ಭಾನುವಾರ, ಡಿಸೆಂಬರ್ 18, 2011

ಹೊಸ ವರುಷ ಅಂದರೇ...

ಒಂದು ಸಂವತ್ಸರ ಎಂದರೇನು ಅಂತಾ ಒಂದು ವರ್ಷ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಯನ್ನು ಕೇಳಬೇಕಂತೆ. ಅವನ ಕಠಿಣ ಪ್ರರಿಶ್ರಮದ ವಿದ್ಯಾಭ್ಯಾಸವೇ ವರುಷದ ಕೊನೆಯಲ್ಲಿ ಬರುವ ಪರೀಕ್ಷೆಯ ಪಲಿತಾಂಶವನ್ನು ಪ್ರತಿಪಲಿಸುತ್ತದೆ. ಮುನ್ನೂರು ಅರವತೈದು ದಿನಗಳನ್ನು ವ್ರತದಂತೆ ಕಳೆದವರು ನಮ್ಮ ಸುತ್ತ ಮುತ್ತಲಲ್ಲಿ ಬಹಳಷ್ಟು ಜನಗಳ ಸಿಗಬಹುದು.

ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ದಿನಗಳನ್ನು, ತಿಂಗಳುಗಳನ್ನು ದೂಡುತ್ತಿರುತ್ತರೆ. ದೂಡುವುದೇನೂ ಏನು ಮಾಡದಿದ್ದರೂ ಕಾಲಾಯ ತಸ್ಮಯಾ ನಮಾಃ ಎಂಬ ರೀತಿಯಲ್ಲಿ ಬೆಳಗಾಗುವುದು, ರಾತ್ರಿಯಾಗುವುದು ಗೊತ್ತಾಗದ ರೀತಿಯಲ್ಲಿ ಎಷ್ಟೊಂದು ವೇಗವಾಗಿ ದಿನಗಳು ಕಳೆದು ಪುನಃ ಹೊಸ ವರುಷದ ಹೊಸ್ತಿನಲ್ಲಿ ಬಂದು ನಿಂತಿರುತ್ತೇವೆ.

ವರುಷದ ಕೊನೆಯಲ್ಲಿ ಬಂದು ನಿಂತು ಹಿಂತಿರುಗಿ ನೋಡಿದಾಗ ನಾವುಗಳು ಒಂದು ವರುಷದಲ್ಲಿ ಏನೇನು ಮಾಡಿದೇವು, ಏನೇನು ನೋವು, ಸುಖದ, ಸಂತೋಷದ ಕ್ಷಣಗಳನ್ನು ಅನುಭವಿಸಿದೆವು. ಎಷ್ಟು ಎಷ್ಟು ಗಳಿಸಿದೆವು ಸಂಪತ್ತನ್ನು, ಗೆಳೆತನವನ್ನು, ಙ್ಞಾನವನ್ನು, ಒಳ್ಳೆತನವನ್ನು, ತಿಳುವಳಿಕೆಯನ್ನು, ಸಹಕಾರವನ್ನು ಇತ್ಯಾದಿ ಸಕರಾತ್ಮಕ ವಿಷಯಗಳ ಪಟ್ಟಿಯನ್ನು ಹಾಗೆಯೇ ನಮ್ಮ ಕಣ್ಣ ಮುಂದೆ ತಂದು ನೋಡಬಹುದು.

ಹಾಗೆಯೇ ವೃಥಾ ಕಾಲಹರಣವನ್ನು ಮಾಡಿದ ನೇಗೆಟಿವ್ ಅಂಶಗಳನ್ನು ನಮ್ಮ ನಮ್ಮಲ್ಲಿ ಕಾಣಬಹುದು. ಎಷ್ಟನ್ನು ನಷ್ಟ ಮಾಡಿಕೊಂಡೇವು ಎಂಬುದನ್ನು ಅದೇ ಪುನಃ ಸಂಪತ್ತು, ಗೆಳೆತನ, ಮೋಸ, ಸುಳ್ಳು, ಅವಮಾನ.. ಇತ್ಯಾದಿ. ಆದರೇ ನಮಗೆ ನಾವುಗಳು ಅನುಭವಿಸಿದ ನೋವು, ದುಃಖದ ಕ್ಷಣಗಳ ನೆನಪು ಖಾತ್ರಿಯಾಗಿ ನೆನಪಿನಲ್ಲಿ ಇರುತ್ತೇವೆ. ಅದೇ ನಾವುಗಳು ನಮಗೆ ತಿಳಿಯದೇ ಬೇಕಂತಲೇ ಬೇರೆಯವರಿಗೆ ಮಾಡಿದ ಅದೇ ನೋವು,ದುಃಖ ಅಪಕಾರಗಳು ನೆನಪಿನಲ್ಲಿ ಏನಂದರೂ ಇರುವುದಕ್ಕೆ ಸಾಧ್ಯವಿಲ್ಲ. ಅದುವೆ ಮನಸ್ಸಿನ ಮರ್ಮ. ಅದರ ಹೊಣೆ ಅನುಭವಿಸಿದವರಿಗೆ ಮಾತ್ರ!

ವ್ಯಾಪಾರಸ್ಥರುಗಳಿಗೆ ಪ್ರತಿ ವರ್ಷವು ಒಂದೊಂದು ಮೈಲುಗಲ್ಲೆ ಸರಿ. ಇಂದಿನ ವರುಷಕ್ಕಿಂತ ಮುಂದಿನ ವರುಷದಲ್ಲಿ ಹೆಚ್ಚಿನ ದುಡಿಮೆಯನ್ನು ಮಾಡಲು ವಿವಿಧ ಯೋಜನೆಗಳನ್ನು ಹುಟ್ಟಿ ಹಾಕಿಕೊಂಡಿರುತ್ತಾರೆ. ಹಿಂದಿನ ವರುಷದ ಪಾಠಗಳನ್ನು ಗಮನಿಸುತ್ತಾ ಮುಂದಿನ ವ್ಯಾಪಾರವನ್ನು ಜಾಗರೂಕತೆಯಲ್ಲಿ ಹೆಜ್ಜೆ ಇಡುತ್ತಾರೆ.

ಸಾಮಾನ್ಯ ಜನಗಳಿಗೆ ಪ್ರತಿಯೊಂದು ವರುಷವು ಒಂದೇ ಅನಿಸಬಹುದು. ಅದು ಆಯಾ ಆ ವ್ಯಕ್ತಿಗೆ ಸಂಬಂಧಿಸಿದ್ದು. ಅವನು ಹೇಗೆ ಅದನ್ನು ಸ್ವೀಕಾರ ಮಾಡುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಒಬ್ಬೊಬ್ಬರದು ಒಂದೊಂದು ಕನಸಿರುತ್ತದೆ. ಅದರ ಸಾಕಾರಕ್ಕೆ ಮುಂದೆ ಬರುವ ಹೊಸ ಮುನ್ನೂರ ಅರವತೈದು ದಿನಗಳೇ ಆಶಾಕಿರಣ. ಆದರೇ ನಾಳೆ ನಾಳೆ ಎಂದು ಹೇಳಿಕೊಂಡು ತನ್ನ ಹೊಣೆಯನ್ನು ಮುಂದೂಡಿಕೊಂಡರೇ ಆ ದೇವರು ಸಹಾಯ ಮಾಡಲಾರ. ಆದರೇ ನಮ್ಮ ಈ ಮನಸ್ಸಿಗೆ ನಾಳೆ ಅಂದರೇ ಅದೇನೋ ತುಂಬ ಆಕರ್ಷಣೇ?

ತಿಂಗಳ ಕೆಲಸ ಮಾಡುವ ಮಂದಿಗೆ ಹೊಸ ವರುಷವೆಂದರೇ ಹುದ್ದೆಯಲ್ಲಿ ಪ್ರಮೋಶನ್, ಸಂಬಳ ಬಡ್ತಿಯ ಕನಸು. ಕಳೆದ ವರುಷದಲ್ಲಿ ಅಂದುಕೊಂಡಂತಹ ಯಾವುದೇ ಕಾರ್ಯಗಳು ಕೈಗೆ ಸಿಗದಿದ್ದವುಗಳನ್ನು ಮುಂದಿನ ವರುಷದಲ್ಲಿ ದಕ್ಕಿಸಿಕೊಳ್ಳಬೇಕು ಎಂಬ ನಿರ್ಧಾರದ ಮನಸ್ಸು!

ರಾಜಕೀಯದಲ್ಲಿ ಇರುವವರಿಗೆ..ಓ ಚುನಾವಣೆಯ ದಿನಗಳು ಹತ್ತಿರ ಬರುತ್ತಿವೆ ಮತ್ತೇ ಜನಗಳ ಮುಂದೆ ಹೋಗಿ ಮತ ಕೇಳಬೇಕಲ್ಲಪ್ಪಾ ಎಂಬ ಭಯ.. ಯಾಕಾದರೂ ಈ ವರುಷಗಳು ಕಳೆದು ಐದು ವರುಷಗಳಾಗುತ್ತಾವೋ ಎಂಬ ಭಯ! ಅವರುಗಳ ಕೈಯಲ್ಲಿ ಏನಾದರೂ ಈ ವರುಷದ ಚಕ್ರ ಇದ್ದಿದ್ದರೆ ಏನೇನು ಅನಾಹುತ ಮಾಡಿಬಿಟ್ಟಿರುವರೇನೋ?

ನಟ, ನಟಿಯರುಗಳಿಗೆ ಹೊಸ ವರುಷ ಅಂದರೇ ಭಯವಂತೂ ಇರಬಹುದು...ಯಾಕೆಂದರೇ ಒಂದು ವರುಷ ದೊಡ್ಡವರಾಗುತ್ತಾರೆ.. ವಯಸ್ಸಾದಷ್ಟು ಬೇಡಿಕೆ ಕಡಿಮೆ ಎಂಬ ಭಾವನೆ ಬಂದರೂ ಬರಬಹುದೇನೋ.. ಅವರ ಮಾರ್ಕೇಟ್ ಎಲ್ಲಿ ಬಿದ್ದು ಹೋಗುತ್ತೋ ಮುಂದಿನ ವರುಷದಲ್ಲಿ ಎಲ್ಲಿಂದ ಹೊಸಬರ ಎಂಟ್ರೀ ಸಿಕ್ಕಿ ನಮ್ಮನ್ನು ಕೇಳದಂತಾಗುತ್ತೋ? ಎಂದು.




ಹೀಗೆ ಪ್ರತಿಯೊಂದು ರಂಗದಲ್ಲಿರುವವರ ಮಂಡಿಯನ್ನು ಹೊಸದಿನಗಳು, ತಿಂಗಳುಗಳು ಮತ್ತು ವರುಷಗಳು ತಿಂದಿರುತ್ತಲೇ ಇರುತ್ತವೆ.

ದಿನಗಳು ಯಾವುದೋ ಮಾಯದಲ್ಲಿ ಉರುಳುತ್ತಲೇ ಇರುತ್ತವೆ. ಅದರೇ ಅವುಗಳನ್ನು ಹೇಗೆ ಗಟ್ಟಿಯಾಗಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮೆಲ್ಲಾರ ಏಳ್ಗೆ ಮತ್ತು ಉನ್ನತಿ ಅವಲಂಬಿಸಿರುತ್ತದೆ.

ಸಮಯ, ದಿನ, ತಿಂಗಳು ಮತ್ತು ವರುಷಗಳು ಮಾತ್ರ ಅನಿಸುತ್ತದೆ ಪ್ರತಿಯೊಬ್ಬರಿಗೂ ಯಾವುದೇ ತಾರತಮ್ಯವಿಲ್ಲದೇ ಸರಿಸಮನಾಗಿ ಕೈಗೆ ಸಿಗುವುದು ಮತ್ತು ಪಡೆಯುವುದು. ಕಾಲ ಮಾತ್ರ ಯಾರನ್ನೂ ಎಂದೂ ಬೇದ ಭಾವದಿಂದ ಕಂಡ ಉದಾಹರಣೆಗಳು ನಮ್ಮ ಮುಂದೆ ಇಲ್ಲ.

ಸಮಯದ ಮಹತ್ವವೆನ್ನುವುದು ಸಾಧಕರಿಗೆ ಮಾತ್ರ ಗೊತ್ತು ಎಂದು ತಿಳಿದವರು ಹೇಳುತ್ತಿರುತ್ತಾರೆ. ಅವರಿಗೆ ಪ್ರತಿ ನಿಮಿಷವು ಫಲವತ್ತಾಗಿರುವಂತಹದ್ದು.

ಕಾಲ ಕೆಟ್ಟು ಹೋಯ್ತು ಅನ್ನುತ್ತೇವೆ. ಆದರೆ ಕಾಲ ಯಾವಾಗಲೂ ಒಂದೇ ಜನಗಳು ಬದಲಾಗಿರುವುದು.

ವರುಷ ವರುಷಕ್ಕೂ ವಿಪರೀತವಾದ ಬದಲಾವಣೆಗಳನ್ನು ಜನ ಜನರ ಮಧ್ಯೆ ಕಾಣಬಹುದಾಗಿದೆ. ಮುಂದುವರಿದ ಈ ದಿನಮಾನಗಳಲ್ಲಿ ಎಲ್ಲದಕ್ಕಿಂತ ಸಮಯಕ್ಕೆ ಬಹು ಮುಖ್ಯ ಬೆಲೆ ಬಂದಿದೆ. ಪ್ರತಿಯೊಬ್ಬರೂ ವೇಗವಾದ ಜೀವನವನ್ನು ನಡೆಸುತ್ತಿದ್ದರೆ. ಬೆರಳ ತುದಿಯಲ್ಲಿ ಜಗತ್ತನ್ನು ಕಾಣುವಂತಾಗಿದೆ.

ಮಾನವನ ಮಾನವರ ನಡುವಿನ ಜೀವಂತ ಜೀವ ಸೆಲೆ ಬತ್ತಿಹೋದಂತಾಗಿದೆ. ಅಲ್ಲಿ ಇರುವುದೇಲ್ಲಾ ಕೇವಲ ಹಳೆಯ ಕಲೆ ಮಾತ್ರ. ಇದು ಹೀಗೆ ಬಿಟ್ಟರೆ ಮನುಷ್ಯ ಮತ್ತು ನಾವು ಉಪಯೋಗಿಸುತ್ತಿರುವ ಈ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಇರುವಂತಹ ವ್ಯತ್ಯಾಸ ಏನೂ ಇಲ್ಲಾ ಎನ್ನುವಂತಾಗುತ್ತದೆ.

ಗಮನಿಸಿ ಇಂದು ಪ್ರತಿಯೊಬ್ಬ ಮನುಷ್ಯ ತನ್ನ ಅತಿ ಮುಖ್ಯ ಓಡನಾಡಿಯಾಗಿ ಕೈಯಲ್ಲಿ ಸೇಲ್, ಕಿವಿಯಲ್ಲಿ ಈಯರ್ ಫೋನ್, ಬಾಯಲ್ಲಿ ಮೈಕ್ರೋ ಫೋನ್ ಕಣ್ಣಲ್ಲಿ ಟಚ್ ಸ್ಕ್ರೀನ್ ಜೊತೆಯಲ್ಲಿ ಸವಿಯಾಗಿ ಕಳೆಯುತ್ತಾನೆ.

ಇಂದು ನಿಧಾನ ಎಂಬುದೇ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಪ್ರತಿಯೊಂದು ಪಾಸ್ಟ್, ಜಗತ್ತೇ ವೇಗದ ಜೊತೆಗೆ ಪೂರ್ಣವಾಗಿ ಸಮಾಗಮವಾಗಿಬಿಟ್ಟಿದೆ... ದೇವರೇ!

ಇದು ಎಷ್ಟರ ಮಟ್ಟಿಗೆ ಮಾರ್ಪಾಡಾಗಿ ಮುಂದುವರಿಯುತ್ತಿದೆ ಅಂದರೇ ಇಂದು ಇದ್ದುದ್ದೂ ಮುಂದೆ ಇಲ್ಲದಾಗುತ್ತಿದೆ. ಕಾಲದ ಜೊತೆಯಲ್ಲಿ ಇದರ ನಡೆ ಉಹಿಸಲು ಅಸಾಧ್ಯವಾದ ರೀತಿಯಲ್ಲಿ ದಾಪುಗಾಲು ಇಡುತ್ತಿದೆ.

ಇದಕ್ಕೆ ಕಡಿವಾಣ ನಮ್ಮ ನಿಮ್ಮಗಳ ಕೈಯಲ್ಲಿ ಮಾತ್ರ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ