ಬುಧವಾರ, ಸೆಪ್ಟೆಂಬರ್ 21, 2011

ಹೊಸಬೆಳಕಿನ ಹೊಸ ಜ್ಯೋತಿಯ ಉಗಮ

ಇಂದು ನಾವು ನೋಡುತ್ತಾ ಇದ್ದೇವೆ ತಪ್ಪು ಮಾಡಿದವರೆಲ್ಲರಿಗೂ ಶಿಕ್ಷೆಯಾಗುತ್ತಿದೆ. ಒಬ್ಬರ ಹಿಂದೆ ಒಬ್ಬರು ಜೈಲು ಪಾಲಾಗುತ್ತಿದ್ದಾರೆ.

ಇದು ಏನನ್ನು ಸೂಚಿಸುತ್ತದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ನಾನು ಯೋಚಿಸುತ್ತೇನೆ ಇದು ಜೈಲು ಪಾಲಾದ ಎಲ್ಲಾ ಮಹನೀಯರಿಗಳಿಗೂ ಸತ್ಯವಾಗಿ ಗೊತ್ತು. ಮತ್ತೇ ಗೊತ್ತಿದ್ದು ಯಾಕೆ ಹೀಗೆ ತಪ್ಪು ಮಾಡುತ್ತಾರೆ. ಮುಂದೆ ನಾವೊಂದು ದಿನ ಕಾನೂನು ಎಂಬ ಕಾವಲುಗಾರನ ಕೈಯಲ್ಲಿ ಸಿಕ್ಕೆ ಸಿಗುತ್ತೇವೆ ಎಂಬುದು ತಿಳಿಯರಲಾರದ ಗಾವಿದರೇನಲ್ಲ.

ಆದರೂ ಯಾಕೆ ಈ ರೀತಿ ಗೊತ್ತಿರುವಂತಹ ತಪ್ಪುಗಳನ್ನು ಮಾಡಿ ಸಮಾಜದಲ್ಲಿ ಕೆಟ್ಟ ವ್ಯಕ್ತಿಗಳು ನಾವುಗಳು ಎಂಬುದನ್ನು ಜಗಜ್ಜಾಹೀರುಮಾಡಿಕೊಂಡು ಜೈಲ್ ಪೇರೆಡ್ -ಕೋರ್ಟ್ ಪೇರೆಡ್ ಮಾಡುತ್ತಿದ್ದಾರೆ?

ಉತ್ತರ ನಿಜವಾಗಿಯೂ ಗೊತ್ತಿಲ್ಲ ಅಲ್ಲವಾ?

ಪ್ರತಿಯೊಬ್ಬರೂ ಸ್ವಾರ್ಥದ ಆಸೆಯ ಮೋಡಿಗೆ ಬಲಿಯಾಗಿ ಈ ರೀತಿಯಲ್ಲಿ ನಗ್ನರಾಗಿ ನಿಂತಿರುವಂತೆ ಬಾಸವಾಗುತ್ತಿದ್ದಾರೆ. ಮನುಷ್ಯನ ಮನಸ್ಸೆ ಆ ರೀತಿ ಇರಬೇಕು. ಸಿಗುವಂತಹ ಅವಕಾಶ ಮತ್ತು ಯಾರೂ ಪ್ರಶ್ನೆ ಮಾಡದಂತಹ ಸನ್ನಿವೇಶ ವ್ಯಕ್ತಿಯ ಮನಸ್ಸನ್ನು ಎಲ್ಲಿ ಎಲ್ಲಿಗೋ ತೆಗೆದುಕೊಂಡು ಹೋಗಿಬಿಡುತ್ತದೆ ಅನ್ನಿಸುತ್ತದೆ.

ತನಗೆ ಎಷ್ಟು ಬೇಕು ಜೀವಿಸಲು, ಸಂತೋಷವಾಗಿರಲು ಮತ್ತು ಅದಕ್ಕೂ ಮೀರಿದ ಸಂಪತ್ತು, ಸುಪ್ಪತ್ತಿಗೆ,ಆಸ್ತಿ, ವೈಡೂರ್ಯಗಳ ದಣಿಯಾಗಬೇಕು ಎಂಬ ಮಹನ್ ಹಂಬಲಕ್ಕೆ ಅದೂ ಹೇಗೆ ಮರಳಾಗುತ್ತಾರೂ ದೇವರೇ ಬಲ್ಲ.

ಅದಕ್ಕಾಗಿ ತಾನು ಏನನ್ನಾದರೂ ಮಾಡಲೂ ಸಿದ್ಧನಾಗುತ್ತಾನೆ. ಏನ್ನನ್ನಾದರೂ ದಕ್ಕಿಸಿಕೊಳ್ಳಲು ತೊಡಗುತ್ತಾನೆ. ಅವನ ಮನಸ್ಸಿನಲ್ಲಿ ಒಂದೇ ಒಂದು ದುರಾಸೆಯೆಂದರೆ ಎಲ್ಲವನ್ನು ತನ್ನದು ಮಾಡಿಕೊಳ್ಳಬೇಕು. ಅದು ಅನ್ಯಾಯ ಮಾರ್ಗವಾಗಿರಲಿ, ದುರ್ಮಾರ್ಗವಾಗಿರಲಿ, ಏನಾದರಾಗಿರಲಿ ತಾನು ಮಾತ್ರ, ತನಗೆ ಮಾತ್ರ ಎಲ್ಲಾ ಸುಖಗಳು ಸಿಗಬೇಕು ಎಂಬ ದುರಾಸೆಯ ಕೂಪದಲ್ಲಿ ಬಿದ್ದು ಬಿಡುತ್ತಾನೆ ಅನ್ನಿಸುತ್ತದೆ.

ಅಲ್ಲಿ ಅವನಿಗೆ ಯಾವೊಂದು ಪಾಪ, ಪುಣ್ಯದ, ಧರ್ಮದ ಅಲೆಗಳು ಕಾಣಿಸುವುದಿಲ್ಲ. ಅಷ್ಟಕ್ಕೂ ಅಂದು ಸುಖದ ಸುಪ್ಪತ್ತಿಗೆಯಲ್ಲಿ ತೆಲಿದಂತಹ ಮಂದಿ ಇಂದು ಸರ್ಕಾರದ ದೃಷ್ಟಿಯಲ್ಲಿ, ಜನರ ದೃಷ್ಟಿಯಲ್ಲಿ ಯಾವ ರೀತಿ ಕಾಣುತ್ತಾರೆ ಎಂದು ಪ್ರತಿಯೊಬ್ಬರಿಗೂ ಅರ್ಥವಾಗಬೇಕು.

ಎಲ್ಲದಕ್ಕೂ ಒಂದು ಕೂನೆಯೆಂಬುದು ಇದ್ದೇ ಇರುತ್ತದೆ. ಈ ಒಂದು ಸಿದ್ಧಾಂತವನ್ನು ಮನಗತ ಮಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರಿಗೂ ಅವಶ್ಯ. ನಾವುಗಳು ಮೂಕ ಪ್ರಾಣಿ ಪಕ್ಷಿಗಳನ್ನು ನೋಡಿ ಕಲಿಯಬೇಕು. ಅವುಗಳ ಜೀವನ ಧರ್ಮ, ಸಹ ಬಾಳ್ವೆಯ ಸರಳ ಪಾಠವನ್ನು ನಿತ್ಯ ನೋಡಿದರೂ ನೋಡದ ರೀತಿಯಲ್ಲಿ ನಾವುಗಳೇ ಅತಿ ಬುದ್ಧಿವಂತ ಪ್ರಾಣಿ ಎಂಬ ದೋರಣೆಯಲ್ಲಿ ಸಿಕ್ಕಿದ್ದನ್ನೇಲ್ಲಾ ಬಾಚಿಕೊಳ್ಳಲು ಮುಂದಾಗುವುದು ಯಾವ ನ್ಯಾಯ.

ಅದು ಸರಿ. ಆಸೆ ಬೇಕು ಮನುಷ್ಯನ ಜೀವನಕ್ಕೆ, ಉತ್ತಮ ಅಭಿವೃದ್ಧಿಗೆ ಅನ್ನುತ್ತಾರೆ. ಆದರೇ ದುರಾಸೆಯನ್ನು ಇಟ್ಟುಕೊಳ್ಳಿ ಎಂದು ಯಾರು ಹೇಳುವುದಿಲ್ಲ. ಇದೇ ಇಂದು ಪ್ರತಿಯೊಂದು ರಂಗದಲ್ಲೂ ಅಪನಂಬಿಕೆಯನ್ನು, ಬಿನ್ನಾಭಿಪ್ರಾಯಗಳನ್ನು, ಅಶಾಂತಿ, ಅಸಹಜ ನಡವಳಿಕೆಗೆ ದಾರಿ ಮಾಡಿಕೊಟ್ಟಿದೆ.

ಸಿ.ಬಿ.ಐ ಯರವರು ಇಂಥ ವ್ಯಕ್ತಿಗಳ ಸಂಪತ್ತನ್ನು ವಶಪಡಿಸಿಕೊಂಡಾಗ ನೀಡುವ ವರದಿಯನ್ನು ಗಮನಿಸಿದರೇ ಒಬ್ಬನೇ ಒಬ್ಬ ವ್ಯಕ್ತಿಗೆ ಇಷ್ಟೇಲ್ಲಾ ವಸ್ತು, ಹಣ, ಆಸ್ತಿ ಬೇಕಾ ಗುರೂ? ಎಂದು ಯೋಚಿಸುವಂತಾಗುತ್ತದೆ. ಒಬ್ಬನ ಬಳಿಯಲ್ಲೇ ಇಡೀ ರಾಜ್ಯದ ಸಂಪತ್ತು ಕೊಳೆತು ಬಿದ್ದಿದೆ ಎಂದಾಗ ಮನಸ್ಸಿಗೆ ಬೇಜಾರಾಗುತ್ತದೆ. ಅಸಹಜವಾಗಿ ಬಂದಂತಹ ಸಂಪತ್ತು ಎಂದಿಗೂ ಶಾಶ್ವತವಲ್ಲ ಎಂಬುದು ಎಲ್ಲಾರಿಗೂ ತಿಳಿದಿರುವ ವಿಚಾರ.

ಇಲ್ಲಿ ಯಾರೂ ಶಾಶ್ವತವಲ್ಲ! ಹಾಗಂತ ಪೂರ್ತಿ ಸನ್ಯಾಸಿಯಾಗಿ ಜೀವಿಸಬೇಕಾಗಿಲ್ಲ.

ನಿಸರ್ಗ,ದೇಶ ಸಂಪತ್ತು ಎಲ್ಲಾರಿಗೂ ಸೇರಿದ್ದು. ಅದನ್ನು ಅನ್ಯ ಮಾರ್ಗದಲ್ಲಿ ತಾನೊಬ್ಬನೇ ಅನುಭವಿಸುದು ದೇವರಿಗೆ ಮಾಡಿದ ದ್ರೋಹದಂತೆ ಅಲ್ಲವಾ?

ಗಣಿ ದಣಿ ದೋಳಿನಲ್ಲಿ ಇಡಿ ಕರ್ನಾಟಕವೇ ಮುಚ್ಚಿ ಹೋಗಿರುವಂತಹ ಅನುಭವವನ್ನು ಕಳೆದ ದಿನಗಳಿಂದ ನೋಡುತ್ತಿದ್ದೇವೆ. ಇದರ ಕಾರಣದಿಂದ ಸರ್ಕಾರವೇ ಬೀಳುವ ಮಟ್ಟಕ್ಕೆ ಹೋಗಿದ್ದು, ಮುಖ್ಯಮಂತ್ರಿ, ಮಂತ್ರಿಗಳ ಅಧಿಕಾರದ ಖುರ್ಚಿ ಬಿದ್ದು ಹೋಗಿದ್ದು. ಯಾವುದರ ಮುನ್ಸೂಚನೆ ದೇವರೇ ಬಲ್ಲ.

ಮಾತು ಎತ್ತಿದರೇ ಸಾಕು ಲಂಚಾ.. ಲಂಚಾ... ಭ್ರಷ್ಟಾಚಾರ ಉಫ್!

ಸಾವಿಲ್ಲದ ಮನೆಯ ಸಾಸಿವೆಯಂತೆ, ನಂಬುವಂತಹ ಒಬ್ಬನೇ ಒಬ್ಬ ವ್ಯಕ್ತಿ(ಗಳು) ಸಿಗುವಂತಹ ಕಷ್ಟ ಈ ದಿನಮಾನಗಳಲ್ಲಿರುವುದು ನಿಜವಾಗಿಯೋ ವಿಪರ್ಯಾಸದ ವಿಚಾರ. ಯಾರೊಬ್ಬರನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಹ ದಿನಗಳು ಬರುತ್ತ ಇವೆಯೇನೂ ತಿಳಿಯದಾಗಿದೆ.

ಎಲ್ಲಿ ನೋಡಿದರೂ ಅಕ್ರಮ ಸಕ್ರಮಗಳ ಕಾರುಬಾರೂ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೂ ಗೊತ್ತಿಲ್ಲಾ ಬಿಡಿ.

ಶಕ್ತನಾಗಿದ್ದಾನೇ ಅಷ್ಟು ಮಾಡಿದ್ದಾನೆ. ದಕ್ಕಿಸಿಕೊಳ್ಳುವ ತಾಕತ್ತು ಇದೆ ಅವನಿಗೆ ಬಿಡಿ! ಎಂಬ ಮಾತುಗಳು ಸಹಜವಾಗಿ ಕೇಳಿ ಬರುತ್ತ ಇವೆ.

ನಿನ್ನ ಕೈಲಿ ಆಗುತ್ತಿಲ್ಲ ಅದಕ್ಕೆ ನೀತಿ ಧರ್ಮದ ಮಾತನ್ನಾಡುತ್ತಾ ಇದ್ದೀಯ... ಮರಿ ಗಾಂಧಿ! ಎಂಬ ಹಿಯಾಳಿಕೆಯ ಮಾತುಗಳು ಸಭ್ಯರನ್ನು ಚುಚ್ಚುತ್ತ ಇವೆ.

ಯಾವುದು ಸರಿ? ಯಾವುದು ತಪ್ಪು? ಯಾರು ನಿರ್ಧಾರ ಮಾಡಿಕೊಡಬೇಕೋ ತಿಳಿಯದಾಗಿದೆ.

ಪ್ರತಿಯೊಂದು ರಂಗದಲ್ಲೂ ಮನುಷ್ಯರೇ ತಾನೇ ಇರುವವರು.. ಅದ್ದರಿಂದ ಪ್ರತಿಯೊಂದು ರಂಗವು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅದ್ವಾನವಾಗಿ ಹೋಗುತ್ತಿದೆ. ಬಡ ವ ಬಲ್ಲಿದನ ನಡುವಿನ ಅಂತರ ದಿನೇ ದಿನೇ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದೆ.

ಅವರನ್ನೂ ನೋಡಿ, ಇವರು ಇವರನ್ನಾ ನೋಡಿ ಅವರು ತಮ್ಮ ಅಭಿವೃದ್ಧಿಯ ಕರ್ಮದಲ್ಲಿ ನಿರತರಾಗುತ್ತಾ ಇದ್ದಾರೆ ಅನ್ನಿಸುತ್ತಿದೆ. ಕರುಣೆ, ಧಯೆಯ ಮಾತು ಕೇಳುವುದೇ ಬೇಡವೇನೂ ಎಂಬ ಕಾಲ ಬಂದರೂ ಆಶ್ಚರ್ಯವಿಲ್ಲ ಅನಿಸುತ್ತಿದೆ.

ಈ ಎಲ್ಲಾ ಅಮೊಲಾಗ್ರ ಬದಲಾವಣೆಯ ಹರಿಕಾರನಿಗಾಗಿ ನಾಡು ಕಾಯುತ್ತಿದೆ ಅನಿಸುತ್ತಿದೆ. ಹೊಸಬೆಳಕಿನ ಹೊಸ ಜ್ಯೋತಿಯ ಉಗಮವಾಗಬೇಕಾದ ಜರೂರತು ಇಂದು ಅತ್ಯವಶ್ಯವಾಗಿದೆ. ಎಲ್ಲಾದರಲ್ಲೂ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಜನತೆಗೆ ಹೊಸ ಭರವಸೆಯ ಹೊಸತನದ ನಾಯಕತ್ವದ ಅಗತ್ಯತೆ ಇಂದು ಹೆಚ್ಚಾಗಿದೆ ಅಂತಾ ನಿಮಗೆ ಅನಿಸುತ್ತಿಲ್ಲಾವಾ ಗೆಳೆಯರೇ.....

ಯೋಚಿಸಿ ಒಮ್ಮೆ ಫ್ಲೀಜ್!!!!!!!!!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ