ಮಂಗಳವಾರ, ನವೆಂಬರ್ 29, 2011

ಯು ಆರ್ ವೆರೀ ಮಚ್ ಪೂರ್ ಪೆಲೋ

ಹೊರಗಡೆ ತುಂತುರು ಮಳೆ, ಜೋರಾಗಿ ಬರುತ್ತಾನು ಇಲ್ಲ, ಪೂರ್ತಿ ನಿಲ್ಲುತ್ತಲೂ ಇಲ್ಲ. ಹೊರಗಡೆ ಹೆಜ್ಜೆ ಇಡಲು ಸಂಕೋಚ. ಏನೋ ಒಂದು ರೀತಿಯ ಬೇಜಾರು.

ಏನು ಮಾಡುವುದು? ಹಸಿ ಹಸಿ ಮಣ್ಣು ಕೊಂಚ ಕೊಂಚ ನೆನದ ನುಣ್ಣನೆಯ ಮಣ್ಣು ಚಪ್ಪಲಿಯ ಹಟ್ಟೆಗೆ ಪೂರ್ತಿ ಮೆತ್ತಿಕೊಂಡಿದೆ. ಇನ್ನೂ ಸುಮಾರು ದೂರ ನಡೆದರೆ ಮಾತ್ರ ಶೇರ್ಡ್ ಆಟೋ ಸಿಗುವುದು. ತಣ್ಣನೆಯ ಗಾಳಿ ಮೈಗೆ ಬೀಸುತ್ತಿದೆ. ಗಾಳಿಯಲ್ಲಿ ಚಿಕ್ಕ ಚಿಕ್ಕ ಹನಿಗಳನ್ನು ಸಾಗಿಸುತ್ತಿದೆ. ಮುಖಕ್ಕೆ ಚಿಕ್ಕ ಚಿಕ್ಕ ನುಣ್ಣನೆಯ ಹನಿಗಳ ಸ್ಪರ್ಶ. ದಾರಿಯನ್ನು ನೋಡುತ್ತಾ ನೋಡುತ್ತಾ ಯಾವುದಾದರೂ ಆಟೋ ಬರಬಹುದೇನೂ ಎಂಬ ಆಸೆಯ ಕಣ್ಣಿನ ನಿರೀಕ್ಷೆ.

ನಗರದ ಹೊರ ಭಾಗದಿಂದ ಸಿಟಿಯನ್ನು ತಲುಪಲು ಏನೂ ತೊಂದರೆಯಿಲ್ಲ. ಸುಂದರ ಸಂಜೆಯ ದಿನಗಳಲ್ಲಿ ಕಾಲಿಗೆ ಹಿತವಾದ ಒಂದು ನಡೆಯನ್ನು ಒದಗಿಸುತ್ತದೆ. ೪೫ ನಿಮಿಷಗಳ ನಡೆಯಲ್ಲಿ ಏಕಾಂತವಾಗಿ ದಾರಿಯನ್ನು ಸುತ್ತ ಮುತ್ತಾ ಗಮನಿಸುತ್ತಾ ಸುಲಭವಾಗಿ ನಗರವನ್ನು ಸೇರಿಬಿಡಬಹುದು. ಆದರೇ ಇಂದು ಯಾಕೋ ಮನಸ್ಸಿಗೆ ಮಂಕು ಕವಿದಂತೆ ಮಾಡಿದೆ ಈ ಮೋಡಕವಿದ ತುಂತುರು ಜಿಗುಟು ಮಳೆ.

ನಾ ಸೇರುವ ಮುಖ್ಯ ರಸ್ತೆಯವರೆಗೂ ಯಾವುದೇ ಒಂದು ಆಟೋ ಬರಲಿಲ್ಲ. ಸ್ವಲ್ಪ ಹೊತ್ತು ಅಲ್ಲಿಯೇ ಕಾದೇ. ಮಳೆಯಲ್ಲಿ ಸ್ವಲ್ಪ ಸ್ವಲ್ಪ ತಲೆ ನೆನೆಯುತ್ತಿತ್ತು. ಛತ್ರಿಯನ್ನು ಹಿಡಿದುಕೊಂಡು ಹೋಗಬೇಕು ಎನಿಸುವಂತಹ ಮಳೆಯಲ್ಲ ಇದು.

ಅಂತೋ ಗಾಂಧಿ ನಗರದಿಂದ ಒಂದು ಆಟೋ ನಗರದ ಕಡೆಗೆ ಸಾಗುತ್ತಾ ಬಂತು.




ನಾನು ಕೈ ಅಡ್ಡ ಹಿಡಿದ ತಕ್ಷಣ ನಿಂತಿತು. ಡ್ರೈವರ್ ಕೇಳಿದ "ಎಲ್ಲಿಗೆ ಹೋಗಬೇಕು ಸಾರ್?" ನಾನು "ಸರ್ಕಲ್ ಗೆ ಹೋಗಬೇಕು ಹೋಗುತ್ತಿರಾ?" ಅಂದೆ. "ಹೋ ನಾವು ಅಲ್ಲಿಯವರೆಗೂ ಹೋಗುವುದಿಲ್ಲಾ, ಅಸ್ಪತ್ರೆಯವರೆಗೂ ಹೋಗುತ್ತಿವಿ" ಅಂದಾ. "ಅಲ್ಲಿಂದ ಮುಂದಕ್ಕೆ ಹೋಗಿ" ಅಂದೆ. "ಇಲ್ಲ ಇದು ಶೇರ್ಡ ಅಲ್ಲಾ. ಆಸ್ಪತ್ರೆಯ ಹತ್ತಿರ ಬೇರೆಕಡೆ ಹೋಗುತ್ತೆ" ಅಂದಾ. "ಸರಿ!" ಅಂದೆ. "ಅಲ್ಲಿಯವರೆಗೂ ಬನ್ನಿ" ಅಂದಾ. ನನಗೋ ಆಗಲೆ ಐದು ನಿಮಿಷಗಳಿಂದ ಕಾದು ಕಾದು ಈ ಮಳೆಯ ಹನಿಗಳ ಕವನವನ್ನು ನೋಡಿದ್ದು ಸಾಕು ಅನಿಸಿರಬೇಕು. ಮತ್ತೇ ಕಾದರೆ ಯಾವ ಹೊಸ ಆಟೋಗಳು ಬರುವ ಸೂಚನೆಗಳೆ ಕಾಣದಂತಾಗಿತ್ತು. ಆದ್ದರಿಂದ ಆಟೋವನ್ನು ಹತ್ತಲು ಶುರುಮಾಡಿ ಹಿಂದೆ ಹೋಗಿ ಕುರಲು ತಯಾರಿ ನಡೆಸಿದೆ. ಹಿಂದೆ ಹೀಗಾಗಲೆ ಕುಳಿತವರು ಜಾಗವನ್ನು ಕೂಡಲು ಕೂಂಚ ಬಲಕ್ಕೆ ಸರಿದು ಕುಳಿತರು. "ಬೇಡ, ಇಲ್ಲೇ ಮುಂದೆ ನನ್ನ ಪಕ್ಕ ಕುಳಿತುಕೊಳ್ಳಿ ಸಾರ್" ಅಂದಾ. ನಾನು ಅವನ ಜೋತೆ ಕುಳಿತೆ.

ಆಟೋ ಸಾಗಿತು. ನಾನು ಯೋಚಿಸಲು ಪ್ರಾರಂಭಿಸಿದೆ. ಆಸ್ಪತ್ರೆಯವರೆಗೆ ಸಾಗಬೇಕು ಅಲ್ಲಿಂದ ಮತ್ತೇ ಇನ್ನೊಂದು ಆಟೋ ಹಿಡಿಯಬೇಕು. ನೋಡು ಏನು ಬುದ್ಧಿವಂತಿಕೆ ಬಾಡಿಗೆ ದುಡ್ಡು ಮತ್ತೇ ನನ್ನ ಬಳಿಯಿಂದ ಎಕ್ಸ್ ಟ್ರಾ ದುಡ್ಡು ಬೇರೆ. ಸ್ವಲ್ಪ ಹೆಚ್ಚಿಗೆ ಸಂಪಾದಿಸಿಕೊಳ್ಳಬಹುದು ಅಂತಾ ನನ್ನ ಹತ್ತಿಸಿಕೊಂಡಿದ್ದಾನೆ. ಹೊಟ್ಟೆ ಪಾಡು!

ಮತ್ತೇ ನನ್ನ ಯೋಚನೆಯ ದಿಕ್ಕು....ಈಗ ಇವನಿಗೆ ಎಷ್ಟು ದುಡ್ಡು ಕೊಡಬೇಕು. ನೇರವಾದ ಆಟೋ ಆಗಿದ್ದರೆ, ಐದು ರೂಪಯಿಗಳಿಗೆ ಸರ್ಕಲ್ ವರೆಗೆ ಕರೆದುಕೊಂಡು ಹೋಗುತ್ತಿದ್ದಾ. ಈಗ ಇವನು ಆಸ್ಪತ್ರೆಯವರೆಗೆ ಕರೆದುಕೊಂಡು ಹೋಗುತ್ತಿದ್ದಾನೆ. ಅರ್ದ ಚಾರ್ಜು ಕೊಟ್ಟರೆ ನನ್ನ ಮುಖ ನೋಡಬಹುದು. ಏನ್ ಕಂಜ್ಯೂಸ್ ಜನ ಎನ್ನಬಹುದು. ಇಲ್ಲಾ ಪೂರ್ತಿ ಹತ್ತು ರೂಪಾಯಿಗಳನ್ನೇ ಕೊಡೊಣಾ. ಅವನೇ ಎಷ್ಟು ಜಾರ್ಜು ಮುರಿದುಕೊಂಡು ಹಿಂತಿರುಗಿಸುತ್ತಾನೋ ತಿರುಗಿಸಲಿ ಎಂದು ಮನದಲ್ಲೇ ನಿರ್ಧರಿಸಿದೆ. ತಣ್ಣನೆಯ ಗಾಳಿ ಮುಖಕ್ಕೆ ಬೀಸುತ್ತಿತ್ತು. ಒಂದು ಎರಡು ಹನಿಗಳು ಮುಖಕ್ಕೆ ಬೀಳುತ್ತಿದ್ದವು. ಆಟೋ ಪುಲ್ ನಿಶಬ್ಧ ಕೇವಲ ಆಟೋ ಇಂಜೀನ್ ಶಬ್ಧ ಮಾತ್ರ ಕೇಳಿಸುತ್ತಿತ್ತು.

ಆಸ್ಪತ್ರೆ ಹತ್ತಿರ ಬಂದಂತಾಯಿತು. ನಾನು "ನೀವು ಎಡಗಡೆ ಆಸ್ಪತ್ರೆ ಮುಂದೆ ಹೋಗುತ್ತಿರಾ?" ಎಂದೆ. "ಹೌದು!" ಎಂದಾ. "ಇಲ್ಲಿಯೇ ನಿಲ್ಲಿಸಿ" ಅಂದೆ.

ಆಟೋ ನಿಂತಿತು. ನಾನು ಆಟೋ ಇಳಿಯುವ ಸಮಯದಲ್ಲಿಯೇ ಜೇಬಿಗೆ ಕೈ ಹಾಕಿ ಹತ್ತು ರೂಪಾಯಿಯನ್ನು ತೆಗೆಯುತ್ತಾ ಇಳಿದೆ. ಹತ್ತು ರೂಪಾಯಿ ನೋಟ್ ನ್ನು ತೆಗೆದು, "ತಗೋಳ್ಳಿ" ಅಂದೆ. ಆದರೇ ಆಟೋ ಡ್ರೈವರ್ ನಗುತ್ತಾ "ಪರವಾಗಿಲ್ಲಾ ಬೇಡ" ಅನ್ನುತ್ತಾ ಆಟೋದ ಎಕ್ಸ್ ಲೇಟರ್ ನ ಕಿವಿ ಹಿಂಡುತ್ತಾ ಮುಂದೆ ಸಾಗಿಬಿಟ್ಟ.

ನನಗೆ ಶಾಕ್! ಏನೂ ಇವನು ನನ್ನ ಮನದ ಮಣ್ಣಿಗೆಯನ್ನು ಕಂಡುಬಿಟ್ಟನೇ? ಮತ್ತು ಇರಲಿಕ್ಕಿಲ್ಲಾ. ಏನೋ ಒಂದು ಸಹಾಯವನ್ನು ಮಾಡಿರಬೇಕು. ಮಳೆಯಲ್ಲಿ ನೆನೆಯುತ್ತಾ ನಿಲ್ಲುವಬದಲು ಮುಖ್ಯ ರಸ್ತೆಗೆ ಇವರುಗಳನ್ನು ಬಿಟ್ಟರೆ ಬೇರೊಂದು ವಾಹನದಲ್ಲಿ ಇವರುಗಳು ಸೇರುವ ಜಾಗ ಸೇರಬಹುದು ಎಂಬ ಉಯೆಯಿಂದ? ಗೊತ್ತಿಲ್ಲಾ.

ನಾನು ಅಯ್ಯೋ ಒಂದು ಥ್ಯಾಂಕ್ಸ್ ಆದರೂ ಹೇಳಬಹುದಾಗಿತ್ತು. ಅವನು ಅದು ಯಾವುದಕ್ಕೂ ಅಸ್ಪದ ಕೊಡದೆ ನನ್ನ ಎಲ್ಲಾ ಲೆಕ್ಕಚಾರವನ್ನೆ ಒಂದೇ ಕ್ಷಣದಲ್ಲಿ ಉಲ್ಟಾ ಮಾಡಿಬಿಟ್ಟು ದೊಡ್ಡ ವ್ಯಕ್ತಿ ಅನಿಸಿಕೊಂಡುಬಿಟ್ಟನಲ್ಲಾ ಅನಿಸಿತು.

ನನಗೆ ನಾನೇ ನಗುತ್ತಾ ಅಲ್ಲಿಂದ ಇಲ್ಲಿಯವರೆಗೂ ಎಷ್ಟೊಂದು ಲೆಕ್ಕಚಾರ ಹಾಕಿಕೊಂಡು ಬಂದೆನಲ್ಲಾ. "ಯು ಆರ್ ವೆರೀ ಮಚ್ ಪೂರ್ ಪೆಲೋ" ಅಂದುಕೊಂಡೆ.

ಇದೆ ಅಲ್ಲವಾ ವಿಪರ್ಯಾಸ ಅನ್ನುವುದು. ಏನೂ ಏನೋ ಮನದಲ್ಲಿ ಮಣ್ಣಿಗೆಯನ್ನು ಬೇರೆಯವರ ಬಗ್ಗೆ ತಿನ್ನುತ್ತಿರುತ್ತೇವೆ. ಅದರೆ ಸಾಮಾನ್ಯ ಜನಗಳು ಅಸಾಮಾನ್ಯವಾಗಿ ವರ್ತಿಸುತ್ತಾರೆ. ಆಟೋದವರೂ ಅಂದರೇ ಸುಲಿಯುವವರು ಅಂಥಾ ನಾವುಗಳು ದೂರುತ್ತೇವೆ. ಎಲ್ಲಾ ರಂಗಗಳಲ್ಲೂ ಅಂಥವರು ಇರುತ್ತಾರೆ, ಇಂಥವರುಗಳು ಇರುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ