ಶನಿವಾರ, ಜುಲೈ 16, 2011

ಅಕ್ಷರಗಳಲ್ಲಿಯೇ ಕೊಳಕಮಳಕ !



ಇತೀಚಿನ ಕ.ಪ್ರ ಮತ್ತು ಹಾಯ್ ಎರಡು ಪತ್ರಿಕೆಗಳನ್ನು ಓದುತ್ತಿದ್ದರೆ. ಇವರುಗಳು ಎನನ್ನೂ ಜನರಿಗೆ ಹೇಳಲು ಹೊರಟಿದ್ದಾರೆ ಎಂದು ಒಂದು ಕ್ಷಣ ಸಾಮಾನ್ಯ ಓದುಗನಿಗೆ ಅಚ್ಚರಿಯಾಗುತ್ತದೆ. ಹಾಗೆಯೇ ಏನ್ ಮಾಡ್ತಾ ಇದ್ದಾರೆ ಇವರುಗಳು ಎಂದು ನೋಡುವಂತಾಗಿದೆ.

ಎರಡು ಪತ್ರಿಕೆಗಳು ಒಬ್ಬರನ್ನೊಬ್ಬರ ಮೇಲೆ ಕೆಸರು ಎರಚುವ ವೇದಿಕೆಯನ್ನಾಗಿ ಎರಡು ಪತ್ರಿಕೆಗಳನ್ನು ಮಾಡಿಕೊಂಡಿದ್ದಾರೆ. ಹಾಯ್ ನಲ್ಲಿ ಬರೆಯುವವರ ಮೇಲೆ ಕ.ಪ್ರ ದಲ್ಲಿ. ಕ.ಪ್ರ ದಲ್ಲಿ ಹಾಯ್ ನಲ್ಲಿ ಬರೆಯುವವರ ಮೇಲೆ ಎಷ್ಟು ಸಾಧ್ಯವಾಗುತ್ತದೂ ಎಲ್ಲಿ ಎಲ್ಲಿ ಅವಕಾಶಗಳು ಸಿಗುತ್ತವೋ ಅಲ್ಲೇಲ್ಲಾ ಹುಲುಸಾಗಿ ತಮ್ಮ ದ್ವೇಷವನ್ನು ಅಕ್ಷರಗಳಲ್ಲಿ ತೋಡಿಕೊಳ್ಳುತ್ತಿದ್ದಾರೆ. ಇದು ಸಾಮಾನ್ಯ ಓದುಗನಿಗೆ ಯಾವುದು ಸತ್ಯ ಯಾವುದು ಸುಳ್ಳು ಎಂದು ಸುಮ್ಮನೆ ನಿಟ್ಟುಸಿರು ಬಿಡುವಂತಾಗಿದೆ.

ಎಲ್ಲಾರಿಗೂ ತಿಳಿದಿರುವಂತೆ ಕ.ಪ್ರ ಸಂಪಾದಕರುಗಳು ಹಾಯ್ ಸಂಪಾದಕರಿಗೆ ತೀರ ಹತ್ತಿರದವರಾಗಿದ್ದವರು ಅದು ಕ.ಪ್ರ ಕ್ಕೆ ಸೇರುವವರೆಗೂ.

ಅದು ಇರಲಿ ಅದು ಅವರವರ ವೈಕ್ತಿಕ ವಿಷಯ. ಈ ವಿಷಯಗಳನ್ನು ಸಾರ್ವಜನಿಕರು ಅದು ದುಡ್ಡುಕೊಟ್ಟು ಸುದ್ಧಿಗಾಗಿ ಓದುವ ತಮ್ಮ ಪತ್ರಿಕೆಗಳಲ್ಲಿ ತಮ್ಮ ನಡುವಿನ ಜಗಳವನ್ನು ಯಾವ ಮಟ್ಟಕ್ಕೆ ಕೊಂಡು ಹೋಗುತ್ತಿದ್ದಾರೆ ಎಂದರೇ ಎರಡು ಕಡೆಯವರು ಮಾನ ನಷ್ಟ ಮೊಕದ್ದಮೆಯನ್ನು ಹಾಕುವ ಮಟ್ಟಿಗೆ.

ಇದರ ಜರೂರತು ಯಾರಿಗೇ? ಯಾರಿಗಾಗಿ? ಓದುಗರನ್ನು ಇವರುಗಳು ಏನಾದರೂ ಏನೂ ಗೊತ್ತಿಲ್ಲದ ಗಾವಿದರುಗಳು, ನಾವುಗಳು ಏನೂ ಬರೆದರು ದುಡ್ಡುಕೊಟ್ಟು ಓದುವವರು ಎಂದು ತಿಳಿದುಕೊಂಡಿರುವವರೆ.

ಎರ‍ಡು ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿರುವವರುಗಳು ಉತ್ತಮ ಬರಹಗಾರರು ಅದರ ಬಗ್ಗೆ ಎರಡು ಮಾತಿಲ್ಲ. ಅದಕ್ಕೆ ಅವರುಗಳು ಮಾಡಿರುವ ಮಾಧ್ಯಮ ಪ್ರಪಂಚದಲ್ಲಿನ ಪವಾಡ ಮತ್ತು ಸಾಧನೆಯೇ ಸಾಕ್ಷಿ. ಇದಕ್ಕೆ ಕನ್ನಡ ಜನಪ್ರಿಯತೆ ಮತ್ತು ಮೆಚ್ಚುಗೆಯೇ ಉದಾಹರಣೆ.

ಈ ರೀತಿಯಲ್ಲಿರುವಾಗ ಇವರುಗಳು ಕೆಲವು ಸಮಯದ ಹಿಂದೆ ಚಿನ್ನ, ರನ್ನ ಎಂದು ಒಬ್ಬರನ್ನೊಬ್ಬರುಗಳು ಹೊಗಳಿಕೊಳ್ಳುತ್ತಿದ್ದುದು ನಾವು ಕಂಡಿದ್ದೇವೆ. ವೇದಿಕೆಯ ಮೇಲೆ ಇವರುಗಳು ಬರೆದ ಪುಸ್ತಕಗಳ ಬಗ್ಗೆ ಅವರುಗಳು ಅಭಿಮಾನದಿಂದ ಮಾತನ್ನಾಡುತ್ತಿದ್ದುದು, ಅವರುಗಳು ಬರೆದ ಪುಸ್ತಕ ಮತ್ತು ಅವರ ಅಪಾರ ಙ್ಞಾನದ ಬಗ್ಗೆ ಇವರು ಕೊಂಡಾಡುತ್ತಿದ್ದುದು ಏನೂ.. ಅದು ಕೇವಲ ಕೆಲವೇ ಕೆಲವು ದಿನಗಳ ಹಿಂದೆ.

ಈ ರೀತಿಯಲ್ಲಿದ್ದ ಇಬ್ಬರ ಮಧ್ಯದ ಸ್ನೇಹ ಎಲ್ಲಿ ಹಳ್ಳ ಹಿಡಿಯಿತೂ ಅದು ಯಾರಿಗೂ ಬೇಡ. ಆದರೇ ಇತ್ತೀಚಿನ ಇವರ ಪತ್ರಿಕೆಗಳನ್ನು ಸಾಮಾನ್ಯ ಓದುಗ ಓದುವುದಾದರೂ ಯಾಕೆ ಎಂಬಂತಾಗಿದೆ. ಇದು ಬೇಕಾ? ಇದನ್ನಾ ಇವರುಗಳು ಮೀಡಿಯಾ - ಧರ್ಮ -ನೀತಿ ಎಂಬ ಹತ್ತು ಹಲವು ಮಾತುಗಳನ್ನು ಅರೆದು ಕುಡಿದಿರುವ ಮಂದಿ ಎಂದು ನೋಡುವಂತಾಗಿದೆ.

ಎರಡು ಪತ್ರಿಕೆಗಳಲ್ಲಿ ನಿತ್ಯ ಒಂದು ಕಡೆಯಾದರೂ ಒಂದು ಕಾಲಂ ನಲ್ಲಾದರೂ ಒಬ್ಬರನ್ನೊಬ್ಬರು ಚಿವುಟುವುದನ್ನ ನಿತ್ಯ ಮರೆಯುವುದಿಲ್ಲ. ಅಲ್ಲಿ ಅಕ್ಷರದಲ್ಲಿಯೇ ಕೊಳಕಮಳಕ ಬೈಗಳಗಳನ್ನು ನೋಡಲು ನಿಜವಾಗಿಯೂ ಬೇಜಾರಾಗುತ್ತದೆ.

ಸಾರ್ವಜನಿಕವಾಗಿ ಯಾರೊಬ್ಬರೂ ತಮ್ಮ ವೈಕ್ತಿಕ ದ್ವೇಷ, ಅಸೊಯೆಯನ್ನು ಅದು ಪತ್ರಿಕಾ ಮಾಧ್ಯಮದಲ್ಲಿ ತರಲೇ ಕೊಡದು. ಅದಕ್ಕೆ ಇದು ಎಂದು ಉಪಯೋಗವಾಗಬಾರದು. ಸಾಮಾನ್ಯ ಓದುಗನಿಗೆ ಇದರಿಂದ ಆಗುವ ಉಪಯೋಗವಾದರೂ ಏನೂ? ನೀವೆ ಹೇಳಿ ಸ್ವಾಮಿ.

ಸಣ್ಣ ಮಕ್ಕಳು ಕಿತ್ತಾಡುವ ರೇಂಜಿಗೆ ಬುದ್ಧಿವಂತರುಗಳು ತಮಗೆ ಕರತಲಮಲಕವಾಗಿರುವ ಅಕ್ಷರಗಳೂಡನೆ ಮಾಡುವುದು ಯಾವ ರೀತಿ ಸರಿ?

ಇದು ಇನ್ನಾದರೂ ನಿಲ್ಲುವಂತಾಗಬೇಕು.

ಜನರಿಗೆ ಬೇಕಾಗಿರುವುದು ಹೊಸತನ ಮತ್ತು ಹೊಸ ಹೊಸ ವಿಷಯ ಅದು ಬಿಟ್ಟು ಅವುಗಳನ್ನು ನಡೆಸುತ್ತಿರುವವರ, ಬರೆಯುತ್ತಿರುವವರ ಖಾಸ ಖಾಸ ವಿಷಯಗಳಲ್ಲ. ಆ ರೀತಿಯಲ್ಲಿಯೇ ಮಾಡುವುದಾದರೇ ಈಗ ಇರುವ ಪುಟಗಳೇ ಸಾಲುವುದಿಲ್ಲ ಅಲ್ಲವಾ?

ಲೋಕಲ್ ಪೇಪರ್ ಗಳು ಎಂದರೇ ಮೂಗು ಮುರಿಯುವವರ ಮುಂದೇ ಈ ರೀತಿ ಮಾಡುವುದು ತರವಲ್ಲಾ. ಎಲ್ಲಾರು ಇಷ್ಟಪಟ್ಟು ಓದುವಂತೇ ಇರಬೇಕು. ಅದು ಬಿಟ್ಟು ಇವುಗಳನ್ನು ಮುಟ್ಟುವುದೇ ತಪ್ಪು ಎಂಬ ಭಾವನೆಯನ್ನು ತಪ್ಪಿಸಲಿ.

ಬಹು ಬಲಿಷ್ಟ ಮಾಧ್ಯಮವಾದ ವೃತ್ತ ಪತ್ರಿಕೆ ಸಂವಿಧಾನದ ನಾಲ್ಕನೇ ಸ್ತಂಭ ಎಂಬುದನ್ನು ಅಲ್ಲಿ ಕೆಲಸ ಮಾಡುವವರು ಮರೆಯಬಾರದು. ತಮ್ಮ ಜವಬ್ದಾರಿಯನ್ನು ಅರಿತು ನಡೆಯುವುದು ಕ್ಷೇಮ!

ಈ ಪಾಠವನ್ನು ಸಾಮಾನ್ಯ ಓದುಗ ನಿಮಗೆ ತಿಳಿ ಹೇಳುವ ಮಟ್ಟಕ್ಕೆ ನಿಮ್ಮ ಪತ್ರಿಕೆಯಲ್ಲಿನ ನಿಮ್ಮ ಲೇಖನಿಯನ್ನು ಹರಿಯಬಿಡಬೇಡಿ ಎಂದು ಹೇಳುವುದು ಎಲ್ಲಾ ಸಹೃದಯರ ಬಯಕೆಯಾಗಿದೆ.

ಯಾಕೆಂದರೇ ನಮಗೆ ನಿಮ್ಮ ಬರವಣಿಗೆ ಇಷ್ಟ, ನೀವು ಕೊಡುವ ವಿಷಯ ವೈವಿಧ್ಯತೆ ಇಷ್ಟ... ಅದ್ದರಿಂದ ನಿಮ್ಮಿಂದ ಹೆಚ್ಚಿನ ನಿರೀಕ್ಷೆಯನ್ನು ಓದುಗರು ಕಾಣುತ್ತಿದ್ದಾರೆ. ಆ ದೃಷ್ಟಿಯಲ್ಲಿ ನಿಮ್ಮ ಕೆಲಸ ಮತ್ತು ದೋರಣೆ ಇರಲಿ.

ಹೆಚ್ಚಿಗೆ ಹೇಳಲು ಮನಸ್ಸು ಬರುತ್ತಿಲ್ಲ. ಯಾಕೆಂದರೆ ನೀವುಗಳು ಲೇಖಕರುಗಳು ಮತ್ತು ಬಹಳ ದೊಡ್ಡ ಮಟ್ಟದಲ್ಲಿ ತಿಳಿದಿರುವಂತರುಗಳು.

ನಿಮ್ಮ ಪುಸ್ತಕಗಳು, ಲೇಖನಗಳನ್ನು ಓದುವ ಮೊಲಕ ನಾವುಗಳು ಸ್ವಲ್ಪಮಟ್ಟಿಗೆ, ಇಷ್ಟರ ಮಟ್ಟಿಗೆ ನಿಮ್ಮನ್ನು ನಿಮ್ಮ ದಾರಿಯನ್ನು ಹೇಗೆ ಇದೆ ಎನ್ನುವ ಮಟ್ಟಿಗೆ ನಾಲ್ಕು ಸಾಲು ಕಿವಿ ಮಾತುಗಳನ್ನು ಹೇಳುವಷ್ಟು ತಿಳುವಳಿಕೆಯನ್ನು ಸಂಪಾಧಿಸಿದ್ದೇವೆ.

ಸಿಗೋಣವಾ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ