ಬುಧವಾರ, ಜನವರಿ 26, 2011

ಸ್ವಲ್ಪ ಆಡಜಸ್ಟ್ ಮಾಡ್ಕೊಳ್ಳಿ

ಎಷ್ಟು ಕಷ್ಟವೊ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ..



ಸ್ವಲ್ಪ ಹೊಂದಿಕೊಂಡು ಹೋಗಬೇಕಾಪ್ಪ! ಈ ಮಾತು ಹಲವರ ಬಾಯಿಯಿಂದ ಹಲವಾರು ಸಂದರ್ಭಗಳಲ್ಲಿ ಹಲವಾರು ಭಾರಿ ಕೇಳಿರುತ್ತೇವೆ.




ಆ ಸಮಯಕ್ಕೆ ಇದು ಸರಿಯೇನಿಸಿದರೂ ನಂತರ ನಾವೇ ಯೋಚಿಸಿ ಯಾಕೇ ಹೊಂದಿಕೊಂಡು ನಮಗೆ ಇಷ್ಟವಿಲ್ಲದಿದ್ದರೂ ನಮ್ಮ ಅಕ್ಕ ಪಕ್ಕದವರೊಂದಿಗೆ ನಾವು ಹೊಂದಿಕೊಂಡಿದ್ದೇವೆ? ನಿಮ್ಮ ಇಚ್ಛೆಗೆ ನಮ್ಮ ಸಾಥ್ ಇದೆ ಎಂಬ ರೀತಿಯ ಪೋಜು ನೀಡಿರುತ್ತೇವೆ.




ಮಗು ತಾನು ಈ ಜಗತ್ತಿಗೆ ಪಾದಾರ್ಪಣೆ ಮಾಡಿದಾರಭ್ಯ ತಾನು ತನ್ನ ಕಡೆಗಾಲವನ್ನು ಪೂರೈಸುವವರೆಗೆ ಈ ಆಡ್ಜ್ ಸ್ಟಮೆಂಟ್ ಎಂಬ ಪದದ ಮೂಲಕ ತನ್ನ ಎಲ್ಲಾ ಜೀವನದ ವೈವಾಟನ್ನು ನಡೆಸಬೇಕಾಗುತ್ತದೆ.




ಯಾಕೆ ಹೀಗೆ? ಈ ರೀತಿಯ ದ್ವಂದ್ವ?. ಇಚ್ಛಾಶಕ್ತಿಗೆ ವಿರುದ್ಧವಾಗಿ ತೋರಿಕೆಯ ಮುಖವಾಡವಿಲ್ಲದೇ ಬದುಕುಲು ಸಾಧ್ಯವಿಲ್ಲವೇ?

ಈ ಜಗತ್ತಿನ ಜೀವಾನ್ ಜೀವಕೋಟಿಗಳು ಏಕ ರೂಪವಾಗಿರುವುದಿಲ್ಲ. ಏಕ ರೂಪ, ಭಾವನೆ, ಆಸೆ, ನಡಾವಳಿಕೆಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ತಾನು ಮಾಡುವುದು ಇನ್ನೂಬ್ಬರಿಗಾಗಿ ಅದು ತಾನು ಮಾತನಾಡುವುದರಿಂದ ಹಿಡಿದು ತಾನು ಜೀವಿಸುವ ವಿಧಾನದವರೆಗೂ ಇಷ್ಟವಾಗದೇನೇ ಇರಲು ಇಚ್ಛಿಸುತ್ತೇವೆ.




ಈ ನಮ್ಮ ಸುಂದರ ಮಾನವ ಪ್ರಪಂಚದಲ್ಲಿ ಒಂಟಿ ಜೀವನ ನಿಜವಾಗಿಯೂ ವಿಪರೀತವಾದ ಕಷ್ಟದ ಜೀವನ. ತನ್ನ ಪ್ರತಿಯೊಂದು ಘಟ್ಟಗಳಲ್ಲೂ ಇನ್ನೂಬ್ಬರ ನೆರವು ಮತ್ತು ಸಾಥ್ ಬೇಕೆ ಬೇಕು.




ತಾನು ತನ್ನ ಜೀವನವನ್ನು ಪ್ರಾರಂಭಿಸುವ ಜೊತೆಗಾರರಾದ ತನ್ನ ತಂದೆ - ತಾಯಿ, ಬಂಧು ಬಳಗದವರಿಂದ ಮೊದಲು ಮಾಡಿ ತಾನು ಬೆಳೆದಂತೆ ತನ್ನ ಸ್ನೇಹಿತರು, ತನ್ನ ಜೀವನ ಸಂಗಾತಿ ಮತ್ತು ತಾನು ಒಡನಾಡುವ ಎಲ್ಲಾ ವ್ಯಕ್ತಿಗಳೊಂದಿಗೂ ಅದರದೇ ಆದ ಒಂದು ವಿಧವಾದ ಅಲಿಖಿತ ಶಾಸನದಂತೆ ಒಂದು "ಹೊಂದಾಣಿಕೆ" ಯೆಂಬ ತೆರೆ ಆ ಆಯಾ ವ್ಯಕ್ತಿಗಳ ಮಧ್ಯೆ ದ್ವಿಮುಖವಾಗಿ ಜಾರಿಯಲ್ಲಿರುತ್ತದೆ. ಆ ಹೊಂದಾಣಿಕೆ ಯಾವ ರೀತಿಯಲ್ಲಾದರೂ ಆಗಿರಬಹುದು.




ಈ ಬಗೆಯ ಮನುಷ್ಯ ಮನುಷ್ಯರೊಡನೆ ತನ್ನದೇಯಾದ ಗಡಿಯನ್ನು ವ್ಯಕ್ತಿ ಜೀವನ ಪೂರ್ತಿ ಕಟ್ಟಿ ಕೊಂಡಿರುತ್ತಾನೆ. ಅದಕ್ಕೆ ಈ ನಮ್ಮ ಭ್ಯವ್ಯ ಭಾರತ ಸಂಸ್ಕೃತಿಯಲ್ಲಿ ನಮ್ಮದೇಯಾದ ಕರುಣರಸವಾದ ಕುಟುಂಬ, ಸ್ನೇಹ, ಸಂಬಂಧಗಳು ವಿಶ್ವವ್ಯಾಪಿಯಾಗಿರುವುದು.




ಈ ಹೊಂದಾಣಿಕೆಯೆಂಬ ಬೀಜ ಮಂತ್ರ ಮೊಟ್ಟ ಮೊದಲು ನಮ್ಮ "ಅಹಾಂ" ನ ಧಮನವೇ ಸರಿ. ಬೇರೆಯವರೊಂದಿಗೆ ತಾನು ಅವರಂತಯೇ ಎಂಬ ನಡಾವಳಿಯ ಮೂಲ ಮೆಟ್ಟಿಲು ಎಂದರೇ ತಪ್ಪಾಗಲಾರದು.




ಎರಡು ಜೀವಗಳ ಸಮ್ಮಿಲನ ಅಂದರೆ ಆ ಎರಡು ಜೀವಿಗಳ ಭಾವನೆ ಒಂದೇ ಗತಿಗೆ ಬರಬೇಕಾಗುತ್ತದೆ. ಆ ಸಮಯದಲ್ಲಿ ತಾನೇ ದ್ವಿಮುಖವಾಗಿ ನಮ್ಮ ನಿಮ್ಮೆಲ್ಲಾರ ಭಾವರಸ, ಅಭಿವ್ಯಕ್ತಿ ವಿನಿಮಯವಾಗುವುದು.




ಈ ರೀತಿಯ ಮನೊಶ್ಯಕ್ತಿ ಈ ಇಡೀ ಮಾನವ ಸಂಕುಲದಲ್ಲಿ ಗೊತ್ತಿಲ್ಲದ ರೀತಿಯಲ್ಲಿ ನಿರಂತರವಾಗಿ ಜಾರಿಯಲ್ಲಿರುವುದು.
ಅದು ನಮ್ಮ ಸುತ್ತಲಿನವರ ಸಂತೋಷಕ್ಕೂ ಕಾರಣೀಭೂತವಾಗಿರುತ್ತದೆ. ಕೆಲವು ಸಮಯದಲ್ಲಿ ವಿವಿಧ ವ್ಯಕ್ತಿಗಳ ಮಧ್ಯೆ ಈ ಸಂಬಂಧ ಕಷ್ಟಕರವಾಗಬಹುದು. ಆಗಲೇ ವ್ಯಕ್ತಿಗಳ ನಡುವೆ ವಿರಸ, ವೈರತ್ವ ಮುಂತಾದ ಬಿನ್ನಾಭಿಪ್ರಾಯಗಳು ಉಂಟಾಗುವುದು.




ಈ ರೀತಿಯ ನಡಾವಳಿ ಕೇವಲ ಇಬ್ಬರು ವ್ಯಕ್ತಿಗಳ ನಡುವೆಯೇ ಫಲಿಸಿ ಅದು ಕುಟುಂಬ - ನೆರೆಹೊರೆ, ರಾಜ್ಯ, ದೇಶ ಗಳ ಮಟ್ಟಕ್ಕೆ ಹೋಗಲೂಬಹುದು.




ಹೊಂದಾಣಿಕೆಯೆಂಬುದು ನಮ್ಮ ಇಚ್ಛಾಶಕ್ತಿ ಮತ್ತು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನಕಾರಿ ಭಾವನೆಯಲ್ಲಾ. ಇಡೀ ಸಮಾಜ ಏಕ ಎಂಬ ಭಾವನೆಯನ್ನು ಸ್ಫುರಿಸಿ ಎಲ್ಲರೂ ಒಂದೇ ಎಂಬ ಮಹನ್ ಮೇಲು ಮಂತ್ರವನ್ನು ತಿಳಿಯಪಡಿಸುವ ಸಾಧನ.




ಹಾಗೆಯೇ ನಾವು ಬದುಕಿ ಬೇರೆಯವರನ್ನು ಬದುಕಲು ಬಿಡವುದು. ನಾವು ಅವರೇ ಎಂಬ ವಿಶಾಲ ಮನೋಭಾವವನ್ನು ಸಾರುವಲ್ಲಿ, ಎಲ್ಲೇಲ್ಲಿ ಯಾವಾಗ ಬಳಸುವಲ್ಲಿ ಉಪಯೋಗಿಸುವ ಯೋಚಿಸುವ ಒಂದು ಮನೋಧರ್ಮ.




ಕೆಲವೊಮ್ಮೆ ಕೆಲವು ಅನಿವಾರ್ಯತೆಗಳೂ ನಮ್ಮನ್ನು ಈ ಹೊಂದಾಣಿಕೆಗೆ ಅನುವು ಮಾಡುತ್ತವೆ. ಮತ್ತೇ ಕೆಲವೊಮ್ಮೆ ಇದು ಬೇಡ ಎಂಬ ಮನೋಭಾವ ಬರುತ್ತದೆ. ಸಮಯ ಸಂದರ್ಭವೇ ಇದರ ಜಾರಿಗೆ ಮತ್ತು ವೃದ್ಧಿಗೆ ಪೂರಕ ಪೋಷಕಗಳು. ಕೇವಲ ನಾವುಗಳು ಅದರಂತೆ ಸ್ಪಲ್ಪ ಗಮನಿಸಿ ಹೆಜ್ಜೆ ಇಡಬೇಕು ಅಷ್ಟೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ