ಸೋಮವಾರ, ಜನವರಿ 10, 2011

ಸಂತೋಷಪಡಲು ನಮ್ಮವರು ಇರಬೇಕಲ್ಲವಾ?


ಯಾಕೇ ನಮಗೆ ನಮ್ಮ ಹತ್ತಿರದ ಸಂಬಂಧಿಗಳು, ರಕ್ತ ಸಂಬಂಧಿಗಳು ಮತ್ತು ನಮ್ಮ ಪ್ರೀತಿ ಪಾತ್ರ ಸ್ನೇಹಿತರು ಏನಾದರೂ ಒಂದು ಮಾತು ಹೆಚ್ಚಿಗೆ ಮಾತನಾಡಿದರೆ ಕರಳು ಕಸಿವಿಸಿಯಾಗುತ್ತದೆ..ತುಂಬ ಬೇಜಾರಾಗುವುದು.. ಮನ ನೋಯುವುದು? ಈ ರೀತಿಯ ಯಕ್ಷ ಪ್ರಶ್ನೆ ಎಲ್ಲರಿಗೂ ಒಮ್ಮೆಯಾದರೂ ಬಂದಿರಬಹುದು.


ಅದೇ ದಾರಿಯಲ್ಲಿ, ಬಸ್ಸುಗಳಲ್ಲಿ, ತುಂಬು ಜನ ಜಂಗುಳಿಯ ಮಧ್ಯೆ ಒಮ್ಮೊಮ್ಮೆ ಯಾರದರೂ ಎನಕ್ಕಾದರೂ ಬೈದರೇ ಅಥವಾ ಅಕ್ಷೇಪಿಸಿದರೇ ನಾವುಗಳು ಕೇರೇ ಮಾಡದೆ ನಮ್ಮ ಮುಂದಿನ ದಾರಿಯನ್ನು ನೋಡಿಕೊಂಡು ಹಾಗೆಯೇ ಸಾಗುತ್ತವೆ.


ಆದರೇ ಅದೇ ನಮ್ಮ ಮನೆಗಳಲ್ಲಿ ನಮ್ಮ ಹತ್ತಿರದವರಿಂದ ಕೇವಲ ಒಂದೇ ಒಂದು ಮಾತನ್ನು ಸಹಿಸದವರಾಗಿರುತ್ತೆವೆ.


ಅದೇ ಮಾತು ತಾಯಿ-ತಂದೆಯರಿಂದ, ಅಜ್ಜ-ಅಜ್ಜಿಯರಿಂದ ಬಂದಾಗಲೂ ಅದರ ಎಫೆಕ್ಟ ಸ್ವಲ್ಪ ಕಡಿಮೆಯೇ. ನಮ್ಮ ಗೆಳೆಯರಲ್ಲೂ ಕೆಲವರಿಂದ ಆ ಮಾತುಗಳು ಬಂದಾಗ ಕೆಲವರಿಂದ ತುಂಬಾನೇ ಹರ್ಟ್ ಆಗುತ್ತದೆ. ಮತ್ತೇ ಕೆಲವರಿಂದ ಪೂರ್ಣ ಪ್ರಮಾಣದ ನೋವು ನಮ್ಮನ್ನು ಕಾಡುತ್ತದೆ ಏಕೆ?


ಮನುಷ್ಯ ಸಂಘ ಜೀವಿ. ತಾನು ಹುಟ್ಟಿನಿಂದ ತನ್ನ ತಾಯಿ-ತಂದೆ, ತನ್ನ ಕುಟುಂಬದವರಿಂದ ಮೊದಲು ಮಾಡಿ ತನ್ನ ಮುಪ್ಪಿನವರೆಗೆ ತನ್ನ ಪಯಣದಲ್ಲಿ "ಸಂಬಂಧ" ದ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಮಂದಿಯನ್ನು ತನ್ನವರನ್ನಾಗಿಸಿಕೊಂಡು ಅವರ ಜೊತೆ ತನ್ನ ಜೀವನವನ್ನು ಕಳೆಯುತ್ತಾನೆ.


ಅಂದರೇ, ಮನುಷ್ಯ ತಾನು ಒಂಟಿಯಾಗಿ ತನ್ನ ಜೀವನವನ್ನು ಯಾವತ್ತಿಗೂ ಕಳೆಯಲಾರ ಎಂಬುದು ದಿಟ. ತಾನು ಸುಖವಾಗಿ ಇರುವೆನು ಎಂದು ನಿರ್ಧರಿಸಬೇಕಾದರೆ ತನ್ನ ಸುತ್ತಲಿನವರಿಂದ ಮತ್ತು ತನ್ನ ಜೊತೆಗಾರರಿಂದ ಅದರ ಮಾಪನ ಮಾಡಿಕೊಳ್ಳುತ್ತಾನೆ.


ಹೌದು! ಕೆಲವು ಸಂಬಂಧಗಳು ಹೆಚ್ಚು ವ್ಯಥೆಯಿಲ್ಲದೆ ತನ್ನ ಜನ್ಮಾಂತರದಿಂದ ಬಳುವಳಿಯಾಗಿ ಬರುತ್ತವೆ. ಅವುಗಳು ತಾನು ಜನ್ಮ ತಾಳಿ ಭೂಮಿಯ ಮೇಲೆ ಪಾದಾರ್ಪಣೆ ಮಾಡುವ ಮೊದಲೇ ತನ್ನ ಮಾತಾ-ಪಿತೃಗಳ ಕಡೆಯಿಂದ ಹರಿದು ಬಂದು ಬಿಟ್ಟಿರುತ್ತವೆ.
ಮತ್ತೇ ಕೆಲವು ತಾನೇ ಸ್ವತಃ ತನ್ನ ಕೌಶಲತೆಯಿಂದ ಹೊಸದಾಗಿ ತಾನು ಕಂಡುಕೊಳ್ಳುತ್ತಾನೆ.


ಸಂಬಂಧಗಳಲ್ಲಿ ಕೆಲವನ್ನು ವಿವಿಧ ರೀತಿಯಲ್ಲಿ ತನ್ನ ಭಾವಕ್ಕೆ ಮತ್ತು ಅನುಕೂಲಕ್ಕೆ ತಕ್ಕ ಹಾಗೆಯೇ ವಿಂಗಡಿಸಿಕೊಂಡು ಅದರಲ್ಲಿ ವಿವಿಧ ವರ್ಗಗಳನ್ನಾಗಿ ಮಾಡಿಕೊಂಡು ಕಡೆಯವರೆಗೂ ಅವರೊಂದಿಗೆ ಜೀವಿಸುತ್ತಾನೆ.


ಈ ಸಂಬಂಧಗಳು ಹೇಗೆ ಅಭಿವೃದ್ಧಿಯಾಗುತ್ತ ಜೀವಂತವಾಗಿರುತ್ತವೆ ಎಂದು ನೀವು ಕೇಳಬಹುದು. ಕೆಲವು ನಿಸ್ವಾರ್ಥ! ಕೆಲವು ಅನುಕೂಲ ಸಿಂಧುವಾಗಿ ಆ, ಆ ಸಮಯಕ್ಕೆ ತಾನು ಉಪಯೋಗ ಮಾಡಿಕೊಳ್ಳುವನು.


ನಮ್ಮವರನ್ನು/ಹತ್ತಿರದವರನ್ನು ಕಂಡಾಗ ನಮ್ಮ ಮನಸ್ಸು ಅರಳುವ ಗಳಿಗೆಯನ್ನು ನೋಡಬೇಕು. ಮಾನವ ಸಂಕುಲವಲ್ಲದೇ ಎಲ್ಲಾ ಜೀವ ಸಂಕುಲದಲ್ಲೂ ಈ ರೀತಿಯ ಭಿನ್ನ ಮನೋಸಂಚಲನದ ಸಂವೇದನೆಯ ಮೂಲ ಪ್ರಭೆ ಯಾವುದು?
ಈ ಸಂಬಂಧಗಳು ವ್ಯಕ್ತಿಯ ಹತ್ತಿರದವರಿಂದ ಪ್ರಾರಂಭವಾಗಿ.. ಗಡಿ - ದೇಶಗಳನ್ನು ಮೀರಿ ನಮ್ಮವರಿಗಾಗಿ ತುಡಿಯುವಂತೆ ಮಾಡುತ್ತವೆ.


ಬಾಷೆ, ಜಾತಿ, ಲಿಂಗ ಬೇದವನ್ನು ಮೀರಿ ಬೆಳೆಯುತ್ತವ ಶ್ರೇಷ್ಠ ಸಂಬಂಧವೆಂದರೇ "ಸ್ನೇಹ". ಹೌದು! ಇದರ ವಿಸ್ತಾರದ ಹರವು ವಿಪರೀತ.


ಬೇರೆ ರಾಜ್ಯಕ್ಕೆ ಹೋದಾಗ - ನಮ್ಮ ರಾಜ್ಯದ ಯಾರೇ ಆದರೂ ನಮ್ಮವರಾಗುತ್ತಾರೆ. ಬೇರೆ ದೇಶಕ್ಕೆ ಹೋದಾಗ ನಮ್ಮ ದೇಶದ ಯಾವ ರಾಜ್ಯ, ಬಾಷೆಯವರಾದರೂ ನಮ್ಮ ಹತ್ತಿರದವರಾಗುತ್ತಾರೆ...


ಆ ಸಮಯದಲ್ಲಿ ನಮ್ಮವರನ್ನು ಕಂಡಾಗ ಉಂಟಾಗುವ ಸಂತೋಷ - ತತ್ ಕ್ಷಣದ ಪ್ರತಿಕ್ರಿಯೆ ವರ್ಣನೆಗೆ ನಿಲುಕಲಾರದ್ದು.


ಹಾಗೆಯೇ ನಮ್ಮ ಇಂದಿನ ಸಮಯದಲ್ಲಿ ಇಂಟರ್ ನೇಟ್ ಕ್ರಾಂತಿಯಿಂದ ನಮ್ಮ ಹಳೆಯ ಸವಕಲಾದ ಎಷ್ಟೋ ಸಂಬಂಧ - ಸ್ನೇಹದ ಬೇರುಗಳು "ಸೋಸಿಯಲ್ ನೇಟ್ ವರ್ಕ್" ಗಳಾದ ಆರ್ಕುಟ್, ಫೇಸ್ ಬುಕ್ ಮೂಲಕ ನಮ್ಮ ನಮ್ಮ ಬಾಲ್ಯದ ಗೆಳೆಯರನ್ನು, ದೂರದ ಸಂಬಂಧಿಗರ ಬೇಟಿಯನ್ನು ಸುಲಭವಾಗಿ ಏರ್ಪಡಿಸಿಕೊಂಡು ಅದರ ಬೆಳವಣಿಗೆಗೆ ಸಹಾಯ ಮಾಡಿಕೊಳ್ಳುವಲ್ಲಿ ತಂತ್ರಙ್ಞಾನದ ಪಾಲು ಶ್ಲಾಘನೀಯ.


ಯಾವುದೇ ಸಂಬಂಧಗಳು ಬಾಷೆಯ ಭಾವನೆಗಳ ಮೂಲಕ ಹೆಚ್ಚು ಹೆಚ್ಚು ಬೆಳೆಯುತ್ತವೆ. "ಕಣ್ಣು ಅರಿಯದಿದ್ದರೂ ಕರಳು ಅರಿಯುವ" ರೀತಿ ಕೆಲವು ನಿರಂತರ ಚಲನೆಯಲ್ಲಿ ಮಾನವನ ಲವಲವಿಕೆಗೆ, ಅವನ ಮನಸಂತೋಷಕ್ಕೆ ಕಾರಣವಾಗಿದೆ.


ವ್ಯಕ್ತಿಯ ಸುಂದರ ಮನೋ ಬೆಳವಣಿಗೆಗೆ ಸುತ್ತಲಿನ ಸಜ್ಜನರ ಅವಶ್ಯಕತೆ ಸಾಕಷ್ಟಿದೆ. ಇಂದಿನ ಈ ಯಾಂತ್ರಿಕ ಯುಗದಲ್ಲಿ ಒಂಟಿ ಮನದ ಸಮಸ್ಯೆ ಸಾಕಷ್ಟು. ಅದರಿಂದ ಏನನ್ನು ನಿರೀಕ್ಷಿಸಲಾಗದು. ಎಲ್ಲೆಲ್ಲೂ ತಮ್ಮದೇ ನಿಲುವುಗಳು. ವಿವಿಧ ಕಮ್ಯುನಿಕೇಶನ್ ಗಳ ಉಗಮದಿಂದ ವಿವಿಧ ರೀತಿಯಲ್ಲಿ ಸಾಮಾಜಿಕ ಜೀವನ ಮತ್ತೊಮ್ಮೆ ಕೂಡಿ ಬಾಳುವಿಕೆಯ ಹಾದಿಯನ್ನು ಹಿಡಿಯುತ್ತಿದೆ.

ಎಷ್ಟೇ ಇದ್ದರೂ ಅದನ್ನು ಹಂಚಿಕೊಂಡು ಸಂತೋಷಪಡಲು ನಮ್ಮವರು ಇರಬೇಕಲ್ಲವಾ? ಪ್ರೀತಿ ಪಾತ್ರರೂ.. ಹುಡುಕುತ್ತಿರೋಣ ಮತ್ತು ನಮ್ಮವರನ್ನಾಗಿಸಿಕೊಳ್ಳೋಣ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ