ಸೋಮವಾರ, ಏಪ್ರಿಲ್ 25, 2011

ಎಷ್ಟೊಂದು ಜೋಕೆಯಾಗಿರಬೇಕಾಪ್ಪಾ..?



ನಮಗೆ ಹಲವು ಬಾರಿ ಹಲವು ವಿಷಯಗಳ ಬಗ್ಗೆ ಹಲವು ರೀತಿಯ ಯೋಚನೆ, ಚಿಂತನೆ, ರೋಷ, ಸಿಟ್ಟು,ಹೆಮ್ಮೆ, ಅನಂದದ ಭಾವನೆಗಳು ಮನದಲ್ಲಿ ಮೂಡುತ್ತವೆ.

ಅದರೂ ಖುಷಿಪಡುವ ವಿಷಯಗಳನ್ನು ಸುಲಭವಾಗಿ ಹತ್ತು ಹಲವರ ಮುಂದೆ ಹೇಳಿಕೊಂಡು ಅವರೊಡನೆ ಸೇರಿ ಆನಂದಪಟ್ಟು ಬೀಗುತ್ತೇವೆ. ಅದೇ ಯಾವುದೇ ಸಿಟ್ಟಿನ ವಿಷಯಗಳು, ಅಥವಾ ತಪ್ಪು ಎಂದು ನಮಗೆ ಅನಿಸಿದ ಸಂಗತಿಗಳನ್ನು ನಾವುಗಳು ನಮಗೆ ಅನಿಸಿದ ತಕ್ಷಣ ಅದನ್ನು ವ್ಯಕ್ತಪಡಿಸಲು ತುಂಬ ಕಸಿವಿಸಿಪಡುತ್ತೇವೆ.

ಸಿಟ್ಟಿನ ವಿಷಯವನ್ನೇ ತೆಗೆದುಕೊಳ್ಳಿ ನಮಗಿಂತ ಕಿರಿಯರಿಂದ ಏನಾದರೂ ಒಂದು ಚಿಕ್ಕ ವಿಷಯದಲ್ಲಿ ನಮಗೆ ರೇಗು ಬಂದರೂ ಆರಾಮವಾಗಿ ಅದನ್ನು ಯಾವುದೇ ಅಡೆತಡೆಯಿಲ್ಲದೆ ಅದನ್ನು ವ್ಯಕ್ತಪಡಿಸುತ್ತೇವೆ. ಕೂಗುವ ಮೂಲಕವೊ, ಅವರನ್ನು ಹೊಡೆಯುವುದರ ಮೊಲಕವೊ ತಕ್ಷಣ ನಮ್ಮ ಅಭಿಪ್ರಾಯವನ್ನು ನಿರಾತಂಕವಾಗಿ ಹರಿಸಿಬಿಟ್ಟಿರುತ್ತೇವೆ.

ಅದೇ ಯಾವುದೇ ಒಂದು ವಿಷಯ, ಕೆಲಸ, ಮಾತು, ಅನಿಸಿಕೆ ಹಿರಿಯರಿಂದ ನಮಗಿಂತ ಸ್ವಲ್ಪ ದೊಡ್ಡವರಿಂದ, ನಮಗೆ ಪರಿಚಯವಿಲ್ಲದವರಿಂದ ಬಂದಾಗ ಅದು ನಮ್ಮ ಮನಸ್ಸಿಗೆ ಅನಿಸುತ್ತಿರುತ್ತದೆ. ಅದು ತಪ್ಪು. ಮತ್ತು ನಮ್ಮ ಮನಸ್ಸಿನಲ್ಲಿ ಸಿಟ್ಟು ಬರುತ್ತದೆ. ಅದರ ಬಗ್ಗೆ ಏನಾದರೂ ಹೇಳಬೇಕು. ಅದು ಸರಿಯಲ್ಲ. ನೀವು ಈ ರೀತಿ ಮಾತನ್ನಾಡುವುದು ತಪ್ಪು ಅಂಥ ಹೇಳಬೇಕು ಎಂದು ಅನಿಸುತ್ತಿರುತ್ತದೆ. ಆದರೂ ನಾವುಗಳು ಆ ಸಮಯದಲ್ಲಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ನಮ್ಮ ನಮ್ಮಲ್ಲಿಯೇ ಅದರ ವೇಗವನ್ನು ಅನುಭವಿಸಿ ತಣ್ಣಗಾಗಿ ಸೈರುಸುತ್ತಿರುತ್ತೇವೆ ಯಾಕೆ? ಅದೇ ನಮಗೆ ಗೊತ್ತಿರುವವರಾದರೇ ನಮಗಿಂತ ಚಿಕ್ಕವರಾದರೇ ಯಾವುದೇ ಮೂಲಾಜು ಇಲ್ಲದೇ ಒಂದು ಭಾರಿಸಿಬಿಟ್ಟಿರುತ್ತೇವೆ.

ಹೌದು! ಈ ರೀತಿಯ ನಮ್ಮ ಮನೋವ್ಯಾಪಾರವನ್ನು ವ್ಯಕ್ತಿ ವ್ಯಕ್ತಿಗಳಿಗೆ ಅನ್ವಹಿಸಿಕೊಂಡು ಯೋಚಿಸಲಾರಂಭಿಸುತ್ತೇವೆ. ನಮಗಿಂತ ಹಿರಿಯರು, ಗುರುಗಳು, ಅಧಿಕಾರಿಗಳು, ಸಂಬಂಧಿಕರುಗಳು ಯಾರಾದರೂ. ಅವರುಗಳು ತಮಗೆ ಅರಿವಿಲ್ಲದೆ ಮನುಷ್ಯ ಸಹಜವಾದ ತಪ್ಪುಗಳನ್ನು ತಮ್ಮ ಕಾರ್ಯದಲ್ಲಿ, ಮಾತಿನಲ್ಲಿ, ಯೋಚನೆಯಲ್ಲಿ ಅಡಿ ಇಟ್ಟರೆ ನಾವುಗಳು ಏನೊಂದು ಹೇಳಲಾರದವರಾಗಿರುತ್ತೇವೆ.

ಯಾಕೆಂದರೇ ಹತ್ತು ಹಲವಾರು ವಿಷಯಗಳ ಸರಮಾಲೆ ನಮ್ಮ ಮುಂದೆ ಬಂದು ನಿಂತಿರುತ್ತದೆ. ಅಲ್ಲಿ ನಮ್ಮ ಜವಾಬ್ದಾರಿಯ ಕೆಲಸವನ್ನು ಬಿಟ್ಟು ನಾವುಗಳು ಆ ಜಾಗವನ್ನು ಖಾಲಿ ಮಾಡಲು ನಿರ್ಧರಿಸುತ್ತೇವೆ. ಅಥಾವ ಮನಸ್ಸಿಲ್ಲದೇ ಅವರು ಮಾಡುವುದನ್ನು ನೋಡುತ್ತಾ ನಿಲ್ಲುತ್ತೇವೆ. ಯಾಕೆಂದರೇ ನಾವುಗಳು ನಮ್ಮ ಹಿರಿಯರ ಬಗ್ಗೆ ಯಾವಾಗಲೂ ಅಂಥ ಒಂದು ಗೌರವಾಯುತವಾದ ಸೌಧವನ್ನು ಕಟ್ಟಿ ಅವರುಗಳನ್ನು ಅಲ್ಲಿ ಪೂಜಿಸುತ್ತಿರುತ್ತೇವೆ. ಅವರುಗಳು ಎಂದು ತಪ್ಪು ಮಾಡಲಾರರು ಎಂಬ ಒಂದು ಆಸೆಯನ್ನು ಇಟ್ಟುಕೊಂಡು ನಮ್ಮ ಚಿಕ್ಕ ಚಿಕ್ಕ ಆದರ್ಶಗಳಿಗೆ ಅವರುಗಳನ್ನು ಗುರುತಿಸಿಕೊಂಡಿರುತ್ತೇವೆ.

ಆದರೇ ಯಾರೊಬ್ಬರು ಈ ಜಗತ್ತಿನಲ್ಲಿ ಪರಿಪೂರ್ಣರಲ್ಲ ಅಲ್ಲವಾ! ಯಾರಿಗೇ ಆದರೂ ಒಂದಲ್ಲ ಒಂದು ದೌರ್ಬಲ್ಯ ಇದ್ದೇ ಇರುತ್ತವೆ. ಅವುಗಳನ್ನು ನಾವುಗಳು ನಮ್ಮ ಕಣ್ಣಿಂದ ಕಂಡಾಗ ತುಂಬ ಬೇಜಾರಾಗುವುದು, ವ್ಯಥೆಯನ್ನು ಪಡುವ ಹಿಂಸೆ ಯಾರಿಗೂ ಬೇಡ ಅನಿಸುತ್ತದೆ.

ಆದ್ದರಿಂದ ಹಿರಿಯರು ಎಂಬ ಸ್ಥಾನವನ್ನು ಪಡೆದಂತಹ ಎಲ್ಲ ಹಿರಿಯ ಮನೀಯರುಗಳ ಪ್ರತಿ ಹೆಜ್ಜೆ ಆದರ್ಶಪ್ರಾಯವಾಗಿರಬೇಕು. ಅದು ನಮ್ಮ ನಮ್ಮ ಮನೆಗಳಿಂದ ಪ್ರಾರಂಭಗೊಂಡು, ನಮ್ಮ ಶಾಲೆ, ಕಾಲೇಜು, ಕೆಲಸ ಮಾಡುವ ನಮ್ಮ ಸಂಸ್ಥೆಗಳು, ನಮ್ಮ ಸರ್ಕಾರ, ಪ್ರತಿನಿಧಿಗಳು, ನಾಯಕರುಗಳು ಇತ್ಯಾದಿ ಪ್ರತಿಯೊಂದು ರಂಗದಲ್ಲೂ ನಿತ್ಯ ಎಚ್ಚರಿಕೆಯಿಂದ ಜಾರಿಯಲ್ಲಿರಬೇಕು.

ಇಂದು ನಾವುಗಳು ತುಳಿಯುವ ದಾರಿಯೇ ಮುಂದೆ ಬರುವ ನಮ್ಮ ಕಿರಿಯರಿಗೆ ರಹದಾರಿ. ಅವರುಗಳು ನಮ್ಮ ಪ್ರತಿ ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅವರುಗಳೇ ನಮಗೆ ಇದು ತಪ್ಪು, ಇದು ಸರಿ ಎಂಬ ನುಡಿಗಳನ್ನು ನಾವುಗಳು ನಮ್ಮ ಕಿವಿ ತುಂಬಿಕೊಳ್ಳುವ ಕಾಲ ಹಿರಿಯರಾದ ನಮ್ಮ ನಿಮ್ಮೆಲ್ಲರದಾಗಬಾರದು ಅಲ್ಲವಾ?

ಇಂದು ಮಾತು ಮುತ್ತಾಗಿದೆ. ನಮ್ಮ ಇಂದಿನ ಈ ಕಂಪ್ಯೂಟರ್ ಯುಗದಲ್ಲಿ ಹತ್ತು ಹಲವಾರು ಸಾಮಾಜಿಕ ವೆಬ್ ಸೈಟ್ ಗಳಿಂದ ನಮ್ಮ ನಿತ್ಯ ಮಾತಿಗಿಂತ ನಮ್ಮ ಮೆಸೇಜ್ ಬರೆಯುವುದು, ಪ್ರತಿಯೊಂದು ನೋಟಕ್ಕೂ ಒಂದು ಅಪಡೇಟ್ ಮಾಡುವುದು.

ಅಲ್ಲೂ ಸಹ ನಾವುಗಳು ಮಾಡುವ ಪ್ರತಿಯೊಂದು ಕಾಮೇಂಟ್ ನ್ನು ಜಗತ್ತಿನ ನಾನಾ ಭಾಗಗಳಿಂದ ಲಕ್ಷ ಲಕ್ಷ ಮಂದಿಗಳು ಓದುತ್ತಿರುತ್ತಾರೆ ಮತ್ತು ನೋಡುತ್ತಿರುತ್ತಾರೆ. ನಾವುಗಳು ಇಲ್ಲಿಯೂ ಸಹ ನಮ್ಮ ಸಂಸ್ಕಾರವನ್ನು ಹೇಗೆ ನಮ್ಮ ಮನೆಯಂಗಳದಲ್ಲಿ ಎಚ್ಚರಿಕೆಯಿಂದ ಜೋಕೆಯಾಗಿ ಪಡಿನುಡಿಗಳನ್ನು ಇಡುತ್ತೇವೋ, ಹೇಗೆ ಹತ್ತು ಮಂದಿ ಇರುವ ಕಡೆ ಹತ್ತು ಭಾರಿ ಯೋಚಿಸಿ ಒಂದು ಮಾತನ್ನಾಡಲೂ ಪ್ರಯತ್ನಿಸುವ ತೋಳಲಾಟವನ್ನು ಪ್ರತಿಯೂಬ್ಬರೂ ಅನುಭವಿಸುತ್ತರೋ.. ಹಾಗೆಯೇ ಈ ವೆಬ್ ಸೈಟಗಳಲ್ಲಿ ಟೈಪಿಸುವ ಮುನ್ನ ಯೋಚಿಸಬೇಕು. ಸುಖಾ ಸುಮ್ಮನೇ ಬೇಕಾಬಿಟ್ಟಿಯಾಗಿ ಯಾರ ಯಾರ ಬಗ್ಗೆ ಮನಸ್ಸಿಗೆ ಬಂದಂತೆ ಬರೆಯಬಾರದು. ಇದನ್ನು ನಾನೊಬ್ಬನೇ/ಳೇ ಓದುತ್ತಿಲ್ಲ ಎಂಬ ಪ್ರಙ್ಞೆಯನ್ನು ಪ್ರಙ್ಞವಂತ ಅಕ್ಷರಸ್ಥ ಸಮಾಜ ಅರಿತಿರಬೇಕು.

ಇಂದು ನಾವುಗಳು ಬಹು ವೇಗವಾದ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ದೇಶದ ಯಾವುದೇ ಮೂಲೆಯಲ್ಲಿ ಜರುಗಿದ ಅನಿಷ್ಟಗಳು ಸಹ ನಮ್ಮ ಮನವನ್ನು ಕೆರಳಿಸುತ್ತೇವೆ ಮತ್ತು ಅದಕ್ಕೆ ನಾವುಗಳು ಪ್ರತಿಕ್ರಿಯಿಸುತ್ತೇವೆ. ನಮ್ಮ ನೋಟ ಇಂದು ಕೇವಲ ನಮ್ಮ ಬಗ್ಗೆ ಮಾತ್ರವಿಲ್ಲದೇ ಇಡೀ ಒಂದು ಸುಂದರ ಸಮಾಜವನ್ನು ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವ ಒಂದು ಧಾವಂತ ಎಲ್ಲ ಯುವ ತರುಣ - ತರುಣಿಯರಲ್ಲಿ ಕಾಣಬರುತ್ತಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ಮತ್ತು ಇದು ಮಚ್ಚುಗೆಯ ಕಿರಣವೇ ಸರಿ!

ಹಾಗೆಯೇ ನಮ್ಮ ಸಂಸ್ಕೃತಿಯ ಸಿರಿತನವನ್ನು ನಾವುಗಳು ಅದನ್ನು ನಿತ್ಯ ನೂತನವಾಗಿ ಇಟ್ಟಾಗ ಮಾತ್ರ. ನೀವುಗಳೇ ನೋಡಿ ನಾವು ಯಾವುದನ್ನು ನಮಗೆ ಬೇಕಿಲ್ಲ ಎಂದು ಮೂಲೆಗೆ ದೂಡಿತ್ತಿದ್ದೇವೋ ಅವುಗಳೇ ಪರದೇಶದಲ್ಲಿ ಅದೇ ಹೊನ್ನಿನ ಬೆಲೆಯನ್ನು ಪಡೆದಿವೆ.

ಈ ರೀತಿಯಲ್ಲಿ ಇರಬೇಕಾದಾಗ ನಾವುಗಳು ಯಾಕೇ ಪರಕೀಯ ಸಂಸ್ಕೃತಿಯ ದಾಸರಾಗಬೇಕು. ಇಲ್ಲಿ ಇರುವ ಒಂದು ಚೂಕ್ಕ ಆದರ್ಶ ಜೀವನವನ್ನು ಸರಿಯಾದ ದಾರಿಯಲ್ಲಿ ಯಾರಾದರೂಬ್ಬರೂ ನಡೆಸಿದ್ದೇ ಆದರೆ ತಾನು ಮತ್ತು ತನ್ನ ಸುತ್ತಲಿನ ನೆರೆಹೊರೆಯವರ ಜೀವನ ಆನಂದಮಯವಾಗಿರುವುದರಲ್ಲಿ ಸಂಶಯವಿಲ್ಲ ಅಲ್ಲವಾ?

ಯಾಕೆಂದರೇ ನಾವುಗಳು ನಮ್ಮ ಭವ್ಯ ಸನಾತನ ಆದರ್ಶದ ಪಲವತ್ತತೆಯಲ್ಲಿ ಹುಟ್ಟಿರುವ ಮಹಾನ್ ಮಣಿಗಳು. ಇದು ಬೆಳೆಯುತ್ತಿರುವುದು ಹತ್ತು ಹಲವು ವಿಚಾರ ಎಂಬ ಜಲ ಸಂಗಮಗಳ ಆಸರೆಯಲ್ಲಿ. ಅವುಗಳ ಪರಿಣಾಮವೇ ನಮ್ಮ ಯೋಚನೆಯ ದಾಟಿಯನ್ನು ನಾವುಗಳು ಒಂದು ಕ್ಷಣ ಎಲ್ಲಾದರೂ ಒಮ್ಮೆ ಎಡವಿದರೂ ನಮ್ಮ ಅರಿವೇ ನಮಗೆ ಗುರುವಾಗಿ ಯಾವುದು ಸರಿ ಎಂಬುದನ್ನು ನಮಗರಿವಿಲ್ಲದ ರೀತಿಯಲ್ಲಿಯೇ ತಿಳಿಸಿರುತ್ತದೆ.

ಯೋಚಿಸಿ ಪ್ರತಿಯೊಬ್ಬರಿಗೂ ಏನಾದರೂ ತಪ್ಪು ಮಾಡಿದಾಗ ಯಾಕೇ ಬೆಸರವಾಗುತ್ತದೆ? ಯಾಕೇ ನಾವುಗಳೇ ನಮ್ಮ ನಮ್ಮಲ್ಲಿ ತುಂಬ ಚಿಕ್ಕವಾರದೇವು ಅನಿಸುತ್ತಿರುತ್ತದೆ. ಯಾಕೆಂದರೇ ನಾವುಗಳು ಇರುವ ನಮ್ಮ ಈ ಭವ್ಯ ವಾತಾವರಣವೇ ಅಂಥ ಒಂದು ಭಾವನೆಯ ಬೆಳಕಿಗೆ ಕಾರಣ. ಅದನ್ನು ನಾವುಗಳು ಎಲ್ಲಿಯೇ ಇದ್ದರೂ ಮರೆಯಲಾಗದು.

ಆದರೂ ನಾವುಗಳು ನಮ್ಮ ಮುಂದೆ ಏನಾದರೂ ಒಂದು ಘಟನೆ ,ಮಾತು, ಕೆಲಸ, ನಡೆ, ಯೋಚನೆ ಸುತ್ತಲಿನವರಿಗೆ ಖೇದ/ಕಸಿವಿಸಿಯನ್ನುಂಟು ಮಾಡುವ ರೀತಿಯಲ್ಲಿ ಮಾಡುವ ರೀತಿಯಲ್ಲಿ ಇದ್ದರೇ ಮುಲಾಜೇ ಇಲ್ಲದ ರೀತಿಯಲ್ಲಿ ಖಂಡಿಸುವುದು ಪ್ರತಿಯೊಬ್ಬರಿಗೂ ಇರುವ ಒಂದು ಹಕ್ಕು.

ನಮ್ಮ ಸಂತೋಷದ ಕ್ಷಣ ನಮ್ಮ ಅಕ್ಕಪಕ್ಕದವರಿಗೆ ಅನಾನೂಕೂಲವಾಗುವ ರೀತಿಯಲ್ಲಿ, ತೊಂದರೆಯನ್ನು ಒದಗಿಸಿದರೇ ಆ ಒಂದು ಸಂತೋಷ ನಿಜವಾದ ಸಂತೋಷವಂತೂ ಎಂದಿಗೂ ಅಲ್ಲ.

ಇದನ್ನು ಪ್ರತಿಯೊಬ್ಬರೂ ಸಾರ್ವಜನಿಕವಾಗಿ ಯಾವಾಗ ನಾವುಗಳು ಇರುತ್ತೇವೋ ಅಂಥ ಸಮಯದಲಿ ಅರಿತು ನಡೆಯಬೇಕು. ಅಲ್ಲಿ ನಾವುಗಳು ಮಾಡುವ/ಮಾತನಾಡುವ/ವರ್ತಿಸುವ ಬಗೆಗೆ ಯಾರು ಏಕ್ ದಮ್ ಮಾತನಾಡುವುದಿಲ್ಲ ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದರೇ ಅವರುಗಳು ನಾವು ಮಾಡುವುದನ್ನು ಒಪ್ಪಿಕೊಂಡಿದ್ದಾರೆ ಎಂಬ ಅರ್ಥವಂತೂ ಎಂದಿಗೂ ಅಲ್ಲ.

ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಕಸಿವಿಸಿಯಲ್ಲಿಯೇ ನಿಮಗೆ ನಿಶಬ್ಧವಾಗಿ ಹಿಡಿ ಶಾಪವನ್ನು ಹಾಕಿರುತ್ತಾರೆ ಎಂಬುದನ್ನು ಮನದಟ್ಟು ಮಾಡಿಕೊಂಡಿರಬೇಕು.

ಅಲ್ಲವಾ ಎಷ್ಟೊಂದು ಜೋಕೆಯಾಗಿರಬೇಕಾಪ್ಪಾ..?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ