ಶುಕ್ರವಾರ, ಜನವರಿ 28, 2022

ಬಿಳಿ ಹಿಮ​ ರಾಶಿಯನ್ನು ಕವಿ ಕಂಡಿದ್ದರೇ

ಇಂದು ನನಗೆ ಮೂಡೇ ಇರಲಿಲ್ಲ​.  ಇಷ್ಟು ಬೇಗ ಯಾರೂ ಎದ್ದೇಳುತ್ತಾರೆ? ಕಳೆದ ರಾತ್ರಿಯಿಡಿ ಹಿಮ​ ಮಳೆ ಇಲ್ಲಿ. 

ಹಿಮವು ತೆರೆ ತೆರೆಯಾಗಿ ಇನ್ನೂ ಬೀಳುತ್ತಲೇ ಇದೆ. ಆದರೂ ಎದ್ದೇಳಲೇ ಬೇಕು. ಮನಸ್ಸಿನ ಮನಸ್ಸಿಲ್ಲದೇ ಆಪ್ ಶೂರ್ ಕಾಲ್ ಗಾಗಿ. 

ಒಳಗೆ ಮತ್ತು ಹೊರಗೆ ಕೊರೆಯುವ ಚಳಿ ನನ್ನ​ ಕಣ್ಣು ಬಿಡಲು ಬಿಡುತ್ತಿರಲಿಲ್ಲ​. ಹಾಗೆಯೇ ಮೊಬೈಲ್ ಆಲರಾಮ್ ಕೂಗುವ ಐದು ನಿಮಿಷಕ್ಕೆ ಮೊದಲೇ ಆಪ್ ಮಾಡಿ ಬಾತ್ ರೂಮ್ ಕಡೆಗೆ ಹೋದೆ. 


ಚಕಾ ಚಕ್ ಎಂದು ಬ್ರಷ್ ಮಾಡಿದೆ. ಮುಖಕ್ಕೆ ನೀರು ಹಾಕಿಕೊಳ್ಳಲು ಬೇಜಾರು. ಕೊರೆಯುವ ತಣ್ಣೀರು. ಬಿಸಿ ನೀರು ಬರುವುದು ಹಲ್ಲುಜ್ಜಿ ಮುಖವನ್ನು ತೊಳೆದು ಮುಗಿದ ಮೇಲೆಯೇ. ತಣ್ಣೀರೇ ಒಳ್ಳೆಯದು ನಿದ್ದೆಯನ್ನು ಬಡಿದು ಎಚ್ಚರ ಮಾಡಲು. 


ಮುಖವನ್ನೊರಿಸಿಕೊಂಡು ಹಾಗೆಯೇ ಹಾಲಿಗೆ ಬಂದು ಕಿಟಿಕಿಯ ಬ್ಲೆಂಡ್ ಸರಿಸಿದೆ. ನೋಡಿದರೇ ಪೂರ್ತಿ ಸ್ವರ್ಗದಂತಹ ನೋಟ. ಹಚ್ಚ ಬಿಳಿ ಹತ್ತಿಯನ್ನರಡಿದ ರೀತಿಯಲ್ಲಿ ಬಿಳಿ ಹಿಮ​ ಮನೆ, ಕಾರು, ರೋಡ್ ಮೇಲೆ ಪೂರ್ತಿ ಬಿದ್ದಿದೆ. ಸೂರ್ಯನ ಕಿರಣವಿಲ್ಲದೇ ಹೊಳೆಯುತ್ತಿರುವ ಹಾಲು ಬಿಳುಪು ಎಲ್ಲೆಲ್ಲೂ.

ಸೂರ್ಯನಿಗೂ ಬೇಸರವಿರಬೇಕು ಈ ಕೊರೆಯುತ್ತಿರುವ ಚಳಿ ಗಾಳಿಯನ್ನು ಕಂಡು.   

ಕಿಟಕಿಯ ಕರ್ಟ್ ನ್  ಪೂರ್ತಿ ಸರಿಸದೇ ಅಡುಗೆ ಮನೆಗೆ ಹೋಗಿ ನೀರನ್ನು ಬಿಸಿ ಮಾಡಲು ಇಟ್ಟು ಲ್ಯಾಪ್ ಟಾಪ್ ಆನ್ ಮಾಡಿದೆ.  


ಹೊಸ​ ಮೇಲ್ ಗಳನ್ನು ಚೆಕ್ ಮಾಡುವ ಹೊತ್ತಿಗೆ ನೀರು ಬಿಸಿಯಾಗಿರುವಂತೆ ಕಂಡಿತು. ಅದು ಸೂಯ್ ರೂಯ್ ಎನ್ನುವ ಶಬ್ಧವೇ ಹೇಳುತ್ತಿದೆ ನಾನು ಕಾದಿದ್ದೇನೆ. 


ಲೋಟಕ್ಕೆ ಬಿಸಿ ನೀರು ತುಂಬಿಸಿಕೊಂಡು ಪುನ: ಲ್ಯಾಪ್ ಟಾಪ್ ಗೆ ಮುಖ ಮಾಡಿದೆ. ಅಪ್ ಶೂ ರ್ ಕಾಲ್ ಜಾಯನ್ ಆಗಲು. 


ಹೀಗೆ ಸ್ವಲ್ಪ ಹೊತ್ತು ಹೋದಂತಾದಾಗ ಪುನಃ ಕಿಟಿಕಿಯ ಕಡೆಗೆ ಬಂದು ತೆರೆಯನ್ನು ಸ್ವಲ್ಪ ಸರಿಸಿ ನೋಡಿದೆ. ರವಿರಾಯ​ ಸ್ವಲ್ಪ ಸ್ವಲ್ಪ ತನ್ನ ಮುಖವನ್ನು ತೋರಿಸಲು ಶುರು ಮಾಡುತ್ತಿದ್ದ​. 

ಇರಲಿ ಹೊರಗಿನ ಬೆಳಕು ಸ್ವಲ್ಪ ಬರಲಿ ಎಂದುಕೊಂಡು ಬ್ಲೆಂಡ್ ನ್ನು ಪೂರ್ತಿ ಸರಿಸಿ ಸೋಪಾ ಮೇಲೆ ಕೂತು ಮೊಬೈಲ್ ನೋಡಲು ಶುರು ಮಾಡಿದೆ. ನಿನ್ನೆಯ​ ಕೊರೋನ  ನಂಬರ್ ಏನು ಎತ್ತಾ ಕಥೆಯೆಂದು. Yahoo ನೀವ್ಸ್ ನೋಡುತ್ತಾ ನೋಡುತ್ತಾ ಆಗಲೇ ಗಂಟೆ ಎಂಟಾಗುತ್ತಿದೆ.



ಹೊರಗಡೇಯೋ ಇನ್ನೂ ಹಿಮ ಹನಿಗಳು ಬೀಳುತ್ತಲೇ ಇದೆ. ವೇದರ್ ಆಪ್ ಪ್ರಕಾರ ಇನ್ನೂ ಇದೆ ರೀತಿಯಲ್ಲಿ ಸ್ನೋ ೧೧ ರವರೆಗೆ ಬೀಳುವುದಂತೆ. 

ಮನೆಯ ಹೊರಗಂತೂ ಪೂರಾ ನಿಶಬ್ಧ. ಕೊರೋನಾ ಬಂದ ಮೇಲೆ ಮನೆಯ ಮುಂದೆ ನಿಂತಿರುವ ಕಾರುಗಳು ದೂಸ್ರಾ ಕದಲುವುದಿಲ್ಲ​. ಯಾರೂ ಯಾಕೆ ಸುಖ ಸುಮ್ಮ​ನೇ ಈ ಕೊರೆಯುವ ಚಳಿ ಹಿಮದಲ್ಲಿ ಎದ್ದು ಕಾರುಗಳನ್ನು ತೆಗೆಯುತ್ತಾರೆ. ಈಗ ಇಲ್ಲಿ ಮನೆಯಿಂದಲೇ ಎಲ್ಲಾ ಕೆಲಸ ಮಾಡುತ್ತಿದ್ದಾರೆ.  

ಬರೀ ಶಾಲೆಗೆ ಹೋಗುವ ಮಕ್ಕಳು ಮಾತ್ರ ೮.೩೦ಕ್ಕೆ ಶಾಲೆಗಳಿಗೆ ಹೋಗುವುದು ಮಾತ್ರ​ ಕಾಣಿಸುವುದು. 

ಕೋರೋನಾ ಎಲ್ಲೇಲ್ಲಿಯೂ ತಾರಕ​ಕ್ಕೆ ಏರಿದ್ದರೂ ಪಾಪ ಮಕ್ಕಳಿಗೆ ರಜಾ ಮಾತ್ರ ಇಲ್ಲ​!!  

ನನಗೆ ಬ್ರೇಕ್ ಪಾಸ್ಟ್ ಏನೂ ಮಾಡಲಿ ಎಂಬುದೇ ಚಿಂತೆ. ಇದು ಒಂದೇ ಅಲ್ಲಾ..ಹೀಗೆ ಹತ್ತು ಹಲವು ಪ್ರಶ್ನೆಗಳು ಒಮ್ಮೆಲೇ ಮತ್ತು ಆಗಾಗ್ಗೆ ಬರುತ್ತವೆ. ಈಗ ಈ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣವೆಂದುಕೊಂಡು ಮನಸ್ಸಿನಲ್ಲಿಯೇ ನಿರ್ಧರಿಸಿದೆ. 

ಹೊರಗೆ ಹೋಗಿ ಹೋಟೆಲ್ ನಿಂದ ಏನಾದರೂ ತರಲೇ. ಅಲ್ಲಿಂದ ಹೆಚ್ಚಿಗೆ ಏನಾದರೂ ತಂದರೇ ಮಧ್ಯಾನ ಮತ್ತು ಸಂಜೆಗೂ ಸರಿ ಹೋಗಿ ಈ ದಿನದ ಹೊಟ್ಟೆಯ ವಿಷಯಕ್ಕೆ ಉತ್ತರವಾಗುವುದು.

ಯಾರೂ ಮತ್ತೆ ತಿಂಡಿ ತೀರ್ಥ ತಯಾರಿಸುವುದೆಂದು. 


ಆದರೇ ಹೊರಗೆ ಹೋಗುವುದು ಎಂದರೇ ಮತ್ತೆ ಸಮಸ್ಯೆಗಳ ಸರಮಾಲೆ. ಈ ಚಳಿ, ಸ್ನೋ ಗಳಿಂದ ನನ್ನ ಕಾರು ಆನ್ ಆಗುವುದಿಲ್ಲ​. ಅದಕ್ಕೆ ಜಂಪ್ ಸ್ಟಾಟರ್ ಹಾಕಬೇಕು. ಸ್ನೋ ಕ್ಲೀನ್ ಮಾಡಬೇಕು. ಬೇಡಪ್ಪಾ ಬೇಡ. ಈ ಎಲ್ಲಾ ಕೆಲಸಗಳನ್ನು ಕೊರೆಯುವ ಚಳಿಯಲ್ಲಿ ನಿಂತು ನಾನೇ ಮಾಡಬೇಕು. 


ಅದರೂ ಚಟುವಟಿಕೆಯಿಂದ ಇರಬೇಕು ಎಂಬ ದೃಢ ನಿರ್ಧಾರದಿಂದ ಆಗಿದ್ದಾಗಲಿ ಎಂದು ಯುದ್ಧಕ್ಕೆ ತಯಾರಾಗುವ ರೀತಿಯಲ್ಲಿ  ಜಾಕೇಟ್, ಬೂಟ್ಸ್, ಗ್ಲೌಸ್, ಕ್ಯಾಪ್ ಎಲ್ಲಾ ಧರಿಸಿ ಕಾರ್ ಕೀ ತೆಗೆದುಕೊಂಡು ಹೋರಟೆ.


ನಾನು ಎಷ್ಟು ಸೋಮಾರಿ ಎಂಬುದು ನಿತ್ಯ ಮುಂಜಾನೆ ಎದ್ದು ಈ ಚುಮು ಚುಮು ಚಳಿಯಲ್ಲೆದ್ದು ಶಾಲೆಗೆ ಹೋಗುವ ಇಲ್ಲಿನ ಮಕ್ಕಳನ್ನು ಕಂಡಾಗ ಅನಿಸಿತು. 

ಅವರೇ ಗ್ರೇಟ್ ಸಹ​. 

ಆದರೇ ಕಳೆದ ಈ ಎರಡು ವರುಷದಿಂದ ವರ್ಕ್ ಪ್ರಮ್ ಹೋಮ್ ಕೆಲಸ ಮಾಡುವ ಹೈದರನ್ನೆಲ್ಲಾ ಸ್ವಲ್ಪ ಮಟ್ಟಿಗೆ ಸೋಮಾರಿಗಳನ್ನಾಗಿ ಮಾಡಿರುವುದಂತೂ ದಿಟ​.


ನಾನು ಮುಂಬಾಗಿಲನ್ನು ಲಾಕ್ ಮಾಡಿ  ಆಪಾರ್ಟ್ ಮೆಂಟ್ ಕಾಮನ್ ಏರಿಯದಲ್ಲಿ ನಿಂತಾಗ ಸ್ವಲ್ಪ ಸ್ವಲ್ಪ ಚಳಿಯ ಸ್ಪರ್ಶವಾಯಿತು. ಆದರೂ ಪುನಃ ಮಕ್ಕಳ ಮುಖ ನೆನಪಾಗಿ ಲೇಟ್ಸ್ ಸ್ಟೇಪ್ ಔಟ್ ಎಂದು ಮೈನ್ ಡೋರ್ ತೆಗೆದು ಬಿದ್ದಿರುವ ಬಿಳಿ ಹಿಮದ​ ಮೇಲೆ ನನ್ನ​ ಶೋ ಇರಿಸಿದಾಗ ರೋಮಾಂಚನವಾಯಿತು. 

ಮೊದಲ ವರುಷದ ಮೊದಲ ಸ್ನೋ ಶವರ್! ಹಾಗೆಯೇ ನನ್ನ​ ಕಾರ್ ನ್ನು ಕಂಡು ಇನ್ನೂ ರೋಮಾಂಚನವಾಯಿತು.  ಕಾರ್ ಪೂರ್ತಿ ಹತ್ತಿಯನ್ನೇ ಹೊದ್ದುಕೊಂಡು ಬೆಚ್ಚಗೆ ಮಲಗಿದ ರೀತಿಯಲ್ಲಿತ್ತು. 

ಉಫ್ ಸುತ್ತಲಿನ ನೋಟ ತುಂಬಾನೇ ಚೆನ್ನಾಗಿತ್ತು. 


ಕೆಲವು ಮನೆಗಳಲ್ಲಿ ಕಿಟಕಿಗಳನ್ನೇ ಇನ್ನೂ ತೆರೆದಿರಲ್ಲಿಲ್ಲ​. ಕೆಲವರಂತೂ ಇನ್ನೂ ಮಲಗಿರಲೇಬೇಕು. ಈ ಕೊರೆಯುವ ಚಳಿ ಜನಗಳನ್ನು ಇನ್ನೂ ಹೆಚ್ಚು ಮಲಗುವಂತೆ ಮಾಡುತ್ತದೆ. ಬೆಚ್ಚಗೆ ಮಲಗುವ ಮಜಾವನ್ನು ಯಾರು ತಾನೇ ಕಳೆದುಕೊಳ್ಳುತ್ತಾರೆ ಅಲ್ಲಾವಾ? ನನಗೂ ಹಾಗೆಯೇ ಅನಿಸುತ್ತೇ. ವಿಕೇಂಡ್ ನಲ್ಲಿ ಚೆನ್ನಾಗಿ ಮಲಗಬೇಕೆಂದು.


ಮಲ್ಲಿಗೆಯಂತೆ ಬಿದ್ದಿರುವ​ ಈ ಹಿಮ ರಾಶಿಯನ್ನು ಕವಿ ಕಂಡಿದ್ದರೇ ಸುಂದರವಾದ ಕಾವ್ಯವನ್ನೇ ರಚಿಸಿಬಿಟ್ಟಿರುತ್ತಿದ್ದ ಅನಿಸುತ್ತದೆ. ಅಷ್ಟರ ಮಟ್ಟಿಗೆ ಸುಂದರವಾಗಿತ್ತು. ನಾನೂ ಸಹ​ ಇರಲಿ ಎಂದು ಕೊಂಡು ನನ್ನ ಮೊಬೈಲ್ ಕ್ಯಾಮರದಲ್ಲಿ ಹಿಮ ಸೌಂದರ್ಯವನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತ ಕೆಲವು ಪೋಟೋ ತೆಗೆದುಕೊಂಡು ನನಗೆ ನಾನೇ ಬೇಷ್ ಅಂದುಕೊಂಡು ಕಾರಿನ ಮೇಲಿರುವ ಹಿಮವನ್ನು ಕ್ಲೀನ್ ಮಾಡಲು ತಯರಾದೇ...

ಭಾನುವಾರ, ಜನವರಿ 16, 2022

ಮನಸ್ಸು ಮಳೆ

 ಮಳೆಯು ಬಂತು

ತೊಯ್ಯಲು ಹೊಯ್ಯಲು

ಮನ ಮನೆ  ಉಲ್ಲಾಸದಲ್ಲಿದೆ

ಹೋಗೋಣ ಬಾರ ಕುಣಿದು ಕುಪ್ಪಳಿಸಲು

ಆಡೋಣ ಬಾರ ಕೂಡಿ ಬಾಳಿ 

ಮಳೆಯು ಬಂತು

ತುಂತುರು ತಂಪೆರೆದಿದೆ ಧರೆಗೆ

ಮನ ಮೂಲೆ ಮೂಲೆಯಲ್ಲಿ ಹೊಸ ಕನಸು

ರಸ ನಿಮಿಷಗಳ ಗಳಿಗೆ ಗಳಿಗೆಯಲ್ಲಿ

ಕಳೆಯೋಣ ಬಾರಾ ದುಗುಡ ದುಮ್ಮಾನಗಳನು

ಬಾ ಗೆಳೆಯ ಬಾ ಹೊಸ ದಾರಿಗೆ ಸಾಗೋಣ​

ಮಳೆಯೊಂದಿಗೆ ನಲಿಯೋಣ ಮನಬಿಚ್ಚಿ

ಮಂಜು ಚಳಿ ಗಾಳಿ

 ಮೌನದ ಸಮಾಧಿಯಲ್ಲಿ

ಶಾಂತ ತಟಸ್ಥವಾದ ಭಾವ​

ಭಕ್ತಿಯುಕ್ತ ಸ್ತೋತ್ರ ಸೂಕ್ತಿ

ಕನಸುಗಳ ಕಲ್ಪನಾ ಲೋಕ​

ಆಹ್ಲಾದದ ಆಸರೆಯಲ್ಲಿ

ಹೊಚ್ಚ ಹೊಸ ಮಂಜು

ಬಿಚ್ಚಿ ಹರಡಿದ ಬಿಳುಪು

ತೆಲು ತೆರೆ ತೆರೆಯಾಸರೆ

ಗಿಡ ಮರ ರೆಂಬೆಯೆತ್ತಿ ನೋಟ​

ಸೊಯ್ಯನೆ ಸುಯ್ಯನೆ ಹಿಮ ಗಾಳಿ

ತಣ್ಣನೆಯ ಕೊರೆಯುವ ಹಿಮ ಹನಿ

ಬಾಳು ಬರುವ ಭಾವ ಬಗೆಯಲಿ

ಪೂರ್ತಿ ನಿಶಬ್ಧ​! ಮೌನ ಮಾತಾಡಿದೆ

ಹಾಗೊಮ್ಮೆ ಹೀಗೊಮ್ಮೆ ವಾಹನ ಸದ್ದು

ಬೆಳಕಿನ ಪ್ರತಿಫಲನ ಅದೇ ವಾಹನಗಳಿಂದ​

ಹೊಳೆಯುತ್ತಿದೆ ಹಾಲು ಹಾಸಿದ ಹಾದಿ

ಇದು ನಿರಂತರ ಪ್ರತಿ ಸಂತ್ಸರದಲ್ಲೂ