ಸೋಮವಾರ, ಏಪ್ರಿಲ್ 26, 2010

ಇದು ಸಹಜ



ಜೀವನದಲ್ಲಿ ಯಾವುದು ನಾವು ಅಂದುಕೊಂಡಂತೆ ಆಗುವುದಿಲ್ಲ. ಎಲ್ಲಾ ನಮಗೆ ತಿಳಿಯದ ರೀತಿಯಲ್ಲಿ ಚಿಕ್ಕ ಕ್ಷಣದಲ್ಲಿ ಕಿರು ಅಚ್ಚರಿಯ ನಡುವೆ ನಡೆದು ಹೋಗುತ್ತವೆ. ನಾವುಗಳು ನಮಗೆ ಎಲ್ಲಾ ಗೊತ್ತಿದೆ ಎಂಬ ದೊರಣೆಯಿಂದ ಖುಷಿಯಲ್ಲಿ ವಿರಮಿಸುವೆವು. ಆದರೆ ಅದು ಯಾವುದೊ ದಿಕ್ಕಿನಲ್ಲಿ ಯಾವುದೊ ಆಸೆಯಿಂದ ಬೇರೊಂದು ದಡವನ್ನು ಸೇರುತ್ತದೆ. ಅದೆಯಲ್ಲವೇ ಕಥೆಯಲ್ಲ ಜೀವನ!


ನಮಗೆ ಅತ್ಮೀಯವರಾದವರೂ ಸಹ ನಮಗೆ ಅವರು ಗೊತ್ತು ಬಿಡು, ಅವರು ನಮಗೆ ತಿಳಿಯದಂತೆ ಏನೊಂದು ಕಾರ್ಯವನ್ನು ಮಾಡುವುದಿಲ್ಲ. ಹಾಗೇ ಮಾಡಬೇಕಾದರೂ ಅವರು ನಮಗೆ ತಿಳಿಸಿಯೇ ಮಾಡುವವರು ಎಂದು ನಮ್ಮಲ್ಲಿಯೇ ಆಶಾ ಸೌಧವನ್ನು ಕಟ್ಟಿಕೊಂಡು ಬಿಟ್ಟಿರುತ್ತೇವೆ.


ನಮ್ಮ ನಮ್ಮ ಮನಸ್ಸಿನಲ್ಲಿ ನಾವುಗಳು ಈ ರೀತಿ ನಮ್ಮ ಹತ್ತಿರದವರ ಬಗ್ಗೆ ಹಲವಾರು ರೀತಿಯಲ್ಲಿ ಸುಳ್ಳಿನ ಭ್ರಮೆಯನ್ನು ಕಟ್ಟಿಕೊಂಡು ಅವರು ನಮ್ಮ ಕಣ್ಣಳತೆಯಲ್ಲಿ ಇದ್ದಾರೆ ಎಂದು ಮೈಮರೆತು ಸುಖಪಡುತ್ತೇವೆ. ಅದರೆ ನಮಗೆ ತಿಳಿಯದ ರೀತಿಯಲ್ಲಿ ಅವರು ಅವರ ಯೋಚನೆಯಲ್ಲಿ ಒಂದು ಶಾಕ್ ಕೊಟ್ಟಾಗ, ಅವರು ಎಷ್ಟರ ಮಟ್ಟಿಗೆ ನಮ್ಮ ಕಣ್ಣಳತೆಯಲ್ಲಿ ಇದ್ದಾರೆ ಎಂಬುದು ತಿಳಿಯುವುದು.


ಇದು ನಮ್ಮ ನಮ್ಮ ಕುಟುಂಬದಲ್ಲಿ ನಮ್ಮವರೆಯಾದ ನಮ್ಮ ಮಕ್ಕಳು, ಅಕ್ಕ - ತಂಗಿಯರು, ಅಣ್ಣ - ತಮ್ಮಂದಿರೂ, ತಂದೆ-ತಾಯಿಯಂದಿರೂ, ಹತ್ತಿರದವರಿಂದೊಡಗೊಡಿ ನಮ್ಮ ಸ್ನೇಹಿತರವರಿಗೆ ನಾವುಗಳು ನಮ್ಮ ನಮ್ಮಲ್ಲಿಯೇ ಕಲ್ಪಿಸಿಕೊಂಡು ಸಂಭ್ರಮಿಸಿಕೊಂಡು, ನೋಡು ಎಲ್ಲಾರೂ ಹೇಗೆ ಎಷ್ಟೋಂದು ನಮಗೆ ಅತ್ಮೀಯರಾಗಿದ್ದರೆ ಎಂದು ಸಡಗರಪಡುತ್ತೇವೆ.


ಆದರೆ ಹೇಗೆ ನಮ್ಮ ಐದು ಬೆರಳುಗಳು ಒಂದೇಯಾಗಿರುವುದಿಲ್ಲವೂ ಹಾಗೆಯೇ ನಮಗೆ ಗೊತ್ತಿರುವ ಎಲ್ಲಾ ಹತ್ತಿರದವರ ಭಾವನೆ, ಚಿಂತನೆ, ಆಸೆ, ನಿರಾಸೆಗಳು ಒಂದೇಯಾಗಿರುವುದಿಲ್ಲ. ಅವುಗಳು ವಿಭಿನ್ನ ರೀತಿಯಲ್ಲಿ ಅವುಗಳದೇಯಾದ ದಾರಿಯಲ್ಲಿ ತಮ್ಮ ತಮ್ಮ ಕನಸುಗಳನ್ನು ಭರವಸೆಗಳನ್ನು ಆಕಾಂಕ್ಷೆಗಳನ್ನು ಹಿಡೇರಿಸಲು ತವಕಿಸುತ್ತಲೇ ಇರುತ್ತವೆ.


ಸಮಯ ಸಿಕ್ಕಾಗ ಯಾರ ಅಪ್ಪಣೆಗೂ ಕಾಯದೆ ಒಂದು ಡಿಚ್ಚಿ ಹೊಡೆದು ಅಚ್ಚರಿಯ ಶಾಕ್ ನ್ನು ತನ್ನ ನಂಬಿದವರಿಗೆ ಕೊಡುತ್ತಾರೆ. ಆಗ ತತ್ ಕ್ಷಣ ನಮ್ಮಗಳ ಪ್ರತಿಕ್ರಿಯೆಯನ್ನು ನಾವು ವರ್ಣಿಸಲೂ ಸಾಧ್ಯವಾಗುವುದಿಲ್ಲ. ಇಲ್ಲ ಕಣೊ ಮೊನ್ನೆ ದಿನದವರೆಗೆ ಅವನು ನನ್ನೊಡನೆ ಮಾತಾನಾಡಿದ, ಆ ರೀತಿ ನಡೆಯಲು ಸಾಧ್ಯವಿಲ್ಲ. ಅವನು/ಅವಳು ಈ ರೀತಿ ಮಾಡಿದ್ದಾನೆ ಎಂದರೇ ನಂಬಲು ತಿಳಿಯುತ್ತಿಲ್ಲಾ. ನನಗೆ ಅನಿಸುತ್ತೇ ಅದು ಹೇಗೋ ಹಾಗಿದೆ ಅಂದು ಮುಲ ಮುಲ ಪುನಃ ಅವನ/ಅವಳ ಮತ್ತು ನಮ್ಮ ಹತ್ತಿರದವರ ಸಂಗಡ ಅದೇ ವಿಷಯವನ್ನು ಪುನಃ ಪುನಃ ಮಾತನ್ನಾಡುತ್ತೇವೆ.


ಇದಕ್ಕೆ ಕಾರಣ ನಾವುಗಳು ನಮ್ಮ ನಮ್ಮ ಮಿತಿಯಲ್ಲಿ ನಮ್ಮವರ ಬಗ್ಗೆ ಆ ರೀತಿಯ ಕುರುಡು ನಂಬಿಕೆಗಳನ್ನು ಇಟ್ಟುಕೊಂಡಿರುತ್ತೇವೆ. ಆ ರೀತಿಯ ಭಾವನೆಗಳಿಗೆ ನೋವು ಆಗುವ ರೀತಿಯಲ್ಲಿ ನಮ್ಮ ಸ್ನೇಹಿತರಿಂದ ಏನಾದರೂ ಸಂಭವಿಸಿದರೆ ನಾವು ನಮ್ಮ ಪ್ರೀತಿ ಮತ್ತು ಅವರ ಬಗ್ಗೆ ಇಟ್ಟು ಕೊಂಡ ಕಾಳಜಿಗಳನ್ನೇ ಸುಳ್ಳು ಮಾಡಿದಾಗ ತುಂಬ ಬೇಜಾರಾಗುತ್ತದೆ.
ಅದೇ ಸಮಯದಲ್ಲಿ ಸುತ್ತಲಿನ ಸಂಬಂಧಗಳ ಬಗ್ಗೆ ಜಿಗುಪ್ಸೆ ಪಡುವಂತಾಗುತ್ತದೆ. ಮತ್ತು ನಾವುಗಳು ಏಕೆ ಆ ವಿಚಾರಗಳನ್ನು ತಿಳಿಯಲು ಶಕ್ತರಾಗಿಲ್ಲ ಎಂದು ಮರುಗುತ್ತೇವೆ. ಅದರೆ ಅಸಲಿ ವಿಚಾರಗಳೇ ಬೇರೆ, ಅವರಿಗೂ ಸಹ ನಿಮ್ಮ ಬಗ್ಗೆ ಕಾಳಜಿ ಮತ್ತು ಗೌರವವಿರುತ್ತದೆ, ಅದನ್ನು ಕಾಪಾಡುವ ಸಲುವಾಗಿಯೇ ಅವರು ನಿಮ್ಮನ್ನು ಅವಾಯ್ಡ್ ಮಾಡಿರುತ್ತಾರೆ ಮತ್ತು ನಿಮ್ಮ ಕಿವಿಗೆ ಕಣ್ಣಿಗೆ ಹಾಕಿರುವುದಿಲ್ಲ.


ಸಂಬಂಧಗಳ ವಿಚಾರವೇ ಅಷ್ಟು ಯಾರೊಬ್ಬರೂ ಯಾರಿಗೂ ಯಾವ ಸಮಯದಲ್ಲಾಗಲಿ ಖುಷಿ ಮತ್ತು ಉತ್ತಮ ವಿಚಾರಗಳನ್ನು ಷೇರ್ ಮಾಡಿಕೊಳ್ಳಲು ತವಕಿಸುತ್ತಾರೆ. ಯಾವಾಗ ಯಾವೊಂದು ವಿಚಾರ ಇದು ಸರಿಯಲ್ಲ ಅಂಥ ತಮ್ಮ ಮನಸ್ಸಿಗೆ ತಿಳಿದಾಗ ನಾವು ತಿಳಿಸುವುದಕ್ಕೆ ಮುಂಚೆ ಹೇಗೋ ಎಲ್ಲಿಂದಲೂ ತಿಳಿದರೆತ ತಮ್ಮವರಿಗೆ ಕ್ಷೇಮ ಎನ್ನು ಭಯ ಅಥವಾ ಆ ರೀತಿಯ ಸ್ವತಂತ್ರವನ್ನು ಅವರೂ ನಿಮ್ಮೊಡನೇ ಅನುಭವಿಸಿರುವುದಿಲ್ಲ.


ಅದ್ದರಿಂದ ಯಾರೊಬ್ಬರ ಬಗ್ಗೆಯಾಗಲಿ ನಾವುಗಳು ನಮ್ಮ ನಮ್ಮಲ್ಲಿಯೇ ಆಶಾ ಸೌಧವನ್ನು ಕಟ್ಟಿಕೊಂಡರೂ ಅದು ನಮ್ಮ ಅಣತಿಯಂತೆ ಅವರು ಜೀವಿಸಬೇಕು ಮತ್ತು ನಡೆಯಬೇಕು ಎಂದು ಕೊಳ್ಳುವುದು ಅಸಹಜ. ಅವರ ಬಗ್ಗೆ ನಮ್ಮ ಕಾಳಜಿಯ ಪ್ರೀತಿಯಿರಬೇಕು ಹಾಗಂತ ಅದೇ ಅವರಿಗೆ ಸಂಕೊಲೆಯಾಗಬಾರದು. ಹಾಗೆಯೇ ನಮ್ಮ ಹತ್ತಿರ ಇರುವವರು ನಮಗೆ ಯಾವಾಗಲೂ ಅದು ಮಾಡ ಬೇಡ ಇದು ಮಾಡ ಬೇಡ ಎಂದು ಬೋಧಿಸುವ ಬುದ್ದಿ ಮಣಿಗಳೇ ಆಗಿರುವುದಿಲ್ಲ. ಅವರುಗಳು ತಾವು ಕಂಡ ಸಮಾಜದಲ್ಲಿ ಜೀವನದ ನೌಕೆಯಲ್ಲಿ ನನ್ನವರು ಎನ್ನುವವರೂ ಸಹ ಸಂತೋಷದಿಂದ ಬಾಳಲಿ ಎಂಬ ಆಸೆ ಮತ್ತು ಆರೈಕೆಯನ್ನು ಹೊಂದಿರುತ್ತಾರೆ.


-ತ್ರಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ