ಮಂಗಳವಾರ, ಮೇ 4, 2010

ದುಶ್ಚಟ


ನನ್ನ ಸ್ನೇಹಿತ ಹೇಳುತ್ತಿದ್ದ "ಈ ಚಟವನ್ನು ನಾನು ಬಿಡಬೇಕು ಗುರು, ನನಗೋ ಗೊತ್ತಿದೆ ಇದರಿಂದ ನನಗೆ ಹೇಗೆ ಎಷ್ಟು ರೀತಿಯಲ್ಲಿ ನಷ್ಟ ಮತ್ತು ನನ್ನ ಆರೋಗ್ಯ ಸಮಸ್ಯೆ ಮತ್ತು ಸುತ್ತ ಮುತ್ತಲಿನವರಿಂದ ಆಕ್ಷೇಪಣೆ ಕೇಳುತ್ತಿದ್ದೇನೆ."

ಹೌದು ಈ ರೀತಿಯ ಮಾತುಗಳನ್ನು ನಾವು ಹಲವಾರು ಬಾರಿ ಹಲವರಿಂದ ಸಾಧಾರಣವಾಗಿ ಕೇಳುತ್ತಿರುತ್ತೇವೆ. ಹಾಗೆಯೇ ಈ ದುಶ್ಚಟಗಳನ್ನು ತಿಳಿದೊ ತಿಳಿಯದೇ ತಮ್ಮ ಜೀವನದ ಒಂದು ಅಂಗವಾಗಿ ಇಟ್ಟು ಕೊಂಡಿರುವವರು ನಮ್ಮ ನಿಮ್ಮಲ್ಲಿ ಹೇರಳವಾಗಿ
ಸಿಗುತ್ತಾರೆ.

ನಮ್ಮ ಹರೆಯದ ದಿನಗಳು ಎಂದರೆ ಕಾಲೇಜು ರಂಗದ ಸಮಯ. ಹೈಸ್ಕೂಲ್ ನ ಬಿಗಿಯಾದ ಕಟ್ಟು ನಿಟ್ಟಿನ ಕಣ್ಣುಗಾವಲುಗಳಾದ ಗುರುಗಳು - ಮಾತಾ ಪಿತೃಗಳಿಂದ ಸ್ವಲ್ಪ ದೂರವಾಗಿ ಕಾಲೇಜು ಮೆಟ್ಟಿಲು ಹತ್ತುವ ಸಮಯದಲ್ಲಿ, ಮೈಯಲ್ಲಿನ ಹೊಸ ರಕ್ತದಿಂದ ತುಂಬಿ ತುಳುಕುವ ಹೊಸತನವನ್ನು ಅನುಭವಿಸುವ ಭರದಲ್ಲಿ, ಒಂದೇ ಒಂದು ಬಾರಿ ಈ ರೀತಿಯ ನಾನಾ ದುಶ್ಚಟಗಳಿಗೆ ಮಾರು ಹೋಗುತ್ತಾರೆ.

ಸುಮ್ಮನೆ ಟೆಸ್ಟ್, ಒಂದು ರುಚಿ ನೋಡುವಾ ಹೇಗಿರುತ್ತದೆ! ಎಂಬ ನಾನಾ ಕಾರಣಗಳಿಗೆ ಒಮ್ಮೆ ಅದರ ಮಡಿಲೂಳಗೆ ಬಿದ್ದ ಮೇಲೆ ಮುಗಿಯಿತು ಅದು ಅವರನ್ನು ಕಡೆಯವರಿಗೂ ತನ್ನ ಮುಷ್ಠಿಯಲ್ಲಿ ಜಾರದಂತೆ ಆಧರಿಸಿ ತನ್ನ ವಶ ಮಾಡಿಕೊಳ್ಳುವುದು.

ಹೌದು! ಆ ಹರೆಯದಲ್ಲಿ ಕಲಿತ ಯಾವುದೇ ಒಂದು ಅಭ್ಯಾಸ ನಮ್ಮ ಮುಂದಿನ ಜೀವನದ ಗತಿಯನ್ನೇ ಬದಲಿಸಬಲ್ಲದು. ಆ ಅಭ್ಯಾಸ ಒಳ್ಳೆಯದಾಗಿರಲಿ- ಕೆಟ್ಟದಾಗಿರಲಿ.

ನಮ್ಮ ಮನಸ್ಸು ಹಾಗೆಯೇ ಯಾವುದನ್ನು ನಾವು ಮೂದಲ ಬಾರಿ ಅನುಭವಿಸುವೆವು ಅದನ್ನೇ ಪುನಃ ಪುನಃ ಅನುಭವಿಸಬೇಕು ಎಂಬ ಚಪಲಾ! ಅದರಲ್ಲೂ ಕದ್ದು ಅನುಭವಿಸಿದ ಅನುಭವಗಳನ್ನು ಸಾಕಷ್ಟು ಬೇಗ ವಿವಿಧ ರೀತಿಯಲ್ಲಿ ಪಡೆಯಲು ಪ್ರಯತ್ನಿಸುತ್ತಿರುತ್ತದೆ.

ಮನೆಯ ಹಿರಿಯರು ಸಹ ಆ ಸಮಯದಲ್ಲಿ ತಮ್ಮ ಮಕ್ಕಳ ಮೇಲೆ ಹೆಚ್ಚು ಕಣ್ಣು ಹರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೇ ಅವರು ನಮ್ಮ ಮಕ್ಕಳು ಕಾಲೇಜು ಮೆಟ್ಟಿಲು ತುಳಿದಿದ್ದಾರೆ ಜೀವನದ ಪ್ರಮುಖ ಘಟ್ಟವನ್ನು ತಲುಪಿದ್ದಾರೆ ಇನ್ನೇನು ಅವರ ಜವಾಬ್ದಾರಿಯನ್ನು ಅವರು ಅರಿತು ನಡೆಯುತ್ತಾರೆ ಎಂದು ಕೊಳ್ಳುತ್ತಾರೆ. ಆದರೆ ಅ ಕನಸನ್ನು ಹುಸಿ ಮಾಡುವಲ್ಲಿ ನಮ್ಮ ಯುವ ಪೀಳಿಗೆ ಸಫಲವಾಗುತ್ತದೆ.

ನಾನು, ಮೇಲೆ ಹೇಳಿದ ಎಲ್ಲಾ ವಿವರ ಎಲ್ಲರಲ್ಲೂ ಘಟಿಸುವುದಿಲ್ಲ. ಅದು ಅವರ ನೆರೆ ಹೂರೆ, ತನ್ನ ಜೊತೆಗಾರರಿಂದ ದೂರಕುತ್ತದೆ.

ಪ್ರಪ್ರಥಮವಾಗಿ ಅದರ ರುಚಿಯನ್ನು ದಯಪಾಲಿಸಿದ ಗೆಳೆಯ ಮುಂದೆಂದೂ ಅವರ ಜೊತೆಯಲ್ಲಿರುವುದಿಲ್ಲ. ಆದರೆ ಈ ಕೆಟ್ಟ ಅಭ್ಯಾಸಗಳಿಗೆ ಬಲಿಯಾದ ಯಾವುದೇ ವ್ಯಕ್ತಿ ತನ್ನ ಜೀವನ ಪರ್ಯಂತ ಯಾರು ಯಾವಾಗ ಈ ಚಟದ ದೀಕ್ಷೆಯನ್ನು ನೀಡಿರುತ್ತಾರೆ ಎಂಬುದನ್ನು ಪುನಃ ಪುನಃ ಮೆಲುಕು ಹಾಕುತ್ತಿರುತ್ತಾರೆ.

ಈ ಚಟವನ್ನು ಬೃಹದಾಕಾರವಾಗಿ ಮಾಡಿಕೊಂಡು ಅದರ ಬಗ್ಗೆ ಪಶ್ಚತಾಪ ಪಡುವ ಬದಲು ಸ್ಪಲ್ಪ ಯೋಚನೆಯನ್ನು "ಮೂದಲ ಬಾರಿಗೆ ದಂತ ಭಗ್ನವಾಗುವ" ಸಮಯದಲ್ಲಿ ವಿವೇಚಿಸಿದರೇ ಹೆಚ್ಚು ಅರ್ಥ ಪೂರ್ಣ.

ಕ್ಷಣಿಕ ಸುಖ, ಮೋಜಿಗಾಗಿ ಪ್ರಾರಂಭಿಸಿ ತಮ್ಮ ಆರೋಗ್ಯ ಮತ್ತು ತನ್ನನ್ನು ನಂಬಿರುವ ತನ್ನವರ ಜೀವನವನ್ನು ಕಣ್ಣೀರಿನಲ್ಲಿ ಕೈ ತೋಳೆಯುವುದನ್ನು ನೋಡಬೇಕಾಗುತ್ತದೆ. ಈ ಸಮಸ್ಯೆಯ ಸರಪಳಿಯ ಅಂತ್ಯಕ್ಕೆ, ಕ್ಷಣಿಕ ಮರೆವೆಗಾಗಿ ಹೆಚ್ಚು ಹೆಚ್ಚು ಸಿಗರೇಟು, ಕುಡಿಯುವುದು, ಡ್ರಗ್ಸ್ ಸೇವಿಸುವುದು ಎಂದು ಮುಗಿಯದ ಕತೆಯಾಗುತ್ತದೆ.

ಮುಂದೆ ವ್ಯಕ್ತಿ ಇದೇ ಚಟಗಳಿರುವ ವ್ಯಕ್ತಿಗಳ ಸಂಗವನ್ನು ಮಾಡಬೇಕಾಗುತ್ತದೆ. ಮತ್ತು ಅವರಿಂದ ಅವರ ನೇಗೆಟಿವ್ ಐಡಿಯ್ಸಾ ಮತ್ತು ಸಲಹೆ, ಉತ್ತೇಜಕ ಮಾತುಗಳಿಂದ ತಾನು ಮಾಡುತ್ತಿರುವುದು ನೂರಕ್ಕೆ ನೂರು ಸರಿಯೆಂಬ ನಿರ್ಧಾರಕ್ಕೆ ಬಂದು ತನ್ನ ಮನೋಶಕ್ತಿಯಿಂದ ಇನ್ನೂ ಹೆಚ್ಚು ಹೆಚ್ಚು ಅದರಲ್ಲಿ ಮುಳುಗುವ ಸಮಯ ಬರುತ್ತದೆ.

ಜೀವನದ ಅತಿ ಅಮೂಲ್ಯ ಕ್ಷಣಗಳನ್ನು ತನ್ನ ಕುಟುಂಬ ಮತ್ತು ತನ್ನ ಬಂಧು ಬಾಂಧವರ ಜೊತೆ ಕಳೆಯುವ ಗಳಿಗೆಗಳನ್ನು ಈ ರೀತಿಯ ಕೀಳು ಚಟಗಳ ಹೀಡೆರಿಕೆಗೆ ವಿನಿಯೋಗಿಸಬೇಕಾಗುತ್ತದೆ. ಇದರಿಂದ ವ್ಯಕ್ತಿ ವ್ಯಕ್ತಿಗಳ ಸಂಬಂಧಗಳು ಸಡಿಲವಾಗಿ ಅಶಾಂತಿಯ ಮೂಡ ಕವಿಯಲಾರಂಬಿಸಿ ಮನಸ್ಸಿನ ಉತ್ಸಹದ ಚಿಲುಮೆ ಮರೆಯಾಗಿ ನಿರಂತರ ಮನೋ ದೌರ್ಬಲ್ಯವುಂಟಾಗಿ ಹಲವು ಕಾಯಿಲೆಗಳಿಗೆ ಧಾರಿ ಮಾಡಿ ಕೊಟ್ಟಂತಾಗುತ್ತದೆ.

ಇಂದಿನ ತಾಂತ್ರಿಕ ಯುಗದಲ್ಲಿ ಕೇವಲ ದೂಮಪಾನ, ಮಧ್ಯಪಾನ, ಡ್ರಗ್ಸ್ ಚಟಗಳೇ ಅಲ್ಲದೇ, ಹಲವಾರು ರೀತಿಯ ವಿವಿಧ ಸಮಯ, ಆರೋಗ್ಯ ಹಾಳು ಮಾಡುವ ಚಟಗಳನ್ನು ಕಂಡು ಕೊಳ್ಳುತ್ತಿರುವ ನಮ್ಮ ಯುವ ಪೀಳಿಗೆ ಸ್ವಾಸ್ಥ್ಯ ಸಮಾಜದ ಬೀಕರ ಬಿರುಕು. ಇದು ಸ್ವಲ್ಪವಾದರೂ ತಗ್ಗಬೇಕು ಅಗಲೇ ಸುಖಿ ಸಮಾಜವಾಗಿ ಉಳಿಯಲು ಸಾಧ್ಯ.

-ತಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ