ಮಂಗಳವಾರ, ಮೇ 8, 2012

ವಾರಾಂತ್ಯಕ್ಕೆ ಒಟ್ಟಿಗೆ ಸೇರಿ ನಕ್ಕು ಹಗುರಾಗಿರಿ

ನಗರದ ಜಂಜಾಟದ ಬದುಕಿನಲ್ಲಿ ಯಾವೂದಕ್ಕೂ ಟೈಂ ಇರಲಾರದು.


ಬಹುಮುಖ್ಯವಾದ ಸ್ನೇಹಿತರ, ಸಂಬಂಧಿಕರ ಮದುವೆಗಳನ್ನು ಆಟೆಂಡ್ ಮಾಡಲಾರದಷ್ಟು ಬ್ಯುಸಿ ಲೈಫ್.


ನಮ್ಮಗಳ ಜೀವನ ಶೈಲಿಯನ್ನು ಕೇಳುವುದೇ ಬೇಡ ಬಿಡಿ. ದಿಕ್ಕು ತಪ್ಪಿದರೆ ವಾರಂತ್ಯದಲ್ಲೂ ಆಫೀಸ್ ನಲ್ಲಿ ಕೂರಬೇಕಾಗುತ್ತದೆ. ಆದ್ದರಿಂದ ಹತ್ತಿರದವರ ಕಾರ್ಯಕ್ರಮಗಳು, ಪೂಜೆ ಪುರಾಸ್ಕಾರಗಳು, ಹಬ್ಬ ಹರಿದಿನಗಳು ಅಂದರೇ ಅವುಗಳು ನಮಗಲ್ಲಾ ಎಂಬುವಂತಾಗಿದೆ. ಹಬ್ಬಗಳ ದಿನಗಳಲ್ಲಿ ನಮಗೆ ರಜೆಯಿರುವುದಿಲ್ಲ. ಅಂದು ಸಹ ಕೆಲಸಕ್ಕೆ ಹಾಜರಾಗಬೇಕು. ಹಬ್ಬಗಳು ಇಲ್ಲದ ದಿನಗಳಂದು ನಮ್ಮಗಳಿಗೆ ರಜಾ. ಅಂದು ಎಲ್ಲೂ ಹೋಗದೇ ಮನೆಯಲ್ಲಿ ಕಣ್ಣು ತುಂಬಿ ನಿದ್ದೆ ಮಾಡಿಬಿಡಬೇಕು ಎಂಬ ನಿರ್ಧರವನ್ನು ಬಹುತೇಕ ಮಂದಿ ಮಾಡಿಕೊಳ್ಳುತ್ತಾರೆ.


ಆದರೇ ಅದು ನೆರವೇರಲಾರದು!


ಇಂಥ ಸಮಯದಲ್ಲಿಯೇ ಕಳೆದ ವಾರಾಂತ್ಯದಲ್ಲಿ ನಮ್ಮ ಸಹ ಉದ್ಯೋಗಿಯ ಮಗಳ ಮೊದಲನೇ ವರುಷದ ಹುಟ್ಟಿದ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು.


ಅದರಲ್ಲಿ ಪಾಲ್ಗೊಳ್ಳುವವರೆಗೂ ಇದು ಪ್ಯಾಮಿಲಿ ಪಂಕ್ಷನ್ ರೀತಿ ಇದೆ ಅನಿಸುತ್ತದೆ. ಕೊನೆಯಲ್ಲಿ ಹೋಗಿ ಊಟ ಮಾಡಿಕೊಂಡು ಬಂದರೇ ಸಾಕು ಅನಿಸಿತ್ತು.


ಆದರೇ ಮುಂಚೆನೇ ಪಾಲ್ಗೊಂಡು ತುಂಬ ಒಳ್ಳೆಯ ಕೆಲಸ ಮಾಡಿದೆ ಅನಿಸಿತು.


ಈ ಮೊದಲೇ ತಿಳಿದಿತ್ತು. ಇವರ ತಂದೆ ತಾಯಿಗಳು ಜನ ಬಳಕೆಯವರು. ಕಿರಿಯರು, ಹಿರಿಯರು, ಸಂಬಂಧಿಕರು, ಸ್ನೇಹಿತರು ಎಂಬ ಯಾವೊಂದು ಬೇದಭಾವವಿಲ್ಲದೇ ಎಲ್ಲರನ್ನೂ ಸಮನಾಗಿ ಗಮನಿಸುವುದು, ಪ್ರೀತಿಯಿಂದ ಮಾತನಾಡಿಸುವುದನ್ನು ಕಂಡು ನಾನು ನಮ್ಮ ಸ್ನೇಹಿತನೊಂದಿಗೆ ಆಶ್ಚರ್ಯದಿಂದ ಮಾತನ್ನಾಡಿಕೊಂಡಿದ್ದೇವು. "ಇಂದು ಸಹ ಇಂಥವರು ಇದ್ದಾರಾ?" ಎಂದು.


ನಮ್ಮ ನಮ್ಮ ಮನೆಯಲ್ಲಿ ನಮ್ಮ ಹೆತ್ತವರುಗಳು ಇವರಂತೆ ಇರಲಿ ಎಂದು ಬಾವಿಸಿದ್ದು ಉಂಟು.


ಇದರ ಪ್ಲಸ್ ಪಾಯಿಂಟೋ ಏನೋ ಬರ್ತಡೇ ಪಂಕ್ಷನ್ ಸರಳವಾಗಿ ಸುಮ್ಮನೇ ಮಾಮೊಲಿ ಕಾರ್ಯಕ್ರಮವಾಗದೇ ನೆನಪಿನಲ್ಲಿ ಚಿರಸ್ಥಾಯಿಯಾಗಿ ಇರುವಂತಾಯಿತು.


ಸುಮಾರು ನೂರು ಜನಗಳು ಬಾಗವಹಿಸಿದ್ದರು ಅನಿಸುತ್ತದೆ. ಅವರ ಸಂಬಂಧಿಕರುಗಳು ಮತ್ತು ಸ್ನೇಹಿತರುಗಳೂ ಬೆಂಗಳೂರು, ಅವರ ಊರಾದ ಮಂಗಳೂರು, ಕಾಸರಗೋಡು ಕಡೆಯಿಂದೆಲ್ಲಾ ಬಂದಿದ್ದರು. ನಮ್ಮ ಸ್ನೇಹಿತನ ಕಂಪನಿಯವರು ಮತ್ತು ನಾವಂದಿಷ್ಟು ಗೆಳೆಯರೆಲ್ಲಾ ಹೋಗಿದ್ದೇವು.


ಬರ್ತಡೇ ಕೇಕ್ ಕಟ್ ಮಾಡಿ ಉಡುಗೊರೆಯ ವಿನಿಮಯವಾದ ನಂತರ ಊಟದ ಹಾಲ್ ಗೆ ಧಾವಿಸಿ ಎಷ್ಟು ಬೇಗ ಇಲ್ಲಿಂದ ಕಾಲು ಕೀಳುವೆವೋ ಎಂಬ ರೀತಿಯಲ್ಲಿ... ಈ ಮೊದಲು ನಾನು ನೋಡಿದ ಸಾಕಷ್ಟು ಕಾರ್ಯಕ್ರಮಗಳ ಚಿತ್ರಣ!


ಆದರೇ ಇಲ್ಲಿ ಪೂರ್ತಿ ತದ್ವಿರುದ್ಧ.


ಕೇಕ್ ಕಟ್ ಮಾಡಿದ ನಂತರ ಅಲ್ಲಿರುವವರೆಲ್ಲಾ ಭಾಗವಹಿಸುವಂತೆ ಪ್ರೇರಪಿಸುವ ಚಿಕ್ಕ ಚಿಕ್ಕ ಸ್ಪರ್ದೆಗಳು. ಹಾಡು, ನೃತ್ಯ. ರಸ ಪ್ರಶ್ನೇ ಬುದ್ಧಿಯನ್ನು ಚುರುಕು ಮಾಡಲು. ಇತ್ಯಾದಿ ಇತ್ಯಾದಿ ಕಾರ್ಯಕ್ರಮಗಳು. ಒಂದು ಕೌಟಂಬಿಕ ಕಾರ್ಯಕ್ರಮದಲ್ಲಿ ಇಷ್ಟೊಂದು ರಚನಾತ್ಮಕ ಕಾರ್ಯಕ್ರಮಗಳು? ನಮಗೆಲ್ಲಾ ಅಚ್ಚರಿಯಾಯಿತು.


ಹಿರಿಯರು ಕಿರಿಯರು ಎಂಬ ಯಾವೊಂದು ಬೇದವಿಲ್ಲದೇ, ಸಂಬಂಧಿಕರು, ಸ್ನೇಹಿತರು, ಅಪರಿಚತರು ಎಂಬ ಬಿಗು ಇಲ್ಲದೇ ಎಲ್ಲಾರನ್ನೂ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಲು ವಾತಾವರಣವನ್ನು ತಾಜಾವಾಗಿಡಲೂ ಶ್ರಮಿಸಿದ ಹೋಸ್ಟ್ ಮಂಗಳೂರಿನವಾರದ ನಮ್ಮ ಸ್ನೇಹಿತನ ತಾಯಿಯವರ ಸಂಬಂಧಿಕರು. ಅವರ ಪಾದರಸದಂತಹ ಚಟುವಟಿಕೆಯನ್ನು ಕಂಡು ನಾವುಗಳು ಒಂದೇರಡು ವರುಷ ಕಿರಿಯರಾದೇವು. ಆ ತಾಯಿಯವರು ನಿಜವಾಗಿಯೋ ಯಾವೂದೋ ಶಾಲೆಯಲ್ಲಿ ಶಿಕ್ಷಕಿಯಾಗಿರಲೇ ಬೇಕು. ಇಲ್ಲದಿದ್ದರೇ ಇಂಥ ಒಂದು ಕಾರ್ಯಕ್ರಮಗಳಲ್ಲಿ ಗೊತ್ತಿಲ್ಲದವರ ಜೊತೆಯಲ್ಲಿ ಎಲ್ಲರೂ ಪರಿಚತರು ಎಂಬ ರೀತಿಯಲ್ಲಿ ನಗುವಿನ ಅಲೆಯಲ್ಲಿ ಮತ್ತು ನಮ್ಮನೆಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸಲೇ ಬೇಕೆಂಬ ಮನಸ್ಸು ಮಾಡುವವಂತೆ ಕಾರ್ಯಕ್ರಮವನ್ನು ನಡೆಸಿಕೊಟ್ಟರಲ್ಲಾ ಗ್ರೇಟ್!


ಕಾರ್ಯಕ್ರಮ ಮುಗಿದ ಮೇಲೆ ಅವರುಗಳು ಪ್ರತಿಯೊಬ್ಬರ ಬಳಿ ಸಾಗಿ ಹೇಗೆ ಕಾರ್ಯಕ್ರಮ ಬಂತೂ? ಚೆನ್ನಾಗಿತ್ತಾ? ಎಂದು ನಗುಮುಖದಿಂದ ಕೇಳಿಕೊಂಡಿದ್ದೂ ಅವರ ಬಗ್ಗೆ ಹೆಗ್ಗಳಿಕೆಯಾಯಿತು. "ಸಾರಿ ನನಗೆ ಜಾಸ್ತಿ ಕೊಂಕಣಿಯೇ ಬಂದು ಬಿಡುತ್ತೇ, ಕನ್ನಡವನ್ನೇ ಮಾತನಾಡಲೂ ಪ್ರಯತ್ನಿಸಿದರೂ ಅಲ್ಲಾಲ್ಲಿ ಕೊಂಕಣಿ ನುಸಳಿಬಿಡುತ್ತೂ" ಅಂದರೂ. ನಾನು ಹೇಳಿದೇ "ಪರವಾಗಿಲ್ಲ ಆ ಭಾಷೆಯ ನುಡಿಗಳನ್ನೂ ಕನ್ನಡದ ಜೊತೆ ಜೊತೆಯಲ್ಲಿ ಕೇಳುವ ಅವಕಾಶ ಮಾಡಿಕೊಟ್ಟರಲ್ಲಾ ಥ್ಯಾಂಕ್ಸ್!"


ಅಲ್ಲಿನ ಪುಠಾಣಿಗಳು ಅಷ್ಟೇ ಎಷ್ಟೊಂದು ಸುಂದರವಾಗಿ ಚಿಕ್ಕ ಚಿಕ್ಕ ಹೆಜ್ಜೆ ಗಳನ್ನು ಹಾಕಿ ನೃತ್ಯವನ್ನು ಮಾಡಿ ಹಿರಿಯರನ್ನೇಲ್ಲಾ ಮೂಕರನ್ನಾಗಿ ಮಾಡಿದರು.


ಹಿರಿಯ ಯಜಮಾನರು ಮತ್ತು ಕಿರಿಯ ಯುವತಿ ಸೇರಿ ನಟಿಸಿದ ಬಬ್ರುವಾಹನ ಅರ್ಜುನ ಕಾಳಗದ ಯಕ್ಷಗಾನ ಪ್ರಸಂಗ ತುಂಬ ಚೆನ್ನಾಗಿತ್ತು. ಅದನ್ನು ಇಂದಿನ ನಮ್ಮ ರಾಜಕೀಯ ಪಕ್ಷಗಳ ಚುನಾವಣೆಯ ಘೋಷಣೆಗೆ ಪರಿವರ್ತಿಸಿದ್ದು, ಅವರ ಕ್ರೀಯಶೀಲತೆಗೆ ಸಾಕ್ಷಿ.


ನಮ್ಮ ಸ್ನೇಹಿತರು ಸಹ ಸ್ವತಃ ಉತ್ತಮ ಗಾಯಕರುಗಳು, ಅವರ ಎರಡು ಹಾಡುಗಳು ಯಾವುದೇ ಗಾಯನ ಮಂಡಳಿಗೂ ಕಡಿಮೆ ಇರಲಿಲ್ಲ.


ಎರಡು ಮೂರು ಗಂಟೆಗಳ ಕಾಲ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.


ಪ್ರತಿಯೊಂದು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುಠಾಣಿ ಬಹುಮಾನಗಳನ್ನು ನಮ್ಮ ಗೆಳೆಯರು ಕೊಡುತ್ತಿದ್ದರು.


ನಂತರ ಕೊನೆಯಲ್ಲಿ ಮಾಡಿದ ಮಂಗಳೂರು ಶೈಲಿ ಊಟ ಮರೆಯುವಂತೆಯೇ ಇಲ್ಲಾ.


ಇದೇ ಮೊದಲೂ ಅನಿಸುತ್ತದೆ. ಈ ರೀತಿಯಲ್ಲಿ ಯಾವುದೇ ಬೋರ್ ಅನಿಸದೇ ಮನತುಂಬಿ ಭಾಗವಹಿಸಿದ ಕಾರ್ಯಕ್ರಮ. ಇದರಲ್ಲಿ ಭಾಗಿ ಆದವರಿಗೆಲ್ಲಾ ಇದೇ ಅನುಭವಾಗಿರುತ್ತದೆ. ಇದು ಸತ್ಯ!


ಇದು ಒಂದು ವಿನೊತನವಾದ ಯೋಚನೆ. ನಾವುಗಳು ಗಮನಿಸಿರಬಹುದು. ನಮ್ಮ ಕುಟುಂಬಗಳಲ್ಲಿ ಜರುಗುವ ಕಾರ್ಯಕ್ರಮಗಳ ಶೈಲಿಯನ್ನು. ಎಲ್ಲರೂ ಬರುವರು. ಗೊತ್ತಿರುವವರ ಜೊತೆಯಲ್ಲಿ ನಾಲ್ಕು ನಗೆಯ ಮಾತುಗಳು. "ಹಾಯ್! ಬಾಯ್!" ಅಷ್ಟೇ. ಎಲ್ಲಾರಿಗೂ ಧಾವಂತ ಒಂದು ನಿಮಿಷ ಹೆಚ್ಚಿಗೆ ಕಳೆಯಲು ಜೀಪುಣತನ.


ಮನತುಂಬಿ ಒಟ್ಟು ಕುಟುಂಬ ನಕ್ಕು ಎಷ್ಟು ವರುಷಗಳಾಗಿರುತ್ತವೋ ದೇವರೇ ಬಲ್ಲ! ಇನ್ನೂ ಹತ್ತಿರದವರು, ಸಂಬಂಧಿಕರುಗಳು, ಸ್ನೇಹಿತರೆಲ್ಲಾ ಒಟ್ಟಿಗೆ ಸೇರಿ ನಗುವುದು, ಚರ್ಚಿಸುವುದು, ಸಂವಾಧಿಸುವುದು, ಪರಸ್ಪರ ತಮ್ಮ ಅನುಭವಗಳ ಶೇರ್ ಮಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ.


ನಿಮಗೆ ತಿಳಿದಿರಬಹುದು. ಹಿಂದೆ ೧೨ ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ತಮ್ಮ ರಾಜಾಧಾನಿ ಕಲ್ಯಾಣ ನಗರದಲ್ಲಿ ಪ್ರತಿಯೊಬ್ಬ ಸ್ತ್ರೀ ಸಾಮಾನ್ಯನಿಗೂ ಅನುಭವ ಮಂಟಪ ಎಂಬ ಚರ್ಚ ಗೋಷ್ಠಿಯಲ್ಲಿ ನಿತ್ಯ ಭಾಗವಹಿಸುವ ಅವಕಾಶವನ್ನು ಕಲ್ಪಿಸಿದ್ದರು. ದಿನ ನಿತ್ಯ ತಮ್ಮಲ್ಲಿರುವ ಯಾವುದೇ ರೀತಿಯ ಸಂಶಯಗಳು, ಅನುಭವಗಳನ್ನು ಸಂವಾದದ ಮೊಲಕ, ಹಾಡುಗಳನ್ನು ಹಾಡುವ ಮೊಲಕ, ವಚನಗಳನ್ನು ಕಟ್ಟುವ ಮೊಲಕ ಸಮಾಜದ ಮತ್ತು ತಮ್ಮ ವೈಕ್ತಿಕ ಜೀವನವನ್ನು ಉನ್ನತ ಸ್ತರಕ್ಕೇರಿಸಿಕೊಳ್ಳಲೂ ಎಷ್ಟರ ಮಟ್ಟಿಗೆ ಹೆಸರುವಾಸಿಯಾಗಿತ್ತು ಎಂದು.


ಇಂದು ಇಬ್ಬರೂ ಸೇರಿ ನಾಲ್ಕು ಮಾತನಾಡುವುದೇ ಕಷ್ಟವಾದಂತಹ ದಿನಗಳಾಗಿವೆ. ನಮ್ಮಲ್ಲಿರುವ ಯಾವುದೇ ಭಾವನೆಯನ್ನು ಮತ್ತೊಬ್ಬರ ಬಳಿ ಹೇಳಿಕೊಳ್ಳಲು ಸಂಕೋಚಪಡುವಂತಾಗಿದೆ. ಯಾವೂದೋ ಗೊತ್ತಿಲ್ಲದ ಗುರಿಯ ಬೆನ್ನ ಹತ್ತಿ ಪ್ರತಿಯೊಬ್ಬರೂ ಓಡುತ್ತಿರುವಂತೆ ಭಾಸವಾಗುತ್ತದೆ. ಸಹಕಾರ, ಸ್ನೇಹ, ಪ್ರೀತಿ,ನಗೆ, ನೆರೆಹೊರೆ ಎಂಬ ಮಾತುಗಳು ಹೆಚ್ಚು ಕ್ಲೀಷೆ ಎನ್ನುವಂತಾಗಿದೆ.


ಈ ರೀತಿಯಲ್ಲಿ ಗೊತ್ತಿರುವವರ, ನೆರೆ ಹೊರೆಯಲ್ಲಿ ನಡೆಯುವ ಚಿಕ್ಕ ಚಿಕ್ಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ರಚನಾತ್ಮಕವಾಗಿ ಮಾಡಿಕೊಳ್ಳಬೇಕು. ಇದರಿಂದ ಕಿರಿಯ ಪೀಳಿಗೆಗೂ ಸಹ ಇವರೆಲ್ಲಾ ನಮ್ಮವರು ಎಂಬ ಬಂಧನ ಬರುತ್ತದೆ. ಹಿರಿಯರಿಂದ ಕಲಿಯುವಂತಹ ಅನುಭವಗಳ ಮಾತುಗಳು ಕಿರಿಯರಿಗೆ ಸಂಜೀವಿನಿಯಂತಾಗುತ್ತದೆ. ಹಿರಿಯರಿಗೂ ಬೋರ್ ಅನಿಸುವಂತಹ ಲೈಫ್ ಕಿರಿಯರ ಆಟ ಪಾಠಗಳನ್ನು ಆಹ್ಲಾದಿಸಿ ಅವರುಗಳು ಒಂದೇರೆಡು ವರುಷ ಚಿಕ್ಕವರಾಗುವರೇನೋ!!


ಇಂಥ ಎಲ್ಲಾರೂ ಒಟ್ಟಿಗೆ ಸೇರುವ ಕಾರ್ಯಕ್ರಮಗಳು ಕನಿಷ್ಠ ಅಂದರೂ ಎರಡು ತಿಂಗಳಿಗೋ, ಮೂರು ತಿಂಗಳಿಗೋ ಒಮ್ಮೆ ಕಡಿಮೆ ಖರ್ಚಿನಲ್ಲಿ ಜರುಗಬೇಕು.


ಕಲ್ಯಾಣದ ಅನುಭವಮಂಟಪದಂತೆ ನಮ್ಮ ನಮ್ಮ ಅನುಭವ, ಯೋಚನೆ, ಚಿಂತನೆ, ವ್ಯಕ್ತಿತ್ವದ ದರ್ಶನವನ್ನು ನಮ್ಮ ಜೊತೆ ಇರುವವರ ಜೊಡಿ ಹಂಚಿಕೊಳ್ಳುವಂತಾಗಲಿ. ಇದರಿಂದ ವ್ಯಕ್ತಿ ತನ್ನ ನೆಲೆಯಲ್ಲಿಯೇ ಅತಿ ಉನ್ನತ ಮಟ್ಟಕ್ಕೆ ಬೆಳೆಯಲು ತನ್ನ ಸುತ್ತಲಿನ ಸಮಾಜವನ್ನು ಆ ಹಂತಕ್ಕೆ ತೆಗೆದುಕೊಂಡು ಹೋಗಲು ಪ್ರೇರಕವಾಗುತ್ತದೆ.


ಏನಂತಿರೀ?

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ