ಶುಕ್ರವಾರ, ಫೆಬ್ರವರಿ 4, 2011

ಎಲ್ಲಿ ಜಾರಿತೋ ಆ ನಮ್ಮ ಬಾಲ್ಯ..



ಎಲ್ಲಿ ಜಾರಿತೋ ಆ ಬಾಲ್ಯದ ನಮ್ಮ ನಿಮ್ಮೆಲ್ಲಾರ ಕ್ರಿಯೇಟಿವಿಟಿ? ಕ್ಷಣ ಕ್ಷಣವೂ ಹೊಸ ಹೊಸ ಬದುಕಿಗೆ ಹಂಬಲಿಸುತ್ತಿದ್ದ ಮನಸ್ಸು ಮತ್ತು ದೇಹ. ದಿನ ದಿನವೂ ಚಡಪಡಿಸುತ್ತಿದ್ದ ಹೊಸ ಆವಿಷ್ಕಾರಕ್ಕೆ ಸಜ್ಜಾಗುತ್ತಿದ್ದ ಮನೋಲಹರಿ.


ದೇಹ ಬೆಳೆದಂತೆ ನಾವು ತಿಳಿದಂತೆ ನಮ್ಮ ಬುದ್ಧಿಯು ಬೆಳೆಯುತ್ತದೆ. ಇದು ವೈಙ್ಞಾನಿಕವಾಗಿಯೋ ಅನುಭವಜನ್ಯವಾಗಿಯೊ ಸತ್ಯವಾದದ್ದು.


ಹಾಗೆಯೇ ನಾವುಗಳು ನಮ್ಮ ಅರಿವಿನ ಹಿರಿಮೆಯನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ನಮ್ಮ ಅಗಾಧ ಮನೋಸಹಜ ಮುಗ್ಧತೆಯ ಕ್ರಿಯಶೀಲತೆಯನ್ನು ಅಮುಕಲಾರಂಭಿಸುತ್ತೇವೆ.


ಬಾಲ್ಯದ ಆ ಸ್ವಚ್ಛಂದ ಮನಸ್ಸು ಕಲಿಯುವ ಶಾಲಾರಂಭದಿಂದ ತನ್ನ ವಿದ್ಯಾಭ್ಯಾಸ ಮತ್ತು ತನ್ನ ಸುತ್ತಲಿನವರಿಂದ ಇದು ಹೀಗೆ, ನೀನು ಹೀಗೆ ಬೆಳೆಯಬೇಕು. ನೀನು ಹೀಗೆ ಕಲಿಯಬೇಕು. ಮಕ್ಕಳ ಬುದ್ಧಿ ಬಿಟ್ಟು ಬಿಡು. ನೀನು ಬೆಳೆಯುತ್ತಿದ್ದೀಯ, ವಯಸ್ಸು ಹೆಚ್ಚಾಗುತ್ತಿದೆ. ಎಂಬ (ಅ)ಸಾಮಾನ್ಯ ಮಾತುಗಳನ್ನು ತನ್ನ ಹೆತ್ತವರಿಂದ ಹಿಡಿದು ತಾನು ಹೊಂದಿರುವ ಎಲ್ಲಾ ರೀತಿಯ ಸಂಪರ್ಕದ ಜನರಿಂದ ದಿನಂಪ್ರತಿ ಕೇಳಿ ಕೇಳಿ ತಾನು ತನ್ನಂತಯೇ ಯೋಚಿಸುವುದನ್ನೇ ಬಿಟ್ಟು ಎಲ್ಲಾ ಸೀಲಬಸ್ ಪ್ರೇಮ್ ನಲ್ಲಿಯೇ ಬಾಳಲಾರಂಭಿಸುತ್ತೇವೆ.


ತನ್ನ ಒಂದು ವರ್ಷದಲ್ಲಿರುವಂತಹ ಡೇರ್, ಬ್ರೇವ್ ಛಲಗಳನ್ನೆಲ್ಲಾ ತಾನು ಯಾವುದೊ ಒಂದು ಬುದ್ಧಿವಂತ ಬದುಕನ್ನು ಕಲಿಯಲಾರಂಭಿಸಿರುವೆನು ಎಂಬ ಯೋಚನೆಯ ಹೋಮ್ ವರ್ಕನಲ್ಲಿ ಕಳೆದು ಕೊಳ್ಳಲಾರಂಭಿಸುತ್ತೇವೆ.


ಈ ಭೂಮಿಯ ಮೇಲೆ ಹುಟ್ಟಿದ ಯಾವುದೇ ಮಗು ತನ್ನದೇಯಾದ ರೀತಿಯಲ್ಲಿ ವಿಭಿನ್ನವಾಗಿ, ವೈವಿಧ್ಯಮಯವಾಗಿ ಗುಣ ವಿಶಿಷ್ಟಗಳನ್ನು ಕಳೆದುಕೊಳ್ಳುತ್ತದೆ. ತನ್ನ ಹತ್ತಿರದವರ ಸುತ್ತಲಿನವರ ಜೇರಾಕ್ಸ್ ಪ್ರಾಡಕ್ಟ್ ರೀತಿಯಲ್ಲಿ ಅನುಕರಣೆ ಎಂಬ ವ್ಯಾದಿಯಂತೆ ಕಾಯಾ ವಾಚಾ ಪಾಲಿಸಲಾರಂಭಿಸಿ ತಾನು ಏನು? ಎಂಬುದನ್ನು ತಿಳುವಳಿಕೆಯೆಂಬ ಯೋಜನೆಯಲ್ಲಿ ತಾನು ಕ್ರಮಿಸಿದ ಎಷ್ಟೋ ದೂರದ ಮೇಲೆ ಯೋಚಿಸಲಾರಂಭಿಸುತ್ತಾನೆ.


ಅನುಕರಣೆ ಮಾನವ ಸಹಜ ಬುದ್ಧಿವಂತಿಕೆಯ ಮಜಲು. ಒಪ್ಪೋಣ ಆದರೇ ಅದೇ ಅಂಧಾನುಕರಣೆಯಾಗಿ ಆ ನಮ್ಮ ಮಗು ಸಹಜ ಮನಸ್ಸಿನ ದಬ್ಬಾಳಿಕೆಯಾಗಬಾರದು.


ತಾನು ಚಿಂತಿಸುತ್ತಿದ್ದ ಹೊಸ ಹೊಸ ವಿಚಾರಗಳು ಅವುಗಳ ಹಿಡೇರಿಕೆಗಾಗಿ ಪ್ರಯತ್ನಿಸುತ್ತಿದ್ದ ಆ ನಿರ್ಭಯ ಪ್ರಯತ್ನ ಯಾಕೇ ನಾವು ದೊಡ್ಡವರಾದ ಮೇಲೆ ನಮ್ಮ ನಿಮ್ಮಲ್ಲಿ ಇಲ್ಲವಾಗುತ್ತವೆ.


ಯಾವುದೇ ಹೊಸ ವಿಚಾರವನ್ನು ಮಾಡಲು ಅನುವುಮಾಡುವ ಮನಸ್ಸು ನಮ್ಮಲ್ಲಿ ಮೂಡಿದರೂ ದುತ್ತನೆ ಇನ್ನೊಂದು ನಮ್ಮದೆಯಾದ ಮನಸ್ಸು ಬೇಡ ಎಂದು ಕಾಲು ಎಳೆಯುತ್ತದೆ?


ಆದ್ದರಿಂದ ಈಗಾಗಲೇ ನಾವುಗಳು ಗಮನಿಸಿರುವಂತೆ ನಮ್ಮ ಆಸೆ, ಹೊಸತನಗಳಿಗೆ ಕಾಲು ಎಳೆಯುವ ಆ ಮನಸ್ಸು "ತುಂಬಾ ಬುದ್ಧಿವಂತ ಮನಸ್ಸು" ನಿಜ ತಾನೇ?


ನಮ್ಮ ಶಿಕ್ಷಣ ವ್ಯವಸ್ಥೆಯ ಭರದಲ್ಲಿ ನಮ್ಮ ಎಲ್ಲಾ ಮಕ್ಕಳ ವೈಚಾರಿಕ ಮತ್ತು ವಿಭಿನ್ನ ರೀತಿಯ ಹೊಸ ಜೀವಂತಿಕೆಯನ್ನು ಪರೀಕ್ಷೆ - ಅಂಕಗಳು - ಪದವಿಗಳು ಎಂಬ ವಿವಿಧ ಸಮಾಜದ "ಬುದ್ಧಿವಂತಿಕೆಯ" ಪ್ರಯಾಣಗಳ ಮೂಲಕ ಮಗುವಿನಂತ ಮುಗ್ಧ ಆವಿಷ್ಕಾರದ ಸೆಲೆಯನ್ನು ಕಮರಿಸುತ್ತಿದ್ದೇವೆ ಎಂದು ನಿಮಗೆ ಅನಿಸುವುದಿಲ್ಲವೇ?


ಈ ರೀತಿಯ ವಿವಿಧ ರೀತಿಯಲ್ಲಿ ತನ್ನ ೮ ರಿಂದ ೨೫ ವರ್ಷದ ವಯೋಮಾನದಲ್ಲಿ ನಾವುಗಳು ಕೇವಲ ಈ ರೀತಿಯ ದಮನಕಾರಿ ಭಾವನೆಗಳಿಂದ ಮಗು ತಾನು ಏನು? ಎಂದು ಯೋಚಿಸಲೂ ಸಮಯ ನೀಡದೆ ನಮ್ಮದೇ ಆದ ಬುದ್ಧಿವಂತ ಅಚ್ಚುಗಳಲ್ಲಿ ಬೇಯಿಸಿ ನಿಜವಾದ ರೀಯಲ್ ಲೈಫ್ ಗೆ ದೂಡುತ್ತೇವೆ.


ಆಗ ಆ ವ್ಯಕ್ತಿ ತಾನು ಮುಂದೇನು ಮಾಡಬೇಕು ಎಂದು ಗಲಿಬಿಲಿಗೊಳ್ಳುವ ಭರದಲ್ಲಿ ಅದು ತಾನು ಬೆಂದ ಶಿಷ್ಟ ಶಿಕ್ಷಣದ ಥೇಯರಿಗಳನ್ನು ಙ್ಞಾಪಿಸಿಕೊಳ್ಳುತ್ತಾ ಹಳಬರು ಮಾಡುತ್ತಿದ್ದ ಕೆಲಸ, ಯೋಜನೆಗಳನ್ನೇ ಮುಂದುವರಿಕೆ ಮಾಡುವ ಯಂತ್ರಗಳಂತೆ ಆಗುತ್ತೇವೆ. ಯಾವುದೇ ತನ್ನ ಹೊಸ ಯೋಜನೆಗಳನ್ನು ಜಾರಿ ಮಾಡಲು ಕ್ಷಣಕಾಲ ಯೋಚಿಸಲಾರಂಭಿಸುತ್ತದೆ ಮತ್ತು ಆ ರೀತಿಯ ಕಿರಿಕ್ ಐಡಿಯಗಳನ್ನು ಬಿಟ್ಟು ಸೇಫ್ ಜೋನ್ ಕಡೆಗೆ ಮುಖ ಮಾಡುತ್ತದೆ.


ತನ್ನ ಬಾಲ್ಯದಲ್ಲಿ ತನಗೆ ತಿಳಿಯದಂತೆ ಇದ್ದ ಆ ಪ್ರಚಂಡ ಜೀವಂತಿಕೆ ಎಲ್ಲಿ ಹೋಯಿತು? ಎಂದು ತಿಳಿಯುವಷ್ಟರಲ್ಲಿ ಜೀವನದ ನಿಜವಾದ ಸವಾಲುಗಳು ಬಂದು ಎಕ್ಕಾ ಮಕ್ಕಾ ಅಪ್ಪಳಿಸುವಾಗ ತಾನು ತನ್ನ ಮುಂದಿನ ಮಕ್ಕಳಿಗೆ ಇದೇ ರೀತಿ ತಾನು ಅನುಭವಿಸಿದ ತನ್ನದೇಯಾದ ಥೇಯರಿ ಎಂಬ ಕುಲುಮೆಗಳನ್ನು ಆ ಮಕ್ಕಳಿಗೆ ಸಿದ್ಧ ಮಾಡುವಲ್ಲಿ ತನ್ನ ಅರ್ಧ ಜೀವನವನ್ನು ಅಣಿಮಾದಲು ಮುಂದಾಗುತ್ತನೆ.


ಆದರೇ, ಈ ರೀತಿಯ ಜೀವನದಲ್ಲಿ ಯಾವುದೇ ಆಡಚಣೆಗಳು, ಆಶಾಭಂಗಗಳಿದ್ದರೂ ಹಲವು ಮಹನೀಯರು ತಮ್ಮದೇಯಾದ ಹೊಸ ಹೊಸ ಮೌಲ್ಯಯುತವಾದ "ಕೊಡುಗೆ"ಗಳನ್ನು ಜಗತ್ತಿಗೆ ನೀಡಿದ್ದಾರೆ. ಅದೇಯಲ್ಲವೇ "ಜೀವನದ ಮರ್ಮ".

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ