ಗುರುವಾರ, ಏಪ್ರಿಲ್ 8, 2010

ಸೆಕ್ಸ್ ಮತ್ತು ವೋಟಿಂಗ್

ಈ ಕಳೆದ ವಾರಗಳಲ್ಲಿ ಎರಡು ಮುಖ್ಯ ವಿಚಾರಗಳು ಬಹಳಷ್ಟು ಚರ್ಚೆಗೆ ಒಳಪಟ್ಟಿರುವುವು. ಒಂದು ವಿವಾಹ ಪೂರ್ವ ಲೈಂಗಿಕತೆ ಮತ್ತು ಬೆಂಗಳೂರಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಡಿಮೆ ಮತದಾನ.

ಮೊನ್ನೆ ಸರ್ವೋಚ್ಚ ನ್ಯಾಯಾಲಯ ವಿವಾಹ ಪೂರ್ವ ಲೈಂಗಿಕತೆ ಸಾಧು ಎಂದು ಮಹತ್ವದ ತೀರ್ಪು ನೀಡಿದೆ. ಇದರ ಬಗ್ಗೆ ಧನಾತ್ಮಕ ಮತ್ತು ಋಣಾತ್ಮಕ ಪ್ರತಿಕ್ರಿಯೆಗಳು ವಿಚಾರವಂತರೂಡಗೂಡಿ ಸಾಮಾನ್ಯ ಜನರವರೆಗೆ ಮಾಧ್ಯಮಗಳ ಮೂಲಕ ಪ್ರತಿಬಿಂಬಿತಗೊಂಡಿವೆ. ಇದರ ಬಗ್ಗೆ ನನಗೆ ಏನೂ ಹೇಳಲು ತಿಳಿಯದು. ಇಷ್ಟನ್ನು ಮಾತ್ರ ಹೇಳಬಹುದು. ಈ ತೀರ್ಪನ್ನು ನಾವುಗಳು ಯಾವ ರೀತಿ ತೆಗೆದುಕೊಳ್ಳುವೆವು ಮತ್ತು ಹೇಗೆ ಜೀರ್ಣಿಸಿಕೊಳ್ಳೂವೆವು ಅಂಥ?

ಯಾರು ಯಾವ ರೀತಿಯಲ್ಲಿ ಬೇಕಾದರೂ ಅದರ ಬಗ್ಗೆ ವ್ಯಾಖ್ಯಾನ ಮಾಡಿದರೂ, ಅದು ತನಗೆ ಮಾತ್ರ ಮತ್ತು ಹೆಚ್ಚು ವೈಕ್ತಿಕವಾದಾಗ ಮಾತ್ರ ಯಾವೂಬ್ಬ ವ್ಯಕ್ತಿಯು ಅದು ಸರಿ, ಎಂದು ಹೇಳಲಾರ. ಅದಕ್ಕೆ ಇರಬೇಕು ನಮ್ಮತನವನ್ನು ನಮ್ಮ ಆಚಾರ ವಿಚಾರ, ಸಂಸ್ಕೃತಿಗಳನ್ನು ತಾನು ಎಷ್ಟೇ ಮುಂದುವರಿದಿದ್ದರೂ, ಎಷ್ಟೇ ತಿಳುವಳಿಕೆಯುಳ್ಳವನಾದರೂ, ಆ "ಒಂದು ವಿಷಯಕ್ಕೆ" ಬಂದಾಗ ತಾನು ಯೋಚಿಸುವ ದಾಟಿಯೇ ಬೇರೆಯದಾಗುತ್ತದೆ ಮತ್ತು ತನ್ನ ಸಂಗಾತಿಯಾಗುವವರ ಬಗ್ಗೆ ವ್ಯಕ್ತಿ ತುಂಬ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾನೆ. ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಆ ಪವಿತ್ರವಾದ ತನವನ್ನು ತನ್ನ ಮುಂದಿನ ಬಾಳಿನ ಸಂತೋಷದ ದಿನಗಳಿಗೆ ಅಡಿಪಾಯ ಎಂಬ ರೀತಿಯಲ್ಲಿ ಯೋಚಿಸಿತ್ತೀರುತ್ತಾರೆ. ಅದೊಂತೋ ಈ ನಮ್ಮ ಭಾರತೀಯ ಮಣ್ಣಿನ ಗುಣದಲ್ಲಿ ಕಲ್ಪಿಸಲೂ ಸಾಧ್ಯವಿಲ್ಲ.

ಅದು ಅಷ್ಟೋಂದು ಸುಲಭವಾಗಿ ವಿಚಾರ ವೇದಿಕೆಗಳಲ್ಲಿ ಮತ್ತು ತೀರ್ಪುಗಳಲ್ಲಿ ಅನುಮೊಧಿಸಿದಂತೆ ಅಲ್ಲಾ ಎಂದು ಮಾತ್ರ ಹೇಳಬಹುದು. ನಿಮಗೆ ಏನು ಅನಿಸುತ್ತೇ? ಸ್ವಲ್ಪ ಕಲ್ಪಿಸಿಕೊಳ್ಳಿ.

ಇನ್ನೋ ಎರಡನೇಯ ಬಹು ಚರ್ಚಿತ ವಿಷಯವಾದ ಅತಿ ಕಡಿಮೆ ಮತದಾನ. ಬೆಂಗಳೂರಿನ ನಾಗರೀಕರಲ್ಲಿ ಚುನಾವಣೆಯ ಬಗ್ಗೆ ಇರುವ ನಿರುತ್ಸಾಹ ಇದರ ಬಗ್ಗೆ ಆಡಳಿತ ಪಕ್ಷದಿಂದ ಇಡಿದು ಜನಸಾಮಾನ್ಯರವರೆಗೂ ಬಹು ವಿಧದ ಸಲಹೆ ಮಾತುಗಳು ಅದಕ್ಕೆ ಪರಿಹಾರಗಳು ಯೋಜನೆಗಳು ಕೇಳಿ ಬರುತ್ತಿವೆ.

ಮತದಾನ ಮಾಡದವರೂ ಯಾವುದೇ ಕುಂದುಕೊರತೆಗಳ ಬಗ್ಗೆ ಚಕಾರ ಎತ್ತುವ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಮತ್ತು ಅವರಿಗೆ ಪ್ರಶ್ನಿಸುವ ಹಕ್ಕು ಇಲ್ಲ. ಮತದಾನ ಮಾಡುವುದನ್ನು ಕಡ್ಡಾಯ ಮಾಡಬೇಕು. ಗುಜರಾತ್ ಮಾದರಿಯಂತೆ ಇಲ್ಲೂ ಒಂದು ಶಾಸನವನ್ನು ಜಾರಿಮಾಡಬೇಕು. ಹೀಗೆ ನಾನ ರೀತಿಯ ಸಲಹೆಯ ಕೂಗುಗಳು ದ್ವನಿಸುತ್ತೀವೆ.

ಅದೊಂದು ಸತ್ಯ ಇಂದಿನ ನಮ್ಮ ರಾಜಕಾರಣಿಗಳ ಬಗ್ಗೆ ನಮ್ಮ ಜನರಿಗೆ ಯಾವುದೇ ರೀತಿಯ ಆಶಾವಾದ ಮತ್ತು ಪಾಸೀಟಿವ್ ಹೊಪ್ಸ್ ಇಲ್ಲವಾಗಿದೆ. ಯಾವೊಬ್ಬ ಸಾಮಾನ್ಯ ಮನುಷ್ಯನಿಗೂ ಪ್ರತಿಯೊಬ್ಬ ರಾಜಕಾರಣಿ ಗೆದ್ದ ಮೇಲೆ ಏನೆಲ್ಲಾ ಮಾಡಬಹುದು ಎಂಬುದು ಅಕ್ಷರಾಶಃ ತಿಳಿದಿರುವ ವಿಚಾರ. ಇದರಿಂದ ಮುಂದೇನಾಗಬಹುದು ಈಗ ಏನು ಮಾಡಬಹುದು, ಈ ರೀತಿಯ ಪ್ರತಿಯೊಂದು ನಡೆಯನ್ನು ತಮ್ಮ ತಮ್ಮಲ್ಲಿಯೇ ಮತದಾರರು ಹಾಸ್ಯಸ್ಪದವಾಗಿ ನಮ್ಮ ಪ್ರತಿನಿಧಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.

ನಮ್ಮ ಜನಪ್ರತಿನಿಧಿಗಳು ಸಹ ತಮ್ಮ ಗಾಂಭಿರ್ಯ ಮತ್ತು ತಮ್ಮ ಶಿಸ್ತುಗಳನ್ನೇಲ್ಲಾ ಗಾಳಿಗೆ ತೂರಿ ನಿಜವಾದ ಮನುಷ್ಯತ್ವವನ್ನೇ ಮರೆತು ಗೆದ್ದಿರುವುದು ಸಂಪಾದಿಸಲಿಕ್ಕೆ ಮಾತ್ರ ಎಂಬ ರೀತಿಯಲ್ಲಿ "ಹೇಗಿದ್ದವನು ಹೇಗಾದ ನೋಡ್ರಾಣ್ಣಾ" ಎಂಬಂತಿದ್ದಾರೆ.

ಚುನಾವಣಾ ಪ್ರಕ್ರಿಯೇ ಪ್ರಾರಂಭವಾದ ದಿನದಿಂದ ಶುರು ಮಾಡಿ ಅದು ಮುಕ್ತಾಯವಾಗುವವರೆಗೂ ಇವರುಗಳು ಮಾಡುವ "ಸಾಮಾಜಿಕ ಕಾಳಜಿ ಎಂಬ" ಡೋಂಗಿ ಆಶ್ವಾಸನೆ, ಪ್ರಚಾರ ಅದಕ್ಕೆ ಅವರುಗಳು ವೆಚ್ಚ ಮಾಡುವ ಕೋಟ್ಯಾನು ಕೋಟಿ ಹಣ, ವಿವಿಧ ಆಸೆ ಆಮೀಷ ಇವುಗಳನ್ನು ಗಮನಿಸಿದರೇ, ಮತದಾರನೆ ಕಸಿವಿಸಿಗೊಂಡು ಚುನಾವಣೆಯೇಂದರೆ ಏನು ಎಂದು ಅದರ ಅರ್ಥವನ್ನು ಪುಸ್ತಕಗಳಲ್ಲಿ ಹುಡುಕುವ ಸ್ಥಿತಿಯಾಗಿದೆ.

ಚುನಾವಣೆಯಲ್ಲಿ ಸ್ವರ್ದಿಸುತ್ತಿರುವ ವ್ಯಕ್ತಿಗಳು ಮತ್ತು ಅವರ ಹಿನ್ನಲೆಯ ಚರಿತ್ರೆಯನ್ನು ಗಮನಿಸಿದರೆ ನಮ್ಮ ಭವ್ಯ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ತಂಭಗಳು ಹೇಗಿವೇ ಎಂದು ಆಶ್ಚರ್ಯ ಮತ್ತು ಭಯವಾಗುತ್ತದೆ. ಈ ಎಲ್ಲಾದರ ಮಧ್ಯೆ ಉತ್ತಮ ವ್ಯಕ್ತಿಯ ಆಯ್ಕೆ ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ತಿಳಿಯಲಾರದ ಸಮಸ್ಯೆಯಾಗಿದೆ.

ಹೀಗೆ ಈ ಎಲ್ಲಾ ಸಂಕೋಲೆಗಳ ಮಧ್ಯೆ ನಾವು ಮೆಚ್ಚಿ ಚುನಾಯಿಸಿದ ನಮ್ಮ ಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಯಾವ ರೀತಿಯಲ್ಲಿ ಸೇವಾ ಸೌಕರ್ಯಗಳನ್ನು ತಮ್ಮ ಪ್ರದೇಶಗಳಿಗೆ ನೀಡುತ್ತಾರೆ ಎಂದರೇ ಮತ್ತೊಂದು ಚುನಾವಣೆಯೇ ಬರಬೇಕು. ಅದಕ್ಕಾಗಿ ಮತದಾರ ಪ್ರಭು ಜಾತಾಕ ಪಕ್ಷಿಯಂತೆ ಕಾಯುತ್ತಿರಬೇಕು.

ನಮ್ಮ ನಾಯಕರುಗಳಿಗೆ ನಿರ್ಧಿಷ್ಟ ಗುರಿಯೆಂಬುದೇ ಇಲ್ಲದೇ ತಾವುಗಳು ಯಾವ ರೀತಿ ನಮ್ಮ ಜನರಿಗೆ ಸಹಕಾರವನ್ನು ನೀಡಬೇಕು ಎಂಬ ಕನಸುಗಳಿಲ್ಲದೆ, ಕೇವಲ ಅಧಿಕಾರಕ್ಕಾಗಿ ಎಂಥದೇ ರೀತಿಯ ಕಾರ್ಯಗಳನ್ನು ಮಾಡಲು ತಯಾರಾಗಿರುವಂತ ದಾರ್ಷ್ಟತೆಯೇ ಎದ್ದು ಕಾಣುತ್ತದೆ.

ಇಂಥದರೆಲ್ಲಾದರ ಮಧ್ಯೆಯು ಕೆಲವೇ ಕೆಲವು ಬೆರಳೆಣಿಕೆಯ ಸಾಧಕ ರಾಜಕೀಯ ಮುತ್ಸದ್ಧಿಗಳು ಇರುವುದು ಭಾರತಾಂಭೇಯ ಪುಣ್ಯ. ಆದರೂ ಅವರುಗಳ ಗುಂಪಿನಲ್ಲಿ ಇವರುಗಳು ಗೋವಿಂದ ಎಂಬಂತೆ ಮರೆಯಾಗದಿರಲಿ ಎಂದು ಆಶಿಸೋಣ. ಚುನಾವಣೆ ಮತ್ತು ಮತದಾನ ಇದರ ಹಿರಿಮೆ ಮತ್ತು ಮಹತ್ವವನ್ನು ಹೆಚ್ಚಿಸುವ ಕೆಲಸವನ್ನು ಸ್ವರ್ದೆಗೆ ನಿಲ್ಲುವ ಪಕ್ಷಗಳು ಮತ್ತು ಪ್ರತಿನಿಧಿಗಳು ಮಾಡಿ, ಜನರಲ್ಲಿ ಕೊಂಚ ಪ್ರಜಾಪ್ರಭುತ್ವದಲ್ಲಿ ಭರವಸೆಯನ್ನು ಮೊಡಿಸಲಿ.
-ತಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ