


ದೊಡ್ಡ ದೋಡ್ಡ ಡಾಕ್ಟರ್ ಗಳಿಗೆ ಚಿಕಿತ್ಸೆ ಕಂಡು ಹಿಡಿಯಲು ಕಷ್ಟವಾಗಿರುವ ಈ ವೈರಸ್ಸೇ ೨೦೨೦ ರ ಬೇಸ್ಟ್ ಥಿಂಗ್ ಆಗಿದೆ. ಕೋವಿಡ್ ೧೯ ನ್ನು ಯಾರು ಕಟ್ಟಿ ನಿಲ್ಲಿಸಲಾರದ ಮಟ್ಟಿಗೆ ಪುನಃ ೨೦೨೧ ಗೆ ಹೋಗುತ್ತಿರುವುದು ಬೇಜಾರು ಆಗುತ್ತಿದೆ. 


ಸುಖ ಸುಮ್ಮನೇ ಜಗತ್ತಿನಲ್ಲಿ ಎಷ್ಟೊಂದು ಮಂದಿ ಈ ರೋಗಕ್ಕೆ ಗೊತ್ತಿಲ್ಲದ ರೀತಿಯಲ್ಲಿ ತುತ್ತಾಗುತ್ತಿರುವುದು ಭಯವನ್ನುಂಟು ಮಾಡುತ್ತಿದೆ. 


ಪುನಃ ಎಲ್ಲಾ ಗೆಳೆಯರೊಂದಿಗೆ ಮಕ್ಕಳು ಮಕ್ಕಳಾಗಿ ಬಯಲಲ್ಲಿ ಆಡುತ್ತಾ, ಕುಣಿಯುತ್ತಾ ಬೆಳೆಯುವ ದಿನಗಳ ಬೇಗ ಬೇಗ ಬರಲಿ ಎಂದು ಕೇಳುವುದು ನಿರಂತರವಾಗಿದೆ.  ನಮ್ಮ ಜೀವನದ ಈ ಒಂದು ವರುಷದ ಬಾಲ್ಯ ಜೀವನವನ್ನು ಯಾರು ಮರಳಿ ನಮಗೆ ಕೊಡಲಾರರು. ಆದರೂ ಈ ಕೆಟ್ಟ ರೋಗದಿಂದ ಬಚವಾಗಿ ಬದುಕಿದರೇ ಅದೇ ಭಾಗ್ಯ ಎನ್ನುವಂತಾಗಿದೆ. 


ಮಾಸ್ಕ್ ಒಂದೇ ರಾಮ ಭಾಣವಾಗಿದ್ದರೂ ನಮ್ಮಂತಹ ಚಿಕ್ಕ ವಯಸ್ಸಿನವರು ಮತ್ತು ವಯಸ್ಸಾದವರೂ ಯಾವಗಲೂ ಮಾಸ್ಕ್ ಧರಿಸಿ ವೈರಸ್ ನಿಂದ ಬಚವಾಗುವುದು ಕಷ್ಟವೇ.

ಬುಧವಾರ, ಏಪ್ರಿಲ್ 29, 2020

ಮುದ್ದು ಮುದ್ದು ಮನಸ್ಸು

ಮಕ್ಕಳ ಮನಸ್ಸು ಮುದ್ದು ಮುದ್ದು ಮೃದು. ಅವುಗಳ ಕುತೂಹಲವನ್ನು ಯಾರು ವಯಸ್ಸಾದರೂ ಇಟ್ಟುಕೊಂಡಿರುತ್ತಾರೊ ಅವರುಗಳೆ ಪ್ರತಿ ಕ್ಷಣವನ್ನು ಸುಖವಾಗಿ ಕಳೆಯಬಲ್ಲವರಾಗಿರುತ್ತಾರೆ.

ಗಮನಿಸಿ ಮಕ್ಕಳಿಗಿರುವ ಈ ಗುಣ ಎಂಥವರನ್ನು ಅಚ್ಚರಿಯನ್ನುಂಟು ಮಾಡುತ್ತಾದೆ.

ಇಷ್ಟೊಂದು ಪರೀಕ್ಷಿಸುವ ಪರಿಯನ್ನು ಗಮನಿಸಿದರೇ ಇವನು ನಿಜವಾಗಿಯು ಮುಂದೆ ದೊಡ್ಡ ವಿದ್ವಾಂಸನಾಗುತ್ತಾನೆ ಎಂದು ಹೆತ್ತವರು ಮನಸ್ಸಿನಲ್ಲಿಯೇ ಗುಣಕಾರವನ್ನು ಮಾಡಿಕೊಂಡಿರುತ್ತಾರೆ.

ಹೌದು ಎಲ್ಲಾ ಮಕ್ಕಳು ಚಿಕ್ಕವರಾಗಿರುವಾಗ ತುಂಬ ಚುರುಕೇ. ಆ ಚುರುಕು ಪ್ರಕೃತಿದತ್ತವಾಗಿಯೇ ಅವರಿಗೆ ಬಂದಿರುತ್ತದೆ. ಅದನ್ನು ಅವರುಗಳು ಅವರಲ್ಲಿ ಕಾಪಾಡಿಕೊಂಡು ಹೆಚ್ಚು ಹೆಚ್ಚು ಬೆಳೆಯುವಂತೆ ಹೆತ್ತವರು ಮತ್ತು ಸುತ್ತಲಿನ ಪರಿಸರ ಪೋಷಿಸಬೇಕು.

ನೋಡಿ ನೀವು ಏನಾದರೂ ವಸ್ತುವನ್ನು ಕೈಯಲ್ಲಿ ಇಟ್ಟುಕೊಂಡಿದ್ದರೆ, ತಕ್ಷಣ ನಿಮ್ಮ ಚಿಕ್ಕ ಮಗ ಅಥವಾ ಮಗಳು ಬಂದು ತನ್ನ ಕೈಗೆ ತಗೆದುಕೊಳ್ಳುತ್ತದೆ. ನೀವುಗಳು ಏನಾದರೂ ಪುಸ್ತಕನ್ನು ತೆಗೆದು ಓದಲು ಶುರು ಮಾಡಿದರೇ ಅದೇ ಮಗು ತಕ್ಷಣ ಬಂದು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕೈಗೆ ತೆಗೆದುಕೊಳ್ಳಲು ಶುರು ಮಾಡುತ್ತದೆ.

ನೀವು ಏನಾದರೂ ಮಾಡಿ ಚಿಕ್ಕ ಮಕ್ಕಳಿಗೆ ತಾನು ಅದನ್ನೇ ಮಾಡಬೇಕು ಎಂಬ ಕುತೂಹಲ. ಅದೇ ಮಕ್ಕಳು  ತಾವುಗಳು ಏನೂ ಅನ್ನುವುದನ್ನು ನಾವು ತಿಳಿಯುವಂತೆ ಮಾಡುತ್ತವೆ.

ಚಿನ್ನಾರಿಗಳಿಗೆ ದಣಿವೇ ಇಲ್ಲದ ಹೊಸತನವನ್ನು ಕಾಣುವ, ತಾವುಗಳು ಏನಾದರೂ ಹೊಸತನದ ಆಟ ಪಾಠವನ್ನು ಕಾಣುವ ಕನಸು.


ಅದೇ ಮಕ್ಕಳ ಬದುಕು. ನಿತ್ಯ ಏನಾದರೊಂದನ್ನು ಕಲಿಯುವುದೇ ಆಗಿರುತ್ತದೆ. ಹಾಗೆಯೇ ಪ್ರತಿ ಮಗುವು ಎಲ್ಲಾವನ್ನು ಕಲಿತು ತಾನೇ ಕಲಿಯಾಗುವುದು.


ನಾವುಗಳು   ಏನನ್ನು ಹೇಳಿ ಕೊಡುವ ಅಗತ್ಯವಿಲ್ಲ! ಮಕ್ಕಳೇ ನಮಗೆ ಜೀವನದಲ್ಲಿ ಹೇಗೆಲ್ಲಾ ನಿತ್ಯ ನಿರಂತರ ಕಲಿಯಬೇಕು ಎಂಬುದನ್ನು  ತಮ್ಮ ಮೊಲಕ ಹೇಳಿ ಕೊಡುತ್ತಾರೆ.

ನೋಡಿ ಮಕ್ಕಳು ತಮ್ಮ ಒಂದನೇಯ ವಯಸ್ಸಿನಿಂದ ಹೇಗೆಲ್ಲಾ ಕಲಿಯುತ್ತಾ ಕಲಿಸುತ್ತಾ ಹೆತ್ತವರನ್ನು ಸಂತೋಷದಲ್ಲಿ ಮುಳುಗೇಳಿಸಿರುತ್ತಾರೆ.

ಹೊಸ ಹೊಸ ಆಟಿಕೆಗಳನ್ನು ಆರಿಸುವುದು, ಅದರ ಜೊತೆಯಲ್ಲಿ ಆಟವಾಡುವುದು. ಇನ್ನೊಂದು ದಿನ ಏನಾದರೂ ಹೊಸ ಗೊಂಬೆಯನ್ನು ತಂದರೇ ಹಳೆಯದನ್ನು ಆ ಸಮಯಕ್ಕೆ ಒಗೆದು ಹೊಸದರ ಜೊತೆಯಲ್ಲಿಯೇ ಹಗಲು ರಾತ್ರಿ ಕಳೆಯುವುದು.

ಇದು ವಯಸ್ಸು ಬೇಳೆದಂತೆ ಕುತೂಹಲದ ಮನಸ್ಸನ್ನು ಹೆಚ್ಚು ಮಾಡಿಕೊಂಡು ವೇಗವಾಗಿಯೇ ಮಾತು, ಓದುವುದು ಹೀಗೆ ಪ್ರತಿಯೊಂದನ್ನು ಕಲಿಯುತ್ತಾರೆ.

ಮಾತು ಕಲಿಯುವುದೇ ಒಂದು ವಿಸ್ಮಯ!  ದಾ, ಡಾ ಎಂದು ಒಂದಕ್ಷರ ಮಾತನಾಡುವ  ಮಗ /ಮಗಳು ಇವನೇ/ಳೇ ಎನಿಸುತ್ತದೆ. ಚಿಕ್ಕ ಚಿಕ್ಕ ಕಥೆ ಪುಸ್ತಕವನ್ನು ಓದುವುದನ್ನು ನೊಡಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ.

ಓದುವುದನ್ನು ನೋಡುವುದೇ ಇನ್ನೊಂದು ಸುಂದರ ಸುಖ.

ಒಂದು ಸಾಲು ಓದುವುದು ಅದಕ್ಕೆ ಹೊಂದುವ, ಗೊತ್ತಿರುವ, ನೆನಪಿರುವ  ವಿಷಯ ಹೇಳುವುದು ಅಥವಾ ಪ್ರಶ್ನೇ ಮಾಡುವುದು.

ಒಮ್ಮೊಮ್ಮೆ ಹೆತ್ತವರಿಗೆ ಸಾಕು ಸಾಕಾಗುತ್ತದೆ. ಎಷ್ಟು ಅಂಥಾ ಹೇಳಿದ್ದೇ ಹೇಳಿದ ಉತ್ತರಗಳನ್ನು ಕೊನೆಯಿರದ ಪ್ರಶ್ನೆಗಳಿಗೆ ಉತ್ತರಿಸುವುದು.  ಅವುಗಳೋ ಪುನಃ ಪುನಃ ಅದೇ ಪ್ರಶ್ನೆಗಳನ್ನು ಕೇಳುವುದು.

ಮಕ್ಕಳಿಗೆ ಎಲ್ಲಾ ಸಂಗತಿಗಳು ಸಂತೋಷದ ಆಟ.

ಅದಕ್ಕೆ ಇರಬೇಕು ಪ್ರತಿ ಮಗುವು ಎಂದಿಗೂ ದಣಿವಾಗಿದೆ ಎಂದು ಬಾಯಿ ಮಾತಿಗೂ ಹೇಳುವುದಿಲ್ಲ.

ಆ ಕ್ಷಣದಲ್ಲಿ ಬದುಕುವ ಜೀವಿ ಎಂದರೇ ಮಗು. ಇರುವ ಕ್ಷಣವನ್ನು ಸುಂದರವಾಗಿ ಪರಿಪೂರ್ಣವಾಗಿ ಅನುಭವಿಸುತ್ತದೆ.

ಪ್ರತಿಯೊಂದನ್ನು ಮನನ ಮಾಡಿಕೊಂಡು ಅರ್ಥೈಸಿಕೊಂಡು ಮನದಲ್ಲಿಯೇ ಇಟ್ಟುಕೊಳ್ಳುತ್ತದೆ.

ಏನಂದರೂ ಏನನ್ನೂ ಮರೆಯುವುದಿಲ್ಲ.

ಅದಕ್ಕೇ ಇರಬೇಕು ಒಂದೊಂದು ಮಕ್ಕಳು ಮನೆಯ ಮಾತು, ಹೊರ ಪ್ರಪಂಚದ ಭಾಷೆ, ಶಾಲಾ ಭಾಷೆ ಹೀಗೆ ಎರಡು ಮೂರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತವೆ.

ಮಕ್ಕಳ ಆಟ ಪಾಠ ರಾತ್ರಿಯಾದರೂ, ಮಲಗಿದರೂ ಮುಗಿಯುವುದಿಲ್ಲ.

ಕನಸಿನಲ್ಲೂ ಆಗಾಗ್ಗೆ ನಗುವುದು, ಅಳುವುದು, ಮುನಿಸುವುದು ಜಾರಿಯಲ್ಲಿರುತ್ತದೆ.


ಇದನ್ನು ಗಮನಿಸಿದರೇ ನಿತ್ಯ ೨೪ ಗಂಟೆ ದಣಿವಿರದ ತಣಿವ ಗುಣವೇ ಅವುಗಳ ಮುಗ್ಧ ಕಣ್ಣುಗಳ ಹೊಳಪಿನ ಸುಂದರ ಮುಖವೇ ಪ್ರಪುಲ ಸೂರ್ಯನ ಬೆಳಕು ಪ್ರತಿಯೊಂದೂ ಮನೆ ಮನಕ್ಕೂ.

ಹಾಗೆಯೇ ಅವುಗಳ ಕಲಿಯುವ ಕಲಿತು ಮರೆಯುವ ಗುಣವನ್ನು ಪ್ರತಿಯೊಬ್ಬರೂ ಎಷ್ಟೇ ದೊಡ್ಡವರಾದರೂ ಮರೆಯಬಾರದು.

ಅದೇ ಅಲ್ಲವಾ ಜೀವನ.

ಪ್ರತಿ ಕ್ಷಣದಲ್ಲೂ ಏನಾದರೂ ಕಂಡುಕೊಂಡು ಸಂತೋಷಿಸುವುದೇ ಜೀವನ.

ಅದೇ ಮಕ್ಕಳು ನಮಗೆ ಯಾವಾಗಲೂ ಹೇಳಿಕೊಡುವ ಜೀವನ ಪಾಠ.