ಗುರುವಾರ, ಏಪ್ರಿಲ್ 7, 2011

"ಗೆದ್ದು ಬಾ ಭಾರತ" ಎಂದು ಹರಸಿದ್ದರು



ಇಡೀ ದೇಶ ಒಂದು ಸಂಮೋಹನಕ್ಕೆ ಒಳಪಟ್ಟಿತ್ತು. ಅವರಿಗೆ ತಾವುಗಳು ಯಾವುದರ ಬಗ್ಗೆ ಯೋಚಿಸುತ್ತಿದ್ದೇವೆ? ಯಾವುದನ್ನು ಏನು ಮಾಡುವುತ್ತಿದ್ದೇವೆ ಎಂಬುದನ್ನು ಮರೆತೆ ಬಿಟ್ಟಿದ್ದರು. ಎಲ್ಲರ ಒಂದೇ ಆಕಾಂಕ್ಷೆ, ಒಂದೇ ಕನಸು, ಒಂದೇ ಉತ್ಸಹ "ಗೆದ್ದು ಬಾ ಭಾರತ". ದೇಶದ ಪ್ರತಿಯೊಬ್ಬ ಭಾರತೀಯನ ಉಸಿರಾಟ ಇದಕ್ಕಾಗಿ ಕಾಯುತ್ತಿದೆಯೇನೋ ಎಂಬಂತೆ ಅಬಾಲವೃದ್ಧರಿಂದ ಇಡೀದು ಪ್ರಧಾನ ಮಂತ್ರಿ ಮಹೋದಯರವರೆಗೆ ಅದೇ ಒಂದು ಮಾತು "ಗೆದ್ದು ಬಾ ಭಾರತ". ಅಷ್ಟು ಮಾತ್ರ ಸಾಕು.

ಆ ಎರಡು ದಿನ ದೇಶಕ್ಕೆ ದೇಶವೆ ಸ್ತಬ್ಧ! ಅಘೋಷಿತ ಭಾರತ್ ಬಂದ್! ತಮ್ಮ ಕೆಲಸ ಕಾರ್ಯಗಳಿಗೆ ಅಂದು ಪೂರ್ಣ ವಿರಾಮ. ತಾವು ಕೆಲಸ ಮಾಡುವ ಕಂಪನಿಗಳಿಗೆ ಅಂದು ಅರ್ಧ ದಿನದ ರಜೆ. ತುರ್ತು ಕೆಲಸ ಮಾಡಲು ಬಂದಂತಹ ನೌಕರುಗಳಿಗೆ ಅಲ್ಲಿಯೇ ಅವರುಗಳು ದೊಡ್ಡ ಪರದೆಯಲ್ಲಿ ವಿಕ್ಷಿಸಲು ಮತ್ತು ತಮ್ಮವರ ಕನಸಿಗೆ ಸಾಥ್ ನೀಡಲು ವ್ಯವಸ್ಥೆ.....

ಯಾಕೇ? ಏನೂ ಎಂಬುದನ್ನು ಪ್ರತಿಯೊಬ್ಬರಿಗೂ ಗೊತ್ತು. ಆ ಒಂದು ಕನಸು ಹಿಡೇರುವ ದಿನ, ಕ್ಷಣಕ್ಕಾಗಿ ಜಾತಕ ಪಕ್ಷಿಯಂತೆ ಕಾಯುವ ಕ್ಷಣ! ಪ್ರತಿಯೊಂದು ಕ್ಷಣ ಕ್ಷಣವನ್ನು ಉಸಿರು ಬಿಗಿ ಹಿಡಿದು ಟಿ.ವಿ ಯ ಮುಂದೆ ಕಾದುಕೊಂಡಿದ್ದು, ಸ್ನೇಹಿತರು, ಹೆತ್ತವರು, ಜೊತೆಗಾರರ ಜೊತೆಯಲ್ಲಿ ಕಣ್ಣನ್ನು ಅತ್ತ ಇತ್ತ ಚಲಿಸದಂತೆ ಆ ಕ್ಷಣವನ್ನು ತನ್ನ ಕಣ್ಣಲ್ಲಿ ಮಾತ್ರ ಹಿಡಿದು ಇಡಬೇಕು ಎಂಬ ಹಂಬಲ!

ದೇಶದ ಬಗ್ಗೆ ವಿಪರೀತವಾದ ಭಕ್ತಿಯ ದಾರಳ ಮನಸ್ಸು. ನಮ್ಮ ದೇಶ ಅಂದರೇ ಏನೂ ತಿಳಿದಿರುವಿರಿ ಎಂಬ ಮಾತು. ನಾವುಗಳು ಸಾಧಿಸೇ ಸಾಧಿಸುತ್ತೇವೆ ಎಂಬ ಭರವಸೆಯ ನೋಟ.

ಹನ್ನೊಂದು ಮಂದಿಗಳು ಭಾರತದ ಪರ ತಮ್ಮ ಹೋರಾಟವನ್ನು ಆ ಎರಡು ದಿನಗಳಲ್ಲಿ ನಡೆಸಿದ್ದರು. ಮೊದಲನೆಯದು ಪಾಕ್ ನ ವಿರುದ್ಧ ಮತ್ತು ಮನ್ನೆಯ ಶನಿವಾರದಂದು ಲಂಕಾ ಪಡೆಯ ಜೊತೆ. ಅವರ ಹುಟ್ಟಾಡಗಿಸಲೇ ಬೇಕೆ ಬೇಕು ಎಂಬ ಭಾರತೀಯರ ಮನಸ್ಸನ್ನು ಅರಿತವರಂತೆ ಹೋರಾಟಕ್ಕೆ ಸಜ್ಜಾಗಿದ್ದರು.

ಸಜ್ಜಾಗಿದ್ದರೂ ಅಂದರೇ ಆಗಲ್ಲ ಸ್ವಾಮಿ. ಇಡೀ ೧೨೧ ಕೋಟಿ ಹೃದಯಗಳ ಅರಕೆ, ಕೋಟಿ ಮನಸುಗಳ ಉಪವಾಸ, ಕೋಟಿ ಕೋಟಿ ಮಂದಿಯ ದೇವರ ಪೊಜೆ, ಕೋಟಿ ಕೋಟಿ ವೈವಿದ್ಯಮಯ ಹರಕೆ. ನಮ್ಮ ದೇಶ ಗೆದ್ದರೇ ನಾವು ಹೀಗೆ ನಮ್ಮ ಹನ್ನೊಂದು ಮಂದಿಗಳಿಗೆ ಹೀಗೆ ಹೀಗೆ ಇದನ್ನು ಇದನ್ನು ಅರ್ಪಿಸುವೇ ಎಂಬ ವಾಗ್ಧಾನ. ಹಿರಿ ಕಿರಿಯರೆನ್ನದೇ ಪ್ರತಿಯೊಬ್ಬರೂ ಒಂದೊಂದು ಅರಕೆಯನ್ನು ತಮ್ಮ ಮನದಲ್ಲಿಯೇ ಇಟ್ಟುಕೊಂಡಿದ್ದರು.

ಸಾಂಪ್ರದಾಯಿಕ ವೈರಿಪಡೆ ಪಾಕ್ ಎಂಬುದು ಇಲ್ಲಿನ ಜನಗಳ ದೃಷ್ಟಿ ಏನಾದರೂ ಪರವಾಗಿಲ್ಲ. ಈ ಒಂದು ಪಂದ್ಯದಲ್ಲಿ ನಮ್ಮವರೂ ಅವರುಗಳಿಗೆ ಮಣ್ಣು ಮುಕ್ಕಿಸಬೇಕು.

ಮಾಧ್ಯಮಗಳನ್ನು ಕೇಳಬೇಕೇ ಇಂದು ಇದು ಒಂದು ಕಾರ್ಗಿಲ್ ಯುದ್ಧ ಇಪ್ಪತ್ತೇರಡು ಯೋಧರ ಹೋರಾಟ/ಮೂರನೇಯ ವಿಶ್ವ/ಶಾಂತಿ ಯುದ್ಧ ಎಂಬ ಮಾತುಗಳು.

ಅದಕ್ಕೆ ಪೂರಕವೆಂಬಂತೆ ನಮ್ಮ ಮಂತ್ರಿ ಮಹೋದಯರಗಳು, ಆ ದೇಶದ ಮಂತ್ರಿ ಮಹೋದಯರುಗಳು ರಾಜಕೀಯ ದುರಿಣರುಗಳು ಈ ಹೋರಾಟಕ್ಕೆ ಇಡಿಯಾಗಿ ಸಾಕ್ಷಿಭೂತರಾಗಿದ್ದರು. ತಮ್ಮ ಎಲ್ಲ ಕೆಲಸಗಳನ್ನು ಬದಿಗಿಟ್ಟು ಯುದ್ಧ ಭೂಮಿಯೆಂಬ ಮೊಹಾಲಿಯ ಕ್ರೀಡಾಂಗಣದಲ್ಲಿ ಸೇರಿದ್ದರೂ. ಒಂದೊಂದು ಹೋಡೆತಕ್ಕೂ ನಮ್ಮವರ ಕೂಗು ಉತ್ಸಹವನ್ನು ನೋಡಿಯೇ ನಲಿಯಬೇಕು. ನಮ್ಮವರಲ್ಲಿ ಏನಾದರೂ ಒಬ್ಬರೂ ತಮ್ಮ ಪ್ರಯತ್ನದಲ್ಲಿ ಎಡವಿದರೆ ನಿರಾವ ಕಪ್ಪನೆಯ ಮೌನ! ವರ್ಣನೆಗೆ ನಿಲುಕದು. ಹೋರಾಟದ ಕೊನೆ ಕೊನೆಯ ಕ್ಷಣದಲ್ಲಿ ಕೋಟಿ ಕೋಟಿ ಮಂದಿಯ ಎಕ್ಸೈಟ್ ಮೆಂಟ ಹೇಳತಿರದು.

ಇಷ್ಟೊಂದು ಕೋಟಿ ಮನಸ್ಸುಗಳ ಹಂಬಲವನ್ನು ಬಲ್ಲವರೆಂಬಂತೆ ನಮ್ಮ ಪಟುಗಳು ಅವರನ್ನು ನುಣ್ಣಗೇ ಮಾಡಿ ಮನೆಗೆ ಅಟ್ಟಿದರು. ಆ ಸಮಯಕ್ಕೆ ಸರಿಯಾಗಿ ನಮ್ಮ ಜನಗಳಲ್ಲಿ ಸಂಭವಿಸಿದ ಉತ್ಸಾಹದ ಎಲ್ಲೆಗೆ ಕೊನೆಯೇ ಇಲ್ಲವೇನೂ? ರಸ್ತೆ ರಸ್ತೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ "ಭಾರತಾಂಬೇ ಜೈ" ಈ ಮಾತು ನಮ್ಮ ತ್ರಿವರ್ಣ ದ್ವಜದೊಂದಿಗೆ ವಿಜಯದುಂದುಬಿಯ ಪ್ರಸರಣ. ಥರಾವೇರಿ ಮೊಬೈಲ್ ಎಸ್. ಎಂ. ಎಸ್ ಗಳೊಡನೆ ಎಲ್ಲರೂ ಪರಸ್ಪರ ತಮ್ಮ ಸಂತೋಷವನ್ನು ಆಚರಿಸಿಕೊಂಡರು.

ನೀಲಿ ಪಡೆಯ ಹೋರಾಟದ ವಿಜಯದ ಹಾದಿಗೆ ಕೇವಲ ಒಂದೇ ಒಂದು ಹೆಜ್ಜೆ ಅದರ ಹೋರಾಟ ಶನಿವಾರ ವಾರಾಂತ್ಯದಲ್ಲಿ ನಡೆಯುತ್ತಿರುವುದರಿಂದ ಪ್ರತಿಯೊಬ್ಬರೂ ಅದರ ಆಚರಣೆಗೆ ಬಹು ವಿಧದಲ್ಲಿ ಸಜ್ಜಾಗಿದ್ದರೂ ಎಂದರೇ ಅತಿಶಯೋಕ್ತಿಯಲ್ಲ.

ಬಂದೇ ಬಿಟ್ಟಿತು. ಅಂದು ಮಹಾಯುದ್ಧದ ಅಂತ್ಯದ ದಿನ. ಲಂಕಾಪಡೆಯನ್ನು ಸರಿಗಟ್ಟಿ ೨೮ ವರ್ಷಗಳ ಕನಸನ್ನು ನನಸು ಮಾಡುವ ಸಮಯ. ಎಲ್ಲರ ಮನಸ್ಸು ಆ ಒಂದು ಕ್ಷಣ ನಿಜವಾಗಲಿ ಎಂಬ ಮೌನ ಪ್ರಾರ್ಥನೆ ಮಾತ್ರ.

ಹೋರಾಟದ ಮದ್ಯದಲ್ಲಿ ನಮ್ಮವರು ಸ್ವಲ್ಪ ಮುಗ್ಗರಿಸಿದಾಗ.. ಲಂಕಾಪಡೆಯ ಕೈ ಮೇಲಾದಾಗ ಪ್ರೇಕ್ಷಕರ ಮುಖ ನೋಡಲು ಸಾಧ್ಯವಾಗುತ್ತಿರಲಿಲ್ಲ.. ಮನಸ್ಸು ಕಸಿ ವಿಸಿ.

ಟಿವಿಯಲ್ಲಿ ರಜನಿಕಾಂತರನ್ನು ತೋರಿಸಿದ ಸಮಯದಲ್ಲಿ ಪುನಃ ಎಸ್. ಎಂ.ಎಸ್ ಗಳ ಭರಾಟೆ ರಜನಿಕಾಂತ ಸ್ಟೇಡಿಯಂ ನಲ್ಲಿ ಇದ್ದಾರೆ ಗೆಳೆಯರೇ ಜಯ ನಮ್ಮ ಪರ ಚಿಂತಿಸಬೇಡಿ ಎಂಬ ಸಾಲುಗಳ ಹರಿದಾಟ.



ಪ್ರತಿಯೊಂದು ಗಳಿಗೆಯನ್ನು ಯೋಚಿಸುತ್ತಾ ಪ್ರತಿಯೊಬ್ಬರ ನೋಟ. ನಮ್ಮ ಆಟಗಾರರಿಗೂ ಅದೇಷ್ಟು ಒತ್ತಡ ಇತ್ತೋ ಬಲ್ಲವರೇ ಬಲ್ಲರು. ಆದರೂ ಅವರುಗಳು ತಮ್ಮ ಜವಬ್ದಾರಿಯನ್ನು ಅರಿತು ಎದುರಾಳಿಗಳನ್ನು ಹೋರಾಡಿದರು. ನಮ್ಮ ದೊನಿ ಮನಿಯಾ ನಾಯಕನು ಕೊನೆಯ ಕ್ಷಣಗಳಲ್ಲಿ ತನ್ನ ಸ್ಥಾನಕ್ಕೆ ತಕ್ಕಂತೆ ಆಟವಾಡಿ ಇನ್ನೂ ಏನೋ ಜಯ ನಮ್ಮ ಕಡೇ ಎಂಬಂತೇ ಕೊನೆಯ ಹೊಡೆತವನ್ನು ಪ್ರೇಕ್ಷಕರು ಕುಳಿತಿರುವೆಡೆಗೆ ಅಟ್ಟಿದಾಗ.. ವಂದೇ ಮಾತರಂ! ವಂದೇ ಮಾತರಂ! ನಾವುಗಳು ೨೮ ವರ್ಷಗಳ ನಂತರ ವಿಶ್ವ ಛಾಂಪಿಯನ್ಸ್! ನಿರೀಕ್ಷೆಯನ್ನು ನಿಜ ಮಾಡಿದ್ದೇವೆ.

ದೇಶಕ್ಕೆ ದೇಶವೇ ಅಂದಿನ ರಾತ್ರಿ ಸಂಭ್ರಮಿಸಿತು. ಪಟಾಕಿಯನ್ನು ಹಚ್ಚುವುವವರು, ಕೊಗುವವರು, ನರ್ತಿಸುವವರು, ಕುಡಿಯುವವರು, ಸಿಹಿ ಹಂಚುವವರು, ಒಬ್ಬರಿಗೊಬ್ಬರು ತಬ್ಬಿಕೊಂಡು ತಮ್ಮ ಆನಂದ ಬಾಷ್ಫವನ್ನು ಹರಿಸಿಯೇ ಬಿಟ್ಟರು.

ಟಿ.ವಿ ಪರದೆಯ ಮೇಲೆ ಆ ಎಲ್ಲಾ ನಮ್ಮ ಆಟಗಾರರು ಕನಸಿನಲ್ಲಿಯೇ ತೇಲುವುತ್ತಿರುವೆವು ಎಂಬಂತೆ ಆನಂದ, ಸಂತೋಷದ ಕಟ್ಟೆಯನ್ನೇ ಹೋಡೆದು ಹೋಗಿರುವಂತೆ ಸಂಭ್ರಮಿಸಿಬಿಟ್ಟರು.

ಕೋಟಿ ಕೋಟಿ ರೂಪಾಯಿಗಳ ಬಹುಮಾನದ ಹೊಳೆಯೇ ಹರಿದು ಬಿಟ್ಟಿತು. ಮಂತ್ರಿಗಳು, ರಾಜ್ಯಗಳು ತಮ್ಮ ಕನಸನ್ನು ನನಸು ಮಾಡಿದ ನಮ್ಮ ನೆಚ್ಚಿನ ಆಟಗಾರರಿಗೆ ವಿವಿಧ ರೀತಿಯ ಬಹುಮಾನಗಳ ನದಿಯನ್ನೇ ಹರಿಸಿಬಿಟ್ಟರು.

ಈ ಒಂದು ಸುವರ್ಣ ಕ್ಷಣಗಳಿಗೆ ಸಾಕ್ಷಿಯಾದ ನಾವುಗಳೇ ಧನ್ಯರು ಎಂಬಂತೆ ಪ್ರತಿಯೊಬ್ಬರು ಭಾವಿಸಿದರು. ಅದು ನಿಜ ನಮ್ಮ ದೇಶದಲ್ಲಿ ಕ್ರಿಕೆಟ್ ಗೆ ಇರುವಂತಹ ಪ್ರೋತ್ಸಾಹ ಬೇರೆ ಯಾವ ಆಟಕ್ಕೂ ಇಲ್ಲ. ಅದು ನಮ್ಮ ಉಸಿರು ಎಂಬ ಮಟ್ಟಕ್ಕೆ ನಮ್ಮನ್ನೇಲ್ಲಾ ಆಕ್ರಮಿಸಿಕೊಂಡಿದೆ. ಕ್ರಿಕೆಟ್ ದೇವರನ್ನು ಕೊಟ್ಟ ನಾಡು ಎಂದು ವಿಶ್ವ ಪ್ರಸಿದ್ಧಿಯಾಗಿದೆ.

ಇಂದು ಯಾವುದೇ ಮಗು ಹುಟ್ಟಿದಾಕ್ಷಣ ನಮ್ಮಗಳ ಕನಸು ಮುಂದೆ ಇವನು ಸಚಿನ್ ಮಾತ್ರ ಆಗಲಿ ಎಂಬಂತೆ ಚಿಕ್ಕ ಬ್ಯಾಟ್, ಬಾಲುಗಳನ್ನು ಕಕ್ಕುಲಾತಿಯಿಂದ ಕೊಡಿಸುತ್ತೇವೆ. ಯಾಕೆಂದರೇ ಅಲ್ಲಿ ಕೋಟಿ ಕೋಟಿ ವೈವಾಟು ಇದೆ, ಹೆಸರು ಇದೆ, ಗೌರವವಿದೆ. ಆದರೇ ಅದಕ್ಕೆ ಸಾಕಷ್ಟು ಪರಿಶ್ರಮದ ಅಗತ್ಯವಿದೆ ಎಂಬುದು ಹೋಗುತ್ತಾ ಹೋಗುತ್ತಾ ತಿಳಿಯುವುದು.

ಈ ಕ್ರೀಡೆ ಒಂದು ಕ್ರೀಡೆಯನ್ನಾಗಿ ಇಂದು ವಿಶ್ವ ನೋಡುತ್ತಿಲ್ಲ. ಇದೊಂದು ಉದ್ಯಮವಾಗಿದೆ. ಅಲ್ಲಿ ಹಣದ ಹೊಳೆಯನ್ನೇ ಹರಿಸುತ್ತಾರೆ. ಸೋತರು ದುಡ್ಡು. ಗೆದ್ದರು ದುಡ್ಡು. ಈ ಕ್ರೀಡೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ತಂಡಗಳಿಗೆ ಆಯ್ಕೆಯಾಗಲು ವಿವಿಧ ಲಾಭಿ, ಸಿಪಾರಸ್ಸು ಇತ್ಯಾದಿ ಬೇಕಾಗುತ್ತವೆ. ಅದು ಅಷ್ಟು ಸುಲಭದ ಮಾತಲ್ಲಾ ಬಿಡಿ.

ಆದರೆ ವಿಶ್ವಕಪ್ ಆಟವನ್ನು ಸತತ ಒಂದು ತಿಂಗಳು ನಮ್ಮ ಭಾರತೀಯರು ತಮ್ಮ ತುಂಬು ಹೃದಯದಿಂದ ನಿಜವಾದ ದೇಶಾಭಿಮಾನದಿಂದ ನೋಡಿ ನಮ್ಮವರನ್ನು "ಗೆದ್ದು ಬಾ ಭಾರತ" ಎಂದು ಹರಸಿದ್ದರೂ.

ಸಾಮಾನ್ಯ ಪ್ರಜೆಗೆ ಇದು ಯಾವುದು ಬೇಕಾಗಿಲ್ಲ. ತಾನು ಗೆಲ್ಲಬೇಕು, ತನ್ನ ದೇಶ ಗೆಲ್ಲಬೇಕು ಅದು ನಮ್ಮ ತಂಡದ ಮೊಲಕ ಎಂದು ಬಯಸುತ್ತಾನೆ. ಇದು ಇರಬೇಕು. ಅದೇ ಕ್ರೀಡಾ ಸ್ಫೂರ್ತಿ!

ದೇಶ ದೇಶಗಳ ಗಡಿಯನ್ನು ಕ್ರೀಡೆಯ ಮೂಲಕ ಮಾತ್ರ ಅಳಿಸಲು ಸಾಧ್ಯ ಎಂಬುದು ನಿಜಾವಾಗಬೇಕು. ಮತ್ತು ಎಲ್ಲರನ್ನು ಎಲ್ಲರೂ ಪ್ರೀತಿಸಲೂ ಪ್ರಾರಂಭಿಸಬೇಕು. ಇದು ನಮ್ಮ ನಮ್ಮಗಳಿಂದ ರಾಜ್ಯ, ದೇಶ, ಖಂಡಗಳವರೆಗೆ ಹರಿಯಬೇಕು.

ಹರಿಯುತ್ತಿರಲಿ ನಿತ್ಯನೂತನವಾಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ