ಶುಕ್ರವಾರ, ಜೂನ್ 24, 2016

ಟಾಪರ್ ಸುಮಿತ್ರಾ

ಅವಳ ಹೆಸರು ಸುಮಿತ್ರಾ. ನಾನು ಅವಳನ್ನು ಮೊದಲು ನೋಡಿದ್ದು ಪಿ.ಯು.ಸಿ ಯಲ್ಲಿ ಅನಿಸುತ್ತೇ.

ಮೊನ್ನೇ ಅವಳನ್ನು ಪೇಸ್ ಬುಕ್ ನಲ್ಲಿ ಕಂಡು ಅಚ್ಚರಿಯಾಯಿತು. ಅದೇ ಮುಖ ಆ ದಿನಗಳ ನಗು ಇನ್ನು ಮರೆಯಾಗಿಲ್ಲ.

ಇದೆ ಅನಿಸುತ್ತೇ ಒಂದಷ್ಟು ಜನಗಳು ಏನೇ ಏನು ಎಂದರೂ ಬದಲಾಗಲಾರರು.

ಕಾಲ ಮಾತ್ರ ಬದಲಾಗಬೇಕು ಅಷ್ಟೇ!

ಬಹಳ ದಿನಗಳ ಅನಂತರ ಸಿಕ್ಕಿದ ಗೆಳತಿಯನ್ನು ಏನಮ್ಮಾ ಎಲ್ಲಿ ಹೋಗಿದ್ದೇ? ಎಂದು ಅದೇ ಗೆಳೆತನದ ರೀತಿಯಲ್ಲಿ ಕೇಳಿದೇ.

ಅಂದಿನ ಆ ಸುಮಿತ್ರಾ ಇಂದು ಸುಮಿತ್ರಾ ಸಾಗರ್ ಆಗಿ ದೂರದ ಅಮೆರಿಕಾದಲ್ಲಿ  ವಾಸಿಸುತ್ತಿದ್ದಾರಂತೆ.  ಸಾಕಷ್ಟು ಬದಲಾವಣೆಯ ಗಾಳಿ ಉಂಟಾಗಿದೆ ಎಂಬುದು ಚಾಟ್ ಮೂಲಕ ತಿಳಿಯಿತು. ಮುದ್ದಾದ ಎರಡು ಮಕ್ಕಳು ಮತ್ತು ಸಾಪ್ಟವೇರ್ ಸಂಗಾತಿಯ ಜೊತೆಯಲ್ಲಿ ಚೆನ್ನಾಗಿಯೇ ಇದ್ದೀನಿ ಎಂದು ಸ್ಮೈಲ್ ಐಕಾನ್ ಮೊಲಕ ತಿಳಿಸಿದಳು.

ಇನ್ನೊಮ್ಮೆ ಚಾಟ್ ಮಾಡೋಣ ಬಾಯ್ ಎಂದು ಲಾಗೌಟ್ ಆದಳು.

ಪೇಸ್ ಬುಕ್ ಈ ರೀತಿಯಲ್ಲಿ ಉಪಯೋಗವಾಗುವುದು. ಸುದ್ಧಿಯೇ ಇಲ್ಲದೇ ಕಳೆದು ಹೋದ ಗೆಳೆಯರು, ಗೆಳೆಯತಿಯರು, ನೆರೆಹೊರೆಯವರು ದೂರದವರು ಪ್ರತಿಯೊಬ್ಬರನ್ನು ಒಂದಲ್ಲಾ ಒಂದು ಸಮಯದಲ್ಲಿ ದುತ್ತನೇ ಪ್ರತ್ಯಕ್ಷ ಮಾಡಿಸುತ್ತದೆ.

ಈ ಸುಮಿತ್ರಾ ಪ್ರಥಮ ಪಿ.ಯು ದಿಂದ ಇಂಜಿನಿಯರಿಂಗ್ ಮುಗಿಯುವವರೆಗೂ ಜೊತೆಯಲ್ಲಿಯೇ ಓದುತ್ತಾ ಪರಿಚಯದ ಹುಡುಗಿಯಾಗಿದ್ದರು.

ಓದುವ ವೇಳೆಯಲ್ಲಿ ನಮಗೆಲ್ಲಿ ಗೊತ್ತೂ.. ಹೀಗೆಲ್ಲಾ ಜೀವನ ನಮ್ಮನ್ನೆಲ್ಲಾ ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗುತ್ತದೆಂದು?

ಓದುವುದು ಒಂದು ಮಾಡುವುದು ಮತ್ತೊಂದು. ಓದಿಗೆ ತಕ್ಕನಾದ ಕೆಲಸ ಸಿಕ್ಕುವುದಾದರೇ ನಮ್ಮಗಳ ಪಾಡು ಹೀಗೆ ಯಾಕೆ ಇರುತ್ತಿತ್ತು.

ಹಾಗೆಯೇ ಕೆಲಸಕ್ಕಾಗಿಯೇ ಎಂದು ಓದಬಾರದು. ಪದೆ ಪದೆ ಹೀಗೆ ಹೇಳುತ್ತಿದ್ದ ನಮ್ಮ ಇಂಜಿನಿಯರಿಂಗ್ ಕಾಲೇಜು ಲೆಕ್ಚ್ ರ್ ಮಾತು.

ಎಷ್ಟು ಸತ್ಯ!

ಈಗ ಸುಮಿತ್ರಾ ನನ್ನೇ ತೆಗುದುಕೊಂಡರೇ... ಆಗ ಓದುತ್ತಿದ್ದ ಸ್ಪೀಡ್ ಗೆ ಇಲ್ಲಿಯೇ ಭಾರತದಲ್ಲಿ ಯಾವುದಾದರೂ ದೊಡ್ಡ ಆಫೀಸ್ ನಲ್ಲಿ ಅಥವಾ ದೊಡ್ಡ ಹುದ್ದೆಯಲ್ಲಿಯೇ ಇರಬೇಕಾಗಿತ್ತು.

ನಾವಂತೂ ಸುಮಿತ್ರ ಓದುವ ಕ್ಯಪಾಸಿಟಿಗೆ ಥಂಡಾ ಹೋಗಿಬಿಟ್ಟಿದ್ದೀವಿ.

ಸತತ ನಾಲ್ಕು ವರುಷಗಳು ಕಾಲೇಜಿಗೆ ಒಬ್ಬಳೇ ಟಾಪರ್. ನಾವು ಯಾರೊಬ್ಬರೂ ಓದುವುದರಲ್ಲಿ ಅವಳ ಸರಿ ಸಮ ಬರಲು ಹಾಗಲೇ ಇಲ್ಲ!

ಅದು ಓದುವ ದಿನಗಳು. ಮತ್ತೆ ಎಂದು ನಮಗೆ ಮರಳಿ ಬರಲಾರವು.

ಕೇವಲ ನೆನಪುಗಳು ಮಾತ್ರ!

ಆದರೇ ಇಂದು ಸುಮಿತ್ರಾ ತುಂಬು ಗೃಹಿಣಿಯಾಗಿ ಎರಡು ಮಕ್ಕಳ ಮತ್ತು ಗಂಡನ ಕ್ಷೇಮ ಮಾತ್ರ ನೋಡಿಕೊಳ್ಳುತ್ತಿರುವುದು. ಅದೇ ಟಾಪರ್ ಸುಮಿತ್ರಾನ ಅನಿಸುತ್ತದೆ!

ಕಾಲ ಎಲ್ಲಿಂದ ಎಲ್ಲಿಗೂ ಚಲಿಸಿದೆ.

ಜೀವನ ದೊಡ್ಡದು!

ಅಂದುಕೊಂಡದ್ದು ಯಾವುದು ಸಿಗಲಾರದು. ಬದುಕಿಗೆ ತಕ್ಕಂತೆ ಹೊಂದಿಕೊಳ್ಳಬೇಕು. ಅದೇ ಜೀವನ ಮರ್ಮ!

ಈಗ ನೆನಪಿಸಿಕೊಂಡರೇ ಅದೇ ಅಚ್ಚರಿಯಾಯಿತು.

ಅಲ್ಲಾ ನಾವೆಲ್ಲಾ ಅಷ್ಟು ಸಾಹಸಪಟ್ಟಿದ್ದು ಇದಕ್ಕೇನಾ ಅನಿಸುತ್ತದೆ. ಅಂದು ಚೆನ್ನಾಗಿ ಓದಿದ ಮೇಡಮ್ಮ ಇಂದು ಮನೆಯಲ್ಲಿದ್ದಾರೆ. ನಾವುಗಳು ಯುಜ್ ಲೇಸ್ ಎಂದುಕೊಂಡವರು ಟಸ್ಸು ಪುಸ್ ಎಂದುಕೊಂಡು ಕೊರಳಿಗೆ ಟ್ಯಾಗ್ ಹಾಕಿಕೊಂಡು ಮಿಂಚುವ ಎಂ.ಎನ್.ಸಿ ಯಲ್ಲಿ ದುಡಿಯುತ್ತಿದ್ದೇವೆ.

ಇಲ್ಲಿ ಯಾರು ಮುಂದೆ? ಯಾರು ಹಿಂದೆ? ಗೊತ್ತಾಗುತ್ತಿಲ್ಲ!

ನನಗೆ ಅನಿಸುತ್ತದೆ. ಸುಮಿತ್ರ ಏನಾದರೂ ಒಮ್ಮೆಯಾದರೂ ಅಂದಿನ ಕಾಲೇಜು ದಿನಗಳಲ್ಲಿನ ಭರವಸೆಯ ಕನಸಿನ ಬಗ್ಗೆ ಈಗ ಯೋಚಿಸಿರುವಳೆ? ಅಂದಿನ ನೆನಪು ಇಂದು ಇಲ್ಲವೇ? ಏನಾದರೂ ಪಶ್ಚಾತಪದ ಬೇಸರ ಮನದಲ್ಲಿ ಉಂಟಾಗಿದೆಯೇ?

ಮತ್ಯಾವತ್ತಾದರೂ ಚಾಟ್ ಗೆ ಸಿಕ್ಕಾಗೆ ಕೇಳೇ ಕೇಳುತ್ತೇನೆ.

ಕೆಲಸ ಸಿಕ್ಕಿ ಹೆಚ್ಚು ದುಡಿದರೇ ಮಾತ್ರ ಓದಿದ್ದು ಸಾರ್ಥಕವಾ?

ಓದುವುದು ದುಡಿಯುವುದಕ್ಕೆ ಮಾತ್ರನಾ?

ಅಲ್ಲಾ ಅಷ್ಟೆಲ್ಲಾ ಓದಿ ಮೊಡಿಗೆರೆ ಎಂಬ ಹಳ್ಳಿಗೆ ಬಂದು ವ್ಯವಸಾಯ ಮಾಡಿದ ತೇಜಸ್ವಿ ಗ್ರೇಟ್ ಅಲ್ಲವಾ? ನಗರದಲ್ಲಿಯೇ ಇದ್ದುಕೊಂಡು ಯಾರು ಸಾಧಿಸಲಾಗರದದ್ದನ್ನು ಗದ್ದೆ, ಕಾಡು, ಪ್ರಾಣಿ, ಸಸ್ಯಗಳ ಮದ್ಯೆಯೇ ಇದ್ದುಕೊಂಡು ವಿಶ್ವಕ್ಕೆ ಗೋಚರಿಸಿದ್ದು ಕಡಿಮೆ ಸಾಧನೆಯೆನಲ್ಲ!

ಅಲ್ಲವಾ ನೀವೇ ಹೇಳಿ! ವಿಶ್ವ ವಿದ್ಯಾಲಯದಲ್ಲಿರುವವರು ತೇಜಸ್ವಿ ಬರೆದಿದ್ದನ್ನು ಸಿಲಬಸ್ ಆಗಿ ಅಧ್ಯಯನ ಮಾಡುತ್ತಿದ್ದಾರೆ.

ತೇಜಸ್ವಿ ರೀತಿ ಯಾಕೆ ಯಾರು ಯೋಚನೆ ಮಾಡುವುದಿಲ್ಲ?

ಸುಮಿತ್ರ ಳನ್ನು ಕಂಡು ನಾನು ಯಾಕೆ ತಕ್ಷಣ ಹಾಗೆ ಯೋಚಿಸಿದೆ?

ಓದಿದ್ದಾರೆ ಎಂದರೇ ಅಫೀಸ್ ನಲ್ಲಿ ಮಾತ್ರ ಕೆಲಸ ಮಾಡಬೇಕೇ? ಮತ್ತಿನೇನನ್ನೂ ಮಾಡಬಾರದೇ?

ನಿಜವಾದ ಪ್ರತಿಭೆ ಎಂದರೇ ಏನು?

ಓದುವುದು ತಿಳುವಳಿಕೆಗೆ ಮಾತ್ರ ಎಂದು ಯಾಕೆ ಯಾರೊಬ್ಬರೂ ಯೋಚಿಸಲಾರರು.

ದುಡ್ಡು ಗಳಿಸುವುದೊಂದೇ ಬದುಕಾ? ಬದುಕುವುದಕ್ಕಾಗಿ ದುಡ್ಡು ಬೇಕು, ದುಡ್ಡಿಗಾಗಿ ಬದುಕುವುದೇ ಜೀವನವಾ?

ಓದುವ ಸಮಯದಲ್ಲಿ ಕೇವಲ ಕೆಲಸ ಗಳಿಸುವುದೊಂದೆ ಗುರಿಯಾಗುವುದು ಯಾಕೆ? ಆ ಸಮಯದಲ್ಲಿ ಬೇರೆ ಯಾವ ಯೋಚನೆಯು ಮನದಲ್ಲಿ ಸುಳಿಯಲಾರದಂತೆ ಮಾಡಿರುವ ವ್ಯವಸ್ಥೆಯ ಕೈಯಾದರೂ ಯಾವುದು?

ಪ್ರತಿಭೆಗಳು ಅರಳಬೇಕಂತೆ. ಅರಳುವ ಸಮಯ ಮತ್ತು ಸ್ಥಳಗಳೆಂದರೇ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಯ ಅಂಗಳಗಳಂತೆ. ಆದರೇ ಈ ಅಂಗಳಗಳು ಇಂದು ಕೇವಲ ಕೆಲಸ ಮಾಡುವ ಕಾರ್ಮಿಕರನ್ನು ತಯಾರು ಮಾಡುವ ಕಾರ್ಖನೆಗಳಾಗುತ್ತಿವೆಯೆಲ್ಲ ಇದು ಸರಿಯೇ?

ಹೊಸದಾಗಿ ಯೋಚಿಸುವಂತಹ ಮನಸ್ಸುಗಳ ನಿರ್ಮಾಣ ಮಾಡುವ ತಾಣಗಳಗಾಬೇಕಿದ್ದ ಕಾಲೇಜು, ವಿಶ್ವವಿದ್ಯಾನಿಲಯಗಳು ಯಾಕೆ ಇಂದು ಮಂಕಾಗಿವೆ ಅನಿಸುತ್ತಿವೆ ಇಂದು?

ಓದಿದ ಮನಸ್ಸುಗಳಿಗೆ ಕೆಲಸ ಸಿಗುತ್ತಿಲ್ಲ, ಕೆಲಸಕ್ಕೆ ಹೋಗುತ್ತಿಲ್ಲ ಎಂದರೇ ಯಾಕೆ ಬೇಜಾರು ಆಗುವುದು? ಕೆಲಸವಲ್ಲದೇ ಬೇರೆ ಬೇರೆ ಮನ ಕುಣಿಯುವ ಚಟುವಟಿಕೆಯ ಕೇಂದ್ರಗಳ್ಯಾಕಾಗುತ್ತಿಲ್ಲ?

ಅದೇ ಅಕ್ಕ ಪಕ್ಕದವರು ಏನು ಅನ್ನುತ್ತಾರೋ.. ಅಲ್ಲಿಯ ಗೆಳೆಯನಿಗೆ ಎಲ್ಲೋ ಕೆಲಸ ಸಿಕ್ಕಿತು.. ಆ ಗೆಳತಿ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ.. ನಾನು ಮಾತ್ರ ಇನ್ನೂ ಏನು ಮಾಡುತ್ತಿಲ್ಲಾ..ಓದಿದ್ದೇಲ್ಲಾ ವೇಸ್ಟ್.. ಹಾಗೆ ಹೀಗೆ ಎಂದು ಜಿಗುಪ್ಸೆಪಡುವುದು ಇಂದಿಗೂ ನಿಲ್ಲುತ್ತಿಲ್ಲ.

ಓದು ಹೊಸತನದ ಪ್ರತಿಭೆಗೆ ಮೊದಲ ಹೆಜ್ಜೆಯಾಗಬೇಕು. ನವ್ಯವಾಗಿ ಚಿಂತಿಸುವ ಮನಸ್ಸುಗಳಾಗಬೇಕು. ಈ ರೀತಿಯ ಮನೋಭಾವನೆಯನ್ನು ರೂಪಿಸುವ ಕ್ಲಾಸ್ ರೋಂ ಗಳಾಗಬೇಕಿರುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಸಿದ್ಧಾಂತವಾಗಬೇಕು.

ಸುಮಿತ್ರಾರನ್ನು ನೋಡಿದ ಮೇಲೆ ಹೀಗೆಲ್ಲಾ ಲಹರಿ ಬಂದು ಮಾತನಾಡಿದ್ದು ಕಣ್ರೀ.

ಅದು ಯಾಕೋ ಟಾಪರ್ ಸುಮಿತ್ರಾನನ್ನು ಇನ್ನು ಈ ನನ್ನ ಮನ ಮರೆಯಲಾರದೋ?

ಅವರನ್ನೇ ಕೇಳಿ ಹೇಳುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ