ಬುಧವಾರ, ಫೆಬ್ರವರಿ 4, 2015

ಜೀವನ ಸಂಘರ್ಷ

ಜೀವನ ಎಲ್ಲಿಂದ ಎಲ್ಲಿಗೊ ಬಂದು ನಿಲ್ಲುತ್ತದೆ. ಇಂದು ಏನಾಗಿದ್ದೇವೋ ಅಂದು ಏನಾಗಿದ್ದೇವೋ ಎಂದು ಪುನಃ ಪುನಃ ಪರಮರ್ಶಿಸಿಕೊಳ್ಳುವಂತೆ ಮಾಡುತ್ತದೆ.

ಇಂದು ಹೀಗೆ ಇರುವುದಕ್ಕೆ ಹತ್ತು ಹಲವಾರು ಹಿಂದಿನ ಶ್ರಮಗಳು ಇರುತ್ತವೆ.

ಏನೂ ಮಾಡದಿದ್ದರೂ ಕಾಲ ಯಾರನ್ನು ಕಾಯದೆ ನಿರಂತರವಾಗಿ ಸಾಗುತ್ತದೆ. ಕಾಲದ ಜೊತೆಯಲ್ಲಿ ನಾವುಗಳು ಸಹ ಸಾಗುತ್ತೇವೆ.

ನಾವು ಬೆಳೆಯುತ್ತೇವೆ, ಕಾಲವು ಎಲ್ಲೆ ಮೀರಿ ಹೋಗಿರುತ್ತದೆ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕಿದವನು ಬದುಕನ್ನು ಸಂಭ್ರಮವಾಗಿಟ್ಟುಕೊಂಡಿರುತ್ತಾನೆ. ಹೇ ಬಿಡು ಅನ್ನುವನು ದಿಕ್ಕುಗೆಟ್ಟು ಕಂಗಾಲಗಿರುತ್ತಾನೆ.

ಅಷ್ಟಕ್ಕೂ ಯಾಕೆ ಪ್ರತಿಯೊಬ್ಬರೂ ಜೀವನದಲ್ಲಿ ಹೀಗೆ ಇರಬೇಕು. ಇದನ್ನೇ ಮಾಡಬೇಕು. ಹೀಗೆ ಇದ್ದರೇ ಚೆನ್ನ! ಇಲ್ಲದಿದ್ದರೇ ಸರಿಯಲ್ಲಾ ಎಂದು ಅಂದುಕೊಳ್ಳುವುದು?



ಸ್ವತಃ ಯಾರನ್ನು ಯಾರು ಕೇಳುವುದಿಲ್ಲ. ದೂಸರಾ ಮಾತಾನ್ನಾಡಿಸುವುದಿಲ್ಲ. ಆದರೂ ನಾವುಗಳೆ ನಮ್ಮ ನಮ್ಮಲ್ಲಿಯೇ ಈ ಸ್ಪರ್ದೆಯನ್ನು ಕಂಡುಕೊಂಡುಬಿಡುತ್ತೇವೆ.

ನಮ್ಮ ನಮ್ಮಲ್ಲಿಯೇ ಒಬ್ಬೊರನ್ನೊಬ್ಬರೂ ಕಟ್ಟ ವೈರಿಗಳಂತೆ ಅವನು ಬೆಳೆದ, ಅವನು ಏನೋ ಮಾಡಿದ, ಅವನು ಅಲ್ಲಿಗೆ ಹೋದ, ಅವನು ಅದನ್ನು ಅಕ್ರಮಿಸಿಕೊಂಡ! ಹೀಗೆ ಬೇರೆಯವರನ್ನು ನೋಡುತ್ತಾಲೆ ನಾವುಗಳು ನಮ್ಮ ನಮ್ಮ ನೆಮ್ಮದಿಯನ್ನು ಕಳೆದುಕೊಂಡು, ಅದರಲ್ಲಿಯೇ ತೊಳಲಾಡಿ ಖುಷಿಪಡುತ್ತಾ, ಉಫ್ ಜೀವನ ಏನೂ ಕಷ್ಟ ಮಗಾ ಏಂದು ವೇದಾಂತ ಹೇಳುತ್ತೇವೆ.

ಇದು ನಾವು ಅಂದುಕೊಳ್ಳುವಷ್ಟು ಸುಲಭವು ಅಲ್ಲ ಮತ್ತು ಕಷ್ಟವು ಅಲ್ಲ. ಇದು ಏಕೆ ಹೀಗೆ ಎಂದು ಅಂದಿನಿಂದ ಇಂದಿನವರೆಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ನಿಂತು ತಮ್ಮಲ್ಲಿಯೇ ಪ್ರಶ್ನಿಸಿಕೊಂಡಿರುತ್ತಾರೆ.

ಉತ್ತರ ಸಿಗಬೇಕು ಸಿಗಬೇಕು ಎಂದು ತಲೆ ಚಚ್ಚಿಕೊಂಡಿರುತ್ತಾರೆ. ಉತ್ತರ ಸಿಗದೇ ಈ ಬದುಕೇ ಇಷ್ಟು ಎಂದು ಮುಂದೆ ಮುಂದೆ ವೇಗದಿಂದ ಓಡುತ್ತಾರೆ. ಚಿಂತೆ ಮಾಡುತ್ತಾ ಕುಳಿತರೇ ಹಿಂದಿನವರು ಇವನನ್ನು ಅನಾಮತ್ತ್ ತುಳಿದುಕೊಂಡು ಕಾಲು ಕಸ ಮಾಡಿಬಿಡುತ್ತಾರೆ.

ಅದಕ್ಕೆ ಈ ಜಂಜಾಟದ ವೇಗದ ಬದುಕು.

ಉಫ್ ಕಾಲು ಎಷ್ಟು ಸವೆದು ಹೋಗಿದೆ.

ಅಷ್ಟೊಂದು ಓಟ!

ಬದುಕು ಯಾವ ಯಾವ ಕಡೆ ಸವೆದು, ಹೊಸತನ ಕಂಡುಕೊಳ್ಳಬೇಕು ಆಯಾ ಕಡೆಗೆ ತಿರುಗಣೆಯಂತೆ ನಿರಂತರ ಮನದ ಮರ್ಮದ ಚಲನೆಯನ್ನು ಕಂಡುಕೊಂಡಿರುತ್ತದೆ.





ಯಾರು ಯಾರನ್ನು ನಿಲ್ಲಿಸುವಂತಿಲ್ಲ. ಎಲ್ಲಾ ಕಾಲಾಯ ತಸ್ಮಯಾಃ ನಮಃ! ನಾವು ಮಾತ್ರ ಬದುಕಬೇಕು. ನಾವು ಮಾತ್ರ ಎಂದೇಂದಿಗೂ ಮುಂದಿರಬೇಕು. ಇಲ್ಲವೆಂದರೆ ಯಾರಿಗೂ ಬೆಲೆ ಇಲ್ಲ. ಮನುಷ್ಯನಿಗೆ ಕುದುರೆಯ ಬೆಲೆ ಬೇಕು ಅಂದರೆ.. ನಿರಂತರ ವೇಗವಾಗಿ ಸಾಗುವಂತಿರಬೇಕು. ಯಾವುದಕ್ಕು ನಿಲ್ಲುವಂತಿಲ್ಲ! ಉಸಿರು ನಿಲ್ಲುವಂತಿಲ್ಲ. ಇಂಥ ದಟ್ಟನೆಯ ಅವಮಾನದಲ್ಲಿ ಅನುಮಾನವಿಲ್ಲದೇ ನಮ್ಮ ನಮ್ಮ ಉಸಿರು ಕಂಡುಕೊಂಡು ನಾವು ಮಾತ್ರ ಉಸಿರಾಡಬೇಕು. ಇದು ಬದುಕು! ನಮಗೆ ಬೇಕಿಲ್ಲದಿದ್ದರೂ ಬೇಕಾದ..ಇದೇ ಮಾತ್ರವಾದ ಬದುಕು.

ಏನೂ ಹೇಳಿದರೂ..ಏನೂ ಕೇಳಿದರೂ ಯಾರೂ ಇದು ಹೀಗೆ ಎಂದು ಒಂದು ಪಾರ್ಮೂಲವಿಲ್ಲದೇ ಎತ್ತಾ ಎತ್ತಾ ಸಾಗುವ ಒಂದು ನಿರ್ದಿಷ್ಟ ಬದುಕು.

ಕಂಡುಕೊಂಡವನು ಕಾಣುತ್ತಾನೆ ಅದರ ಸಂತೋಷ!

ಹುಟ್ಟಿನಿಂದ ಶುರುವಾಗುವ ಈ ಓಟ ಕೊನೆ ಉಸಿರು ಇರುವವರೆಗೂ ನಿಲ್ಲುವುದಿಲ್ಲ. ಪ್ರತಿಯೊಬ್ಬರೂ ಯಾವುದಕ್ಕೂ ಒಂದು (ಕಾಣದ) ಗುರಿಯನ್ನು ನೋಡುವುದಕ್ಕೆ ಸಾಗುತ್ತಿರುವಂತೆ ಈ ಜೀವನ ಓಟ ಕಾಣುತ್ತದೆ.

ಎಲ್ಲಾ ಗೊತ್ತಿದೆ. ಓದಿ, ಕೇಳಿ ತಿಳಿದುಕೊಂಡಿದ್ದೇವೆ. ಇಷ್ಟೇ ಗುರು ಅಂದುಕೊಂಡರು, ಇಲ್ಲಾ ಇನ್ನೂ ಏನೋ ಇದೆ. ಗೊತ್ತಿರುವುದು ಅರೇಪಾವು ಅನ್ನಿಸುತ್ತದೆ ಒಮ್ಮೊಮ್ಮೆ. ಎಲ್ಲಾ ನಿರರ್ಥಕ ಅನಿಸಿದ ಕ್ಷಣವೇ ಏನೋ ಒಂದು ಸಣ್ಣ ಸೂಜಿ ಮನೆಯಷ್ಟು ಅರ್ಥ ಅರ್ಧ ಸತ್ಯವಾಗಿ ಗೊಚರಿಸುತ್ತದೆ.

ಮತ್ತೇ ಪುನಃ ಅದೇ ನಿರಾಸೆ, ಉದಸೀನತೆ, ಜಡತೆ ಮೈಗೊಡುತ್ತದೆ. ಸೂರ್ಯ ಹೇಗೆ ಮುಂಜಾನೆ ಪ್ರಪುಲ್ಲತೆಯ ಕಿರಣವನ್ನು ಮೈ ಸೊಕಿಸುತ್ತಾನೋ ಹಾಗೆಯೇ ಹೊಸ ಆಸೆ ಆಶಾ ಕಿರಣದ ಹಸಿರು ನಮ್ಮ ಮನವನ್ನು ತಣಿಸಿ ಹೊಸ ಜವಬ್ದಾರಿಗೆ ಅಣಿ ಮಾಡುತ್ತದೆ. ಆದರೇ ಯಾಕೋ ಅದು ಸ್ವಲ್ಪ ಕ್ಷಣದಂತೆ ಕಂಡು ಮತ್ತೆ ಸಂಜೆಯ ಸೂರ್ಯ ಮರೆಯಾಗುವಂತೆ ನಮ್ಮ ಮನಸ್ಸು ಏನನ್ನೋ ಬೇಕು ಎಂಬ ಮೊಂಡುತನಕ್ಕೆ ಸಜ್ಜಾಗಿ ಇದು ಅಲ್ಲಾ ಅನಿಸುತ್ತದೆ. ಇದು ಯಾಕೆ? ನಿಜವಾಗಿಯೂ ತಿಳಿದಿಲ್ಲ!

ನೀವು ಏನಾಂತೀರಾ ಗುರು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ