ಸೋಮವಾರ, ನವೆಂಬರ್ 21, 2011

ಬದಲಾವಣೆಗೆ ಮುಂದಾಗಬೇಕು!

ಜೀವನವೇ ಹೀಗೆ ಅನಿಸುತ್ತದೆ. ನಾವು ಕೆಲಸ ಮಾಡುವ ಜಾಗ, ನಾವು ಇರುವ ತಾಣಗಳು ಒಂದು ರೀತಿಯಲ್ಲಿ ನಮ್ಮಗಳ ಅಲ್ಲಿನ ಪರಿಸರಕ್ಕೆ ತಕ್ಕಂತೆ ನಮ್ಮ ಮೇಲೆ ಪರಿಣಾಮ ಬೀರುತ್ತವೆ.

ಆ ಜಾಗಗಳಲ್ಲಿ ಅವುಗಳಿಗೆ ಒಪ್ಪುವಂತೆ ನಾವುಗಳು ವರ್ತಿಸಬೇಕಾಗುತ್ತದೆ. ಮತ್ತು ಅದಕ್ಕಾಗಿಯೇ ನಮ್ಮ ನಡವಳಿಕೆಯ ಶೈಲಿಯೇ ಬದಲಾವಣೆಯಾಗುತ್ತದೆ. ಇದು ಜಾಗದ ಮಹಿಮೆಯಾ? ನಮ್ಮಗಳ ಆ ರೀತಿಯ ಭಾವನೆಯಾ? ಗೊತ್ತಿಲ್ಲ!

ಅದಕ್ಕೆ ಹೇಳುವುದು ಚಿಕ್ಕವರಾಗಿದ್ದಾಗ ಒಳ್ಳೆ ಪರಿಸರದಲ್ಲಿ ಮಕ್ಕಳನ್ನು ಬೆಳಸಬೇಕು. ಪರಿಸರದ ಕೂಸುಗಳೇ ನಾವುಗಳು ಅನಿಸುತ್ತದೆ?

ನಿಮಗೆ ಗೊತ್ತು. ಕಾಲೇಜು ರಂಗದಲ್ಲಿ ಓದುವಂತಹ ಹುಡುಗ ಹುಡುಗಿಯರ ಜೀವನ ಶೈಲಿ ಅವರುಗಳ ಮಾತು, ವರಸೆಯೇ ವಿಭಿನ್ನ.

ಅದು ಕಾಲೇಜು ಡೇಸ್ ಅನ್ನಬಹುದು. ಅವರುಗಳ ಮಾತಿನ ದಾಟಿಯೇ ಡಿಪರೇಂಟ್! ಆ ವಾತವರಣದಲ್ಲಿ ನಿತ್ಯ ಅವರುಗಳು ಮಾತನಾಡುವುದು ಅದೇ ಸಾಮಾನ್ಯವಾಗಿ ಪುನಃ ಪುನಃ ಪುನವರ್ತನೆಯಾಗುವ ಒಂದಷ್ಟು ಶಬ್ಧಾಭಂಡಾರವನ್ನೆ ಬಳಸುತ್ತಾರೆ.

ಅದೇ ಕಾಲೇಜು, ಕ್ಲಾಸ್, ಲೇಕ್ಚರ್, ಪ್ರೀನ್ಸಿಪಾಲ್, ಹುಡುಗಿಯರು, ಡ್ರೇಸ್, ಮೋವಿ, ಹಾಡು, ತಿಂಡಿ ಇತ್ಯಾದಿಗಳಿಗೆ ಸೀಮಿತವಾದ ಪದಗಳ ಬಳಕೆಯಿರುತ್ತದೆ.

ಅವುಗಳನ್ನು ನಾವುಗಳು ನಾವು ಸೇರಿ ಕೆಲಸ ಮಾಡುವ ಜಾಗದವರೆಗೂ ತಂದು, ಒಂದಷ್ಟು ವರ್ಷ ಬಳಸುತ್ತಲೇ ಇರುತ್ತೇವೆ. ಅದು ಸವಕಲಾಗುವುದು ಪುನಃ ಹೊಸ ಪರಿಸರದ ಪರಿಣಾಮದಿಂದ.

ಗಮನಿಸಿ ನಮ್ಮ ನಡಾವಳಿಯ ಮೇಲೆ ಪರಿಸರಕ್ಕಿಂತ ಅಲ್ಲಿ ನಮ್ಮಗಳಿಗೆ ಜೊತೆಯಾಗುವ ನಮ್ಮ ಆತ್ಮೀಯರ ನಡಾವಳಿಯೇ ನಮ್ಮ ಮೇಲೆ ಪರಿಣಾಮ ಬೀರಿರುತ್ತದೆ. ಅವರುಗಳು ಮಾತನಾಡುವ ಮಾತುಗಳು, ಧರಿಸುವ ಬಟ್ಟೆ, ಬರಿ, ತಿನ್ನುವ ತಿಂಡಿ, ತೀರ್ಥ ಮತ್ತು ಅವರುಗಳ ಯೋಚನಾ ಲಹರಿ ನಮ್ಮನ್ನು ಅದೇ ಚಾನಲ್ ನಲ್ಲಿ ಯೋಚಿಸುವಂತೆ ಮಾಡಿ ನಮ್ಮನ್ನು ಬದಲಾವಣೆಗೆ ಒಡ್ಡುತ್ತದೆ.

ಬದಲಾವಣೆಯೇ ಜೀವನ! ಎನ್ನುವಂತೆ ಮನುಷ್ಯ ತಾನು ಇರುವ ಜಾಗಗಳಲ್ಲಿ ಹೊಸ ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಸಾಗುತ್ತಾನೆ.

ನಮ್ಮ ಐ.ಟಿ-ಬಿ.ಟಿ ಮಂದಿಯನ್ನು ಕೇಳುವುದೇ ಬೇಡ. ಅದು ಅದರದೇಯಾದ ಒಂದು ಪ್ರಪಂಚ. ಅದನ್ನು ಬಿಟ್ಟು ಹೊರ ಜಗತ್ತಿನ ಪರಿವೇ ಇಲ್ಲದ ರೀತಿಯ ಧ್ಯಾನಸ್ಥ ಸಮಾಧಿ?

ಕೆಲವೊಂದು ಮಂದಿಯಿದ್ದಾರೆ ನಮ್ಮ ಸುತ್ತಲಿನ ಪರಿಸರದಲ್ಲಿ ಏನೂ ಏನಾಗುತ್ತಿದೆ ಎಂಬುದು ಸಹ ಗೊತ್ತಿಲ್ಲದ ಗಾವಿದರ ರೀತಿಯಲ್ಲಿ ತಮ್ಮ ಕೆಲಸದಲ್ಲಿ ಮುಳುಗಿ ಹೋಗಿಬಿಟ್ಟಿರುತ್ತಾರೆ. ಅದು ಕೆಲಸದ ಒತ್ತಡ ಎಂದು ನಾವುಗಳು ನೀವುಗಳು ಹೇಳಬಹುದು ಅದರೂ ಏನೇ ಕೆಲಸದ ಒತ್ತಡವಿದ್ದರೂ ಇಂಟರಸ್ಟ್ ಎಂಬುದು ಇಲ್ಲದಿದ್ದರೇ ಏನು ಮಾಡಲಾಗುವುದಿಲ್ಲ.

ಕೆಲವೊಂದು ಮಂದಿ ಚಿಕ್ಕ ನ್ಯೂಸ್ ಪೇಪರ್ ಓದಲಾರದಷ್ಟು ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದರೆ ಅದೇ ಅವರ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಅವರಲ್ಲಿ ಇರುತ್ತದೆ. ಮತ್ತೇ ಅದೇ ಟೆಕ್ನಾಲಜಿ, ಕಾಲು, ಮೀಟಿಂಗು, ಹೈಕು, ಮಾರ್ಕೆಟ್ ಅಪಡೇಟ್ಸ್ ಇತ್ಯಾದಿಯಲ್ಲಿಯೇ ಮುಳುಗಿ ಹೋಗಿರುತ್ತಾರೆ.





ನಾವು ಕೆಲಸ ಮಾಡುವ ಜಾಗಗಳು ಹಾಗೆಯೇ ಫುಲ್ ಪ್ಯಾಕ್. ಒಳಗಡೆ ಬಂದು ಕಂಪ್ಯೂಟರ್ ಮುಂದೆ ನಾವುಗಳು ಸ್ಥಾಪಿತವಾದರೇ ಮುಗಿಯಿತು ಹೊರಗಡೆ ದೋ......! ಎಂದು ಮಳೆ ಬಂದರೂ ಒಳಗಡೆ ಫುಲ್ ಎ.ಸಿ ಪ್ಲೋರ್ ಆಗಿರುವುದರಿಂದ ಯಾವೊಂದು ಪರಿವೆಯೇ ಇರುವುದಿಲ್ಲ. ಆ ರೀತಿಯ ವಾತವರಣದ ಕೊಡಗೆ ಐ.ಟಿ ಕಡೆಯಿಂದ. ಒಂದು ವಾರದ ಐದು ದಿನಗಳಲ್ಲಿ ಏನೊಂದನ್ನು ಚಿಂತಿಸುವುದಕ್ಕೆ ಬಿಡುವುದಿಲ್ಲ.

ಮನೆಗೆ ಹೊತ್ತಲ್ಲಾ ಹೊತ್ತಿನಲ್ಲಿ ಬಂದು.. ಯಾವುದೋ ಸಮಯದಲ್ಲಿ ಮಲಗಿ ಪುನಃ ಆಫೀಸ್ ಕಡೆ ಮುಖ ಮಾಡುವುದು.. ಮನೆಯಲ್ಲಿ ಯಾರೊಂದಿಗೂ ಒಂದು ಕ್ಷಣ ಸಮಧಾನದ ಮಾತುಗಳನ್ನು ಮಾತನಾಡಲು ಆಗುವುದಿಲ್ಲ. ಅದೇ ಮನದ ತುಂಬ ಆ ಲಾಜಿಕ್, ಆ ಕಾಲು, ಆ ಕ್ಲೈಂಟ್ ಯಸ್ಕಾಲೇಶನ್, ಆ ಕೋಡಿಂಗ್, ಆ ಮ್ಯಾನೇಜರ್ ಕಿರಿಕ್.. ಇತ್ಯಾದಿ ಇತ್ಯಾದಿಗಳ ಚಿತ್ತಾರವೇ ತುಂಬಿರುತ್ತದೆ. ಅದನ್ನು ಬಿಟ್ಟು ಬೇರೆಯದನ್ನು ಚಿಂತಿಸಿದರೇ ಕೇಳಿ!

ಪಾಪ ಅನಿಸುತ್ತಿದಿಯೇ?

ಹೌದು! ಇದೇ ನಮ್ಮಗಳ ಕೆಲಸ. ಇಲ್ಲವೆಂದರೇ ನಮ್ಮಗಳ ಬದುಕು ಸಾಗುವುದು ದುರ್ಲಬ ಸ್ವಾಮಿ!

ಯಾಕೆಂದರೇ ಅಷ್ಟೊಂದು ಸಂಬಳ ಕೊಟ್ಟು ಸುಮ್ಮನೇ ಕೂರಿಸುವುದಕ್ಕೆ ಅವರೇನೂ ನಮ್ಮ ಮಾವಂದಿರೇ? ಅದು ವ್ಯಾಪಾರದ ಜೀವನ. ಹಣಕ್ಕೆ ತಕ್ಕ ಹಾಗೆ ಸೇವೆ ನೀಡಬೇಕು. ಅದಕ್ಕೆ ತಕ್ಕಂತೇ ನೀವು ವೇಗವಾಗಿ ಓಡಬೇಕು..ಅದು ಸಮಯ ಗೀಮಯದ ಎಲ್ಲೆ ಮೀರಿ.

ಇಂಥ ಪರಿಸರದಲ್ಲಿ ದಿನದ ಹೆಚ್ಚು ಸಮಯ ಜೀವಿಸುವ ಮಂದಿಯ ನಡಾವಳಿಯನ್ನು ಯಾವ ರೀತಿಯಲ್ಲಿ ಕಾಣಬೇಕೋ... ಅದು ತುಂಬ ಕ್ಲೀಷ್ಟಕರವಾದ ಸಂಗತಿ.

ನೋಡುವುದಕ್ಕೆ ಪಳ ಪಳ ಬಟ್ಟೆಗಳನ್ನು ಹಾಕಿಕೊಂಡಿರುತ್ತಾರೆ ಅಷ್ಟೇ. ಮನದ ತುಂಬ ಅತಿಯಾದ ಧಾವಂತ.. ಕೆಲಸದ ಬಗ್ಗೆ ಮಾತ್ರ ಯೋಚನೆ.. ತೃಪ್ತಿ ಅನ್ನುವುದು ಪದ ಮಾತ್ರವೇ ಸರಿ.

ಅಷ್ಟೊಂದೂ ಸಂಬಳ ಪಡೆದಿರುತ್ತಾರೆ. ಮಜಾ ಮಾಡಲು ಜಗತ್ತೇ ಕಾದಿರುತ್ತದೆ. ಆದರೇ ಎಲ್ಲಿ ಮಜಾ ಮಾಡಲಾಗುತ್ತದೆ? ಸಾಧ್ಯವಿಲ್ಲದ ಮಾತು ಅನಿಸುತ್ತದೆ. ಯಾಕೆಂದರೇ ಯಾವಗಲೂ ಧಾವಂತದ ಬದುಕು ಮಾತ್ರ. ಬರೀ ರನ್ನಿಂಗ ರೇಸ್ ಅಷ್ಟೇ...........?

ಬಾಯಿಬಿಡುವುದು ಸಹ ಕಷ್ಟಕರವಾದ ಸಂಗತಿ. ಯಾವಾಗಲೂ ಏನೋ ಗಾಡವಾದ ಯೋಚನೆಯಲ್ಲಿ ಮಗ್ನ. ತಿನ್ನುವಾಗಲೂ ಅದು ಹೀಗೆ, ನಮ್ಮ ಟೀಂ ಸರಿಯಿಲ್ಲ ಗುರು.. ಎಲ್ಲಿಂದ ಬಂದಿದಾರೋ......? ಡೇಡ್ ಲೈನ್ ಬೇರೆ ಬರುತ್ತಿದೆ.. ವಿಕೇಂಡ್ ವರ್ಕ ಮಾಡಬೇಕು.. ಉಫ್!

ಎದುರಿಗೆ ಬಂದವರಿಗೆ ಹಾಯ್! ಎನ್ನಲಾರದಷ್ಟು ಸಂಕೋಚ. ಹಾಯ್ ಎಂದರೂ ಅದೇ ಕೇವಲ ಎರಡೇ ಎರಡು ಸವಕಲಾದ ಮಾತುಗಳು.

ಹೌ ಆರ್ ಯು?

ಹೌ ಇಸ್ ಯುವರ್ ವರ್ಕ್?

ವಿಚ್ ಟೆಕ್ನಾಲಜಿ ಯು ಆರ್ ವರ್ಕಿಂಗ್?

ಕೆಲಸ ಚೇಂಜ್ ಮಾಡ್ತಾ ಇದ್ದೀಯ?

ಪೇಪರ್ ಹಾಕಿದ್ಯಾ? ಇತ್ಯಾದಿ..

ಬೇರೆ ವಿಷಯಗಳೇ ಬಾಯಿಗೆ ಬರುವುದಿಲ್ಲ. ನನಗೆ ಅನಿಸುತ್ತದೆ ಸ್ವಲ್ಪ ದಿನಗಳಲ್ಲಿ ಈ ಮಂದಿ ಒಂದಷ್ಟು ಪದಗಳನ್ನು ಇತಿಹಾಸ ಸೇರಿಸಿಬಿಡುತ್ತಾರೆ.

ಇದು ನಮ್ಮ ಕೇವಲ ಐ.ಟಿ ರಂಗದಲ್ಲಿ ಮಾತ್ರವಲ್ಲಾ ಮಾರಾಯ್ರೆ ಪ್ರತಿಯೊಂದು ರಂಗದಲ್ಲೂ ಅದರದೇಯಾದ ಒಂದು ಪರಿಸರ ಪರಿಣಾಮವನ್ನು ಗೊತ್ತಿಲ್ಲದ ರೀತಿಯಲ್ಲಿ ಬಿತ್ತಿರುತ್ತದೆ. ಬಿತ್ತುವವರು ಮತ್ಯಾರೂ ಅಲ್ಲ. ನಾವುಗಳು ನೀವುಗಳು!

ಇದು ಯಾಕೇ?

ಇದನ್ನು ಸ್ವಲ್ಪ ಬದಲಾಯಿಸಿಕೊಂಡು, ಇಂಥ ಬಿಗಿಯಾದ ವಾತಾವರಣವನ್ನು ಸುಲಲಿತವಾದ ಸಂತಸ ನೀಡುವಂತಹ ಜಾಗಗಳನ್ನಾಗಿ ಮಾಡಿಕೊಂಡು ಬದುಕಲು ಸಾಧ್ಯವಿಲ್ಲವೇ?

ಕೆಲಸ ಎಂಬುದು ಜೀವನದ ಒಂದು ಭಾಗ ಮಾತ್ರ. ಅದೇ ಪೂರ್ತಿ ಜೀವನವಲ್ಲ ಅಲ್ಲವೇ? ಅದನ್ನು ಬಿಟ್ಟು ಸಾವಿರ ಸಾವಿರ ವಿಷಯ ವಿಶೇಷಗಳು ನಮ್ಮ ನಿಮ್ಮಗಳ ಮಧ್ಯ ಇವೆ.

ಇಂದಿನ ಈ ದಿನಗಳಲ್ಲಿ ನಾವುಗಳು ತುಂಬ ಯಾಂತ್ರಿಕವಾಗಿ ಬದುಕುವುದು ಬೇಡ ಅನ್ನಿಸುತ್ತದೆ.

ಎಲ್ಲಾ ನಮ್ಮಗಳ ಕೈಯಲ್ಲಿ ಇರುವಾಗ ನಾವುಗಳು ಸ್ವಲ್ಪ ಬದಲಾವಣೆಗೆ ಮುಂದಾಗಬೇಕು. ಯಾಕೆಂದರೇ ಯಾವುದನ್ನು ನಾವುಗಳು ಸೃಷ್ಟಿಸಿರುವೆವೋ ಅದಕ್ಕೆ ಇತಿ ಮೀತಿಗಳನ್ನು ನಾವುಗಳೇ ಹಾಕಿಕೊಳ್ಳಬೇಕು.. ಆಗ ಮಾತ್ರ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಸಮರಸದಿಂದ ಜೀವಿಸಲು ಸಾಧ್ಯ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ