ಶನಿವಾರ, ಜನವರಿ 2, 2010

ಸಿಹಿಗಾಳಿ ಸಿಹಿಗಾಳಿ ಸಹಿ ಮಾಡಲಿ

ಮತ್ತೆ ನಮ್ಮ ಭರವಸೆಗಳಿಗೆ ದಿನದ ಉತ್ತಮ ಗಳಿಗೆಗಳಿಗೆ ಆಶಾಕಿರಣದ ನೋಟಕ್ಕಾಗಿ ಪುನಃ ಹೊಸ ವರ್ಷದ ಹೂಸ್ತೀನಲ್ಲಿ ನಿಂತಿದ್ದೇವೆ. ಕಳೆದ ದಿನಗಳ ಸುಖ - ಸಂತೋಷ, ಸೋಲು - ಗೆಲುವು, ನೋವು - ನಲಿವುಗಳ ಮಿಶ್ರ ಭಾವದ ಬದುಕಿನ ಇತಿಹಾಸಕ್ಕೆ ಇತಿಶ್ರೀ ಇಟ್ಟು ಮುಂದಿನ ಭವಿಷ್ಯತ್ ದಿನಗಳ ಕಡೆಗೆ ಆಸೆಯಗಣ್ಣು ಬೀರುವ ತವಕದಲ್ಲಿ ಎಲ್ಲಾ ಮನಗಳು ತುಡಿತದಲ್ಲಿವೆ.

ದಿನಗಳು ಯಾರಿಗೂ ಕಾಯುವುದಿಲ್ಲ ಮತ್ತು ಯಾರನ್ನು ಕೇಳಿ ಹಗಲು ರಾತ್ರಿಯ ಪಯಣವನ್ನು ಮಾಡುವುದಿಲ್ಲ. ಎಲ್ಲಾರಿಗೂ ಸಮಾನವಾಗಿ ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಮುನ್ನೂರ ಅರವತೈದು ದಿನಗಳನ್ನು ಬೇದ ಭಾವವಿಲ್ಲದೆ ದಯಪಾಲಿಸುತ್ತ ತನ್ನ ದಾರಿಯನ್ನು ತಾನು ಹಿಡಿದಿರುತ್ತದೆ. ಅದರಲ್ಲಿ ನಾವುಗಳು ಎಷ್ಟರ ಮಟ್ಟಿಗೆ ನಮ್ಮ ಗಟ್ಟಿ ದಿನಗಳನ್ನಾಗಿ ಮಾಡಿಕೊಂಡು ಪ್ರತಿ ಗಂಟೆಯನ್ನು ನಮ್ಮ ಮರೆಯಲಾರದ ದಿನಗಳನ್ನಾಗಿ ಮಾಡಿಕೊಂಡು ಇತಿಹಾಸದ ಕೊಂಡಿಗೆ ನಮ್ಮದು ಒಂದು ಇರಲಿ ಎಂಬಂತೆ ಮುಖ್ಯ ಗಟ್ಟಿ ಕೊಂಡಿ ಜೊಡಿಸುವ ಕೌಶಲ್ಯ ತಮ್ಮ ತಮಗೆ ಬಿಟ್ಟಿದ್ದು ಅದಕ್ಕೆ ವರ್ಷ ದಿನ ಕಾಲಮಾನ ಹೊಣೆಯಲ್ಲ.

ಹೊಸ ವರ್ಷದ ಪಾದಕ್ಕೆ ಅಡಿ ಇಡುವ ಸಮಯದಲ್ಲಿ ಕಳೆದ ದಿನಗಳ ಪುನರ್ ವಿಮರ್ಶೆ ಅಗತ್ಯ ಅದು ಮುಂದಿನ ಬರುವ ದಿನಗಳನ್ನು ಯಾವ ರೀತಿ ಕಳೆಯಬೇಕು, ಯಾವುದರಲ್ಲಿ, ಎಲ್ಲಿ ನಾವೂ ಎಡೆವಿದೆವು, ಎಲ್ಲಿ ಜಯ ಬೇರಿ ಬಾರಿಸಿದೆವು ಮತ್ತು ಯಾವುದರಲ್ಲಿ ಎಲ್ಲಾರನ್ನು ಕೊಡಿ ಹಿತವಾದ ದಿನಗಳನ್ನು ಸಮಯವನ್ನು ಸಂತೋಷವಾಗಿ ಕಳೆದೆವು ಕೊಡಿದೆವು ಎಂಬ ಕಿರು ನೋಟ ಚಿಕ್ಕ ಚಿಕ್ಕ ತಪ್ಪು ಒಪ್ಪುಗಳ ಸರಿಪಡಿಸುವಿಕೆಗೆ ದಾರಿ ದೀಪವಾಗುವುದು.

ಹೊಸ ದಿನಗಳು ಬರುವಂತೆ ನಮ್ಮ ನಮ್ಮ ವಯಸ್ಸನ್ನು ಹೆಚ್ಚು ಹೆಚ್ಚು ಮಾಡಿ ನಾವು ಹೆಚ್ಚು ಹೆಚ್ಚು ದೊಡ್ಡವರನ್ನಾಗಿ ಮಾಡುತ್ತದೆ. ದೊಡ್ಡವರಾಗುವುದು ನಮ್ಮ ವಯಸ್ಸಿನಲ್ಲಾಗದೇ ನಮ್ಮ ತಿಳುವಳಿಕೆ ನಮ್ಮ ಬುದ್ಧಿ ಬೆಳವಣಿಗೆಯಲ್ಲೂ ಕಾಣಬೇಕು, ಅದರ ಹೊಳಪು ಮತ್ತು ಝಲಕ್ ನ ಬೆಳಕು ನಮ್ಮ ಸುತ್ತಲಿನವರಿಗೂ ಉಪಯೋಗವಾಗಬೇಕು.

ಒಂದು ಸಂವತ್ಸರ ಯಾವುದೇ ವ್ಯಕ್ತಿಯ ಮಹಾತ್ವವಾದ ಕಾಲ ಘಟ್ಟ. ಅದು ಎಂದು ಮರೆಯಲಾರದ ಮೆಲುಕು ಹಾಕುವ ಕಾಲಮಾನ. ಪ್ರತಿಯೊಬ್ಬ ವ್ಯಕ್ತಿಯ ತನ್ನ ಕ್ಷೇತ್ರದಲ್ಲಿ ತಾನು ಎಷ್ಟರ ಮಟ್ಟಿಗೆ ಸಾಧಿಸಿದೇ ಎಂಬುದನ್ನು ಒಂದು ವರ್ಷದ ಬೆಳವಣಿಗೆಯಿಂದ ಅಳೆಯಲಾಗುವುದು.

ನಮ್ಮ ಇಂದಿನ ದಿನ ಮಾನಗಳಲ್ಲಿ ನಮ್ಮ ದೈನಂದಿನ ಬದುಕು ಕೇವಲ ನಮ್ಮ ಸಂಸಾರ ನಮ್ಮ ಮನೆಯನ್ನು ಮಾತ್ರ ಅವಲಂಬಿತವಾಗದೇ ಅದು ಸಮಸ್ತ ಪರಿಸರ , ಊರು, ಜನ, ಸಮಾಜ, ರಾಜಕೀಯ, ಆರ್ಥಿಕತೆ, ದೇಶ ಮತ್ತು ಸಂಸ್ಕೃತಿಯನ್ನು ಅವಲಂಬಿಸಿ ಏಕನ್ಮೊಖ ಅಭಿವೃದ್ಧಿಯನ್ನು ತೋರಿಸುತ್ತದೆ. ನಮ್ಮ ದಿನಮಾನದಲ್ಲಿ ನಡೆಯುವ ಮತ್ತು ಘಟಿಸುವ ಯಾವುದೇ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷ ಮತ್ತು ಅದರ ಸಂವೇದನೆ ನೇರವಾಗಿ ವ್ಯಕ್ತಿ ಮತ್ತು ಅವನ ಕುಟುಂಬದಲ್ಲಿನ ಸಂವೇದನೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿದೆ. ಇದಕ್ಕೆ ಕಾರಣ ಇಂದು ನಮ್ಮ ಜೀವನದಲ್ಲಿ ಬದಲಾವಣೆಯ ಹರಿಕಾರನಂತೆ ಬಂದು ನಿಂತು ಅಗಾಧವಾಗಿ ಬೆಳೆದಿರುವ ಉನ್ನತ ತಂತ್ರಙ್ಞಾನ, ಮಾಹಿತಿ, ಮಾದ್ಯಮಗಳ ಬೆಳವಣಿಗೆ ಪ್ರತಿಯೊಂದು ಜಾಗದ ಸುದ್ಧಿ ಮತ್ತು ಘಟನೆಗಳು ಕೇವಲ ಕೇಲವೇ ಸೆಕೆಂಡುಗಳಲ್ಲಿ ನಮ್ಮ ಮನೆಯ ಹಾಲಿಗೆ ಪ್ರತ್ಯಕ್ಷವಾಗುವಂತ ವೇಗದ ಸಂವಹನೆ. ಇದಕ್ಕೆ ತಕ್ಕಂತೆ ನಮ್ಮ ಇಂದಿನ ಜೀವನದಲ್ಲಿ ವೈಕ್ತಿಕವೆಂಬ ಮತ್ತು ನಮ್ಮದಲ್ಲಾದ ವಿಚಾರಗಳು ಯಾವುದು ಇಲ್ಲಾ ಎಂಬಂತೆ ಇಡೀ ಜಗತ್ತೆ ಒಂದು ಚಿಕ್ಕ ಊರಾಗಿದೆ.

ಇಲ್ಲಿಯೇ ಕುಳಿತುಕೊಂಡು ನೋಯಾರ್ಕನಲ್ಲಿ ನಡೆಯುವ ಒಬಾಮನ ಅಧ್ಯಕ್ಷ ಪೀಠದ ಅಲಂಕಾರದ ವರದಿಯನ್ನು ನೇರವಾಗಿ ಸವಿದು ಒಬಾಮಾ ನಮ್ಮವನೆನೋ ಎಂಬಂತೆ ನಾವುಗಳು ಅದರ ಬಗ್ಗೆ ಮತ್ತು ಅವನ ಬಗ್ಗೆ ಚರ್ಚಿಸಲೂ ಸಾಧ್ಯವಾಗಿದೆ.
ಮತ್ತು ನಮ್ಮನಾಳುವ ನಮ್ಮ ಯಾವ ಜನ ಪ್ರತಿನಿದಿಗಳನ್ನು ಅವರ ಆಟೋಪಾಠಗಳನ್ನು ದಿನ ನಿತ್ಯ ರಾಜಕೀಯ ವರದಿಯ ರೊಪದಲ್ಲಿ ನೋಡಿ ಮನಸನ್ನು ಸಣ್ಣದು ಮಾಡಿಕೊಂಡು ನಾವು ಆರಿಸಿರುವ ನಮ್ಮ ಓಟಿನ ಜಾದು ಕಂಡು ನಾವೇ ಪಶ್ಚಾತ್ತಾಪಡುತ್ತೇವೆ. ಇದು ನಮ್ಮ ರಾಜ್ಯದ ೨೦೦೯ ನಲ್ಲಿ ನಡೆದ ತಾಜಾ ರಾಜಕೀಯ ತಾರಚಿತ್ರದ ಬಗ್ಗೆ ಎಂದು ಬೇರೆ ಹೇಳಬೇಕಿಲ್ಲ ಅಲ್ಲವಾ?

ಹಾಗೆಯೇ ನಮ್ಮ ಎಲ್ಲಾ ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಹೀಗೆ ಯಾವುದರಲ್ಲೂ ನಮ್ಮ ನಮ್ಮ ಸುತ್ತಲಿನವರೂ ಜಗತ್ತಿನ ಯಾವುದ್ಯಾವುದೋ ಊರುಗಳಲ್ಲಿ ಪಾಲ್ಗೂಂಡು ತಮ್ಮತನವನ್ನು ಮೇರೆದಿರುವುದನ್ನು ನಮ್ಮ ಟಿ.ವಿ ಗಳಲ್ಲಿ ವರ್ಣಮಯವಾಗಿ ನೋಡಿ ನಮ್ಮ ಮನಸ್ಸು ರಂಗಾಗಿರುತ್ತಿರುವುದು ನಮ್ಮವರು ಯಾವ ರೀತಿಯಲ್ಲಿ ವೇಗವಾಗಿ ಜಾಗತೀಕರಣದ ವೇಗಕ್ಕೆ ಹೆಜ್ಜೆಯನ್ನು ದಾಪುಗಲಿನಲ್ಲಿ ಹಾಕುತ್ತಿದ್ದೇವೆ ಎಂಬುದು ತಿಳಿಯುತ್ತೇವೆ.

ಹೀಗೆ ಪ್ರತಿ ದಿನವೂ ನಮಗೆ ಹತ್ತು ಹಲವು ನಮ್ಮ ಮತ್ತು ಪರರ ವಿಚಾರಗಳ ಮನನ ಮತ್ತು ನಮ್ಮತನದ ಏನಾದರೊಂದು ಕೊಡುಗೆಯನ್ನು ನಾವುಗಳು ಅದಕ್ಕೆ ನೀಡಬೇಕು ಎಂಬ ಹಂಬಲವನ್ನು ನೀಡುವಲ್ಲಿ ಮಹತ್ತರವಾದ ಪ್ರೇರಣೆಯನ್ನು ನಮ್ಮ ಮಾದ್ಯಮಗಳು ಮತ್ತು ನಮ್ಮ ನೇತಾರಾರು, ನಟರು, ಕಲಾವಿದರು, ವಿಙ್ಞಾನಿಗಳು ಮಾಡುತ್ತಲೇ ಬಂದಿದ್ದಾರೆ.

ಈ ರೀತಿ ಎಲ್ಲಾ ಸಾಮಾನ್ಯರಿಗೆ ಅಸಮಾನ್ಯವಾಗಿ ಪ್ರತಿ ಸಂವತ್ಸರ ಹೊಸ ವರುಷ ಹೊಸ ಇತಿಹಾಸ ಬರೆಯಲು ಹೊಸ ದಾರಿಯನ್ನು ಮಾಡಿ ಕೊಡುತ್ತಲೇ ಇರುತ್ತಾದೆ. ೨೦೦೯ ಸಂಮಿಶ್ರವಾದ ನೋವು ನಲಿವು ಮತ್ತು ಕೇಲವು ಸಂತೋಷದ ಕೊಡುಗೆಗಳನ್ನು ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ಕೊಟ್ಟಿದೆ. ಬರುವ ದಿನಗಳು ಹೆಚ್ಚು ಹೆಚ್ಚು ಸಮೃದ್ಧಿ ಮತ್ತು ಸಂತೋಷದ ಗಳಿಗೆಗಳನ್ನು ತರಲಿ ಎಂದು ಬೇಡುವವ.

-ತ್ರಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ