ಗುರುವಾರ, ನವೆಂಬರ್ 18, 2010

ಕಾಮ-ವಾಮ-ರಾಜ ಮಾರ್ಗ


ಕಳೆದ ಭಾನುವಾರದ ಸಂಜೆ ರವೀಂದ್ರ ಕಲಾ ಕ್ಷೇತ್ರ. ಮುಖ್ಯ ದ್ವಾರದ ಇಕ್ಕೆಲೆಗಳಲ್ಲಿ ಇಟ್ಟ ನಮ್ಮ ಮಂತ್ರಿ ರೇಣುಕಾಚಾರ್ಯರ ಬೆತ್ತಲೆಯ ನರ್ಸ್ ಜೊತೆಗಿನ ವಿವಿಧ ಭಂಗಿಯ ರಂಗು ರಂಗಿನ ಅಳೆತ್ತರದ ಚಿತ್ರಗಳು. ಒಂದು ಕ್ಷಣ ನಿಮ್ಮನ್ನು ತಬ್ಬಿಬ್ಬು ಮಾಡಿದಂತೆ ಅನಿಸುತ್ತದೆ. ಆದರೇ ಆ ಕ್ಷಣ ನೀವು ಯಾರ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎಂಬುದನ್ನು ನೆನಪಿಸಿಕೊಂಡರೆ ಸಾಕು.ಅದು ರವಿಯವರ ವಿಭಿನ್ನವಾದ ಶೈಲಿ. ಸಮಾಜಕ್ಕೆ ತೀರ ಹಸಿ ಹಸಿ ಸತ್ಯವನ್ನು ತಮ್ಮ ಪತ್ರಿಕೆಯ ಮೂಲಕ ತಿಳಿಸಿದ ಧೈರ್ಯವಂತರಲ್ಲವೇ. ಅದಕ್ಕೆ ಸಾವಿರಾರು ಓದುಗರ ಒಡೆಯ.

ಒಳಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರಙ್ಞವಂತ ಹಾಯ್ ಬೆಂಗಳೂರು ಓದುಗ ಸಮೊಹ. ಎದುರಿಗೆ ಜಗಮಗಿಸುತ್ತಿರುವ "ಎಂಥಾ ಪಕ್ಷವಯ್ಯಾ...." ವರ್ಣಮಯ ವೇದಿಕೆ. ಅಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಬಿ. ಆರ್. ಛಾಯರವರ ಬ್ಯಾಂಡ್ ನಿಂದ ಇಂಪಾದ ಸಂಗೀತ ರಸ ಸಂಜೇ. ಕನ್ನಡದ ಪ್ರಮುಖ ಕವಿಗಳ ಭಾವ ಗೀತೆಗಳ ತರಂಗ. ಪ್ರಸಿದ್ಧ ಗಾಯಕ ವಿಷ್ಣುರವರಿಂದ ಕನ್ನಡದ ಚಿತ್ರಗೀತೆಗಳ ರಸದೌತಣ. ವೀಕೆಂಡಗೆ ಮಸ್ತಿಯಾಗಿತ್ತು.

ಈ ಸಮಾರಂಭ ಕನ್ನಡ ಪುಸ್ತಕವೊಂದರ ಬಿಡುಗಡೆಯ ಸಮಾರಂಭವೆಂದರೇ ಯಾರು ನಂಬುವುದಕ್ಕಾಗುವುದಿಲ್ಲ. ಅಲ್ಲವಾ? ಹೌದು! ಅದು ಬೆಂಗಳೂರಿನಲ್ಲಿ ಕನ್ನಡ ಪುಸ್ತಕಗಳ ಬಿಡುಗಡೆಯೆಂದರೇ ಕೇವಲ ಬೆರಳೆಣಿಕೆಯ ಸಹೃದಯರನ್ನು ಕಾಣಬಹುದು. ಅದರೇ ಇಲ್ಲಿ ತದ್ವಿರುದ್ಧ. ಅದಕ್ಕೆ ಕಾರಣ ರವಿ ಬೆಳೆಗೆರೆ ಮತ್ತು ರವಿ ಬೆಳೆಗೆರೆ ಅಷ್ಟೇ.

ಈಗಾಗಲೇ ತಮ್ಮ ಬರವಣಿಗೆಯ ಮೋಡಿಯಿಂದ ಕರ್ನಾಟಕದ ಒಂದು ಸಮೊಹವನ್ನೇ ತಮ್ಮ ಕಡೆಗೆ ಒಲಿಸಿಕೊಂಡಿದ್ದಾರೆ. ಪ್ರತಿ ಓದುಗನೂ ಅವರ ಯಾವುದೇ ಹೊಸ ಪುಸ್ತಕಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾನೆ.

ಅಂದು ಬಿಡುಗಡೆಗೆ ಸಿದ್ಧವಾಗಿದ್ದ ಎರಡು ಪುಸ್ತಕಗಳೇಂದರೆ "ಕಾಮರಾಜ ಮಾರ್ಗ" ಮತ್ತು "ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು". ಇಂದಿನ ನಮ್ಮ ಕರ್ನಾಟಕದ ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲಿ ತುಂಬ ಸೇನ್ಸ್ ಸೇಶನ್ ಊಂಟು ಮಾಡಿರುವ "ಕಾಮರಾಜ ಮಾರ್ಗ" ಕೃತಿ ದೇಶದಲ್ಲಿಯೇ ತಲ್ಲಣವುಂಟು ಮಾಡಿದರೂ ಆಶ್ಚರ್ಯವಿಲ್ಲ.

ಯಾಕೆಂದರೇ ಅಲ್ಲಿ ಇರುವುದು ಕಲ್ಪನೆಯಾದರೂ ಕಾದಂಬರಿಯ ತುಂಬ ನಮ್ಮ ಕಣ್ಣ ಮುಂದೆ ಇಂದು ನಾಟಕವಾಡುತ್ತಿರುವ ಎಲ್ಲಾ ನಮ್ಮ ರಾಜಕಾರಣಿಗಳ ನೃತ್ಯಗಳು, ತೆವಲುಗಳು, ನೀಚತನಗಳು, ಕರ್ಮಗಳು, ಅನ್ಯಾಯಗಳು,ಕತ್ತೆ ವ್ಯಾಪಾರಗಳು,ವಾಮತನಗಳು ಮತ್ತು ಅವುಗಳ ಬೆತ್ತಲೆಗಳು ೪೦೦ ಪುಟಗಳ ತುಂಬ ಸವಿಸ್ತಾರವಾಗಿ ನಿರೂಪಿತವಗಿಯೇನೋ ಎನಿಸಿ ದಿಗ್ಬ್ರಮೆ ಗೊಳಿಸಿದರು ಅಚ್ಚರಿಯಿಲ್ಲ.

ಅಂದು ಈ ಮುಖ್ಯ ಸಮಾರಂಭಕ್ಕೆ ವೇದಿಕೆಯ ಮೇಲೆ ಆಸೀನಾರಾದವರೆಂದರೇ ಮಾಜಿ ಮುಖ್ಯ ಮಂತ್ರಿ ಎಂ.ಪಿ ಪ್ರಕಾಶ್, ರಮೇಶ್ ಕುಮಾರ್, ವಿಶ್ವೇಶ್ವರಭಟ್, ರವಿಬೆಳೆಗೆರೆ ಮತ್ತು ಚೇತನ ಬೆಳೆಗೆರೆ.

ತುಂಬ ಸರಳವಾದ ಸಮಾರಂಭದಲ್ಲಿ ಮುಖ್ಯ ಆಕರ್ಶಣೆಯೆಂದರೆ ಈ ಪುಸ್ತಕದ ಕತೃ ರವಿ ಮತ್ತು ರವಿ. ಓದುಗರ ಕಿವಿಗಳು ಅವರು ಈ ನಮ್ಮ ಪ್ರಸ್ತುತ ರಾಜಕೀಯದ ಹೊಲಸಿನ ಬಗ್ಗೆ ಹೇಗೆ ಮಾತನ್ನಾಡುತ್ತಾರೆ ಎಂಬುದರ ಕಡೆಗೆ ಕಿವಿಗೊಟ್ಟಿದ್ದರು ಅಷ್ಟೇ.

ಎಂ.ಪಿ.ಪ್ರಕಾಶ್ ರವರಿಂದ "ಕಾಮರಾಜ ಮಾರ್ಗ" ವಿಶ್ವೇಶ್ವರ ಭಟ್ ರವರಿಂದ "ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು" ಮತ್ತು ಚೇತನರವರ ಹೊಸ ಇಂಗ್ಲೀಷ್ ನಿಯತಕಾಲಿಕೆಯಾದ "ಸಿಟಿ ಬಜ್" ಲೋಕಾರ್ಪಣೆಗೊಂಡವು.

ಎಂ. ಪಿ. ಪ್ರಕಾಶ್ ತಮ್ಮ ಕಾಯಿಲೆಯಿಂದ ಬಹುಮುಖ ಸೋರಗಿದಂತೆ ಕಂಡರು ತಮ್ಮ ಒಳ್ಳೆಯತನ ಮತ್ತು ವಿಭಿನ್ನವಾದ ತಮ್ಮ ರಾಜಕೀಯತನದಿಂದ ಕೇಲವೇ ಮುಖ್ಯ ಕ್ಲೀನ್ ನಾಯಕರಾಗಿ ಸಭೆಯಲ್ಲಿ ಪ್ರಕಾಶಿಸುತ್ತಾ ಪುಸ್ತಕ ಬಿಡುಗಡೆಯ ಪ್ರಸ್ತಾವಿಕ ನುಡಿಗಳನ್ನು ರವಿಯವರನ್ನು ಹೊಗಳಲು ಮೀಸಲಿಟ್ಟರು.

ವಿಶ್ವೇಶ್ವರ ಭಟ್ ಪುಸ್ತಕದ ಮುನ್ನುಡಿಯನ್ನು ಬರೆದಿರುವ ಕಾರಣ ಪುಸ್ತಕದ ಒಟ್ಟು ತಂತುವನ್ನು ಚೊಕ್ಕವಾಗಿ ಪ್ರೇಕ್ಷಕರಿಗೆ ಕಟ್ಟಿ ಕೊಟ್ಟರು. ಏನೇ ಆಗಲಿ ಅವರು ಬರಹಗಾರರಲ್ಲವೇ. ಅವರು ಹೇಳಿದ ಅಂದಿನ ನುಡಿಗಳಲ್ಲಿ ಮನ ಕೊರದಿದ್ದೇಂದರೆ. "ಇಲ್ಲಿ ಈ ಸಮಾರಂಭಕ್ಕೆ ಕೇವಲ ಮಾಜಿ ರಾಜಕೀಯ ಪಟುಗಳನ್ನು ರವಿ ಆಹ್ವಾನಿಸಿದ್ದಾರೆ. ಹಾಲಿಗಳು ರಾಜಕಾರಣಿಗಳು ಬಂದಿದ್ದರೆ ತುಂಬ ಅರ್ಥವಂತಿಕೆಯಿರುತ್ತಿತ್ತು. ಆದರೆ ಹಾಲಿಯಲ್ಲಿ ಯಾರಾದರೂ ಒಬ್ಬರೂ ಎಸ್. ಸುರೇಶ್ ಕುಮಾರ್ ನ್ನು ಬಿಟ್ಟು ಉತ್ತಮ ಎನ್ನುವ ಮಂತ್ರಿ, ಶಾಶಕರು ಕರ್ನಾಟದಲ್ಲಿ ಇದ್ದಾರೆಯೇ?" ಹೌದು! ನಾವುಗಳು ದುರ್ಬಿನ್ ಹಾಕಿಕೊಂಡು ಹುಡುಕಿದರೂ ಒಬ್ಬೇಒಬ್ಬ ಸಚ್ಚಾರಿತ್ರವಂತ ರಾಜಕೀಯ ನಾಯಕ ನಮ್ಮ ಕಣ್ಣಿಗೆ ಸಿಗುವುದಿಲ್ಲ.

ಹಾಗಾದರೇ ನಮ್ಮ ಕರ್ನಾಟಕದಲ್ಲಿ ಎಂಥವರು ಸರ್ಕಾರದ ಆಡಳಿತ ನಡೆಸುತ್ತಿದ್ದಾರೆ ಎಂದು ನಾವುಗಳು ಕಳೆದ ತಿಂಗಳು ಪೂರಾ ಲೈವ್ ನಲ್ಲಿ ನೋಡಿದ್ದೇವೆ. ಒಂದಿಷ್ಟು ಭರವಸೆಯನ್ನು ಕೊಡಲಾರದ ಸ್ಥಿತಿಗೆ ರಾಜ್ಯ ರಾಜಕಾರಣವನ್ನು ತಂದು ನಿಲ್ಲಿಸಿದ್ದಾರೆ.

ಪುಸ್ತಕದ ಬಗ್ಗೆ ಹೇಳುತ್ತಾ "ರವಿ ಈ ಪುಸ್ತದಲ್ಲಿ ಸೇಕ್ಸ್ ನ್ನು ಇಷ್ಟೊಂದು ವೈಭವಿಕರಿಸುವ ಅವಶ್ಯಕತೆ ಇತ್ತಾ?" ಎಂಬುದು. ಆದರೆ ನಾವುಗಳು ಯಾವುದನ್ನು ಮಾತನ್ನಾಡಲೂ ತೀರ ಹಿಂಜರಿಯುತ್ತೇವೋ ಅದನ್ನೇ ನಮ್ಮ ಆದರ್ಶ ಜನ ನಾಯಕರು ಹಾದಿ ಬೀದಿಗಳಲ್ಲಿ ಮಾಡಿಕೊಂಡು. ಯಾವುದು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾಗಿತ್ತೋ ಅದು ತಮ್ಮ ವೀಪರಿತವಾದ ಭಂಗಿಗಳ ವರ್ಣಮಯ ಚಿತ್ರಗಳು ಮೀಡಿಯಾಗಳಲ್ಲಿ ತೋರಿಸುತ್ತಾರೆ. ಆಮೇಲೆ ಯಾವ ಮುಖವಿಟ್ಟುಕೊಂಡು ಜನರ ಮತವನ್ನು ಕೇಳಿ ಆರಿಸಿಕೊಂಡು ಸಹ ಬಂದು ಬಿಡುತ್ತಾರೆ.. ಮತ್ತೇ ನಾನು ಮುಖ್ಯಮಂತ್ರಿ, ಮಂತ್ರಿ ಸ್ಥಾನಕ್ಕೆ ಸ್ಪರ್ಧಿ ಎಂದು ಚಿಂದಿ ಚಿಂದಿ ಹೇಳಿಕೆಗಳನ್ನು ಪತ್ರಿಕೆ, ಟಿ. ವಿ ಮುಂದೆ ಕೊಡುತ್ತಾರೆ. ಇವರಿಗೇನಾದರೂ ಕಿಂಚಿತ್ತು ಮಾನ-ಮರ್ಯಾದೆ, ಅತ್ಮ ಸಾಕ್ಷಿ ಈ ಪದಗಳ ಮಹತ್ವ ತಿಳಿದಿದೇಯಾ ಎಂದರೇ? ಇಲ್ಲಾ ಎನ್ನಲೇಬೇಕು. ಯಾಕೆಂದರೇ ಅವುಗಳ ಮೀತಿಗೆ ಇವರುಗಳೂ ಎಂದೂ ಸಹ ಬರುವುದಿಲ್ಲ.

ಈ ನಿಟ್ಟಿನಲ್ಲಿ ಭಟ್ಟರ ನುಡಿಗಳು ನಮ್ಮ ವಿದ್ಯಾವಂತ ಪ್ರೇಕ್ಷಕರ ಕಣ್ಣು ತೆರೆಯಿಸಲು ಸಫಲವಾಯಿತು.

ರಮೇಶ್ ಕುಮಾರರು ಹೆಚ್ಚು ಭಾವುಕಾರಾಗಿದ್ದರೂ ಅಂದು ಅನಿಸುತ್ತದೆ. ಇಂದಿನ ರಾಜಕೀಯದ ವೈಚಿತ್ರ್ಯವನ್ನು ನೆನಪು ಮಾಡಿಕೊಂಡು ತುಂಬ ವ್ಯಥೆಪಟ್ಟರು. ಅವರ ಮಾತಿನಲ್ಲಿ ಉನ್ನತವಾದ ಸಮಾಜ ನಿರ್ಮಾಣದ ಕನಸು ಕಂಡು ಬರುತ್ತಿತ್ತು. ಬಡವರ ಬಗ್ಗೆ ಅವರ ಕಾಳಜಿ. ಇಂದಿನ ನಮ್ಮ ರಾಜಕೀಯ ಪಕ್ಷಗಳ ಬಗ್ಗೆ. ಎಲ್ಲಾ ಪಕ್ಷಗಳು ತಮ್ಮ ಪಕ್ಷ ಬೇದವನ್ನು ಮರೆತು ಎಲ್ಲಾರು ಒಂದು ಕಡೆಯಿಂದ ಇಡಿ ಕರ್ನಾಟಕವನ್ನು ಲೋಟಿ ಮಾಡಲು ಕಂಕಣ ಬದ್ಧರಾಗಿರುವುದನ್ನು ನೋಡಿ ಮಮ್ಮಲು ಮರಗಿದರು.

ಬಡವನ ಬಗ್ಗೆ ಯಾರು ಕೇಳುವವರೆ ಇಲ್ಲ. ಮತ್ತು ರೈತನೇ ನಮ್ಮ ಇಂದಿನ ಈ ಪ್ರಜಾಪ್ರಭುತ್ವದ ಬೆನ್ನೆಲುಬು ಯಾಕೆಂದರೇ ಅವನೊಬ್ಬನೇ ಸರಿಯಾಗಿ ಮತವನ್ನು ಚಲಾಯಿಸುವುದು. ನಾವುಗಳು ನಗರ ಜೀವಿಗಳು ಅದರ ಸಹವಾಸವೇ ಬೇಡವೇನೋ ಎಂಬಂತೆ ಅಂದು ನಮ್ಮ ಮಸ್ತಿ ಮತ್ತು ಮಜಾದಲ್ಲಿ ಲೀನವಾಗಿ ಸರಿಯಾದ ಸರ್ಕಾರ, ಶಾಶಕರು, ನೇತಾರರು ಆರಿಸಿ ಬರದಿದ್ದಾಗ ಸುಖ ಸುಮ್ಮನೇ ನಮ್ಮಲ್ಲಿ ನಾವುಗಳು ಮಾತನ್ನಾಡಿ ಕೈ ಕೈ ಹಿಸಿಕೊಳ್ಳುತ್ತಾ.. ಅಲ್ಲಿ ಹೀಗೆ ಚೆನ್ನಾಗಿದೆ. ಇಲ್ಲೇನೊ ಕರ್ಮ ಎಲ್ಲಾ ಲೋಟಿ ಮಾಡುವವರೆ ಎಂದು ಪಶ್ಚತಾಪಪಡುತ್ತೇವೆ. ನಮ್ಮ ಕೈಯಲ್ಲಿ ಇರುವ ನಮ್ಮ ಬಹು ಮುಖ್ಯವಾದ ಮತದಾನ ಎಂಬ ಅಸ್ತ್ರವನ್ನು ಸರಿಯಾಗಿ ಬಳಸಿಕೊಂಡು ಯೋಗ್ಯ ವ್ಯಕ್ತಿಯನ್ನು ಆರಿಸುವ ಜವಬ್ದಾರಿ ನಮ್ಮ ನಿಮ್ಮೇಲ್ಲಾರ ಹೊಣೆಯೆಂಬುದನ್ನು ಹಲವಾರು ಅವರ ನೈಜ ಜೀವನ ಘಟನೆಗಳ ಮೊಲಕ ಮನದಟ್ಟು ಮಾಡಿಕೊಟ್ಟರು.

ನಗರಗಳಲ್ಲಿ ಸೊಳ್ಳೆಗಳೋಪಾದಿಯಲ್ಲಿ ಸ್ಥಾಪಿತವಾಗುತ್ತಿರುವ ಹೈಟೆಕ್ ಕ್ಲೀನಿಕ್ ಗಳು, ಜಿಮ್ ಗಳು, ಮಹಾ ಮಹಲ್ ಗಳು ಇತ್ಯಾದಿ ಯಾರಿಗಾಗಿ. ಬಡವರಿಗಂತು ಅವುಗಳ ನೆರಳಲ್ಲಿ ನಿಲ್ಲಲು ಸಹ ಅವಕಾಶಗಳಿಲ್ಲ.
ಬಡವ ಅಸರೆಗೆ ಇರುವ ತಾಣಗಳೆಂದರೆ ಅವೇ ಸರ್ಕಾರಿ ಆಸ್ಪತ್ರೆಗಳು, ನ್ಯಾಯಬೆಲೆ ಅಂಗಡಿಗಳು ಇತ್ಯಾದಿ. ಅದರೇ ಅಲ್ಲಿ ಅವರೂಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಸೇವೆ ಉಚಿತವಾಗಿ ಸಿಗುತ್ತಿದೆಯಾ.
ಹಣವಂತರಿಗೆ ಮಾತ್ರ ಆರೋಗ್ಯ ಅವರುಗಳು ಮಾತ್ರ ಈ ಭೂಮಿಯ ಮೇಲೆ ಜೀವಿಸಲೂ ಅರ್ಹರೇ? ಯಾರು ಕೇಳಬೇಕು.

ಈ ಎಲ್ಲಾ ಪ್ರಶ್ನೇಗಳಿಗೆ ಉತ್ತರ. ಸರಿಯಾದ ನಾಯಕರ ಉಗಮ. ನೀತಿವಂತ ನೇತಾರನ ಜನನ. ಬಡವರ ಪರ ಮನಸ್ಸಿರುವವನ ಆಯ್ಕೇ ನಮ್ಮಿಂದ ಆಗಬೇಕು. ಕೇವಲ ಒಂದು ದಿನದ ಸುಖಕ್ಕಾಗಿ. ಅವರು ಕೊಡುವ ಹೆಂಡ, ಹಣ, ಚಿನ್ನ, ಸೀರೆ ಮುಂತಾದ ಚೀಪಾದ ವಸ್ತುಗಳಿಗೆ ತಮ್ಮ ಅಮೋಲ್ಯವಾದ ಮತವನ್ನು ಮಾಡಿಕೊಳ್ಳುವುದನ್ನು ಬಿಡಬೇಕು. ನಾವುಗಳು ನಮ್ಮ ಮತವನ್ನು ಮಾರಿಕೊಂಡು ಅವರುಗಳನ್ನು ಆರಿಸಿಕೊಂಡರೆ. ಅವರುಗಳು ನಮ್ಮ ನಾಡನ್ನೇ ಹೊರದೇಶದವರಿಗೆ ಆಡ ಇಡುವವರು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ರವಿ ಬೆಳೆಗೆರೆಯವರ ಮಾತುಗಳನ್ನು ಕೇಳಲು ಕಾದು ಕುಳಿತಿದ್ದ ಅವರ ಓದುಗ ದೇವರುಗಳಿಗೆ ಅವರಿಂದ ನಿರಾಸೆಯೇನು ಆಗಲಿಲ್ಲ. ಅವರ ಒಂದೇ ಮಾತಿನಲ್ಲಿ ಹೇಳುವುದಾದರೇ ಇಂದಿನ ನಮ್ಮ ರಾಜಕಾರಣದ ಬಗ್ಗೆ ನಾನು ಏನು ಹೇಳಬೇಕು ಅದನ್ನೇಲ್ಲಾ ನನ್ನ "ಕಾಮರಾಜ ಮಾರ್ಗ" ಹೇಳುತ್ತದೆ. ಮತ್ತು ಇಂದು ನಡೆಯುತ್ತಿರುವ ಮೈನಿಂಗ ಮಾಫಿಯದ ಬಗ್ಗೆ ನಾವು ತಿಳಿದುಕೊಂಡಿರುವುದು ಅರೆಪಾವಷ್ಟೇ ಅದರ ಹಿಂದಿರುವ ಕಾಣದ ಕೈ ಮತ್ತು ಅದರ ಬೃಹತ್ ಜಾಲದ ಸವಿವರಗಳನ್ನು ನನ್ನ "ಅನಿಲ್ ಲಾಡ್.." ಪುಸ್ತಕ ಹೇಳುತ್ತದೆ ಎಂದರು.

ಹಾಗೆಯೇ! ಎಂ. ಎನ್. ಸಿ ಮತ್ತು ಸಾಪ್ಟವೇರ್ ಜಗತ್ತಿನ ಬಗ್ಗೆ ನಾವುಗಳು ಎಚ್ಚರದಿಂದ ಕಾಲು ಇಡಬೇಕಾದ ಸಂದರ್ಭ ಇದಾಗಿದೆ. ಮತ್ತು ಅಲ್ಲಿ ನಡೆಯುತ್ತಿರುವ ವ್ಯವಹಾರ ನಮ್ಮ ಮದ್ಯಮ ನಾಗರೀಕರಿಗೆ ದುಃಸಪ್ನವಾಗಿದೆ. ಮತ್ತು ನಾನು ಏನಾದರೂ ಮುಂದಿನ ಕಾದಂಬರಿ ಬರೆದರೆ ಅದು "ಸಾಪ್ಟವೇರ್" ಜಗತ್ತಿನ ಬಗ್ಗೆ ಇರುತ್ತದೆ. ಅದಕ್ಕಾಗಿ ದೇಶ ವಿದೇಶಗಳ ಬೇಟಿ ಮಾಡಬೇಕಾಗಿದೆ ಎಂದು ಹೇಳುತ್ತಾ ತಮ್ಮ ಮುಂದಿನ ನಿರೀಕ್ಷಿತ ಕಾದಂಬರಿಯ ಸುಳಿವನ್ನು ಬಿಟ್ಟು ಕೊಟ್ಟರು.

ಈ ರೀತಿಯ ವಿವಿಧ ಬಗೆಯಲ್ಲಿ ನಾವುಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅನ್ಯಾಯ ಮತ್ತು ಹಲವಾರು ವಾಮ ಮಾರ್ಗಗಳನ್ನು ಕಂಡು ನಮ್ಮ ಸಮಾಜದಲ್ಲಿ ಬದಲಾವಣೆಯ ಗಾಳಿಯನ್ನು ಬಿಸುವಂತೆ ಮಾಡುವವರು ಯಾರು ಎಂದು ಬೇರೊಬ್ಬ ಬರಲಿ ಎಂದು ಕಾಯುವ ಬದಲು ನಾವುಗಳೇ ನಮ್ಮ ನಮ್ಮಲ್ಲಿ ಬದಲಾವಣೆಯ ಹರಿಕಾರ ಹಾಕುವುದು ಇಂದು ಸುಸಂದರ್ಭ.

ಕೇವಲ ನಮ್ಮ ನಮ್ಮ ಸುಖವನ್ನು ಏಣಿಸದೇ ಮುಂದಿನ ಜನಾಂಗ, ನಮ್ಮ ನಾಡು, ಪ್ರಕೃತಿ, ಸಂಸ್ಕೃತಿ, ಸನ್ನಡತೆಯ ಪುನಾರುತ್ಥಾನವನ್ನು ಮಾಡುವ ಯುವ ಸಮೊಹ ರೂಪಿತವಾಗುವುದು ಬೇಕಾಗಿದೆ. ಅದು ಬರಲಿ ಎಂದು ಹಾರೈಸುವ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ