ಶನಿವಾರ, ಜನವರಿ 22, 2011

ಕನಸು

ಬೆಳಕಿರದ ದಾರಿಯಲ್ಲಿ ನಡೆದೇನು
ಆದರೆ ಕನಸುಗಳಿರದ ದಾರಿಯಲ್ಲಿ ನಡೆಯಲಾರೆ - ಪುರು


ಮೇಲಿನ ಸಾಲುಗಳನ್ನು "ಯಯಾತಿ" ನಾಟಕದಲ್ಲಿ ಪುರುವಿನ ಬಾಯಿಯಿಂದ ಕೇಳಿದ್ದೇವೆ.

ಮನುಷ್ಯ ಬಾಲ್ಯದಿಂದ - ಮುಪ್ಪಿನವರೆಗೆ, ಜೀವವಿರುವರೆಗೂ ಕನಸುಗಳು ಇಲ್ಲವಾದರೆ ಬಾಲ್ಯವೇ ಕೊನೆಯ ಜೀವನವಾಗುವುದರಲ್ಲಿ ಸಂದೇಹವಿಲ್ಲ. ಮತ್ತೇ ಕೆಲವರು ಕೇಳಬಹುದು ಬಾಲ್ಯವೇ ಸುಂದರ ಜೀವನ, ನಾವೆಲ್ಲಾ ಸಂತೋಷದ ದಿನಗಳನ್ನು ಅನುಭವಿಸಿದ್ದೇವೆ ಎಂದಾದರೆ ಅದು ನಾವುಗಳು ಮಕ್ಕಳಾಗಿದ್ದ ದಿನಗಳೆಂದು.

ಹೌದು! ಮಕ್ಕಳ ದಿನಗಳು ಸುಂದರ ಸ್ವಪ್ನಗಳು. ಮರೆಯಲಾರದ ಮಧುರ ಸವಿ ಸವಿ ನೆನಪುಗಳು. ಆದರೇ ಅದು ಜೀವನದ ಹೊಳೆಯ ಒಂದು ಘಟ್ಟ ಮಾತ್ರವೇ ಸರಿ.

ಬಾಲ್ಯದಲ್ಲಿ ನಮಗೆಲ್ಲಾ ವಿವಿಧ ಕನಸುಗಳ ಚಿಕ್ಕ ಚಿಕ್ಕ ಕೂಸು ಮರಿಗಳು ಮೂಢಲಾರಂಭಿಸುತ್ತಿದ್ದವು. ಯಾಕೆಂದರೆ ನಾವುಗಳು ಬಾಲ್ಯವನ್ನೇ ಅನುಭವಿಸುತ್ತಾ ಅನುಭವಿಸುತ್ತಾ ಇಡೀ ಜೀವನವೆಂಬ ಅಧ್ಯಯವನ್ನು ಕಳೆಯಲು ಸಾಧ್ಯವಿಲ್ಲ. ದಿನ ದಿನವೋ ಹೊಸ ಹೊಸ ಪ್ರಭೆಗೆ ನಮ್ಮ ದೇಹ, ಮನಸ್ಸು ಹಾತೊರೆಯುತ್ತದೆ. ಅದು ಸಾಕಾರವಾಗುವುದು ಕನಸುಗಳ ಮೊಲಕ.

ಕನಸು ಎಲ್ಲಿಂದ ಬರುತ್ತದೆ? ನಮ್ಮ ಸುಂದರ ಪರಿಸರ ನಮ್ಮ ಸುತ್ತ ಮುತ್ತಲಿನ ಸಮಾಜದಿಂದ, ಉನ್ನತಾದುದ್ದು ಎಂಬುದು ಯಾವುದೀದಿಯೋ ಅವುಗಳೆಲ್ಲಾ ಸುಂದರ ಕನಸುಗಳು ಅಲ್ಲವಾ?

ಆದರ್ಶದ ಪ್ರತಿಬಿಂಬವೇ ಕನಸು. ಯಾರು ಯಾವಾಗಲೂ ಕೆಟ್ಟದ್ದನ್ನು, ಅಸಂತೋಷವನ್ನು ಆಶಿಸಲಾರ ಮತ್ತು ಅದರಲ್ಲಿ ಕೊನೆಯವರೆಗೂ ಇರಲಾರ. ಸಂತೋಷದ ಸಾಕಾರಕ್ಕೆ ಅಸಂತೋಷದ ಘಳಿಗೆಗಳು, ಅನುಭವಿಸಿದ ಕೆಟ್ಟ ಅವಧಿಗಳೆ ಮೊದಲ ಮೆಟ್ಟಿಲು.

ನಮ್ಮೆಲ್ಲಾರ ಜೀವನ ನಿರಂತರ ಹರಿಯುವ ಜೀವನದಿ. ಅದು ಎಲ್ಲಿಯು ನಿಲ್ಲಲಾರದೆ ನಮ್ಮ ಭಾವ, ಭಕುತಿಗೆ ನಿಲುಕರಾದೆ ಅದು ತನ್ನ ಕಾರ್ಯವನ್ನು ಚಾಚು ತಪ್ಪದೇ ವಿವಿಧ ಘಟ್ಟಗಳನ್ನು ಏರಿ ತನ್ನ ಪಾಡಿಗೆ ತಾನು ಸಾಗುತ್ತಿರುತ್ತದೆ.

ಈ ವಿವಿಧ ಸ್ತರಗಳ ಸಂಗಮದ ಸಮಯದಲ್ಲಿ ನಮ್ಮಲ್ಲಿನ ರಾಗ, ದ್ವೇಷ, ಆಕಾಂಕ್ಷೆಯ ಹೆಚ್ಚು ಕಡಿಮೆಯ ಮೇಳದಂತೆ ನಮಗೆಲ್ಲಾ ಹಲವಾರು ರೀತಿಯ ಕನಸುಗಳು ಮೋಡುತ್ತವೆ. ಆ ಕನಸುಗಳ ಹಿಡೇರಿಕೆಗೆ ಪುನಃ ನಮ್ಮ ಜೀವನದ ವಿವಿಧ ಸಮಯಗಳನ್ನು ಪೂರಕವಾಗಿ ನಿಯೋಜಿಸಬೇಕಾಗುತ್ತದೆ.

ನಮ್ಮ ಸುತ್ತಲಿನ ಸಮಾಜ, ಜನ, ನಮ್ಮವರಿಂದ ನಮ್ಮ ಶಕ್ತಿಗನುಸಾರವಾಗಿ ಕೆಲವು ಹಿಡೇರಲುಬಹುದು. ಕೆಲವು ಕನಸುಗಳು ಕನಸುಗಳಾಗಿಯೇ ನಮ್ಮ ಜೀವನಪರ್ಯಾಂತ ನಮ್ಮನ್ನು ಕಾಡಲೂಬಹುದು.

ಹಾಗಾದರೇ ಕನಸುಗಳು ನಮ್ಮ ಸಂತೋಷದ ದಿನಗಳಿಗೆ ಕಡಿವಾಣವಿದೆ ಎಂದು ನಮಗನಿಸಬಹುದು.

ಹೌದು! ನಾವೆಲ್ಲಾ ತಿಳಿದಿರುವಂತೆ ನಮ್ಮ ಸುಖ, ಸಂತೋಷದ ಕಲ್ಪನೆಯೆಂದರೇ ಆರಾಮಾಗಿ ಯಾವುದೇ ತೊಂದರೆಯಿಲ್ಲದೆ ನಮ್ಮ ಜೀವನ ಸಾಗಿಸುವುದು ಎಂದು.

ಈ ರೀತಿಯ ಉನ್ನತ ಕನಸುಗಳಿಗಾಗಿ ಹಗಲು - ಇರುಳು ಶ್ರಮಪಡಬೇಕು. ಇದು ನಾವು ಬೆಳೆಯುತ್ತಿರುವ, ಜೀವಿಸುತ್ತಿರುವ ಸ್ಥಿತಿಯ ಮೇಲೆ ಪೂರ್ಣಾವಲಂಬಿತವಾಗಿರದಿದ್ದರು ಸ್ವಲ್ಪವಾದರೂ ಅವಲಂಬನೆ ಇದ್ದೇ ಇರುತ್ತದೆ.

ಜಡವಾದ ಸುಖ ನಾವು ಶ್ರಮಪಡದೆ ಬಂದ ಗೆಲುವುಗಳು ಕೇವಲ ಉರುಳಿದ ಮೈಲುಗಲ್ಲುಗಳೂ ಮಾತ್ರ. ಹೋರಾಟದಿಂದ ಗಳಿಸಿದ ನಮ್ಮ ಉನ್ನತಿ ಹೆಚ್ಚು ಶಾಶ್ವತ ಮತ್ತು ಒಂದು ಆದರ್ಶವೇ ಸರಿಯೆಂದು ಎಲ್ಲರೂ ಬಲ್ಲರು.

ಈ ಮೇಲಿನ ಎಲ್ಲಾ ವಿಚಾರಗಳನ್ನು ಗಮನಿಸಿ ನೀವುಗಳು ಯೋಚಿಸಬಹುದು. ನೀನು ಮಾತನಾಡುತ್ತಿರುವುದು ನಮ್ಮ ಬಯಕೆಗಳ ಬಗ್ಗೆ ಎಂದು. ಅಲ್ಲ! ಬಯಕೆ "ಆಸೆಯ ಒಂದು ಬಗೆ" ಅದಕ್ಕೆ ಬುದ್ಧ ಹೇಳಿದ "ಆಸೆಯೇ ದುಃಖಕ್ಕೆ ಮೂಲ".

ಹೌದು ನಮ್ಮ ನಮ್ಮ ಮೀತಿಯಲ್ಲಿ ನಮಗೆ ಸಾಧ್ಯವಾಗುವ ಕನಸು ಮತ್ತು ಜೀವನವನ್ನೇ ನಾವು ಆರಿಸಿಕೊಳ್ಳಬೇಕು.

ಹಾಗಾದರೇ ಮಹತ್ತರವಾದದ್ದುನ್ನು ನಮ್ಮಿಂದ ನಿಲುಕದ್ದನ್ನು ಯೋಚಿಸಬಾರದೇ? ಆದರೆ ಅದನ್ನು ದಕ್ಕಿಸಿಕೊಳ್ಳೂವ ನಮ್ಮ ಶಕ್ತಿ ಮತ್ತು ನಿಲುವಿನ ಮೇಲೆ ನಿಂತಿರುತ್ತದೆ.

ನಮ್ಮಲ್ಲಿ ಎಂಥೆಂಥ ಮಹನ್ ಮಹನ್ ವಿಷಯ, ಘಟನೆಗಳು, ವ್ಯಕ್ತಿಗಳು ಮತ್ತು ಅವರ ಸಂಶೋಧನೆಗಳು, ಆದರ್ಶಗಳು ಇದ್ದಾವೆ ಅದರ ಬಹು ಮುಖ್ಯ ಅಡಿಪಾಯವೇ "ಕನಸು". ಕಾಣಬೇಕು "ಕನಸ"ನ್ನು ಅದೇ ನಮ್ಮ ಬದುಕಿಗೆ ನಮ್ಮ ಚಿಂತನೆಯ ಹಾದಿಗೆ ನಮ್ಮ ಜೀವನವೆಂಬ ಯಂತ್ರದ ಚಾಲನೆಗೆ ಇಂಧನ.

ಎಲ್ಲರೂ ಕನಸು ಕಾಣಬೇಕು. ಆದರ ಗೆಲುವಿಗೆ ಸಾರ್ಥಕ ದಾರಿಯಲ್ಲಿ ಗುರಿಯ ಕಡೆಗೆ ಪಯಣಿಸಬೇಕು. ಆಗಲೇ ಎಲ್ಲರಿಗೂ ಜಯ. ಆದರಿಂದ ಸುತ್ತಲಿನವರಿಗೂ ಸಂತೋಷ ಮತ್ತು ಚಿಕ್ಕವರ ಕನಸುಗಳಿಗೆ ಸಾಧಿಸಿದವರ ದಾರಿಯೇ ಮತ್ತೊಂದು ಕನಸು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ