ಗುರುವಾರ, ಜೂನ್ 17, 2010

ಜೂನ್ ೨೧ ವಿಶ್ವ ಸಂಗೀತ ದಿನ

ಜೂನ್ ೨೧ ವಿಶ್ವ ಸಂಗೀತ ದಿನ

ತನ್ಮಯನಾಗಿರುವುದು ಒಂದು ತಪಸ್ಸೆ ಎನ್ನಬಹುದು. ತನ್ನನ್ನೇ ತಾನು ಮರೆತು ಅದರಲ್ಲಿ ಲೀನವಾಗಿ ತನ್ನ ಸುತ್ತಲಿನ ಸಮಸ್ತವನ್ನು ಶೂನ್ಯವಾಗಿ ಮಾಡಿಕೊಂಡು ಜೀವಿಸುವುದು ಒಂದು ಘಳಿಗೆಯು ಸಾಧ್ಯವಾಗುವುದುದಿಲ್ಲ ನಮ್ಮ ನಿಮ್ಮಂತ ಸಾಮಾನ್ಯರಿಗೆ.


ಆದರೆ ನಾನು ಗಮನಿಸಿದಂತೆ ಆ ರೀತಿಯ ಏಕಾಗ್ರತೆಯನ್ನು ತಮ್ಮದಾಗಿಸಿಕೊಂಡು ಅದನ್ನು ಪ್ರತಿಯೊಂದು ನಿಮಿಷ ಅನುಭವಿಸುವವರು ಮುಖ್ಯವಾಗಿ ಕಲಾವಿದರೇ ಸರಿ.


ಕಲೆಯೆಂಬುದು ಮನುಷ್ಯನಿಗೆ ಉತ್ಸಾಹವನ್ನು ಪ್ರತಿ ನಿಮಿಷ ನಿಮಿಷವು ಹೊಸ ಹುಮ್ಮಸ್ಸನ್ನು ಕೊಡುವ ಸಾಧನವಾಗಿದೆ. ಅದ್ದರಿಂದ ನಮ್ಮ ನಾಡಿನ ಎಲ್ಲಾ ಮಹಾನ್ ಕಲಾವಿದರೆಲ್ಲಾ ಧನ್ಯರು.

ಈ ನಿದರ್ಶನಕ್ಕೆ ಸಾಕ್ಷಿ ಭೂತವಾಗಿ ನಾನೇ ಕಣ್ಣಾರೆ ಕಂಡ ಮನ್ನೆಯ (ನವಂಬರ ೨೦೦೮) ಸಿ. ಅಶ್ವತ್ಧರವರ ಸಂಗೀತ ಸಂಜೆ ಕಾರ್ಯಕ್ರಮವೇ ಸಾಕ್ಷಿ. ಅಶ್ವತ್ಥರವರು ಸುಮ್ಮನೆ ಕುಳಿತಿದ್ದಾಗ ನಮ್ಮ ನಿಮ್ಮಂತೆಯೇ ಸಾದ ಸೀದಾವಾಗಿ ಕಾಣುವರು. ಅವರು ಹಾಡಲು ಪ್ರಾರಂಭಿಸಿದ ಯಾವುದೇ ಶಿಶುನಾಳ ಶರೀಪರ, ಕುವೆಂಪುರವರ, ಬೇಂದ್ರಯವರ ಕವಿತೆಗಳ ಸಾಲುಗಳನ್ನು ತಮ್ಮ ವಿಶಿಷ್ಠ ಕಂಠದಿಂದ ಅದಕ್ಕೆ ಅವರು ನೀಡುವ ಮಂತ್ರ ಮುಗ್ಧ ಸಂಗೀತ ಸ್ಪರ್ಶದಿಂದ ಕವಿಯ ಹಾಡು ಇಷ್ಟೋಂದು ಕೂಮಲವಾಗಿ ಕರ್ಣಾನಂದವಗುತ್ತಿದ್ದರೆ.. ಹಾ! ಅಶ್ವತ್ಧರವರು ಎಷ್ಟೊಂದು ತನ್ಮಯತೆಯಿಂದ ಅದರಲ್ಲಿ ಮುಳುಗಿ ತಮ್ಮನ್ನೇ ತಾವು ಮರೆತು ಅದರೊಂದಿಗೆ ಲಯಕ್ಕೆ ತಕ್ಕ ಹಾಗೆಯೇ ಆ ಕೈ- ಮೈಯ ಹಾವಾ - ಭಾವಗಳು, ಕಾಲಿನ ಹೆಜ್ಜೆಗಳು ಅವರು ಎಷ್ಟರ ಮಟ್ಟಿಗೆ ತಮ್ಮನ್ನು ತಾವು ಮರೆತರು ಎಂಬುದಕ್ಕೆ ಚಿತ್ರದುರ್ಗದ ಸಮಸ್ತ ಕಲಾರಸಿಕರ ಮುಖದಲ್ಲಿ ಉಂಟದ ಮಹಾನಂದದ ಬೆಳಕೆ ಸಾಕ್ಷಿ. ಅಶ್ವತ್ಧರವರ ಅಮೋಘ ಸಂಗೀತದ ಮೊಡಿಯ ಪ್ರಭಾವವಳಿಯನ್ನು ಅನುಭವಿಸಿದರು ಎಂಬುದಕ್ಕೆ ಅಂದಿನ ಆ ಸಹಸ್ರಾರು ಜನರ ಚಪ್ಪಾಳೆ ಮತ್ತು ಉದ್ಗಾರವೇ ನಿದರ್ಶನವಾಗಿತ್ತು.

ಆಗಲೇ ನನಗೆ ಅನಿಸಿತು ಕಲಾವಿದರೇಷ್ಟು ಪುಣ್ಯವಂತರೂ! ಕೆಲ ಕ್ಷಣ ತಮ್ಮನ್ನು ತಾವು ಅಷ್ಟೊಂದು ಮಂದಿಯಲ್ಲಿ ತಾವೇ ಕಳೆದು ಹೋಗುವಂತೆ ಆ ಗಾಯನ ಲೋಕದಲ್ಲಿ ವಿರಮಿಸುವ ಸಮಯವೇ "ಸಮಾಧಿ". ಮತ್ತು ಆ ಪ್ರಭಾವಳಿಯೇ ಶಿವಮಯ ಎಂಬಂತೆ. ಸಂಗೀತಕ್ಕೆ ವಿಶಿಷ್ಟವಾದ ಶಕ್ತಿಯಿದೆ ಎಂಬುದು ಅಲ್ಲಿ ಇಲ್ಲಿ ಕೇಳಿದ್ದೆ ಅದರೆ ನಿಜವಾಗಿಯೂ ನೇರವಾಗಿ ನಾನು ಅಂದು ಪ್ರತ್ಯಕ್ಷ ಅನುಭವಿಸಿದೆ.

ಹಾಗೆಯೇ ನಮ್ಮ ಕಲಾವಿದರು ಯಾವುದೇ ಕಲಾಕೃತಿಯನ್ನು ರಚಿಸುವಾಗ ಅವರು ಅನುಭವಿಸುವ ಆ ಕ್ರಿಯಶೀಲ ಸಂತೋಷದ ಸಮಯವನ್ನು ಅವರ ಆ ಕಲಾಕೃತಿಗಳಲ್ಲಿ ನಾವು ಕಾಣಬಹುದು.

ಕಲಾವಿದರು ತಾವು ಬೇರೆಯವರಿಗಾಗಿ ರಚಿಸದೆ, ಹಾಡದೆ, ನುಡಿಸದೆ ಕಲಾದೇವತೆಯ ಉಪಾಸನೆಯನ್ನು ಮಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಅದನ್ನು ಅನುಭವಿಸಿ ಹಾಡಿದಾಗ ಅದೇ ಸರ್ವ ಶ್ರೇಷ್ಠ ಕಲಾಕೃತಿಯಾಗುತ್ತದೆ. ಹಾಗೆಯೇ ಇಡಿ ಜಗತ್ತು ಸಹ ಮೆಚ್ಚುವಂತಾಗಿ ಎಲ್ಲಾರ ಮನಸ್ಸನ್ನು ಪ್ರಫುಲ್ಲತೆಯಿಂದ ಇಡುತ್ತದೆ.

ಅದಕ್ಕೆ ಇರಬೇಕು ನಮ್ಮ ಪುರಾಣ ಇತಿಹಾಸಗಳನ್ನು ಗಮನಿಸಿದಾಗ ಬೇರೆ ಯಾವ ರಂಗಕ್ಕೂ ನೀಡದ ಮನ್ನಣೆಯನ್ನು, ಸ್ಥಾನ ಮಾನವನ್ನು ನಾವುಗಳು "ಕಲಾ ಸಂಸ್ಕೃತಿಗೆ" ನೀಡಿದ್ದೇವೆ.

ನಮ್ಮ ಈ ಜಂಜಾಟದ ಜೀವನದ ಕೆಲವು ಸಮಯಗಳನ್ನು ಈ ರೀತಿಯ ಚಟುವಟಿಕೆಗಳಿಗೆ ಹಬ್ಬ ಹರಿದಿನ, ವಿಶೇಷ ಸಮಾರಂಭಗಳಲ್ಲಿ ಮೀಸಲಿಟ್ಟು ನಮ್ಮನ್ನು ನಾವುಗಳು ಮರೆಯುವ ಸಲುವಾಗಿ ನಮ್ಮ ಹಿರಿಯರು ಈ ರೀತಿಯ ಎಲ್ಲಾ ಕಲಾ ಆಚರಣೆಗಳನ್ನು ರೂಪಿಸಿರುವುದು ಪ್ರಶಂಸನೀಯ.

ಹಾಗೆಯೇ ಇಂದಿನ ನಮ್ಮ ಮುಂದುವರಿದ ತಂತ್ರಜ್ಞಾನ ಯುಗದಲ್ಲಿ ಅದರ ಮುಂದುವರಿಕೆಯೇನೂ ಎಂಬಂತೆ ವಿವಿಧ ಉಪಕರಣಗಳ ಸಹಾಯದಿಂದ ಆ ರಸ ಸಮಯಗಳನ್ನು ಮುದ್ರಿಸಿಕೊಂಡು ಪುನಃ ಪುನಃ ನಾವುಗಳು ಸವಿಯುವಂತಾಗಿದೆ.

ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲೂ ಇದಕ್ಕಾಗಿ ಪ್ರಮುಖ ಸ್ಥಾನವನ್ನು ನೀಡಿರುವುದು ನಮ್ಮ ಪೋಷಕರು ನಿಜವಾದ ಕಲಾ ಪ್ರತಿಭೆಗಳಿಗೆ ಸರಿಯಾದ ಸೌಲಭ್ಯಗಳನ್ನು ನೀಡಿ ಎಳೆ ವಯಸ್ಸಿನಿಂದಲೇ ಗುರುತಿಸಿ ಬೆಳೆಸಲು ಸಹಾಯಕವಾಗಿದೆ.

ಈ ರೀತಿಯ ಯಾವುದೇ ಕಲಾ ವ್ಯಕ್ತಿಗಳು ಒಂದು ಅಮೂಲ್ಯವಾದ ಗುಣ ವಿಶಿಷ್ಟವನ್ನು ಹೊಂದಿರುತ್ತಾರೆ. ನಿಜವಾದ ಕಲಾವಿದ ಈ ನಮ್ಮ ಸಣ್ಣತನ, ಸುಳ್ಳು, ಅಹಾಂಕರ, ಬೇದ, ವೈಷ್ಯಮ್ಯ ಎಲ್ಲವನ್ನು ಅವನು ಕ್ಷಣಕಾಲ ಮರೆತು ಆ ಕಲಾ ಸಂಗೀತ, ಸಾಹಿತ್ಯ, ಚಿತ್ರಣದಲ್ಲಿ ನಾವೇಲ್ಲಾ ಒಂದೇ ಮತ್ತು ಬೇರೆಲ್ಲಾ ರೀತಿಯ ಕ್ಷುಲ್ಲಕ ವಿಚಾರಗಳು ನಗಾಣ್ಯ ಎಂಬಂತೆ ತೋರಿಸಿ ನಮ್ಮ "ಮನೆ - ಮನಗಳ" ಪುನರಪಿ ಜನನಕ್ಕೆ ಕಾರಣೀ ಭೂತನಾಗುತ್ತಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ