ಗುರುವಾರ, ಡಿಸೆಂಬರ್ 31, 2020

ಹೊಸ ವರುಷಕ್ಕೆ ಹೊಸ ರಂಗಿನ ಚಿಂತನೆ

 ಹೊಸ ವರುಷದ ಹೊಸ್ತಿಲಿನಲ್ಲಿ ನಿಂತಿರುವಾಗ ಹಳೆಯ ವರುಷ ಹೇಗಿತ್ತು ಎಂದು ಹಿಂತಿರುಗಿ ನೋಡಿದರೇ ಕೊಂಚಾ ಬೇಜಾರು, ಸ್ವಲ್ಪವೆ ಖುಷಿ, ಸಾಕಷ್ಟು ದುಃಖ ದುಗುಡದ ಮಹಾನ್ ಬೋರು ದಿನಗಳನ್ನು ಕಳೆದೆವು ಅನಿಸುತ್ತದೆ. ಹತ್ತಿರವಿದ್ದರೂ ದೂರವಿದ್ದಂತಹ ಮಹಾನ್ ಜೈಲು ದಿನಗಳೇ ಸರಿ.. ಉಫ್!!!


ಈ ೨೦೨೦ ಯಾವ ವರುಷದಂತೆಯೂ  ಹಿಂದಿನ ವರ್ಷಗಳಂತಿರಲಿಲ್ಲ. ಇದು ಸಂಪೂರ್ಣ ವಿಭಿನ್ನವಾದ ವರುಷವೇ ಸರಿ. ಇಡೀ ಮನುಕುಲದ ಜೀವನ ಶೈಲಿಯನ್ನೆ ಬದಲಾಯಿಸಿದ ಸಂವತ್ಸರ.


ಕೇವಲ ರೋಗ ರೋಗ... ಕರೋನಾವೆಂದು ತಲೆಕೇಡಿಸಿಕೊಂಡು ಕೂರುವ ಮಟ್ಟಿಗೆ! ನಮ್ಮೆಲ್ಲಾರ ಜೀವನ ಅಯೋಮಯವಾಗಿಸಿದ ಭಯಾನಕವಾದ ವರುಷ. 


ಯಾರೊಬ್ಬರ ಕಲ್ಪನೆಗೂ ನಿಲುಕದ ರೀತಿಯಲ್ಲಿ ತಮ್ಮಲ್ಲಾದ ಬದುಕಿನ ಚಿತ್ರಣವನ್ನು ಕೇವಲ ಮನೆಯಲ್ಲಿಯೇ ತಿರುಗ ಮುರುಗ ನೋಡಿಕೊಂಡು ಕಳೆಯುವಂತೆ ಮಾಡಿಬಿಟ್ಟಿತು.


ಮುದ್ದು ಮುದ್ದು ಮಕ್ಕಳಿಂದ ಹಣ್ಣು ಹಣ್ಣು ಮುದುಕರವರೆಗೂ ಪ್ರತಿಯೊಬ್ಬರೂ ಹೀಗೂ ತಮ್ಮ ಜೀವನವನ್ನು ಒಂದು ದಿನ  ಯಾಕೆ? ವರುಷಗಳಟ್ಟಲೆ ಕಳೆಯಬಹುದು ಎಂಬುದನ್ನು ತಿಳಿಸಿಕೊಟ್ಟಿತು. 


ಎಷ್ಟೋ ವರುಷಕ್ಕೆ ಹಿಮ್ಮುಕವಾಗಿ ಚಲಿಸಿದಂತಹ ಅನುಭವವನ್ನು ಕೊಟ್ಟಿತು. 


ಏನಿದ್ದರೂ ಏನೂ ಪ್ರಯೋಜನವಿಲ್ಲವೆನಿಸಿದ್ದಂತೂ ನಿಜ!!


ಶಾಲಾ ಕಛೇರಿಗಳು, ಮದುವೆ ಸಮಾರಂಭಗಳು, ಸಂಚಾರ ವಾಹಾನಗಳು,ರೈಲು, ವಿಮಾನಗಳು ಎಲ್ಲಾವನ್ನು , ಎಲ್ಲಾ ದೇಶಗಳನ್ನು ಜಬರದಸ್ತ ಬಂದ ಮಾಡಿ ನೀವಾಯಿತು ನಿಮ್ಮ ಸಂಸಾರವಾಯಿತು ಎಂಬಂತೆ ಆದಷ್ಟು ಕಡಿಮೆ ಜನರಿದ್ದರೇ ಸೇಫ್! ಮನೆಯೇ ಸುರಕ್ಷತೆಯೆಂಬ ಪಾಠವನ್ನು ಕಲಿಸಿದ ವೈರಸ್ ವರುಷ.


ಎಂಥೆಂತಹ ಬ್ಯುಸಿನೇಸ್ ಸಾಮ್ರಾಜ್ಯಗಳಿಗೆ ದುಃಸಪ್ನವಾದ ವರುಷ. ಆರ್ಥಿಕತೆಯ ಏಳ್ಗೆಯ ಬಗ್ಗೆ ಜಗತ್ತಿನ ಪ್ರತಿಯೊಂದು  ದೇಶದ ಸರ್ಕಾರಗಳು ಚಿಂತಾಜನಕವಾಗಿ ಯೋಚಿಸುವಂತೆ ಮಾಡಿದ ವರುಷ.


ಈ ವರುಷದವರೆಗೂ ಜಗತ್ತಿನಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಸಾವಿರ ಪರಿಹಾರ ಕಂಡುಹಿಡಿಯುವ ವಿದ್ವಾಂಸಪಡೆಗೆ ತಲೆನೋವಾದ ವರುಷ. 


ಆರೋಗ್ಯವೊಂದೇ ಸರ್ವತ್ರ ಸಾಧನ ಎಂಬುದನ್ನು ಕಠೋರವಾಗಿ ತಿಳಿಸಿಕೊಟ್ಟ ವರುಷ.


ಒಂದಷ್ಟು ಜನಕ್ಕೆ ಶುರುವಿನಲ್ಲಿ ಖುಷಿಯಾಗಿ ಮನೆಯಲ್ಲಿರಬಹುದು, ಚಿಕ್ಕ ಬ್ರೇಕ್ ಆದ ಮೇಲೆ ಈ ಲಾಕ್ ಡೌನ್ ಕಳೆಯುತ್ತದೆ ಅನಿಸಿತ್ತು. ಆದರೇ ಒಂದು ದಿನ, ವಾರ, ತಿಂಗಳುಗಳು ಕಳೆದ ಮೇಲೆ ಬೋರ್ ಅನಿಸತೊಡಗಿತು. 


ಮನೆಯಿಂದಲೇ ಎಲ್ಲಾ ನಡೆಸಲುಸಾಧ್ಯವಿಲ್ಲ ಅಲ್ಲವಾ? 


ಸಾಪ್ಟವೇರ್- ಆನ್ ಲೈನ್ ಎಂಬುದು ಸುಲಭ ಮತ್ತು ಅದೇ ಒಂದು ಕಾರ್ಯ ಕ್ಷೇತ್ರ ಹೇಗೋ ನಡೆಯುತ್ತಿದೆ. ಆದರೇ ಬೇರೆ ಬೇರೆ ಉದ್ಯೋಗಳಿಗೆ ಭಾರಿ ಆಘಾತವನ್ನುಂಟು ಮಾಡಿದ್ದಂತೂ ನಿಜ. ನಿರುದ್ಯೋಗವನ್ನು ಹೆಚ್ಚಿಸಿ ಜನರನ್ನು ದಿಕ್ಕರಿಸಿದ ವರುಷ ವೈರಸ್ ಜನನದ ಈ ಕಾಲ.


ಇಷ್ಟಾದರೂ ೨೦೨೧ ಭವಿಷ್ಯದ ಸುಂದರ ವರುಷವಾಗಿರುವುದು ಎಂಬುದನ್ನು ಮರೆಸುವಂತೆ ಈಗ ಅದೇ ವೈರಸ್ ಹೊಸ ರೂಪದಲ್ಲಿ ಈ ವರುಷದ ಕೊನೆ ತಿಂಗಳಿನಲ್ಲಿ ಇದೀಗ ಕಾಣಿಸಿಕೊಳ್ಳುತ್ತಿರುವುದು ಪ್ರತಿಯೊಬ್ಬರನ್ನು ವ್ಯಾಕ್ಸಿನ್ ಬರುತ್ತಿರುವ ಈ ಸಮಯದಲ್ಲೂ ಮತ್ತೆ ಬೆವರುವಂತೆ ಮಾಡಿದೆ.


ಪ್ರತಿಯೊಬ್ಬರ ವೈಕ್ತಿಕ ಜೀವನಗಳು ಬಹಳ ಬೀಕರವೆನಿಸತೊಡಗಿದೆ. ಈ ಒಂದು ಕಾಯಿಲೆ ಬೇರೆ ರೋಗಗಳಿಗೆ ದಾರಿ ಮಾಡಿಕೊಟ್ಟಂತೆ ಅನಿಸುತ್ತಿದೆ. ಈ ಭಯದ ವಾತವರಣ ಅದು ಹೇಗೆ ಸರಿಯಾಗುವುದೋ? ಬಂದಿರುವ ಈ ಲಸಿಕೆಗಳು ಈ ರೋಗದ ವರುಷಕ್ಕೆ ಮುಂದಿನ ವರುಷದಲ್ಲಿ ರಾಮಬಾಣವಾಗುವುದೊ ಇಲ್ಲವೋ ಎಂಬುದನ್ನು ಆ ದೇವರೇ ವರ ರೊಪದಲ್ಲಿ ಕೊಡಬೇಕಾಗಿರುವುದು.


ಆದರೂ ಬದುಕಿನಲ್ಲಿ ಯಾವುದೂ ಮುಖ್ಯ ಮತ್ತು ಅಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿಯುವಂತೆ ಮಾಡಿದ ಕೀರ್ತಿ ಕರೋನಾಕ್ಕೆ ಸಲ್ಲಬೇಕು. ಆದರೂ ಯಾವುದು ಸತ್ಯ ಯಾವುದು ನಿತ್ಯ ಎಂಬುದನ್ನು ಮರೆತು ಬದುಕುವುದಲ್ಲವಲ್ಲಾ?


ಹೊಸ ವರುಷಕ್ಕೆ ಹೊಸ ರಂಗಿನ ಚಿಂತನೆ ನಿತ್ಯವಿರಲಿ!!!