ಗುರುವಾರ, ಮೇ 10, 2012

ಕೈಯಿಂದ ಸ್ಪರ್ಷಿಸಿದರೇ ಅಂಗೈಯಲ್ಲಿಯೇ ಮಾಯ

ಮದ್ಯ ರಾತ್ರಿ ಕತ್ತಲೆ, ಕೆಲವೊಂದು ಬೀದಿ ದೀಪಗಳು ಇವೆ. ಮಳೆ ಬಂದು ತಣ್ಣನೆಯ ತಂಗಾಳಿ ಬೀಸುತ್ತಿದೆ.


ಅಪರಾತ್ರಿಯಲ್ಲಿ ಸೆಕೆಂಡ ಶೀಫ್ಟ್ ಮುಗಿಸಿಕೊಂಡು ಮನೆ ಕಡೆಗೆ ಸಾಗುತ್ತಿರುವ ಟಿ.ಟಿಗಳು, ಸುಮೋಗಳ ಚಲೆನೆ ಕಪ್ಪನೆಯ ಟಾರ್ ರೋಡ್ ಮೇಲೆ.


ಅಲ್ಲಿ ರಸ್ತೆಯನ್ನು ಅಗಿಯುತ್ತಿದ್ದಾರೆ. ಎರಡು ಬದಿಯ ವಾಹನಗಳು ಒಂದೇ ಕಡೆ ಚಲಿಸುತ್ತಿದ್ದಾವೆ. ಪಾದಚಾರಿ ರಸ್ತೆಯ ಮೇಲೂ ವಾಹನಗಳು ಒಮ್ಮೊಮ್ಮೆ ಬರುತ್ತವೆ. ಅವುಗಳ ವೇಗ ಕಂಡು ಜೀವಕ್ಕೆ ಭಯವೆನಿಸುತ್ತದೆ. ಮೇಲೆ ಆಕಾಶವನ್ನು ನೋಡಿದರೇ ಕಪ್ಪನೇ ಕಾರ್ಮೊಡಗಳು. ಅಲ್ಲಾಲ್ಲಿಯೇ ಚಳಕು ಎಂಬಂತೆ ಸಣ್ಣನೆಯ ಮಿಂಚು! ಯಾವಾಗ ಬೇಕಾದರೂ ಪುನಃ ಮಳೆ ಶುರುವಾಗಬಹುದು.


ಇಂಥ ಸಂದರ್ಭದಲ್ಲಿ ಮೂರು ಗುಂಪುಗಳಲ್ಲಿ ಒಂದಿಷ್ಟು ಜನಗಳು ರಸ್ತೆಯ ಬದಿಯಲ್ಲಿ ನಡೆಯುತ್ತಿದ್ದಾರೆ.


ನೋಡಿದರೇ ಇಂದೇ ಈ ಬೆಂಗಳೂರು ಎಂಬ ಮಾಯ ನಗರಿಗೆ ಬಂದಿರುವಂತಿದೆ.


ಕ್ಯಾಬ್ ಗಳ ಎಡ್ ಲೈಟ್ ಬೆಳಕು ಅವರ ಮುಖಗಳ ಮೇಲೆ ಚಿಮ್ಮುತ್ತಿದೆ. ಏನೋ ಭಯ ಮಿಶ್ರಿತವಾದ ಅನುಭವ ಅವರ ಕಣ್ಣುಗಳಲ್ಲಿ. ಅವುಗಳು ಎದುರಿಗೆ ಬರುವ ರಭಸಕ್ಕೆ ಪಕ್ಕಕ್ಕೆ ಸರಿದುಕೊಂಡು ದಾರಿ ಇನ್ನೂ ಎಷ್ಟು ದೂರ ಇದೆಯೋ ಎಂದುಕೊಂಡು ನಡೆಯುತ್ತಿದ್ದಾರೆ.



ಅತಿ ಮುಂದೆ ಎರಡು ಚಿಕ್ಕ ಮಕ್ಕಳು ಏನೋ ಕುತೂಹಲಭರಿತರಾಗಿ ತಲೆಯ ಮೇಲೆ ಪುಟ್ಟದಾದ ಬ್ಯಾಗ್ ಇಟ್ಟುಕೊಂಡು ಎರಡು ಕೈಯಲ್ಲಿ ಅದನ್ನು ಬಿಳದಂತೆ ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದಾರೆ. ಅವರ ಇಂದೆ ಅವರ ಅಮ್ಮಂದಿರಬೇಕು, ಅಕ್ಕಂದಿರುಗಳಿರಬೇಕು ಕಂಕುಳದಲ್ಲಿ ಚಿಕ್ಕ ಕೂಸು, ಕೈಯಲ್ಲಿ ಮತ್ತೊಂದು ಬ್ಯಾಗ್. ಅವರ ಹಿಂದೆ ಪಂಚೆಯನ್ನು ಕಟ್ಟಿಕೊಂಡ ಆರು ಏಳು ಮಂದಿ ಅವರ ತಲೆಯ ಮೇಲೆಯು ಒಂದೊಂದು ಚೀಲ. ಇದು ಮೊದಲ ಗುಂಪು.


ಇವರ ಹಿಂದೆ ಇದೆ ರೀತಿಯಲ್ಲಿ ಹತ್ತು ಜನಗಳ ಗುಂಪು. ಇಲ್ಲೂ ಸಹ ಎಲ್ಲಾ ವಯೋಮಾನದವರು ಇದ್ದಾರೆ. ಕೆಲವರ ಕೈಯಲ್ಲಿ ಚೀಲಗಳಿವೆ ಮತ್ತೆ ಕೆಲವರ ಬಳಿ ಏನೂ ಇಲ್ಲಾ.


ಹೀಗೆ ಮೂರು ಗುಂಪುಗಳು ಮೇಜೆಸ್ಟಿಕ್ ನಿಂದ ಮಾರತಳ್ಳಿಯ ಕಡೆಗೆ ನಡೆಯುತ್ತಿವೆ.


ಯಾರನ್ನೂ ಬೆಂಗಳೂರಿನ ಮಂದಿ ಕ್ಯಾರೇ ಅಂದಿರಲಾರರು.


ಪಾಪ!


ಇವರುಗಳು ಗುಳೆ ಹೊರಟು ಬಂದಿರಬಹುದು. ತಮ್ಮ ತವರು ಊರಿನಲ್ಲಿ ಏನಾಗಿತ್ತೊ, ಏನೂ ಕಷ್ಟವೋ? ದೇವರಿಗೆ ಗೊತ್ತಿರಬೇಕು.


ಅವರುಗಳು ಎಂದೂ? ಎಲ್ಲಿಂದ? ಯಾವಾಗ? ಬೆಂಗಳೂರು ಎಂಬ ಕನಸನ್ನು ಇಟ್ಟುಕೊಂಡು ಯಾವ ಬಸ್, ರೈಲಿನಲ್ಲಿ ಹೊರಟು ಬಂದಿದ್ದಾರೂ.. ಈ ಸರಿ ರಾತ್ರಿಗೆ ಮೊದಲ ಹೆಜ್ಜೆಯನ್ನು ಕೆಂಪೇಗೌಡನ ರಾಜಧಾನಿಯಲ್ಲಿ ಊರಿದ್ದಾರೆ.


"ಕೆಟ್ಟು ಪಟ್ಟಣ ಸೇರು" ಎಂಬ ಗಾದೆಯ ಮಾತನ್ನು ನಿಜ ಮಾಡಲೇ ಎಂಬಂತೆ ಎಷ್ಟು ಕುಟುಂಬಗಳು ಎಷ್ಟು ದಿನಗ ಯೋಚನೆಯ ಮೇಲೆ ಬಂದಿರುವವರೋ?


ಈ ಮೊದಲೂ ತಮಗೆ ಗೊತ್ತಿರುವವರು ಯಾರೋ ಇಲ್ಲಿಗೆ ಆಗಲೇ ಬಂದಿರಬೇಕು. ಅವರನ್ನೂ ನೋಡಿ ಇವರು ಬಂದಿರಬೇಕು.


ಹೀಗೆ ಗುಂಪಾಗಿ ಇದೆ ಸಮಯದಲ್ಲಿ ಅವರ ಹಳ್ಳಿಗಳಲ್ಲಿ ನಡೆಯುತ್ತಿದ್ದರೇ ಎಷ್ಟೊಂದು ದಾರಿಹೋಕರು ಇಷ್ಟು ಹೊತ್ತಿಗೆ ಏನೇನಲ್ಲಾ ಪ್ರಶ್ನೇಗಳನ್ನು ಕೇಳಿರುತ್ತಿದ್ದರೋ.


ಯಾರಾದರೂ ತಮ್ಮ ಗಾಡಿಯನ್ನು ಹೊಡೆದುಕೊಂಡು ಹೋಗುತ್ತಿದ್ದರೇ "ಬನ್ನಿ ಕುಳಿತುಕೊಳ್ಳಿ ನಿಮ್ಮ ಜಾಗದವರೆಗು ಈ ಹೆಣ್ಣು ಮಕ್ಕಳು, ವಯಸ್ಸಾದವರು ಕೂರಿ" ಎಂಬ ಸಹಕಾರವನ್ನು ಕೇಳಿ ಕೊಟ್ಟಿರುತ್ತಿದ್ದರು.


ಆದರೇ..! ಇಲ್ಲಿ ಅದೇ ಎರಡು ಮೂರು, ಕೆಂಪನೆಯ, ಪೂರ್ತಿ ಮುಚ್ಚಿದ ಗ್ಲಾಜಿನ, ಪೂರ್ತಿ ಖಾಲಿ ಸೀಟುಗಳಿರುವ ದೊಡ್ಡ ಬಸ್ ಗಳು ಪಕ್ಕನೇ ಹಾದು ಹೋದವು. ಇವರ ಬಗ್ಗೆ ಏನೊಂದು ಕನಿಕರವಿಲ್ಲದ ರೀತಿಯಲ್ಲಿ ರೋಯ್ಯನೇ ಹೊಗೆಯೆಬ್ಬಿಸಿದ್ದು ಮಾತ್ರ ಈ ಸೋತ ಕಣ್ಣುಗಳು ನೋಡಿದವು. ಮಕ್ಕಳೋ ಅಚ್ಚರಿಯಿಂದ ಬಸ್ ಕಾಣುವವರೆಗೂ ನೋಡುತ್ತಾ ನೋಡುತ್ತಾ ಒಮ್ಮೆ ಎಡವಿಬಿದ್ದವು.



ಹಿಂದಿನಿಂದ ಅವರ ಅಪ್ಪ ಇರಬೇಕು. ತಲೆ ಮೇಲೆ ಕುಕ್ಕಿದ. "ಭೂಮಿ ನೋಡಿಕೊಂಡು ನಡೆಯಬಾರದ!" ಈ ದ್ವನಿ ಆ ನಿಶಬ್ಧ ರಾತ್ರಿಯಲ್ಲಿ ರೀಂಗಣಿಸಿತು. ಹಾಗೆಯೇ ಅದು ಯಾವೂದೋ ಕ್ಯಾಬ್ ಹಾರ್ನ ಸದ್ಧಿನಲ್ಲಿ ಲೀನವಾಯಿತು.


ಇಷ್ಟೂ ಮಂದಿಯ ರಾತ್ರಿಯ ಊಟ ಆಗಿದೇಯೋ ಇಲ್ಲವೋ ಗೊತ್ತಿಲ್ಲಾ!


ಇನ್ನೂ ಬೆಂಗಳೂರು ಬಿಟ್ಟು ಹೊರ ವಲಯಕ್ಕೆ ತಮ್ಮವರು ಗುರುತು ಇರುವ ಜಾಗಕ್ಕೆ ಎಷ್ಟು ಸಮಯ ನಡೆಯಬೇಕೋ ಅವರ್ಯಾರಿಗೂ ತಿಳಿದಿರಲಾರದು. ಪೋನ್ ನಲ್ಲಿ ದಾರಿ ಹೇಳಿರಬೇಕು.


ಸಿ.ಟಿ ಬಸ್ ನಲ್ಲಿ ಬರಬಹುದಾಗಿತ್ತೇನೋ. ಅದರೇ ೧೧ ರ ನಂತರ ಇವರು ಸೇರುವ ಜಾಗಕ್ಕೆ ಬಸ್ ಗಳು ಇರಲಾರವೇನೋ? ಆಟೋದಲ್ಲಿ!


ಸಾಧ್ಯವಾಗಿರಿಲಿಕ್ಕಿಲ್ಲಾ.


ಖಾಲಿ ಮೋಟಾರುಗಳು ಹೋಗುತ್ತಿದ್ದಾವೆ. ಅವುಗಳು ಇವರನ್ನು ಎಲ್ಲಿ ಗಮನಿಸಬೇಕು?


ಇಲ್ಲಿ ಚಾಲನೆ ಮಾಡುವ ಕೆಲವು ಮೋಟಾರು ಡ್ರೈವರ್ ಗಳು ಅವರ ಊರುಗಳ ಕಡೆಯವರು ಇರುತ್ತಾರೆ. ಹಾಗಂತಹ ಎಲ್ಲಿ ಎಲ್ಲಾರನ್ನೂ ಕರೆದುಕೊಂಡು ಹೋಗಲಾಗುತ್ತದೆ. ಇದೆ ರೀತಿಯಲ್ಲಿ ನಿತ್ಯ ಸಾವಿರಾರು ಮಂದಿ ಅಪರಾತ್ರಿಯಲ್ಲಿ ಹಳ್ಳಿಯಿಂದ ಬರುತ್ತಲೇ ಇರುತ್ತಾರೆ.


ಹೀಗೆ ಕರುಣೆಯಿಂದಲೋ ಮಾನವೀಯತೆಯಿಂದಲೋ ಸಹಾಯ ಮಾಡೋಣ ಎಂದುಕೊಂಡರೇ.. ಇವರುಗಳ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯೇ ಗತಿ.


ಇವರು ಚಾಲನೆ ಮಾಡುವ ವಾಹನಗಳು. ಅದೇ ತೆಳ್ಳಗೆ ಬೆಳ್ಳಗೆ ಬಟ್ಟೆ ಹಾಕಿಕೊಂಡು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರೆಗೆ ಮಾತ್ರ! ಅವರುಗಳಿಗೆ ಡೋರ್ ಡ್ರಾಪ್! ಡೋರ್ ಪಿಕಪ್!. ಯಾಕೆಂದರೇ ಇದಕ್ಕಾಗಿ ವಿದೇಶಿ ಕಂಪನಿಗಳು ದೊಡ್ಡ ಮೊತ್ತದ ಹಣ ಕೊಡುತ್ತದೆ. ಟೈಂ ಇಸ್ ವೇರಿ ಇಂಪಾರ್ಟೆಂಟ್! ಅದಕ್ಕೆ ವೇಗವಾಗಿ ಓಡಿಸುತ್ತಲೆ ಇರಬೇಕಾಗುತ್ತದೆ. ಯಾರೊಬ್ಬರನ್ನೂ ನೋಡದೇ.


ಈ ರೀತಿಯಲ್ಲಿ ಹಳ್ಳಿಯಿಂದ ಗುಂಪು ಗುಂಪಾಗಿ ಬರುವವಗಿಗೆ ಮಾಡಲು ಸಿಗುವ ಕೆಲಸ ಅಂದರೇ ಅದೇ ದಿನಗೂಲಿ ಕೂಲಿ ಕೆಲಸ. ಬೆಂಗಳೂರು ನಿತ್ಯ ಬೆಳೆಯುವ ನಗರ. ಯಾವುದರಲ್ಲಿ ಎಂದರೇ ಪೆಟ್ಟೆಗೆಯೋಪಾದಿಯಲ್ಲಿ ನಿಂತಿರುವ ಅಪಾಂರ್ಟ್ ಮೆಂಟ್ ಗಳ ಕಾಮಗಾರಿ. ಅಲ್ಲಿ ಸಿಮೆಂಟ್, ಗಾರೆ, ಕಲ್ಲು ಕುಟ್ಟುವುದು. ಇದಕ್ಕೆ ಹೆಂಗಸರು, ಗಂಡಸರು ಹೆಚ್ಚಿನ ಸಂಖ್ಯೆಯಲ್ಲಿ ಬೇಕೇ ಬೇಕು.


ಇವರುಗಳಿಗೆ ಅಪಾರ್ಟ ಮೆಂಟ್ ಕಟ್ಟುವ ಜಾಗಕ್ಕೆ ಸಮೀಪದಲ್ಲಿಯೇ ತಗಡಿನ ಗುಡಿಸಲು ಶೇಡ್ ಗಳನ್ನು ಕೊಟ್ಟಿರುತ್ತಾರೆ. ಅದೇ ಅವರ ಮನೆ ಮನ ಪ್ರಪಂಚ. ಎಷ್ಟು ಮಂದಿಯಾದರೂ ಅರಾಮಾಗಿ ವಾಸ ಮಾಡಬಹುದು. ಅದಕ್ಕೂ ಅವರು ಕೊಡುವ ಕೂಲಿಯಲ್ಲಿ ಇಷ್ಟು ಅಂತಾ ಹಿಡಿದುಕೊಳ್ಳುತ್ತಾರೆ.


ದುಡಿದು ಹಣವನ್ನು ಬಹುಬೇಗ ಕೂಡಿಟ್ಟು ಪುನಃ ಹಳ್ಳಿಗೆ ಹೋಗಬೇಕು ಎಂಬ ಹಂಬಲದಿಂದ ನಗರದ ಕಡೆ ಮುಖ ಮಾಡಿರುತ್ತಾರೆ. ಅದರೇ ಅದು ಎಷ್ಟು ಕಷ್ಟ ಎನ್ನುವುದು ಎರಡು ಮೂರು ತಿಂಗಳಲ್ಲಿಯೇ ಮನವರಿಕೆಯಾಗಿರುತ್ತದೆ.


ಇಲ್ಲಿನ ಸವಲತ್ತುಗಳು, ಮೂಲಭೂತ ಸೌಲಭ್ಯಗಳು, ಈ ವ್ಯಕ್ತಿ ಕಡಿಮೆ ದುಡಿಮೆಯವನು ಇವನಿಗೆ ಈ ಈ ರೀತಿಯಲ್ಲಿ ರೀಯಾಯಿತಿ ಎಂದು ಸಿಗುವುದಿಲ್ಲ. ನಿನಗೆ ಏನೂ ಸಾಮರ್ಥ್ಯವಿದೇಯೋ ಅದನ್ನು ನೀನು ಪಡಿ ಎಂಬ ಸಿದ್ಧಾಂತ! ನಿನಗೆ ಆಗುವುದಿಲ್ಲ ಎಂದರೇ ಅದು ನಿನ್ನ ಹಣೆ ಬರಹ ಎಂಬ ನೀತಿ.


ಅಚ್ಚರಿಯಿಂದ ಶ್ರೀಮಂತಿಕೆಯನ್ನೂ ಈ ಮಂದಿ ನಿತ್ಯ ನೋಡಬೇಕಾಗುತ್ತದೆ.


ಹೌದು! ಇವರಿಂದಲೇ ನಾಲ್ಕು ಕಾಸುಗಳನ್ನು ಕೂಲಿ ಎಂಬ ರೀತಿಯಲ್ಲಿ ದಿನ ನಿತ್ಯ ಪಡೆಯುತ್ತಿರುತ್ತಾರೆ.


ಅವರು ಉಳ್ಳವರು ಇವರು ಇಲ್ಲದವರು. ಅವರುಗಳಿಗೆ ಅರ್ಹತೆಯಿದೆ ನಮ್ಮಗಳಿಂದ ಆ ಕೆಲಸ ಮಾಡಿಸಿಕೊಳ್ಳುತ್ತಾರೆ. ಇಂಥ ದೊಡ್ಡ ದೊಡ್ಡ ಬಂಗಲೆಗಳಲ್ಲಿ ಒಂಟಿಯಾಗಿ ಜೀವಿಸುತ್ತಾರೆ. ಇವರುಗಳು ಈ ಬಂಗಲೆ ಕಟ್ಟುವ ಕೆಲಸ ಪೂರ್ತಿ ಮುಗಿಯಿತೋ ಮತ್ತೊಂದನ್ನು ಕಟ್ಟಲು ಇನ್ನೊಂದು ಜಾಗಕ್ಕೆ ಸ್ಥಳಾಂತರವಾಗುತ್ತಾರೆ.


ಏನೇ ಬೆವರು ಹರಿಸಿದರು ಇವರಿಗೆ ಅವರ ವೇಗಕ್ಕೆ ಹೆಜ್ಜೆ ಹಾಕಲು ಸಾಧ್ಯವಿಲ್ಲ ಎನಿಸುತ್ತದೆ. ಹಾಗೆಯೇ ಒಂದೀಷ್ಟು ಕಾಸು ಸಂಪಾಧಿಸುತ್ತಾರೆ. ಸ್ವಲ್ಪ ದಿನಗಳ ಮೇಲೆ ತಿಳಿಯುತ್ತದೆ. ಇಲ್ಲಿ ದುಡಿಮೆ ಮಾತ್ರ ಇದೆ ಮತ್ತೇನೂ ಇಲ್ಲಾ!


ಎಷ್ಟೊಂದು ಮಂದಿ ಇದ್ದಾರೆ. ಆದರೇ ಅವರುಗಳು ಯಾರು ನಮ್ಮವರಲ್ಲಾ.


ಮೊದಲ ದಿನ ಇಲ್ಲಿ ಹೆಜ್ಜೆ ಇಟ್ಟಂದಿನಿಂದ ನೋಡುತ್ತಿದ್ದಾರೆ ಇಂದಿಗೂ ಅಪ್ತರೂ ಎಂಬವರು ಇದುವರೆಗೂ ಒಬ್ಬನೇ ಒಬ್ಬ ಸಿಕ್ಕಿಲ್ಲಾ. ಅವರುಗಳು ಅವರ ಅವರ ಪಾಡಿಗೆ ನಿತ್ಯ ಧಾರಿಯಲ್ಲಿ ಸಿಗುತ್ತಿರುತ್ತಾರೆ, ಹೋಗುತ್ತಿರುತ್ತಾರೆ.


ಈ ರೀತಿಯ ನೋಟ ಇವರುಗಳಿಗೆ ಪರಮಾಶ್ಚರ್ಯ ವಾಗುತ್ತದೆ!


ಆದರೇ ಇದೇ ಸತ್ಯ!


ಈ ದುಡಿಮೆಯಿಂದ ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ಎನ್ನುವುದು ತಿಳಿಯುತ್ತದೆ.


ಈ ದುಭಾರಿ ನಗರ ನಮ್ಮಗಳಿಗೆ ಅಲ್ಲಾ ಸ್ವಾಮಿ ಎಂಬ ನಿರ್ಧಾರಕ್ಕೆ ಬರುತ್ತಾರೆ.


ಏನೂ ಮಹಲುಗಳು, ಏನೂ ರಸ್ತೆಗಳು, ಏನೂ ಜನ, ಏನೂ ದುಡ್ಡು ಎಲ್ಲಾ ಕೇವಲ ಕಣ್ಣಿನಿಂದ ದೂರ ನಿಂತು ನೋಡಲು ಮಾತ್ರ! ಕೈಯಿಂದ ಸ್ಪರ್ಷಿಸಿದರೇ ಅಂಗೈಯಲ್ಲಿಯೇ ಮಾಯ ಎನಿಸುತ್ತದೆ.


ಹಿಂತಿರುಗಿ ನೋಡಿದರೇ ಇಲ್ಲಿಗೆ ಬಂದಾಗ ಹೇಗಿದ್ದರೂ ಹಾಗೆಯೇ ಇದ್ದಾರೆ. ಅದೇ ಬಡತನ. ಅದೇ ಮೂರುಕಾಸು ಕೈಯಲ್ಲಿ. ಮಕ್ಕಳು ಓದಲಿಲ್ಲ. ನಿತ್ಯ ನೋಡುವ ಕನಸಿನ ಗುರಿಯನ್ನು ಯಾರೊಬ್ಬರೂ ಸೇರಲಿಲ್ಲ! ಸ್ವಂತದಾದ ಒಂದು ಚಿಕ್ಕ ನೆಲೆಯನ್ನು ಪಡೆಯಲಾಗಲಿಲ್ಲ. ಬರೀ ಕನಸು ಕನಸು!


ಒಂದು ದಿನ!


ಅದೇ ರೀತಿಯಲ್ಲಿ ಮದ್ಯ ರಾತ್ರಿಯಲ್ಲಿ. ಯಾಕೋ ಈ ನಗರವೇ ಪರಕೀಯ ಎನಿಸಿ ಅದೇ ರಸ್ತೆ ಬದಿಯಲ್ಲಿ ಮೇಜೆಸ್ಟಿಕ್ ಬಸ್ ನಿಲ್ಧಾಣದ ಕಡೆಗೆ ಬಾರವಾದ ಹೆಜ್ಜೆಗಳನ್ನು ಹಾಕುತ್ತಾನೆ.


ಒಂದೇ ವ್ಯತ್ಯಾಸ ಈಗ ಅಂದು ಬೆಂಗಳೂರಿಗೆ ಬಂದಾಗ ಇದ್ದಂತಹ ತನ್ನವರ ನಲ್ಮೆಯ ಆ ಮೂರು ಗುಂಪುಗಳು ಇಲ್ಲಾ!


ಕೇವಲ ಇವನೂ ಮತ್ತು ಇವನ ಸಂಗಾತಿ ಮಾತ್ರ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ