ಶುಕ್ರವಾರ, ನವೆಂಬರ್ 12, 2021

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ. ನವಂಬರ್ ೧೪. ಮಕ್ಕಳ ನೆಚ್ಚಿನ ಚಾ ಚಾ ನೆಹರುವರ ಹುಟ್ಟಿದ ದಿನ​. ಪ್ರತಿ ವರುಷವು ಎಲ್ಲಾ ಶಾಲೆಗಳಲ್ಲೂ ನೆಹರುವರ ಪೋಟೋ ಇಟ್ಟು, ಹೊವಿನ ಹಾರ ಹಾಕಿ ಪೊಜೆ ಮಾಡಿ ಚಾಕಲೆಟ್ ಕೊಡುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. 


ಹಾಗೆಯೇ ಮಕ್ಕಳಿಗೆ ಶಾಲಾ ಶಿಕ್ಷಕ ವೃಂದ ನೆಹರುವರ ಬಾಲ್ಯ ಮತ್ತು ಮಕ್ಕಳನ್ನು ಕಂಡರೇ ಅವರಿಗೆಷ್ಟು ಇಷ್ಟ​, ಅವರು ಹೇಗೆ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದರು, ಅವರೂ ಮತ್ತು ಇಂದಿರಾಗಾಂಧಿಯೊಂದಿಗಿನ ಜೀವನ  ಕಥೆಇತ್ಯಾದಿ ಇತ್ಯಾದಿ ಮಾತುಗಳು ಈಗ ನೆನಪಿಗೆ ಬರುತ್ತದೆ. 


ಹಾಗೆಯೇ ನೆಹರೂ ಅವರ ಪೋಟೋದಲ್ಲಿ ಅವರ ಕಪ್ಪು ಕೋಟಿನ​ ಜೇಬಿನಲ್ಲಿನ ಕೆಂಪು ಗುಲಾಬಿ. ಕೆಂಪು ಗುಲಾಬಿ ಅಂದರೇ ಮಕ್ಕಳ ನಗುವೇನೋ ಅನಿಸುತ್ತದೆ. ಆ ಹೊವನ್ನು ಯಾವುದೋ ಚಿಕ್ಕ ಮಗು ಅವರ ಜೇಬಿಗೆ ಸಿಗಿಸಿರುವಂತೆ ಬಾಸವಾಗುತ್ತಿತ್ತು.  


ಇಂದು ಹೀಗೆಯೇ ಮಕ್ಕಳ ದಿನಾಚರಣೆಯನ್ನು ಎಲ್ಲಾ ಶಾಲೆಗಳಲ್ಲೂ ಆಚರಿಸುತ್ತಿದ್ದಾರೆ. 


ಮಕ್ಕಳ ದಿನಾಚಾರಣೆ ಮಕ್ಕಳಿಗೆ ಏಕೆ ಖುಷಿ ಕೊಡುವುದಿಲ್ಲ ನೀವೇ ಹೇಳಿ. ನಮಗಾಗಿಯೇ ಈ ರೀತಿಯಲ್ಲಿ ಒಂದು ದಿನವಿದೆ  ಎಂದರೇ.. ಮಕ್ಕಳು ಎಂದರೇ ಅವರೇ ಮುಂದಿನ ಪ್ರಜೆಗಳು, ದೇಶದ ಆಸ್ತಿ. 

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಶಾಲಾಂಗಣದಲ್ಲಿರುವಷ್ಟು ದಿನ ಪ್ರತಿ ಮಗುವು ಪ್ರತಿ ಶಾಲೆಯ ಜವಬ್ದಾರಿಯೇ ಸರಿ. ಅವರ ಎಲ್ಲಾ ಅಭಿವೃದ್ಧಿಯ ಬೀಜಗಳನ್ನು ಬಿತ್ತುವ ಕ್ಷೇತ್ರವೇ ಎಂದರೇ ತಪ್ಪಿಲ್ಲ​. 


ಮಕ್ಕಳ ದಿನಾಚರಣೆ ಕೇವಲ ನೆಹರೂವರ ಪೋಟೋ ಇಟ್ಟು ಅವರ ಬಗ್ಗೆ ಗುಣಗಾಣ ಮಾಡಿ ಮಾರನೇಯ ದಿನ ಮರೆಯುವುದಲ್ಲ​. 

ಮತ್ತೇ ಮುಂದಿನ ವರುಷವೂ ನವಂಬರ್ ತಿಂಗಳ ೧೪ ರಂದು ಮತ್ತೊಂದು ದಿನಾಚರಣೆ ಆಚರಿಸುವುದಕ್ಕೆ ಮಾತ್ರ ಸೀಮಿತಗೊಳಿಸಬಾರದು. 


ನೆಹರೂವರ ಜನ್ಮ​ ದಿನವನ್ನೇ ಯಾಕೆ ಮಕ್ಕಳ ದಿನವೆಂದು ಘೋಷಿಸಿದರೂ ಎಂಬುದನ್ನು ನಾವು ತಿಳಿಯಬೇಕು. ನಿಮಗೂ ಗೊತ್ತೂ ನೆಹರುವರಿಗೆ ಮಕ್ಕಳೆಂದರೇ ಎಷ್ಟು ಪ್ರೀತಿಯೆಂದು. ಹಾಗೆಯೇ ನೆಹರು ಅವರು ಹೇಗೆ ತಮ್ಮ ಮಗಳನ್ನು ಬೆಳೆಸಿದರೂ ಎಂಬುದನ್ನು.  ತಮ್ಮ ಮಗಳನ್ನು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ಸ್ಥಾನಕ್ಕೆ ತರುವವರಿಗಿನ ಅವರ​ ಹೋರಾಟ ಮತ್ತೊಂದು ರೀತಿಯದು. ಅವರು ಅವರ ಮಗಳ ಶಿಕ್ಷಣದ ಬಗ್ಗೆ ಅವರಲ್ಲಿದ್ದ ದೃಷ್ಟಿ ಕೋನಕ್ಕೆ ಸಾಕ್ಷಿಯೆಂದರೇ ಅವರು ಜೈಲಿನಿಂದ  ಬಾಲ್ಯವಸ್ಥೆಯಲ್ಲಿದ್ದ ಪ್ರೀಯ ಇಂದಿರಾಗೆ ಬರೆದ ಸಾಲು ಸಾಲು ಪತ್ರಗಳು. ಆ ಅಷ್ಟೂ ಪತ್ರಗಳು ಈಗ ನಮಗೆ ಪುಸ್ತಕ ರೂಪದಲ್ಲಿ ಸಿಕ್ಕಿರುವುದು ಅದೃಷ್ಟ. 

ಹಾಗೆಯೇ ಈ ಪುಸ್ತಕಗಳು  ಪ್ರತಿಯೊಬ್ಬ​ ತಂದೆಯು ಹೇಗೆ ಮಗುವಿನ ವಿದ್ಯಾಭ್ಯಾಸಕ್ಕೆ ಹೇಗೆಲ್ಲಾ ಒತ್ತೂ ಕೊಡಬೇಕು ಎಂಬುದನ್ನು ಮನನ ಮಾಡುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಮಕ್ಕಳ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಮಾಜ ಮತ್ತು ಸರ್ಕಾರ ಯಾವ ರೀತಿಯಲ್ಲಿ ಕ್ಷ ಕಿರಣವನ್ನು ಹೊಂದಿರಬೇಕೆಂಬುದು.


ಇಂದಿನ ಭಾರತದಲ್ಲಿ ಶಿಕ್ಷಣವೆಂದರೇ ಅದು ಉಳ್ಳವರ ಮತ್ತು ಶಕ್ತಿವಂತರ ಸ್ವತ್ತೇನೋ ಎನ್ನುವ ಮಟ್ಟಿಗೆ ಉಧ್ಯಮವಾಗಿ ಮಾರ್ಪಟ್ಟಿದೆ. ಉನ್ನತ ಶಿಕ್ಷಣವೆಂದರೇ ಹೆಚ್ಚು ಹಣವಿರಬೇಕು. ಅದಕ್ಕಾಗಿ ಮದ್ಯಮ ವರ್ಗದ ತಂದೆ ತಾಯಿಂದರೂಗಳು ಹೆಚ್ಚು ಕಷ್ಟ ಪಟ್ಟು ದುಡಿಯಬೇಕು. ಹಾಗೆಯೇ  ಸಾಕಷ್ಟು ಜನರುಗಳು ಉನ್ನತ ಶಿಕ್ಷಣ ಬೇಕೆಂದು ನಗರಗಳತ್ತಾ ಮುಖ ಮಾಡಿಬಿಟ್ಟಿದ್ದಾರೆ. ಅಂದರೇ ಹಳ್ಳಿಯಲ್ಲಿ ಓದುವ ಮಕ್ಕಳಿಗೆ ಶಿಕ್ಷಣವಿಲ್ಲವೇ ಎಂದು ಗಾಬರಿಯಾಗಬೇಡಿ. 

ಇಂದು ಉನ್ನತ / ಉತ್ತಮ​ ಅಭ್ಯಾಸವೆಂದರೇ ಖಾಸಗಿ ಶಾಲೆಗಳಿಂದಲೇ ಎನ್ನುವ  ವಾತವರಣ ಎಲ್ಲಾ ಕಡೆ ನಿರ್ಮಾಣವಾಗುತ್ತಿರುವುದು ವಿಪರ್ಯಾಸ​. 


ಅದಕ್ಕೆ ಸಾಕ್ಷಿ ಎನ್ನುವಂತೆ ಸರ್ಕಾರಿ ಶಾಲೆಗಳಲ್ಲಿ, ಶಿಕ್ಷಣ ಸಂಸ್ಥೆ, ಕಛೇರಿಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಮಕ್ಕಳುಗಳು ಇದೆ ಖಾಸಗಿ ಕಾನ್ವೆಂಟ್ ಗಳಲ್ಲಿ ಓದಿಸುತ್ತಿರುವುದು. ಸರ್ಕಾರದ ಶಾಲೆಗಳು ಉಪಯೋಗಕ್ಕೆ ಬಾರದವೂ ಎಂಬುದನ್ನು ಅಲ್ಲಿರುವವರು ನಮಗೆ ಗೊತ್ತೂ ಎಂದು ಇಡೀ ಸಮಾಜಕ್ಕೆ ಪರೋಕ್ಷವಾಗಿ ನಿರೂಪಿಸುತ್ತಿರುವುದು.ಇನ್ನೂ ಇಲ್ಲಿನ ಕಾನ್ವೆಂಟ್ ಪ್ರೀಯ​ ಮಂದಿ ಅದು ಯಾವ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅನುಮಾನವಾಗುತ್ತದೆ. 


ಮಕ್ಕಳ ದಿನಾಚರಣೆಯ ನೆಪದಲ್ಲಾದರೂ ಸರ್ಕಾರ ಮತ್ತು ಸಮಾಜ ಮಕ್ಕಳ ಬೆಳವಣಿಗೆಗೆ ಅನುಕೂಲವಾದ ಉನ್ನತ ವಾತವರಣ ನಿರ್ಮಾಣಕ್ಕೆ ಕೈ ಹಾಕಬೇಕು. ವರುಷ ವರುಷವು ಒಂದೊಂದು ಚಿಂತನೆಯ ಮೊಲಕ ಚಿಕ್ಕ ಚಿಕ್ಕ ಕೂರತೆಗಳನ್ನು ನೀಗಿಸಬೇಕು. ಆ ಆ ಶಾಲೆಯ ಮಟ್ಟಿಗೆ ಉತ್ತಮ​ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಒಂದೊಂದು ಮಗುವಿನ ಸಾಧನೆಯನ್ನು ನಮ್ಮ ಮೊದಲ ಮಹಿಳಾ ಪ್ರಧಾನ ಮಂತ್ರಿಯ ಸಾಧನಾ ಪಥದದಲ್ಲಿ ತಮ್ಮ​ ತಮ್ಮ​ ಮಕ್ಕಳ ಅಭಿವೃದ್ಧಿಯ ಕನಸನ್ನು ಎಲ್ಲಾ ಮಧ್ಯಮ ವರ್ಗದ ಹೆತ್ತವರು ನನಸು ಮಾಡಿಕೊಳ್ಳಬಹುದು. 


ಈ ಕರೋನಾ ಮಗದೊಮ್ಮೆ  ಹೆತ್ತವರೇ ನಮ್ಮ ಗುರುಗಳು ಎಂಬುದನ್ನು ನಿರೂಪಿಸಿದೆ. ಮನೆಯೇ ಮೊದಲ ಶಾಲೆ, ತಾಯಿಯೇ ಮೊದಲ ಗುರು ಎಂಬುದನ್ನು ಕೇವಲ​ ಗಾದೆ ಮಾತಾಲ್ಲ ಎನ್ನುವುದು ಕಳೆದ ಒಂದುವರೆ ವರುಷದಲ್ಲಿ ಪುನಃ ಸಾಭಿತು ಮಾಡಿದ್ದಾರೆ. 


ಮಕ್ಕಳು ತಮ್ಮ ಹಿರಿಯರಿಗಿಂತ ತಾವೇನೂ ಕಮ್ಮಿಯಿಲ್ಲ ಎಂಬುದನ್ನು ತಮ್ಮ ಓದು, ತಿಳುವಳಿಕೆಯ ಮೊಲಕ ತಮ್ಮ ಹೆತ್ತವರಿಗೆ ತೋರಿಸಿಕೊಟ್ಟಿದ್ದಾರೆ. ಅವರ ಈ ಆನ್ ಲೈನ್ ಭರಾಟೆ ಕಂಡು ಎಂಥವರೂ ಮಂತ್ರ ಮುಗ್ಧರಾಗಿರುವುದು ಸುಳ್ಳಲ್ಲ​. 

ಇಂಥ ಒಂದು ದಿನ ಬರುತ್ತದೆ ಎಂಬುದನ್ನು ಯಾರೊಬ್ಬರೂ ನೆನಸಿರಲಿಲ್ಲ​.  


ಇಂಟರ್ ನೇಟ್, ಮೊಬೈಲ್ ಯಾವುದು ಶಾಲಾಂಗಣದಲ್ಲಿ ನಿಷೇಧವೆಂದು ಕಪ್ಪು ಪಟ್ಟಿ ಕಟ್ಟಿದ್ದರೋ ಈಗ ಅದೇ ಅತಿ ಸುಲಭ ಮಾರ್ಗ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಎನಿಸುವ ಮಟ್ಟಿಗೆ ಜಗತ್ತಿಗೆಲ್ಲಾ ಚಿರಾಪರಿಚಿತವಾಗಿದೆ. 


ಮಕ್ಕಳ ದಿನಾಚರಣೆಯೆಂದರೇ ಮಕ್ಕಳ ಆಶೋತ್ತರ, ಮಗುವಿನ​ ಮನಸ್ಸಿನ ಕನಸಿಗೆ ಬಣ್ಣ ಬಳಿಯುವ ಹಿರಿ ಕೈಗಳಾಗಲಿ ಹಿರಿಯರು. 


ಓದೆ ಮಕ್ಕಳ ಬೆಳವಣಿಗೆಗೆ ಮಾರ್ಗ. ಅವರ ವ್ಯಕ್ತಿತ್ವದ ಬೆಳವಣಿಗೆಗೆ ಆಟೋ ಪಾಠಗಳ ಸಮ್ಮಿಶ್ರಣ ನಿರಂತರವಿರಲಿ ಮುಂದೆಂದು ನಾವು ಆಶಿಸೋಣವೇ.