ಮಂಗಳವಾರ, ಮೇ 18, 2010

ಖಾಸ್ ಬಾತ್



ನಾವುಗಳು ಬೇರೆಯವರ ಬಗ್ಗೆ ಯೋಚಿಸುವುದು ಹೆಚ್ಚು ಅಲ್ಲವಾ? ನಮ್ಮ ಬಗೆಗಿನ ವಿಷಯಕ್ಕಿಂತ ನಮ್ಮ ಜೊತೆಯವರಗಿನ ಬಗೆಗೆ ಹಲವಾರು ರೀತಿಯಲ್ಲಿ ಚಿಂತಿಸುತ್ತಿರುತ್ತೇವೆ. ಹಾಗೆಯೇ ಬೇರೆಯವರ ತಪ್ಪುಗಳನ್ನು ತಕ್ಷಣ ಕಂಡುಹಿಡಿದು ಬಿಟ್ಟು ಏನೋ ಸಾಧಿಸಿದವರಂತೆ ಪೋಸ್ ಕೊಡುತ್ತಿರುತ್ತೇವೆ.


ಅದರೆ ಸ್ವಲ್ಪ ನಮ್ಮನ್ನು ನಾವು ನೋಡಿಕೊಂಡರೆ ನಮ್ಮ ಅಂಗಳದಲ್ಲಿಯೇ ಕೋಟಿ ಕೊರತೆಗಳು ಕಾಣಿಸುತ್ತಿರುತ್ತವೆ. ಆದರೆ ಅದನ್ನು ನಾವುಗಳು ಎಂದೂ ಒಪ್ಪುವುದಿಲ್ಲ. ನಾನು ಮಾಡುವುದು ಎಲ್ಲಾ ಸರಿ ಎಂಬ ಮನೋಭಾವ ನಮ್ಮಲ್ಲಿ ಮನೆ ಮಾಡಿ ಕೊಂಡಿರುತ್ತದೆ.

ಇದು ಅವರ ಅವರ ಮನೋಧರ್ಮದಂತೆ ಎಲ್ಲಾರೂ ಎಲ್ಲರ ಬಗ್ಗೆ ಟೀಕೆ, ಸರಿ, ತಪ್ಪು, ಒಪ್ಪುಗಳನ್ನು ಮಾಡುತ್ತಾರೆ. ಅದಕ್ಕೆ ಇರಬೇಕು ನಾವುಗಳು ನಮ್ಮ ಬಗೆಗಿನ ನಮ್ಮ ಟೀಕೆ ಟಿಪ್ಪಣಿಗಳ ಉಸಾಬರಿಯನ್ನು ನಮ್ಮ ಜೊತೆ ಇರುವವರಿಗೆ ಕೊಟ್ಟು ನಾವುಗಳು ಬೇರೆಯವರನ್ನು ಟೀಕಿಸಲು ನಿರತರಾಗಿರುತ್ತೇವೆ.


ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ನಮಗೆ ಬೇರೆಯವರಿಂದ ನಮಗೆ ಆದ ಕಸಿವಿಸಿ ಸಂಧರ್ಭದಿಂದ ಮನದಟ್ಟಾಗುತ್ತದೆ. ಆ ವ್ಯಕ್ತಿಯ ಎದುರು ಮಾತನ್ನಾಡದೇ ಅವರ ಹಿಂದೆ ಮುಂದೆ ಅವನು/ಅವಳು ಹೀಗೆ ಹೀಗೆ ಎಂದು ಕಥೆ ಕಟ್ಟಿ ನಮ್ಮ ಸಮಯವನ್ನು ಹಾಳು ಮಾಡಿಕೊಂಡು ಖುಷಿಪಡುವ ಸುಖ ನಿಜವಾದ ಸುಖವೇ?


ಈ ರೀತಿಯ ಸಮಯ ಹರಣ ಕಾಡು ಹರಟೆಯನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಮಾಡುವ ಕಾತುರತೆಯನ್ನು ನಾವುಗಳು ಸುಲಭವಾಗಿ ಗಳಿಸಿರುತ್ತೇವೆ.


ನಿಜವಾದ ಸ್ನೇಹಿತರು ನಾವುಗಳು ಎಂದು ಮಾತನ್ನಾಡಿಕೊಳ್ಳುತ್ತಿರುವ ಸಮಯದಲ್ಲೂ ನಮ್ಮ ಹತ್ತಿರದವರ ಬಗ್ಗೆ ಗೊತ್ತಿಲ್ಲದೆ ಕೇವಲವಾಗಿ ಮಾತನ್ನಾಡಿಕೊಂಡು ಅವರ ಮನಸ್ಸಿಗೆ ದಕ್ಕೆಯನ್ನು ತಂದಿರುತ್ತೇವೆ.


ಈ ಪ್ರಪಂಚದಲ್ಲಿ ಯಾರೂ ಸಹ ನೂರಕ್ಕೆ ನೂರು ಸತ್ಯವಂತರಲ್ಲ ಮತ್ತು ಆದರ್ಶ ಪುರುಷರೇನಲ್ಲ ಅಥವಾ ಕೂರತೆ ಇರದವರೇನೂ ಅಲ್ಲ. ಮತ್ತು ಎಲ್ಲರಲ್ಲೂ ಒಂದಲ್ಲ ಒಂದು ವೀಕ್ ನೆಸ್ ಇದ್ದೇ ಇರುತ್ತವೆ ಅವುಗಳನ್ನೇ ನಾವುಗಳು ದೂಡ್ಡದು ಮಾಡಿ ಹಾಡಬಾರದು.


ಗುಂಡಿಗೆ ಬಿದ್ದವನಿಗೆ ಹತ್ತು ಕಲ್ಲುಗಳು ಎಂಬಂತೆ ಕಷ್ಟ ನಷ್ಟದ ಸಮಯಕ್ಕೆ ಸಿಲುಕಿದವನ ಬದುಕು ಕಂಡು ಖುಷಿ ಪಡಬಾರದು. ಅಂಥವರ ಬಗ್ಗೆ ಕನಿಕರಗೂಂಡು ಕೈಲಾದ ಸಹಾಯ ಮಾಡುವ ಮನೋ ಅಭಿಲಾಷೆಯನ್ನು ನಾವುಗಳು ಹೊಂದಿರಬೇಕು.


ಈ ರೀತಿಯ ನಡವಳಿಕೆಯನ್ನು ನಾವುಗಳು ನಮ್ಮ ಹತ್ತಿರದವರ ಬಗ್ಗೆ ಹೆರಳವಾಗಿ ಕಟ್ಟಿ ಹಾಡುತ್ತಿರುತ್ತೇವೆ. ನಾವು ಕೆಲಸ ಮಾಡುವ ಜಾಗವಿರಬಹುದು, ನಾವು ವಾಸಿಸುವ ಮನೆಯ ಹತ್ತಿರವಿರಬಹುದು, ನಾವು ಓಡಾಡುವ ಹೊಣಿ ಇರಬಹುದು. ಇದಕ್ಕೆಲ್ಲಾ ಇತಿಶ್ರೀ ಇರಬೇಕು. ಅವರು/ಅವನು/ಅವಳು ಮಾಡಿದ ಯಾವುದೇ ಕಾರ್ಯ ಸಾಧನೆಗಳನ್ನು ಗಮನಿಸಿ ನಾವು ಅವರಂತೆ ಸಾಧಿಸುವ ಛಲವನ್ನು ತೊಡಬೇಕು. ಅವರೂ ಮಾಡುವ ತಪ್ಪುಗಳ ಎಣಿಕೆಯನ್ನು ಮಾಡುವುದೇ ನಿಮ್ಮ ಗುರಿಯಾಗಿರಬಾರದು.


ಬಹು ಮುಖ್ಯವಾದ ವಿಚಾರವೆಂದರೇ ನಮ್ಮ ಜೊತೆಯಲ್ಲಿ ಒಡನಾಡಿಗಳಾಗಿರುವ ಸ್ತ್ರೀಯರ/ಹಿರಿಯರ ಬಗ್ಗೆ ಯಾವಾಗಲೂ ಗೌರವದಿಂದ ಮಾತನ್ನಾಡಬೇಕು. ತಪ್ಪು ಮಾಡುತ್ತಿದ್ದಾರೆ ಎಂದು ಆ ಕಿವಿಯಿಂದ ಕೇಳಿ ಅದನ್ನೆ ಟಾಮ್ ಟಾಮ್ ಮಾಡಿ ಪ್ರಚಾರ ಮಾಡುವ ಪ್ರತಿನಿಧಿಗಳು ನಾವಾಗುವುದು ಬೇಡ.


ತುಂಬ ಹತ್ತಿರದ ಸ್ನೇಹಿತನಾಗಿದ್ದ ಪಕ್ಷದಲ್ಲಿ ನಮಗೆ ಅವರುಗಳು ಮಾಡುತ್ತಿರುವ, ಹೋಗುತ್ತಿರುವ ದಾರಿ ತಪ್ಪು ಎಂದು ತಿಳಿದರೇ ಅವರಿಗೆ ಮಾತ್ರ ನಿಮ್ಮ ಅಭಿಪ್ರಾಯವನ್ನು ತಿಳಿಯಪಡಿಸುವುದು ಉತ್ತಮ. ಅದು ಬಿಟ್ಟು ನಿಮ್ಮ ಅಭಿಪ್ರಾಯಗಳನ್ನು ಎಲ್ಲಾರ ಮುಂದೆ ಇಡುವುದು ಸರಿಯಾದ ದಾರಿಯಲ್ಲ.


ಉತ್ತಮ ಗೆಳೆತನದ ಕುರುಹು ಎಂದರೆ ಉತ್ತಮ ಸಂಬಂಧವನ್ನು ಪ್ರತಿಯೊಬ್ಬರ ಜೊತೆ ಹೊಂದಿರುವುದು. ಒಂದು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಈ ರೀತಿಯ ಚಿಕ್ಕ ಚಿಕ್ಕ ಸಂಬಂಧಗಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಸಂಬಂಧಗಳನ್ನು ಅಭಿವೃದ್ಧಿ ಪಡಿಸುವುದು ಉತ್ತಮ ಉತ್ತಮ ವಿಚಾರಗಳ ಪರಸ್ಪರ ವಿನಿಮಯದಿಂದ. ಯಾರು ಸಹ ಯಾರ ಬಗ್ಗೆಯೂ ಸಹ ಕೆವಲವಾಗಿ ಯೋಚಿಸುವುದರ ಮೂಲಕವಲ್ಲಾ.


ನಂಬಿಕೆ ಪ್ರತಿಯೊಬ್ಬ ಮನುಷ್ಯನಲ್ಲೂ ಇರಬೇಕು, ಅದಷ್ಟು ಹೆಚ್ಚು ನಮ್ಮ ಹತ್ತಿರ ಇರುವವರ ಬಗ್ಗೆ ಇರಲಿ.


-ತಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ