ಸೋಮವಾರ, ಏಪ್ರಿಲ್ 23, 2012

ಏನೇನೋ ಆಸೆ ಕನಸುಗಳ ಖಜಾನೆ..

ಒಂದಷ್ಟು ವಯಸ್ಸಿಗೆ ಬಂದಾಗ ಪ್ರತಿಯೊಬ್ಬರಿಗೂ ಆ ರೀತಿಯಲ್ಲಿ ಅನಿಸುತ್ತದೆ. ಯಾಕೆ ನಾನು ಬದುಕಿದ್ದೇನೆ? ಏನು ನನ್ನ ಜೀವನದ ಅರ್ಥ? ನಾನು ಏನೂ ಮಾಡುತ್ತಿದ್ದೇನೆ? ಇದೇ ಜೀವನವೇ? ಈ ರೀತಿಯ ಯೋಚನೆಗಳು ಮಧ್ಯ ವಯಸ್ಸಿನಲ್ಲಿ ಬರುವುದು ಸರ್ವೇ ಸಾಮಾನ್ಯ.




ನಾವುಗಳು ಹುಟ್ಟಿದಂದಿನಿಂದ ನಮ್ಮ ಮುಪ್ಪು ಕಾಲದವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಹೋರಾಟದ ಬದುಕನ್ನು ನಿರ್ವಯಿಸಿರುತ್ತೇವೆ. ಯಾವಾಗಲೂ ನಮ್ಮ ಜೀವನ ಅತ್ಯುತ್ತಮವಾಗಿರಲಿ. ಮುಂದೆ ಏನಾಗುವುದೋ? ಎಂಬ ಆತಂಕದಿಂದ ಹೆಚ್ಚು ಹೆಚ್ಚಾಗಿ ವಿರಾಮವಿಲ್ಲದೇ ದುಡಿಯುತ್ತೇವೆ. ಇದೇ ಸರಿಯಾದ ಸಮಯ ಮುಂದೆ ವಯಸ್ಸಾದಾಗ ದುಡಿಯಲಾರವು. ಈಗಲೇ ಎಷ್ಟು ಸಾಧ್ಯವೋ ಅಷ್ಟನ್ನು ಸಂಪಾಧಿಸಿಡಬೇಕು ಎಂಬ ಆಕಾಂಕ್ಷೆಯಿಂದ ನಿತ್ಯ ದುಡಿಯುತ್ತಲೆ ಇರುತ್ತೇವೆ.



ಮಕ್ಕಳಾಗಿದ್ದಾಗ ಮಕ್ಕಳ ಜೀವನವನ್ನು ಪೂರ್ತಿಯಾಗಿ ಅನುಭವಿಸಲು ಹೆತ್ತವರು ಬಿಡುವುದಿಲ್ಲ. ಆಗಲೇ ಅವರ ಪ್ರವರ ಶುರು "ಏ ಚೆನ್ನಾಗಿ ಓದು. ಟೈಂ ವೇಸ್ಟ್ ಮಾಡಬೇಡ. ಹೆಚ್ಚು ಅಂಕಗಳನ್ನು ಗಳಿಸು. ಪರೀಕ್ಷೆಗಳಿದ್ದಾವೆ". ಇತ್ಯಾದಿ ಮಾತುಗಳಿಂದ ಪಾಪ ಆ ಮಗು ತನ್ನ ಜೀವನವೆಂದರೇ.. ಓದು ಮತ್ತು ಓದು ಅಷ್ಟರಲ್ಲಿಯೇ ತೃಪ್ತಿಪಡಬೇಕಾಗುತ್ತದೆ.



ಮುಂದೇ ಹರೆಯಕ್ಕೆ ಬಂದಾಗ ಬಿಸಿ ರಕ್ತ. ಬಂಡೆಯನ್ನೆ ಕುಟ್ಟಿ ಪುಡಿ ಪುಡಿ ಮಾಡುವಂತಹ ಚೈತನ್ಯವನ್ನು ತನ್ನಲ್ಲಿಟ್ಟು ಕೊಂಡಿರುತ್ತಾನೆ. ಆದರೇ ಮತ್ತೇ ನಮ್ಮ ಹೆತ್ತವರು ಮತ್ತು ಸುತ್ತಲಿನವರ ಪ್ರವರ ಶುರು. "ಏ ಇದು ಜೀವನದಲ್ಲಿ ಮುಖ್ಯ ಘಟ್ಟ ಈ ಸಮಯದಲ್ಲಿ ನೀನು ಕಲಿಯುತ್ತಿಯೋ ಅದೇ ಮುಂದೆ ಬರುವುದು. ಜೀವನಕ್ಕೆ ಒಂದು ಟರ್ನಿಂಗ ಪಾಯಿಂಟು ಇದು. ನೀನು ಸರಿಯಾದ ದಾರಿಯಲ್ಲಿಯೇ ನಡೆ. ಅವರಿವರೊಂದಿಗೆ ಸೇರಿ ಕೇಟ್ಟು ಹೋಗಬೇಡ. ದೊಡ್ಡ ದೊಡ್ಡ ಎಕ್ಸ್ ಮ್ಸ್ ಗಳು. ಅತಿ ಎಚ್ಚರಿಕೆಯಿಂದ ಓದು ಮತ್ತು ನಡೆ". ಎನ್ನುತ್ತಾರೆ.



ಟೀನೇಜ್ ಹಾಗೆಯೇ ಸಾಗಿಬಿಡುತ್ತದೆ.



ತನ್ನ ದೇಹದಲ್ಲಿ ಏನೇನೋ ಆಗುತ್ತಿರುತ್ತದೆ. ಅದು ಪ್ರಕೃತಿ ಸಹಜ. ತಾನು ಏನಾದರೂ ಮಾಡಬೇಕು. ತಾನು ಏನಾದರೂ ಒಂದು ವಿಭಿನ್ನವಾದದ್ದನ್ನು ನಿರ್ಮಿಸಬೇಕು. ಗೆಳೆಯರನ್ನು ಸಂಪಾಧಿಸಬೇಕು. ಗೆಳತಿಯೊಂದಿಗೆ ಸುತ್ತಬೇಕು. ಅವಳೊಂದಿಗೆ ಮಾತನ್ನಾಡಬೇಕು. ಇತ್ಯಾದಿ ಇತ್ಯಾದಿ ಏನೇನೋ ಆಸೆ ಕನಸುಗಳ ಖಜಾನೆಯೆ ಮನಸ್ಸಾಗಿರುತ್ತದೆ.



ಇದೆಲ್ಲಾಕ್ಕೂ ನಮ್ಮ ದೊಡ್ಡವರಿಂದ ದೊಡ್ಡ ಕಾಮ!



"ಈ ವಯಸ್ಸಿನಲ್ಲಿ ಇವೆಲ್ಲಾ ಮಾಮೊಲು. ಮೊದಲು ನಿನ್ನ ಗುರಿ ನೀನು ಸಾಧಿಸು. ಮುಂದೆ ಇಂಥ ಸಾವಿರಾ ಹುಡುಗಿಯರು, ಸಾವಿರ ಗೆಳೆಯರನ್ನು ಗಳಿಸಬಹುದು. ಸಾವಿರ ದೇಶಗಳನ್ನು ತಿರುಗಬಹುದು. ಸಾವಿರ ಕಾರು, ಸ್ಕೋಟರ್ ರೈಡ್ ಮಾಡಬಹುದು." ಎಂಬ ಮಾತುಗಳು ತನ್ನ ಕಿವಿಯ ಮೇಲೆ ನಿತ್ಯ ಬೀಳುತ್ತಾ ಬೀಳುತ್ತಾ.. ನಾವುಗಳು ಆಗಲೇ ಯಾರೋ ನಡೆದಾಡಿದ ಅದೇ ಕಾಲು ದಾರಿಯನ್ನು ಹಿಡಿಯುತ್ತದೆ.



ಅದೇ ಅಂಕಗಳು, ಅದೇ ಕಾಲೇಜುಗಳು, ಅದೇ ಲೇಕ್ಚ್ ರ್ ಪಾಠಗಳು.



ಇದೆಲ್ಲಾವನ್ನು ದಾಟಿದ ಮೇಲೆ ಏಕದಮ್ ನಾವುಗಳು ಈ ಸಮಾಜ ಎಂಬ ನಿಕೃಷ್ಟ ವ್ಯವಸ್ಥೆಗೆ ಬಂದುಬಿಡುತ್ತೇವೆ. ಸುತ್ತ ಮುತ್ತಲಿನ ಸಮಾಜವನ್ನು ನೋಡುತ್ತೇವೆ. ಎಲ್ಲಾರೂ ಕೆಲಸ ಮಾಡುತ್ತಿರುತ್ತಾರೆ. ಮತ್ತೇ ಅದೇ ನಿದರ್ಶನಗಳು. "ನೋಡು ಆ ಪಕ್ಕದ ಮನೆಯ ಹುಡುಗನನ್ನೂ ಬೆಂಗಳೂರಿನಲ್ಲಿ ಎಂಥ ಕೆಲಸದಲ್ಲಿ ಇದ್ದಾನೆ. ಕೈ ತುಂಬ ಸಂಬಳ ಮನ್ನೆ ಅವರಪ್ಪನಿಗೆ ಕಾರು ಕೊಡಿಸಿದ್ದಾನೆ. ನೋಡು ಆ ಪಕ್ಕದ ಮನೆಯ ಹುಡುಗಿಯನ್ನು ಇನ್ನೂ ಎಷ್ಟು ಚಿಕ್ಕ ವಯಸ್ಸು. ಆಗಲೇ ಪ್ರಾನ್ಸ್, ಅಮೇರಿಕಾ ಅಂತಾ ದೇಶ ತಿರುಗುತ್ತಿದ್ದಾಳೆ. ನೀನೂ ಯಾವಾಗ ಆ ರೀತಿಯಲ್ಲಿ ದುಡಿಯುವುದು. ಗಮನ ಕೊಟ್ಟು ಒಳ್ಳೆ ಕೆಲಸ ಗಳಿಸು."



ಮತ್ತೇ ನಮ್ಮಗಳಿಗೆ ಅದೇ ಆಪ್ಲಿಕೇಶನ್, ಪರೀಕ್ಷೆ, ಇಂಟ್ಯ್ರೂ ಅಂತಾ ತಿರುಗಾಟ.



ಅಂತೂ ಕೆಲಸ ಗಳಿಸಿದೆವೋ ಅಂದ್ರೆ. ಅಲ್ಲಿಯ ವಾತವರಣಕ್ಕೆ ಹೊಂದಿಕೊಳ್ಳಬೇಕು. ಅಲ್ಲಿಯ ಕಟ್ಟುಪಾಡುಗಳಿಗೆ ನಮ್ಮನ್ನು ನಾವುಗಳು ಪೂರ್ಣವಾಗಿ ಮಾರ್ಪಡಾಗಬೇಕು. ನಮ್ಮತನವನ್ನೇ ಮರೆಯಬೇಕು. ವಾರದ ೬ ದಿನಗಳ ನಿರಂತರ ದುಡಿಮೆ. ಪರ್ಪಾರ್ಮೆನ್ಸ್, ಬಡ್ತಿ ಇತ್ಯಾದಿಗಳ ಜಂಜಾಟದಲ್ಲಿ ಸುತ್ತಲಿನವರ ಕಡೆ ಮನಸ್ಸಪೂರ್ವಕವಾಗಿ ಒಂದು ಕಿರು ನಗೆಯನ್ನು ಬೀರದವರಾಗಿರುತ್ತೇವೆ. ಇದೇ ಜೀವನ.



ಆಗಲೇ ಮನೆಯಲ್ಲಿ ಮತ್ತು ಒಂದು ಜವಬ್ದಾರಿಯನ್ನು ನಮ್ಮ ಹೆಗಲ ಮೇಲೆ ಇಡುವುದಕ್ಕೆ ಚಿಂತಿಸುತ್ತಿರುತ್ತಾರೆ. "ಇನ್ನೂ ಎಷ್ಟು ದಿನಾ ಅಂತಾ ಉಂಡಾಡಿ ಗುಂಡನಂತೆ ತಿರುಗುತ್ತಿಯಾ ಮೊದಲು ಒಂದು ಮದುವೆ ಮಾಡಿಕೋ" ಅನ್ನುತ್ತಾರೆ.



ಅಲ್ಲಿ ಇಲ್ಲಿ ತಿರುಗಿ ಕೊನೆಗೆ ನನ್ನ ಕಲ್ಪನೆಯ ದೇವತೆ ಇನ್ನೂ ಸಿಗಲಾರಳು ಎಂಬ ನಿರ್ಧಾರದಿಂದ "ಓ.ಕೆ" ಎಂಬ ಸೂಚನೆಯನ್ನು ಕೊಟ್ಟು ಒಂದು ಮದುವೆಯನ್ನು ಮನೆಯವರೆಲ್ಲಾ ಮೆಚ್ಚಿದವಳನ್ನು ಮನಸ್ಸು ಇಚ್ಛೆ ಮೆಚ್ಚಿ ಮದುವೆಯಾಗುತ್ತಾನೆ.



ಅಂತೂ ಅದರ ಸುಖವನ್ನು ಒಂದೇರ‍ಡು ವರುಷ ಪಡೆದು. ಕೈಗೆ ಒಂದು ಮಗುವನ್ನು ಪಡೆಯುತ್ತಾನೆ.



ಮತ್ತೇ ಇವನಿಗೆ ಇವನೇ ಧಾವಂತವನ್ನು ಪಟ್ಟುಕೊಳ್ಳುತ್ತಾನೆ. ನನ್ನ ಸಂಸಾರ ದೊಡ್ಡದಾಯಿತು. ನನ್ನ ದುಡಿಮೆ ಏನೇನೂ ಸಾಲದು. ಎಲ್ಲಿ ನನ್ನ ಮಗುವಿಗೆ ಒಳ್ಳೆ ಶಿಕ್ಷಣ ಕೊಡಿಸುವುದು ಈ ಸಂಬಳದಲ್ಲಿ? ಎಂದು ಕೊರಗುತ್ತಾನೆ.



ನಾನೊಂತೂ ಮುನಿಸಿಪಲ್ ಸ್ಕೋಲ್ ನಲ್ಲಿ ಓದಿದೆ. ನನ್ನ ಮಗ/ಮಗಳು ನಂಬರ್ ಒನ್ ಶಾಲೆಯಲ್ಲಿಯೇ ಓದಲಿ ಎಂಬ ದೊಡ್ಡ ಆಸೆಯನ್ನು ನೆರವೇರಿಸಲು ಮತ್ತೇ ಹೆಚ್ಚು ದುಡಿಯುವ ಮನಸ್ಸು ಮಾಡುತ್ತಾನೆ. ಅದರಲ್ಲೂ ಸಕ್ಸಸ್ ಆಗುತ್ತಾನೆ. ಇಷ್ಟೆಲ್ಲಾ ಮಾಡುವ ಹೊತ್ತಿಗೆ ತನ್ನ ಜೀವನದ ಹಾಫ್ ಸಂಚುರಿಯನ್ನು ಹಾಸುಪಾಸಿನಲ್ಲಿರುತ್ತಾನೆ.



ಒಮ್ಮೆ ಹಿಂತಿರುಗಿ ನೋಡಿದಾಗ ಇವನಿಗೆ ಶಾಕ್ ಆಗುತ್ತದೆ. ಮತ್ತು ನಾನು ಮೇಲೆ ಉದ್ದರಿಸಿದ ಮಾತುಗಳು ತನಗೆ ತಾನೇ ತನ್ನ ಬಾಯಿಯಿಂದ ಬರುತ್ತವೆ.



ಎಲ್ಲಿಯೂ ಅವನೂ ತೃಪ್ತಿ, ಸಂತೋಷವೆಂಬ, ಸಾಧನೆಗಳನ್ನು ಹಸಿರಾಗಿ ಸವಿಯದಾಗಿರುತ್ತಾನೆ.



ಕೇವಲ ಓಟ ಓಟ..!



ಇದೇ ನಮ್ಮ ಪ್ರಪಂಚದ ನೋಟ.



ಒಂದು ಕ್ಷಣವೂ ನಾವುಗಳು ಜೀವಿಸುತ್ತಿರುವ ರೀತಿಯನ್ನು ಇದು ಏಕೆ ಎಂದು ಪ್ರಶ್ನಿಸಿಕೊಂಡಿರುವುದಿಲ್ಲ. ಎಲ್ಲಾರೂ ಇರುವುದೇ ಈ ರೀತಿಯಲ್ಲಿ. ನಾವುಗಳು ಆ ರೀತಿಯಲ್ಲಿಯೇ ಬದುಕಬೇಕು. ಎಂಬ ಯೋಜಿತ ಮನಸ್ಸಿನಿಂದ ಅತ್ತಿತ್ತಾ ನೋಡದವನಾಗಿರುತ್ತಾನೆ.



ಅದೇ ಸಕ್ಸ್ ಸ್ ಅಲ್ಲವಾ?



ತಾನು ಮತ್ತು ತನ್ನವರಿಗಾಗಿ ಎಷ್ಟೊಂದು ರೀತಿಯಲ್ಲಿ ತನ್ನ ರಕ್ತವನ್ನು ಬಸಿದಿರುತ್ತಾನೆ. ಅಂದ ಮೇಲೆ ಆ ವಯಸ್ಸಿಗೆ ಸ್ವಲ್ಪ ದಣಿವು ಬಂದಿರಲೇ ಬೇಕು. ಮುಂದಿನ ದಿನಗಳು ಇನ್ನೂ ಕಟೋರ ಅನಿಸುತ್ತವೆ. ಯಾಕೆಂದರೇ ಮುಂದೆ ಹದಿಹರೆಯದ ರಕ್ತವಂತೂ ಬರಲಾರದು. ಇರುವ ಚೈತನ್ಯ ಇಮ್ಮಡಿಯಾಗಲಾರದು. ಅದು ಮತ್ತೆ ಇಳಿತದ ಹಾದಿ. ಒಂದು ರೀತಿಯಲ್ಲಿ ಆ ಕ್ಷಣಕ್ಕೆ ಚಿಕ್ಕ ಬೇಸರ ಮೂಡುವುದು. ಚಿಕ್ಕ ನಿರಾಸೆ ಮನದ ಮೂಲೆಯಲ್ಲಿ ಸುಳಿಯುವುದು ಸಾಮಾನ್ಯ.



ಎಷ್ಟೇಲ್ಲಾ ದುಡಿದಿದ್ದರೂ, ಏನೇಲ್ಲಾ ಸಂಪಾಧಿಸಿದ್ದರೂ ಈ ರೀತಿಯ ನಿರಾಶೆ ಯಾಕೆ? ಎಂಬುದು ಎಂಥವರಿಗೂ ಅರ್ಥವಾಗುವುದಿಲ್ಲ.



ಅವನಿಗೆ ಅನಿಸಬಹುದು. ಇಲ್ಲಿಯವರೆಗೆ ನಾನು ಏನೇಲ್ಲಾ ಮಾಡಿದ್ದೇನೋ ಅದು ನನಗಾಗಿ ಅಲ್ಲಾ! ಇದು ಎಲ್ಲಾ ನನ್ನವರಿಗಾಗಿ. ನನಗೆ ಬೇಕಾಗಿರುವುದೇ ಬೇರೆ!



ಆದರೇ ಈಗಾಗಲೇ ಬಹಳಷ್ಟೂ ದೂರ ಕ್ರಮಿಸಿದ್ದಾಗಿದೆ. ಮತ್ತೇ ಅದು ಸರಿಪಡಿಸಲಾರದಷ್ಟು ಕಗ್ಗಾಂಟಾಗಿದೆ ಅನಿಸುತ್ತದೆ.



ಆದಕ್ಕೆ ನಾವುಗಳು ಒಂದಷ್ಟು ಸಾವಧಾನವಾಗಿ ನಮ್ಮವರನ್ನಲ್ಲದೇ ಪರರ ಬಗ್ಗೆ ಯೋಚಿಸುವುದನ್ನು ಕಲಿಯಬೇಕು. ಪ್ರಕೃತಿಯ ಸೂಕ್ಷ್ಮಗಳನ್ನು ಅರಿಯುವ ಬುದ್ಧಿಯನ್ನು ಕಲಿಯಬೇಕು. ನಿಸರ್ಗ ಸೌಂದರ್ಯವನ್ನು ವಿಫುಲವಾಗಿ ಅಸ್ವಾದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ನಮಗೆ ಗೊತ್ತಿರದವರಿಗೆ ನಮ್ಮಿಂದ ಆದಷ್ಟು ಚಿಕ್ಕ ಚಿಕ್ಕ ಸಹಾಯವನ್ನು ಮಾಡಬೇಕು. ಹೆಚ್ಚು ಹೆಚ್ಚು ಸಮಯಗಳನ್ನು ಮನೆ ಮಂದಿಯೆಲ್ಲಾ ಕುಳಿತು ಮಾತುಕತೆಗಳಲ್ಲಿ ಕಳೆಯುವಂತಾಗಬೇಕು. ನೆರೆಹೊರೆಯೊಂದಿಗೆ ಹೊಂದಿಕೊಂಡು ಅವರ ಕಷ್ಟ ಸುಖಗಳಲ್ಲಿ ಬಾಗಿಯಾಗುವಂತಾಗಬೇಕು.



ನಾನೇನು ಹೇಳಲು ಬಯಸುತ್ತಿದ್ದೇನೆ ಅಂದರೇ. ನಾವುಗಳು ನಿರ್ವಹಿಸುತ್ತಿರುವ ಈ ರೋಟಿನ್ ಕೆಲಸಗಳು, ನಡಾವಳಿಗಳನ್ನು ಬಿಟ್ಟು ಬೇರೆಯೇ ಆದ ತುಂಬ ಹೊಸದಾದ ಕೆಲಸ ಕಾರ್ಯಗಳನ್ನು ಆಟ್ ಲೀಸ್ಟ್ ತಿಂಗಳಲ್ಲಿ ಒಂದು ಅಥವಾ ವರುಷದಲ್ಲಿ ೬ ಕೆಲಸಗಳನ್ನೋ, ಸಹಾಯಗಳನ್ನೊ, ನೋಟಗಳನ್ನೋ, ಊರುಗಳನ್ನೋ, ಪ್ರಕೃತಿಯನ್ನೋ, ಅಪರಿಚತರನ್ನೋ ಕಾಣುವಂತಾದರೇ.. ಆದೇ ಒಂದು ಚೈತನ್ಯವನ್ನು, ಜಡ್ಡುಗಟ್ಟಿರುವ ಮನಸ್ಸಿಗೆ ಶಾಂತಿಯನ್ನು ನೂರು ಪ್ರತಿಶತಃ ಕೊಡುವುದು ಎಂದು ನಿಮಗೆ ಅನಿಸುವುದಿಲ್ಲವಾ?



ಲೇಟ್ಸ್ ಟ್ರೈ!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ