ಗುರುವಾರ, ಜುಲೈ 5, 2012

ದೇವ ಕಣದ ಲೀಲೆ!


ಬಹಳ ದಿನಗಳಿಂದ ನಮ್ಮ ಎಲ್ಲಾ ಮನುಕುಲದ ತಲೆಯಲ್ಲಿ ಕೊರೆಯುತ್ತಿದ್ದ ಒಂದು ಪ್ರಶ್ನೆಗೆ ಉತ್ತರ ಸ್ವಲ್ಪ ಸಿಕ್ಕಿದಂತಾಗಿದೆ.

ಈ ವಿಶ್ವ ಹೇಗೆ ರಚನೆಯಾಯಿತು. ಮೊದಲು ಯಾರು ಭೂಮಿಗೆ ಬಂದರು? ಈ ಪರ್ವತ, ನೀರು, ಪರಿಸರ, ಪ್ರಾಣಿ ಪಕ್ಷಿ, ಸುಂದರವಾದ ವಾತವರಣದ ಕತೃ ಯಾರು? ಎಂಬ ಬಿಡಿಸಲಾರದ ಜಿಙ್ಞಾಸೆಗೆ ನಮ್ಮ ವಿಙ್ಞಾನಿಗಳು ಹಲವಾರು ವರುಷಗಳ ಪ್ರಯೋಗದ ಮೊಲಕ ಇಂದು ಉತ್ತರವನ್ನು ಕಂಡು ಕೊಂಡಿದ್ದಾರೆ.

ಹೌದು. ನಮ್ಮ ನಮ್ಮ ಪಠ್ಯದಲ್ಲಿ ನಾವು ಓದಿದಂತಹ ಬಿಗ್ ಬ್ಯಾಂಗ ಥೇಯರಿಯ ಪ್ರಕಾರ ಒಂದು ಅಟಾಂ ಬಾಂಬ್ ರೀತಿಯಲ್ಲಿ ಮಹಾ ಸ್ಪೋಟದಿಂದ ಈ ವಿಶ್ವವು ಸೃಷ್ಟಿಯಾಯಿತು. ಆ ಸಮಯದಲ್ಲಿ ಈ ಭೂಮಿ ಹಲವು ಖಂಡಗಳು, ಪರಿಸರ ಸೃಷ್ಟಿಯಾಯಿತು. ಹಾಗೆಯೇ ಸಾವಿರಾರು ಗ್ರಹಗಳು, ಕೋಟ್ಯಾನುಕೋಟಿ ನಕ್ಷತ್ರಗಳು, ಆಕಾಶ ಕಾಯಗಳು ಅವತರಿಸಿದವು. ಜೀವ ಜಲವು ಸೃಷ್ಟಿಯಾಯಿತು. ಅಲ್ಲಿ ಏಕ ಕಣ ಜೀವಿಯಿಂದ ಕೋಟ್ಯಾಂತರ ವರುಷಗಳ ಮಾರ್ಪಟಿನಿಂದ ಈ ರೀತಿಯ ಬುದ್ಧಿವಂತ ಮಾನವನ ಉಗಮವಾಯಿತು.

ಈ ವಿಷಯವನ್ನು ಓದಿದರೂ ಸಹ ಪುನಃ ನಮ್ಮ ತಲೆಯಲ್ಲಿ, ಅದು ಹೋಗಲಿ ಎಲ್ಲಿಂದ ಹೇಗೆ ಈ ರೀತಿಯ ಜೀವ ಹುಟ್ಟಿತು? ಎಂದು ನಮ್ಮ ಮನುಕುಲದ ತಲೆಯನ್ನು ನಿತ್ಯ ತಿನ್ನುತ್ತಿತ್ತು.

ಈಗ ಇದಕ್ಕೆಲ್ಲಾ ಉತ್ತರವಾಗಿ. ದೇವಕಣ ಎಂಬ ಒಂದು ಗಾಡ್ ಪಾರ್ಟಿಕಲ್ ನಿಂದ ಜೀವ ಜಗತ್ತು ಸೃಷ್ಟಿಯಾಯಿತು!

ನಿರಂತರ ಐದು ದಶಕಗಳ ಸಂಶೋಧನೆಯ ಬಳಿಕ ಪ್ರಾನ್ಸ್ ಸ್ವಿಜರ್ಲೆಂಡ್ ನಡುವಿನ ಭೂ ಅಳದಲ್ಲಿ ನಿರ್ಮಿಸಿರುವ ಪ್ರಯೋಗಾಲಯದಿಂದ "ಹಿಗ್ಸ್ ಬೋಸನ್" ಕಣವನ್ನು ವಿಙ್ಞಾನಿಗಳು ಪತ್ತೆ ಹಚ್ಚಿದ್ದಾರೆ.


ಇದನ್ನು ಕಂಡು ನಾವೆಲ್ಲಾ ನಂಬಿರುವ ನಮ್ಮ ದೇವರು ಸಹ ಒಂದು ಅಚ್ಚರಿಯ ಕಿರುನಗೆಯನ್ನು ಚಿಮ್ಮಿದ್ದರೇ ಆಶ್ಚರ್ಯವಿಲ್ಲ!

ಇದೊಂತು ತುಂಬ ಅಚ್ಚರಿಯ ವಿಷಯವಾಗಿದೆ. ನಮ್ಮ ಭಾರತವು ಸಹ ಈ ಪ್ರಯೋಗದ ಪಲಿತಾಂಶಕ್ಕೆ ದುಪ್ಪಟ್ಟು ಸಂತೋಷಪಡುವಂತಾಗಿದೆ. ಯಾಕೆಂದರೇ ಈ ಪ್ರಯೋಗದಲ್ಲಿ ಪಾಲ್ಗೊಂಡ ಬಹುತೇಕ ವಿಙ್ಞಾನಿಗಳು ಭಾರತದ ಮೊಲದವರು. ಹಾಗೆಯೇ ಇದರ ಮರ್ಮವನ್ನು ಬಹು ದಿನಗಳ ಹಿಂದೆಯೇ ಸತ್ಯೇಂದ್ರನಾಥ್ ಬೋಸ್ ರವರು ಪ್ರತಿಪಾಧಿಸಿದ್ದರು. ಅವರ ನಿಲುವನ್ನು ಪುಷ್ಟೀಕರಿಸುವ ರೀತಿಯಲ್ಲಿ ಈ ದೇವ ಕಣ ಪತ್ತೆಯಾಗಿದೆ. ದೇವ ಕಣಕ್ಕೆ "ಹಿಗ್ ಬೋಸ್" ಎಂದು ಹಿಗ್ ಥೇಯರಿ ಹೆಸರಿನ ಜೊತೆಯಲ್ಲಿ ಬೋಸ್ ಅವರ ಹೆಸರನ್ನು ಸೇರಿಸಿ ಇಡಿ ಪ್ರಪಂಚಕ್ಕೆ ಪರಿಚಯಿಸಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ.

ಇದು ನಿರಂತರವಾಗಿ ನಿತ್ಯ ನಮ್ಮ ಪ್ರಪಂಚದ ವಿಷಯಗಳನ್ನು ತಿಳಿದುಕೊಳ್ಳುವವ ವಿಙ್ಞಾನಿ ಸಮೊಹಕ್ಕೆ ಸಿಕ್ಕ ದೊಡ್ಡ ಜಯ.

ಒಂದು ಜೀವದ ಉಗಮ ಯಾವ ರೀತಿಯಲ್ಲಿ ಆಗಿರಬಹುದು ಎಂಬ ಸತ್ಯದ ಅನಾವರಣವನ್ನು ಮಾಡಿದ್ದಾರೆ ಎಂದರೇ.. ನಮ್ಮ ಬುದ್ಧಿವಂತ ಮನುಕುಲದ ಚಿಂತನೆ, ಜಾಣ್ಮೆಗೆ ಯಾವ ರೀತಿಯಲ್ಲಿ ವಂದನೆಗಳನ್ನು ಹೇಳಬೇಕೋ ತಿಳಿಯದಾಗಿದೆ.

ಇದು ಒಂದು ಮೈಲುಗಲ್ಲಾಗಿ ಮನುಕುಲದ ಏಳ್ಗೆಗೆ ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಒಂದು ಪಲಿತಾಂಶ ಜಗತ್ತಿನಲ್ಲಿರುವ ನೂರಾರು ಸಿದ್ಧಾಂತಗಳನ್ನು ಪುನರ್ ಪರಿಶೀಲನೆಯನ್ನು ಮಾಡುವಂತೆ ಮಾಡಿದರೂ ಅತಿಶಯೋಕ್ತಿಯಲ್ಲಾ..

ನಾವುಗಳು ನೋಡಿದ ಇಂಗ್ಲಿಷ್ ಚಿತ್ರಗಳಲ್ಲಿ ತೋರಿಸಿದಂತ ಕಲ್ಪನೆಯ ಚಿತ್ರಗಳು ನಿಜ ರೂಪ ಪಡೆಯುತ್ತಿರುವುದು ನಮ್ಮ ಮಾನವ ಕುಲದ ವೇಗಕ್ಕೆ ಸಾಕ್ಷಿ.

ಈ ರೀತಿಯ ಸತ್ಯದ ಅನ್ವೇಷಣೆ ನಮ್ಮ ಮಾನವ ಜನಾಂಗ ಮತ್ತು ನಮ್ಮ ಸುಂದರ ಭೂ ವಾತವರಣದ ಸಂರಕ್ಷಣೆಗೆ ಕಾಣಿಕೆಯಾಗಬೇಕು.

ಮುಂದೆ ಬರುವಂತಹ ಯುವ ಜನಾಂಗಕ್ಕೆ ಒಂದು ಹೊಸ ಪಥವನ್ನು ಹಾಕಿಕೊಡುವಂತಾಗಬೇಕು. ವೈಙ್ಞಾನಿಕವಾಗಿ ನಡೆಯುತ್ತಿರುವ ಹೊಸ ಹೊಸ ಅವಿಷ್ಕಾರಗಳಿಗೆ ಸ್ಪೂರ್ತಿಯಾಗಬೇಕು.

ಈ ಮೊಲಕ ಇಡೀ ಸಮಾಜ ತಮ್ಮ ಪ್ರಮುಖ್ಯತೆಯನ್ನು ಅರಿತು ಸಹ ಬಾಳ್ವೆಯಾಗಿ ಬಾಳುವ ಕನಸು ನನಸಾಗಬೇಕು.

ಯಾವುದೇ ಸಂಶೋಧನೆ, ಪರಿಶೋಧನೆ ನಮ್ಮೆಲ್ಲಾರ ಶಾಂತಿ ಮತ್ತು ರಕ್ಷಣೆಯ ಬಾಳ್ವೆಗಾಗಿ ಅಲ್ಲವಾ?

ಇನ್ನೂ ನಮ್ಮ ಹುಟ್ಟು ಸಾವಿನ ಎರಡು ದಡಗಳ ಯಕ್ಷ ಪ್ರಶ್ನೆಗಳನ್ನು ಬೇದಿಸುವ ಸಮಯವು ಬಂದರೂ ಅಚ್ಚರಿಯಿಲ್ಲಾ? ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ