ಶನಿವಾರ, ಜೂನ್ 9, 2012

ಅಭಿಮಾನಿಗಳ ಹುಚ್ಚು ಹೊಳೆ


ಸಾರ್ವಜನಿಕವಾಗಿ ಪ್ರಸಿದ್ಧರಾಗಿರುವವರ ಬಗ್ಗೆ ಸಾಮಾನ್ಯ ಜನಕ್ಕೆ ತುಂಬ ಕುತೂಹಲವಿರುತ್ತದೆ.

ಅದೇ ನಮ್ಮ ಒಂದು ಕೇರಿಯಿಂದ ಮತ್ತೊಂದು ಕೇರಿಗೂ ಗೊತ್ತಿರದ ನಮ್ಮ ನೆರೆಹೊರೆಯವರ ಬಗ್ಗೆ ಅಷ್ಟೊಂದು ದೊಡ್ಡ ಅಚ್ಚರಿ ಭರಿತ ಕುತೂಹಲ ಖಂಡಿತವಾಗಿಯೂ ಯಾರಿಗೂ ಇರುವುದಿಲ್ಲ.

ಯಾಕೆಂದರೇ ಅದೇ ಮುಖವನ್ನು ದಿನದ ಇಪ್ಪತ್ತು ನಾಲ್ಕು ಘಂಟೆ ಹೆಚ್ಚು ಕಡಿಮೆಯಾಗಿ ನೋಡುತ್ತಲೇ ಇರುತ್ತೇವೆ. ಇನ್ನೂ ಈ ನಮ್ಮ ನೆರೆಹೊರೆಯ ವ್ಯಕ್ತಿಗಳೇನೂ ಪೇಪರಲ್ಲಿ, ಟಿ.ವಿ, ಸೀನಿಮಾದಲ್ಲಿ ಬರುವ ಮುಖಗಳಲ್ಲವಲ್ಲಾ. ಅದ್ದರಿಂದ ಅವರುಗಳ ಬಗ್ಗೆ ಹೆಚ್ಚು ಅರಿಯುವ ಮನಸ್ಸಂತೂ ಯಾರೊಬ್ಬರಿಗೂ ಬರುವುದಿಲ್ಲ.

ಆದರೂ ಅವರುಗಳು ತಮ್ಮನ್ನು ತಾವು ಎಷ್ಟರ ಮಟ್ಟಿಗೆ ತೆರೆದುಕೊಳ್ಳುತ್ತಾರೂ ಅಷ್ಟರ ಮಟ್ಟಿಗೆ ಅವರುಗಳನ್ನು ಅರಿಯುವೆವು. ಅದೂ ಬೇಕಾದರೇ ಮಾತ್ರ.

ಅದೇ ಹೆಚ್ಚು ಹೆಚ್ಚು ಸಾಧನೆ ಮಾಡಿರುವವರು, ಸಿನಿಮಾ ತಾರೆಯರುಗಳ,ಲೆಖಕರುಗಳು, ಸೆಲೆಬ್ ಗಳ ಬಗ್ಗೆ ಯಾವಾಗಲೂ ಅತಿ ಹೆಚ್ಚು ಕುತೂಹಲ. ಯಾಕೆಂದರೇ ನಾವುಗಳು ಅವರ ಹಾಗೆ ಇರುವುದಿಲ್ಲ. ಅವರುಗಳು ನಮ್ಮ ಕೈಗೆ ಎಟುಕುವುದಿಲ್ಲ. ಅವರುಗಳ ಲೈಫ್ ಸ್ಟೈಲ್ ನಮ್ಮದಕ್ಕಿಂತ ವಿಭಿನ್ನವಾಗಿರುತ್ತದೆ. ಅವರುಗಳು ನಮ್ಮ ಕಣ್ಣಿಗೆ ಬೀಳುವುದು ಟಿ.ವಿ.ಪತ್ರಿಕೆ ಮತ್ತು ಸಿನಿಮಾಗಳ ಮೂಲಕ ಮಾತ್ರ.

ಅವರ ನಿಜ ಜೀವನದ ಬಗ್ಗೆ ಏನೊಂದು ಗೊತ್ತಿರುವುದಿಲ್ಲ. ಗೊತ್ತಿರುವುದೆಲ್ಲಾ ಕೇವಲ ಸಾರ್ವಜನಿಕವಾಗಿ ಹೇಗೆ ಬಿಂಬಿಸಿಕೊಂಡಿರುತ್ತಾರೋ ಅದು ಮಾತ್ರ.

ಅವರ ಬಗ್ಗೆ ಏನೊಂದು ಚಿಕ್ಕ ಗಾಸಿಪ್ ಬಂದರೂ ಅಚ್ಚರಿಯ ಕಣ್ಣಿನೊಡನೆ ನೋಡುತ್ತೇವೆ ಮತ್ತು ಮಾತನಾಡುತ್ತಾ ಮಾತನಾಡುತ್ತಾ ಸುತ್ತ ಮುತ್ತಲಿನವರಿಗೂ ಹಬ್ಬಿಸಿಬಿಡುತ್ತೇವೆ.

ಅದರಿಂದ ನಮಗೇನೂ ಉಪಯೋಗವಾಗಲಿ ಆಗದಿರಲಿ ಅದು ನಮ್ಮ ಮಾತಿನೊಡನೆ ಹಾಸುಹೊಕ್ಕಾಗಿರುತ್ತದೆ. ಯಾಕೆಂದರೇ ಅವರುಗಳೆನ್ನೇಲ್ಲಾ ನಿತ್ಯ ಬೆರಗುಗಣ್ಣಿನಿಂದ ನೋಡುತ್ತಿರುತ್ತೇವೆ.

ನಮ್ಮಲ್ಲಿ ಇರದ ಯಾವುದೋ ಒಂದು ಉನ್ನತವಾದ ಗುಣ, ಸಾಧನೆ, ನಾಯಕತನ, ಕೆಲಸ-ಕಾರ್ಯಗಳನ್ನು ಹೆಚ್ಚು ಹೆಚ್ಚಾಗಿ ಹುಚ್ಚಾಗಿ ಇಷ್ಟಪಡುತ್ತಿರುತ್ತೇವೆ.

ನಮಗೆ ಗೊತ್ತು ಅವುಗಳನ್ನು ನಮ್ಮಿಂದ ಮಾಡಲು ಸಾಧ್ಯವಿರುವುದಿಲ್ಲ ಎಂದು. ನಮ್ಮಲ್ಲಿ ಆ ಕನಸು ಇರುತ್ತದೆ. ಅದರೆ ಅದನ್ನು ನನಸು ಮಾಡಿಕೊಳ್ಳಲು ಸಮಯ, ಶಕ್ತಿ ಸಾಕಾಗಿರುವುದಿಲ್ಲ.

ಅದಕ್ಕಾಗಿ ಅಂಥವರನ್ನು ನಮ್ಮ ಆದರ್ಶವಾಗಿಟ್ಟುಕೊಳ್ಳುತ್ತೇವೆ. ಇಷ್ಟೊಂದು ಪ್ರಸಿದ್ಧಿಯನ್ನು ಪಡೆದಿರುವವರು ಎಂದರೇ ಅವರ ಸಾಧನೆಯ ಪಥ ಯಾವುದು? ಅದನ್ನು ಮುಟ್ಟಿದ ಬಗೆ ಹೇಗೆ? ಅವನ ನಿಜವಾದ ಗುಣಾವಾಗುಣಳೇನೂ? ಬಾಲ್ಯದಲ್ಲಿ ಹೇಗಿದ್ದಾ? ಕಾಲೇಜು ಜೀವನ, ವೃತ್ತಿ ಜೀವನ? ಅವನ ಗೆಳೆಯರು ಯಾರು? ಅವನ ಒಳ್ಳೆಯ ಕೆಟ್ಟ ಹವ್ಯಾಸಗಳೇನೂ? ಇತ್ಯಾದಿಯನ್ನು ತಿಳಿಯುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ.

ಇದೇ ಎಲ್ಲಾ ಸೆಲೆಬ್ರೇಟಿಗಳ ಬಗ್ಗೆ ನಮ್ಮ ನಿಮ್ಮಂತಹ ಸಾಮಾನ್ಯ ಮಂದಿಗೆ ವಿಷಯ ತಿಳಿದುಕೊಳ್ಳಬೇಕು ಎಂಬ ಕಾತುರತೆ. ಅವನ ಅವಳ ಜೀವನ ಶೈಲಿಯ ಯಾವುದೋ ಒಂದು ಘಟನೆ, ಸನ್ನಿವೇಶ ನಮ್ಮದಾಗಿಬಿಟ್ಟರೇ ಮುಗಿಯಿತು. ನೋಡು ಅವನು ಸಹ ನಮ್ಮ ಹಾಗೆಯೇ ಮಣ್ಣು ಹೊತ್ತಿದ್ದಾನೇ. ಆದರೂ ಅವನು ಅಲ್ಲಿ ನಾವು ಇಲ್ಲಿ. ಸ್ವಲ್ಪದರಲ್ಲಿ ನಮ್ಮದುಕ್ಕೇ ಮೀಸ್ ಆಗಿಬಿಟ್ಟು ನಾನು ಇಲ್ಲಿದ್ದೇನೆ. ಅವನು ಅಲ್ಲಿದ್ದಾನೆ. ಎಂಬ ಮಾತನ್ನು ದಾರಾಳವಾಗಿ ಹೇಳಿಕೊಳ್ಳುತ್ತಿರುತ್ತೇವೆ.

ಅದಕ್ಕೆ ಇರಬೇಕು. ಅಭಿಮಾನಿಗಳ ಹುಚ್ಚು ಹೊಳೆಯಲ್ಲಿ ಇಂದಿನ ಎಲ್ಲಾ ಪ್ರಸಿದ್ಧ ವ್ಯಕ್ತಿಗಳೆಲ್ಲಾ ಮುಳುಗೇಳುತ್ತಿದ್ದಾರೆ.

ತಾವು ಕಾಣುವ ಬೆಳ್ಳಿ ಪರದೆಯ ಮೇಲೆ ಬರುವ ಸಿನಿಮಾ ನಾಯಕ/ನಾಯಕಿಯರನ್ನಂತೂ ಅವರು ಎಷ್ಟು ಇಷ್ಟಪಡುತ್ತಾರೆ ಎಂದರೇ ಅವರು ನಿಜ ಜೀವನದಲ್ಲಿ ಬೆಳ್ಳಿ ಪರದೆಯ ಮೇಲೆ ಇರುವಂತೆಯೇ ಇರುವವರು ಎಂಬ ಭ್ರಮೆಯಲ್ಲಿ ಪೂಜೆ ಮಾಡುವಷ್ಟರ ಮಟ್ಟಿಗೆ.

ನನಗಂತೂ ನಾನು ಓದುವ ಕಥೆ, ಕಾದಂಬರಿಗಳನ್ನು ಬರೆಯುವ ಲೇಖಕರ ಜೀವನ ಚರಿತ್ರೆ, ನಿಜ ಜೀವನದ ತುಣುಕಗಳನ್ನು ಓದಲು ತುಂಬ ಖುಷಿಯಾಗುತ್ತದೆ.

ಅಲ್ಲಾ ಇಂಥ ಸುಂದರವಾದ ಕೃತಿಗಳನ್ನು ಎಲ್ಲಿ ಕೂತು, ಯಾವ ಸಮಯದಲ್ಲಿ ಅದು ಹೇಗೆ ಇಷ್ಟೊಂದು ಸುಂದರವಾದ ಅನುಭವ ಪದಗಳ ಜೊಡಣೆಯನ್ನು ಮಾಡಿರುವುದನ್ನು ತಿಳಿಯಬೇಕು ಅನಿಸುತ್ತದೆ.

ಅದು ಹೇಗೆ ಕವಿ ಸಮಯವಿರುತ್ತದೆ.ಅವರಿಗೆ ಅದು ಹೇಗೆ ಕೃತಿಗೆ ಇಳಿಸಬೇಕೆನಿಸುತ್ತದೆ. ಪಾತ್ರಗಳನ್ನೆಲ್ಲಾ ಅದು ಹೇಗೆ ಕಲ್ಪಿಸಿಕೊಂಡು ಅವರನ್ನು ಪದಗಳಲ್ಲಿ ಹಿಡಿದುಹಿಡುತ್ತಾರೆ? ಇತ್ಯಾದಿ ಇತ್ಯಾದಿ ನಮಗೆ ಗೊತ್ತಿರದ ಕೃತಿಕಾರನ ಇನ್ನೊಂದು ಮುಖವನ್ನು ಹತ್ತಿರದಿಂದ ಕಾಣುವ ಬಯಕೆಯಾಗುತ್ತದೆ.

ಅವರು ಕೊಡುವ ಕೃತಿ, ಪದಗಳ ಸಾಲಿನ ಮೊಲಕ ನಮ್ಮ ಸಹೃದಯಕ್ಕೆ ಹತ್ತಿರವಾದವರನ್ನು ಇನ್ನೂ ಹೆಚ್ಚು ಹೆಚ್ಚು ಅರಿಯುವ ಹಂಬಲವಂತೂ ಎಲ್ಲಾ ಓದುಗರಿಗೂ ಇರುತ್ತದೆ.

ಕೃತಿಯನ್ನು ಇಷ್ಟಪಡುತ್ತೇವೆ ಎಂದರೇ ಆ ಕೃತಿ ಜನಕನನನ್ನು ಇಷ್ಟಪಟ್ಟೇಪಡುತ್ತೇವೆ. ಯಾಕೆಂದರೇ ನಮಗೆ ಅವನು ಹೇಳುವ ಕಥೆ, ನೀತಿ, ಘಟನೆ, ಸನ್ನಿವೇಶ ನಮ್ಮ ಎದೆಯನ್ನು ತಟ್ಟಿರುತ್ತದೆ. ಅದಕ್ಕಾಗಿಯೇ ಅವನ ಪ್ರತಿಯೊಂದು ಹೆಜ್ಜೆಯನ್ನು ದೂರದಿಂದ ಸಿಗುವ ಮಾಧ್ಯಮಗಳ ಮೊಲಕ ಬಿಟ್ಟು ಬಿಡುದೇ ಗಮನಿಸುತ್ತಿರುತ್ತೇವೆ.

ಇದಕ್ಕಾಗಿಯೇ ಎಲ್ಲಾ ಸಾಧಕರ ಜೀವನ ಚರಿತ್ರೆಗಳಿಗೆ ಬಹು ಮಹತ್ವ ಬರುತ್ತದೆ.

ನಮ್ಮ ನಿಮ್ಮಂತಹ ಸಾಮಾನ್ಯನ ಚರಿತ್ರೆಯನ್ನು ಯಾರು ಇಷ್ಟಪಡುತ್ತಾರೆ?

ಎಲ್ಲಾರಿಗಿಂತ ಮೀಗಿಲಾಗಿ ವಿಭಿನ್ನವಾಗಿ ಸಾರ್ವಜನಿಕವಾಗಿ ಗುರುತಿಸಿಕೊಂಡಂತವರ ಜೀವನ ಪಥವನ್ನು ಪ್ರತಿಯೊಬ್ಬರೂ ಓದೋಣ ಅನಿಸುತ್ತಿರುತ್ತದೆ.

ಅದು ಕೇವಲ ವಿಷಯ ತಿಳುವಳಿಕೆಯೇ ಅಥವಾ ಅವರಂತೆಯೇ ನಾವುಗಳು ಬದುಕಲು ಹಾಕಿಕೊಟ್ಟ ಹಾದಿಯೇ?

ಇಲ್ಲಿಯವರೆಗೂ ಎಷ್ಟೊಂದು ಮಹಾನೀಯರುಗಳು ಈ ಭುವಿಯ ಮೇಲೆ ಅವತರಿಸಿದ್ದಾರೆ. ಅವರುಗಳ ಬಗ್ಗೆ ನಿತ್ಯ ಅಗಾಧವಾದ ಸಾಹಿತ್ಯ ಹರಿದು ಬರುತ್ತಿದೆ. ಇವುಗಳೆಲ್ಲಾ ಒಬ್ಬರಲ್ಲಾ ಒಬ್ಬರ ಮೇಲೆ ಪ್ರಭಾವ ಬೀರಿರಲೇಬೇಕು.

ಪುನಃ ಇಲ್ಲಿ ಲೋಕೊಭಿನ್ನರುಚಿ. ಅವರವರಿಗೆ ಇಷ್ಟವಾಗುವವರು ಅವರುಗಳಿಗೆ ಅರಾಧ್ಯ ದೇವರುಗಳಾಗಿ ಅವರಿಗೆ ಮಾದರಿ. ಅವರುಗಳೇ ಇವರುಗಳಿಗೆ ದ್ರೋಣಾಚಾರ್ಯರಾಗುವವರು.ನಮ್ಮ ನೆಲೆಯಲ್ಲಿ ಏನಾದರೂ ಸಾಧಿಸುವಂತಹ ಪ್ರೇರಪಣೆಯಾಗುವವರು.

ವ್ಯಕ್ತಿ ವ್ಯಕ್ತಿಗಳ ಬಗ್ಗೆ ಪೂರ್ಣವಾಗಿ ಅರಿಯುವಂತಹ ವಿಧ್ಯೆ ಸಾಮಾನ್ಯವಾಗಿ ಬಲು ಕಠಿಣವಾದದ್ದು. ದಕ್ಕಿದಷ್ಟು ಮಾತ್ರ ನಮ್ಮದಾಗುತ್ತದೆ. ಏನೇ ಮಾಡಿದರೂ ಅವರಂತೆಯೇ ಯಾರೊಬ್ಬರೂ ಆಗಲು ಸಾಧ್ಯವಿಲ್ಲ.ಎಂದಿಗೂ ಅವರು ಅವರೇ, ನಾವು ನಾವೇ.

ಇದೇ ಕಾರಣವಿರಬಹುದು. ಜಗತ್ತು ಇಷ್ಟೊಂದು ವೈವಿಧ್ಯಮಯವಾಗಿ ಕ್ಷಣ ಕ್ಷಣಕ್ಕೂ ಜೀವಂತವಾಗಿ ಹಚ್ಚ ಹಸಿರಾಗಿ ಎಂದಿಗೂ ಬೋರೂ ಎಂದು ಅನಿಸದಾಗಿರುವುದು, ಕುತೂಹಲಗಳ ಗಣಿಯಾಗಿರುವುದು.

ಮೊಗೆದಷ್ಟು  ಸಿಗುತ್ತಲೇ ಇರುತ್ತದೆ. ಪ್ರಯತ್ನ ಮಾತ್ರ ಮಾಡುತ್ತಲೇ ಇರಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ