ಗುರುವಾರ, ಮಾರ್ಚ್ 29, 2012

ರಾಜ-ಕಾರಣ

ಆರಿಸಿ ಕಳಿಸಿದ ಮತದಾರರುಗಳು ನಿಟ್ಟುಸಿರು ಬಿಡುವಂತಾಗಿದೆ. ನಾಯಕರುಗಳು, ಜನ ಪ್ರತಿನಿಧಿಗಳು ಎಂದು ಹೇಳಿಕೊಂಡು ತಿರುಗುವ. ಶಾಸನವನ್ನು ನಾವುಗಳೇ ರಚಿಸುವವರು ಎಂದು ಬೀಗುವವರ. ಯಾವುದೇ ಹೊಸ ಯೋಜನೆ ಕಾರ್ಯಕ್ರಮಗಳು ನಡೆದರು ಅಲ್ಲಿ ನಾವಿರಬೇಕು ಎನ್ನುವವರ ಅಸಲಿ ನಿಯತ್ತು ಜನಗಳಿಗೆ ಗೊತ್ತಾಗಿಬಿಟ್ಟಿದೆ.

ಚುನಾವಣೆಯ ವೇಳೆ ಇಲಿಯಂತೆ ಬಂದು. ಹಾಗೆ ಹೀಗೆ ಎಂದು ಸಾವಿರಾರು ಸುಳ್ಳು ಆಶ್ವಾಸನೆಗಳನ್ನು ರಂಗು ರಂಗಾಗಿ, ಅಂಗೈಯಲ್ಲಿಯೇ ಆಕಾಶವನ್ನು ತೋರಿಸುವವರು ಇವರುಗಳೇನಾ ಎನ್ನುವಂತಾಗಿದೆ.

ಜನಲೋಕಪಾಲ್ ಬೇಕೇ ಬೇಕು ಎಂದು ೭೦ರ ವಯಸ್ಸಿನ ಅಣ್ಣಾ ಕನಸು ಹಗಲು ಕನಸಾಗುವವಂತಾಗಿದೆ. ಯಾಕೆಂದರೇ ಈ ಒಂದು ಶಾಸನ ಹೊರಬೀಳುವುದನ್ನು ತಡೆಯಲು ಪಕ್ಷ ಬೇದ ಮರೆತು ಪ್ರತಿಯೊಬ್ಬ ಜನಪ್ರತಿನಿಧಿಯು ಎದ್ದು ನಿಂತು ಕೊಂಡು ಹೋರಾಡುತ್ತಿದ್ದಾರೆ.

ಜನರಿಗೆ ಏನೂ ಬೇಕೋ ಅದನ್ನು ನಾವುಗಳು ಕೊಡುತ್ತೇವೆ. ನಮ್ಮ ಸರ್ಕಾರವೇ ನಿಮ್ಮದು ಎಂದು ಸುಳ್ಳು ಸಿನಿಮಾ ತೋರಿಸಿದ ಮಂದಿಯೇ ಇಂದು ಜನರ ಆಶೋತ್ತರಗಳಿಗೆ ಎಳ್ಳು ನೀರು ಬಿಡುವಂತಹ ಮನಸ್ಸು ಮಾಡುತ್ತಿದ್ದಾರೆ.

ಯುವಕರುಗಳಿಗೆ, ಮುಂದಿನ ಪೀಳಿಗೆಗೆ ಮಾದರಿಯಾಗಿರಬೇಕಾದವರೇ ಜನರಿಂದ ಛೀ! ಥೋ! ಎಂದು ಉಗುಳಿಸಿಕೊಳ್ಳುವ ಮಟ್ಟಕ್ಕೆ ಬರುತ್ತಿದ್ದಾರೆ.

ಪ್ರಜಾಪ್ರಭುತ್ವ ಎಂದರೇ ಪ್ರಜೆಗಳೆ ತಮ್ಮ ಸರ್ಕಾರವನ್ನು ನಡೆಸುವ ಸವಲತ್ತು ಹೊಂದಿರುವಂತಹದ್ದು.

ನೋಡಿ ಈಗ ಇರುವವರು ಜನರ ಆಸೆಗಳಿಗೆ ಕನಸುಗಳಿಗೆ ಕೊಳ್ಳಿ ಇಡುವಂತಹ ಮನಸ್ಥಿತಿಯವರುಗಳಾಗಿದ್ದಾರೆ.

ಭ್ರಷ್ಟಾಚಾರ ಯಾವ ರೀತಿಯಲ್ಲಿ ಸರ್ವವ್ಯಾಪಿಯಾಗಿದೆ ಎಂದರೇ.. ಅದು ಮಾಮೂಲು ಬಿಡಿ ಎಂಬ ಮಟ್ಟಿಗೆ ಹಾದಿಯಿಂದ ಅಂತ್ಯದವರೆಗೆ ಜೀವನಾಡಿಯಾಗಿದೆ.

ಇನ್ನಾದರೂ ಭಾರತದಲ್ಲಿ ಹೊಸ ಬೆಳಕಿನ ಕಿರಣ ಮೂಡುವುದು ಎಂಬ ದೂರದ ಆಶಾ ಭಾವನೆಯೇ ಇಲ್ಲದಂತಾಗಿದೆ.

ಮನುಷ್ಯನಿಗೆ ಹಣ ಎಷ್ಟು ಬೇಕು? ಹಣವೇ ಜೀವನವಾ?

ನೋಡಿರಬಹುದು ಎಲ್ಲಾ ರಾಜಕೀಯ ನಾಯಕರುಗಳ ವರಮಾನ ಘೊಷಣೆಯ ಪತ್ರವನ್ನು ಯಾರೊಬ್ಬರು ಅಂಥ ಬಡವರೇನೂ ಅಲ್ಲಾ.

ಅಂದರೇ ಒಬ್ಬ ಬಡ ಸಾಮಾನ್ಯ ಪ್ರಜೆ ರಾಜಕೀಯ ರಂಗಕ್ಕೆ ದುಮುಕಲು ಸಾಧ್ಯವಿಲ್ಲ ಎಂಬ ಮಟ್ಟಿಗೆ ಹಣವಂತರಿಗೆ ಮಾತ್ರ ರಾಜಕೀಯ ಎನ್ನುವುದನ್ನು ಅವರುಗಳ ವರಮಾನ ತೋರಿಸುತ್ತಿದೆ.

ಚುನಾವಣೆಗೆ ಏನನ್ನು ಖರ್ಚು ಮಾಡದೇ ಯಾರೂ ಜಯಗಳಿಸಲಾರದ ಸ್ಥಿತಿ ತಂದು ನಿಲ್ಲಿಸಿರುವುದು ನಮ್ಮ ದುರ್ವೀಧಿಯೇ ಸರಿ.




ಚುನಾವಣೆಯ ಭವಿಷ್ಯ ಹಣದ ಮೇಲೆ ನಿಂತಿದೆ ಅಂದರೇ.. ಮೊಲವೇ ಸರಿಯಿಲ್ಲದಾಗ ಪ್ರತಿಫಲವಾದ ರಾಜಕೀಯ ನಾಯಕರುಗಳು.. ಸರ್ಕಾರ.. ಯೋಜನೆಗಳು.. ಅಡಳಿತ.. ಇದರಲ್ಲಿ ಪ್ರಾಮಾಣಿಕತೆಯನ್ನು ದುರ್ಬಿನು ಹಾಕಿ ಹುಡುಕಬೇಕು ಅಷ್ಟೇ.

ಬಡ ಮಕ್ಕಳಿಗೆ ಕೊಡುವಂತಹ ಉಚಿತ ಆಹಾರ, ಪೌಷ್ಟಿಕಾಂಶಗಳಲ್ಲೂ ಸಹ ನಮ್ಮ ಅಧಿಕಾರಶಾಯಿಗಳು ಮೇಯುತ್ತಾರಲ್ಲಾ ಶಿವಾ ಶಿವಾ...!!

ಇನ್ನೂ ಏನೂ ಬಿಡುತ್ತಾರೆ ಯೋಚಿಸಿ!

ಹೀಗೆ ಯಾವುದರಲ್ಲೂ ಅನುಮಾನದಿಂದ ನೋಡುವಂತಹ/ನೋಡಬೇಕಾದಂತಹ ವ್ಯಕ್ತಿಗಳ ಸೃಷ್ಟಿಯಾಗುತ್ತಿದೆಯೇ? ಗೊತ್ತಿಲ್ಲಾ.

ನೈತಿಕತೆ ಎಂಬುದು ಪುಸ್ತಕದ ಮಾತು. ನಿಜ ಜೀವನದಲ್ಲಿ ಅವುಗಳಿಗೆ ಯಾರು ಕೇರ್ ಮಾಡಲ್ಲಾ ಎನ್ನುವುದನ್ನು ನಾವುಗಳು ನಮ್ಮ ಕಿರಿಯ ಪೀಳಿಗೆಗೆ ಕಿವಿ ಮಾತಿನಲ್ಲಿ ಹೇಳುವಂತಹ ಸ್ಥಿತಿ ಬಂದಿದೆ.

ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂಬಂತೆ ಯಾವೆಲ್ಲಾ ಅಪಾಧಾನೆಗಳು ತನ್ನ ಮೇಲೆ ಇದ್ದರೂ ಸರ್ಕಾರದ ಅತಿ ಉನ್ನತ ಸ್ಥಾನಗಳು ತನಗೆ ಮಾತ್ರ ಮೀಸಲು ಎಂಬ ರೀತಿಯಲ್ಲಿ ನಮ್ಮ ಜನಗಳು ಮರ್ಯಾದೆಯನ್ನು ಮೀರಿ-ಮೆಟ್ಟಿ ಅಪಹಾಸ್ಯಕ್ಕೆ ಇಡಾಗುತ್ತಿರುವುದು ಯಾವುದರ ದ್ಯೋತಕ!!........?

ತಾವೇ ಎಲ್ಲಾ ಬಾರಿ ಅ ಸ್ಥಾನದಲ್ಲಿ ಕೂರಬೇಕು. ತನ್ನ ವಂಶದವರೇ ಅಧಿಕಾರದಲ್ಲಿ ಇರಬೇಕು. ತಾನು ಮಾತ್ರ ಎಲ್ಲಾ ಗೌರವವಕ್ಕೆ ಅರ್ಹ! ತನ್ನವರಿಗೆ ಮಾತ್ರ ಎಲ್ಲಾ ಅನುಕೂಲ ಸಿಗಬೇಕು.ಎಂಬ ಮನಸ್ಸಾದರೂ ಯಾಕೆ ಈ ಮಂದಿಗೆ.

ಗಮನಿಸಿರಬಹುದು. ಒಂದು ಚಿಕ್ಕ ಉದ್ಯೋಗಕ್ಕೂ ಎಷ್ಟೊಂದು ಸಂದರ್ಶನ, ಪರೀಕ್ಷೆಗಳನ್ನು ಮಾಡುತ್ತಾರೆ. ಆ ವ್ಯಕ್ತಿ ಪರೀಕ್ಷೆಗಳಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಉತ್ತಮ ವ್ಯಕ್ತಿತ್ವವವನ್ನು ಹೊಂದಿದರೆ ಮಾತ್ರ ಸೇಲೆಕ್ಟ್. ಅನಂತರವೋ ಪ್ರೊಬೇಶನರಿ ಪೀರಿಯಡ್ ಆರು ತಿಂಗಳು ಅಥಾವ ಒಂದು ವರುಷ. ಅವನ ಕೆಲಸ ಚೆನ್ನಾಗಿದ್ದರೆ ಮುಂದುವರಿಕೆ ಇಲ್ಲ ಎಂದರೇ ಔಟ್!

ಅದರೇ ಅತಿ ಉನ್ನತವಾದ ಎಮ್.ಎಲ್.ಎ, ಎಂ.ಪಿ. ಸಿ.ಎಂ ಮುಂತಾದ ರಾಜಕಾರಣದ, ದೇಶದ ಅಧಿಕಾರವನ್ನು ನಡೆಸುವಂತಹ ಮುಂದಾಳುಗಳಿಗೆ ಈ ರೀತಿಯ ಯಾವಾ ಪರೀಕ್ಷೆಗಳಿವೆ ಹೇಳಿ?

ಕೇವಲ ಜನ ಮತದಿಂದ ಆರಿಸಿ ಬಂದು ಮುಖ್ಯ ಆಯಕಟ್ಟು ಜಾಗಗಳಲ್ಲಿ ಸ್ಥಾಪಿತರಾಗಿಬಿಡುತ್ತಾರೆ. ಆ ಸ್ಥಾನದ ಮಹತ್ವವಾದರೂ ಈ ಮಂದಿಗಳಿ ಗೊತ್ತಿರಲಾರದು ಅನಿಸುತ್ತದೆ? ಒಬ್ಬ ಎ.ಎಲ್.ಎ ಅಥವಾ ಎಂ.ಪಿ ಲಕ್ಷ ಜನಗಳ ಪ್ರತಿನಿಧಿ. ಈ ವ್ಯಕ್ತಿ ಅಷ್ಟು ಮಂದಿಯ ಪ್ರತಿನಿಧಿ. ಅಷ್ಟೂ ಜನಗಳ ಕನಸಿನ ಸಾರಥಿ ಅಲ್ಲವಾ?

ಅದರೇ ಅದು ಅವನಿಗೆ ಎಲ್ಲಿ ಗೊತ್ತಾಗಬೇಕು? ಎಲ್ಲಾ ಮರೆತು ತನಗೆ ಅನಿಸಿದ್ದನ್ನು ಮಾಡುತ್ತಾನೆ.

ಅಭಿವೃದ್ಧಿ ಎಂಬುದು ಆವನಿಗೆ ಮಾತ್ರ! ಜನಗಳ ಕಷ್ಟ ಸುಖಗಳು ನೆನಪಿಗೂ ಸಹ ಬರುವುದಿಲ್ಲವೇನೋ..

ನನಗೆ ಅನಿಸುತ್ತದೆ. ನಮ್ಮ ಜನಗಳು ಇನ್ನಾದರೂ ಬುದ್ಧಿವಂತರಾಗಬೇಕು. ಕೇವಲ ಕ್ಷಣಿಕವಾದ ಹಣ, ಹೆಂಡದಾಸೆಗೆ ಮಾರೂ ಹೋಗದೇ ಯಾರೂ ಉನ್ನತವಾದ ದೂರದೃಷ್ಟಿ ಮತ್ತು ಕನಸನ್ನು ಹೊಂದಿರುವವನು. ಯಾರೂ ನಯಾ ಪೈಸೆಯನ್ನು ಜನಗಳಿಗೆ ಕೊಡುವುದಿಲ್ಲವೋ. ಯಾರೂ ವಿದ್ಯವಂತ ಮತ್ತು ನಂಬುವಂತಹ ಪ್ರಾಮಾಣಿಕನಾದ ಸಾಮಾನ್ಯ ವ್ಯಕ್ತಿಯನ್ನು ಗೆಲ್ಲಿಸುವಂತಾಗಬೇಕು.

ಈ ರೀತಿಯ ಬದಲಾವಣೆಯ ಗಾಳಿ ಯಾವ ಕಾಲಕ್ಕೆ ಬೀಸುವುದೋ ಕಾದು ನೋಡಬೇಕು. ಸರ್ಕಾರ ಏನೂ ಮಾಡುತ್ತೇ ನಮ್ಮ ವ್ಯವಸಾಯವನ್ನು ಯಾರೂ ತಪ್ಪಿಸಲಾರರರು ಎಂಬ ಮನಸ್ಸನ್ನು ಬಿಡಬೇಕು. ನಮ್ಮಗಳ ರಕ್ಷಣೆಗೆ, ಅಭಿವೃದ್ಧಿಗೆ ಉತ್ತಮವಾದ ಸರ್ಕಾರ ಎಷ್ಟು ಮುಖ್ಯ ಎಂಬ ಪಾಠವನ್ನು ಅರಿಯಬೇಕು.

ಒಬ್ಬ ಒಬ್ಬ ಮತದಾರ ಸರಿಯಾದರೇ ಒಬ್ಬ ಜನಪ್ರತಿನಿಧಿ ಸರಿಯಾಗಿರುವವನು. ಒಬ್ಬ ಜನಪ್ರತಿನಿಧಿ ಸರಿಯಾಗಿದ್ದರೆ ಅವನು ಪ್ರತಿನಿಧಿಸುವ ಅವನ ಕ್ಷೇತ್ರದ ಪ್ರತಿಯೊಂದು ಸರ್ಕಾರಿ ಇಲಾಖೆಯಲ್ಲಿರುವ ಅಧಿಕಾರಿ ವರ್ಗ ಸರಿಯಾಗಿ ಕೆಲಸ ಮಾಡುವುದು. ಹೌದಲ್ಲವಾ? ಮನೆಯ ಯಜಮಾನ ಗಟ್ಟಿ ಮತ್ತು ನೈತಿಕವಾಗಿದ್ದರೆ ಮನೆಯ ಮಂದಿ ಕೊಂಚವಾದರೂ ಅಂಜಿಕೊಂಡು ನಡೆಯುತ್ತಾರೆ.

ಪ್ರತಿಯೊಬ್ಬರೂ ಸಹ ನೈತಿಕತೆ, ಮರ್ಯಾದೆಗೆ,ಉತ್ತಮ ಚಿಂತನೆಗೆ, ಉತ್ತಮ ಕೆಲಸಕ್ಕೆ ಬೆಂಬಲ ಕೊಡುವಂತ ಸಾಮಾಜಿಕ ಬದಲಾವಣೆಯನ್ನು ತರಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ