ಮಂಗಳವಾರ, ಜನವರಿ 18, 2011

"ದಿ ಲಾಸ್ಟ ಲೆಕ್ಚರ್" ನಮ್ಮ ಮೊದಲ ಬದುಕಿಗೆ

"ದಿ ಲಾಸ್ಟ ಲೆಕ್ಚರ್" Randy Pausch ಬಹು ಪ್ರಸಿದ್ಧ ವ್ಯಕ್ತಿತ್ವ ವಿಕಸನ ಪುಸ್ತಕ. Randy Pausch ರವರು ತಮ್ಮ ಜೀವನದ ಕೂನೆಯ ದಿನಗಳಲ್ಲಿ ತಮ್ಮ ಜೀವ ಇನ್ನೇನೂ ಗುಣಪಡಿಸಲಾರದಂತಹ ಈ ಕ್ಯಾನ್ಸರ್ ನಿಂದ ಜೀವವನ್ನು ಕೂನೆಗೊಳಿಸಿಕೊಳ್ಳಬೇಕು ಎಂಬ ಕಹಿ ಸತ್ಯವನ್ನು ತಿಳಿದ ದಿನಗಳಿಂದ ವಿಭಿನ್ನವಾಗಿ ತಮ್ಮ ಉಳಿದ ಕೆಲವೇ ಕೆಲವು ದಿನಗಳನ್ನು ತನ್ನ ಸಂಸಾರ ಮತ್ತು ತನ್ನ ಪ್ರಿಯ ಮುದ್ದಿನ ಮೂರು ಮಕ್ಕಳೊಡನೆ ಯಾವ ರೀತಿಯಲ್ಲಿ ಕಳೆಯಬೇಕು ಎಂಬ ಕಲ್ಪನೆಯಲ್ಲಿ ಒಡಮೂಡಿದ ಹನಿ ಮುತ್ತುಗಳು, ಜೀವನದ ಕಠಿಣ ಸತ್ಯಗಳ ಮಾತು ಮಣಿಗಳ ಸಂಗ್ರಹವಾಗಿದೆ.


ವಯಸ್ಸು ೪೭ , ೨೦೦೬ ರಲ್ಲಿ ನಿಮಗೆ ಪ್ಯಾನ್ ಕ್ರೀಯಾಟಿಕ್ ಕ್ಯಾನ್ಸರ್ ಇದೆ ಮತ್ತು ಅದನ್ನು ಗುಣಪಡಿಸಲಾಗದು. ಎಂಬುದನ್ನು ಡಾಕ್ಟರಗಳಿಂದ ತಿಳಿಸಿದ ದಿನದಿಂದ ತಾನು ಸಾವಿನ ಸಾನಿಧ್ಯದಲ್ಲಿ ಇದ್ದ ವೇಳೆಯಲ್ಲಿ, ತಾನು ಅನುಭವಿಸಿದ ಮತ್ತು ಕಳೆದ ಜೀವನದ ಕೂನೆಯ ಅನುಭವಗಳನ್ನು ತನ್ನ ವಿಚಾರಗಳನ್ನು ಪ್ರಸಿದ್ಧ ಲೆಕ್ಚರ್ ನ್ನು ತಾವೇ ಸ್ವತಃ ೨೦೦೭ ರಲ್ಲಿ ವಿಶ್ವಕ್ಕೆ ನೀಡಿದರು.


ಆ ಲೆಕ್ಚರ್ ನ ಭಾವ ಸಂಗ್ರಹವೇ "ದಿ ಲಾಸ್ಟ ಲೆಕ್ಚರ್" ಆಂಗ್ಲ ಗ್ರಂಥ. ಇದರ ಕನ್ನಡ ಭಾವ ಅನುವಾದವನ್ನು ಸ್ವಲ್ಪ ದಿನಗಳ ಹಿಂದೆ ನಾನು ಓದಿದೆ.

ಅಲ್ಲಿರುವ ಮಾತುಗಳು ಮತ್ತು ಅವರು ಕಂಡೂಂಡ ಕೊನೆಯ ದಿನಗಳ ಜೀವನದ ಅನುಭವದ ಮಾತುಗಳು ನಮ್ಮಂಥ ಸಾಮಾನ್ಯರಿಗೆ ಮೊದಲಿನ ಪಾಠಗಳೇ ಸರಿ!

ಈ ಪುಸ್ತಕವನ್ನು ಒಮ್ಮೆ ಓದಿ ಎತ್ತಿಡುವಂತಹದ್ದಲ್ಲ. ಪುನಃ ಪುನಃ ಮೆಲುಕು ಹಾಕುವಂತಹ ಪುನಃ ಪುನಃ ಓದಲು ಎತ್ತಿಟ್ಟುಕೊಳ್ಳುವ ಸಂಗ್ರಾಹಯೋಗ್ಯವಾದ ಕೃತಿ.

ಅದರ ಒಂದು ಝಲಕು ನಮಗಾಗಿ, ಇಷ್ಟಪಟ್ಟ ಅಮೂಲ್ಯವಾದ ಕೆಲವು ಪುಸ್ತಕದ ಸಾಲುಗಳು. ಆ ಪುಸ್ತಕವನ್ನು ಓದಲು ಇದು ಪ್ರೇರಪಿದಂತಾಗುತ್ತದೆ. ಅವರ ಲೈವ್ ವಿಡಿಯಾಗಳು ಯು ಟ್ಯೂಬನಲ್ಲೂ ಪ್ರಸಿದ್ಧವಾಗಿವೆ.


"ಯಾವುದೇ" "ನಿರ್ಧಾರ" ತೆಗೆದುಕೂಳ್ಳಲು ಅನಗತ್ಯ ಆತುರ ಪಡಬಾರದು. ಪ್ರಭಾವಶಾಲಿ ಹುದ್ದೆಯಲ್ಲಿದ್ದರೂ ಕೆಲಸ ಮತ್ತು ಸಂಬಂಧಗಳ ವಿಚಾರದಲ್ಲಿ "ನ್ಯಾಯ ಸಮ್ಮತ" ವಾಗಿ ವರ್ತಿಸಬೇಕು ಹಾಗೂ ಜನರನ್ನು ಮುನ್ನೆಡೆಸುವ ಸ್ಥಾನದಲ್ಲಿರುವೆ ಎಂದ ಮಾತ್ರಕ್ಕೆ ಅವರನ್ನು ನಿರ್ಲಕ್ಷಿಸಬಾರದು.(ಪುಟ -೨೩)

ಬೇರಲ್ಲದಕ್ಕಿಂತ ಮುಖ್ಯವಾಗಿ ತಮ್ಮ ಮಕ್ಕಳನ್ನು ತಂದೆ-ತಾಯಿಯರು ಅಗಾಧವಾಗಿ ಪ್ರೀತಿಸುತ್ತಾರೆ ಎಂಬುದನ್ನು ಮಕ್ಕಳು ಅರಿಯಬೇಕು.(ಪುಟ -೨೬)

ನಾವು ಯಾವುದೇ ಕನಸುಗಳನ್ನು ಕಂಡರೂ ಅದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಮಾತ್ರ ಅದು ನಮಗೆ ಹೆಚ್ಚಿನ ಮಾನ್ಯತೆ ಕೊಡುತ್ತದೆ.(ಪುಟ -೩೩)

"ಯಾವಾಗ ನೀನು ಸರಿಯಾದ ಮಾರ್ಗದಲ್ಲಿ ಹೋಗುತ್ತಿಲ್ಲದಿದ್ದರೂ ಯಾರೂ ಏನನ್ನು ಹೇಳದೆ ಸುಮ್ಮನಿರುತ್ತಾರೋ, ಆಗ ಅವರೆಲ್ಲರೂ ನಿನ್ನನ್ನು ಕಡೆಗಣಿಸಿರುವರೆಂದೇ ಅರ್ಥ" (ಪುಟ -೩೬)

"ಗೆಲ್ಲಲಾಗದಿರುವ ಪರಿಸ್ಥಿತಿಯೊಂದಿದೆ ಎಂದು ನಾನು ನಂಬುವುದಿಲ್ಲ."(ಪುಟ -೪೭)

"ವಸ್ತುಗಳಿಗಿಂತ ಮನುಷ್ಯ ಮುಖ್ಯ. ಅತೀ ಬೆಲೆಬಾಳುವ, ಶುದ್ಧವಾದ ನನ್ನ ಹೊಚ್ಚ, ಹೊಸ ಕಾರೂ ಇದಕ್ಕೆ ಹೊರತಾಗಿರಲಿಲ್ಲ. ಆದೂ ಒಂದು ವಸ್ತುವೇ" (ಪುಟ -೭೩)

ಜೀವನದಲ್ಲಿ ಎಲ್ಲವನ್ನೂ ಸರಿಪಡಿಸಬೇಕಾದ ಅಗತ್ಯತೆ ಇರುವುದಿಲ್ಲ ಎಂಬುದು ನನ್ನ ಭಾವನೆ.(ಪುಟ -೮೯)

ಸಮಯವನ್ನು ಹಣದಷ್ಟೇ ಸಮಂಜಸವಾಗಿ ಖರ್ಚು ಮಾಡಬೇಕು - ಪಾಶ್ ನ ಸಿದ್ಧಾಂತ.
ನೀವು ಯೋಜನೆಯೊಂದನ್ನು ರೂಪಿಸಿಕೊಂಡಿದ್ದರೆ, ಅದನ್ನು ಎಂದಾದರೂ ಬದಲಿಸಬಹುದು.(ಪುಟ -೧೧೨)

ಸೂಕ್ತ ಕೆಲಸಕ್ಕೆ ಸಮಯ ವಿನಿಯೋಗವಾಗುತ್ತಿರುವುದೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ.
ಪ್ರತಿಯೊಂದು ದಾಖಲೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಇಟ್ಟುಕೊಳ್ಳಿ.(ಪುಟ -೧೧೫)

ದೂರವಾಣಿಯನ್ನು ವಿವೇಚನೆಯಿಂದ ಬಳಸಿ.
ಕೆಲಸಗಳನ್ನು ವರ್ಗಾಯಿಸಿ.(
ಪುಟ -೧೧೪)

ನಿಮಗಾಗಿ ಕೆಲ ಸಮಯ ಮೀಸಲಿಡಿ.(ಪುಟ -೧೧೫)

ವಾಲ್ಟ ಡಿಸ್ನಿ ಹೇಳುವಂತೆ ಕಲಿಕೆ ಮತ್ತು ಕಲ್ಪನೆಗೆ ಕೊನೆಯೆಂಬುದೆ ಇರಲಾರದು.(ಪುಟ -೧೩೬)

ನೀವು ಸದಾ ಸಮಸ್ಯೆಗಳನ್ನೇ ಬಣ್ಣಿಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯ ನಿರ್ವಹಿಸುವ ವೈಖರಿಯಾಗಲಾರದು. ನಮಗೆಲ್ಲಾರಿಗೂ ಇರುವುದು ಅತ್ಯಂತ ಕಡಿಮೆ ಅವಧಿ ಮತ್ತು ಪರಿಮಿತ ಶಕ್ತಿ. ಸಮಸ್ಯೆಯನ್ನು ದೂಷಿಸಲೂ ಬಳಸುವ ಯಾವ ಸಮಯವೂ ಗುರಿಯನ್ನು ಮುಟ್ಟಲು ಸಹಾಯ ಮಾಡುವುದಿಲ್ಲ. ಅದು ನಮ್ಮನ್ನು ಎಂದಿಗೂ ಆನಂದದಿಂದಿರಲು ಬಿಡದು.(ಪುಟ -೧೫೩)

ಯಾವುದೇ ವ್ಯಕ್ತಿ ಸರಿಯಾದ ವಿಧಾನದಲ್ಲಿ ಭೇಟಿ ಮಾಡಿ.
ಇಬ್ಬರ ನಡುವಿನ ಸಾಮಾನ್ಯ ಗುಣಗಳನ್ನು ಅರಿಯಲು ಯತ್ನಿಸಿ.
ಮತ್ತೊಬ್ಬರನ್ನು ಎದುರುಗೊಳ್ಳುವ ಮುನ್ನ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಳ್ಳಿ.
ಮತ್ತೊಬ್ಬರಿಗೆ ಮಾತಾಡಲು ಅವಕಾಶ ಕೊಡಿ.
ನಿಮ್ಮ ಅಹಂನ್ನು ನಿಮ್ಮಲ್ಲಿಯೇ (ಬಳಿ) ಇಟ್ಟುಕೊಳ್ಳಿ .
ಒಬ್ಬರನ್ನೊಬ್ಬರು ಅಭಿನಂದಿಸಿ.
ಪರ್ಯಾಯ ವಿಚಾರಗಳನ್ನು ಪ್ರಶ್ನೆಯ ರೂಪದಲ್ಲಿ ಪಡೆಯಿರಿ.(
ಪುಟ -೧೫೬)

ಯಾರೊಬ್ಬರ ವಿಚಾರದಲ್ಲೇ ಆಗಲಿ ನಾವು ಸಹನೆಯಿಂದ ವರ್ತಿಸಿದರೆ ಆಶ್ಚರ್ಯಪಡುವ ರೀತಿಯಲ್ಲಿ ಅವರು ನಿಮ್ಮ ಮನಸ್ಸನ್ನು ಮುದಗೊಳಿಸುವರು.(ಪುಟ -೧೫೯)

ಮನುಷ್ಯ ಮತ್ತೊಬ್ಬರಿಗೆ ಕೃತಙ್ಞತೆಯನ್ನು ಸಲ್ಲಿಸುವುದು ಜೀವನದಲ್ಲಿ ಮಾಡಬೇಕಾದ ಅತ್ಯಂತ ಶ್ರೇಷ್ಠವಾದ ಕೆಲಸಗಳಲ್ಲೊಂದು. ಅದು ವ್ಯಕ್ತಿಯಲ್ಲಿರಬೇಕಾದ ಕನಿಷ್ಠ ಸೌಜನ್ಯವೂ ಹೌದು.(ಪುಟ -೧೬೫)

ನೀವು ಇತರರಿಗಿಂತ ಹೆಚ್ಚು ಹೊತ್ತು ಶ್ರಮಪಟ್ಟು ಕೆಲಸ ಮಾಡಿದರೆ ಆ ಸಮಯದಲ್ಲಿ ಯಶಸ್ಸಿನ ಸಾಕಷ್ಟು ಪಾಠಗಳನ್ನು ಕಲಿಯುತ್ತೀರಿ. ಇದು ನಿಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ಆನಂದವನ್ನು ನೀಡುತ್ತದೆ. ಪರಿಶ್ರಮ ಎಂಬುದು ಬ್ಯಾಂಕನಲ್ಲಿನ ಚಕ್ರ ಬಡ್ಡಿಯಂತೆ. ನೀವು ಹೆಚ್ಚು ಶ್ರಮಪಟ್ಟು ಕೆಲಸ ಮಾಡಿದ್ದೇ ಆದರೆ ಯಶಸ್ಸೆಂಬ ಚಕ್ರ ಬಡ್ಡಿ ಬಹು ಬೇಗ ಬೆಳೆಯುತ್ತ ಹೋಗುತ್ತದೆ.(ಪುಟ -೧೭೨)

ಕೃಪೆ :THE LAST LECTURE. Kannada Title. Author, RANDY PAUSCH / JEFFREY ZASLOW. Publisher, DHATRI PUBLICATIONS

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ