ಸತ್ಯವಂತರಾಗಿ ಬದುಕುವುದೇ ಇಂದಿನ ದಿನಗಳಲ್ಲಿ ದುಬಾರಿ ಅನಿಸುತ್ತದೆ. ಉತ್ತಮರಾಗಿರುವುದೇ ಪಾಪ ಅನಿಸುತ್ತದೆ. ಶುದ್ಧ ಅಸ್ತರಾಗಿರುವುದೇ ಅಮಂಗಲ ಅನಿಸುತ್ತದೆ. ಸರಳವಾಗಿ ಬದುಕುವುದೇ ಟೀಕೆ ಮಾಡುವವರಿಗೆ ಬಾಯಿ ವಸ್ತುವಾಗುವಂತಾಗಿದೆ.
ಯಾಕೆಂದರೇ ಇದು ಕಲಿಗಾಲ.
ಕಲಿಗಾಲದಲ್ಲಿ ಎಲ್ಲಾ ತದ್ವಿರುದ್ಧವಾಗಿರಬೇಕು. ಅಂದರೇ ಯಾರು ಉತ್ತಮರಾಗಿರುವವರೋ ಅವರಿಗೆ ಉಳಿಗಾಲವಿಲ್ಲ.
ಎಷ್ಟು ದಿನ ಶುದ್ಧವಾಗಿದ್ದರೇನು ಫಲ ಅನಿಸುವಂತಾಗಿದೆ.
ನೀ ಪ್ರಾಮಾಣಿಕನಾಗಿದ್ದಷ್ಟು ನಿನಗೆ ಕಷ್ಟ ಕಣಮ್ಮಾ! ಎಂದು ಗೆಳೆಯರುಗಳು ಹೇಳುವ ಮಟ್ಟಿಗೆ ಸಮಾಜ ನಡೆದುಕೊಳ್ಳುತ್ತಿದೆ ಅನಿಸುತ್ತಿದೆ.
ಚೆನ್ನಾಗಿ ಬದುಕಬೇಕೆಂದರೇ ಹೆಚ್ಚು ಕೆಟ್ಟವನಾಗಿರಬೇಕು ಮಗು ಎಂದು ಹಿರಿಯರು ಚಿಕ್ಕ ಮಕ್ಕಳಿಗೆ ನೀತಿ ಬೋಧನೆಯನ್ನು ಮಾಡುವಂತಾಗಿದೆ.
ಪುರಾಣ ಪುಣ್ಯ ಕಥೆಗಳು ಪುರಾತನ ದಿನಗಳಿಗೆ ಮಾತ್ರ ಎಂಬಂತಾಗಿದೆ. ಇದು ಅದುನಿಕ ಯುಗ. ಇಲ್ಲಿ ಹಿಂದಿನ ಆ ನೀತಿ ನಿಯತ್ತುಗಳು ಯಾರಿಗೂ ಬೇಡವಾಗಿದೆ.
ಹುಟ್ಟಿದಂದಿನಿಂದ ಮಗು ನಿತ್ಯ ಬರೀ ಈ ದುರಾಡಳಿತ, ದುಷ್ಟ ಕೊಟ, ದುರ್ಜನರ ಸಂಗ ಮಾಡಿ ಜಮ್ಮಾಂತಾ ಬದುಕು. ಎಂದು ಹೇಳು ಕಲಿಯುಗದ ಗಾದೆಯಂತಾಗಿದೆ ಈ ಪ್ರಪಂಚ.
ಯಾರು ನಿನ್ನ ರಕ್ಷಿಸಲಾರರು. ಯಾಕೆಂದರೇ ನೀ ಅತಿ ಉತ್ತಮ! ಎಂದು ನಮ್ಮ ನಮ್ಮ ನೆರೆಹೊರೆಯವರೆ ಮೂಗು ಮುರಿಯುವಂತಾಗಿದೆ.
ನಾನು ಒಳ್ಳೆಯವನು ಎಂದು ಅದು ಹೇಗೆ ನೀನು ಎದೆ ಉಬ್ಬಿಸಿ ಹೇಳುತ್ತಿಯ ಬಾಯ್ ಮುಚ್ಚಿಕೋ ಎನ್ನುವಂತಾಗಿದೆ.
ಆ ನಿನ್ನ ಉಪದೇಶಗಳು ನಮಗೆ ಹೇಳಬೇಡ. ನೀ ಹೇಳುವ ಮಾತು ಇಂದು ಯಾರು ಕೇಳುತ್ತಾರೆ? ಥಿಂಕ್ ಪ್ರಾಕ್ಟೀಕಲ್ ಮ್ಯಾನ್ ಎನ್ನುತ್ತಾರೆ.
ನೀ ಇಷ್ಟು ಸಭ್ಯನಾಗಿದ್ದರೇ ನಿನ್ನ ಮೇಲೆ ಇಡೀ ಊರೇ ಸವಾರಿ ಮಾಡುತ್ತದೆ ಅಷ್ಟೇ. ನೀ ಸ್ವಲ್ಪ ರಫ್ ಅಂಡ್ ಟಫ್ ಆಗು ಮಗು. ಎಂದು ಮಗುವನ್ನು ಮಗುವಾಗಿದ್ದಾಗಲೇ ಈ ರಫ್ ಆದ ಸಮಾಜದಲ್ಲಿ ಬೆಳೆಸಲು, ಎಷ್ಟು ಕಷ್ಟಪಡುತ್ತಿದ್ದಾರೆ ನಮ್ಮ ಜನ ಎಂದರೇ ಉಸ್ಸ್ ಅಪ್ಪಾ! ಬಹಳಷ್ಟು ಕಷ್ಟಪಡಬೇಕು.
ಹೆಚ್ಚು ಅದ್ವಾನವಾದಷ್ಟು ನಿನಗೆ ಭವಿಷ್ಯವಿದೆ! ಹೆಚ್ಚು ಹೆಚ್ಚು ಭ್ರಷ್ಟನಾದಷ್ಟು ಹೆಚ್ಚು ಸಂಭ್ರಮದಲ್ಲಿ ಬದುಕಬಹುದು. ಹೆಸರು, ಹಣ, ಅಧಿಕಾರ ಬಲ ಪ್ರತಿಯೊಂದು ನೀ ಕೇಳದಿದ್ದರು ನಿನ್ನ ಹುಡುಕಿಕೊಂಡು ಬರುತ್ತದೆ.
ಅದಕ್ಕೆ ರಾಜಕೀಯದಲ್ಲಿರುವವರ ಬಗ್ಗೆ ಮತ್ತು ಚುನಾವಣೆಯ ಸಮಯದಲ್ಲಿ ನಾವೇ ಒಂದು ಸಿದ್ಧಾಂತವನ್ನು ಹಾಕಿಕೊಂಡಿದ್ದೇವೆ. ಅತಿ ಕಡಿಮೆ ಕೆಟ್ಟವರನ್ನು ಆರಿಸಿ. ಅವರಿಗೆ ಮತ ಹಾಕಬೇಕು. ಎಂದು ರಾಜರೋಷವಾಗಿ ಹೇಳಿಕೊಳ್ಳುತ್ತೇವೆ. ಅಂದರೇ ಯೋಚಿಸಿ. ಎಲ್ಲಿಗೆ ಬಂದಿದೆ ಈ ವ್ಯವಸ್ಥೆ.
ಇವರು ಒಳ್ಳೆಯವರು. ಇವರಿಗೆ ಏನೂ ಇಲ್ಲ. ಮುಂದೆ ನಮ್ಮ ಸೇವೆಯನ್ನು ಮಾತ್ರ ಮಾಡಲು ಬಂದಿರುವ ನಮ್ಮ ಜನನಾಯಕ ಎನ್ನುವವನು. ಗೆದ್ದ ಮಾರೆಯ ದಿನವೇ ನಮ್ಮ ಉಯೇಗೂ ನಿಲುಕದ ರೀತಿಯಲ್ಲಿ ಅವನ ಸೇವೆಯನ್ನು, ಅವನ ಸಂಬಂಧಿಕರ ಸೇವೆಯನ್ನು ದೇವರ ಕಾರ್ಯವೆನ್ನುವಂತೆ ಮಾಡುತ್ತಾ ಮಾಡುತ್ತಾ ನಮ್ಮ ಕಣ್ಣುಗಳಿಗೆ ಪಳ ಪಳ ಹೊಳೆಯುತ್ತಾ.. ಇವನೇ ನಾವು ಆರಿಸಿದ ನಮ್ಮ ನೇತಾರ ಎನ್ನುವಂತೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತಾನೆ.
ಇಂದು ಮೋಸ ಮಾಡುವವನೇ ಬಲಿಷ್ಟ. ಮೊಸಕ್ಕೆ ಒಳಗಾಗುವನಿಗೆ ಬುದ್ಧಿ ಇಲ್ಲ. ಅವನು ಪಾಪಿ! ಈ ವ್ಯವಸ್ಥೆಯಲ್ಲಿ ಬದುಕಲು ಯೋಗ್ಯತೆ ಇಲ್ಲದವನಾಗಿದ್ದಾನೆ ಎನ್ನುತ್ತೇವೆ.
ಕಳ್ಳರು ಸುಳ್ಳರು, ಅಸತ್ಯ ನುಡಿಯುವವರು, ಮೋಸ ಮಾಡುವವರೇ ಕಲಿಯುಗದ ಕಲಿ ಮಣಿಗಳಾಗಿದ್ದಾರೆ.
ಹೇ ನೀ ಹೇಗೆ ಎನ್ನುವುದು, ನಿನ್ನ ದುಡಿಮೆಯಲ್ಲಿದೆ. ಹೆಚ್ಚು ಹಣ ಹೊಂದಿರುವವನು ಹೆಚ್ಚು ಗೌರವವನ್ನು ಸಂಪಾಧಿಸುವವನಾಗಿದ್ದಾನೆ. ಹೆಚ್ಚು ಹೆಚ್ಚು ವ್ಯವಾಹರ ಕೌಶಲತೆಯನ್ನು ಹೊಂದಿರುವವನು ಹೆಚ್ಚು ಗಮನ ಸೇಳೆಯುವನಾಗಿದ್ದಾನೆ.
ನಾನು ಅತಿ ಒಳ್ಳೆಯವನು ಎಂದುಕೊಂಡು ಇದ್ದರೆ. ನೀನು ಅಲ್ಲಿಯೇ ಇರು ಮಗು. ಎಂದು ಅಸಡ್ಡೆಯಾಗಿ ನೋಡುವಂತಾಗಿದೆ.
ಪ್ರಾಮಾಣಿಕ ಎಂದು ಹೇಳಿದರೇ, ಜೊತೆಯಲ್ಲಿರುವವರೆ ನೋಡಿ ನಗುವಂತಾಗಿದೆ.
ಪ್ರಾಮಾಣಿಕ ಎಂದು ಹಣೆ ಪಟ್ಟಿಗೆ ಪಕ ಪಕ ಎಂದು ಹಾಡಿಕೊಳ್ಳುತ್ತಾರೆ.
ಹೇ ಬಂದ ನೋಡು ಗಾಂಧಿ ಎಂದು ನಮಗೆ ಸ್ವಾತಂತ್ರ್ಯ ತಂದುಕೊಟ್ಟ ನಮ್ಮ ಬಾಪುವನ್ನು ಎಳೆದು ತಂದು ನಗೆಗೀಡು ಮಾಡುತ್ತೇವೆ.
ಕೆಟ್ಟವರಾಗಿದ್ದಾರೇ ಯಾರಿಗೂ ಹೆದರಬೇಕಿಲ್ಲ. ನೀ ಬಹಳ ಒಳ್ಳೆಯವನು ನೋಡು ಇನ್ನು ಮುಂದೆ ಹೇಗೆಲ್ಲಾ ಕಷ್ಟಪಡಬೇಕು ಜೀವನದಲ್ಲಿ, ಎಂದು ನಮ್ಮ ನಮ್ಮಲ್ಲಿಯೇ ಹೇಳಿಕೊಳ್ಳುತ್ತೇವೆ.
ಸತ್ಯ ಹರಿಶ್ಚಂದ್ರ ಸಾಧು, ಬದುಕು ನೋಡಿದರೇ ಕೇಳೋದು ಬೇಡ ಅನ್ನುತ್ತಾರೆ.
ಏನೇ ಮಾಡು ಚೆನ್ನಾಗಿ ಮಾಡು, ಹೆಚ್ಚು ದುಡ್ಡು ಸಂಪಾಧಿಸು ಬಿಂದಾಸಾಗಿ ಇರಬೇಕು ಎನ್ನುತ್ತಾರೆ.
ನಾವುಗಳು ಆದರ್ಶ ಎಂದು ನಮ್ಮ ಮಕ್ಕಳಿಗೆ ಯಾರನ್ನು ತೋರಿಸಿ ಹೇಳಲಾರದಾಗಿದ್ದೇವೆ. ಹೀಗೆ ಬದುಕು ಎಂದು ಹೇಳಿದರೇ ಎಲ್ಲಿ ಕಷ್ಟ ಎನ್ನುವಷ್ಟರ ಮಟ್ಟಿಗೆ ದಕ್ಷ, ಪ್ರಾಮಾಣಿಕ ಕೆಲವೇ ಕೆಲವು ಮಂದಿಗಳ ಜೀವನ ದುರಂತಮಯವಾಗುತ್ತಿರುವುದು ಭಯವನ್ನುಂಟು ಮಾಡುತ್ತಿದೆ.
ಒಳ್ಳೆಯವರಿಗೆ ಯಾರ ರಕ್ಷಣೆ ಇಲ್ಲ ಎನ್ನುವಂತಾಗಿದೆ.
ಹಣವೊಂದಿದ್ದರೇ ಇಂದು ಯಾರೇ ಬಂಧಿಸಲಿ, ಮಾರನೆಯ ದಿನ ಹೇಗಾದರೂ ಹೊರ ಬರುವನು. ಒಂದೆರಡು ದಿನ ಸಜಾ ಅಮೇಲೆ ಇದೆ ಮಜಾ ಎನ್ನುವಂತಾಗಿದೆ.
ಯಾರಿಗೂ ಸರ್ಕಾರ ಮತ್ತು ಅದರಲ್ಲಿರುವ ಕಾನೂನಿನ ಮೇಲೆಯೇ ನಂಬಿಕೆ ಹೋಗುವಂತಾಗಿದೆ. ಸತ್ಯವಾಗಿ ಕೆಲಸ ಮಾಡುವವರಿಗೂ ನಡುಕವುಂಟು ಮಾಡುವ ಘಟನೆಗಳು ನಿತ್ಯ ಜರುಗುತ್ತಿವೆ.
ಅನಾಚಾರ ಮಾಡಿರುವವನಿಗೆ ಮರ್ಯಾದೆ. ಅವನೇ ಎಲ್ಲಾ ಸಮೊಹ ಮಾಧ್ಯಮಗಳಲ್ಲಿ ಮೆರೆಯುವವನು.
ಉನ್ನತವಾಗಿ ಬದುಕುವುದೆಂದರೇ ಇದೇ ಎಂಬುಂತಾಗಿದೆ. ಉನ್ನತ ಎಂದರೇ ಯಾವುದೇ ಕೊರತೆಯಿಲ್ಲದೇ ಹೇಗಾದರೂ ಬದುಕು ಅನ್ನುವಂತಾಗಿದೆ.
ಒಳ್ಳೆಯ ಜೀವಕ್ಕೆ ಬೆಲೆಯೇ ಇಲ್ಲ ಅನ್ನುವಂತಾಗಿದೆ. ಒಳ್ಳೆಯವರಾಗಿರುವುದೇ ಅಪರಾಧ ಅನಿಸುತ್ತಿದೆ. ಲಂಚ ಕೇಳುವುದು ಮಾಮುಲು ಎನ್ನುವಂತಾಗಿದೆ.
ಜನ ಬಳಸುವ ಯಾವುದೇ ಮಾಮುಲಿ ಇಲಾಖೆಗಳಲ್ಲಿ, ಅದು ಕೊಡುವುದು ಕಾಮನ್, ಅದು ಕೊಡದಿದ್ದರೇ ನೀ ಎಷ್ಟು ದಿನದವರೆಗೂ ಕಾಯಬೇಕಾಗುತ್ತದೆ ಗೊತ್ತಾ? ಎಂದು ನೆರೆಹೊರೆಯವರು ಸಲಹೆ ಕೊಡುವಂತಾಗಿದೆ.
(ದಕ್ಷ ಅಧಿಕಾರಿ D K ರವಿಯವರ ಹತ್ಯೆಯನ್ನು ಕಂಡು ಈ ಮನ ಮಿಡಿದ ಸಾಲುಗಳು)
ಯಾಕೆಂದರೇ ಇದು ಕಲಿಗಾಲ.
ಕಲಿಗಾಲದಲ್ಲಿ ಎಲ್ಲಾ ತದ್ವಿರುದ್ಧವಾಗಿರಬೇಕು. ಅಂದರೇ ಯಾರು ಉತ್ತಮರಾಗಿರುವವರೋ ಅವರಿಗೆ ಉಳಿಗಾಲವಿಲ್ಲ.
ಎಷ್ಟು ದಿನ ಶುದ್ಧವಾಗಿದ್ದರೇನು ಫಲ ಅನಿಸುವಂತಾಗಿದೆ.
ನೀ ಪ್ರಾಮಾಣಿಕನಾಗಿದ್ದಷ್ಟು ನಿನಗೆ ಕಷ್ಟ ಕಣಮ್ಮಾ! ಎಂದು ಗೆಳೆಯರುಗಳು ಹೇಳುವ ಮಟ್ಟಿಗೆ ಸಮಾಜ ನಡೆದುಕೊಳ್ಳುತ್ತಿದೆ ಅನಿಸುತ್ತಿದೆ.
ಚೆನ್ನಾಗಿ ಬದುಕಬೇಕೆಂದರೇ ಹೆಚ್ಚು ಕೆಟ್ಟವನಾಗಿರಬೇಕು ಮಗು ಎಂದು ಹಿರಿಯರು ಚಿಕ್ಕ ಮಕ್ಕಳಿಗೆ ನೀತಿ ಬೋಧನೆಯನ್ನು ಮಾಡುವಂತಾಗಿದೆ.
ಪುರಾಣ ಪುಣ್ಯ ಕಥೆಗಳು ಪುರಾತನ ದಿನಗಳಿಗೆ ಮಾತ್ರ ಎಂಬಂತಾಗಿದೆ. ಇದು ಅದುನಿಕ ಯುಗ. ಇಲ್ಲಿ ಹಿಂದಿನ ಆ ನೀತಿ ನಿಯತ್ತುಗಳು ಯಾರಿಗೂ ಬೇಡವಾಗಿದೆ.
ಹುಟ್ಟಿದಂದಿನಿಂದ ಮಗು ನಿತ್ಯ ಬರೀ ಈ ದುರಾಡಳಿತ, ದುಷ್ಟ ಕೊಟ, ದುರ್ಜನರ ಸಂಗ ಮಾಡಿ ಜಮ್ಮಾಂತಾ ಬದುಕು. ಎಂದು ಹೇಳು ಕಲಿಯುಗದ ಗಾದೆಯಂತಾಗಿದೆ ಈ ಪ್ರಪಂಚ.
ಯಾರು ನಿನ್ನ ರಕ್ಷಿಸಲಾರರು. ಯಾಕೆಂದರೇ ನೀ ಅತಿ ಉತ್ತಮ! ಎಂದು ನಮ್ಮ ನಮ್ಮ ನೆರೆಹೊರೆಯವರೆ ಮೂಗು ಮುರಿಯುವಂತಾಗಿದೆ.
ನಾನು ಒಳ್ಳೆಯವನು ಎಂದು ಅದು ಹೇಗೆ ನೀನು ಎದೆ ಉಬ್ಬಿಸಿ ಹೇಳುತ್ತಿಯ ಬಾಯ್ ಮುಚ್ಚಿಕೋ ಎನ್ನುವಂತಾಗಿದೆ.
ಆ ನಿನ್ನ ಉಪದೇಶಗಳು ನಮಗೆ ಹೇಳಬೇಡ. ನೀ ಹೇಳುವ ಮಾತು ಇಂದು ಯಾರು ಕೇಳುತ್ತಾರೆ? ಥಿಂಕ್ ಪ್ರಾಕ್ಟೀಕಲ್ ಮ್ಯಾನ್ ಎನ್ನುತ್ತಾರೆ.
ನೀ ಇಷ್ಟು ಸಭ್ಯನಾಗಿದ್ದರೇ ನಿನ್ನ ಮೇಲೆ ಇಡೀ ಊರೇ ಸವಾರಿ ಮಾಡುತ್ತದೆ ಅಷ್ಟೇ. ನೀ ಸ್ವಲ್ಪ ರಫ್ ಅಂಡ್ ಟಫ್ ಆಗು ಮಗು. ಎಂದು ಮಗುವನ್ನು ಮಗುವಾಗಿದ್ದಾಗಲೇ ಈ ರಫ್ ಆದ ಸಮಾಜದಲ್ಲಿ ಬೆಳೆಸಲು, ಎಷ್ಟು ಕಷ್ಟಪಡುತ್ತಿದ್ದಾರೆ ನಮ್ಮ ಜನ ಎಂದರೇ ಉಸ್ಸ್ ಅಪ್ಪಾ! ಬಹಳಷ್ಟು ಕಷ್ಟಪಡಬೇಕು.
ಹೆಚ್ಚು ಅದ್ವಾನವಾದಷ್ಟು ನಿನಗೆ ಭವಿಷ್ಯವಿದೆ! ಹೆಚ್ಚು ಹೆಚ್ಚು ಭ್ರಷ್ಟನಾದಷ್ಟು ಹೆಚ್ಚು ಸಂಭ್ರಮದಲ್ಲಿ ಬದುಕಬಹುದು. ಹೆಸರು, ಹಣ, ಅಧಿಕಾರ ಬಲ ಪ್ರತಿಯೊಂದು ನೀ ಕೇಳದಿದ್ದರು ನಿನ್ನ ಹುಡುಕಿಕೊಂಡು ಬರುತ್ತದೆ.
ಅದಕ್ಕೆ ರಾಜಕೀಯದಲ್ಲಿರುವವರ ಬಗ್ಗೆ ಮತ್ತು ಚುನಾವಣೆಯ ಸಮಯದಲ್ಲಿ ನಾವೇ ಒಂದು ಸಿದ್ಧಾಂತವನ್ನು ಹಾಕಿಕೊಂಡಿದ್ದೇವೆ. ಅತಿ ಕಡಿಮೆ ಕೆಟ್ಟವರನ್ನು ಆರಿಸಿ. ಅವರಿಗೆ ಮತ ಹಾಕಬೇಕು. ಎಂದು ರಾಜರೋಷವಾಗಿ ಹೇಳಿಕೊಳ್ಳುತ್ತೇವೆ. ಅಂದರೇ ಯೋಚಿಸಿ. ಎಲ್ಲಿಗೆ ಬಂದಿದೆ ಈ ವ್ಯವಸ್ಥೆ.
ಇವರು ಒಳ್ಳೆಯವರು. ಇವರಿಗೆ ಏನೂ ಇಲ್ಲ. ಮುಂದೆ ನಮ್ಮ ಸೇವೆಯನ್ನು ಮಾತ್ರ ಮಾಡಲು ಬಂದಿರುವ ನಮ್ಮ ಜನನಾಯಕ ಎನ್ನುವವನು. ಗೆದ್ದ ಮಾರೆಯ ದಿನವೇ ನಮ್ಮ ಉಯೇಗೂ ನಿಲುಕದ ರೀತಿಯಲ್ಲಿ ಅವನ ಸೇವೆಯನ್ನು, ಅವನ ಸಂಬಂಧಿಕರ ಸೇವೆಯನ್ನು ದೇವರ ಕಾರ್ಯವೆನ್ನುವಂತೆ ಮಾಡುತ್ತಾ ಮಾಡುತ್ತಾ ನಮ್ಮ ಕಣ್ಣುಗಳಿಗೆ ಪಳ ಪಳ ಹೊಳೆಯುತ್ತಾ.. ಇವನೇ ನಾವು ಆರಿಸಿದ ನಮ್ಮ ನೇತಾರ ಎನ್ನುವಂತೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತಾನೆ.
ಇಂದು ಮೋಸ ಮಾಡುವವನೇ ಬಲಿಷ್ಟ. ಮೊಸಕ್ಕೆ ಒಳಗಾಗುವನಿಗೆ ಬುದ್ಧಿ ಇಲ್ಲ. ಅವನು ಪಾಪಿ! ಈ ವ್ಯವಸ್ಥೆಯಲ್ಲಿ ಬದುಕಲು ಯೋಗ್ಯತೆ ಇಲ್ಲದವನಾಗಿದ್ದಾನೆ ಎನ್ನುತ್ತೇವೆ.
ಕಳ್ಳರು ಸುಳ್ಳರು, ಅಸತ್ಯ ನುಡಿಯುವವರು, ಮೋಸ ಮಾಡುವವರೇ ಕಲಿಯುಗದ ಕಲಿ ಮಣಿಗಳಾಗಿದ್ದಾರೆ.
ಹೇ ನೀ ಹೇಗೆ ಎನ್ನುವುದು, ನಿನ್ನ ದುಡಿಮೆಯಲ್ಲಿದೆ. ಹೆಚ್ಚು ಹಣ ಹೊಂದಿರುವವನು ಹೆಚ್ಚು ಗೌರವವನ್ನು ಸಂಪಾಧಿಸುವವನಾಗಿದ್ದಾನೆ. ಹೆಚ್ಚು ಹೆಚ್ಚು ವ್ಯವಾಹರ ಕೌಶಲತೆಯನ್ನು ಹೊಂದಿರುವವನು ಹೆಚ್ಚು ಗಮನ ಸೇಳೆಯುವನಾಗಿದ್ದಾನೆ.
ನಾನು ಅತಿ ಒಳ್ಳೆಯವನು ಎಂದುಕೊಂಡು ಇದ್ದರೆ. ನೀನು ಅಲ್ಲಿಯೇ ಇರು ಮಗು. ಎಂದು ಅಸಡ್ಡೆಯಾಗಿ ನೋಡುವಂತಾಗಿದೆ.
ಪ್ರಾಮಾಣಿಕ ಎಂದು ಹೇಳಿದರೇ, ಜೊತೆಯಲ್ಲಿರುವವರೆ ನೋಡಿ ನಗುವಂತಾಗಿದೆ.
ಪ್ರಾಮಾಣಿಕ ಎಂದು ಹಣೆ ಪಟ್ಟಿಗೆ ಪಕ ಪಕ ಎಂದು ಹಾಡಿಕೊಳ್ಳುತ್ತಾರೆ.
ಹೇ ಬಂದ ನೋಡು ಗಾಂಧಿ ಎಂದು ನಮಗೆ ಸ್ವಾತಂತ್ರ್ಯ ತಂದುಕೊಟ್ಟ ನಮ್ಮ ಬಾಪುವನ್ನು ಎಳೆದು ತಂದು ನಗೆಗೀಡು ಮಾಡುತ್ತೇವೆ.
ಕೆಟ್ಟವರಾಗಿದ್ದಾರೇ ಯಾರಿಗೂ ಹೆದರಬೇಕಿಲ್ಲ. ನೀ ಬಹಳ ಒಳ್ಳೆಯವನು ನೋಡು ಇನ್ನು ಮುಂದೆ ಹೇಗೆಲ್ಲಾ ಕಷ್ಟಪಡಬೇಕು ಜೀವನದಲ್ಲಿ, ಎಂದು ನಮ್ಮ ನಮ್ಮಲ್ಲಿಯೇ ಹೇಳಿಕೊಳ್ಳುತ್ತೇವೆ.
ಸತ್ಯ ಹರಿಶ್ಚಂದ್ರ ಸಾಧು, ಬದುಕು ನೋಡಿದರೇ ಕೇಳೋದು ಬೇಡ ಅನ್ನುತ್ತಾರೆ.
ಏನೇ ಮಾಡು ಚೆನ್ನಾಗಿ ಮಾಡು, ಹೆಚ್ಚು ದುಡ್ಡು ಸಂಪಾಧಿಸು ಬಿಂದಾಸಾಗಿ ಇರಬೇಕು ಎನ್ನುತ್ತಾರೆ.
ನಾವುಗಳು ಆದರ್ಶ ಎಂದು ನಮ್ಮ ಮಕ್ಕಳಿಗೆ ಯಾರನ್ನು ತೋರಿಸಿ ಹೇಳಲಾರದಾಗಿದ್ದೇವೆ. ಹೀಗೆ ಬದುಕು ಎಂದು ಹೇಳಿದರೇ ಎಲ್ಲಿ ಕಷ್ಟ ಎನ್ನುವಷ್ಟರ ಮಟ್ಟಿಗೆ ದಕ್ಷ, ಪ್ರಾಮಾಣಿಕ ಕೆಲವೇ ಕೆಲವು ಮಂದಿಗಳ ಜೀವನ ದುರಂತಮಯವಾಗುತ್ತಿರುವುದು ಭಯವನ್ನುಂಟು ಮಾಡುತ್ತಿದೆ.
ಒಳ್ಳೆಯವರಿಗೆ ಯಾರ ರಕ್ಷಣೆ ಇಲ್ಲ ಎನ್ನುವಂತಾಗಿದೆ.
ಹಣವೊಂದಿದ್ದರೇ ಇಂದು ಯಾರೇ ಬಂಧಿಸಲಿ, ಮಾರನೆಯ ದಿನ ಹೇಗಾದರೂ ಹೊರ ಬರುವನು. ಒಂದೆರಡು ದಿನ ಸಜಾ ಅಮೇಲೆ ಇದೆ ಮಜಾ ಎನ್ನುವಂತಾಗಿದೆ.
ಯಾರಿಗೂ ಸರ್ಕಾರ ಮತ್ತು ಅದರಲ್ಲಿರುವ ಕಾನೂನಿನ ಮೇಲೆಯೇ ನಂಬಿಕೆ ಹೋಗುವಂತಾಗಿದೆ. ಸತ್ಯವಾಗಿ ಕೆಲಸ ಮಾಡುವವರಿಗೂ ನಡುಕವುಂಟು ಮಾಡುವ ಘಟನೆಗಳು ನಿತ್ಯ ಜರುಗುತ್ತಿವೆ.
ಅನಾಚಾರ ಮಾಡಿರುವವನಿಗೆ ಮರ್ಯಾದೆ. ಅವನೇ ಎಲ್ಲಾ ಸಮೊಹ ಮಾಧ್ಯಮಗಳಲ್ಲಿ ಮೆರೆಯುವವನು.
ಉನ್ನತವಾಗಿ ಬದುಕುವುದೆಂದರೇ ಇದೇ ಎಂಬುಂತಾಗಿದೆ. ಉನ್ನತ ಎಂದರೇ ಯಾವುದೇ ಕೊರತೆಯಿಲ್ಲದೇ ಹೇಗಾದರೂ ಬದುಕು ಅನ್ನುವಂತಾಗಿದೆ.
ಒಳ್ಳೆಯ ಜೀವಕ್ಕೆ ಬೆಲೆಯೇ ಇಲ್ಲ ಅನ್ನುವಂತಾಗಿದೆ. ಒಳ್ಳೆಯವರಾಗಿರುವುದೇ ಅಪರಾಧ ಅನಿಸುತ್ತಿದೆ. ಲಂಚ ಕೇಳುವುದು ಮಾಮುಲು ಎನ್ನುವಂತಾಗಿದೆ.
ಜನ ಬಳಸುವ ಯಾವುದೇ ಮಾಮುಲಿ ಇಲಾಖೆಗಳಲ್ಲಿ, ಅದು ಕೊಡುವುದು ಕಾಮನ್, ಅದು ಕೊಡದಿದ್ದರೇ ನೀ ಎಷ್ಟು ದಿನದವರೆಗೂ ಕಾಯಬೇಕಾಗುತ್ತದೆ ಗೊತ್ತಾ? ಎಂದು ನೆರೆಹೊರೆಯವರು ಸಲಹೆ ಕೊಡುವಂತಾಗಿದೆ.
(ದಕ್ಷ ಅಧಿಕಾರಿ D K ರವಿಯವರ ಹತ್ಯೆಯನ್ನು ಕಂಡು ಈ ಮನ ಮಿಡಿದ ಸಾಲುಗಳು)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ