ಬುಧವಾರ, ನವೆಂಬರ್ 24, 2010

ಗುಲ್ ಮೋಹರ್ ಮರದ ನೆರಳಲ್ಲಿ ನೀನು

ಹೇ ಪ್ರಿಯ ಲತೆ,

ನನಗೆ ನೀ ಇಷ್ಟೊಂದು ವೇದನೆಯನ್ನು ಕೊಡುತ್ತೀಯ ಎಂದು ನಾನು ನನ್ನ ಕನಸು ಮನಸ್ಸಿನಲ್ಲೂ ನೆನಸಿರಲಿಲ್ಲ. ಕೇವಲ ನಿನ್ನ ಒಂದು ಮಾತಿಗಾಗಿ, ಕೇವಲ ನಿನ್ನ ಒಂದು ಎಸ್.ಎಂ.ಎಸ್ ಗಾಗಿ, ಕೇವಲ ನಿನ್ನ ಒಂದು ಮಿಸ್ ಕಾಲಿಗೆ ಕಾದ ಕ್ಷಣಗಳನ್ನು ನೆನಸಿಕೊಂಡರೆ ನನ್ನಲ್ಲಿ ನಾನೇ ಇಲ್ಲ ಎನಿಸುತ್ತದೆ. ಆಗೊಂತೂ ನಿನ್ನ ಬಗ್ಗೆ ತುಂಬ ಸ್ವಾರ್ಥಿ ಅನಿಸುತ್ತದೆ. ನಿನಗೆ ನನ್ನ ಬಗ್ಗೆ ಕಾಳಜಿ ಮತ್ತು ಅಷ್ಟೇ ಪ್ರೀತಿ ಇದೆ ಎಂಬುದು ಗೊತ್ತು ಆದರೂ ಯಾಕೆ ನೀನು ನನ್ನನ್ನು ಇಷ್ಟೊಂದು ಸತಾಯಿಸುವೆ ಎಂಬುದು ತಿಳಿಯದಾಗಿದೆ.


ಕಾಲೇಜಿಗೆ ಯಾಕಾದರೂ ರಜೆಯನ್ನು ಕೊಡುವರೂ ತಿಳಿಯದಾಗಿದೆ. ಹೌದಲ್ಲವಾ! ಅದು ನನ್ನ ಮತ್ತು ನಿನ್ನ ಕೈಯಲ್ಲಿ ಇಲ್ಲಾ. ಆ ನನ್ನ ನಿನ್ನ ಗಂಭಿರ ಮುಖದ ಪ್ರಿನ್ಸಿ ಕೈಯಲ್ಲಿ ಮಾತ್ರ ಇದೆ. ಅದಕ್ಕೇನೂ ಗೊತ್ತು ನನ್ನ ನಿನ್ನಂತ ಈ ಅಸಂಖ್ಯಾತ ಜೊಡಿ ಜೀವಗಳ ವಿರಹ ವೇದನೆಯ ಶಾಪ ಮುದಿ ಗೂಬೆಗೆ ತಾಕುವುದು ಎಂಬುದು.


ಈ ಒಂದು ತಿಂಗಳು ಒಂದು ಯುಗವನ್ನೇ ಕಳೆದಂತಾಗಿದೆ.


ನೀ ಇರುವ ಆ ಕುಗ್ರಾಮದಲ್ಲಿ ನನ್ನ ನಿನ್ನ ಬೆಸೆಯುವ ಜಂಗಮವಾಣಿಯ ತರಂಗಗಳು ಲಭ್ಯವಿಲ್ಲವಲ್ಲಾ! ಯಾವಾಗ ಪ್ರಯತ್ನಿಸಿದರೂ ವ್ಯಾಪ್ತಿ ಪ್ರದೇಶದಿಂದ ಹೊರಗೆ ಎಂಬ ಆ ತಾಟಕಿಯ ದ್ವನಿ. ಅಲ್ಲಿ ನಿನ್ನ ದ್ವನಿಗಾಗಿ ಕಾತುರತೆಯಿಂದ ಕಾದ ಕ್ಷಣಗಳಲ್ಲಿ ಅವಳ ಯಾಂತ್ರಿಕ ಮಾತು. ಆಗ ನನ್ನ ನಿನ್ನ ಬೆಸೆಯುವ ಒಂದು ಸಂಪರ್ಕವು ಉಪಯೋಗಕ್ಕೆ ಇಲ್ಲ ಎಂಬುದು ಮನಸ್ಸಿಗೆ ಬಂದಾಗ.. ಆಗಲೇ ಬೆಯುತ್ತಿರುವ ಮನವನ್ನು ಕುದಿಯುವ ಎಣ್ಣೆಯಲ್ಲಿ ಹಾಕಿದಂತ ನಿರಾಶೆ. ನಾನಾಗ ಬೆಂಕಿ ಬೆಂಕಿ..


ಯಾರೋ ಹಿರಿಯರು ಹೇಳಿದ್ದಾರೆ.. ದೂರ ಇದ್ದಷ್ಟೂ ಪ್ರೀತಿ ಹೆಚ್ಚಾಗುತ್ತದೆ ಅಂಥ.. ನನಗೂಂತು ತಿಳಿಯದು ದೂರ ಇದ್ದಷ್ಟು ನಾನು ನಾನಾಗಿಲ್ಲ. ನಿನ್ನದೇ ದ್ಯಾನ.. ನಿನ್ನದೇ ಆ ಮುಗ್ಧ ಮುಖ..


ನನ್ನ ಮನೆಯಲ್ಲಿ ಎಲ್ಲಾರಿಗೂ ಏನೋ ಒಂದು ಅನುಮಾನ. ಯಾಕೇ ಇವನು ಹೀಗೆ ರಜಾವನ್ನು ಮಜಾ ಮಾಡುವುದ ಬಿಟ್ಟು ಕೇವಲ ನಾಲ್ಕು ಗೋಡೆಯಲ್ಲಿ ಕಾಲ ಕಳೆಯುತ್ತಿರುವನಲ್ಲಾ ಎಂದು.


ನಿನ್ನ ಬಗ್ಗೆ ಇರುವ ಈಗಿನ ಒಂದೇ ಆಸೆ.. ನಿನ್ನ ನೋಡ ಬೇಕು ಮತ್ತು ನಿನ್ನ ಆ ಮುಂಗರುಳನ್ನು ಒಮ್ಮೆ ಅಂದು ನಾನು ಹಾಗೇ ಸುಮ್ಮನೇ ಸ್ಪರ್ಷಿಸಿದ ರೀತಿಯಲ್ಲಿ ಮೆಲ್ಲಗೆ ಹಿಂದಕ್ಕೆ ತೀಡಬೇಕು ಎಂದು. ನಿನ್ನ ಆ ಎರಡು ಎಳೆ ಕೇಶ ಮುಂದಕ್ಕೆ ಬಂದಾಗ ನೀನು ಸಾಕ್ಷತ್ ಅಪ್ಸರೆಯೇ ಸರಿ. ಆ ಸಮಯದಲ್ಲಿ ನಿನ್ನ ಕೈ ಗೊತ್ತಿಲ್ಲದ ರೀತಿಯಲ್ಲಿ ಹೋಗಿ ಅವುಗಳನ್ನು ನಿನ್ನ ಕಿವಿಯ ಹಿಂದಕ್ಕೆ ಸೇರಿಸುವಾಗ ಮನೋಲ್ಲಾಸವಾಗುತ್ತದೆ. ಹೇ ದೇವ ಎಂಥ ಸಮಯದಲ್ಲಿ ಈ ಸೌಂದರ್ಯದ ಪುತ್ಥಳಿಯನ್ನು ಸೃಷ್ಟಿಸಿದೇ ಎಂದು ನನಲ್ಲಿ ನಾನೇ ಕೇಳಿಕೊಳ್ಳೂತ್ತೇನೆ.


ನಿನ್ನನ್ನು ನಾನು ಯಾಕೇ ಇಷ್ಟಪಡುತ್ತೇನೆ ಎಂದು ಕೇಳಿಕೊಂಡರೆ ಸಾವಿರ ಕಾರಣಗಳನ್ನು ತೋರಿಸಬಹುದು. ನನ್ನ ಗೆಳೆಯರುಗಳು ಕೇಳುತ್ತಾರೆ... ಏ! ಬಿಡೋ ಅವಳ ಹಿಂದೆ ಯಾಕೇ ಬಿದ್ದಿಯಾ! ಅವಳಿಗಿಂಥ ಚೆನ್ನಾಗಿರುವವರು ಕಾಲೇಜು ತುಂಬ ಇದ್ದಾರೆ ಎನ್ನುತ್ತಾರೆ. ಆದರೆ ಅವರುಗಳಿಗೇನೂ ಗೊತ್ತು ಪ್ರೀತಿ ಹಾಗೆಲ್ಲಾ ಹೇಳಿ ಕೇಳಿ ವ್ಯವಹಾರಿಕವಾಗಿ ಹುಟ್ಟುವುದಿಲ್ಲ ಎಂಬುದು.


ನೀನೇ ಒಮ್ಮೆ ಹೇಳಿದ್ದೇ. ನನಗೆ ಹಲವರು ಹೀಗಾಗಲೇ ನನ್ನ ಪ್ರೇಮ ಭಿಕ್ಷೆಯನ್ನು ಕೇಳಿದ್ದರೂ.. ಮತ್ತು ಅವರೆಲ್ಲಾ ಯಾಕೆ ನನ್ನನ್ನು ಅಷ್ಟೊಂದು ಇಷ್ಟಪಡುತ್ತಾರೆ ಎಂಬುದನ್ನು. ನನಗೂ ತಿಳಿಯದು. ಅಷ್ಟೆಲ್ಲಾ ಮಂದಿಯ ಮಧ್ಯದಿಂದ ನನ್ನನ್ನೇ ಮಾತ್ರ ಹೇಗೆ ಪ್ರೀತಿಸಿದೆ. ಆ ಮೊದಲ ದಿನ..ಆ ಮೊದಲ ನೋಟ.. ಆ ಮೊದಲ ಮಾತು.. ಹೇಗೆ ಕ್ಷಣ ಮಾತ್ರದಲ್ಲಿಯೇ ಘಟಿಸಿತು ಅಲ್ಲವಾ? ಅದಕ್ಕೆ ಕಾಲಾಯ ತಸ್ಮಯಾ ನಮಃ!


ಆದಕ್ಕೆ ಹೇಳಬೇಕು. ಪ್ರೀತಿಯಾಗಲೀ.. ಒಳ್ಳೆಯದಾಗಲೀ..ಕೆಟ್ಟದಾಗಲೀ.. ಯಾರೂಬ್ಬರ ಅರಿವಿಗೂ ಬಾರದ ರೀತಿಯಲ್ಲಿ ತನ್ನ ಜಾದುವನ್ನು ಎಲ್ಲಿ ಎಲ್ಲಿ ಇಡಬೇಕು ಅಲ್ಲಿ ಕರಾರುವಕ್ಕಾಗಿ ಸ್ಥಾಪಿಸುತ್ತದೆ.


ನಾನು ಅಂದುಕೊಂಡಿದ್ದೇ ನಿನ್ನ ಹಾಗೆಯೇ ತೀರ ಸರಳತೆಯ ಹಳ್ಳಿಗಾಡಿನ.. ಸ್ಪಲ್ಪ ಮಾಡ್ರನ್ ಇದ್ದು.. ಸ್ಪಲ್ಪ ಓದಿದ್ದೂ.. ಪ್ರೀತಿಸುವವರನ್ನು ತಾನು ಪ್ರೀತಿಸುವಂತಿರುವ ಆ ನನ್ನ ಕನಸಿನ ರಾಣಿ ಯಾರಿರಬಹುದು ಎಂದು.
ನನಗೆ ಅನಿಸುತ್ತದೆ. ಅದೇಗೆ ಒಂದು ದಿನ ತಂದೆ ತಾಯಿಗಳು ಒಪ್ಪಿ ನಮ್ಮ ಒಪ್ಪಿಗೆಯನ್ನು ಒಂದೇ ಕ್ಷಣದಲ್ಲಿ ಕೇಳಿ ಎರಡು ಮನೆಯವರು ಓ.ಕೆ ಎಂದಾಕ್ಷಣದಿಂದ ಒತ್ತಾಯವಾಗಿ ಪರಸ್ಪರ ಪ್ರೀತಿಸಲೇಬೇಕು ಎಂದು ಪ್ರಾರಂಭಿಸುವ ಮದುವೆಯೆಂಬ ಕಟ್ಟಳೆ ಎಷ್ಟೊಂದು ಅಭಾಸ ಅಲ್ಲವಾ!


ಅದಕ್ಕೇ ಇರಬೇಕು ನಾನು ನನ್ನ ಯೌವನದ ದಿನಗಳಿಂದ ಅಂಥ ಮನೋಲತೆಗಾಗಿ ಶೋಧಿಸುತ್ತಿದ್ದಾಗ ನೀ ನನ್ನ ಹೃದಯ ಸಿಂಹಾಸನದ ಹತ್ತಿರವೇ ಹಾದು ಹೋದಾಗ.. ಇವಳೇ ಇರಬೇಕು. ಮಗಾ! ಬಿಡಬೇಡಾ ಟ್ರೈ ಮಾಡು ಅನಿಸಿದ್ದು. ಅದುವರೆಗೂ ಯಾರೂ ನಿನ್ನಷ್ಟು ನನ್ನನ್ನು ಇಂಪ್ರೇಸ್ ಮಾಡಿರಲಿಲ್ಲ.


ಹಾಗೆಯೇ ಸುಮ್ಮನೇ ನೋಡಿದರೇ ಹೇ ಇವಳು ಏನು ತಮಾಷೆಯಾ ಜಾಲಿ ಹುಡುಗಿ ಅಲ್ಲವಾ ಅನಿಸುತ್ತದೆ. ಅಂದು ಮೊದಲ ದಿನ ನಮ್ಮ ಕಾಲೇಜಿನ ಆ ಗುಲ್ ಮೋಹರ್ ಮರದ ನೆರಳಲ್ಲಿ ನೀನು ಆ ನಿನ್ನ ಗೆಳತಿಯರಾದ ಸೇವಂತಿ ಮತ್ತು ಸುಮತಿ ಜೊತೆ ನಿಂತಿದ್ದಾಗ ಇದು ಯಾರಪ್ಪ ಸೆಂಟರ್ ಆಪ್ ಆಟ್ರ್ಯಾಕ್ಷನ್ ಅನಿಸಿತ್ತು. ಮತ್ತು ಆ ನಿನ್ನ ತಿಳಿ ನೇರಳೆಯ ನೆರಗೆಯ ಲಂಗದಲ್ಲಿ ತುಂಬ ಸುಂದರವಾಗಿ ನಮ್ಮ ಸಂಸ್ಕೃತಿಯ ಹುಡುಗಿಯ ರೀತಿಯಲ್ಲಿ ತೀರ ಸರಳವಾಗಿ ಕಾಣಿಸಿದ್ದೇ. ನಿನಗೆ ಆ ಡ್ರೆಸ್ಸಿಂಗ್ ಸೆನ್ಸ್ ಯಾರಿಂದ ಬಂದಿದೆಯೋ ತಿಳಿಯದು. ಬಹುಶಃ ನಿಮ್ಮ ಅಮ್ಮನಿಂದ.. ಅಥವಾ ನಿಮ್ಮ ಅಕ್ಕನಿಂದ ಇರಬಹುದು... ಯಾಕೆಂದರೆ ನನಗೆ ತಿಳಿದಂತೆ ಹುಡುಗಿಯರು.. ಆದಷ್ಟು ತನ್ನ ಹತ್ತಿರದವರ ರೀತಿಯಲ್ಲಿ ಇರಬೇಕು ಎಂದು ಆಸೆ ಪಡುತ್ತಾರೆ.


ಅಂದು ನಾನು ನೀನು ಇಬ್ಬರೂ ತಮ್ಮ ತಮ್ಮ ಭಾವನೆಯನ್ನು ಹೇಳಿಕೊಂಡ ನಂತರ. ನೀನು ನಿನ್ನ ಓದಿನ ಬಗ್ಗೆ. ನಿನ್ನ ಮುಂದಿನ ಜೀವನದ ಬಗ್ಗೆ. ನನ್ನ ಬಗ್ಗೆ ನಾನು ಏನು ಮಾಡಬೇಕು. ಯಾವ ಓದನ್ನು ಮುಂದೆ ಓದಬೇಕು. ಅಲ್ಲಿಯವರೆಗೂ ಹೇಗೆ ನಾವುಗಳು ನಮ್ಮ ಪ್ರೇಮದ ದಿನಗಳನ್ನು ಕಳೆಯಬೇಕು ಇತ್ಯಾದಿ ಇತ್ಯಾದಿ... ವಿವರಗಳನ್ನು ಅದು ಹೇಗೆ ಆ ಕ್ಷಣದಲ್ಲಿ ನಿರ್ಧಿಷ್ಟವಾಗಿ ಯೋಚಿಸಿದೇ.. ಅಂದೇ ಗೊತ್ತಾಗಿದ್ದು. ಹುಡುಗಿ ತುಂಬ ಬುದ್ಧಿವಂತೆ! ಆ ವಯಸ್ಸಿನ ಹುಡುಗಿಯರು ಸುಮ್ಮನೇ ಚೆಲ್ಲು ಚೆಲ್ಲಾಗಿ ವರ್ತಿಸುತ್ತಾರೆ.


ಬದುಕಿನ ಬಗ್ಗೆ ಯಾವುದೇ ನಿರ್ಧಿಷ್ಟವಾದ ಗುರಿಯಿಲ್ಲದೇ ಲವ್, ಪಾರ್ಕ, ಬಾಯ್ ಪ್ರೇಂಡ್ಸ್ ಎಂದು ಸುಖಾ ಸುಮ್ಮನೇ ಸಮಯವನ್ನು ಕಾಲಹರಣ ಮಾಡುವುದೇ ಸುಖಿ ಜೀವನ ಎನ್ನುವ ಸ್ನೇಹಿತರ ಮಧ್ಯೆ ನೀನು ವಿಭಿನ್ನ ಅನಿಸಿತು. ಆಗ ನನಗೆ ಸ್ಪಲ್ಪ ಧೈರ್ಯವು ಬಂದಿತು.


ಯಾಕೆಂದರೇ ಲವ್ ಎಂದರೇ ಹಾಗೆ ಹೀಗೆ ಎಂದು ಅಲ್ಲಿ ಇಲ್ಲಿ ಓದಿದ್ದು, ಎಸ್. ಎಂ. ಎಸ್ ಗಳಲ್ಲಿ ಹುಡುಗನ ಜೀವನದಲ್ಲಿ ಹುಡುಗಿ ಬಂದರೇ ಅವನ ಜೀವನ ಅಂದೇ ಮುಕ್ತಾಯ.. ಇತ್ಯಾದಿ ಇತ್ಯಾದಿ ಲವ್ ಡಿಸ್ ಪಾಯಿಂಟ್ ಗಳನ್ನೇ ಗಮನಿಸುತ್ತಿದ್ದವನಿಗೆ ಆ ನಿನ್ನ ಭವಿಷ್ಯದ ಬಗೆಗಿನ ದೃಷ್ಟಿ ಕೋನ ಒಳ್ಳೆಯವಳನ್ನೇ ಆರಿಸಿದ್ದಿಯ ಗುರು ಬಿಡು ಅನಿಸಿತ್ತು.


ಅಲ್ಲವಾ! ಇಷ್ಟೊಂದು ವಿವರವಾದ ಮನದ ಭಾವನೆಗಳನ್ನು ಪತ್ರದ ಮುಖೇನವಲ್ಲದೇ ಇನ್ಯಾವುದರಲ್ಲೂ ಹರಿಯ ಬಿಡಲೂ ಸಾಧ್ಯವಿಲ್ಲ.


ನೋಡು ಈ ನಮ್ಮ ಯಾಂತ್ರಿಕ ವಸ್ತುಗಳಾದ ಪ್ರೀತಿಯ ಮೊಬೈಲ್ ಗಳು ಒಮ್ಮೂಮ್ಮೆ ಉಪಯೋಗಕ್ಕೆ ಬಾರದವಾಗುತ್ತವೆ. ಪುನಃ ನಮ್ಮ ಹಿರಿಯರು ತಮ್ಮ ಪ್ರೇಮ ಸಂದೇಶವನ್ನು ತಲುಪಿಸಲು ಉಪಯೋಗಿಸುತ್ತಿದ್ದ ಈ ಪತ್ರಗಳೇ ಗಟ್ಟಿ. ಇನ್ನೂ ಮೂರು ದಿನಗಳು ಕಳೆದರೇ ನೀನು ನನ್ನ ಸೇರಬಹುದು. ಆ ಕ್ಷಣಕ್ಕಾಗಿ ಕಾಯುತ್ತಿರುವೇ. ಈ ನನ್ನ ಮನ ತಲ್ಲಣದ ಪತ್ರ ಕಂಡು ಗಾಬರಿಯೇನೂ ಬೇಡ. ಯಾಕೆಂದರೇ ಕಳೆದ ಎರಡೂ ವಾರದಿಂದ ಪ್ರತಿ ರಾತ್ರಿ ಬೆಳಂದಿಗಳ ಹುಣ್ಣಿಮೆ ಚಂದ್ರಾನೋಪಾದಿಯಲ್ಲಿ ಬೆಳದಿಂಗಳ ಬಾಲೆಯಾಗಿ ನನ್ನ ಮನದ ವಿವಿಧ ನರ್ತನಕ್ಕೆ ಸಾಥ್ ಕೊಡುತ್ತಿದ್ದಿಯ. ಈ ರೀತಿಯ ಅವಕಾಶ ಮತ್ಯಾರಿಗೇ ಸಿಗುತ್ತದೆ ಅಲ್ಲವಾ! ಗೊತ್ತಿಲ್ಲ ನಿನಗೂ ಇದೇ ರೀತಿಯ ಫೀಲಿಂಗ್ ಇರುವುದಾ! ಬಂದಾಗ ಅದೇ ಮಾತನ್ನಾಡೋಣ.


ನಿನಗಾಗಿ ಕಾಯುತ್ತಿರುವ ನಿನ್ನ ಪ್ರೀತಿಯ ಚಿರಂತನ್!!

ಭಾನುವಾರ, ನವೆಂಬರ್ 21, 2010

ನೆನಪುಗಳ ಮಾತು ಮಧುರ..



ನೆನಪುಗಳು ಹಾಗೆಯೇ. ಯಾವ ರೀತಿಯಲ್ಲಿ ಮನದಲ್ಲಿ ಮೀಟುತ್ತವೆಯೋ ಹೇಳಲು ಬರುವುದಿಲ್ಲ. ಅವುಗಳ ಉಗಮಕ್ಕೆ ಕಾರಣೀಭೂತವಾದ ಯಾವುದಾದರೂ ಒಂದು ಮಾತು, ಘಟನೆ, ಓದಿನ ಸಾಲು,ವ್ಯಕ್ತಿಯ ಚಿತ್ರ, ಕವನದ ಸಾಲು, ನೋಡಿದ ಚಲಚಿತ್ರದ ತುಣುಕು ಯಾವುದಾದರೂ ಇರಬಹುದು. ತಾವು ಕಳೆದ ಸುಖಿಸಿದ ಸುಖಿ ದಿನಗಳನ್ನು ಅಥಾವ ದುಃಖಿ ದಿನಗಳನ್ನು ಆ ಸಂದರ್ಭದ ಸ್ಥಾಯಿಗೆ ನಮ್ಮನ್ನು ಕರೆದುಕೊಂಡು ಹೋಗಿಬಿಡುತ್ತವೆ. ಅವುಗಳಿಗೆ ಅಂಥ ತಾಕತ್ತು ಇರುತ್ತದೆ.

ಆಗಲೇ ಇರಬೇಕು ನಾವು ಓದುವ ಕಥೆ, ನೋಡುವ ಚಿತ್ರ, ಕೇಳುವ ಹಾಡು, ಮಾತನ್ನಾಡುವ ಮಾತು ನಮ್ಮ ಮನ ಮುಟ್ಟುವುದು ಮತ್ತು ಅದು ತುಂಬ ಇಷ್ಟವಾಗುವುದು. ಅದು ನಮ್ಮ ನೆನಪನ್ನು ಕೆಣಕಬೇಕು ಮತ್ತು ಆ ನೆನಪಿನ ಮೆರವಣಿಗೆಯನ್ನು ಕಾಣುವಂತೆ ಮಾಡು ಜಾದುತನವನ್ನು ಹೊಂದಿರಬೇಕು. ಆಗ ಮಾತ್ರ ಅದೊಂದು ಗಟ್ಟಿ ವಸ್ತುವಾಗಿರುತ್ತದೆ.

ನಾವು ನಮ್ಮ ಬಿಡುವಿನ ವೇಳೆ ನಮ್ಮ ಮನಸ್ಸಿನ ಬೋರ್ ಹೋಗಿಸಬೇಕು ಎಂದರೇ ಯಾವುದಾದರೂ ಸೃಜಶೀಲವಾದ ಹೊಸತನದ ಘಳಿಗೆಗಾಗಿ ಕಾತರಿಸುತ್ತೇವೆ. ಅಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವ ನಮ್ಮ ಸಂತೋಷ ಅಥವಾ ನಮ್ಮ ದುಃಖಗಳನ್ನು, ಕಳೆದು ಹೋದ ಕ್ಷಣಗಳ ಪುನರ್ ಮೆಲುಕು ಹಾಕಿಕೊಳ್ಳುವ ಕ್ಷಣಕ್ಕಾಗಿ ಕಾತರಿಸುತ್ತೇವೆ. ಅವುಗಳನ್ನು ಇಂದಿನ ಈ ಕಲಾ ಪರಿಕರಗಳಾದ ಯಾವುದಾದರೂ ಒಂದು ಮಾಧ್ಯಮದ ಮೂಲಕ ಪುನಃ ನಮ್ಮ ಇತಿಹಾಸದಲ್ಲಿ ಕಂಡ ಕ್ಷಣಗಳ ನೆನಪನ್ನು ಹೊಂದಿಸಿಕೊಂಡು ಇಂದು ನಲಿಯುತ್ತಾ ಇರುತ್ತೇವೆ.

ಇಂದು ಕಂಡ ಈ ಕ್ಷಣಗಳ ಸಂತಸವನ್ನು ಮನದ ಒಂದು ಮೂಲೆಯಲ್ಲಿ ಹಾಗೆಯೇ ಅಚ್ಚು ಮಾಡಿ ಇಟ್ಟು ಇದನ್ನು ಪುನಃ ಎಂದಾದರೂ ಒಂದು ದಿನ ಮತ್ತೊಂದು ಬಗೆಯಲ್ಲಿ ಮೆಲಕು ಹಾಕಿಕೊಳ್ಳುತ್ತಾ ಪುನಃ ಸಂತೋಷಿಸುತ್ತೇವೆ. ಈ ನಮ್ಮ ಮಾನವ ಜನ್ಮಕ್ಕೆ ಮಾತ್ರ ಇಂಥ ಒಂದು ರೀತಿಯ ಬಹು ಅಮೊಲ್ಯ ವರದಾನವನ್ನು ಆ ಭಗವಂತ ಕರುಣಿಸಿದ್ದಾನೆ ಎಂದರೇ ತಪ್ಪಾಗುವುದಿಲ್ಲ. ಇದೊಂದೇ ಮನುಷ್ಯನನ್ನು ಉಳಿದ ಎಲ್ಲಾ ಪ್ರಾಣಿಗಳ ಜಗತ್ತಿನಿಂದ ಬೇರೆ ಮಾಡಿ ಇಟ್ಟಿರುವುದು.

ಮನುಷ್ಯ ತಾನು ಬೆಳೆಯುತ್ತಾ ಬೆಳೆಯುತ್ತಾ ತನ್ನ ಜೀವನದ ಹಲವಾರು ಅಮೋಲ್ಯವಾದ ಕ್ಷಣಗಳ ಹನಿಗಳನ್ನು ತನ್ನ ಅನುಭವ ಎಂಬ ಮೂಸೆಯಲ್ಲಿ ಶೇಕರಿಸಿಕೊಂಡು ಜೀವನದ ಪ್ರಯಾಣವನ್ನು ಬೆಳೆಸುತ್ತಾನೆ. ಅಲ್ಲಿ ಅವನಿಗೆ ಸಿಗುವ ಯಾವುದೇ ಕ್ಷಣಗಳಾಗಿರಬಹುದು. ನೋವು, ನಲಿವು, ಸ್ನೇಹ, ಬಂದುತ್ವ, ಕಷ್ಟ, ಸಂತಸ, ಸಿಟ್ಟು, ಸೇಡವು, ಕರುಣೆ, ಕಲಿಯುವಿಕೆ ಇತ್ಯಾದಿ. ಹೀಗೆ ನಾನಾ ರೀತಿಯ ವಿವಿಧ ಬಗೆಯ ಜೀವನ ಪಾಠಗಳ ಸರಮಾಲೆಯ ನೆನಪಿನ ಗೊಂಚಲನ್ನೇ ತನ್ನಲ್ಲಿಟ್ಟುಕೊಂಡಿರುತ್ತಾನೆ. ಅದಕ್ಕೆ ಹೇಳುತ್ತಾರೆ.. ನೆನಪುಗಳ ಮಾತು ಮಧುರ...

ತಾನು ಕಂಡುಂಡ ಆ ಕ್ಷಣಗಳ ಖಜಾನೆಯನ್ನು ಅವನು ಯಾವಾಗಲಾದರೂ ಪುನಃ ಸಮಯ ಸಿಕ್ಕಾಗ ತೆರೆದು ನೋಡುವ ಕ್ಷಣಕ್ಕಾಗಿ ಕಾತರಿಸುತ್ತಾ ಇರುತ್ತಾನೆ. ಕಾತರಿಸುತ್ತಲೇ ಇರಬೇಕು. ಯಾಕೆಂದರೇ ಅವನು ಮನುಷ್ಯ. ಅವನಿಗೆ ಅವನು ಅನುಭವಿಸಿದ ಅನುಭವದ ಘಳಿಗೆಗಳು ಅವುಗಳು ಎಂಥವೇ ಆಗಿರಲಿ ಅವನಿಗೆ ಅವುಗಳು ಸುವರ್ಣಪುತ್ಥಳಿಗಳೇ ಸರಿ. ಅವನು ಅನುಭವಿಸಿದ ಕಟ್ಟ ಕಡೆಯ, ಕೀಳದ ಒಂದು ಚಿಕ್ಕ ಅವಮಾನವನ್ನು ಅವನು ಯಾವಾಗಲಾದರೂ ಪುನಃ ಹಿಂತಿರುಗಿ ನೋಡಬಯಸುತ್ತಾನೆ. ಅವುಗಳನ್ನು ಪುನಃ ಶೃತಿಯಂತೆ ಮೀಟುವ ಕಲಾ ಪ್ರಕಾರಗಳೇ ಮನುಷ್ಯನಿಗೆ ಮಾತ್ರವೇನೋ ಎಂದು ಇರುವ ಕಲಾ ಪ್ರಕಾರಗಳಾದ ಸಂಗೀತ, ಸಾಹಿತ್ಯ, ನೃತ್ಯ, ಚಲನಚಿತ್ರ ಮಾದ್ಯಮಗಳು.

ಈ ಮೇಲಿನ ಯಾವುದಾದರೂ ಒಂದರಲ್ಲಿ ಒಬ್ಬ ವ್ಯಕ್ತಿಗೆ ಅಸಕ್ತಿ ಇರಲೇ ಬೇಕು. ಇದ್ದೇ ಇರುತ್ತದೆ. ಯಾಕೆಂದರೇ ಮನುಷ್ಯ ತಾನು ಆರೋಗ್ಯಕರವಾಗಿ ಮುಂದೆ ಬೆಳೆಯಬೇಕೆಂದರೆ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ತನ್ನನ್ನು ತಾನು ತೋಡಗಿಸಿಕೊಂಡಿರಲೇಬೇಕು. ತನ್ನ ಬಿಡುವಿನ ವೇಳೆ ಅದರಲ್ಲಿ ತಾನು ಮುಳುಗಿ ಹೋಗಲೇಬೇಕು ಎಂದು ನಿತ್ಯ ಕಾತರಿಸುತ್ತಿರುತ್ತಾನೆ. ಯಾಕೆಂದರೇ ತಾನು ತನ್ನ ಗತ ದಿನದ ವೈಭಗಳನ್ನು ಪುನಃ ನೆನಪು ಮಾಡಿಕೊಳ್ಳಲು, ಪುನಃ ಮನದ ಪಟಲದಲ್ಲಿ ಅದರ ವೈಭವದ ಮೆರವಣಿಗೆಯನ್ನು ಕಂಡು ತನ್ನ ಅಂದಿನ ಆ ಸಮಯದ ವರ್ತನೆ, ತನ್ನ ಪಾತ್ರವನ್ನು ಪರಮಾರ್ಶೆ ಮಾಡಿಕೊಳ್ಳಲು ಇಷ್ಟಪಡುತ್ತಾನೆ.

ತಾನು ಅನುಭವಿಸುವ ಈಗಿನ ಈ ಕಲಾ ಮಾದ್ಯಮಗಳ ಪಾತ್ರಗಳಾದ ಕಥೆಯಲ್ಲಿನ ನಾಯಕ ನಾಯಕಿಯ ಜೀವನ, ಹಾಡಿನಲ್ಲಿ ಬರುವ ನಾಯಕನ ಕಷ್ಟದ ಸನ್ನಿವೇಶ, ಸಿನಿಮಾದಲ್ಲಿ ಬರುವ ಅಲ್ಲಿನ ಅತಿ ಮೆಚ್ಚುಗೆಯ ಸನ್ನಿವೇಶವನ್ನು ತಾನು ಕಂಡೂಂಡ ಕ್ಷಣಗಳ ಜೊತೆಗೆ ಹೊಲಿಸಿಕೊಂಡು ತುಂಬ ಮಹಾನಂದವನ್ನು ಆ ಕ್ಷಣದಲ್ಲಿ ಮೈಮೆರತು ತಾನು ಅಂದು ಹೀಗೆ ಮಾಡಿದ್ದೇ. ತನ್ನವಳು ನನಗೆ ಅಂದು ಇವಳಂತೆ ಮಾಡಿದ್ದಳು. ತಾನು ಅಂದು ಹಾಗೆ ಮಾಡಬಾರದಗಿತ್ತು... ಹೀಗೆ ನಾನಾ ರೀತಿಯ ಮನಸ್ಸಿನ ವ್ಯವಕಲನ ಸಂಕಲನಗಳನ್ನು ಮಾಡುತ್ತಾ ಮಾಡುತ್ತಾ.. ಮುಂದೆ ನಾನು ಹೇಗೆ ಬಾಳಬಹುದು. ಯಾವುದರಲ್ಲಿ ತಪ್ಪಾಯಿತು.. ಎನ್ನುತ್ತಾ ಅವನು ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ನಿತ್ಯ ಜೀವನದಲ್ಲಿ ಕಾಣಲು ಪ್ರಾರಂಭಿಸುತ್ತಾನೆ.

ನಮ್ಮ ಕಲಾಕರರು ಸಹ ತಾವು ಕಂಡುಕೊಂಡ ಜೀವನದ ಸತ್ಯಗಳನ್ನೇ ತಮ್ಮ ಕಲಾಪ್ರಕಾರಗಳಲ್ಲಿ ತರುವರು. ಯಾಕೆಂದರೇ ವ್ಯಕ್ತಿ ತಾನು ಎಷ್ಟೇ ಬೆಳೆದು ನಾನು ಬೇರೆ ಎಂದು ಹೇಳಲು ಬರುವುದಿಲ್ಲ. ತಾನುಂಡ ನೋವು, ನಲಿವುಗಳನ್ನು ಕಂಡ ಪೆಟ್ಟುಗಳನ್ನೇ ತನ್ನ ಕಲ್ಪನೆಯ ಮಾದ್ಯಮದಲ್ಲಿ ವಿವಿಧ ಪಾತ್ರಗಳ ಮೂಲಕವೋ, ತಾನೇ ಒಂದು ಪ್ರತೀಕವಾಗಿ ನಿಂತೂ ಅಲ್ಲಿ ಪರಮಾರ್ಶಿಸಿ ತಾನು ಗೊತ್ತು ಮಾಡಿಕೊಂಡ ಒಂದು ನಿಲುವನ್ನೋ, ಆದರ್ಶವನ್ನೋ ಇದು ಹೀಗೆ ಇರಬೇಕಾಗಿತ್ತು ಎಂದು ನಿರೂಪಿಸುತ್ತಾನೆ. ಅದಕ್ಕೆ ಪೂರಕವಾಗುವುದು ಅವನು ತನ್ನ ಜೊತೆಯವರೊಡನೆ ತನ್ನ ಜೀವನದಲ್ಲಿನ ಗತ ಸಮಯದ ಸನ್ನಿವೇಶಗಳೇ. ಅವುಗಳನ್ನು ಬಿಟ್ಟು ಅವನು ಬೇರೆಯದನ್ನು ಬರೆಯಲು, ಹಾಡಲು, ಚಿತ್ರಿಸಲು ಮತ್ತು ಚಿಂತಿಸಲು ಎಂದೂ ಸಾಧ್ಯವಿಲ್ಲ.

ಅದ್ದರಿಂದಲೇ ಅಂಥ ಸ್ಪರ್ಷವನ್ನು ಹೊಂದಿರುವ ಯಾವುದೇ ಸಿನಿಮಾವಾಗಲಿ, ಕಥೆಯಾಗಲಿ, ಕವಿತೆಯಾಗಲಿ ತುಂಬ ಸುಲಭವಾಗಿ ನಮ್ಮನ್ನು ತುಂಬ ಕಾಡುತ್ತವೆ. ಯಾಕೆಂದರೆ ಅಲ್ಲಿ ನಾವು ಅನುಭವಿಸಿದ ನೋವಿರುತ್ತದೆ, ವಿರಹವಿರುತ್ತದೆ, ಕಷ್ಟವಿರುತ್ತದೆ, ಪ್ರೀತಿಯಿರುತ್ತದೆ ಮತ್ತು ನಮ್ಮಷ್ಟೇ ಸ್ಥಾನವನ್ನು ಮಾನವನ್ನು ಅಲ್ಲಿನ ನಾಯಕ-ನಾಯಕಿ ಹೊಂದಿರುತ್ತವೆ. ಅಂಥವುಗಳೇ ಹೆಚ್ಚು ಕಾಲ ಜನ ಮಾನಸದಲ್ಲಿ ನೆಲೆಯಾಗುವುದು.

ಅದಕ್ಕೆ ಹೇಳುವುದು ಜೀವನವೆಂಬುದು ಒಂದು ವಿಶ್ವವಿದ್ಯಾನಿಲಯ ಇಲ್ಲಿ ಕಲಿಕೆಗೆ ಎಂದು ಕೂನೆಯಿಲ್ಲ. ಮನುಷ್ಯನ ಕೂನೆ ಉಸಿರು ಇರುವವರೆಗೂ ತನ್ನ ನಿತ್ಯ ಜೀವನದಲ್ಲಿ ಇರುವ ಗೆಳೆಯರು-ಗೆಳೆತಿಯರು, ತಂದೆ - ತಾಯಂದಿರು, ಅಣ್ಣ-ಅಕ್ಕಂದಿರುಗಳು, ಹಿರಿಯರು-ಕಿರಿಯರುಗಳು, ನೆರೆಹೊರೆಯರು, ಅಪರಿಚಿತರು -ಪರಿಚಿತರು, ನನ್ನ ಭಾಷೆ - ಪರ ಭಾಷೆ ಹೀಗೆ ವಿವಿಧ ಭಾವನ ಸಂಘರ್ಷದಲ್ಲಿ ತನ್ನತನವನ್ನು ಮೇಲಾಗಿ ತನ್ನ ಮನುಷ್ಯತ್ವದ ಮೇಲ್ಮೆಯನ್ನು ಕಂಡುಕೊಳ್ಳಲು ಎಂದೂ ಸಹ ಪ್ರಯತ್ನಿಸುತ್ತಾ ಇರುತ್ತಲೇ ನಡೆಯುತ್ತಾನೆ.

ಮೇಲೆ ಹೇಳಿದ ಆ ಒಂದೊಂದು ಸಂಬಂಧದಲ್ಲಿನ ಅಂತರತ್ವ ಸ್ವಲ್ಪ ಅದಲು ಬದಲಾದರೂ ಇಡೀ ವ್ಯಕ್ತಿಯ ಜೀವನ ಅಪಾಯದ ಸನ್ನಿವೇಶಕ್ಕೆ ಬಂದು ನಿಲ್ಲುತ್ತದೆ. ಅದ್ದರಿಂದ ತಾನು ನಿತ್ಯ ನೋಡುವ ಕೇಳುವ ಉತ್ತಮ ವಿಚಾರಗಳು ತನ್ನ ಜೀವನದ ಕೆಟ್ಟ ಘಳಿಗಳಿಗೆ ಒಳ್ಳೆಯತನದ ಸ್ಪರ್ಷವನ್ನು, ಉನ್ನತ ಘಳಿಗೆಗಳಿಗೆ ಜೀವನದ ಕಠೋರ ಸತ್ಯಗಳು ಇನ್ನೂ ಗಟ್ಟಿ ಕ್ಷಣಗಳಾಗಿ ಅತ್ಯುತ್ತಮ ಹಂತಕ್ಕೆ ಕೊಂಡು ಹೋಗುತ್ತವೆ. ಇದೇ ಪ್ರಯತ್ನ ನಿರಂತರ ಇರಬೇಕು ಎಂದು ಹಾರೈಸೋಣ.

ಗುರುವಾರ, ನವೆಂಬರ್ 18, 2010

ಕಾಮ-ವಾಮ-ರಾಜ ಮಾರ್ಗ


ಕಳೆದ ಭಾನುವಾರದ ಸಂಜೆ ರವೀಂದ್ರ ಕಲಾ ಕ್ಷೇತ್ರ. ಮುಖ್ಯ ದ್ವಾರದ ಇಕ್ಕೆಲೆಗಳಲ್ಲಿ ಇಟ್ಟ ನಮ್ಮ ಮಂತ್ರಿ ರೇಣುಕಾಚಾರ್ಯರ ಬೆತ್ತಲೆಯ ನರ್ಸ್ ಜೊತೆಗಿನ ವಿವಿಧ ಭಂಗಿಯ ರಂಗು ರಂಗಿನ ಅಳೆತ್ತರದ ಚಿತ್ರಗಳು. ಒಂದು ಕ್ಷಣ ನಿಮ್ಮನ್ನು ತಬ್ಬಿಬ್ಬು ಮಾಡಿದಂತೆ ಅನಿಸುತ್ತದೆ. ಆದರೇ ಆ ಕ್ಷಣ ನೀವು ಯಾರ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎಂಬುದನ್ನು ನೆನಪಿಸಿಕೊಂಡರೆ ಸಾಕು.ಅದು ರವಿಯವರ ವಿಭಿನ್ನವಾದ ಶೈಲಿ. ಸಮಾಜಕ್ಕೆ ತೀರ ಹಸಿ ಹಸಿ ಸತ್ಯವನ್ನು ತಮ್ಮ ಪತ್ರಿಕೆಯ ಮೂಲಕ ತಿಳಿಸಿದ ಧೈರ್ಯವಂತರಲ್ಲವೇ. ಅದಕ್ಕೆ ಸಾವಿರಾರು ಓದುಗರ ಒಡೆಯ.

ಒಳಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರಙ್ಞವಂತ ಹಾಯ್ ಬೆಂಗಳೂರು ಓದುಗ ಸಮೊಹ. ಎದುರಿಗೆ ಜಗಮಗಿಸುತ್ತಿರುವ "ಎಂಥಾ ಪಕ್ಷವಯ್ಯಾ...." ವರ್ಣಮಯ ವೇದಿಕೆ. ಅಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಬಿ. ಆರ್. ಛಾಯರವರ ಬ್ಯಾಂಡ್ ನಿಂದ ಇಂಪಾದ ಸಂಗೀತ ರಸ ಸಂಜೇ. ಕನ್ನಡದ ಪ್ರಮುಖ ಕವಿಗಳ ಭಾವ ಗೀತೆಗಳ ತರಂಗ. ಪ್ರಸಿದ್ಧ ಗಾಯಕ ವಿಷ್ಣುರವರಿಂದ ಕನ್ನಡದ ಚಿತ್ರಗೀತೆಗಳ ರಸದೌತಣ. ವೀಕೆಂಡಗೆ ಮಸ್ತಿಯಾಗಿತ್ತು.

ಈ ಸಮಾರಂಭ ಕನ್ನಡ ಪುಸ್ತಕವೊಂದರ ಬಿಡುಗಡೆಯ ಸಮಾರಂಭವೆಂದರೇ ಯಾರು ನಂಬುವುದಕ್ಕಾಗುವುದಿಲ್ಲ. ಅಲ್ಲವಾ? ಹೌದು! ಅದು ಬೆಂಗಳೂರಿನಲ್ಲಿ ಕನ್ನಡ ಪುಸ್ತಕಗಳ ಬಿಡುಗಡೆಯೆಂದರೇ ಕೇವಲ ಬೆರಳೆಣಿಕೆಯ ಸಹೃದಯರನ್ನು ಕಾಣಬಹುದು. ಅದರೇ ಇಲ್ಲಿ ತದ್ವಿರುದ್ಧ. ಅದಕ್ಕೆ ಕಾರಣ ರವಿ ಬೆಳೆಗೆರೆ ಮತ್ತು ರವಿ ಬೆಳೆಗೆರೆ ಅಷ್ಟೇ.

ಈಗಾಗಲೇ ತಮ್ಮ ಬರವಣಿಗೆಯ ಮೋಡಿಯಿಂದ ಕರ್ನಾಟಕದ ಒಂದು ಸಮೊಹವನ್ನೇ ತಮ್ಮ ಕಡೆಗೆ ಒಲಿಸಿಕೊಂಡಿದ್ದಾರೆ. ಪ್ರತಿ ಓದುಗನೂ ಅವರ ಯಾವುದೇ ಹೊಸ ಪುಸ್ತಕಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾನೆ.

ಅಂದು ಬಿಡುಗಡೆಗೆ ಸಿದ್ಧವಾಗಿದ್ದ ಎರಡು ಪುಸ್ತಕಗಳೇಂದರೆ "ಕಾಮರಾಜ ಮಾರ್ಗ" ಮತ್ತು "ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು". ಇಂದಿನ ನಮ್ಮ ಕರ್ನಾಟಕದ ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲಿ ತುಂಬ ಸೇನ್ಸ್ ಸೇಶನ್ ಊಂಟು ಮಾಡಿರುವ "ಕಾಮರಾಜ ಮಾರ್ಗ" ಕೃತಿ ದೇಶದಲ್ಲಿಯೇ ತಲ್ಲಣವುಂಟು ಮಾಡಿದರೂ ಆಶ್ಚರ್ಯವಿಲ್ಲ.

ಯಾಕೆಂದರೇ ಅಲ್ಲಿ ಇರುವುದು ಕಲ್ಪನೆಯಾದರೂ ಕಾದಂಬರಿಯ ತುಂಬ ನಮ್ಮ ಕಣ್ಣ ಮುಂದೆ ಇಂದು ನಾಟಕವಾಡುತ್ತಿರುವ ಎಲ್ಲಾ ನಮ್ಮ ರಾಜಕಾರಣಿಗಳ ನೃತ್ಯಗಳು, ತೆವಲುಗಳು, ನೀಚತನಗಳು, ಕರ್ಮಗಳು, ಅನ್ಯಾಯಗಳು,ಕತ್ತೆ ವ್ಯಾಪಾರಗಳು,ವಾಮತನಗಳು ಮತ್ತು ಅವುಗಳ ಬೆತ್ತಲೆಗಳು ೪೦೦ ಪುಟಗಳ ತುಂಬ ಸವಿಸ್ತಾರವಾಗಿ ನಿರೂಪಿತವಗಿಯೇನೋ ಎನಿಸಿ ದಿಗ್ಬ್ರಮೆ ಗೊಳಿಸಿದರು ಅಚ್ಚರಿಯಿಲ್ಲ.

ಅಂದು ಈ ಮುಖ್ಯ ಸಮಾರಂಭಕ್ಕೆ ವೇದಿಕೆಯ ಮೇಲೆ ಆಸೀನಾರಾದವರೆಂದರೇ ಮಾಜಿ ಮುಖ್ಯ ಮಂತ್ರಿ ಎಂ.ಪಿ ಪ್ರಕಾಶ್, ರಮೇಶ್ ಕುಮಾರ್, ವಿಶ್ವೇಶ್ವರಭಟ್, ರವಿಬೆಳೆಗೆರೆ ಮತ್ತು ಚೇತನ ಬೆಳೆಗೆರೆ.

ತುಂಬ ಸರಳವಾದ ಸಮಾರಂಭದಲ್ಲಿ ಮುಖ್ಯ ಆಕರ್ಶಣೆಯೆಂದರೆ ಈ ಪುಸ್ತಕದ ಕತೃ ರವಿ ಮತ್ತು ರವಿ. ಓದುಗರ ಕಿವಿಗಳು ಅವರು ಈ ನಮ್ಮ ಪ್ರಸ್ತುತ ರಾಜಕೀಯದ ಹೊಲಸಿನ ಬಗ್ಗೆ ಹೇಗೆ ಮಾತನ್ನಾಡುತ್ತಾರೆ ಎಂಬುದರ ಕಡೆಗೆ ಕಿವಿಗೊಟ್ಟಿದ್ದರು ಅಷ್ಟೇ.

ಎಂ.ಪಿ.ಪ್ರಕಾಶ್ ರವರಿಂದ "ಕಾಮರಾಜ ಮಾರ್ಗ" ವಿಶ್ವೇಶ್ವರ ಭಟ್ ರವರಿಂದ "ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು" ಮತ್ತು ಚೇತನರವರ ಹೊಸ ಇಂಗ್ಲೀಷ್ ನಿಯತಕಾಲಿಕೆಯಾದ "ಸಿಟಿ ಬಜ್" ಲೋಕಾರ್ಪಣೆಗೊಂಡವು.

ಎಂ. ಪಿ. ಪ್ರಕಾಶ್ ತಮ್ಮ ಕಾಯಿಲೆಯಿಂದ ಬಹುಮುಖ ಸೋರಗಿದಂತೆ ಕಂಡರು ತಮ್ಮ ಒಳ್ಳೆಯತನ ಮತ್ತು ವಿಭಿನ್ನವಾದ ತಮ್ಮ ರಾಜಕೀಯತನದಿಂದ ಕೇಲವೇ ಮುಖ್ಯ ಕ್ಲೀನ್ ನಾಯಕರಾಗಿ ಸಭೆಯಲ್ಲಿ ಪ್ರಕಾಶಿಸುತ್ತಾ ಪುಸ್ತಕ ಬಿಡುಗಡೆಯ ಪ್ರಸ್ತಾವಿಕ ನುಡಿಗಳನ್ನು ರವಿಯವರನ್ನು ಹೊಗಳಲು ಮೀಸಲಿಟ್ಟರು.

ವಿಶ್ವೇಶ್ವರ ಭಟ್ ಪುಸ್ತಕದ ಮುನ್ನುಡಿಯನ್ನು ಬರೆದಿರುವ ಕಾರಣ ಪುಸ್ತಕದ ಒಟ್ಟು ತಂತುವನ್ನು ಚೊಕ್ಕವಾಗಿ ಪ್ರೇಕ್ಷಕರಿಗೆ ಕಟ್ಟಿ ಕೊಟ್ಟರು. ಏನೇ ಆಗಲಿ ಅವರು ಬರಹಗಾರರಲ್ಲವೇ. ಅವರು ಹೇಳಿದ ಅಂದಿನ ನುಡಿಗಳಲ್ಲಿ ಮನ ಕೊರದಿದ್ದೇಂದರೆ. "ಇಲ್ಲಿ ಈ ಸಮಾರಂಭಕ್ಕೆ ಕೇವಲ ಮಾಜಿ ರಾಜಕೀಯ ಪಟುಗಳನ್ನು ರವಿ ಆಹ್ವಾನಿಸಿದ್ದಾರೆ. ಹಾಲಿಗಳು ರಾಜಕಾರಣಿಗಳು ಬಂದಿದ್ದರೆ ತುಂಬ ಅರ್ಥವಂತಿಕೆಯಿರುತ್ತಿತ್ತು. ಆದರೆ ಹಾಲಿಯಲ್ಲಿ ಯಾರಾದರೂ ಒಬ್ಬರೂ ಎಸ್. ಸುರೇಶ್ ಕುಮಾರ್ ನ್ನು ಬಿಟ್ಟು ಉತ್ತಮ ಎನ್ನುವ ಮಂತ್ರಿ, ಶಾಶಕರು ಕರ್ನಾಟದಲ್ಲಿ ಇದ್ದಾರೆಯೇ?" ಹೌದು! ನಾವುಗಳು ದುರ್ಬಿನ್ ಹಾಕಿಕೊಂಡು ಹುಡುಕಿದರೂ ಒಬ್ಬೇಒಬ್ಬ ಸಚ್ಚಾರಿತ್ರವಂತ ರಾಜಕೀಯ ನಾಯಕ ನಮ್ಮ ಕಣ್ಣಿಗೆ ಸಿಗುವುದಿಲ್ಲ.

ಹಾಗಾದರೇ ನಮ್ಮ ಕರ್ನಾಟಕದಲ್ಲಿ ಎಂಥವರು ಸರ್ಕಾರದ ಆಡಳಿತ ನಡೆಸುತ್ತಿದ್ದಾರೆ ಎಂದು ನಾವುಗಳು ಕಳೆದ ತಿಂಗಳು ಪೂರಾ ಲೈವ್ ನಲ್ಲಿ ನೋಡಿದ್ದೇವೆ. ಒಂದಿಷ್ಟು ಭರವಸೆಯನ್ನು ಕೊಡಲಾರದ ಸ್ಥಿತಿಗೆ ರಾಜ್ಯ ರಾಜಕಾರಣವನ್ನು ತಂದು ನಿಲ್ಲಿಸಿದ್ದಾರೆ.

ಪುಸ್ತಕದ ಬಗ್ಗೆ ಹೇಳುತ್ತಾ "ರವಿ ಈ ಪುಸ್ತದಲ್ಲಿ ಸೇಕ್ಸ್ ನ್ನು ಇಷ್ಟೊಂದು ವೈಭವಿಕರಿಸುವ ಅವಶ್ಯಕತೆ ಇತ್ತಾ?" ಎಂಬುದು. ಆದರೆ ನಾವುಗಳು ಯಾವುದನ್ನು ಮಾತನ್ನಾಡಲೂ ತೀರ ಹಿಂಜರಿಯುತ್ತೇವೋ ಅದನ್ನೇ ನಮ್ಮ ಆದರ್ಶ ಜನ ನಾಯಕರು ಹಾದಿ ಬೀದಿಗಳಲ್ಲಿ ಮಾಡಿಕೊಂಡು. ಯಾವುದು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾಗಿತ್ತೋ ಅದು ತಮ್ಮ ವೀಪರಿತವಾದ ಭಂಗಿಗಳ ವರ್ಣಮಯ ಚಿತ್ರಗಳು ಮೀಡಿಯಾಗಳಲ್ಲಿ ತೋರಿಸುತ್ತಾರೆ. ಆಮೇಲೆ ಯಾವ ಮುಖವಿಟ್ಟುಕೊಂಡು ಜನರ ಮತವನ್ನು ಕೇಳಿ ಆರಿಸಿಕೊಂಡು ಸಹ ಬಂದು ಬಿಡುತ್ತಾರೆ.. ಮತ್ತೇ ನಾನು ಮುಖ್ಯಮಂತ್ರಿ, ಮಂತ್ರಿ ಸ್ಥಾನಕ್ಕೆ ಸ್ಪರ್ಧಿ ಎಂದು ಚಿಂದಿ ಚಿಂದಿ ಹೇಳಿಕೆಗಳನ್ನು ಪತ್ರಿಕೆ, ಟಿ. ವಿ ಮುಂದೆ ಕೊಡುತ್ತಾರೆ. ಇವರಿಗೇನಾದರೂ ಕಿಂಚಿತ್ತು ಮಾನ-ಮರ್ಯಾದೆ, ಅತ್ಮ ಸಾಕ್ಷಿ ಈ ಪದಗಳ ಮಹತ್ವ ತಿಳಿದಿದೇಯಾ ಎಂದರೇ? ಇಲ್ಲಾ ಎನ್ನಲೇಬೇಕು. ಯಾಕೆಂದರೇ ಅವುಗಳ ಮೀತಿಗೆ ಇವರುಗಳೂ ಎಂದೂ ಸಹ ಬರುವುದಿಲ್ಲ.

ಈ ನಿಟ್ಟಿನಲ್ಲಿ ಭಟ್ಟರ ನುಡಿಗಳು ನಮ್ಮ ವಿದ್ಯಾವಂತ ಪ್ರೇಕ್ಷಕರ ಕಣ್ಣು ತೆರೆಯಿಸಲು ಸಫಲವಾಯಿತು.

ರಮೇಶ್ ಕುಮಾರರು ಹೆಚ್ಚು ಭಾವುಕಾರಾಗಿದ್ದರೂ ಅಂದು ಅನಿಸುತ್ತದೆ. ಇಂದಿನ ರಾಜಕೀಯದ ವೈಚಿತ್ರ್ಯವನ್ನು ನೆನಪು ಮಾಡಿಕೊಂಡು ತುಂಬ ವ್ಯಥೆಪಟ್ಟರು. ಅವರ ಮಾತಿನಲ್ಲಿ ಉನ್ನತವಾದ ಸಮಾಜ ನಿರ್ಮಾಣದ ಕನಸು ಕಂಡು ಬರುತ್ತಿತ್ತು. ಬಡವರ ಬಗ್ಗೆ ಅವರ ಕಾಳಜಿ. ಇಂದಿನ ನಮ್ಮ ರಾಜಕೀಯ ಪಕ್ಷಗಳ ಬಗ್ಗೆ. ಎಲ್ಲಾ ಪಕ್ಷಗಳು ತಮ್ಮ ಪಕ್ಷ ಬೇದವನ್ನು ಮರೆತು ಎಲ್ಲಾರು ಒಂದು ಕಡೆಯಿಂದ ಇಡಿ ಕರ್ನಾಟಕವನ್ನು ಲೋಟಿ ಮಾಡಲು ಕಂಕಣ ಬದ್ಧರಾಗಿರುವುದನ್ನು ನೋಡಿ ಮಮ್ಮಲು ಮರಗಿದರು.

ಬಡವನ ಬಗ್ಗೆ ಯಾರು ಕೇಳುವವರೆ ಇಲ್ಲ. ಮತ್ತು ರೈತನೇ ನಮ್ಮ ಇಂದಿನ ಈ ಪ್ರಜಾಪ್ರಭುತ್ವದ ಬೆನ್ನೆಲುಬು ಯಾಕೆಂದರೇ ಅವನೊಬ್ಬನೇ ಸರಿಯಾಗಿ ಮತವನ್ನು ಚಲಾಯಿಸುವುದು. ನಾವುಗಳು ನಗರ ಜೀವಿಗಳು ಅದರ ಸಹವಾಸವೇ ಬೇಡವೇನೋ ಎಂಬಂತೆ ಅಂದು ನಮ್ಮ ಮಸ್ತಿ ಮತ್ತು ಮಜಾದಲ್ಲಿ ಲೀನವಾಗಿ ಸರಿಯಾದ ಸರ್ಕಾರ, ಶಾಶಕರು, ನೇತಾರರು ಆರಿಸಿ ಬರದಿದ್ದಾಗ ಸುಖ ಸುಮ್ಮನೇ ನಮ್ಮಲ್ಲಿ ನಾವುಗಳು ಮಾತನ್ನಾಡಿ ಕೈ ಕೈ ಹಿಸಿಕೊಳ್ಳುತ್ತಾ.. ಅಲ್ಲಿ ಹೀಗೆ ಚೆನ್ನಾಗಿದೆ. ಇಲ್ಲೇನೊ ಕರ್ಮ ಎಲ್ಲಾ ಲೋಟಿ ಮಾಡುವವರೆ ಎಂದು ಪಶ್ಚತಾಪಪಡುತ್ತೇವೆ. ನಮ್ಮ ಕೈಯಲ್ಲಿ ಇರುವ ನಮ್ಮ ಬಹು ಮುಖ್ಯವಾದ ಮತದಾನ ಎಂಬ ಅಸ್ತ್ರವನ್ನು ಸರಿಯಾಗಿ ಬಳಸಿಕೊಂಡು ಯೋಗ್ಯ ವ್ಯಕ್ತಿಯನ್ನು ಆರಿಸುವ ಜವಬ್ದಾರಿ ನಮ್ಮ ನಿಮ್ಮೇಲ್ಲಾರ ಹೊಣೆಯೆಂಬುದನ್ನು ಹಲವಾರು ಅವರ ನೈಜ ಜೀವನ ಘಟನೆಗಳ ಮೊಲಕ ಮನದಟ್ಟು ಮಾಡಿಕೊಟ್ಟರು.

ನಗರಗಳಲ್ಲಿ ಸೊಳ್ಳೆಗಳೋಪಾದಿಯಲ್ಲಿ ಸ್ಥಾಪಿತವಾಗುತ್ತಿರುವ ಹೈಟೆಕ್ ಕ್ಲೀನಿಕ್ ಗಳು, ಜಿಮ್ ಗಳು, ಮಹಾ ಮಹಲ್ ಗಳು ಇತ್ಯಾದಿ ಯಾರಿಗಾಗಿ. ಬಡವರಿಗಂತು ಅವುಗಳ ನೆರಳಲ್ಲಿ ನಿಲ್ಲಲು ಸಹ ಅವಕಾಶಗಳಿಲ್ಲ.
ಬಡವ ಅಸರೆಗೆ ಇರುವ ತಾಣಗಳೆಂದರೆ ಅವೇ ಸರ್ಕಾರಿ ಆಸ್ಪತ್ರೆಗಳು, ನ್ಯಾಯಬೆಲೆ ಅಂಗಡಿಗಳು ಇತ್ಯಾದಿ. ಅದರೇ ಅಲ್ಲಿ ಅವರೂಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಸೇವೆ ಉಚಿತವಾಗಿ ಸಿಗುತ್ತಿದೆಯಾ.
ಹಣವಂತರಿಗೆ ಮಾತ್ರ ಆರೋಗ್ಯ ಅವರುಗಳು ಮಾತ್ರ ಈ ಭೂಮಿಯ ಮೇಲೆ ಜೀವಿಸಲೂ ಅರ್ಹರೇ? ಯಾರು ಕೇಳಬೇಕು.

ಈ ಎಲ್ಲಾ ಪ್ರಶ್ನೇಗಳಿಗೆ ಉತ್ತರ. ಸರಿಯಾದ ನಾಯಕರ ಉಗಮ. ನೀತಿವಂತ ನೇತಾರನ ಜನನ. ಬಡವರ ಪರ ಮನಸ್ಸಿರುವವನ ಆಯ್ಕೇ ನಮ್ಮಿಂದ ಆಗಬೇಕು. ಕೇವಲ ಒಂದು ದಿನದ ಸುಖಕ್ಕಾಗಿ. ಅವರು ಕೊಡುವ ಹೆಂಡ, ಹಣ, ಚಿನ್ನ, ಸೀರೆ ಮುಂತಾದ ಚೀಪಾದ ವಸ್ತುಗಳಿಗೆ ತಮ್ಮ ಅಮೋಲ್ಯವಾದ ಮತವನ್ನು ಮಾಡಿಕೊಳ್ಳುವುದನ್ನು ಬಿಡಬೇಕು. ನಾವುಗಳು ನಮ್ಮ ಮತವನ್ನು ಮಾರಿಕೊಂಡು ಅವರುಗಳನ್ನು ಆರಿಸಿಕೊಂಡರೆ. ಅವರುಗಳು ನಮ್ಮ ನಾಡನ್ನೇ ಹೊರದೇಶದವರಿಗೆ ಆಡ ಇಡುವವರು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ರವಿ ಬೆಳೆಗೆರೆಯವರ ಮಾತುಗಳನ್ನು ಕೇಳಲು ಕಾದು ಕುಳಿತಿದ್ದ ಅವರ ಓದುಗ ದೇವರುಗಳಿಗೆ ಅವರಿಂದ ನಿರಾಸೆಯೇನು ಆಗಲಿಲ್ಲ. ಅವರ ಒಂದೇ ಮಾತಿನಲ್ಲಿ ಹೇಳುವುದಾದರೇ ಇಂದಿನ ನಮ್ಮ ರಾಜಕಾರಣದ ಬಗ್ಗೆ ನಾನು ಏನು ಹೇಳಬೇಕು ಅದನ್ನೇಲ್ಲಾ ನನ್ನ "ಕಾಮರಾಜ ಮಾರ್ಗ" ಹೇಳುತ್ತದೆ. ಮತ್ತು ಇಂದು ನಡೆಯುತ್ತಿರುವ ಮೈನಿಂಗ ಮಾಫಿಯದ ಬಗ್ಗೆ ನಾವು ತಿಳಿದುಕೊಂಡಿರುವುದು ಅರೆಪಾವಷ್ಟೇ ಅದರ ಹಿಂದಿರುವ ಕಾಣದ ಕೈ ಮತ್ತು ಅದರ ಬೃಹತ್ ಜಾಲದ ಸವಿವರಗಳನ್ನು ನನ್ನ "ಅನಿಲ್ ಲಾಡ್.." ಪುಸ್ತಕ ಹೇಳುತ್ತದೆ ಎಂದರು.

ಹಾಗೆಯೇ! ಎಂ. ಎನ್. ಸಿ ಮತ್ತು ಸಾಪ್ಟವೇರ್ ಜಗತ್ತಿನ ಬಗ್ಗೆ ನಾವುಗಳು ಎಚ್ಚರದಿಂದ ಕಾಲು ಇಡಬೇಕಾದ ಸಂದರ್ಭ ಇದಾಗಿದೆ. ಮತ್ತು ಅಲ್ಲಿ ನಡೆಯುತ್ತಿರುವ ವ್ಯವಹಾರ ನಮ್ಮ ಮದ್ಯಮ ನಾಗರೀಕರಿಗೆ ದುಃಸಪ್ನವಾಗಿದೆ. ಮತ್ತು ನಾನು ಏನಾದರೂ ಮುಂದಿನ ಕಾದಂಬರಿ ಬರೆದರೆ ಅದು "ಸಾಪ್ಟವೇರ್" ಜಗತ್ತಿನ ಬಗ್ಗೆ ಇರುತ್ತದೆ. ಅದಕ್ಕಾಗಿ ದೇಶ ವಿದೇಶಗಳ ಬೇಟಿ ಮಾಡಬೇಕಾಗಿದೆ ಎಂದು ಹೇಳುತ್ತಾ ತಮ್ಮ ಮುಂದಿನ ನಿರೀಕ್ಷಿತ ಕಾದಂಬರಿಯ ಸುಳಿವನ್ನು ಬಿಟ್ಟು ಕೊಟ್ಟರು.

ಈ ರೀತಿಯ ವಿವಿಧ ಬಗೆಯಲ್ಲಿ ನಾವುಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅನ್ಯಾಯ ಮತ್ತು ಹಲವಾರು ವಾಮ ಮಾರ್ಗಗಳನ್ನು ಕಂಡು ನಮ್ಮ ಸಮಾಜದಲ್ಲಿ ಬದಲಾವಣೆಯ ಗಾಳಿಯನ್ನು ಬಿಸುವಂತೆ ಮಾಡುವವರು ಯಾರು ಎಂದು ಬೇರೊಬ್ಬ ಬರಲಿ ಎಂದು ಕಾಯುವ ಬದಲು ನಾವುಗಳೇ ನಮ್ಮ ನಮ್ಮಲ್ಲಿ ಬದಲಾವಣೆಯ ಹರಿಕಾರ ಹಾಕುವುದು ಇಂದು ಸುಸಂದರ್ಭ.

ಕೇವಲ ನಮ್ಮ ನಮ್ಮ ಸುಖವನ್ನು ಏಣಿಸದೇ ಮುಂದಿನ ಜನಾಂಗ, ನಮ್ಮ ನಾಡು, ಪ್ರಕೃತಿ, ಸಂಸ್ಕೃತಿ, ಸನ್ನಡತೆಯ ಪುನಾರುತ್ಥಾನವನ್ನು ಮಾಡುವ ಯುವ ಸಮೊಹ ರೂಪಿತವಾಗುವುದು ಬೇಕಾಗಿದೆ. ಅದು ಬರಲಿ ಎಂದು ಹಾರೈಸುವ.

ಶನಿವಾರ, ನವೆಂಬರ್ 13, 2010

ಮರೆಯುವ ಮುನ್ನಾ

ಜಡಿ ಜಡಿ ಜಿಗುಟು ಮಳೆಯಾದರೆ ನಮ್ಮ ಮನದ ತುಂಬ ಜಿಗುಟು ಭಾವನೆ. ಎಲ್ಲಿಯೊ ಹೊರಗಡೆ ಹೋಗದಂತೆ. ಆ ಕೆಸರು ಆ ತುಂತುರು. ಮೋಡವೇ ತೂತು ಆದಂತೆ ಹನಿ ಹನಿಯುತ್ತಿದ್ದಾಗ ನಮ್ಮ ಮನ ಬೆಚ್ಚನೆಯ ಒಂದು ಮೂಲೆಯಲ್ಲಿ ಸೇರಿಕೊಂಡು ಅಮ್ಮ ಮಾಡಿ ಕೊಟ್ಟ ಊಟವನ್ನು ಮಾಡಿಕೊಂಡು, ಆಗೀಷ್ಟು ಈಗೀಷ್ಟು ಬಿಸಿ ಬಿಸಿ ಕಾಫಿಯನ್ನು ಗುಟುಕರಿಸುತ್ತಾ ಮನಸ್ಸಿಗೆ ಹಿತ ನೀಡುವ ಯಾವುದಾದರೂ ಹಾಡುಗಳನ್ನು ಕೇಳಿಕೊಂಡೋ. ಮನಸ್ಸೇಲ್ಲಾ ಆ ಮಳೆಯೋಪಾದಿಯಲ್ಲಿ ಯಾವುದರಲ್ಲೂ ಬಲು ನಿಧಾನವೇ ಜೀವನವೆಂಬಂತೆ ಬೆಚ್ಚನೆಯ ಅನುಭವವಕ್ಕೆ ಜರುಗುವ ಸಮಯದಲ್ಲಿ ಯಾವುದಾದರೂ ನೆಚ್ಚಿನ ಪುಸ್ತಕದ ಮರೆಗೆ ಹೋದರೇ ಹೊರಗಡೆ ಏನೇ ಪ್ರಳಯವಾದರೂ ಅದರ ಬಗ್ಗೆ ಒಂದೀಷ್ಟು ಗಮನ ಕೊಡದೆ ತನ್ನ ಕೋಣೆಯಲ್ಲಿ ತನ್ನ ಪುಸ್ತಕದ ಗೆಳೆಯನೊಡನೆ ನಾವುಗಳು ತಲ್ಲಿನರಾಗಬಹುದು.


ಈ ರೀತಿಯ ಅನುಭವ ಮನ್ನೆಯಾ "ಜಲ್" ಚಂಡಮಾರುತದಿಂದ ಒಂದುವರೇ ದಿನ ಬರಿ ಮನೆಯಲ್ಲಿಯೇ ಕಳೆಯುವಂತಾಯಿತು. ಆಗ ಮನದ ನಲಿವಿಗೆ ಅಸರೆಯಾಗಿದ್ದು ಓಶೋ ರಜನೀಶ್, ಎಚ್ಚಸ್ವೀ ಮತ್ತು ಎಂ.ವೈ. ಘೋರ್ಪಡೆಯವರ ಪುಸ್ತಕಗಳು.

ಓಶೋ ಪುಸ್ತಕವೆಂದರೇ ಬಹಳಷ್ಟು ಜನರಿಗೆ ಎಂಥದೋ ಎದರಿಕೆ. ನಾನೇದರೂ ಏ ನಾನು ರಜನೀಶ್ ಪುಸ್ತಕ ಕೊಂಡುಕೊಂಡೇ ಅಂದರೇ "ಏ ಯಾಕೋ ಏನೋ ಸಮಾಚಾರ ಅನ್ನುತ್ತಾರೆ" ನನ್ನ ಗೆಳೆಯರು.


ಸಮಾಜ ನಮ್ಮ ನಮ್ಮಲ್ಲಿಯೇ ಈ ರೀತಿ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಒಂದೊಂದು ರೀತಿಯ ದೋರಣೆಯನ್ನು ನಮ್ಮ ಸುತ್ತ ಮುತ್ತಲಿನಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಮತ್ತು ಅವರುಗಳ ಬಗ್ಗೆ ನಾವುಗಳು ನಮ್ಮ ಹಿರಿ ಕಿರಿಯರಿಗೆ ಒಂದು ರೀತಿಯ ಮೈಲಿಗೆಯೇನೋ ಎಂಬಂತೆ ಅವರ ಬಗ್ಗೆ ತಿಳಿದು ಕೊಳ್ಳುವುದೇ ಅಪರಾಧವೇನೋ ಎಂಬಂತೆ ಮಾಡಿಬಿಟ್ಟಿರುತ್ತಾರೆ.


ರೀತಿಯಲ್ಲಿ ಏನೂ ಗೊತ್ತಿರದ ಜನಗಳು ಒಬ್ಬರಿಂದ ಒಬ್ಬರಿಗೆ ಸುಖ ಸುಮ್ಮನೇ ಒಂದೊಂದು ಕಾಮೇಂಟ್ ಪಾಸ್ ಮಾಡಿ ಅವರ ಬಗ್ಗೆ ಅರಿಯುವ ಕುತೋಹಲವನ್ನೇ ಮತ್ತು ಅವರುಗಳು ತಿಳಿಸಿರುವ ಅಪಾರ ವಿದ್ವತ್ ನಿಂದ ಒಂದು ಇಡೀ ಸಮೊಹವನ್ನೇ ವಂಚಿತರನ್ನಾಗಿ ಮಾಡಿ ಬಿಟ್ಟಿರುತ್ತಾರೆ.


ಒಶೋ ಬಗ್ಗೆ ಈ ರೀತಿಯ ಮಂಡೋಕತನದ ಪರದೆಯನ್ನು ಸರಿಸಿದ ಕೀರ್ತಿ ರವಿ ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ ರಿಗೆ ಸೇರಿದ್ದು. ಈ ಲೇಖಕರುಗಳು ಅವರ ಅನುಭವದ ನುಡಿಗಳನ್ನು, ವಿಚಾರಗಳನ್ನು ಮತ್ತು ಅವರ ಬಗ್ಗೆ ಇರುವ ಹಲವಾರು ಕಥೆಗಳನ್ನು ತಮ್ಮ ಪತ್ರಿಕೆಗಳಲ್ಲಿ ಬರೆಯುವ ಮೊಲಕ ನಮ್ಮೆಲ್ಲಾರಿಗೂ ಸ್ವಲ್ಪವಾದರೂ ಅವರುಗಳು ಏನೂ ಹೇಳಿದ್ದಾರೆ ಎಂಬುದನ್ನು ತಿಳಿಯುವಂತೆ ಮಾಡಿದ್ದಾರೆ. ಇದರಿಂದ ಅವರ ಅಪಾರ ಸಮೃದ್ಧ ಸಂತ ಙ್ಞಾನವನ್ನು ಕೆಲವರ ಬಳಿಗಾದರೂ ಬರುವಂತೆ ಮಾಡಿದ್ದಾರೆ.

ಅವರು ತಮ್ಮ ಪ್ರವಚನದಲ್ಲಿ ತಾವು ಅಧ್ಯನ ಮಾಡಿರುವ ವಿಷಯಗಳ ವಿವಿಧ ರೀತಿಯಲ್ಲಿ ಜನರ ಮುಂದಿಟ್ಟಿದ್ದಾರೆ ಮತ್ತು ಆ ಎಲ್ಲಾ ನುಡಿಗಳು ಸಾವಿರಾರು ಗ್ರಂಥಗಳಾಗಿವೆ. ಹಲವಾರು ವಿಷಯಗಳ ಬಗ್ಗೆ ಧೀರ ಗಾಂಭಿರ್ಯದಿಂದ ಮಾತನ್ನಾಡುವವರಲ್ಲಿ ಅವರುಗಳು ಒಬ್ಬರಾಗಿದ್ದಾರೆ. ಭಾರತದ ಬಗ್ಗೆ ಇಲ್ಲಿರುವ ನಮ್ಮ ಸನಾತನ ಹಿಂದು ಧರ್ಮದ ಬಗ್ಗೆ, ವೇದ ಉಪನೀಷತ್, ಭಾರತದ ಯಾತ್ರಾ ಸ್ಥಳಗಳ ಬಗ್ಗೆ, ಭಾರತದ ಪುಣ್ಯ ಪುರುಷರ ಬಗ್ಗೆ, ಕೃಷ್ಣ ನ ಬಗ್ಗೆ, ಯುವಕರು, ಯುವತಿಯರ ಬಗ್ಗೆ, ಜನರ ಜಾಗೃತಿಯ ಬಗ್ಗೆ, ಪತ್ರಿಕೆಗಳ ಬಗ್ಗೆ, ವಿಙ್ಞಾನದ ಬಗ್ಗೆ ಇತ್ಯಾದಿ ಇತ್ಯಾದಿ ಆಡು ಮುಟ್ಟದ ಸೊಪ್ಪು ಇಲ್ಲ ಎಂಬ ರೀತಿಯಲ್ಲಿ ವಿಫುಲವಾದ ಸಾಹಿತ್ಯವನ್ನು ನಮ್ಮ ಪ್ರಪಂಚಕ್ಕೆ ನೀಡಿದ್ದಾರೆ.

ಹಾಗೇ ಈ ವಾರ ಅವರ ಸಂ. ಸಮಾಧಿ ಕಡೆಗೆ ಪುಸ್ತಕವನ್ನು ಓದಿದಾಗ ಅನಿಸಿದ್ದು. ಪ್ರೀತಿ, ಪ್ರೇಮ ಇಡೀ ಪ್ರಪಂಚದ ಜೀವನ ಜೀವಂತ ನಾಡಿ ಮೀಡಿತವಾಗಿದೆ. ಅದೊಂದು ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದನ್ನು ಟ್ರೂ ಲವ್ ಎಂಬುತ್ತಾರೋ ಅದರ ಬಗ್ಗೆ ಅವರುಗಳು ಎಷ್ಟೊಂದು ವಿಷದವಾಗಿ ಮಾತನ್ನಾಡಿದ್ದಾರೇ ಎಂದರೆ. ಲವ್ ಎಂದರೇ ಬರೀ ಸೇಕ್ಸ್ ಅಲ್ಲ ಎಂಬುದನ್ನು ಹಲವಾರು ದುಷ್ಟಾಂತ ಸತ್ಯ ಕಥೆಗಳ ಮೊಲಕ ಎಲ್ಲೂ ಸಹ ಅಸಹ್ಯ ಎಂಬ ಭಾವನೆ ನಮ್ಮ ಮನೋಭಾವದಲ್ಲಿ ಬರದ ರೀತಿ. ಪ್ರೇಮ ಒಂದು ಗಂಡು - ಹೆಣ್ಣು ಮಧ್ಯ ಮಾಮೋಲಿಯಾಗಿ ಘಟಿಸುವ ಪ್ರಕೃತಿ ಸಹಜ ಒಂದು ಕ್ರೀಯೆ ಎಂದು ಹೇಳಿ, ಆ ಒಂದು ಮೋಹರ್ತ ಸಮಯದಲ್ಲಿ ಸ್ಪುರಿಸುವ ಭಾವನೆಯಲ್ಲಿಯೇ ಶಿವನನನ್ನು ಕಾಣಬಹುದು ಎಂಬುದನ್ನು ತೋರಿಸಿದ್ದಾರೆ.

ಆದರೇ ನಾವುಗಳು ಯಾವ ರೀತಿಯಲ್ಲಿ ಇಂದು ನಮ್ಮ ಭಾರತದಲ್ಲಿ ಸೇಕ್ಸ್ ಎಂದರೇ ಒಂದು ರೀತಿಯಲ್ಲಿ ನೋಡುವಾಂತಾಗಿದೆ. ಆದರ ಬಗ್ಗೆ ಮಾತನ್ನಾಡುವುದೇ ಅಸಭ್ಯ ವರ್ತನೆಯಾಗಿ, ಕೀಳಾಗಿ ಕಾಣುವಂತೆ ಅದರ ಪ್ರಾಮುಖ್ಯತೆಯ ಬಗ್ಗೆ ಕಿರಿಯಗೆ ತಿಳಿಸದೇ ಗೌಪ್ಯವಾಗಿ ಇಟ್ಟಿದ್ದರೂ ಅದು ಇನ್ನೂ ಹೆಚ್ಚು ಆಕರ್ಷಕವಾಗಿ ಹಲವು ರೀತಿಗಳಲ್ಲಿ ನಮ್ಮ ಮಂದಿಗಳಿಗೆ ಅದೇ ಬದುಕಾಗಿ ಹಲವಾರು ಅನಾಹುತಗಳಿಗೆ ಕಾರಣವಾಗಿದೆ ಎಂದು ಎಲ್ಲರಲ್ಲೂ ಮನೆ ಮಾಡಿರುವ ಪರಮಾತ್ಮನಿಗೆ ಪ್ರೀಯವಾಗುವ ರೀತಿಯಲಿ ತಿಳಿಸಿದ್ದಾರೆ. ಒಟ್ಟಾರೆ ಮಾನವ ಜೀವನವನ್ನು ಒಂದು ವೈಙ್ಞಾನಿಕವಾಗಿ ಚಿತ್ರಿಸಿದ್ದಾರೆ. ಒಂದು ಜೀವನವನ್ನು ಸಮಗ್ರವಾಗಿ ನೋಡುವಂತೆ ಮಾಡಿದ್ದಾರೆ. ಇದು ಇಂದು ಅಗತ್ಯವಾಗಿದೆ. ಆಗಲೇ ಇಡೀ ಪ್ರಪಂಚದಲ್ಲಿ ಶಾಂತಿಯನ್ನು ಕಾಣಬಹುದಾಗಿದೆ.



ಹಾಗೆಯೇ ನಮ್ಮ ಪ್ರಸಿದ್ಧ ರಾಜಕಾರಣಿಯಾಗಿರುವ ಎಂ.ವೈ ಘೋರ್ಪಡೆಯವರ "ರೆಕ್ಕೆಯ ಮಿತ್ರರು" ಸಂಡೂರಿನ ಸುತ್ತ ಮುತ್ತಲಿನಲ್ಲಿರುವ ನಮ್ಮ ಪಕ್ಷಿ ಮಿತ್ರರುಗಳನ್ನು ಉತ್ತಮವಾಗಿ ಮನ ಮುಟ್ಟುವಂತೆ ಅಪರೂಪದ ವರ್ಣ ಚಿತ್ರಗಳೊಂದಿಗೆ ಆ ಪಕ್ಷಿಯ ಬಗ್ಗೆ ಇರುವ ಕಥೆಗಳಾದ ಜನಸಾಮಾನ್ಯರ ಮಾತುಗಳು, ಪುರಾಣ ಕಥೆಗಳು, ದುಷ್ಟಾಂತಗಳು ಮತ್ತು ವೈಙ್ಞಾನಿಕವಾಗಿ ಅವುಗಳ ಜೀವನ ಶೈಲಿಯನ್ನು ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಚಿತ್ರಿಸಿರುವುದು ಓದಲು ಖುಷಿಯನ್ನು ಕೊಡುತ್ತದೆ. ಈ ಪ್ರಯತ್ನ ನಮ್ಮ ಮಕ್ಕಳಿಗೆ ಪರಿಸರದ ಬಗ್ಗೆ ನಾವುಗಳು ಕಡಿಮೆ ಖರ್ಚಿನಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ ಕಾಣುವ ನಿಸರ್ಗ ಸೌಂದರ್ಯವನ್ನು ನೋಡುವ ಮನಸ್ಸಿನ ಮೂಲಕ ನಾವು ಆನಂದ ಪಟ್ಟು ನಮ್ಮ ಜೊತೆಯಲಿ ನಮ್ಮ ಮುಂದಿನ ಜನಾಂಗಕ್ಕೆ ಈ ಅಪರೂಪದ ಜೀವಿಗಳನ್ನು ಉಳಿಸುವ ಕಾರ್ಯವನ್ನು ಮಾಡಲು ಪ್ರೇರಪಿಸುವಂತಾಗಿದೆ.


ಕವಿಗಳ ಜೀವನ ಮರ್ಮವನ್ನು ಅರಿಯಲು ಎಲ್ಲಾರಿಗೂ ಕುತೂಹಲ. ಯಾವ ಸಮಯದಲ್ಲಿ ಅಂಥ ಮುತ್ತಿನಂಥಹ ಪದಗಳ ಜಾದು ಘಟಿಸುತ್ತದೆ. ಅವರ ಆ ಕವನದ ಸಾಲುಗಳು ಯಾವ ಜಾಗದಲ್ಲಿ ಜನಿಸುತ್ತದೆ. ಆ ಸಾಲುಗಳ ಜನನಕ್ಕೆ ಕಾರಣರಾರು? ಹೀಗೆ ನಮ್ಮ ಹಿರಿಯ ಕನ್ನಡ ಕವಿಗಳ ಬಗ್ಗೆ ಅವರ ಜೀವನ ಚರಿತ್ರೆಯ ಬಗ್ಗೆ ಎಂಥ ಸಹೃದಯಿಗೂ ಒಂದು ಅಚ್ಚರಿ ಇರುತ್ತದೆ. ಈ ಮಾತಿಗೆ ಪೂರಕವಾಗಿ ಅದನ್ನು ಸ್ವಲ್ಪ ಮಟ್ಟಿಗೆ ಹಿಡೇರಿಸಲೂ ಸಹಾಯ ಮಾಡಿದ್ದಾರೆ ಎಂಬಂತೆಲೋ ನಮ್ಮ ಎಚ್. ಎಸ್. ವೇಂಕಟೇಶ್ ಮೂರ್ತಿಯವರ "ಅನಾತ್ಮ ಕಥನ" ಒಂದು ನವಿರಾಗಿ ಓದಿಸಿಕೊಳ್ಳುವ ಕವಿಯ ಜೀವನ ಕಥೆ ನಮ್ಮ ನಮ್ಮ ಬಾಲ್ಯ, ಯೌವನ, ಉದ್ಯೋಗದ ದಿನಗಳಿಗೆ ಕರೆದುಕೊಂಡು ಹೋಗುತ್ತದೆ.


ಅವರ ಅಂದಿನ ಬಾಲ್ಯ ಮತ್ತು ಯೌವನದ ದಿನಗಳ ಸಹಜ ತುಂಟತನ ಮತ್ತು ಅವರ ಜೊತೆಯಲ್ಲಿ ಇದ್ದ ಅಪರೂಪದ ಗೆಳೆಯರು, ಬಂಧುಗಳ, ಹಳ್ಳಿಯ ವ್ಯಕ್ತಿ ಚಿತ್ರಗಳು ಉತ್ಕೃಷ್ಟವಾಗಿವೆ. ಅಲ್ಲಿ ಮೊಡಿರುವ ಪ್ರತಿ ಸಾಲುಗಳು ಒಂದು ಧೀರ್ಘ ಕವನದಂತೆ ಒಂದೇ ಸಿಟ್ಟಿಂಗ್ ನಲ್ಲಿ ಓದುವಂತೆ ಮಾಡುತ್ತದೆ.

ಈ ಪುಸ್ತಕಗಳ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಹೀಗಾಗಲೇ ವಿವಿಧ ರೀತಿಯಲ್ಲಿ ಪ್ರಶಂಸೆಗಳು ಬಂದಿವೆ. ಮತ್ತೇನು ಅನ್ನುತ್ತಿರಾ? ಇಂಥ ಪುಸ್ತಕಗಳನ್ನು ಓದಿದರೇ ಅಲ್ಲಿ ಸಿಗುವ ಸಂತೋಷದ ಬುಗ್ಗೆಯನ್ನು ಜೀವಂತ ಸವಿಯಬಹುದು ಅಲ್ಲವಾ.

ಕತೃಗಳೇ ಥ್ಯಾಂಕ್ಯೂ!