ಭಾನುವಾರ, ಅಕ್ಟೋಬರ್ 10, 2010

ಅಧಿಕಾರವೊಂದೇ ಎನಗೆ ಹಿರಿದು!


ಸಮಕಾಲಿನ ನಮ್ಮ ರಾಜ್ಯದ ರಾಜಕೀಯ ಸ್ಥಿತ್ಯಾಂತರಗಳನ್ನು ಗಮನಿಸಿದರೆ ಯಾರೊಬ್ಬರಿಗೂ ಯಾವ ಭರವಸೆಯ ಕಿರಣಗಳು ಕಾಣದಂತಾಗಿದೆ. ನಾವುಗಳೇ ನಮ್ಮ ಕೈಯಾರೆ ಆರಿಸಿದ ನಮ್ಮನಾಳುವ ನಮ್ಮ ಪ್ರತಿನಿಧಿಗಳು ಇವರುಗಳೇ ಎಂದು ನಾವುಗಳು ಯಾರನ್ನು ಕೇಳಬೇಕು ಎನ್ನುವಂತಾಗಿದೆ.


ಯಾವ ಸರ್ಕಾರವೂ ಹೀಗೆ ಎಂದೆಂದಿಗೂ ನಡೆಯಬಾರದು ಎನ್ನುವಷ್ಟರ ಮಟ್ಟಿಗೆ ನಮ್ಮ ಮುಖ್ಯಮಂತ್ರಿಗಳು ಎಲ್ಲಾ ರೀತಿಯಲ್ಲೂ ವಿಫಲರಾಗಿ ನಿಶಕ್ತರಾಗಿ ನಿಂತಿದ್ದಾರೇನೋ ಎಂಬುವಂತಾಗಿದೆ. ಈ ಸ್ಥಿತಿಗೆ ಅವರುಗಳು ಅಂದು ತಮ್ಮ ಜಾಗವನ್ನು ಭದ್ರ ಮಾಡಿಕೊಳ್ಳಲು ಅತಿ ಹೊಸದಾದ ತಂತ್ರವಾದ ಅಪರೇಷನ್ ಕಮಲವನ್ನು ಮಾಡಿದ್ದು. ಹೀಗಾಗಲೇ ಬೇರೆ ಪಕ್ಷದಿಂದ ಗೆದ್ದು ಬಂದಿರುವ ಪ್ರತಿಪಕ್ಷದವರನ್ನು ತಮ್ಮ ಪಕ್ಷದ ಕಡೆಗೆ ಸೆಳೆದು ಕೊಂಡು ತಾನು ಬಲಿಷ್ಟನಾಗುತ್ತಿದ್ದೇನೆ ಎಂಬ ಹುಸಿ ಕನಸಿನಲ್ಲಿ ಬಂದ ಹೊಸಬರಿಗೆ ವಿವಿಧ ರೀತಿಯ ಹುದ್ದೆಗಳು, ಜಾಗಗಳನ್ನು ಬಿಟ್ಟು ಕೊಟ್ಟು ತನ್ನ ಮನೆಯಲ್ಲಿ ತನ್ನ ಪಕ್ಷಕ್ಕಾಗಿ ದುಡಿದ ಸಾಮಾನ್ಯರನ್ನು ಕಡೆಗಣಿಸಿದ ಪಾಪವನ್ನು ಈಗ ನೋಡುವಂತಾಗಿದೆ.


ಒಬ್ಬ ವ್ಯಕ್ತಿಯ ನಿಜ ರೂಪವನ್ನು ನಾವು ನೋಡಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ಪರೀಕ್ಷಿಸಿ ನೋಡು ಎನ್ನುವಂತೆ. ಕೆಲವೇ ವರುಷಗಳಲ್ಲಿ ಪ್ರತಿ ತಿಂಗಳು ದಿನಂಪ್ರತಿ ವಿವಿಧ ಹಗರ‍ಣಗಳ ಸರಮಾಲೆಯಲ್ಲಿ, ದುರಾಸೆಯ ಬಲದಿಂದ ವಿವಿಧ ರೀತಿಯಲ್ಲಿ ಪ್ರತಿಯೊಬ್ಬರೂ ಸಿಕ್ಕಷ್ಟು ದಿನದಲ್ಲಿ ತಮ್ಮ ಅಧಿಕಾರವನ್ನು ತಾವು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ನಿರತಾರದರೇನೆ ವಿನಾಃ ತಮ್ಮ ಪಕ್ಷ ಮತ್ತು ತಮ್ಮ ನ್ನು ಆರಿಸಿದ ಜನಸಾಮಾನ್ಯರ ಕೂಗಿಗೆ, ಆಶಯಕ್ಕೆ ಬೆಲೆ ಇಲ್ಲವೇನೋ ಎಂಬ ರೀತಿಯಲ್ಲಿ ಎಲ್ಲಾ ಕಡೆಗಳಿಂದಲೂ ಅಸಮಾಧಾನದ ಹೂಗೆ ಏಳಲು ಆರಂಭವಾಗಿ ತಮ್ಮ ಸಿಸ್ತಿನ ಪಕ್ಷದಲ್ಲೂ ಸಹ ಏನೂ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಇಂದಿನ ಈ ಸಂಧಿಗ್ಧ ಸ್ಥಿತಿಗೆ ಬಂದು ದಿನಗಳನ್ನು ಏಣಿಸುವಂತಾಗಿದೆ.


ತಮ್ಮದೇ ಪಕ್ಷ ಪಕ್ಕದ ರಾಜ್ಯವಾದ ಗುಜರಾತಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯೊಂದೇ ಮಂತ್ರ ಎಂಬ ರೀತಿಯಲ್ಲಿ ಮೋದಿ ಮನಿಯಾ ಇಡೀ ಭಾರತದಲ್ಲಿ ಪ್ರಸಿದ್ಧವಾಗಿದ್ದರೂ ಅಲ್ಲಿನ ಆ ಸುಧಾರಣೆ ದಕ್ಷಿಣ ಭಾರತದಲ್ಲಿ ಯಾವ ಜಾದು ನಡೆಯಲಾರದೇ ಸರ್ಕಾರವೆಂದರೆ ಇದೇನಾ! ಎನ್ನುವಂತಾಗಿದ್ದು ವಿಪರ್ಯಾಸ.


ಜನರಿಂದ ಜನರಿಗಾಗಿ ರೂಪಿತವಾದ ಜನರ ಸರ್ಕಾರ ಎಂದು ಪ್ರಜಾಪ್ರಭುತ್ವದಲ್ಲಿ ಬಿಂಬಿತವಾದ ನಮ್ಮ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆವಲ ತಮ್ಮ ತಮ್ಮ ಕ್ಷೇಮಗಳನ್ನು ನೋಡಿಕೊಂಡರೇ ಮತ್ತು ಯಾವುದೇ ಉತ್ತಮ ಕೆಲಸಗಳನ್ನು ಮಾಡದಿದ್ದರೆ ಯಾವ ಸರ್ಕಾರಗಳು ಉಳಿಯಲಾರವು. ಜನರ ಹಿತ ಮತ್ತು ಅವರ ಸುಧಾರಣೆಯ ರೂವಾರಿಗಳಾಗ ಬೇಕಾದ ನಮ್ಮ ಪ್ರತಿನಿಧಿಗಳು, ತಮ್ಮ ಹಿತಾಸಕ್ತಿ ಮತ್ತು ಅಧಿಕಾರಕ್ಕಾಗಿ ಯಾವುದೇ ರೀತಿಯ ಕೆಲಸ ಮಾಡಲೂ ಸೈ ಎನ್ನುವುದನ್ನು ಕಳೆದೆರಡು ವಾರಗಳಲ್ಲಿ ಇಲ್ಲಿನ ಕೆಲವು ಜನಪ್ರತಿನಿಧಿಗಳು ಮಾತನ್ನಾಡುವ ರೀತಿ, ವರ್ತಿಸುತ್ತಿರುವ ಬಗೆಗಳನ್ನು ನೋಡಿದರೇ ಎಂಥವರಿಗಾದರೂ ವಾಕರಿಕೆ ಬರದೇ ಇರದು.


ಯಾವ ಕನಸುಗಳನ್ನು ಇಟ್ಟುಕೊಂಡು ತಮ್ಮನ್ನು ಆರಿಸಿರುವ ಮತದಾರನ ಮುಗ್ಧತೆಯ ಪರೀಕ್ಷೆಯನ್ನು ಕೆವಲ ಅವರು ಅವರುಗಳೇ ಕೋಟಿ ಕೋಟಿ ಡೀಲ್ ಕುದುರೆ ವ್ಯಾಪಾರದಲ್ಲಿ ಮತ್ತು ಹತ್ತು ಹಲವಾರು ಆಸ್ತಿಗಳನ್ನು ಸಂಪಾದಿಸುವಲ್ಲಿ ಮಗ್ನರಾಗಿರುವುದನ್ನು ಪತ್ರಿಕೆಗಳಲ್ಲಿ ಪುಟಗಟ್ಟಲೆ ಓದುತ್ತಿದ್ದರೆ, ಈ ವ್ಯವಸ್ಥೆಗೆ ಇನ್ನಾದರೂ ಒಂದು ಭವಿಷ್ಯ ಇದೆ ಅಂಥ ಅನ್ನಿಸುತ್ತದಾ?


ನಮ್ಮ ಒಳ್ಳೆತನವನ್ನು ಅಸಹಾಯಕತೆಯನ್ನು ಕೇವಲ ಅವರು ಸಂಪಾದಿಸುವ ದುಡ್ಡು, ಅವರ ಆಸೆ, ಅಧಿಕಾರಗಳು ನಿರ್ಧರಿಸುವಂತಾಗಬಾರದು.


ಒಂದು ಸಮಾಜ ಸರಿಯಾದ ಸಮಯದಲ್ಲಿ ದಿಕ್ಕೆಟ್ಟು ಏಚ್ಚೆತ್ತುಕೊಂಡರೆ ಉತ್ತಮ ಸಮಾಜದ ನಿರ್ಮಾಣದ ಕ್ರಾಂತಿ ಅಸಾಧ್ಯವೆನಲ್ಲಾ. ಅದು ಬರುವ ಸಮಯವೇನೂ ದೂರವಿಲ್ಲ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ