ಬುಧವಾರ, ಏಪ್ರಿಲ್ 11, 2012

ಸಹನೆಗೆ ಇನ್ನೊಂದು ಹೆಸರು...?

ಇದು ಒಂದು ಘಟನೆ: ಪಾರ್ಕಲ್ಲಿ ವಯಸ್ಸಾದ ಅಜ್ಜಿ ಎಡವಿ ಬಿದ್ದರು. ಅವರೆ ತಮ್ಮಷ್ಟಕ್ಕೆ ತಾವೇ ಕಷ್ಟಪಟ್ಟು ಎದ್ದು ಕೂತರು. ಪಾರ್ಕಲ್ಲಿ ಇದ್ದ ಎಲ್ಲಾ ಹೆಂಗಸರು ಅವರ ನೆರವಿಗೆ ದಾವಿಸಿದರು.ಮುಂಗೈ ನೆಲಕ್ಕೆ ಉರಿದ್ದರಿಂದ, ಕೈಗೆ ಸ್ವಲ್ಪ ಪೆಟ್ಟಾಗಿತ್ತು. ಅಲ್ಲಿಯೇ ಹತ್ತಿರದ ಹೋಟಲ್ ನಿಂದ ನೀರು ತಂದು ಕುಡಿಸಿದರು. ಅಷ್ಟರಲ್ಲಿಯೇ ಚೇತರಿಸಿಕೊಂಡ ಅಜ್ಜಿ ತನ್ನಲ್ಲಿದ್ದ ಮೊಬೈಲ್ ನ್ನು ತೆಗೆದುಕೊಂಡು ಮನಗೆ ಪೋನು ಮಾಡಿತು.

ಸ್ವಲ್ಪ ಹೊತ್ತಿನಲ್ಲಿ ಮನೆಯಿಂದ ಪಾರ್ಕಗೆ ದಾವಿಸಿ ಬಂದಿದ್ದು ಮತ್ತೊಬ್ಬ ಹೆಂಗಸು. ಅವಳು ಆ ಅಜ್ಜಿಯ ಮಗಳೋ, ಸೊಸೆಯೋ ಇರಬೇಕು.

ಇಲ್ಲಿ ಗಮನಿಸಬೇಕಾಗಿದ್ದು. ಯಾರಾದರೂ ತಮ್ಮ ವಯಸ್ಸಾದ ಕಾಲಕ್ಕೆ ಏನಾದರೂ ನೆರವು ಅಸರೆ ಎಂಬುದನ್ನು ಪಡೆಯುವುದಾದರೆ ಅದು ಹೆಣ್ಣಿನಿಂದ ಮಾತ್ರ. ಗಂಡಿನಿಂದ ಅಲ್ಲಾ.

ಮೂರು ನಾಲ್ಕು ದಿನಗಳಿಂದ ಬೆಂಗಳೂರಿನ ದಿನಪತ್ರಿಕೆ ಮತ್ತು ಟಿ.ವಿ ವಾರ್ತೆಗಳನ್ನು ಗಮನಿಸಿದ್ದೇವೆ. ಹೆತ್ತ ಅಪ್ಪನೇ ತನ್ನ ಮಗಳನ್ನು, ಅದು ಏನೂ ಅರಿಯದ ಕಂದಮ್ಮನನ್ನು ಹಿಂಸಿಸಿ ಕೊಲ್ಲಲು ಪ್ರತ್ನಿಸಿದ್ದು. ಅವನು ಜೈಲು ಪಾಲಾದದ್ದು. ನಿನ್ನೇ ಆ ಕೂಸು ಸಾವು ಬದುಕಿನ ಹೋರಾಟದ ಮಧ್ಯೆ ನಿಂತು ಕೊನೆಗೆ ಕಣ್ಣು ಮುಚ್ಚಿದ್ದು.

ಅಲ್ಲಾ ಇನ್ನಾದರೂ ಈ ಹೆಣ್ಣು ಹೆತ್ತರೆ ಅದು ಸೆರಗಿನಲ್ಲಿನ ಕೆಂಡ ಎಂದುಕೊಂಡು ಹೆಣ್ಣು ಮಕ್ಕಳನ್ನು ದೂರ ಸರಿಸುವುದು. ಹೆಣ್ಣು ಬ್ರೊಣ ಹತ್ಯೆ ನಿರಂತರವಾಗಿ ನಡೆಸುತ್ತಿರುವುದು ನಾವುಗಳು ಎಂಥ ಅನಾಗರೀಕರು ಎಂಬುದನ್ನು ತೋರಿಸುತ್ತದೆ.ಅಲ್ಲವಾ?

ಹೆಣ್ಣು, ಹೆತ್ತವರಿಗೆ ಹೊರೆಯಲ್ಲಾ ಎಂಬುದನ್ನು ನಮ್ಮ ಜೊತೆಯಲ್ಲಿರುವ ಹತ್ತು ಹಲವು ಹೆಣ್ಣು ಮಕ್ಕಳು ಈಗಾಗಲೇ ನಿರೂಪಿಸಿದ್ದಾರೆ.

ಗಂಡು ಮಕ್ಕಳು ಮಾಡುವ ಎಲ್ಲಾ ನೈಪುಣ್ಯವಾದ,ಕಷ್ಟಕರವಾದ ಕೆಲಸಗಳನ್ನು ಮಾಡುತ್ತಿದ್ದಾಳೆ. ಪ್ರತಿಯೊಂದು ರಂಗದಲ್ಲೂ ತನ್ನದೇಯಾದ ಛಾಪನ್ನು ಹೊತ್ತಿದ್ದಾಳೆ. ಆದರೂ ಈ ರೀತಿಯಾಗಿ ಹೆಣ್ಣು ಹೆಣ್ಣೆಂದು ಹೀಗಳೆಯುವುದು ಎಷ್ಟರ ಮಟ್ಟಿಗೆ ಸರಿ.

ತನ್ನ ಹೆತ್ತ ತಾಯಿಯು ಒಂದು ಹೆಣ್ಣು ಎಂಬುದನ್ನು ಯಾಕೆ ಈ ಗಂಡು ಸಮಾಜ ಮರೆಯುತ್ತದೆ? ತನ್ನ ಜೊತೆಗಾತಿಯಾಗಿ ಇರಲು ಹೆಣ್ಣು ಬೇಕು. ತನ್ನ ಎಲ್ಲಾ ಬೇಕೂ ಬೇಡಗಳನ್ನೆಲ್ಲಾ ಪೊರೈಸಲು ಹೆಣ್ಣು ಬೇಕು. ಇಡೀ ಮನೆಯನ್ನು ತೂಗಿಸಿಕೊಂಡು ಹೋಗಲು ಹೆಣ್ಣು ಬೇಕು. ಯಾವುದೇ ಒಂದು ಕಷ್ಟವಾದ ಮತ್ತು ಕ್ಲೀಷ್ಟವಾದ ಕೆಲಸ ಮಾಡಲು ಹೆಣ್ಣು ಬೇಕು.

ಆದರೇ ಅದೇ ಹೆಣ್ಣು ಜನಿಸಿದರೇ ಬೇಡ! ಇದು ಯಾವ ನ್ಯಾಯ ಸ್ವಾಮಿ?

ಹೆಣ್ಣದಾರೆ ಹೊರೆಯೆಂಬ ಅನಿಸಿಕೆಯನ್ನು ಹುಟ್ಟು ಹಾಕಿದವರ್ಯಾರು? ಅದು ಗಂಡಸೇ ಅಲ್ಲವಾ?

ಹೆಣ್ಣಿಗೆ ಮದುವೆಯಾಗಬೇಕೆಂದರೇ ದಂಡಿಯಾಗಿ ವರದಕ್ಷೀಣೆಯನ್ನು ಪಡೆಯುವುದು ಯಾರು? ಗಂಡಸ್ಸಾದ ಇವನೇನು ಯಾವುದರಲ್ಲಿ ಹೆಣ್ಣಿಗಿಂತ ಉನ್ನತಿಯಾಗಿದ್ದಾನೆ? ಅದು ಯಾಕೆ ಹಣ, ಒಡವೆ, ಮದುವೆ ಖರ್ಚು ಇತ್ಯಾದಿಯನ್ನು ಹೆಣ್ಣು ಹೆತ್ತವರಿಂದ ಪಡೆಯುವವನು?

ಇದೇ ತೋರಿಸುವುದಿಲ್ಲವೆ ಗಂಡು ಎಷ್ಟರ ಮಟ್ಟಿಗೆ ಅಬಲ ಎಂಬುದನ್ನು.

ಇದನ್ನು ಗಮನಿಸಿದರೇ ನಮಗೆ ಗೊತ್ತಾಗುವುದಿಲ್ಲವೇ ಗಂಡು ಯಾವುದಕ್ಕೂ ಪ್ರಯೋಜನವಿಲ್ಲದವನ ರೀತಿಯಲ್ಲಿ ತನ್ನ ಜೊತೆಗಾತಿಯಾಗಿ ಬಾಳ ಸಂಗಾತಿಯಾಗಿ ಬರುವವಳು ತನ್ನ ಜೊತೆಯಲ್ಲಿ ಶ್ರಿಮಂತಿಕೆಯನ್ನು ತರಲಿ ಎಂದು ಆಶಿಸುವ ದೌರ್ಬಲ್ಯತೆ ಈ ಗಂಡಸಿಗೆ ಯಾಕೆ ಸ್ವಾಮಿ?




ಇದಕ್ಕಾಗಿ ಮದುವೆಯಾಗಿ ಬಂದಂತಹ ಹೆಣ್ಣಿಗೆ ಗಂಡನ ಮನೆಯವರ ಚಿಂತಾಜನಕವಾದ ಉಘ್ರ ಕಿರುಕುಳ. ಇದನ್ನು ಸಹಿಸಲಾರದ ಹೆಣ್ಣು ಬೆಂಕಿಗೋ, ನೆಣಿಗೋ ವಿಷಕ್ಕೋ ಶರಣು!

ಇದರಿಂದ ಎಷ್ಟೊಂದು ಹೆಣ್ಣು ಹೆತ್ತ ಸಂಸಾರಗಳು ಕಷ್ಟ ಮತ್ತು ಬಡತನದ ಸರಮಾಲೆಯಲ್ಲಿಯೇ ಮುಳುಗಿ ಹೋಗುತ್ತವೆ.

ಇದನ್ನು ನೋಡಿದ ಪ್ರತಿಯೊಂದು ಸಂಸಾರ ನಮಗೆ ಕೇವಲ ಗಂಡು ಸಂತಾನ ಮಾತ್ರ ಜನಿಸಲಿ ಎಂದು ಎಷ್ಟೊಂದು ದೇವರ ಅರಕೆ. ಅದಕ್ಕಾಗಿ ಏನೇನೋ ಪೂಜೆ ಪುರಸ್ಕಾರಗಳು.

ಇವುಗಳೆನ್ನೇಲ್ಲಾ ಮಾಡಿರುವವರು ಯಾರು ಎಂದರೇ ಅದೇ ಗಂಡು ಎಂಬ ಸಮಾಜ.

ಇದಕ್ಕೆ ಸಾಕ್ಷಿ ಎಂಬಂತೆ ಗಂಡು ಹೆಣ್ಣಿನ ಸರಾಸರಿ ೧೦೦೦ - ೯೧೪ ಕ್ಕೆ ಬಂದು ನಿಂತಿದೆ. ನೋಡಿ ಎಷ್ಟೊಂದು ಅಂತರ.

ನಾವುಗಳು ನಿತ್ಯ ಹೈಟೆಕ್, ಆಟೆಕ್, ಇಟೆಕ್ ಎಂದು ಜಪ ಮಾಡುತ್ತಿರುತ್ತೇವೆ. ಆದರ ಜೊತೆಯಲ್ಲಿಯೇ ಶಿಕ್ಷಿತ ಮತ್ತು ಅಶಿಕ್ಷಿತರ ಮಧ್ಯದಲ್ಲಿಯೇ ಇಂಥ ನೂರಾರು ಶೋಷಣೆಗಳು ಜರುಗುತ್ತಲೆ ಇರುತ್ತೇವೆ. ಅವುಗಳಿಗೆ ಕಡಿವಾಣ ಯಾವಾ ರೀತಿಯಲ್ಲಿಯು ಬೀಳಲಾರದು. ಯಾಕೆ?

ಹೆಣ್ಣು ಹೆತ್ತರೆ ಮುಂದೆ ಮದುವೆ ಮುಂಜಿಯನ್ನು ಮಾಡುವುದು ಬಾರಿ ಕಷ್ಟ ಎಂಬ ಅಭಿಪ್ರಾಯ ಬಡ ಕುಟುಂಬಗಳಲ್ಲಿ ಬಲಿಷ್ಟವಾಗಿ ಮನೆ ಮಾಡಿಬಿಟ್ಟಿದೆ. ಇದಕ್ಕೆ ಕಾರಣ ಹೆಣ್ಣಿನ ಕಡೆಯವರು ಮದುವೆಯ ಸಮಯದಲ್ಲಿ ತನ್ನಲ್ಲಿ ಇದ್ದರೂ ಇಲ್ಲದಿದ್ದರೂ ಸಾಲ ಸೂಲವನ್ನಾದರೂ ಮಾಡಿ ಗಂಡಿನ ಮನೆಗೆ ಕೊಡಲೇ ಬೇಕು ಎಂಬ ಅಲಿಖಿತ ಶಾಸನ.

ಉಳ್ಳವರು ತಮ್ಮ ಶ್ರಿಮಂತಿಕೆಯನ್ನು ತೋರುಪಡಿಸಲು ಮದುವೆಯೆಂಬುದು ಸದಾವಕಾಶ. ಮದುವೆಯ ವಿಜೃಂಭಣೆಯನ್ನು ಸುತ್ತ ಮುತ್ತಲಿನ ತನ್ನ ನೆರೆಹೊರೆಯವರು ಕೊಂಡಾಡಲಿ ಎಂಬ ಅಭಿಪ್ರಾಯದಿಂದ ಬಡವರ ಕಣ್ಣು ಕುಕ್ಕುವಂತೆ ನೆರೆವೇರಿಸುವರು.

ಬಡವರು ಇವರನ್ನು ತೋರಿಸಿ.. ಅದೇ ರೀತಿಯಲ್ಲಿ ನೀನು ಶಕ್ತಿ ಮೀರಿ ವರದಕ್ಷೀಣೆ ಮತ್ತು ಮದುವೆಯನ್ನು ಮಾಡಿಕೊಡಲೇ ಬೇಕು ಎಂಬ ಹಟ ಹಿಡಿಯುವುದು. ಈ ಎಲ್ಲಾ ಕಾರಣಗಳಿಂದಲೇ ಇಂಥ ಅಮಾನವೀಯ ರೀತಿಯಲ್ಲಿ ಹೆಣ್ಣು ಶಿಶುಗಳ ದಾರುಣ ಹತ್ಯೆಗಳು ನಿರಂತರವಾಗಿ ನಿತ್ಯ ನಡೆಯುತ್ತಲೇ ಇರುತ್ತೇವೆ.

ಇಂದಿನ ಪತ್ರಿಕೆಗಳಲ್ಲಿ ಕನಿಷ್ಟ ಒಂದಾದರೂ ವರದಕ್ಷೀಣೆಯ ಕಿರುಕುಳದ ಸಾವುಗಳ ವರದಿಯನ್ನು ಓದುತ್ತಲೇ ಇರುತ್ತೇವೆ. ವರದಿಯೇ ಅಗದೇ ನಡೆಯುವ ಘಟನೆಗಳು ಇನ್ನೆಷ್ಟೋ.

ಗಂಡ ಮತ್ತು ಹೆಂಡತಿ ಯೋಚಿಸಿ. ಇಂದು ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ. ಅವರುಗಳಿಗೆ ಸರಿಯಾದ ಶಿಕ್ಷಣವನ್ನು ನೀಡಿದರೆ ತನ್ನ ಕಾಲ ಮೇಲೆ ತಾವೇ ನಿಲ್ಲುವಂತಹ ಆತ್ಮ ಸ್ಥೈರ್ಯವನ್ನು ರೂಡಿಸಿಳ್ಳುತ್ತಿದ್ದಾರೆ.

"ಹೆಣ್ಣು ಅಬಲೆ. ಅವಳು ಚಿಕ್ಕವಳಾಗಿದ್ದಾಗ ಹೆತ್ತವರ ಅಸರೆ, ಯೌವನಕ್ಕೆ ಬಂದಾಗ ಗಂಡನ ಅಸರೆ, ಮುದುಕರಾದಾಗ ಗಂಡು ಮಗನ ಅಸರೆ" ಎಂಬ ಅಸಹಜವಾದ ಗಾದೆಯನ್ನು ಹಿಂದಿನವರು ಮಾಡಿದ್ದರು.

ಅದರೇ ಇಂದು ಎಲ್ಲರಿಗೂ ಅವಳೆ ಅಸರೆಯನ್ನು ಕೊಡುವ ಮಟ್ಟಕ್ಕೆ ಬೆಳೆದಿದ್ದಾಳೆ. ಅವಳನ್ನೇ ಹೆತ್ತವರು, ಗಂಡನೂ, ಮಗನೂ ಅವಲಂಬಿಸುವ ಮಟ್ಟಕ್ಕೆ ತಾನು ಆರ್ಥಿಕವಾಗಿ ಸಮೃದ್ಧಾವಾಗಿ ಬೆಳೆಯುತ್ತಿದ್ದಾಳೆ.

ಈ ರೀತಿಯಾಗಿ ಹೆಣ್ಣಿನ ಬೆಳವಣಿಗೆಗಳನ್ನು ನಿತ್ಯ ನೋಡುತ್ತಿದ್ದರೂ, ಹೆಣ್ಣು ಹುಟ್ಟಿದ ತಕ್ಷಣ ಹ್ಯಾಪು ಮೊರೆಯನ್ನು ಹಾಕುವುದನ್ನು ನಮ್ಮ ಎಲ್ಲಾ ತಾಯಿ ತಂದೆಯರು ಬಿಡಬೇಕು. ಅವರೂ ಯಾವುದರಲ್ಲೂ ಕಡಿಮೆಯಿಲ್ಲಾ. ಅವರ ಸಂಖ್ಯೆ ಇನ್ನೂ ಹೆಚ್ಚಾಗಲು ಬಿಡೋಣ.

ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೂ ಅಲ್ಲಿ ದೇವತೆಗಳು ನೆಲಸಿರುತ್ತಾರೆ. ಯಾವ ಕುಟುಂಬದಲ್ಲಿ ಹೆಣ್ಣಿರುತ್ತಾಳೋ ಆ ಕುಟುಂಬ ಸುಖ ಸಮೃದ್ಧಿಯಿಂದ ಕೊಡಿರುತ್ತದೆ.

ನಿಮ್ಮ ಕಡೆಗಾಲದಲ್ಲಿ ಆಸರೆಯಾಗುವವರು ಈ ಹೆಣ್ಣು ಮಾತ್ರ. ಗಂಡು ಎಂಬುದು ಕೇವಲ ಹೇಳಿಕೊಳ್ಳುವುದಕ್ಕೆ ಮಾತ್ರ.

ಹೆಣ್ಣಿನ ಮನಸ್ಸೆ ಅಂಥಹದ್ದು. ಅದಕ್ಕೆ ಹೆಣ್ಣನ್ನೂ ಭೂಮಿಗೆ ಹೋಲಿಸಿರುವುದು. ಅವಳ ಮಹತ್ವವನ್ನು ಎಲ್ಲಾರೂ ಅರಿಯಬೇಕು.

ಸಹನೆಗೆ ಇನ್ನೊಂದು ಹೆಸರು ಸ್ತ್ರೀ. ಅವಳ ಸಂತತಿಯನ್ನೇ ಹರಣ ಮಾಡುವುದು ಅಕ್ಷಮ್ಯ ಅಪರಾಧ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ