ಗುರುವಾರ, ಏಪ್ರಿಲ್ 21, 2011

ಜಾಡು ಯಾವುದಾದರೇನೂ..

ಜಾಡು ಹಿಡಿದು ನಡೆಯುವುದು ನಮ್ಮ ನಿಮ್ಮೆಲ್ಲರ ಅಭ್ಯಾಸ. ಎಲ್ಲರೂ ನಡೆದಾಡಿದ ಬಟ ಬಯಲಾದ ದಾರಿಯಲ್ಲಿ ಆರಾಮವಾಗಿ ನಡೆಯುವುದು ಮನಸ್ಸಿಗೆ ಹಗುರ ಮತ್ತು ತಲುಪಬೇಕಾದ ಗುರಿಯನ್ನು ತ್ರಾಸಿಲ್ಲದೆ ನಿಸ್ಸಂಶಯವಾಗಿ ತಲುಪಬಹುದು ಎಂಬ ಭಾವನೆಯಿರಬೇಕು... ಈ ರೀತಿಯ ಜಾಡಿನಲ್ಲಿ ಯೋಚಿಸದರೇ ನಮ್ಮ ಮನಸ್ಸು ಮತ್ತು ನಾವುಗಳು ಕೊಂಚ ಸೋಮಾರಿತನವನ್ನು ತೋರಿಸುತ್ತೀರುವುತ್ತೇವೋ ಅಥವಾ ವಿವಿಧ ರೀತಿಯ ಪ್ರಾಮುಖ್ಯತೆಗಳಿಂದ ಹೊಸ ಜಾಡಿಗೆ ಕಾಲು ಇಡುವುದಿಲ್ಲವೇನೋ.

ಆದರೆ ಹಳೆ ಜಾಡು - ದಾರಿಯಾದರೂ ಯಾರಿಂದಲೂ ಮೊದಲು ಶುರುವಾಗಿರಬೇಕಲ್ಲವಾ? ಆ ಆನ್ವೇಷಕಾರ ಯಾರು? ಅವನು ಸಹ ನಮ್ಮ ನಿಮ್ಮಂತೆಯೆ ಇರುವವನು ಅಲ್ಲವಾ? ಆದರೂ ಅವನಿಗೂ ಅದರ ಮಹತ್ವವಿದ್ದು ತಾನು ಗುರಿ ಮುಟ್ಟುವ ಕಾಣಬೇಕಾದ ಜಾಗವನ್ನು ಕಾಣಲು ಪ್ರತಿಸಲು ಆ ಹಾದಿ ಹಿಡಿದಿರುವನು ಅಥವಾ ಹಾಗೆಯೇ ಸುಮ್ಮನೆ ಎಂಬಂತೆ ಹೋಗಿ ಅದು ರಹದಾರಿ ಮಾಡಿಕೊಟ್ಟಿತು?

ಇದಕ್ಕೆ ಹಾದಿ ಅಂತ್ಯ ಇಲ್ಲ ಬಿಡಿ ಮಹಾರಾಯರೇ ಎನ್ನಬಹುದು.

ಮೇಲಿನ ಆ ಉದಾಹರಣೆಗಳ ದ್ವಂದ್ವವೇ ನಮ್ಮ ದಿನ ನಿತ್ಯದಲ್ಲಿ ಹಲವು ಹೊಸ ಹೊಸ ವಿಚಾರ, ಯೋಜನೆ, ಯೋಚನೆಗಳು, ಕಾರ್ಯ ಕೆಲಸಗಳಿಗೆ ಅನ್ವಯವಾಗುತ್ತದೆ.

ನಾವುಗಳು ಸರಾ ಸರಿಯಾಗಿ ಹೀಗಾಗಲೇ ಬೇರೆಯವರು ಪ್ರತ್ನಿಸಿದ, ತಿಳಿದ, ನೋಡಿದ, ಕೇಳಿದ, ಓದಿದ ಮಾಡಿದವುಗಳನ್ನೇ ಪುನಃ ಪುನಃ ಎ - ಜ್ ಡ್ ಪುನವರ್ತಿತವಾಗಿ ಮಾಡುತ್ತೇವೆ. ಇದು ಯಾಕೆ?

ನಾವುಗಳು ಹೇಳಬಹುದು. ಮೊಟ್ಟ ಮೊದಲನೇಯ ಉತ್ತರ "ಸಮಯದ ಅಭಾವ ಸ್ವಾಮಿ!" ಎಂದು. ಹಾಗೆಯೇ ರೀಸ್ಕ್ ಪ್ಯಾಕ್ಟರ್ ಕಡಿಮೆ ಸಮಯದಲ್ಲಿ ಅತ್ಯಂತ ತ್ವರಿತವಾಗಿ ಯಾವುದನ್ನಾದರೂ ಪಡೆಯಬೇಕು.. ಅವನು ಏನೂ ಪಡೆದನೋ, ಗಳಿಸದನೋ ಅದನ್ನೇ ನಾನು ಗಳಿಸಬೇಕು ಎಂಬುದು.

ಯೋಚಿಸಿ ನೋಡಿದರೆ ಈ ಪ್ರಪಂಚದಲ್ಲಿರುವ ಸರಾಸರಿ ಜನಗಳೆಲ್ಲಾ ಒಬ್ಬರೂ ಮಾಡಿದ್ದನ್ನೇ ಪುನಃ ಪುನಃ ಮಾಡುತ್ತಿರುತ್ತಾರೆ. ಅಂದ ತಕ್ಷಣ ನಾವುಗಳೆಲ್ಲಾ ಬೇಜಾರಾಗುವ ಅವಶ್ಯಕತೆಯಿಲ್ಲ. ಅದೇ ನಾರ್ಮಲ್ ಗುಣ. ನಾವುಗಳು ನಮ್ಮ ಬಾಲ್ಯವಸ್ಥೆಯಿಂದ ಅದನ್ನು ನಮ್ಮ ತಾಯಿ-ತಂದೆಯವರಿಂದ ನೋಡಿ, ಕೇಳಿ ಅನುಕರಿಸಿ ಅದೇ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸುತ್ತೇವೆ.

ಆದರೇ, ಸೃಜನಾತ್ಮಕ ಎಂದು ನಾವು ಯಾವುದನ್ನು ಕರೆಯುತ್ತೇವೋ ಅದು ಈಗ ಇರುವುದೆಲ್ಲದಕ್ಕಿಂತ ವಿಭಿನ್ನವಾಗಿರುವ ಹೊಸತನ ಹೊಂದಿರುವುದನ್ನು ನಾವುಗಳು ಗುರುತಿಸಬಹುದು. ಅದು ಒಂದು ವಿಶಿಷ್ಟವಾಗಿರುವುದು. ಹೊಸತನವನ್ನು ಹುಡುಕುವ ಮನಸ್ಸು ಶ್ರೇಷ್ಠವಾಗಿರುವುದು. ಅವರೇ ನಮ್ಮ ನಿಮ್ಮ ಸುತ್ತಲಿನ ಜನರಿಗಿಂತ ಭಿನ್ನ ಸಾಧಕರುಗಳು ಮತ್ತು ಅನ್ವೇಷಕರುಗಳು ಎಂದು ಕರೆಯಬಹುದು.

ಯಾವುದೇ ವಿಚಾರ, ವಿಷಯ, ಕಾರ್ಯ ಅದು ಹೊಸತನದಿಂದ ಕೊಡಿದ್ದು, ಅದರಿಂದ ಜನರಿಗೆ ಉಪಯೋಗ, ಖುಷಿ, ತಿಳುವಳಿಕೆ, ಹೀಗೆ ಏನಾದರೂ ಪ್ರಯೋಜನಕಾರಿಯಾಗುವುದು.

ಹಾಗೆಯೇ ಈ ರೀತಿಯ ಹೊಸ ವಿಚಾರ, ವಿಷಯ, ಕಾರ್ಯಗಳ ಜನಕರು ತಾವುಗಳು ದಿನ ನಿತ್ಯ ಕಾಣುವ, ನೋಡುವ, ತಿಳಿದಿರುವುಗಳಿಂದ ಬೇಸತ್ತು, ಸಮಸ್ಯೆಗಳಿಂದ ಮುಕ್ತಿ ಹೊಂದಲು ಹೊಸ ದಾರಿ ಮತ್ತು ಹೊಸ ಕಿರಣವನ್ನು ಹುಡುಕುತ್ತಾ ಅಥವಾ ಇರುವ ಹಳೆತನಗಳಿಂದ ಪ್ರೇರಣೆಗೊಂಡು ತಾನು ಯಾಕೆ ಹೀಗೆ ನಿರೂಪಿಸಬಾರದು ಎಂದು ಚಿಂತಿಸಿ ಪ್ರಸ್ತುತಪಡಿಸುತ್ತಾರೆ. ಹೀಗೆ ಮೇಲಿನ ಎರಡು ಮುಖ್ಯ ಉತ್ತೇಜನಗಳು ಯಾರಿಗಾದರೂ ಹೊಸ ದಾರಿಯನ್ನು ಹುಡುಕಲು ಪ್ರೇರಕವಾಗಿರಲೇಬೇಕು.

ಹೌದು! ಮನುಷ್ಯ ತನ್ನ ಪ್ರಾರಂಭದ ದಿನದಿಂದ ಇಂದಿನ ದಿನಗಳವರೆಗೆ ತನ್ನ ಜೀವನ ಪ್ರಯಾಣದಲ್ಲಾದ ವಿವಿಧ ಕಾಲಘಟ್ಟದಲ್ಲಿ ಮಾರ್ಪಾಡುಗಳೇ ಇದಕ್ಕೆ ಸಾಕ್ಷಿ.

ಹೀಗೆ ಯೋಚಿಸಿದ, ಮಾಡಿದ ಸೃಜನಾತ್ಮಕತೆಯನ್ನು ಪ್ರಚಾರಪಡಿಸಬೇಕು ಮತ್ತು ಅದನ್ನು ಪರಿಚಯಿಸುವವರು ಬೇಕು. ಆಗಲೇ ಅದು ಬೇರೆಯವರಿಗೂ ತಿಳಿದು ಸಮಸ್ತರಿಗೂ ಪ್ರಸರಿಸುವುದು. ಅದು ಹಲವು ರೀತಿಯಲ್ಲಿ ಬೆಳೆಯುತ್ತದೆ. ಮತ್ತು ತಲೆಮಾರುಗಳವರೆಗೆ ನಡೆಯುತ್ತದೆ.

ನಮ್ಮ ಸುತ್ತಲಿರುವ ವಸ್ತು, ವ್ಯಕ್ತಿ, ವಿಚಾರಗಳು, ಹೊಸ ತಾಣಗಳನ್ನು ಗುರುತಿಸುವ ಕಣ್ಣು ಬೇಕು. ಕೇವಲ ನಮ್ಮ ಹಿರಿಯರು ಹೇಳಿದ ಅವರು ಹೋಗಿರುವ ತಿಳಿದಿರುವ ಜಾಡಿನಲ್ಲಿಯೇ ಹೋಗುತ್ತಾ ಹೋಗುತ್ತಾ ಜೆರಾಕ್ಸ್ ಆಗಾದೇ ನಾವುಗಳು ಅವರು ಹೇಳಿದ ಮೌಲ್ಯಯುತ ತಿಳುವಳಿಕೆಯ ಹಾದಿಯಲ್ಲಿ ಹೊಸತನವನ್ನು, ಹೊಸ ಹೊಸ ಕನಸುಗಳನ್ನು, ವಿಚಾರಗಳನ್ನು, ವ್ಯಕ್ತಿಗಳನ್ನು ನಮ್ಮ ಪೀಳಿಗೆಗೆ ತಿಳಿಯಪಡಿಸಬೇಕು.

ಆಗಲೇ ಈ ಸೃಜನಾತ್ಮಕತೆಯೆನ್ನುವುದು ಚಲನೆಯಲ್ಲಿದ್ದು ಮತ್ತು ಅಭಿವೃದ್ಧಿ ಹೊಂದುತ್ತದೆ ಎಂಬುದು ಗೊತ್ತಾಗುತ್ತದೆ. ಹಲವಾರು ಅಂಶಗಳಲ್ಲಿ ಹೊಸ ಹೊಸ ತಂತ್ರಙ್ಞಾನಗಳ ಕ್ರಾಂತಿಗಳನ್ನು ಕಾಣಬಹುದಾಗಿದೆ.

ಏನೇ ಅದರೂ ಹಳಬರಿಗೆ ಅವರ ಯುಗದ ನೋಟವೇ ಪ್ರೀತಿ. ನಮ್ಮವರಿಗೆ ನಮ್ಮ ಯುಗದ ರೀತಿ ನೀತಿ ಪ್ರೀತಿ. ಈ ರೀತಿಯ ಭಿನ್ನ ಭಿನ್ನ ವಿಚಾರದಲ್ಲೂ ವಿಭಿನ್ನತೆಯನ್ನು ನಾವು ಕಾಣಬಹುದು ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ