ಶನಿವಾರ, ಮಾರ್ಚ್ 7, 2015

ಹೆಣ್ಣು - ಗಂಡು ಜೀವನ ಚಕ್ರ

ನಾವೇನು ಸಾಧಿಸಲಿಲ್ಲ.  ಎಷ್ಟೊಂದು ಓದಿದೆನು. ಹೇಗೆಲ್ಲಾ ಬದುಕಬಹುದಾಗಿತ್ತು. ನಾನು ನನ್ನ ಗಂಡನಿಗಿಂತ, ನನ್ನ ಅಣ್ಣನಿಗಿಂತ ದೊಡ್ಡ ಹುದ್ದೆಯಲ್ಲಿ, ದೊಡ್ಡ ಸ್ಥಾನದಲ್ಲಿ ಇರಬಹುದಾಗಿತ್ತು. ಆದರೂ ಎಲ್ಲಾ ತ್ಯಾಗ ಮಾಡಿದೆ. ಯಾರಿಗಾಗಿ ನಿನಗಾಗಿ ಆ ನೀನು ಅಂದರೇ ಪುನಃ ಗಂಡ, ಮಗ ಹೀಗೆ ಗಂಡಸಿಗಾಗಿ ಮಾತ್ರ.. ಇದು ಪ್ರತಿಯೊಂದು ಹೆಣ್ಣು ಜೀವದ ನೊಂದ ಮಾತುಗಳು.

ತ್ಯಾಗ ಮೂರ್ತಿ ಅಂದರೇ ಅದು ಸ್ತ್ರೀ ಜೀವವೇ ಯಾಕಾಗುತ್ತದೆ?

ಕ್ಷಮಯ ಧರಿತ್ರಿ ಎಂದು ಯಾರು ಹೆಣ್ಣನ್ನು ಕರೆದರೋ, ಹೆಣ್ಣಿಗೆ ಎಲ್ಲವನ್ನು ತನ್ನಲ್ಲಿ ಮೊಕವಾಗಿ ಹುದುಗಿಸಿಕೊಳ್ಳುವ ಆ ಭೂ ತಾಯಿಯ ಗುಣವನ್ನು ಆ ಕಾಣದ ದೇವರು ಹೆಣ್ಣು ಧರೆಗೆ ಬರುವ ಸಮಯದಲ್ಲಿ ಇಟ್ಟು ಕಳಿಸಿಬಿಡುತ್ತಾನೆ ಅನಿಸುತ್ತದೆ.

ಪ್ರತಿಯೊಂದನ್ನು ತನ್ನ ಒಡಲಲ್ಲಿಯೇ ಇಟ್ಟುಕೊಂಡು ತನ್ನ ಸುತ್ತ ಇರುವವರ ಕ್ಷೇಮ ಮತ್ತು ಅವರ ಸಂತೋಷದಲ್ಲಿಯೇ ತನ್ನ ಸಂತೋಷವನ್ನು ಕಾಣುವ ಈ ಕರುಣ ಗುಣದ ತೇವವನ್ನು ಯಾರಲ್ಲೊ ಕಾಣದಾಗಿದೆ.

ಅದಕ್ಕೆ ಹೆಣ್ಣಿನ ದ್ವನಿಯೇ ಮಧುರ. ಆ ಮಾತಿನ ಸವಿ ಕೇಳಿದರೇ ಸಾವಿರ ಜಂಜಾಟಗಳು ದೂರ. ಕೋಗಿಲೆಯ ಕಂಠ ಎಂದು ಕರೆಯುವುದು, ಗಾಯಕಿಗೆ. ದ್ವನಿಯಲ್ಲಿ ಇರುವ ಮಮತೆಯ ಪದಗಳ ಮುತ್ತು ಎಂಥವರನ್ನು ಒಂದು ಕ್ಷಣ ಮಮ್ ಮಾಡುತ್ತದೆ. ಅದಕ್ಕೆ ಕಾರಣ ಅವಳ ಪ್ರತಿ ರಕ್ತ ರಕ್ತ ಕಣದಲ್ಲಿ ಇರುವ ಪ್ರೀತಿಯ ಕರುಣಾ ರಸ.

ಮಗು ತನ್ನ ಮೊದಲ ಜೀವದ ದ್ವನಿಯನ್ನು ಕೇಳುವುದು ತಾಯಿಯದೆ! ಮೊದಲ ಪ್ರೀತಿಯ ಹಾಲನ್ನು ಕುಡಿಯುವುದು ತಾಯಿಯದೆ. ಅಂದಿನಿಂದ ಆ ಮಗುವಿಗೆ ಗೊತ್ತಾಗುತ್ತದೆ ಪೊರೆಯುವುದು ಎಂದರೇ ಸ್ರ್ತೀ.

ಅವಳಿಗೆ ಇದನ್ನು ಯಾರು ಅರಿವು ಮೊಡಿಸಿದರೋ ಗೊತ್ತಿಲ್ಲ!

ಅವಳಿದ್ದರೇ ಒಂದು ರೀತಿಯ ಬೇರೆಯ ವಾತವರಣವೇ ಏರ್ಪಡುತ್ತದೆ. ಅವಳಿದ್ದರೇ ಅಲ್ಲಿರುವ ಗಾಳಿಯು ತಂಗಾಳಿಯಾಗಿ ಸೊಂಪಾದ ಇಂಪಾದ ಗೀತೆಯನ್ನು ಪಾಡಿದಂತಿರುತ್ತದೆ.  ನಾವು ಯಾವುದೇ ಜಾಗವನ್ನು ಗಮನಿಸಿದರೂ ಆ ಮಮತ ಮಹಿಯ ಸ್ಪರ್ಷವನ್ನು ಕಾಣಬಹುದು.

ಕಟ್ಟುವುದು ಸ್ತ್ರೀಯ ಕಾಯಕ. ಹೊಸತನಕ್ಕೆ ಸ್ರ್ತೀ ದ್ಯೋತಕ.

ಇದಕ್ಕೆ ಇರಬೇಕು ನಮ್ಮ ಪ್ರತಿಯೊಬ್ಬರ ಜೀವನದ ಪ್ರತಿ ಹಂತದಲ್ಲೂ ಈ ಸ್ರ್ತೀ ತಾಯಿಯಾಗಿ, ಗೆಳತಿಯಾಗಿ, ಸಂಗಾತಿಯಾಗಿ, ಮಗಳಾಗಿ ಹಾಸು ಹೊಕ್ಕಾಗಿ ನಮ್ಮ ಬಾಳನ್ನು ಸದಾ ಕಾಲ ನಲಿವಿನಿಂದ ಇಡುವುದಕ್ಕೆ ಶ್ರಮಿಸುತ್ತಾಳೆ. ನಮ್ಮ ನಮ್ಮ ಸಂತೋಷದಲ್ಲಿಯೇ ಅವಳ ನೆಮ್ಮದಿಯನ್ನು ಕಾಣುತ್ತಾಳೆ.

ನಮ್ಮ ನಮ್ಮ ಮನದಲ್ಲಿರುವ ಆತುರತೆ, ಆಕ್ರಮಣ ಗುಣವನ್ನು ಕೊಂಚ ತಗ್ಗಿಸುವುದು ಈ ಹೆಣ್ಣಿನ ಕಣ್ಣಿನಿಂದನೇ. ಅವಳಿಗಾಗಿ ನಾವು ಏನಾದರೂ ಮಾಡಬೇಕು. ನಾನು ಹೀಗೆ ಇರಬೇಕು.. ಎಂದು ಗಂಡು ಕೊಂಚ ತನ್ನ ವ್ಯಕ್ತಿತ್ವವನ್ನು ಅಚ್ಚುಕಟ್ಟು ಮಾಡಿಕೊಳ್ಳುವುದು ಹೆಣ್ಣಿನ ಕಾರಣದಿಂದಲೇ ಎಂದು ಘಂಟಾಘೋಷವಾಗಿ ಹೇಳಬಹುದು. ಇಲ್ಲವೆಂದರೇ ಹೇಳುವವರು ಕೇಳುವವರೂ ಯಾರು ಇರುವುದಿಲ್ಲ. ಅಡ್ದಾ ದಿಡ್ಡಿಗೇ ಸಾಕ್ಷಿಯನ್ನು ಯಾರು ಕೊಡಬೇಕಿಲ್ಲ!

ಆದರೂ ನಮ್ಮ ಗಂಡು ಹೃದಯಗಳು ಈ ಎಲ್ಲಾ ಸತ್ಯಗಳನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.ಇಂದಿಗೂ ಹೆಣ್ಣು ಎಂದರೇ ಯಾಕೋ ಒಂದು ಹೆಜ್ಜೆ ಅವರನ್ನು ಹಿಂದಿಡಬೇಕು ಎಂಬ ದೋರಣೆಯ ಭಾವನೆಗಳನ್ನು ಗೊತ್ತಿಲ್ಲದೇ ತಮ್ಮಲ್ಲಿ ಇಟ್ಟುಕೊಂಡಿದ್ದಾರೆ ಎಂದರೇ ತಪ್ಪಲ್ಲಾ.

ಹೆಣ್ಣು ಎಂದರೇ ಅಬಲೆ!

ಈ ರೀತಿಯ ಋಣಾತ್ಮಕವಾದ ಮಾತುಗಳನ್ನು ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ತೋರಿಸುವುದು ಆಕ್ಷಮ್ಯ ಅಂದರೇ ತಪ್ಪಲ್ಲಾ.

ನಾವುಗಳು ಯಾವುದನ್ನು ನಿರೀಕ್ಷೆ ಮಾಡುವುದಕ್ಕೂ ಸಾಧ್ಯವಿಲ್ಲವೋ ಅಂತಹ ಎಲ್ಲಾ ರಂಗದಲ್ಲೂ ಪುರುಷರಿಗಿಂತ ತಾನೇನೂ ಕಡಿಮೆ ಇಲ್ಲ ಎಂಬುದನ್ನು ಸ್ರ್ತೀ ತಾನು ಮನೆಯಲ್ಲಿ ಅಡಿಗೆ, ಮಕ್ಕಳ ಆರೈಕೆ, ಹೆತ್ತವರನ್ನು ಪೊರೆಯುವುದು, ಮನೆಗೆ ಕಣ್ಣಾಗಿ, ತಾಳ್ಮೆ ಎಂದರೇ ನಾನೇ ಎಂದುಕೊಂಡೇ ಪ್ರತಿಯೊಂದನ್ನೂ ಪುರುಷರು ಮನೆಯಲ್ಲಿ ಯಾವ ಕಾರ್ಯಗಳನ್ನು ಮಾಡದೇ ಹೊರಗಡೇ ಮಾಡುವುದನ್ನೇಲ್ಲಾ ತಾನು ಮಾಡಿ ನಾನೇ ಮುಂದು ಎಂದು ತೋರಿಸಿಕೊಟ್ಟಿದ್ದಾಳೆ.

ಪುರುಷರಿಗಿಂತ ಹೆಣ್ಣು ಯಾವುದರಲ್ಲೂ ಹಿಂದಿಲ್ಲಾ ಎಂಬುದನ್ನು ಸಾಬೀತು ಮಾಡಿ ಎಷ್ಟೋ ಶತಮಾನಗಳೇ ಆಗಿವೆ. ಇಂದೊಂತೂ ಹೆಣ್ಣನ್ನು ಕೀಳಾಗಿ ಕಾಣುವ ಜಮಾನ ದೂರವಾಗಿ ಅವಳನ್ನು ಸರಿಸಮಾನಾಗಿ ಪೈಪೋಟಿಯಾಗಿ ಪರಿಗಣಿಸುವಂತಾಗಿದೆ. ಸ್ತ್ರೀಯರೇ ಆದರ್ಶವಾಗಿ ಕಾಣುವಂತಾಗಿದೆ.

ಅದಕ್ಕೆ ಕಾರಾಣ ಅವಳ ಬೇಜಾರಿಲ್ಲದ, ತಾಳ್ಮೆಯ, ಜಾಣ್ಮೆಯ ದುಡಿಮೆ. ಅವಳು ದುಡಿಯುವುದು ತನಗೆ ಮಾತ್ರವಲ್ಲಾ ತನ್ನವರಿಗಾಗಿ, ತನ್ನ ಕುಟುಂಬಕ್ಕಾಗಿ. ಜವಬ್ದಾರಿ ಎಂದರೇ ಆ ಹುಡುಗಿದು! ನೋಡು ಆ ಹುಡುಗಿ ಬಂದ ಮೇಲೆ ಈ ಮನೆಯ ವಾತಾವರಣವೇ ಚೇಂಜ್ ಆಗಿದೆ ಎಂದು ಹುಬ್ಬೇರಿಸಿ ಮಾತಾಡುವಂತಾಗಿದೆ.

ಇದು ಹೆಣ್ಣಿನ ಯುಗ. ಹೆಣ್ಣಿಗೂ ಎಲ್ಲಾ ಸ್ಥಾನ ಸಿಗಬೇಕು ಎಂಬ ಮಾತು ಇಂದಿನದು. ಅದು ಇಂದು ಸಿಗುತ್ತಿದೆ. ಅವಳು ಶಕ್ತಿಯ ಆವತರಣಿಯಾಗಿದ್ದಾಳೆ. ಅವಳು ಮನೆಯಲ್ಲು ಸೈ! ಹೊರಗಿನ ಕೆಲಸದಲ್ಲೂ ಸೈ! ಎಂದು ಪ್ರತಿಯೊಬ್ಬರೂ ಒಪ್ಪುವಂತೆ ಸಾಧಿಸುವ ಕಡೆ ಹೆಜ್ಜೆ ಇಟ್ಟಿದ್ದಾಳೆ.

ನನಗೆ ನನ್ನ ಅಮ್ಮನೇ ಮಾದರಿ, ನನಗೆ ನನ್ನ ಹೆಂಡತಿಯೇ ಶಕ್ತಿ, ನನಗೆ ನನ್ನ ಮಗಳೇ ಸ್ಫೂರ್ತಿ ಎಂದು ಗಂಡು ಜೀವಗಳು ಹೇಳುವಂತಾಗಿದೆ.

ಮನೆಯಲ್ಲಿ ಒಂದು ಹೆಣ್ಣು ಜೀವ ಇರಬೇಕಪ್ಪಾ ಎಂದು ಪ್ರತಿಯೊಬ್ಬರೂ ಯಾವ ವಿರೋಧವಿಲ್ಲದೇ ಒಪ್ಪಿಕೊಳ್ಳುವಂತಾಗಿದೆ.

ಆದರೂ ಇಂದಿಗೂ ನಮ್ಮ ಜನ ಹೆಣ್ಣು ಎಷ್ಟೇ ಓದಿ ತಿಳಿದವಳಾಗಿದ್ದರೂ ನಿನಗೇನೂ ಗೊತ್ತು? ಎಂದು ಮೊದಲಿಸಿದಾಗ. ಆ ಹೆಣ್ಣು ಅಂದುಕೊಳ್ಳುತ್ತಾಳೇ (ಅದು ತನ್ನ ಮನದಲ್ಲಿ) ’ಗೊತ್ತೂ ನಿನಗಿಂತ ಜಾಸ್ತಿ’ ಅದರೇ ತೋರಿಸಿಕೊಳ್ಳುವುದಿಲ್ಲ ನಿನ್ನಂಗೇ!

ಹೌದು ಬದಲಾಗಬೇಕಿರುವುದು ನಾವು ಮತ್ತು ನಮ್ಮ ಸಮಾಜ. ನಾವು ನೋಡುವ ನೋಟದಲ್ಲಿ. ಅವರನ್ನು ಸಹ ಇನ್ನುಮುಂದೆ ಅಬಲೆ, ಅಸರೆಗಾಗಿ ಕಾದಿರುವವಳು, ಮತ್ತೊಬ್ಬರ ಜೊತೆ ಬೇಕೇ ಬೇಕು ಎಂಬ ಮಾತುಗಳು ಇಂದು ಎಷ್ಟೊಂದು ಅಪ್ರಸ್ತುತ ಎನ್ನುವುದು ಒಬ್ಬಂಟಿಯಾಗಿ ದೊಡ್ಡ ದೊಡ್ಡ ಕಾರ್ಯ ಸಾಧನೆಗಳನ್ನು ಮಾಡಿರುವವ ಸ್ತ್ರೀಯರನ್ನು ನೋಡಿದಾಗ ನಮಗೆಲ್ಲಾ ಗೊತ್ತಾಗುತ್ತಿದೆ.

ಹೆಣ್ಣು - ಗಂಡು ಜೀವನ ಚಕ್ರದ ಎರಡು ಗಾಲಿಗಳು ಇದರಲ್ಲಿ ಯಾವುದು ಸಹ ಮೇಲು ಕೀಳು ಎಂಬುದಿಲ್ಲ.

ಹೆಚ್ಚು ಸಹಿಷ್ಣುತೆ ಗಂಡಿಗಿಂತ ಹೆಣ್ಣಿಗೆ ಇರುವುದು. ಅವಳು ಬರಿಸುವ ನೋವುಗಳು ಯಾರೊಬ್ಬರೂ ಎಂದಿಗೂ ತಮ್ಮ ಜೀವನದಲ್ಲಿ ಬರಿಸಲು ಸಾಧ್ಯವಿಲ್ಲ. ಅವಳಿಗೆ ಆ ದೇವರೇ ಕೊಟ್ಟಿರುವ ಅಪರೂಪದ ಒಂದು ಸ್ವಭಾವ ಅಂದರೇ ಈ ಸಹಿಷ್ಣುತೆ. ಅದಕ್ಕೆ ಪ್ರತಿಯೊಬ್ಬರೂ ಹ್ಯಾಟ್ಸ್ ಪ್ ಹೇಳಲೇ ಬೇಕು. ಆಗಂತಾ ಏನೂ ಮಾಡಿದರೂ ಅವಳು ಸುಮ್ಮನಿರುವವಳು ಎಂದುಕೊಂಡರೇ ನಮ್ಮಂತ ದೊಡ್ಡ ಮೂರ್ಖರು ಮತ್ತೊಬ್ಬರಿಲ್ಲ.

ಏನೇ ಆಗಲಿ ಇಂಥ ಜೀವಗಳನ್ನು ನಮ್ಮ ನಮ್ಮ ಕುಟುಂಬದಲ್ಲಿ ಹೊಂದಿರುವ ನಾವುಗಳೇ ಧನ್ಯರು. ಅವರನ್ನು ಗೌರವಿಸೋಣ ಒಟ್ಟಿಗೆ ಸೇರಿಕೊಂಡು ಸಂತಸದಿಂದ ಬಾಳೋಣ.

ಕೂಡಿ ಬಾಳಿದರೆ ಬಾಳು ಸವಿ ಜೇನು ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ