ಬುಧವಾರ, ಫೆಬ್ರವರಿ 23, 2011

ಮುಖ್ಯ ಅಮುಖ್ಯ



ನಾವುಗಳು ನಮ್ಮ ನಿತ್ಯ ಜೀವನದ ಜಂಜಾಟದಲ್ಲಿ ಎಲ್ಲಿ ಮುಖ್ಯವಾದದ್ದು, ಯಾವುದು ಪ್ರಾಮುಖ್ಯವಾದದ್ದು, ಯಾರು ಬೇಕಾದವರು ಯಾರು ಬೇಡಾದವರು, ಯಾವುದನ್ನು ಅನುಸರಿಸಬೇಕು, ಯಾವುದನ್ನು ನೀಡಬೇಕು, ಪಡೆಯಬೇಕು. ಹೀಗೆ ಸಾವಿರಾರು ವಿಧದಲ್ಲಿ ಸಾವಿರಾರು ವಿಷಯಗಳನ್ನು ಪ್ರಾಮುಖ್ಯತೆ ಕೊಟ್ಟು ಅನುಭವಿಸುವುದನ್ನು, ಪಡೆಯುವುದನ್ನು, ಪಡೆಯಬೇಕಾದುದನ್ನು, ಗಳಿಸಬೇಕಾದುದನ್ನು ಗಳಿಸಲಾರದ ರೀತಿಯಲ್ಲಿ ನಮ್ಮದಾಗಿ ಮಾಡಿಕೊಳ್ಳಬೇಕಾದದ್ದನ್ನು ಮಾಡಿಕೊಳ್ಳದ ಸಮಯದಲ್ಲಿ, ಅವಶ್ಯಕತೆಯಿರದದ್ದನ್ನು ಅನಾವಶ್ಯಕವಾಗಿ ಮೈ ಮೇಲೆ ಎಳೆದುಕೊಂಡು ಜೀವನದ ಪಾಠ ಇದು ಎಂದು ನಿಟ್ಟುಸಿರನ್ನು ಬಿಟ್ಟಿರುತ್ತೇವೆ.


ನಾವು ಎಷ್ಟೇ ಮುಂದಾಲೋಚನೆ,ಪ್ಲ್ಯಾನ್ ಏನಾದರೂ ಮಾಡಿದರೂ ಆ ಸಮಯಕ್ಕೆ ಆದನ್ನು ಆ ಸಮಯ ಸನ್ನಿವೇಶವೇ ನಮ್ಮನ್ನು ತನ್ನ ಮುಷ್ಠಿಯಲ್ಲಿ ಬಂಧಿಸಿ ನಮಗೆ ಅರಿವಿಲ್ಲದ ರೀತಿಯಲ್ಲಿ ಅದು ತನ್ನ ಜಾದುವನ್ನು ಪ್ರದರ್ಶಿಸಿ ನಮ್ಮ ಕಡೆ ಒಂದು ಅಚ್ಚರಿಯ ನೋಟವನ್ನು ಬೀರಿ ಮರೆಯಾಗಿರುತ್ತದೆ.


ಅಲ್ಲಿ ಉಳಿಯುವುದು ಕೇವಲ ನಮ್ಮ ತಪ್ಪು ಮತ್ತು ಒಪ್ಪುಗಳು ಮಾತ್ರ. ಪಲಿತಾಂಶವನ್ನು ನೋಡಿದರೇ ನಾವೇಷ್ಟು ಜಾಣರು, ಬುದ್ದಿವಂತರುಗಳು ಅನಿಸುತ್ತದೆ. ನಾವುಗಳು ಹೇಗ ಆ ಅವಕಾಶವನ್ನು ಉಪಯೋಗಿಸಿಕೊಂಡಿದ್ದೇವೆ ಎಂಬುದು ತಿಳಿದು, ಮುಂದೆ ಬರುವ ಯಾವುದೇ ಅವಕಾಶ, ಮಾತು, ವ್ಯಕ್ತಿ, ನೋಟ, ಅನುಭವವನ್ನು ಇನ್ನೂ ಉನ್ನತವಾಗಿ ಮೊದಲು ಆದ ಅವಘಡಗಳು, ಅಬಾಸಗಳು ಆಗದಂತೆ ಎಚ್ಚರಿಕೆವಹಿಸೋಣ ಎಂಬ ನಿರ್ಧಾರವನ್ನು ಮನದಲ್ಲಿಯೇ ಕಟ್ಟಿ ಮುಂದಿನ ಹೆಜ್ಜೆ ಇಟ್ಟರು ಅಲ್ಲಿಯು ಸಹ ಪುನ ಕಲ್ಪನೆಗೂ ನಿಲುಕದ ರೀತಿಯಲ್ಲಿ ಮತ್ತೊಂದು ನಿದರ್ಶನ, ಸವಾಲುಗಳು ದುತ್ತನೆ ನಮ್ಮ ಎದುರಿನಲ್ಲಿ ಹಲವು ಬಗೆಗಳಲ್ಲಿ ಆ ಸಮಯಕ್ಕೆ ಬಂದು ನಿಂತಿರುತ್ತದೆ.


ಈ ಬದುಕೇ ಹೀಗೆ ಅಲ್ಲವಾ. ಇಲ್ಲಿ ನಮ್ಮ ಜೀವನದ ಚಕ್ರಕ್ಕೆ ಯಾವುದೇ ಪ್ರೀ ಪ್ಲ್ಯಾನ್ ಎಸ್.ಓ.ಫಿ ಇರುವುದಿಲ್ಲ. ನಾವುಗಳು ಹೀಗೆ ಇರಬೇಕು. ಇದನ್ನು , ಇಲ್ಲಿ, ಹೀಗೆ ಮಾಡಬೇಕು ಎಂದುಕೊಂಡು ಜೀವಿಸಲು ಅಸಾಧ್ಯವಾದದ್ದು.


ಯೋಚಿಸಿ ನಮ್ಮ ಇಂದಿನ ದಿನಮಾನದಲ್ಲಿ ಎಷ್ಟೊಂದು ಕ್ರಾಂತಿಗಳು ಆಗಿವೆ. ಎಷ್ಟೊಂದು ಮಂದಿ ತಮ್ಮ ಅನುಭವಗಳನ್ನು, ನಿದರ್ಶನಗಳನ್ನು ನಮ್ಮ ಮುಂದೆ ಹಲವಾರು ಮಾಧ್ಯಮಗಳ ಮೊಲಕ ನಮಗೆ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಎಷ್ಟೊಂದು ದಿ ಬೇಸ್ಟ ಸಲ್ಯೂಶನ್ಸ್ ಗಳು, ಮೆಚ್ಚುಗೆ ಪಡೆದ ಮಾತು, ಮೋವಿಗಳು, ಪುಸ್ತಕಗಳು, ಉಪದೇಶಗಳು ಇಲ್ಲ. ಆದರೂ ಯಾಕೆ ನಾವುಗಳು ಪುನಃ ಪುನಃ ನಮ್ಮ ಬದುಕಿನ ದಾರಿಯಲ್ಲಿ ಸಾಮಾನ್ಯವಾಗಿ ಗೊತ್ತೂ ಗೊತ್ತಿಲ್ಲದಂತೆ ಅಲ್ಲೇ ಅದೇ ಜಾಗದಲ್ಲಿ ಎಡವುತ್ತೇವೆ?


ಈಗ ನಿಮಗೆ ಅನಿಸಬಹುದು! "ಹೌದು ತಮ್ಮ ಲೈಫ್ ಅಂದ್ರೆ ಅನ್ ಪ್ರೀಡಿಕ್ಟ್ ಜಸ್ಟ್ ಆಕ್ಸ್ ಪ್ಟ್ ಇಟ್!" ಅಂಥ.

"ಜೀವನ ಅಂದರೇ ಸಾಗರ ಇದ್ದಾಂಗ" ಎಂದು ನಮ್ಮ ಪೂರ್ವಿಕರು ತಮ್ಮ ಹಿಂದಿನ ಜೀವನ ಕಾಲದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಈ ಹಿರಿಯರುಗಳು ಇದೇ ಮಾತನ್ನು ಅವರ ಹಳೆ ತಲೆಗಳಿಂದ ಅದೇ ರೀತಿ ಅದೇ ಸಮಯದಲ್ಲಿ ತಮ್ಮ ಕಿವಿಗಳಿಗೆ ಹಾಕಿಕೊಂಡಿದ್ದಾರೆ.


ಅಂದರೇ ಇದು ಯಾವಾಗಲೂ ಇದು ಹೀಗೆ ಅಂಥ ಯಾವನು ಸಹ ಕಡ್ಡಿ ತುಂಡು ಮಾಡಿದ ರೀತಿಯಲ್ಲಿ ನಿರೂಪಿಸಿಲ್ಲ. "ಬದುಕು ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿರಾ ಹುಚ್ಚಪ್ಪಾಗಳ್ಳಿರಾ" ಅಂಥ ಪಂಡಿತರುಗಳು ಸಾಮಾನ್ಯ ಜನಕ್ಕೆ ತಿಳಿ ಹೇಳುವ ಮಟ್ಟಕ್ಕೆ ಅದ್ವಾನವಾಗಿದೆ/ಲ್ಲ ಎಂಬಂತಿಲ್ಲ?


ನಾವು ಚಿಕ್ಕ ಚಿಕ್ಕ ವಿಷಯಗಳನ್ನು ಸಾಮಾನ್ಯವಾಗಿ ಗಮನಿಸದೇ ನಮ್ಮ ಸುತ್ತ ಮುತ್ತ ನಡೆಯುವ ಘಟನೆ, ವ್ಯಕ್ತಿಗಳು, ಸ್ನೇಹಿತರುಗಳು, ಹಿರಿಯರು, ಕಿರಿಯರುಗಳು, ಓದು, ಕೆಲಸ, ದಾರಿ ಇತ್ಯಾದಿಗಳನ್ನು ನೋಡಿದರೂ ನೋಡದ ರೀತಿಯಲ್ಲಿ, ಕೇಳಿದರೂ ಕೇಳದ ರೀತಿ, ಮಾತನಾಡಿಸಿದರೂ ಮಾತನಾಡದ ರೀತಿಯಲ್ಲಿ ದೂಡಿ.. ನಮಗೆ ಉತ್ತಮ ಎಂಬುದು ನಮ್ಮ ಜೊತೆಯಲ್ಲಿ ಇಲ್ಲವೇ ಇಲ್ಲ ಎಂಬ ದೋರಣೆಯಲ್ಲಿ ಬೇರೆಲ್ಲೂ ಇದೆ ಎಂಬ ಕನಸಿನಲ್ಲಿ ಅದಕ್ಕಾಗಿ ಜಾತಕ ಪಕ್ಷಿಯಂತೆ ಜೀವನಮಾನವನ್ನೆಲ್ಲಾ ಕಳೆಯುವ ಗಾವಿದರಾಗಿದ್ದೇವೆ.



ಸೂಕ್ಷ್ಮತೆ ಎಂಬುದು ಎಲ್ಲೂ ಇದೆ ಎಂಬಂತೆ ವರ್ತಿಸುತ್ತಿದ್ದೇವೆ. ಯಾವುದನ್ನು, ಯಾವುದಕ್ಕೆ ಮಹತ್ವ ಕೊಡಬೇಕಾಗಿದೆಯೋ ಅದನ್ನು ಕಾಲು ಕಸ ಮಾಡಿಕೊಂಡು ಮುಂದೆ ಮುಂದೆ ಹೋಗುತ್ತಿದ್ದೇವೆ. ನಾವು ಮಾಡಿಕೊಂಡಿರುವ ನಮ್ಮ ಜೀವನದ ಕಾಲ ಮಾನದ ಹತ್ತು ಹಲವು ಉತ್ತಮೋತ್ತಮ ಉನ್ನತಿಗಳನ್ನು ಇನ್ನೂ ಬಂದಿಲ್ಲ ಎಂದು ಕೂರಗುತ್ತಲೇ ಕೂತಿದ್ದೇವೆ.

"ಹಿತ್ತಲು ಗಿಡ ಮದ್ದಲ್ಲ" ಎಂಬ ಗಾದೆಯ ಮಾತನ್ನು ಸುಳ್ಳು ಮಾಡುವಂತೆ ನಮ್ಮ ನೋಟ ದೃಷ್ಟಿ ಎಲ್ಲೂ ಹೊರಟು ನಿಂತಂತಿರುವುದು ವಿಪರ್ಯಾಸ.



ನಮ್ಮ ಸುತ್ತಲಿನ ನಮ್ಮ ಪರಿಸರ ನಮ್ಮ ಜನಮನಗಳಿಂದ ಸಿಗುವ ಸುಖ, ಪ್ರೀತಿ, ವಾತ್ಸಲ್ಯ, ಆಸರೆ, ಅಕ್ಕರೆ, ಸ್ನೇಹ, ಇತ್ಯಾದಿ ಮಾನವ ಸಂಬಂಧಿ ಸಂಬಂಧಗಳನ್ನು ನಮ್ಮ ಅಭಿವೃದ್ಧಿಗೆ ಸಂಕೊಲೆಗಳು ಎಂದು ಷರಾ ಬರೆದುಬಿಟ್ಟು ಯಾವುದೊ ಬಿಸಿಲು ಕುದುರೆಯನ್ನು ಏರಿ, ಇಲ್ಲಿ ಎಲ್ಲಾ ಮರುಭೂಮಿ ಎಂದು ಪರಿತಪಿಸುವಂತಾಗುತ್ತಿದೆ ಈ ನಮ್ಮ ಬದುಕು.



ಏನೊಂದು ಉತ್ಸಹ ಇಲ್ಲ. ಏನೊಂದು ಹೊಸತನವಿಲ್ಲದ ಅದೇ ಯಾಂತ್ರಿಕ ಕಾಲ ಚಕ್ರಕ್ಕೆ ಸಿಲುಕಿದ ಮಾನವ ಎಂಬ ಮನಸ್ಸೇ ಮಾಯವಾದಂತಾಗಿದೆ ಎಂದು ನಿಮಗೆ ಅನಿಸುತ್ತಿಲ್ಲವಾ ಯೋಚಿಸಿ.



ಯಾವುದು ಜೀವನಕ್ಕೆ ಮಹತ್ವವಾದದ್ದು ಎಂಬುದು ಹುಟ್ಟಿದನಿಂದ ಇಂದಿನವರೆಗೂ ಇಷ್ಟು ತಿಳಿದರೂ ಸಹ ನಮಗೆ ಗೊತ್ತು ಮಾಡಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲಾ ಅಂದರೇ ಈ ಬೌದ್ಧಿಕ ವಿಕಲತೆ ಎಲ್ಲಿ ಪ್ರಾರಂಭವಾಯಿತು ಎಂಬುದನ್ನು ಕಂಡುಕೊಂಡು ಹೊಸ ಕಿರಣದ ಪ್ರಭೆಯನ್ನು ನೋಡುವ ಮನದ ಕಣ್ಣು ತೆರೆಯುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕೆ ಎಲ್ಲರೂ ಎಲ್ಲರಿಗಾಗಿ ಎಲ್ಲರಿಂದ ಇಲ್ಲೇ ಹುಡುಕಾಡುವಂತಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ