ಶುಕ್ರವಾರ, ಅಕ್ಟೋಬರ್ 21, 2011

ಭೈರಪ್ಪ ಮತ್ತು others

ನಮ್ಮ ದೇಶದಲ್ಲಿ ವಿವಾದಗಳು ಇಲ್ಲದ ಜಾಗ, ವಿಚಾರ, ವ್ಯಕ್ತಿಗಳು ಯಾವುದೂ ಇಲ್ಲ ಅನಿಸುತ್ತಿದೆ. ಪ್ರತಿಯೊಂದಕ್ಕೂ ಒಂದಲ್ಲಾ ಒಂದು ವಿವಾದವೆಂಬ ಅಂಟು ಜಾಡ್ಯ ಅಮರಿಕೊಂಡಿರುತ್ತದೆ. ಪ್ರತಿಯೊಬ್ಬರೂ ಗುಲಗಂಜಿಯಲ್ಲಿ ಬಣ್ಣ ಕಪ್ಪನ್ನು ಹುಡುಕುತ್ತಿರುತ್ತಾರೆ.

ಪ್ರಸ್ತುತವಾಗಿ ವಿವಾದದ ಭುಗಿಲು ಎದ್ದದ್ದು ಙ್ಞಾನಪೀಠ ಪ್ರಶಸ್ತಿಗೆ. ಕನ್ನಡಕ್ಕೆ ಎಂಟನೇಯ ಅಪರೂಪದ ಪ್ರಶಸ್ತಿ ಹದಿನೇಳು ವರುಷಗಳಾದ ಮೇಲೆ ಸಿಕ್ಕಿದ ಸಂದರ್ಭದಲ್ಲಿ ಎಲ್ಲರೂ ಎಲ್ಲವನ್ನು ಮರೆತು ಸಂಭ್ರಮಪಡಬೇಕಾಗಿತ್ತು. ಆದರೇ ಮನುಷ್ಯರು ಅ(ಲ್ಪ) ತೃಪ್ತ? ಎಂಬ ರೀತಿಯಲ್ಲಿ ಯಾರೊ ಒಬ್ಬರೂ ಯಾರ ಮೇಲೆ ಮಾತಿನ ಕೆಸರು ಎರಚಿ ಇಡೀ ಕನ್ನಡ ಸಾಂಸ್ಕೃತಿಕ ವಾತವರಣವನ್ನು ಕಲುಷಿತ ಮಾಡಿಬಿಟ್ಟರು. ಇದು ನಿಜವಾಗಿಯೂ ಬೆಸರದ ಸಂಗತಿ.

ಆ ವ್ಯಕ್ತಿ ಮೊಕ ಪ್ರೇಕ್ಷಕನಾಗಿ ಇದ್ದಾನೆ. ಆದರೆ ಬೆರೆಯವರು ಅಲ್ಲಿ ಇಲ್ಲಿ ಕೆಸರನ್ನು ಎರಚಿಕೊಂಡು ಅವರಿಗೂ ಸಹ ಅಗೌರವವನ್ನು ಮಾಡಿದ್ದಾರೆ. ಪ್ರಶಸ್ತಿ ಯಾರಿಗೆ ಕೊಡಬೇಕು ಎಂಬುದು ಆ ಪ್ರಶಸ್ತಿ ಸಮಿತಿ ನಿರ್ಧರಿಸುವಂತಹದ್ದು. ಅದು ನಮ್ಮ ನಿಮ್ಮಂತಹ ಸಾಮಾನ್ಯರ ಮಾತು ಕತೆಗಳನ್ನು ಕೇಳಲಾರದು ಅಲ್ಲವಾ? ಪ್ರಶಸ್ತಿ ಕೇವಲ ವ್ಯಕ್ತಿಯನ್ನು ಮಾತ್ರ ಪರಿಗಣಿಸಿ ನೀಡಲಾರದಂತಹದ್ದು. ಅದು ಆ ವ್ಯಕ್ತಿಯ ಆ ರಂಗದ ಸಾಧನೆಯ ಮೇಲೆ ಅವಲಂಬಿತವಾಗಿರುತ್ತದೆ. ಅವರ ಅಪಾರವಾದ ಉತ್ತಮ ಕೊಡುಗೆಗೆ ಸಲ್ಲುವಂತಹದ್ದು.

ಹಾಗಾಗಿ ನಾವುಗಳು ಸುಖ ಸುಮ್ಮನೇ ಗಂಟಲು ಹರಿದುಕೊಂಡು ಕೊಗುವುದು ಯಾವ ಸುಖವನ್ನು ಕೊಡಲಾರದು ಅಲ್ಲವಾ?

ಇಲ್ಲಿ ಕಂಬಾರರು ಮತ್ತು ಭೈರಪ್ಪನವರ ಮಧ್ಯೆ ಯಾರು ಶ್ರೇಷ್ಠರು ಎಂದು ಚರ್ಚೆ ಮಾಡುತ್ತಿರುವುದು ಇಬ್ಬರೂ ಮಹನೀಯರುಗಳನ್ನು ನಾವುಗಳು ತೀರಸ್ಕರಿಸಿ ಅವರ ಕೊಡುಗೆಗಳನ್ನು ಗಾಳಿಗೆ ತೂರಿದಂತೆ. ಅದು ಹಾಗೇ ಆಗಬಾರದು.

ನಾವುಗಳು ಎಷ್ಟರ ಮಟ್ಟಿಗೆ ಇಬ್ಬರ ಕೊಡುಗೆಗಳಾದ ಅವರ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಅಭ್ಯಾಸ ಮಾಡಿದ್ದೇವೆ? ಎಷ್ಟರ ಮಟ್ಟಿಗೆ ಅವುಗಳನ್ನು ಮನನ ಮಾಡಿಕೊಂಡಿದ್ದೇವೆ ಎಂಬುದು ಮುಖ್ಯ. ಆಗ ಮಾತ್ರ ನಿಜವಾದ ನಮ್ಮ ಸಾಂಸ್ಕೃತಿಕ ನಾಯಕರುಗಳಿಗೆ ಗೌರವವನ್ನು ನೀಡಿದಂತೆ.




ನೀವು ಗಮನಿಸಿರಬಹುದು.. ಒಬ್ಬರ ಮೇಲೆ ಒಬ್ಬರೂ ಅಪಾದನೆಯನ್ನು ಮಾಡುತ್ತಾ.. ಪತ್ರಿಕೆಗಳಲ್ಲಿ ಸಭೆ ಸಮಾರಂಭಗಳಲ್ಲಿ ಅವರ ಕೃತಿಗಳನ್ನು ಓದಬೇಡಿ ,ಅದು ಹೀಗೆ ಅದು ಹಾಗೇ ಎಂದು ಹೇಳಿದರೇ ಸಾಮಾನ್ಯ ಓದುಗ ಕೇಳುವುದಂತು ಸುಳ್ಳು. ಅವನಿಗೆ ಯಾವುದು ಇಷ್ಟ ಮತ್ತು ಮೆಚ್ಚುಗೆಯಾಗುತ್ತದೋ ಅದನ್ನೇ ಆರಿಸಿಕೊಂಡು ಓದುತ್ತಾನೆ.

ಆ ಲೇಖಕನಿಂದ ಯಾವಾಗ ಹೊಸ ಪುಸ್ತಕಗಳು ಹೊರ ಬರುತ್ತದೆ ಎಂದು ಕಾದಿದ್ದುಕೊಂಡು ಖರೀದಿಸಿ ಓದಿ ಸುಖಪಡುತ್ತಾನೆ. ಅವನಿಗೆ ಯಾವುದೇ ಪಂಥ, ವಿಮರ್ಶೆ, ಷರಾ ಬೇಕಾಗಿಲ್ಲ. ಅವನಿಗೆ ಆ ಕ್ಷಣಕ್ಕೆ ಬೇಕಾಗಿರುವುದು ಆ ಕ್ಷಣದ ಏನೋ ಒಂದು ಅನುಭೂತಿ ಮತ್ತು ಮನಸ್ಸಂತೋಷ ಅವೆರಡು ಇಲ್ಲದಿದ್ದರೆ ಯಾರೂ ಯಾಕೆ ಯಾರ ಬರಹವನ್ನು ಓದುವಂತಹ ಕೆಲಸಕ್ಕೆ ಕೈ ಹಾಕುತ್ತಾನೆ?

ಆದರೇ ನಾವು ತಿಳುದುಕೊಂಡಿರುವವಂತಹ ಹಿರಿಯರುಗಳು ಚಿಕ್ಕವರಾಗಿ ಒಬ್ಬರ ಮೇಲೆ ಒಬ್ಬರೂ ಹೀಗೆ ಹಿಯಾಳಿಸುವುದು.. ಅದು ಅವರ ಬರಹವೇ ಅಲ್ಲ. ಅದು ಕೇವಲ ಬೂಸಾ.. ಅನೈತಿಕ.. ಅಮಾನವೀಯ.. ಬರಹ ಎಂದು ಗಂಟಲು ಕಿತ್ತುಕೊಂಡರೇ.. ಸಾಮಾನ್ಯ ಓದುಗ ಕೇವಲ ಒಂದು ಕಿರುನಗೆಯನ್ನು ಬೀರಿ ಅವನಿಗೆ ಯಾವುದು ಬೇಕೊ ಅದನ್ನು ಮಾತ್ರ ಸ್ವೀಕರಿಸುತ್ತಾನೆ ಅಲ್ಲವೇ?

ಲೇಖಕನೇನೂ ಯಾವುದೇ ಒಂದು ಅಗಾಧವಾದ ಹಂಬಲವಿಟ್ಟುಕೊಂಡು ಕೃತಿಯನ್ನು ಅಷ್ಟೊಂದು ಹುಡುಕಾಡಿ, ಸಂಶೋದಿಸಿ ರಚಿಸಿ ಯಾವುದೋ ಒಂದೇ ಒಂದು ಸಮೊಹ, ಓದುಗ ವರ್ಗಕ್ಕಾಗಿ ರಚಿಸಲಾರ ಅಲ್ಲವಾ? ಅದು ಹೇಗಾದರೂ ಅವನಿಗೆ ಹಾಗೇ ಮನಸ್ಸು ಬರುತ್ತದೆ? ಅದು ಕೇವಲ ಒಂದು ದಿನದ ಪತ್ರಿಕೆಯಲ್ಲಾ. ಅದು ಕಾಂದಂಬರಿ ಅಲ್ಲಿ ಪಾತ್ರಗಳೇ ಸನ್ನಿವೇಶಕ್ಕೆ ತಕ್ಕಾ ಹಾಗೆ ಮಾತನ್ನಾಡುತ್ತವೆ ಅಲ್ಲವಾ? ನನಗೆ ಅನಿಸುವುದು ಇಷ್ಟು ಮಾತ್ರ.

ಲೇಖಕ ಯಾರಿಗೂ ನನ್ನ ಕೃತಿಗಳನ್ನು ಕಾದಿದ್ದು ಓದಿ ಎಂದು ಯಾವಾಗಲೂ ಎಲ್ಲೂ ಲಾಬಿ ಮಾಡಲಂತೂ ಸಾಧ್ಯವಿಲ್ಲ. ಅದು ಇಂದಿನ ಮುಂದುವರಿದ ಜಮಾನದಲ್ಲಿ ಎಂದು ನಡೆಯಲಾರದು. ಓದುಗ ಎಲ್ಲಾ ವಿಮರ್ಶಕರಿಗಿಂತ ಮೀಗಿಲಾದವನು. ಪ್ರತಿಯೊಬ್ಬ ಲೇಖಕ ಕೃತಿ ರಚಿಸುವುದು ನೆಚ್ಚಿನ ಓದುಗನಿಗಾಗಿ ವಿನಾಃ ವಿಮರ್ಶಕರಿಗಾಗಿ ಎಂದು ಅಲ್ಲಾ ಅಲ್ಲವಾ?

ಪ್ರಶಸ್ತಿ ಪುರಾಸ್ಕರಗಳು ಸಿಗುವುದು ಒಂದು ಸಿದ್ಧಾಂತ ಮತ್ತು ನೀಲುವುಗಳ ಮೇಲೆ ಅಲ್ಲಿಯು ಸಹ ಯಾವ ಕೃತಿ, ಲೇಖಕ ಅವರ ಮಾನದಂಡದೊಳಗೆ ಬರುವವನೋ ಅವನಿಗೆ ಪ್ರಶಸ್ತಿ ಸಿಗುತ್ತದೆ. ಪ್ರಶಸ್ತಿಗಾಗಿ ಕೃತಿಗಳನ್ನು ರಚಿಸಿ ಕಾಯುವುದು ಅಸಾಧ್ಯ! ಅದು ಎಂದು ಆಗದ ಮಾತು.

ಒಬ್ಬರನ್ನೂ ಹೀಗೆ ಹೀಗೆ ಅಂಥ ಹೇಳಲು ಪತ್ರಿಕೆಗಳ ಸಂಪಾದಕರು ಇಡೀ ಸಂಚಿಕೆಯನ್ನು ಮೀಸಲು ಇಟ್ಟು ಏನೇ ಬರೆದರೂ ಓದುಗ ತನಗೆ ಯಾವುದು ಬೇಕೋ ಅದನ್ನೇ ಆರಿಸಿಕೊಳ್ಳುವುದು ಅಂಥ ಅನ್ನಿಸುತ್ತದೆ.

ಭೈರಪ್ಪರಂತೂ ಈ ಯಾವ ಚರ್ಚೆ, ಖಂಡನೆಗಳನ್ನು ಕಂಡು ಕಾಣದ ರೀತಿಯಲ್ಲಿ, ಯಾವುದೇ ಪ್ರಶಸ್ತಿ ಪುರಾಸ್ಕಾರ ಸಿಕ್ಕಿದರೂ ಸಿಗದಿದ್ದರೂ ಅವರ ನೆಚ್ಚಿನ ಓದುಗನಿಗೆ ಏನೂ ಕೊಡಬೇಕೋ ಅದನ್ನು ಉತ್ತಮವಾಗಿ ಊಣಬಡಿಸುತ್ತಿರುತ್ತಾರೆ ಅಲ್ಲವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ