ಶನಿವಾರ, ನವೆಂಬರ್ 13, 2010

ಮರೆಯುವ ಮುನ್ನಾ

ಜಡಿ ಜಡಿ ಜಿಗುಟು ಮಳೆಯಾದರೆ ನಮ್ಮ ಮನದ ತುಂಬ ಜಿಗುಟು ಭಾವನೆ. ಎಲ್ಲಿಯೊ ಹೊರಗಡೆ ಹೋಗದಂತೆ. ಆ ಕೆಸರು ಆ ತುಂತುರು. ಮೋಡವೇ ತೂತು ಆದಂತೆ ಹನಿ ಹನಿಯುತ್ತಿದ್ದಾಗ ನಮ್ಮ ಮನ ಬೆಚ್ಚನೆಯ ಒಂದು ಮೂಲೆಯಲ್ಲಿ ಸೇರಿಕೊಂಡು ಅಮ್ಮ ಮಾಡಿ ಕೊಟ್ಟ ಊಟವನ್ನು ಮಾಡಿಕೊಂಡು, ಆಗೀಷ್ಟು ಈಗೀಷ್ಟು ಬಿಸಿ ಬಿಸಿ ಕಾಫಿಯನ್ನು ಗುಟುಕರಿಸುತ್ತಾ ಮನಸ್ಸಿಗೆ ಹಿತ ನೀಡುವ ಯಾವುದಾದರೂ ಹಾಡುಗಳನ್ನು ಕೇಳಿಕೊಂಡೋ. ಮನಸ್ಸೇಲ್ಲಾ ಆ ಮಳೆಯೋಪಾದಿಯಲ್ಲಿ ಯಾವುದರಲ್ಲೂ ಬಲು ನಿಧಾನವೇ ಜೀವನವೆಂಬಂತೆ ಬೆಚ್ಚನೆಯ ಅನುಭವವಕ್ಕೆ ಜರುಗುವ ಸಮಯದಲ್ಲಿ ಯಾವುದಾದರೂ ನೆಚ್ಚಿನ ಪುಸ್ತಕದ ಮರೆಗೆ ಹೋದರೇ ಹೊರಗಡೆ ಏನೇ ಪ್ರಳಯವಾದರೂ ಅದರ ಬಗ್ಗೆ ಒಂದೀಷ್ಟು ಗಮನ ಕೊಡದೆ ತನ್ನ ಕೋಣೆಯಲ್ಲಿ ತನ್ನ ಪುಸ್ತಕದ ಗೆಳೆಯನೊಡನೆ ನಾವುಗಳು ತಲ್ಲಿನರಾಗಬಹುದು.


ಈ ರೀತಿಯ ಅನುಭವ ಮನ್ನೆಯಾ "ಜಲ್" ಚಂಡಮಾರುತದಿಂದ ಒಂದುವರೇ ದಿನ ಬರಿ ಮನೆಯಲ್ಲಿಯೇ ಕಳೆಯುವಂತಾಯಿತು. ಆಗ ಮನದ ನಲಿವಿಗೆ ಅಸರೆಯಾಗಿದ್ದು ಓಶೋ ರಜನೀಶ್, ಎಚ್ಚಸ್ವೀ ಮತ್ತು ಎಂ.ವೈ. ಘೋರ್ಪಡೆಯವರ ಪುಸ್ತಕಗಳು.

ಓಶೋ ಪುಸ್ತಕವೆಂದರೇ ಬಹಳಷ್ಟು ಜನರಿಗೆ ಎಂಥದೋ ಎದರಿಕೆ. ನಾನೇದರೂ ಏ ನಾನು ರಜನೀಶ್ ಪುಸ್ತಕ ಕೊಂಡುಕೊಂಡೇ ಅಂದರೇ "ಏ ಯಾಕೋ ಏನೋ ಸಮಾಚಾರ ಅನ್ನುತ್ತಾರೆ" ನನ್ನ ಗೆಳೆಯರು.


ಸಮಾಜ ನಮ್ಮ ನಮ್ಮಲ್ಲಿಯೇ ಈ ರೀತಿ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಒಂದೊಂದು ರೀತಿಯ ದೋರಣೆಯನ್ನು ನಮ್ಮ ಸುತ್ತ ಮುತ್ತಲಿನಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಮತ್ತು ಅವರುಗಳ ಬಗ್ಗೆ ನಾವುಗಳು ನಮ್ಮ ಹಿರಿ ಕಿರಿಯರಿಗೆ ಒಂದು ರೀತಿಯ ಮೈಲಿಗೆಯೇನೋ ಎಂಬಂತೆ ಅವರ ಬಗ್ಗೆ ತಿಳಿದು ಕೊಳ್ಳುವುದೇ ಅಪರಾಧವೇನೋ ಎಂಬಂತೆ ಮಾಡಿಬಿಟ್ಟಿರುತ್ತಾರೆ.


ರೀತಿಯಲ್ಲಿ ಏನೂ ಗೊತ್ತಿರದ ಜನಗಳು ಒಬ್ಬರಿಂದ ಒಬ್ಬರಿಗೆ ಸುಖ ಸುಮ್ಮನೇ ಒಂದೊಂದು ಕಾಮೇಂಟ್ ಪಾಸ್ ಮಾಡಿ ಅವರ ಬಗ್ಗೆ ಅರಿಯುವ ಕುತೋಹಲವನ್ನೇ ಮತ್ತು ಅವರುಗಳು ತಿಳಿಸಿರುವ ಅಪಾರ ವಿದ್ವತ್ ನಿಂದ ಒಂದು ಇಡೀ ಸಮೊಹವನ್ನೇ ವಂಚಿತರನ್ನಾಗಿ ಮಾಡಿ ಬಿಟ್ಟಿರುತ್ತಾರೆ.


ಒಶೋ ಬಗ್ಗೆ ಈ ರೀತಿಯ ಮಂಡೋಕತನದ ಪರದೆಯನ್ನು ಸರಿಸಿದ ಕೀರ್ತಿ ರವಿ ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ ರಿಗೆ ಸೇರಿದ್ದು. ಈ ಲೇಖಕರುಗಳು ಅವರ ಅನುಭವದ ನುಡಿಗಳನ್ನು, ವಿಚಾರಗಳನ್ನು ಮತ್ತು ಅವರ ಬಗ್ಗೆ ಇರುವ ಹಲವಾರು ಕಥೆಗಳನ್ನು ತಮ್ಮ ಪತ್ರಿಕೆಗಳಲ್ಲಿ ಬರೆಯುವ ಮೊಲಕ ನಮ್ಮೆಲ್ಲಾರಿಗೂ ಸ್ವಲ್ಪವಾದರೂ ಅವರುಗಳು ಏನೂ ಹೇಳಿದ್ದಾರೆ ಎಂಬುದನ್ನು ತಿಳಿಯುವಂತೆ ಮಾಡಿದ್ದಾರೆ. ಇದರಿಂದ ಅವರ ಅಪಾರ ಸಮೃದ್ಧ ಸಂತ ಙ್ಞಾನವನ್ನು ಕೆಲವರ ಬಳಿಗಾದರೂ ಬರುವಂತೆ ಮಾಡಿದ್ದಾರೆ.

ಅವರು ತಮ್ಮ ಪ್ರವಚನದಲ್ಲಿ ತಾವು ಅಧ್ಯನ ಮಾಡಿರುವ ವಿಷಯಗಳ ವಿವಿಧ ರೀತಿಯಲ್ಲಿ ಜನರ ಮುಂದಿಟ್ಟಿದ್ದಾರೆ ಮತ್ತು ಆ ಎಲ್ಲಾ ನುಡಿಗಳು ಸಾವಿರಾರು ಗ್ರಂಥಗಳಾಗಿವೆ. ಹಲವಾರು ವಿಷಯಗಳ ಬಗ್ಗೆ ಧೀರ ಗಾಂಭಿರ್ಯದಿಂದ ಮಾತನ್ನಾಡುವವರಲ್ಲಿ ಅವರುಗಳು ಒಬ್ಬರಾಗಿದ್ದಾರೆ. ಭಾರತದ ಬಗ್ಗೆ ಇಲ್ಲಿರುವ ನಮ್ಮ ಸನಾತನ ಹಿಂದು ಧರ್ಮದ ಬಗ್ಗೆ, ವೇದ ಉಪನೀಷತ್, ಭಾರತದ ಯಾತ್ರಾ ಸ್ಥಳಗಳ ಬಗ್ಗೆ, ಭಾರತದ ಪುಣ್ಯ ಪುರುಷರ ಬಗ್ಗೆ, ಕೃಷ್ಣ ನ ಬಗ್ಗೆ, ಯುವಕರು, ಯುವತಿಯರ ಬಗ್ಗೆ, ಜನರ ಜಾಗೃತಿಯ ಬಗ್ಗೆ, ಪತ್ರಿಕೆಗಳ ಬಗ್ಗೆ, ವಿಙ್ಞಾನದ ಬಗ್ಗೆ ಇತ್ಯಾದಿ ಇತ್ಯಾದಿ ಆಡು ಮುಟ್ಟದ ಸೊಪ್ಪು ಇಲ್ಲ ಎಂಬ ರೀತಿಯಲ್ಲಿ ವಿಫುಲವಾದ ಸಾಹಿತ್ಯವನ್ನು ನಮ್ಮ ಪ್ರಪಂಚಕ್ಕೆ ನೀಡಿದ್ದಾರೆ.

ಹಾಗೇ ಈ ವಾರ ಅವರ ಸಂ. ಸಮಾಧಿ ಕಡೆಗೆ ಪುಸ್ತಕವನ್ನು ಓದಿದಾಗ ಅನಿಸಿದ್ದು. ಪ್ರೀತಿ, ಪ್ರೇಮ ಇಡೀ ಪ್ರಪಂಚದ ಜೀವನ ಜೀವಂತ ನಾಡಿ ಮೀಡಿತವಾಗಿದೆ. ಅದೊಂದು ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದನ್ನು ಟ್ರೂ ಲವ್ ಎಂಬುತ್ತಾರೋ ಅದರ ಬಗ್ಗೆ ಅವರುಗಳು ಎಷ್ಟೊಂದು ವಿಷದವಾಗಿ ಮಾತನ್ನಾಡಿದ್ದಾರೇ ಎಂದರೆ. ಲವ್ ಎಂದರೇ ಬರೀ ಸೇಕ್ಸ್ ಅಲ್ಲ ಎಂಬುದನ್ನು ಹಲವಾರು ದುಷ್ಟಾಂತ ಸತ್ಯ ಕಥೆಗಳ ಮೊಲಕ ಎಲ್ಲೂ ಸಹ ಅಸಹ್ಯ ಎಂಬ ಭಾವನೆ ನಮ್ಮ ಮನೋಭಾವದಲ್ಲಿ ಬರದ ರೀತಿ. ಪ್ರೇಮ ಒಂದು ಗಂಡು - ಹೆಣ್ಣು ಮಧ್ಯ ಮಾಮೋಲಿಯಾಗಿ ಘಟಿಸುವ ಪ್ರಕೃತಿ ಸಹಜ ಒಂದು ಕ್ರೀಯೆ ಎಂದು ಹೇಳಿ, ಆ ಒಂದು ಮೋಹರ್ತ ಸಮಯದಲ್ಲಿ ಸ್ಪುರಿಸುವ ಭಾವನೆಯಲ್ಲಿಯೇ ಶಿವನನನ್ನು ಕಾಣಬಹುದು ಎಂಬುದನ್ನು ತೋರಿಸಿದ್ದಾರೆ.

ಆದರೇ ನಾವುಗಳು ಯಾವ ರೀತಿಯಲ್ಲಿ ಇಂದು ನಮ್ಮ ಭಾರತದಲ್ಲಿ ಸೇಕ್ಸ್ ಎಂದರೇ ಒಂದು ರೀತಿಯಲ್ಲಿ ನೋಡುವಾಂತಾಗಿದೆ. ಆದರ ಬಗ್ಗೆ ಮಾತನ್ನಾಡುವುದೇ ಅಸಭ್ಯ ವರ್ತನೆಯಾಗಿ, ಕೀಳಾಗಿ ಕಾಣುವಂತೆ ಅದರ ಪ್ರಾಮುಖ್ಯತೆಯ ಬಗ್ಗೆ ಕಿರಿಯಗೆ ತಿಳಿಸದೇ ಗೌಪ್ಯವಾಗಿ ಇಟ್ಟಿದ್ದರೂ ಅದು ಇನ್ನೂ ಹೆಚ್ಚು ಆಕರ್ಷಕವಾಗಿ ಹಲವು ರೀತಿಗಳಲ್ಲಿ ನಮ್ಮ ಮಂದಿಗಳಿಗೆ ಅದೇ ಬದುಕಾಗಿ ಹಲವಾರು ಅನಾಹುತಗಳಿಗೆ ಕಾರಣವಾಗಿದೆ ಎಂದು ಎಲ್ಲರಲ್ಲೂ ಮನೆ ಮಾಡಿರುವ ಪರಮಾತ್ಮನಿಗೆ ಪ್ರೀಯವಾಗುವ ರೀತಿಯಲಿ ತಿಳಿಸಿದ್ದಾರೆ. ಒಟ್ಟಾರೆ ಮಾನವ ಜೀವನವನ್ನು ಒಂದು ವೈಙ್ಞಾನಿಕವಾಗಿ ಚಿತ್ರಿಸಿದ್ದಾರೆ. ಒಂದು ಜೀವನವನ್ನು ಸಮಗ್ರವಾಗಿ ನೋಡುವಂತೆ ಮಾಡಿದ್ದಾರೆ. ಇದು ಇಂದು ಅಗತ್ಯವಾಗಿದೆ. ಆಗಲೇ ಇಡೀ ಪ್ರಪಂಚದಲ್ಲಿ ಶಾಂತಿಯನ್ನು ಕಾಣಬಹುದಾಗಿದೆ.



ಹಾಗೆಯೇ ನಮ್ಮ ಪ್ರಸಿದ್ಧ ರಾಜಕಾರಣಿಯಾಗಿರುವ ಎಂ.ವೈ ಘೋರ್ಪಡೆಯವರ "ರೆಕ್ಕೆಯ ಮಿತ್ರರು" ಸಂಡೂರಿನ ಸುತ್ತ ಮುತ್ತಲಿನಲ್ಲಿರುವ ನಮ್ಮ ಪಕ್ಷಿ ಮಿತ್ರರುಗಳನ್ನು ಉತ್ತಮವಾಗಿ ಮನ ಮುಟ್ಟುವಂತೆ ಅಪರೂಪದ ವರ್ಣ ಚಿತ್ರಗಳೊಂದಿಗೆ ಆ ಪಕ್ಷಿಯ ಬಗ್ಗೆ ಇರುವ ಕಥೆಗಳಾದ ಜನಸಾಮಾನ್ಯರ ಮಾತುಗಳು, ಪುರಾಣ ಕಥೆಗಳು, ದುಷ್ಟಾಂತಗಳು ಮತ್ತು ವೈಙ್ಞಾನಿಕವಾಗಿ ಅವುಗಳ ಜೀವನ ಶೈಲಿಯನ್ನು ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಚಿತ್ರಿಸಿರುವುದು ಓದಲು ಖುಷಿಯನ್ನು ಕೊಡುತ್ತದೆ. ಈ ಪ್ರಯತ್ನ ನಮ್ಮ ಮಕ್ಕಳಿಗೆ ಪರಿಸರದ ಬಗ್ಗೆ ನಾವುಗಳು ಕಡಿಮೆ ಖರ್ಚಿನಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ ಕಾಣುವ ನಿಸರ್ಗ ಸೌಂದರ್ಯವನ್ನು ನೋಡುವ ಮನಸ್ಸಿನ ಮೂಲಕ ನಾವು ಆನಂದ ಪಟ್ಟು ನಮ್ಮ ಜೊತೆಯಲಿ ನಮ್ಮ ಮುಂದಿನ ಜನಾಂಗಕ್ಕೆ ಈ ಅಪರೂಪದ ಜೀವಿಗಳನ್ನು ಉಳಿಸುವ ಕಾರ್ಯವನ್ನು ಮಾಡಲು ಪ್ರೇರಪಿಸುವಂತಾಗಿದೆ.


ಕವಿಗಳ ಜೀವನ ಮರ್ಮವನ್ನು ಅರಿಯಲು ಎಲ್ಲಾರಿಗೂ ಕುತೂಹಲ. ಯಾವ ಸಮಯದಲ್ಲಿ ಅಂಥ ಮುತ್ತಿನಂಥಹ ಪದಗಳ ಜಾದು ಘಟಿಸುತ್ತದೆ. ಅವರ ಆ ಕವನದ ಸಾಲುಗಳು ಯಾವ ಜಾಗದಲ್ಲಿ ಜನಿಸುತ್ತದೆ. ಆ ಸಾಲುಗಳ ಜನನಕ್ಕೆ ಕಾರಣರಾರು? ಹೀಗೆ ನಮ್ಮ ಹಿರಿಯ ಕನ್ನಡ ಕವಿಗಳ ಬಗ್ಗೆ ಅವರ ಜೀವನ ಚರಿತ್ರೆಯ ಬಗ್ಗೆ ಎಂಥ ಸಹೃದಯಿಗೂ ಒಂದು ಅಚ್ಚರಿ ಇರುತ್ತದೆ. ಈ ಮಾತಿಗೆ ಪೂರಕವಾಗಿ ಅದನ್ನು ಸ್ವಲ್ಪ ಮಟ್ಟಿಗೆ ಹಿಡೇರಿಸಲೂ ಸಹಾಯ ಮಾಡಿದ್ದಾರೆ ಎಂಬಂತೆಲೋ ನಮ್ಮ ಎಚ್. ಎಸ್. ವೇಂಕಟೇಶ್ ಮೂರ್ತಿಯವರ "ಅನಾತ್ಮ ಕಥನ" ಒಂದು ನವಿರಾಗಿ ಓದಿಸಿಕೊಳ್ಳುವ ಕವಿಯ ಜೀವನ ಕಥೆ ನಮ್ಮ ನಮ್ಮ ಬಾಲ್ಯ, ಯೌವನ, ಉದ್ಯೋಗದ ದಿನಗಳಿಗೆ ಕರೆದುಕೊಂಡು ಹೋಗುತ್ತದೆ.


ಅವರ ಅಂದಿನ ಬಾಲ್ಯ ಮತ್ತು ಯೌವನದ ದಿನಗಳ ಸಹಜ ತುಂಟತನ ಮತ್ತು ಅವರ ಜೊತೆಯಲ್ಲಿ ಇದ್ದ ಅಪರೂಪದ ಗೆಳೆಯರು, ಬಂಧುಗಳ, ಹಳ್ಳಿಯ ವ್ಯಕ್ತಿ ಚಿತ್ರಗಳು ಉತ್ಕೃಷ್ಟವಾಗಿವೆ. ಅಲ್ಲಿ ಮೊಡಿರುವ ಪ್ರತಿ ಸಾಲುಗಳು ಒಂದು ಧೀರ್ಘ ಕವನದಂತೆ ಒಂದೇ ಸಿಟ್ಟಿಂಗ್ ನಲ್ಲಿ ಓದುವಂತೆ ಮಾಡುತ್ತದೆ.

ಈ ಪುಸ್ತಕಗಳ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಹೀಗಾಗಲೇ ವಿವಿಧ ರೀತಿಯಲ್ಲಿ ಪ್ರಶಂಸೆಗಳು ಬಂದಿವೆ. ಮತ್ತೇನು ಅನ್ನುತ್ತಿರಾ? ಇಂಥ ಪುಸ್ತಕಗಳನ್ನು ಓದಿದರೇ ಅಲ್ಲಿ ಸಿಗುವ ಸಂತೋಷದ ಬುಗ್ಗೆಯನ್ನು ಜೀವಂತ ಸವಿಯಬಹುದು ಅಲ್ಲವಾ.

ಕತೃಗಳೇ ಥ್ಯಾಂಕ್ಯೂ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ