ಭಾನುವಾರ, ಏಪ್ರಿಲ್ 18, 2010

ಯಾರಿಗಾಗಿ ಯಾಕೆ ವಿಕೃತಿಯ ಅಟ್ಟಹಾಸ?



"ಭಯೋತ್ಪಾದನೆ" ಟೆರರಿಸ್ಟ್ ಆಟ್ಯಕ್ ಅಯ್ತಂತೆ! ಅಲ್ಲಿ ಒಂದು ಬಾಂಬು ಬ್ಲಾಸ್ಟ್ ಅಯ್ತಂತೆ. ಇನ್ನೋಂದು ಅಲ್ಲಿಯಂತೇ.. ಹೀಗೆ ಸುದ್ಧಿ ವೇಗವಾಗಿ ನಮ್ಮ ನಮ್ಮ ನಡುವೆ ತಲುಪಿ ನಮ್ಮವರಿಗಾಗಿ ಅವರ ಯೋಗ ಕ್ಷೇಮಕ್ಕಾಗಿ ನಮ್ಮ ಸೆಲ್ ಪೋನ್ ಗಳನ್ನು ಉಪಯೋಗಿಸಲು ಮುಂದಾದಗ ಯಾವುದೇ ರೀತಿಯ ಪ್ರಯೋಜನವಾಗದೇ ನಾವು ತಲುಪಬೇಕಾದ ವ್ಯಕ್ತಿಗಳನ್ನು ತಲುಪದೆ ಇದ್ದಾಗ ನಿರಾಶರಾಗಿ ಕೇವಲ ಭಯ ಮತ್ತು ಮುಂದೇನಾಗವುದು ಎಂಬ ಆತಂಕದಿಂದ ಕಂಪ್ಯೂಟರ್ ಪರದೆಯ ಮೇಲೆ ವಿವಿಧ ಸುದ್ಧಿಗಳ ವೆಬ್ ಸೈಟ್ ಗಳನ್ನು ನೋಡುತ್ತಾ ಸುತ್ತ ಮುತ್ತಲಿನ ಸಹ ಉದ್ಯೋಗಿಗಳ ಮಾತುಗಳನ್ನು, ಅವರು ಪಡೆದ ತಾಜಾ ಸುದ್ಧಿಗಳಿಗಾಗಿ ಕಿವಿಗಳನ್ನು ತೆರೆದುಕೊಂಡು ಏನೂ ಮಾಡಲಾಗದ ಸ್ಥಿತಿಯಲ್ಲಿ ನಾವು ನೀವುಗಳು ಕಾಯುತ್ತಿರುತ್ತೇವೆ.


ಹೀಗೆಯೇ ನಮ್ಮ ಕುಟುಂಬದ ಸದಸ್ಯರು, ಬಂಧು ಬಳಗ, ಸೂಪರ್ ಪಾಸ್ಟ್ ವೇಗದ ಸುದ್ಧಿ, ದೃಶ್ಯ ಪ್ರಸರಣದ ಸುದ್ಧಿ ಚಾನಲ್ ಗಳಲ್ಲಿ ಈ ವಿಷಯದ, ಘಟನೆಯ ಹಸಿ ಹಸಿ ದೃಶ್ಯಗಳನ್ನು ನೋಡಿ ಭಯವಿಹ್ವಲರಾಗಿ ಮನೆಯಿಂದ ಹೊರಗೆ ಹೋಗಿರುವವರ ಕ್ಷೇಮದ ಒಂದು ಮಾತಿಗಾಗಿ ಇವರು ಸಹ ಅವರ ಪೋನ್ ಗೆ ಪ್ರಯತ್ನಿಸುವುದು.


ಗಲ್ಲಿ, ಗಲ್ಲಿಯಲ್ಲಿ ವಿವಿಧ ರೀತಿಯ ಪುಂಕಾನು ಪುಂಕಾವಾಗಿ ಗಾಳಿ ಸುದ್ಧಿಯ ಈ ವಿರಾಟ ಘಟನೆಯ ವಿಶ್ಲೇಷಣೆ ಸಾಗುವುದು. ಭೀತಿಯ ಕಣ್ಣುಗಳಿಂದ ಎಲ್ಲಾರ ಮುಖಗಳನ್ನು ನೋಡುವುದು ಮತ್ತು ತಮ್ಮವರ ಕ್ಷೇಮಕ್ಕಾಗಿ ಮನಸ್ಸಿನಲ್ಲಿಯೇ ಸಣ್ಣದಾಗಿ "ದೇವರಲ್ಲಿ" ಪ್ರಾರ್ಥಿಸುವುದು. ಈ ರೀತಿಯ ಗೊತ್ತಾದ ವೇಳೆಯಲ್ಲಿ ಪ್ರತಿಯೊಬ್ಬರೂ ನಗರ- ಭೀತಿಯನ್ನು ಅನುಭವಿಸುವ ಆ ಘಳಿಗೆಯ ಆ ಸಂದರ್ಭದ ಆ ವಿಷ ಕ್ಷಣವನ್ನು ಕೇವಲ ಪದಗಳ ಸಾಲಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಅನುಭವಿಸಿದವನಿಗೆ ಗೊತ್ತು ಅದರ ನೋವು, ಅದು ಪುನಃ ಪುನಃ ಪುನರಪಿಯಾಗುವುದು ಬೇಡ ಎಂದು ಕೇಳಿಕೊಳ್ಳೋಣ.


ಈ ಎಲ್ಲಾ ಮೇಲಿನ ಘಟನಾವಳಿ ಆ ರೀತಿಯ ಘಟನೆ ನಮ್ಮ ನಗರದಲ್ಲಿ ಘಟಿಸಿದೆ ಎಂಬ ಒಂದು ಸುದ್ಧಿಯ ಹಿಂದೆ ಘಟಿಸುತ್ತದೆ. ಇನ್ನೂ ಪ್ರತ್ಯಕ್ಷ ಆ ಜಾಗದಲ್ಲಿ ಇರುವವರ ಮನಸ್ಥಿತಿ, ದೇಹ ಸ್ಥಿತಿ ಜನರ ನದವಳಿಕೆ ಕಲ್ಪನೆಗೂ ನಿಲಕಲಾರದು.


ಜಸ್ಟ್ ಕಣ್ಣು ಮಿಟಿಕಿಸುವ ಸೆಕೆಂಡುಗಳಲ್ಲಿ ಸುಂದರವಾದ ಸ್ನೇಹಿ ಪರಿಸರವನ್ನು ತನ್ನ ಕರಾಳ ಕದಂಬ ಬಾಹುಗಳಿಂದ ಅಪ್ಪಳಿಸಿ ತನ್ನೊಡಲಿಗೆ ಮಕ್ಕಳು, ಮರಿಗಳು, ಮಹಿಳೆಯರು,ಮುದುಕರು, ಯುವಕರು, ಸುಂದರ ಕಟ್ಟಡಗಳು, ವಾಹನಗಳನ್ನೊಳಗೂಡಿ ಸಮಸ್ತವನ್ನು ಆಕ್ರಮಿಸಿಕೊಂಡು ಒಂದು ವಿಲಕ್ಷಣವಾದ ಕರಿ ಛಾಯೆಯೊಂದಿಗೆ ಅಳಿದು ಉಳಿದವರ ಆಕ್ರಂದನಗಳೊಂದಿಗೆ ತನ್ನ ಅಟ್ಟಹಾಸವನ್ನು ಮೆರೆಯುವ ಈ ರೀತಿಯ ವಿಕೃತಿ ಘಟನೆ ಯಾರಿಗೂ ಯಾವ ಕಾಲಕ್ಕೂ ಬೇಡ!


ಕನಸು ಮನಸ್ಸಿನಲ್ಲೂ ಕಲ್ಪಿಸಲಾರದ ಘಟನೆ ಸಾವಿರಾರು ಜನರನ್ನು ಅನಾಥರನ್ನಾಗಿ, ನಿರ್ಗತಿಕರನ್ನಾಗಿ, ಶಾಶ್ವಾತ ಅಂಗವಿಕಲರನ್ನಾಗಿ ಒಂದೇ ಸೆಕೆಂಡನಲ್ಲಿ ನಿಸ್ಸಾಹಾಯಕ ಸ್ಥಿತಿಗೆ ತಂದು, ರಕ್ತದೋಕಳಿಯನ್ನು ಸಿಂಪಡಿಸಿ ಯಾವುದೇ ಕರುಣೆಯ ಕವಡೆಯನ್ನು ಯಾರಿಗೂ ನೀಡದೇ ತನ್ನ ಸಂತೃಪ್ತಿಯ ನಗೆಯನ್ನು ಒಳ ಒಳಗೆ ನಗುತ್ತದೆ. ಈ ದ್ವಂಸಕಾರಿ ಯೋಜನೆಯ ರೂವಾರಿಗಳಿಗೆ ಸುತ್ತಲಿನವರಿಂದ ಹಿಡಿ ಶಾಪವನ್ನು ಹಾಕಿಸುವುದು ಅದರ ಮತ್ತೋಂದು ಕಾಣಿಕೆ ಮಾತ್ರ ಅದು ತಾನು ರೂಪಿಸಿದ ತನ್ನ ಭಯಂಕರ ಚಿತ್ರಣದ ಮುಂದೆ ಇದು ಮಾತ್ರ ನಗಾಣ್ಯ.


ನಗರ ಜೀವನ ಇಂದಿನ ಈ ರೀತಿಯ ಅನಾಹುತಕಾರಿ ಘಟನೆಗಳು ನಗರವಾಸಿಗಳ ಮನಸ್ಸಿನಲ್ಲಿ ಯಾವ ರೀತಿಯ ಭಯದ ಛಾಯೆಯನ್ನು ಮೊಡಿಸಬಹುದು ಎಂಬುದನ್ನು ಯಾರು ಸಹ ತಿಳಿಯಲಾರರು.


ಆ ಘಟನೆಯ ಕಪ್ಪು ಚುಕ್ಕೆ ಸಾವಿರಾರು ದಿನಗಳವರೆಗೆ ಮುಂದಿನ ನವ ಯುವ ಜನಾಂಗಕ್ಕೆ ಮನಸ್ಸಿನ ಕೊರೆಯುವ ನೋವಿನ ಘಟನೆಯಾಗಿ ನೆಮ್ಮದಿಯಿಂದ ಜೀವಿಸುವುದನ್ನು ಕಾಣದಂತೆ ಮಾಡುತ್ತದೆ.


ಯಾರಿಗಾಗಿ? ಯಾಕೆ? ಈ ರೀತಿಯ ವಿಕೃತಿಯ ಅಟ್ಟಹಾಸ?


ಹಿಂದೆ ಯಾರೊಡನೆ ಹೋರಾಡಿದರೂ ಒಂದು ವ್ಯವಸ್ಥಿತಿತ ರೀತಿಯಿಂದ ಹೋರಾಡಿ ತಮ್ಮ ಬಲ ಪ್ರದರ್ಶಿಸುತ್ತಿದ್ದರು. ಮತ್ತು ಆ ರೀತಿಯ ಹೋರಾಟ ಅಸಕ್ತ ಮಕ್ಕಳು, ಮಹಿಳೆಯರು ಮತ್ತು ಸಾಮಾನ್ಯ ಮನುಷ್ಯರಿಂದ ಬೇರೆಯಾಗಿ ನಡೆಯುತ್ತಿತ್ತು. ಅದು ದೇಹಿ ಅನ್ನು ವವರಿಗೆ ಕ್ಷಮೆಯಾಗಿರುತ್ತಿತ್ತು.


ಇಂದು ಗೊತ್ತಿರದ ಯಾವುದೋ ಒಂದು ಉದ್ದೇಶಕ್ಕಾಗಿ ಗೊತ್ತಿರದ ಜಾಗದಲ್ಲಿ ಜನ ಸಾಮಾನ್ಯರ ಮಾರಣ ಹೋಮವೇ ತಮ್ಮ ವಿಜಯ ಎಂದು ಬೀಗುವ ಈ ವಿಕೃತ ವ್ಯವಸ್ಥೆ ಮತ್ತು ಮನಸ್ಸುಗಳಿಗೆ ಯಾವ ರೀತಿಯ ಕರುಣೆಯ ಭೋಧನೆಯನ್ನು ಮಾಡಿ ಸರಿ ದಾರಿಗೆ ತರಲಿ?


ಕೊನೆಯಿರದ ಈ ರೀತಿಯ ಘಟನೆಗಳಿಗೆ ಮುಕ್ತಿಯ ರೂವಾರಿ ಯಾರಾಗಬೇಕು? ವ್ಯಕ್ತಿಯೇ! ಸಮಾಜವೇ! ಧರ್ಮವೇ! ಯಾರು? ನಾವು ಬದುಕುತ್ತಿರುವ ಬದುಕೆ ಭದ್ರವಾಗಿರದಾದಗ ಜೀವಿಸುವುದಾದರೂ ಎಲ್ಲಿ? ಯಾರನ್ನು ನಂಬಲಿ? ಯಾರನ್ನು ಕೇಳಲಿ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ