ಶನಿವಾರ, ಏಪ್ರಿಲ್ 29, 2017

ವಾರಂತ್ಯ ವಿರಾಮ

ಶನಿವಾರ ಭಾನುವಾರವೆಂದರೇ ರಜೆಯ ದಿನಗಳು. ಎರಡು ದಿನ ರಜೆ ಐ.ಟಿ , ಬಿ.ಟಿ ಯಲ್ಲಿ ಕೆಲಸ ಮಾಡುವವರಿಗೆ ಸಿಗುವ ವಿರಾಮ ದಿನಗಳು. ಸರ್ಕಾರಿ ಮತ್ತು ಬೇರೆ ನೌಕರರಿಗೆ ಶನಿವಾರದ ರಜೆ ತಿಂಗಳಲ್ಲಿ ಒಂದು ಭಾರಿ ಮಾತ್ರ ಸಿಗುವುದು.

ಸ್ನೇಹಿತರುಗಳು ನಮ್ಮಲ್ಲಿಯೇ ಒಮ್ಮೊಮ್ಮೆ ಮಾತನಾಡಿಕೊಳ್ಳುತ್ತಿರುತ್ತೇವೆ. ವಾರದಲ್ಲಿ ಎರಡು ದಿನಗಳು ರಜೆ ಇರದಿದ್ದರೇ ಐ.ಟಿ ಯಲ್ಲಿ ಕೆಲಸ ಮಾಡುವ ಸಾಕಷ್ಟು ಮಂದಿ ಇಷ್ಟೊತ್ತಿಗೆ ಹರೆ ಹುಚ್ಚರಾಗಿಬಿಡುತ್ತಿದ್ದವೆಂದು.

ಹೌದು ಇಲ್ಲಿಯ ಕೆಲಸ ದೂರದಿಂದ ನೋಡುವವರಿಗೆ ಸಕತ್ ಮಜವಾಗಿ ಸಾಫ್ಟ್ ಆಗಿ ಕಾಣುತ್ತಿರುತ್ತದೆ. ನೋಡಿದರೇ ಸಾಫ್ಟ್ ವೇರ್ ಇಂಜಿನಿಯರ್ ಆಗಬೇಕು ಅನಿಸುತ್ತದೆ. ಅದು ನೋಡುವ ಡ್ರಸ್ ನಿಂದ, ದೊಡ್ಡ  ಮಹಡಿಯ ಹೊಳೆಯುವ ಗ್ಲಾಸ್ ಆಫೀಸನಿಂದ ಮಾತ್ರ.

ಒಳಗೆ ಹೆಜ್ಜೆ ಇಟ್ಟು ಕೆಲಸದ ಜಾಗದಲ್ಲಿ ನೋಡಿದಾಗ ತಿಳಿಯುತ್ತದೆ ನಿಜವಾದ ಸಾಪ್ಟವೇರ್ ಇಂಜಿನಿಯರ್ ನ ಹಾರ್ಡ್ ಕೆಲಸ.

ಹೌದು ಅಲ್ಲಿಯ ಕೆಲಸವನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಯ್ ಬಿಡು ಮಾರಾಯ ಅದು ಏನೂ ನೀವು ಯಾವಾಗಲೂ ಕಂಪ್ಯೂಟರ್ ಪರದೆ ನೋಡುತ್ತಾ ಕಾಲ ಕಳೆಯುತ್ತಿರುತ್ತಿರಾ  ಎಂದು ಹಗುರವಾಗಿ ಮಾತನಾಡಬಾರದು.

ಅವರ ಆ ಕೆಲಸ ದೇವರಿಗೆ ಪ್ರೀತಿ.

ನಿತ್ಯ ಕರಕ್ಟ್ ಟೈಂ ಗೆ ಆಫೀಸ್ ಗೆ ಬರುವುದು ಮಾತ್ರ ಗೊತ್ತು. ಅದೆ ಸಂಜೆ ಕರಕ್ಟ್ ಟೈಂ ಗೆ ಮನೆಗೆ ಹೋರಡುವವರೇ ಲಕ್ಕಿ ಪೇಲೋಗಳೂ. ಆ ಕೆಲಸದ ಕರಾಮತ್ತೇ ಹಾಗೆ. ಅದರ ವಿಚಾರವನ್ನು ಯಾರ ಬಳಿಯು ಸಹ ಹೇಳಿಕೊಳ್ಳುವ ಆಗಿಲ್ಲ.

ಅದಕ್ಕೆ ಇಂದಿಗೂ ಸರ್ಕಾರಿ ಕೆಲಸಗಳೆಂದರೇ ತುಂಬ ತೂಕವನ್ನು ಉಳಿಸಿಕೊಂಡಿರುವುದು. ಒಮ್ಮೆ ಸರ್ಕಾರಿ ಕೆಲಸ ಸಿಕ್ಕಿದರೇ ಮುಗಿಯಿತು. ೫೮-೬೦ ವರುಷದವರಿಗೂ ಯಾವನೂ ಕೆಮ್ಮಂಗಿಲ್ಲ!

ಅದೇ ಈ ಖಾಸಗಿ ಐ.ಟಿ ಬಿ.ಟಿ ನೌಕರರನ್ನು ಮಾತನಾಡಿಸಿ ನಿತ್ಯ ತಮ್ಮ ಕೆಲಸದ ಬಗ್ಗೆಯೇ ಯೋಚನೆ! ಹೇಗೆ  ತನ್ನ ಕೆಲಸ ಉಳಿಸಿಕೊಳ್ಳುವುದು, ವೇತನವನ್ನು ಹೆಚ್ಚಿಸಿಕೊಳ್ಳುವುದು, ಕ್ವಾರ್ಟ್ ರ್, ಮದ್ಯ ವಾರ್ಷಿಕ, ವಾರ್ಷಿಕ ಅಪ್ರೈಸಲ್  ನಲ್ಲಿ ರೇಟಿಂಗ ಜಾಸ್ತಿ ಪಡೆಯುವುದು.  ಹೀಗೆ ಕೆಲಸದ ಜೊತೆಯಲ್ಲಿ ಈ ಎಲ್ಲವುಗಳ ತಲೆನೋವು.

ಮೇಲಿನ ನೋಟಕ್ಕೆ ಆಹಾ! ಒಳಗಿನ ತನ್ನ ವ್ಯಥೆಯನ್ನು ಮತ್ತೊಬ್ಬ ಐ.ಟಿ ಉದ್ಯೋಗಿ ಮಾತ್ರ ಅರ್ಥ ಮಾಡಿಕೊಳ್ಳಬಲ್ಲನು.

ಈ ರಂಗದ ಉದ್ಯೋಗಿಯ ಕಷ್ಟವನ್ನು Even ತನ್ನ ಹೆಂಡತಿ, ಹೆತ್ತವರು, ಮತ್ತು ಹತ್ತಿರದವರು ಸಹ ತಿಳಿಯಲಾರರು.

ಆದ್ದರಿಂದ ವಾರದ ರಜೆಗೆ ಇಲ್ಲಿ ಬಲು ಮಹತ್ವ. ಅದಕ್ಕಾಗಿ ಜಾತಕ ಪಕ್ಷಿಗಳಂತೆ ಕಾದಿದ್ದೇ ಬಂತು. ವಾರ ಪೂರ್ತಿ ಗಡಿ ಬಿಡಿಯಲ್ಲಿ ಕೇವಲ ಅಫೀಸ್ ಕೆಲಸದಲ್ಲಿಯೇ ಮುಳುಗೇಳುವ ಮಂದಿಗೆ ಶನಿವಾರ, ಭಾನುವಾರ ಸ್ವಲ್ಪ ಪ್ರೀ!

ತನ್ನ ವೈಕ್ತಿಕ ಕೆಲಸಗಳನ್ನು ಮಾಡಿಕೊಳ್ಳಲು ಸಿಗುವ ಚಾನ್ಸ್. ಮನೆಯವರೊಂದಿಗೆ ಮನಬಿಚ್ಚಿ ಮಾತನಾಡಲು ಸಿಗುವ ಅಮೊಲ್ಯ ಕ್ಷಣಗಳೇ ಸರಿ.

ಆ ಎರಡು ದಿನವಾದರೂ ಆರಾಮಾಗಿ ಬೇಗ ಮಲಗಿ ಲೇಟಾಗಿ ಏಳುವ ಕನಸು. ಎರಡು ದಿನವಾದರೂ ಖುಷಿಯಾಗಿ ಎಲ್ಲರೊಂದಿಗೆ ಬೇರೆತು ಊಟ ಮಾಡುವ ಸಂತೋಷ. ಮನೆಯವರೊಂದಿಗೆ ತಾನು ಇರುವ ಜಾಗ ಬಿಟ್ಟು ಹೊರ ಸಂಚಾರ ಹೋಗುವ ಹಿತ. ಯಾವುದೋ ಪ್ರೀತಿಯ ಕಾದಂಬರಿಯ ಅರ್ಧ ಓದನ್ನು ಎರಡು ದಿನದಲ್ಲಿ ಮುಗಿಸುವ ಧಾವಂತ. ಹೀಗೆ ವಾರಂತ್ಯ ರಜೆ ನಿಜವಾಗಿಯೋ ಖುಷಿಯ ಮೊತ್ತವನ್ನೇ ಕಟ್ಟಿಕೊಂಡಿರುತ್ತದೆ.

ಇಂಥ ವಾರವಾದ ಈ ಶನಿವಾರ ಅದು ತಾನೊಬ್ಬನೆ ಮನೆಯಲ್ಲಿ ಸಂಭ್ರಮಿಸುವಾ ಎಂದು ಎದ್ದಿದ್ದೇ ಮುಂಜಾನೆ ೯. ಇಂದು ಯಾವುದೇ ಕಾಲು ಇಲ್ಲದೇ ಇದ್ದುದ್ದಕ್ಕೆ ಸ್ವಲ್ಪ ಖುಷಿ! ಇಲ್ಲದಿದ್ದರೇ, ಅದೇ ಲ್ಯಾಪ್ ಟಾಪ್ ತೆಗೆದು ಇಶ್ಯೂ ಚೆಕ್ ಮಾಡಬೇಕಾಗಿತ್ತು.

ಅಂತು ಅಪ್ಲಿಕೇಶನ್ ಸರಿಯಾಗಿ ಕೆಲಸ ಮಾಡುತ್ತಿದೆ. ಕಣ್ಣು ಬಿಟ್ಟರೆ ಇನ್ನೂ ಕತ್ತಲು , ಹೊರಗಡೆ ಆರ್ಭಟದ ಮಳೆ. ಗುಡುಗು ಸಿಡಿಲು ಮನೆಯ ಗೊಡೆಗೆ ಹೊಡೆಯುತ್ತಿದೇಯೇನೋ ಎನಿಸುತ್ತಿದೆ. ಸ್ವಲ್ಪ ಜರಿದು ಮೊಬೈಲ್ ನಲ್ಲಿ ಟೈಂ ನೋಡಿದರೇ, ಟೈಂ ಆಗಲೇ ೯. ಕಾರ್ಮೋಡ ಕತ್ತಲು. ಈ ಮಳೆ ರಾತ್ರಿಯಿಂದಲೂ ಹೀಗೆ ಬರುತ್ತಲೇ ಇದೆ.

ಹಾಸಿಗೆಯಲ್ಲಿಯೇ ಮೊಬೈಲ್ ತೆಗೆದು ವೇದರ್ ಆಫ್ ಚೆಕ್ ಮಾಡಿದೆ. ಮಳೆ ಮದ್ಯಾಹನದವರೆಗೂ ಇದೆ. ಇಲ್ಲಿಯ ವೇದರ್ ರಿಪೊರ್ಟ್ ಪಕ್ಕ ಪರಪೇಕ್ಟ್. ಗಂಟೆ ಗಂಟೆಗೂ ಕರಾರುವಾಕ್ಕದ ಮಾಹಿತಿ.

ಇನ್ನೂ ಏನು ಮಾಡುವುದು ಎಂದುಕೊಂಡು ಹಾಗೆಯೇ ನಿತ್ಯದ ಅಭ್ಯಾಸದಂತೆ ಆಫೀಸ್ ಮೈಲ್ ಬಾಕ್ಸ್ ಬ್ರೌಸ್ ಮಾಡಿದೆ. ಏನೂ ತೊಂದರೆಯಿಲ್ಲ ಎಂದುಕೊಂಡು ಪೇಸ್ ಬುಕ್ ಆಪ್ ಬ್ರೌಸ್ ಮಾಡಲು ಮನಸ್ಸು ಹೋಯಿತು. ಇಂದು ನ್ಯೂಸ್ ಪೇಪರಗಿಂತ ಪೇಸ್ ಬುಕ್ ಪಕ್ಕ ಅಪಟುಡೇಟು. ಯಾರ್ಯಾರೋ ತಮ್ಮ ವಾಲ್ ಗಳಿಗೆ ಬಸವ ಜಯಂತಿಯ ಶುಭಾಶಯಗಳ ಪೊಟೋ ಹಾಕಿದ್ದರು.

ಇಂದು ಬಸವಣ್ಣನವರ ಜಯಂತಿ. ಊರಲ್ಲಿದ್ದರೇ ಹಬ್ಬದ ಊಟ ಮತ್ತು ಸಂಭ್ರಮ. ಇಲ್ಲಿ ಒಂಟಿ ಜೀವ ಯಾರು ಕೇಳಬೇಕು?

ವಾಟ್ಸ್ ಪ್ ಮೇಸೆಜೆ ೩ ಬಂದಿದ್ದವು. ವಾಟ್ಸ್ ಗ್ರೂಫ್ ಮಜಾ ಎಂದರೇ.. ಶುರುವಾದ ಹೊಸತರಲ್ಲಿ ಏನ್ ಜೋರು ಮಳೆ!ಆಮೇಲೆ ಬರು ಬರುತ್ತಾ ಬರಸೀಮೆಯಾಗಿ ಬಿಡುತ್ತದೆ. ಮೋಡಕ್ಕಾಗಿ ಕಾಯಬೇಕಾಗುತ್ತದೆ. ಹಾಗೆಯೇ ಒಂದು ವಾರದಿಂದಲೂ ಏನೊಂದು ಮೇಸೆಜ್ ಇಲ್ಲದ ಗ್ರೂಪ್ ನಲ್ಲಿ ಮೇಸೆಜೊಂದು ಇತ್ತು. ಅದು ಬಸವ ಜಯಂತಿಯ ಶುಭಾಶಯದ್ದೂ. ಮತ್ತೊಂದು ಆಫೀಸ್ ಸ್ನೇಹಿತರ ಗ್ರೂಫ್ ನಲ್ಲಿ ವಿಡಿಯೋ ಮೆಸೇಜ್. ಪುನಃ ಐ.ಟಿ ಗಂಡ ತಾನು ಯಾಕೆ ಕುಡಿಯಬೇಕು ಎಂಬುದಕ್ಕೆ ಸಂಬಂಧಿಸಿದ್ದು.

ಇನ್ನೂ ಸಾಕು ಎಂದು ಪೋನ್ ಪಕ್ಕಕ್ಕಿಟ್ಟು. ಹೊದಿಕೆ ಮಡಿಸಿ ಸೀದಾ ಸ್ನಾನಕ್ಕೆ ಹೊರಟೆ. ಹೊರಗಡೇ ಏನ್ ಅಟ0ಬಾಂಬ ಸಿಡಿಸುತ್ತಿದ್ದಾರೋ ಎಂಬಂತೆ ಸಿಡಿಲು ಗುಡುಗು. ಇಲ್ಲಿಯ ಮಳೆಯ ಜಾದು ನೋಡಿಯೇ ಅನುಭವಿಸಬೇಕು. ನಮ್ಮೊರಿನಲ್ಲಿನಂತೆ ಮಳೆಯಲ್ಲ. ಜೋ ಎನ್ನುವಂತೆ ಮೋಡವೇ ಮನೆ ಮೇಲೆ ಕೂತಿರುವಂತೆ ಸುರಿಯುತ್ತದೆ. ಈ ರೀತಿಯ ಮಳೆ ಬೆಂಗಳೂರಿನಲ್ಲಿ ಒಂದು ಗಂಟೆ ಬಂದರೇ ಮುಗಿಯಿತು. ಬೆಂಗಳೂರಲ್ಲಿ ದೋಣಿ ಸೇವೆ ಆರಂಭಿಸಬೇಕಾಗುತ್ತದೆ. ಆದರೇ ಇಲ್ಲಿ ಅದು ಹೇಗೆ ಮ್ಯಾನೇಜ್ ಮಾಡುತ್ತಾರೋ ತಿಳಿಯದು. ಮಳೆ ನಿಂತ ಮರುಕ್ಷಣವೇ ಎಲ್ಲಿ ಯಾವಾಗ ಮಳೆ ಬಂತು ಎಂಬುವ ಕುರುಹು ಸಹ ಸಿಗುವುದಿಲ್ಲ. ಮೇಲಿನಿಂದ ಬಿದ್ದ ನೀರು ಅದು ಎಲ್ಲಿಗೆ ಸೇರಬೇಕು ಆ ಜಾಗಕ್ಕೆ ಸೇರಿ ಪಾವನವಾಗುತ್ತದೆ.

ಸ್ನಾನದ ನಂತರ ದೇವರಿಗೆ ನಮಸ್ಕಾರ ಮಾಡಿ ಅಡಿಗೆ ಮನೆಗೆ ಹೋಗಿ ಒಂದು ಲೋಟ ನೀರು ಕುಡಿದೆ. ಹಾಲಿಗೆ ಬಂದು ಟಿ.ವಿ೯ ನೋಡೋಣ ಎಂದು ಟಿ.ವಿ ಹಾನ್ ಮಾಡಿದರೇ ಬಸವಣ್ಣನವರ ಬಗ್ಗೆ ಚರ್ಚೆ ಬರುತ್ತಿತ್ತು. ಚರ್ಚೆ ವಿಷಯ ರಾಜಕೀಯ ಪಕ್ಷಗಳು ಬಸವಣ್ಣನವರನ್ನು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಯಾಕೆ ನೆನಪು ಮಾಡಿಕೊಳ್ಳುತ್ತಾರೆ ಎಂದು. ಬೇರೆ ಬೇರೆ ಪಕ್ಷಗಳದವರನ್ನು ಕುರಿಸಿಕೊಂಡು ಚರ್ಚಿಸುತ್ತಿದ್ದರು.

ಹಾಗೆಯೇ ಪುನಃ ಅಡಿಗೆ ಮನೆಗೆ ಬಂದು ನಿನ್ನೆ ಎದುರು ಮನೆಯವರು ಕೊಟ್ಟ ಅಡಿಗೆಯನ್ನು ಬಿಸಿ  ಮಾಡಿ ಬ್ರೇಕ್ ಪಾಸ್ಟ್ ಮುಗಿಸಿದೆ. ಅನಂತರ ಕಾಫಿ ಮಾಡಿಕೊಂಡು ಕುಡಿಯುತ್ತಾ ಹೆಂಡತಿಗೆ ಕಾಲ್ ಮಾಡಿ ಅದು ಇದು ವಿಚಾರಿಸಿ ನಿತ್ಯದ ಮಾತು ಮುಗಿಸಿದೆ.

ಅಷ್ಟೊತ್ತಿಗೆ ಸೂರ್ಯ ಭಗವಾನ್ ಮೋಡದ ಮರೆಯಲ್ಲಿಯೇ ಸ್ವಲ್ಪ ಸ್ವಲ್ಪ ಇಣುಕಲು ಪ್ರಾರಂಭಿಸಿದ. ಮಳೆರಾಯ ನನಗೇನೂ ಜಾಗ ಎಂದು ಹೋರಡಲು ಅನುವಾದ.

ಮದ್ಯಾಹನದ ಊಟಕ್ಕೆ ಹೇಗು ನೆನ್ನೆ ಮಾಡಿದ ಬೀಟ್ ರೋಟ್ ಪಲ್ಯ ಇದೆ. ೧೨.೩೦ ರ ಹೊತ್ತಿಗೆ ಚಪಾತಿ ಮಾಡಿದರೇ ಆಯಿತು ಎಂದುಕೊಂಡು ಟಿ.ವಿ ಮುಂದೆ ಕೂತುಕೊಂಡೇ.

ಪುನಃ ಬಾಹುಬಲಿ ೨ ರ ನಾಯಕನ ಬಗ್ಗೆ ಕಾರ್ಯಕ್ರಮ ಬಂತು. ಅನಂತರ ೯ರ ನ್ಯೂಸ್ ಯಡ್ಡಿ ಈಶ್ ಡಿಶುಮ್ ಡಿಶುಮ್ ರಾಜಕೀಯದ ಸುದ್ಧಿಗಳು. ಸಾಕು ಯಾವುದಾದರೊಂದು ಸಿನಿಮಾ ನೋಡೋಣ ಎಂದುಕೊಂಡು ಬಾಹುಬಲಿ ಸಿನಿಮಾ ನೋಡಲು ಶುರುಮಾಡಿದೆ.

ಹೊರಗಡೆ  ವಾತವರಣ ಸುಂದರವಾಗಿ ಕಾಣುತ್ತಿತ್ತು. ಇದೀಗ ತಾನೇ ಸ್ನಾನ ಮಾಡಿದ ಪ್ರಕೃತಿ ಮಾತೆಯಂತೆ ಹಚ್ಚಹಸಿರಾಗಿ ಕಂಗೊಳಿಸುತ್ತಿತ್ತು.

ಊಟ ಮಾಡಿ ಹೀಗೆ ವಾಕ್ ಹೋಗಿ ಬರೋಣವೆಂದುಕೊಂಡೆ. ಟೇಂಪರೆಚರ್ ೨೩ ತೋರಿಸುತ್ತಿತ್ತು. ಹಾಗೆಯೇ ಮನೆಯ ಕಸದ ಪೊಟ್ಟಣವನ್ನು ಕಸದ ಡಬ್ಬಿಗೆ ಹಾಕಲು ತೆಗೆದುಕೊಂಡು ಬಾಗಿಲಿಗಿ ಬೀಗ ಹಾಕುವ ಸಮಯದಲ್ಲಿ ನಮ್ಮ ಮನೆಯ ಮೇಲಿರುವ ಜನನಿ ಮತ್ತವರ ಮನೆಯವರು ಹೊರಗಿನಿಂದ ಬಂದರು. ಹಾಯ್ ಜನನಿ ಯಾವಾಗ ಇಂಡಿಯಾದಿಂದ ಬಂದಿದ್ದು? ಎಂದು ಮಾತನಾಡಿಸಿ ಹೊರ ಹೆಜ್ಜೆ ಇಟ್ಟೆ. ಹೊರಗಡೆ ಸ್ವಲ್ಪ ಬಿಸಿಲು ಅನಿಸಿತು. ಮಳೆ ಬಂದು ಇಳೆ ತಂಪಾಗಿತ್ತು. ಹಾಗೆಯೇ ಹೆಜ್ಜೆ ಹಾಕುತ್ತಾ ಹಾಕುತ್ತಿದ್ದಂತೆ ಬಿಸಿಲ ಜಳ ಜಾಸ್ತಿ ಅನಿಸಿತು. ಇಲ್ಲಿ ಪ್ರತಿಯೊಂದು ಎಕ್ಸ್ ಟ್ರಿಮ್. ೨೩ ಡಿಗ್ರಿ ಇದ್ದರೂ ಕಣ್ಣು ಬಿಡದಂತೆ ರವಿ ಕಿರಣಗಳು. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರಬೇಕಾಗಿತ್ತೆಂದು ಅನಿಸಿತು.

ವಾಕಿಂಗ ಲೇನ್ ನಲ್ಲಿ ಯಾರೊಬ್ಬರೂ ಇಲ್ಲ. ಅದು ದೂರದಲ್ಲಿ ಅಮೇರಿಕಾದ ಲೇಡಿ ರನ್ನಿಂಗ ಮಾಡಿಕೊಂಡು ಬರುತ್ತಿದ್ದಳು. ಹತ್ತಿರಕ್ಕೆ ಬಂದಾಗ ಹಾಯ್ ಎಂದು ಹಾಗೆಯೇ ಓಡುತ್ತಾ ಮರೆಯಾದಳು. ನಿತ್ಯ ಹೋಗುತ್ತಿದ್ದಷ್ಟು ದೂರ ಹೋಗಲು ಸಾಧ್ಯವಿಲ್ಲವೆಂದು ನಡೆಯುತ್ತಾ ಸಾಗಿದೆ. ವಿಪರೀತವಾದ ಸೂರ್ಯ ಕಿರಣಗಳು ಯಾಕೋ ಈಗ ವಾಕ್ ಬಂದು ತಪ್ಪು ಮಾಡಿದೆ  ಅನಿಸಿತು.

ಮನೆಗೆ ಬಂದಾಗ ಆಗಲೇ ಮೂರು ಮುಕ್ಕಾಲು. ಪುನಃ ಮೊಬೈಲ್  ಚೆಕ್ ಮಾಡಿ. ಲ್ಯಾಪ್ ಟಾಪ್ ನಲ್ಲಿ ಲಾಗಿನ್ ಆದೆ. ಆಪೀಸ್ ಗೆಳೆಯ ಪಿಂಗ್ ಮಾಡಿದ್ದಾ ಏಯ್ ರಾತ್ರಿ ಆಪ್ಲಿಕೇಷನ್ ಮೈಂಟನೇಸ್ ಆಕ್ಟಿವಿಟಿಗೆ ಆಪೀಸ್ ಗೆ ಬರುತ್ತಿಯಾ ಎಂದಿದ್ದಾ. ಅವನಿಗೆ ರಿಫ್ಲೇ ಮಾಡಿದೆ. ಹಾಗೆಯೇ ಸ್ವಲ್ಪ ಕೊಂಚ ಮಲಗೋಣವೆಂದುಕೊಂಡು ಲ್ಯಾಪ್ ಟಾಪ್ ಮುಚ್ಚಿ ಹೋದೆ.

ಹೊರಗಡೆ ಮಕ್ಕಳ ಆಟವಾಡುವ ಶಬ್ಧ ಕೇಳುತ್ತಿತ್ತು. ನೋಡಿದರೇ ಎಲ್ಲ ಹೊಸಬರು. ಕೇಳಗಡೆ ಮನೆಯಲ್ಲಿರುವವರು ಕಳೆದ ವಾರ ಬಂದಿರುವವರು. ಅವರು ಅವರಿಗೆ ಗೊತ್ತಿರುವ ಕುಟುಂಬದವರೆಲ್ಲ ಸೇರಿ ವಾರಂತ್ಯದ ಪಾರ್ಟಿ ಮಾಡುತ್ತಿರಬೇಕು. ಹೆತ್ತವರ ಜೊತೆ ಈ ಮಕ್ಕಳು ಬಂದಿದ್ದಾವೆ ಎನಿಸಿತು. ಅವರುಗಳ ಕಲರವ ಮತ್ತು ಕೇಕೆ ಮನಕ್ಕೆ ಖುಷಿ ಕೊಟ್ಟಿತು.

ಮಕ್ಕಳ ಮನಸ್ಸೇ ಸರಿ!

ರಾತ್ರಿಗೆ ಏನು ಅಡುಗೆ ಮಾಡುವುದು? ಹೊಟ್ಟೆ ನೆನಪು ಮಾತ್ರ ಇರಲೇಬೇಕು. ಒಬ್ಬರೂ ಇದ್ದರೂ ಅಡುಗೆ ಇಬ್ಬರೂ ಇದ್ದರೂ ಅಡುಗೆ ಮಾಡಲೇಬೇಕು. ಅವಲಕ್ಕಿ ಮಾಡಿದರೇ ಬೇಷ್ ಅನಿಸಿತು. ಅದನ್ನು ಸುಲಭವಾಗಿ ಮಾಡಿದರಾಯ್ತು ಎಂದುಕೊಂಡೆ.

ಪುನಃ ಲ್ಯಾಪ್ ಟಾಪ್ ಆನ್ ಮಾಡಿದೆ. ಹಾಗೆಯೇ ಪೇಸ್ ಬುಕ್ ಲಾಗಿನ್ ಆದ್ರೇ. ನನ್ನ ಪ್ರೇಂಡ್ ಲಿಸ್ಟ್ ನಲ್ಲಿರುವ ಗೆಳೆಯ ಅವನ ಪ್ರೇಂಡ್ ಗೆ ಕಾಮೆಂಟ್ ಹಾಕಿದ್ದಾ. ಏನ್ ಇರಬಹುದು ಎಂದು ಡಿಟೈಲ್ ನೋಡಿದರೆ. ಆ ಹುಡುಗಿ ಬಾಹುಬಲಿ -೨ ನೋಡುತ್ತಿದ್ದೇನೆ ಎಂದು ವಾಲ್ ಗೆ ಮೇಸೆಜ್ ಹಾಕಿದ್ದಳೆ. ಅದಕ್ಕೆ ಯಾರೋ ಒಬ್ಬ ಕನ್ನಡಾಭಿಮಾನಿ (?) ಏಯ್ ಕನ್ನಡ ಹೀಗೆನಾ ನೀನು ಉದ್ಧಾರ ಮಾಡದು? ಎಂದು ಕೇಳಿದ್ದಾನೆ. ಅದಕ್ಕೆ ಆ ಹುಡುಗಿ ನೀ ಯಾರ್ ಕೇಳದು ನಾನು ಯಾವ ಭಾಷೇ ಸಿನಿಮಾನಾದರೂ ನೋಡುತ್ತಿನಿ ಎಂದಿದ್ದಾಳೆ. ಅವನು ಬಿಡದೆ ಕಾಮೆಂಟ್ ಹಾಕಿ ವಾಮಗೋಚರವಾಗಿ ಬೈದಿದ್ದಾನೆ. ಅದಕ್ಕೆ ಇಯಮ್ಮಾ  ಉದ್ದನೇಯ ಪೋಸ್ಟ್ ನ್ನು ಬೈದು ಹಾಕಿದ್ದಾಳೆ.

ಉಫ್!

ಅವಲಕ್ಕಿ ರೇಡಿಯಾಯಿತು.

ಹಾಗೆಯೇ ನನ್ನ ಬ್ಲಾಗ್ ಕೊಂಡಿಯನ್ನು ಒಪನ್ ಮಾಡಿದೆ. ಅಲ್ಲಿರುವ ಮುಂದಿನ ಬ್ಲಾಗ್ ಕೊಂಡಿಯನ್ನು ಕ್ಲಿಕ್ಕಿಸಿದೆ. ಇನ್ನೊಂದು ಕನ್ನಡ ಬ್ಲಾಗ್ ಬಂತು. ಕವನಗಳ ಬ್ಲಾಗ್. ಉತ್ತಮ ಕವನಗಳಿದ್ದವು. ಹಾಗೆಯೇ ಮುಂದಿನ ಬ್ಲಾಗ್ ಲಿಂಕ್ ಒತ್ತಿದಾಗ ಮತ್ತೇ ಇನ್ನೊಂದು ಬ್ಲಾಗ್ ಹೀಗೆ ಹಲವಾರು ಕನ್ನಡ ಬ್ಲಾಗ್ ಗಳನ್ನು ಬ್ರೌಸ್ ಮಾಡುತ್ತಾ ಮಾಡುತ್ತಾ ಹೋದಾಗ ದಾರವಾಡ ಪೋಲಿಸ್ ಆಪೀಸ್ ಪೇಜ್ ಬಂತೂ. ನೋಡಿದರೆ ಅಲ್ಲಿ ನಿತ್ಯ ಕೇಸ್ ಗಳನ್ನು ಅನ್ ಲೈನ್ ನಲ್ಲಿ ಟ್ರ್ಯಾಕ್ ಮಾಡುತ್ತಿದ್ದಾರೆ. ಇದು ಉತ್ತಮ ಕೆಲಸ ಅನಿಸಿತು. ಆ ವ್ಯಾಪ್ತಿಯ ಘಟನೆಗಳು ಎಪ್.ಐ.ಆರ್ ವಿವರಗಳು ಆನಲೈನ್ ನಲ್ಲಿ. ಹೀಗೆಲ್ಲಾ ಬ್ಲಾಗ್ ಉಪಯೋಗವಾಗುವುದನ್ನು ಕಂಡು ಖುಷಿಯಾಯಿತು. ಇನ್ನೊಮ್ಮೆ ಇದನ್ನು ವಿವರವಾಗಿ ನೋಡೋಣವೆಂದುಕೊಂಡು. ಪುನಃ ಮುಂದಿನ ಬ್ಲಾಗ್ ಲಿಂಕ್ ಮೇಲೆ ಕ್ಲಿಕ್ಕಿಸಿದೆ. ಅದು ಸಾಹಿತ್ಯಕ್ಕೆ ಸಂಬಂಧಿಸಿದ ಬ್ಲಾಗ್. ಸೂರ್ಯಕಾಂತ ಪಂಡಿತ್ ಎಂಬುವವರು ಉತ್ತಮ ಪುಸ್ತಕ ವಿಮರ್ಶೆಗಳನ್ನು ಮಾಡಿದ್ದರು. ಬೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಬರೆದಿರುವುದನ್ನು ಪೂರ್ತಿ ಓದಿದೆ. ಮುಂದೆ ಇನ್ನೊಂದು ಲಿಂಕ್ ಕ್ಲಿಕ್ಕಿಸಿದಾಗ ಕೀರ್ತಿರಾಜ್ ಎಂಬುವವರ ಬ್ಲಾಗ್. ಅದು ಚೆನ್ನಾಗಿತ್ತು. ಅವರು ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಅವುಗಳನ್ನೇ ಬ್ಲಾಗ್ ನಲ್ಲಿ ಮುದ್ರಿಸಿದ್ದಾರೆ.

ಬ್ಲಾಗ್ ಲೋಕ ನಿಜವಾಗಿಯೂ ಮಸ್ತ್ ಲೋಕ. ತನ್ನದೇ ಭಾವನೆಗಳನ್ನು ಅಕ್ಷರದೊಳಕ್ಕೆ ಇಳಿಸಿಟ್ಟು ಕಾಪಾಡಿಕೊಳ್ಳುವುದು. ಯಾರು ಬೇಕಾದರೂ ಆನ್ ಲೈನ ನಲ್ಲಿ ಬರೆದುಕೊಳ್ಳಬಹುದು. ಹೀಗೆ ಬರೆಯುವವರ ವೈವಿಧ್ಯಮಯವಾದ ಬರಹಗಳು. ಎಲ್ಲಾ ಬಗೆಯಲ್ಲಿನ ಲೇಖನಗಳು  ದೊರೆಯುತ್ತವೆ. ಓದುವುದಕ್ಕೆ ಸಮಯವಿದ್ದಾರೆ ಅವರೆಲ್ಲಾರ ಅನುಭವಗಳನ್ನು ನಮ್ಮದಾಗಿಸಿಕೊಳ್ಳಬಹುದು. ವಾರಾಂತ್ಯಕ್ಕೆ ಇದಕ್ಕಿಂತ ಉತ್ತಮವಾದ ಸಂಗತಿ ಇನ್ನು ಏನು ಇದೆ?

ಶನಿವಾರದ ರಜೆ ಹೀಗೆ ಮುಗಿಯಿತು. ನಾಳೆ ಭಾನುವಾರ. ೧೨ ಕ್ಕೆ ಪಾಟ್ ಲಕ್ ಇದೆ. ನಮ್ಮದೇ ಆಪೀಸ್ ಗೆಳೆಯರೆಲ್ಲ ತಿಂಗಳಿಗೊಮ್ಮೆ ಒಟ್ಟಿಗೆ ಸೇರಿ ಕೆಲವು ಸಮಯಗಳನ್ನು ಖುಷಿಯಾಗಿ ಕಳೆಯುವುದು. ನಾವೆ ನಾವುಗಳು ಮಾಡಿಕೊಂಡು ಬಂದಂತಹ ವಿವಿಧ ಬಗೆಯ ತಿನಿಸು, ಭಕ್ಷ್ಯಗಳನ್ನು ಹಂಚಿಕೊಂಡು ಒಟ್ಟಿಗೆ ತಿನ್ನುವುದು. ಈ ಭಾರಿಯ ನನ್ನ ಪಾಲಿನ ತಿನಿಸು ವೇನಿಲಾ ಐಸ್ ಕ್ರೀಮ್.

ನನ್ನ ಅವಲಕ್ಕಿ ನನಗಾಗಿ ಕಾಯುತ್ತಿದೆ. ತಿಂದ ಬಳಿಕ ಸ್ವಲ್ಪ ರೇಸ್ಟ್ ತೆಗೆದುಕೊಂಡು ಆಪೀಸ್ ಗೆ ಹೋಗಬೇಕು...

ಇದೆ ಲೈಪ್ ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ