ಗುರುವಾರ, ಡಿಸೆಂಬರ್ 8, 2011

ಕೇಳುವವರು ಯಾರೂ..

ಮಾಗಿಯ ಕಾಲ ಅಂದರೇ ಇದೇ ಅನ್ನುವ ರೀತಿಯಲ್ಲಿ ಬೆಂಗಳೂರಿನ ಕೊರೆಯುವ ಚಳಿ ಮೈ ಮನಸ್ಸನ್ನೇಲ್ಲಾ ಬೆಚ್ಚಗೆ ಇಟ್ಟುಕೊಳ್ಳುವಂತೆ ಪ್ರೇರಪಿಸುತ್ತಿದೆ.

ಮುಂಜಾನೆ ಎದ್ದೇಳುವ ಸಮಯವನ್ನು ಏರುಪೇರು ಮಾಡುತ್ತಿದೆ. ಎದ್ದೇಳಲು ಮನಸ್ಸೇ ಬರುವುದಿಲ್ಲ. ಬೆಚ್ಚಗೆ ಮುಖ ತುಂಬ ಹೊದ್ದುಕೊಂಡು ಮಲಗೋಣ ಅನಿಸುತ್ತದೆ.

ಆದರೂ ಕೆಲಸ ಕಾರ್ಯ ಅಂತ ಎದ್ದೇಳಲೇ ಬೇಕು ನಮ್ಮ ಬದುಕು ಜಟಕಾ ಬಂಡಿಯನ್ನು ನೆಡಸಲೇ ಬೇಕು. ಇದು ಹೊಟ್ಟೆಪಾಡು ಏನು ಮಾಡಬೇಕು ಅಲ್ಲವಾ?

ವರ್ಷವೀಡಿ ಕರ್ನಾಟಕದಲ್ಲಿ ಎಲ್ಲೂ ಮಳೆಯಾಗದಿದ್ದರೂ ನಮ್ಮ ಬೆಂಗಳೂರಿನಲ್ಲಿ ಮಾತ್ರ ನಿತ್ಯ ಮಳೆಯಾಗಿ ಜನರ ಮನ ಮತ್ತು ಭೂಮಿಯನ್ನು ತಂಪು ಮಾಡಿರುತ್ತದೆ.. ಅದರ ಮುಂದುವರಿಕೆಯೇನೋ ಎಂಬ ರೀತಿಯಲ್ಲಿ ಡಿಸೆಂಬರ್ ಚಳಿಯು ಜನರನ್ನು ಎಚ್ಚರಿಸುತ್ತದೆ.

ಈ ಬದಲಾದ ಏರುಪೇರಾದ ಹವಮಾನದಿಂದ ನೆಗಡಿ, ತಲೆನೋವು, ಶೀತ ಮುಂತಾದ ಚಿಕ್ಕ ಪುಟ್ಟ ಕಾಯಿಲೆಗಳನ್ನು ಸಾಮಾನ್ಯವಾಗಿ ಎರಡು ದಿನಗಳಾದರೂ ಅನುಭವಿಸಬೇಕಾಗುತ್ತದೆ ನಗರದ ಮಂದಿ.

ಇಂಥ ಚಿಕ್ಕ ಕಾಯಿಲೆಗಳು ನಮ್ಮ ದೇಹದ ಪುನರ್ ನವೀಕರಣಕ್ಕೆ ಬೇಕೇನೋ.. ಯಾಕೆಂದರೇ ವರ್ಷವೀಡಿ ದುಡಿ ದುಡಿ ಎಂಬ ನಿತ್ಯ ಕಾಯಕದಲ್ಲಿ ನಿರತನಾದ ಮನುಷ್ಯನಿಗೆ ಒಂದಷ್ಟು ದಿನ ರೇಸ್ಟ್ ಮತ್ತು ರೀ ಎನರ್ಜಿಗೆ ಏರಲು ಸಹಾಯಕವಾಗುತ್ತದೆ.

ಇನ್ನೂ ಏನೂ ಕೇವಲ ೨೩ ದಿನಗಳು ಬಾಕಿ ಇವೆ ೨೦೧೧ ವರ್ಷಕ್ಕೆ ಗುಡ್ ಬಾಯ್ ಹೇಳಲು..

ನಿಜವಾಗಿಯೂ ಆಶ್ಚರ್ಯವಾಗುತ್ತದೆ.. ದಿನಗಳು ಎಷ್ಟೊಂದು ವೇಗವಾಗಿ ಇತಿಹಾಸವನ್ನು ಸೇರುತ್ತವೆ ಎಂದು. ಮನ್ನೆ ಮನ್ನೆ ಹೊಸ ವರ್ಷವನ್ನು ಆಚರಿಸಿದೆವು ಅನಿಸುತ್ತಿದೆ... ಆದರೇ ಕಾಲವನ್ನು ತಡೆಯುವವರು ಯಾರು ಇಲ್ಲ ಅಲ್ಲವಾ? ನಾವುಗಳು ನಮ್ಮ ನಮ್ಮ ಪಾಡಿಗೆ ಕಾಲಕ್ಕೆ ಹೊಂದಿಕೊಂಡು ಮುಂದುವರೆಯಬೇಕು. ಅದೇ ಬದುಕು.




ಈಗಾಗಲೇ ನಮ್ಮ ಬೆಂಗಳೂರು ಮೆಟ್ರೋ ಹೈಟೆಕ್ ಮಂದಿ ಹೊಸ ವರ್ಷದ ಡ್ಯಾಷಿಂಗ್ ಸೇಲಬ್ರೇಷನ್ ಗೆ ಅಲ್ಲಿ ಇಲ್ಲಿ ಹೋಟೆಲ್, ರೇಸಾರ್ಟ್, ತಿಂಡಿ, ತೀರ್ಥ, ಸ್ನೇಹಿತರುಗಳು ಮಸ್ತಿ ಮುಂತಾದ ಯೋಜನೆಗಳನ್ನು ಹಾಕುತ್ತಿದ್ದಾರೆ. ೩೧ರ ರಾತ್ರಿಯನ್ನು ಅತ್ಯಂತ ಅದ್ಧೂರಿಯಿಂದ ೨೦೧೨ ವರ್ಷವನ್ನು ಸ್ವಾಗತ ಮಾಡಲು ಕಾತುರರಾಗಿದ್ದಾರೆ.

ನಾಳೆಯಿಂದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಗಂಗಾವತಿಯಲ್ಲಿ ಶುರುವಾಗುತ್ತಿದೆ. ಅದರೇ ಇಲ್ಲಿ ಅದರ ಅಬ್ಬರವೇನೂ ಕಾಣಿಸುತ್ತಿಲ್ಲ. ಗಂಗಾವತಿಯಲ್ಲಿ ಇರಬಹುದೇನೋ..? ಸಾಹಿತ್ಯ ಅಭಿಮಾನಿಗಳಲ್ಲಿ ಇರಬಹುದೇನೋ.. ಅದರೇ ಇಲ್ಲಿಯ ಐ.ಟಿ ಬಿ.ಟಿ ಮಂದಿಗೆ ಅದರ ನೆನಪು ಸಹ ಇಲ್ಲ. ಅದು ಒಂದು ಕೇವಲ ಸುದ್ಧಿಯ ವರದಿಯಾಗಿ ಪತ್ರಿಕೆ ಮತ್ತು ಟಿ.ವಿ ನ್ಯೂಸ್ ನಲ್ಲಿ ನೋಡುತ್ತಾರೇನೋ..

ಎಷ್ಟೊಂದು ವಿಪರ್ಯಾಸ ಅಲ್ಲವಾ? ಸ್ಥಳಕ್ಕೆ ತಕ್ಕಂತೆ ಬದುಕು.. ಜಾಗ ಜಾಗಗಳಿಗೂ ಹೊಂದಿಕೊಂಡ ಭಾವನೇ, ಸಂಸ್ಕೃತಿ.. ಇದರಲ್ಲಿಯೇ ವೈವಿಧ್ಯತೆಯನ್ನು ಕಾಣಬಹುದು.

ನಾಡು ನುಡಿಯ ಪ್ರೇಮ ಆ ರಾಜ್ಯದ ಜನತೆಗೆ ಮಾತ್ರ ಸೀಮಿತವೇನೋ ಗೊತ್ತಾಗುತ್ತಿಲ್ಲ. ಕನ್ನಡ ಜನಗಳು ನಮ್ಮ ಕನ್ನಡತನವನ್ನು ಎಂದು ಮರೆಯಬಾರದು.. ಎಲ್ಲಿ ಎಲ್ಲಿ ಅದನ್ನು ಎತ್ತಿ ಹಿಡಿಯಲು ಸಾಧ್ಯವೋ ಅಲ್ಲಿ ಎಲ್ಲಾ ಅದರ ಕನ್ನಡ ಬಾವುಟವನ್ನು ಹಾರಿಸಬೇಕು ಕನ್ನಡ ಮನವನ್ನು ಹರಿಸಬೇಕು..

ಈ ವರ್ಷವಂತೋ ಕನ್ನಡ ಸಾಂಸ್ಕೃತಿಕ ಲೋಕ ಸಂಭ್ರಮ ಪಡಲು ಡಬಲ್ ಧಮಾಕ! ಯಾಕೆಂದರೇ ೮ನೇ ಙ್ಞಾನಪೀಠ ಪ್ರಶಸ್ತಿ, ಮೊದಲ ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ಪಡೆದುಕೊಂಡು ಭಾರತದಲ್ಲಿಯೇ ಕನ್ನಡದ ಹಿರಿಮೆಯನ್ನು ಮತ್ತೋಮ್ಮೆ ಸಾಭಿತುಮಾಡಿದ್ದೇವೆ.

ಇದರ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಯುವಪೀಳಿಗೆಗೆ ತಲುಪಿಸುವ ಕೆಲಸವನ್ನು ಸರ್ಕಾರ ಮತ್ತು ಸಂಸ್ಥೆಗಳು ಮಾಡಬೇಕು. ಯುವಕರಿಗೆ ಕನ್ನಡದ ಸಾಹಿತ್ಯ ಪರಿಚಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಯೋಜಿತ ರೀತಿಯ ಮಾಡಿದರೇ ನಮ್ಮ ಕನ್ನಡ ಕಂದಮ್ಮಗಳ ಬಾಯಿಯಲ್ಲಿ ಹ್ಯಾರಿಪಾಟರ್,ಜಾಕ್ಸನ್,ರಾಕ್.. ಮುಂತಾದ ಇಂಗ್ಲೀಷ್ ಮಾತುಗಳನ್ನು ಸ್ವಲ್ಪಮಟ್ಟಿಗಾದರೂ ನಿಲ್ಲಿಸಬಹುದೇನೋ...

ಕನ್ನಡವೆಂದರೇ ಹಿಂದಿನ ಪೀಳಿಗೆಗೆ ಮಾತ್ರ ಎಂಬ ಧೋರಣೆಯನ್ನು ಸಾಕಷ್ಟು ಕಡಿಮೆ ಮಾಡಬಹುದು ಏನಂತೀರಿ?

ನನಗೆ ಅನಿಸುತ್ತದೆ ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಒಂದು ಮಾತಿಗೆ ನಿಯತ್ತನ್ನುತೋರಿಸುತ್ತಾರೇನೋ ಎಂಬ ರೀತಿಯಲ್ಲಿ ನಮ್ಮ ನಗರದ ಯಾವುದೇ ರಸ್ತೆಗಳಿಗೆ ಇಳಿದರೂ ಯಾವುದಾದರೂ ಒಂದು ರಿಪೇರಿ ನಡೆಯುತ್ತಿರುತ್ತದೆ. ಮೆಟ್ರೋ ಬಂದ ಮೇಲಂತೂ ಕೇಳುವುದೇ ಬೇಡ ಎಲ್ಲಿ ನೋಡಿದರೂ ದೂಳ್! ದೂಳ್! ಅದು ಯಾವುದೋ ಒಂದು ಸಮೀಕ್ಷೆ ಹೇಳುತ್ತಿದೆ ಬೆಂಗಳೂರು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಮಾಲಿನ್ಯತೆಗೆ ಒಗ್ಗಿಕೊಂಡಿರುವ ಸಿಟಿಯಂತೇ.. ಶಿವನೇ ಕಾಪಾಡಬೇಕು..

ಉದ್ಯಾನ ನಗರಿ ಎಂಬ ಹಣೆಪಟ್ಟಿ ಸ್ವಲ್ಪದಿನಗಲ್ಲಿಯೇ ಸ್ಯಾಂಕಿ ಟ್ಯಾಂಕ್ ಹೂಳು ಮಣ್ಣಿನಲ್ಲಿ ಸೇರಿ ಹೋಗಬಹುದೇನೋ.. ಹಸಿರು ಇದ್ದರೇ ಉಸಿರು!

ಇಲ್ಲಿನ ಜನಗಳಿಗೆ ಗೊತ್ತಿಲ್ಲಾ.. ನಿತ್ಯ ಎಷ್ಟು ಎಷ್ಟು ರೋಗಗಳಿಗೆ ಬಲಿಯಾಗುತ್ತಿದ್ದಾರೂ ದೇವರೇ ಬಲ್ಲ.

ನಮಗೆ ಗೊತ್ತಿಲ್ಲದ ರೀತಿಯಲ್ಲಿ ಯಾರೋ ಯಾರೂ ತಮಗೆ ಅನೂಕೂಲವಾಗಲಿಯಂತೋ ಅಥಾವ ಜನಕ್ಕೆ ಅನುಕೂಲವಾಗಲಿ ಎಂದೋ ನಿತ್ಯ ಏನಾದರೂ ಕೆಲಸ ಕಾರ್ಯಗಳು ಸಾಗುತ್ತಲೇ ಇರುತ್ತವೆ. ಆದರೇ ಏನೂ ಮಾಡಿದರೂ ಇಲ್ಲಿನ ರಸ್ತೆಗಳಲ್ಲಿರುವ ಗುಂಡಿಗಳ ಸಂಖ್ಯೆ ಮಾತ್ರ ನಿತ್ಯ ಜ್ವರ ಏರಿದ ರೀತಿಯಲ್ಲಿ ಏರುತ್ತಿವೆ.. ಇಲ್ಲಿನ ರಸ್ತೆಗಳಲ್ಲಿ ಓಡಾಡುವುದೇ ಒಂದು ಅಪಾಯಕಾರಿಯಾಗುವ ದಿನಗಳು ದೂರವಲ್ಲ.

ಯಾವುದೇ ಸ್ಥಳವನ್ನು ಸೇರಬೇಕೆಂದರೂ ೨-೩ ಗಂಟೆ ಮುಂಚೆಯೇ ಮನೆಯನ್ನು ಬಿಡಬೇಕು. ಬಿಟ್ಟರು ಸರಿಯಾದ ಸಮಯಕ್ಕೆ ಸೇರುವೆವು ಎಂಬ ಬಗ್ಗೆ ನಂಬಿಕೆ ಇಲ್ಲ ಸ್ವಾಮಿ.. ಇದು ಬೆಂಗಳೂರು ಸಿಲಿಕಾನ್ ಸಿಟಿಯ ನಿತ್ಯ ಮಹಿಮೆ.. ಕೇಳುವವರು ಯಾರೂ..

"ಯಾವುದೇ ಒಂದು ನಗರ, ರಾಜ್ಯ, ದೇಶದ ಅಭಿವೃದ್ಧಿಯನ್ನು ಆ ಜಾಗಗಳ ರಸ್ತೆಗಳಲ್ಲಿ ಕಾಣಿ" ಎಂದರೇ ನಮ್ಮ ನಗರ, ರಾಜ್ಯ.... ಯೋಚಿಸಲು ಸಾಧ್ಯವಿಲ್ಲ ಬಿಡಿ..

ಇದರ ತಂತು ತಪ್ಪಿ ಹೋಗುತ್ತಿರುವುದು ಎಲ್ಲಿ ಎಂದರೇ ಮತ್ತೆ ಅದೇ ಬಗೆಹರಿಯದ ಕೊಂಡಿ ಕೊಂಡಿ ತಪ್ಪಿನ ಸರಮಾಲೆ.. ಜನ,ಅಧಿಕಾರಿಗಳು,ನಾಯಕಮಣಿಗಳ ಜವಾಬ್ದಾರಿ ಇಲ್ಲದ ಯೋಜನೆ, ಯೋಚನೆಗಳು.. ನಿತ್ಯ ಏನಾದರೂ ಒಂದು ಕಾಮಗಾರಿ ಸಾಗುತ್ತಿರಬೇಕು.. ನಿತ್ಯ ಸರ್ಕಾರದಿಂದ ಹಣ ಹರಿಯುತ್ತಿರಬೇಕು.. ಅದರ ಬಳಕೆ ಹೇಗೋ ಹೇಗೆ ಬಳಸುವುದು.. ಅಲ್ಲಿನ ಕ್ವಾಲೀಟಿ, ಮೌಲ್ಯತೆಗೆ ಗೋಲಿ ಮಾರೋ.. ಎಂಬ ಮನಸ್ಸು ಇದಕ್ಕೆ ಕೊನೆ ಎಂಬುದು ಯಾವಾಗ ನಿಮಗೆ ಏನಾದರೂ ತಿಳಿದಿದೆಯೇ?

ಯಾರು ಯಾರಿಗೆ ಸಂಬಂಧವಿಲ್ಲದ ರೀತಿಯ ಬದುಕು ಇದಾಗುತ್ತಿದೆಯೇ ಅನ್ನಿಸುತ್ತಿದೆ. ಕೇವಲ ಸಮಯಕ್ಕೆ ತಕ್ಕ ಹಾಗೆ ಬದುಕುವುದು. ಇರುವಷ್ಟು ದಿನ ಆಗೂ ಇಗೂ ಏನಾದರೂ ತಂತ್ರ ಮಾಡುವುದು.. ಹಣ ಮಾತ್ರ ಪ್ರಾಮುಖ್ಯವಾಗುವುದು.. ವ್ಯಕ್ತಿ ಮತ್ತು ವಸ್ತು ನಗಣ್ಯವಾಗುತ್ತಿರುವುದು.. ತಾವು ಮಾತ್ರ ಬದುಕಬೇಕು ಎಂಬ ತಾತ್ಕಾಲಿಕ ಯೋಚನೆಯಿಂದ ಈ ವ್ಯವಸ್ಥೆ ಒಂದು ರೀತಿಯಲ್ಲಿ ಹಳ್ಳ ಹಿಡಿಯುತ್ತಿದೆ ಅನಿಸುತ್ತಿದೆ.

ಪುನಃ ಅದೇ ನೈತಿಕತೆಯ ಪ್ರಶ್ನೇ ಬೃಹದಾಕಾರವಾಗಿ ನಮ್ಮ ಮುಂದೆ ದುತ್ತನೇ ಎದುರಾಗುತ್ತದೆ... ನಾವು ಆರಿಸಿ ಕಳಿಸಿದ ಪ್ರಜಾಪ್ರಭುತ್ವ ಸ್ತಂಭದ ನಾಯಕರುಗಳು ಅನಿಸಿಕೊಂಡ ನಾಯಕ ಮಣಿಗಳ ದುರಾಸೆ ಅವರ ನೀಚತನವನ್ನು ಕಂಡಾಗ ಭಾರತಾಂಭೆಯ ಭರವಸೆಯನ್ನು ಯಾರೂ ಯಾರೋ ಏನೂ ಏನೋ ಮಾಡುತ್ತಿದ್ದಾರೆ ಅನಿಸುತ್ತಿದೆ....

ಯೋಚಿಸುವಂತಾಗುತ್ತದೆ!!

1 ಕಾಮೆಂಟ್‌: