ಶಾಲೆಗಳು ದೂಳು ಕೊಡವಿಕೊಂಡು ಪ್ರಾರಂಭವಾಗಿವೆ.
ಕಾನ್ವೇಂಟ್ ಗಳಂತೂ ಒಂದು ತಿಂಗಳು ಮುಂಚೆಯೇ ಪ್ರಾರಂಭವಾಗಿವೆ. ಅಷ್ಟರ ಮಟ್ಟಿಗೆ ಕಾನ್ವೇಂಟ್ ಗಳು ಜನರ ಮನಸ್ಸನ್ನು ಸೆಳೆದಿವೆ.
ಸರ್ಕಾರಿ ಶಾಲೆಗಳನ್ನು ಕೇಳುವವರು ಯಾರು?
ಅವುಗಳು ಅದೇ ಹಳೆ ಸ್ಟೈಲ್ ನಲ್ಲಿ ಈ ತಿಂಗಳು ಶುರುವಾಗಿವೆ. ಆದರೇ ಶುರುವಾಗುವ ಸಮಯದಲ್ಲಿ ಕೆಟ್ಟ ಸುದ್ಧಿಯಂತೆ: ಸುಮಾರು ಮೂರು ಸಾವಿರ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚುವೆವು.. ಎಂಬ ಸುದ್ಧಿ, ಕನ್ನಡ ಮನಗಳನ್ನು ಕಲಿಕಿತು(?)
ಇದರ ಬಗ್ಗೆ ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಅಕ್ರೋಶವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಮತ್ತು ಶೇರ್ ಮಾಡುವ ಮೊಲಕ ಮಮ್ಮಲು ಮರುಗಿದರು.
ಕನ್ನಡದ ಬಗ್ಗೆ ಇಷ್ಟರ ಮಟ್ಟಿಗೆ ಹೋರಾಡುವ ಮನಸ್ಸುಗಳಾದರೂ ಇದ್ದಾವಲ್ಲ, ಕನ್ನಡಮ್ಮ ನೀ ಧನ್ಯ!!
ಪ್ರತಿ ವರುಷ ಹೀಗೆ ಕಂತು ಕಂತಿನಲ್ಲಿ ಸರ್ಕಾರಿ ಶಾಲೆಗಳು ಕಣ್ಣು ಮುಚ್ಚುತ್ತಿರುವುದು ಯಾವುದರ ಮುನ್ಸೂಚನೆಯೆಂಬುದು ಗೊತ್ತಾಗುತ್ತಿಲ್ಲ.
ಆದರೇ ಅಷ್ಟರ ಮಟ್ಟಿಗೆ ನಮ್ಮ ಕನ್ನಡಿಗರ ಮನಸ್ಸು ಕಾನ್ವೇಂಟ್ - ಇಂಗ್ಲೀಷ್ ಮಾಧ್ಯಮದ ಕಡೆ ಹರಿಯುತ್ತಿರುವ ದಿಕ್ಸೊಚಿ ಇದು, ಅಂದರೇ ತಪ್ಪಲ್ಲ.
ಪೇಸ್ ಬುಕ್ ಮತ್ತು ಸೋಷಿಯಲ್ ಮೀಡಿಯದಲ್ಲಿ ಲೈಕ್, ಶೇರ್ ಮಾಡಿದ ಮಂದಿಯೇ ತಮ್ಮ ಮಕ್ಕಳನ್ನು ಕಾನ್ವೇಂಟ್ ಗಳಿಗೆ ಇಂದಿಗೂ ಕಳಿಸುತ್ತಿದ್ದಾರೆ.
Why? ಎಂದರೇ.. ಅದು ಬೇರೆ.. ನಾವು ಹೀಗೆ ಮರುಗುವುದು ಬೇರೆ.. ಎಂದು ಮೂಗು ಮುರಿಯುವವರು.
ಹೌದು ಸರ್ಕಾರಿ ಸ್ಕೋಲ್ ಮಾತ್ರ ಬೇಡ. ಸರ್ಕಾರಿ ಕೆಲಸ ಮಾತ್ರ ಇರಲಿ. ಎಂಬ ಮನೋಭಾವ ನಮ್ಮಲ್ಲಿ ಬೆಳೆಯುತ್ತಿರುವುದು ಯಾಕೋ ಸರಿ ಕಾಣುತ್ತಿಲ್ಲ.
ಹೆಚ್ಚು ಹೆಚ್ಚು ವಸೂಲಿ ಮಾಡುವ ಖಾಸಗಿ ಶಾಲೆಗಳೇ ನಮ್ಮ ಕಣ್ಣುಗಳಿಗೆ ನಕ್ಷತ್ರಗಳಂತೆ ಹೊಳೆಯುತ್ತಿವೆ.
ಈಗಂತೂ ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗಲಿ ಎಂಬ ಪ್ರಾರ್ಥನೆಯೇ...?
ಹೇಗಾದರೂ ಸರಿ, ಎಷ್ಟೇ ಕಷ್ಟವಾದರೂ ಸರಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಸೂಲ ಮಾಡಿಯಾದರೂ, ಡೊನೇಷನ್ ಕಟ್ಟಿ ಸಾವಿರ ಸಾವಿರ ಸುರಿದು ಮಕ್ಕಳ ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಾರೆ.
ಸರ್ಕಾರಿ ಶಾಲೆಗಳು ಉಪಯೋಗವಿಲ್ಲದ್ದವೂ ಎಂಬ ಕೀಳು ಮನೋಭಾವನೆ ಎಲ್ಲಿಂದ ಬಂತೋ ದೇವರೇ ಬಲ್ಲ! ಬಡವರಿಗೆ ಮಾತ್ರ. ಕೈಲಿ ಏನೂ ಸಾಧ್ಯವಿಲ್ಲದವರಿಗೆ ಮಾತ್ರ ಈ ಶಾಲೆಗಳು.
ಅಯ್ಯೋ ಪಾಪ!
ಸರ್ಕಾರದವರೂ ಸಹ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಅದಕ್ಕೆ ಒಂದು ದೊಡ್ಡ ಇಲಾಖೆ, ಮಂತ್ರಿಗಳು ,
ದೊಡ್ಡ ಅಧಿಕಾರಿಗಳು, ಮಾಸ್ತರುಗಳು ಎಲ್ಲ ಇದ್ದಾರೆ. ಆದರೇ ಮಕ್ಕಳು ಮಾತ್ರ ಕಡಿಮೆ.
ಅದಕ್ಕೆ ಪ್ರತಿ ವರುಷ ಸಾವಿರ ಸಾವಿರ ಶಾಲೆಗಳು ಶಾಶ್ವತ ಬೀಗ ಜಡಿಸಿಕೊಳ್ಳುತ್ತಿವೆ.
ನಮ್ಮ ಜನಗಳ ಕ್ರೇಜ್ ಇಷ್ಟರ ಮಟ್ಟಿಗೆ ಕಾನ್ವೇಂಟ್ ಮಯವಾಗಿದೆ. ಚಿಕ್ಕ ಚಿಕ್ಕ ಮಕ್ಕಳ ಬಾಯಲ್ಲಿ ಅಸ್ಪಷ್ಟ ಇಂಗ್ಲೀಷ್ ಕೇಳಿದರೇ ಅದು ಏನೋ ಸಂಭ್ರಮ. ತೂದಲು ಮಾತಿನ ಇಂಗ್ಲೀಷ್ ಆ ಮಗುವಿನ ಮುಂದಿನ ಭವಿಷ್ಯ ರೂಪಿಸುವುದು ಎಂಬ ಭ್ರಮೆಯಲ್ಲಿ ಪ್ರತಿಯೊಬ್ಬ ಪೋಷಕರು ಬಂದಿಯಾಗಿರುವವರು.
ಹೆಚ್ಚು ಹಣ ಪಡೆಯುವುದು ಇದಕ್ಕೆ. ಅವರು ಅಷ್ಟು ದುಡ್ಡು ವಸೂಲಿ ಮಾಡುತ್ತಾರೆ ಎಂದರೇ ಅಷ್ಟು ಚೆನ್ನಾಗಿ ಕಲಿಸಿಯೇ ಕಲಿಸುತ್ತಾರೆ ಎನ್ನುತ್ತಾರೆ. ಈ ಸರ್ಕಾರಿ ಶಾಲೆಗಳಲ್ಲಿ ಏನೂ ಕಲಿಸುತ್ತಾರೆ ಗುರು? ಅಲ್ಲಿ ನೆಟ್ಟಗೆ ಒಬ್ಬ ಮೇಷ್ಟ್ರೇ ಇಲ್ಲ ಎನ್ನುತ್ತಾರೆ.
ನಮ್ಮ ದೇಶದ ಸರ್ಕಾರಿ ಶಾಲೆಗಳನ್ನು ಮುಂದೆ ಇತಿಹಾಸದಲ್ಲಿ ಓದುವ ಕಾಲ ಬಂದರೇ ಸೋಜಿಗವಲ್ಲ.
ಈ ತಿಂಗಳಂತೂ ಮಕ್ಕಳಿಗೆ ಮತ್ತು ಹೆತ್ತವರಿಗೆ ಬ್ಯುಸಿ ತಿಂಗಳು. ಮಕ್ಕಳನ್ನು ಹೊಸ ಹೊಸ ಶಾಲೆಗಳಿಗೆ ಸೇರಿಸಲು ಎಷ್ಟೊಂದು ಕಷ್ಟಪಟ್ಟಿರುತ್ತಾರೆ. ಖಾಸಗಿ ಶಾಲೆಗಳಲ್ಲಿ ಸೀಟು ಸಿಗುವುದು ಅಷ್ಟು ಸುಲಭದ ಮಾತಲ್ಲ. ಅದರ ಪುರಾಣವೇ ಬೇರೆ. ಅದಕ್ಕಾಗಿ ವರುಷದಿಂದ ಕಾಯುತ್ತಿರುತ್ತಾರೆ.
ಅಂತೂ ಈ ತಿಂಗಳಿಂದ ಮಗು ಸ್ಕೊಲಿಗೆ ಹೋಯ್ತು ಎಂದು ನಿಟ್ಟುಸಿರುಬಿಟ್ಟಿರುತ್ತಾರೆ.
ಈ ಬದಲಾದ ಕಾಲ ಮತ್ತು ಜನಗಳ ಮನೋಭಾವ ಮಕ್ಕಳನ್ನು ಮಕ್ಕಳಾಗಿ ನೋಡಲಾರದಂತಾಗಿದೆ. ಚಿಕ್ಕ ಮಕ್ಕಳೇ ಸಿರಿಯ್ಸ್ ಆದ ದೊಡ್ಡವರಂತೆ ವರ್ತಿಸುತ್ತಿದ್ದಾರೆ. ಹೆತ್ತವರ ದುಡಿಮೆ ಮತ್ತು ಹಂಬಲ ತಮ್ಮ ಮುದ್ದು ಮಕ್ಕಳ ಮುಖದ ಮೇಲೆ ಕಾಣುತ್ತಿದೆಂಬಂತೆ ಭಾಸವಾಗುತ್ತಿದೆ.
ವಯಸ್ಸಿಗೆ ಮೀರಿದ ಮಾತು, ವಯಸ್ಸಿಗೆ ಮೀರಿದ ನಡಾವಳಿಕೆ ಮತ್ತು ಗಂಭೀರತೆ ಇಂದಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.
ನೀವು ನೋಡಿರಬಹುದು.. ಇಂದಿನ ನಮ್ಮ ಮನೆಯ ಟಿ.ವಿಯಲ್ಲಿ ಬರುವ ರೀಯಾಲಿಟಿ ಶೋ ನಲ್ಲಿ ಬಾಗಿಯಾಗುವ ಪುಟ್ಟ ಪುಟ್ಟ ಕಂದಮ್ಮಗಳ ಬಾಯಲ್ಲಿ ದೊಡ್ಡವರು ಮಾತನಾಡುವ ಮಾತುಗಳು.ಮಕ್ಕಳ ನಡೆ ನುಡಿಗಳು ಕಂಡು ದೊಡ್ಡವರೇ ನಾಚುವಂತಾಗಿದೆ.
ಪ್ರತಿಯೊಂದರಲ್ಲೂ ಸ್ವರ್ದೆ. ಮಕ್ಕಳು ಮಕ್ಕಳಾಗಿ ದೊಡ್ಡವರು ಬಿಟ್ಟೇ ಇಲ್ಲವೆಂದು ಅನಿಸುತ್ತದೆ.
ಆ ತುಂಟತನ, ಆಟ- ಪಾಠ ಎಲ್ಲಾ ಮಾಯವಾಗಿಬಿಟ್ಟಿದೆ! ಬಾಲ್ಯವೇ ಎಲ್ಲೋ ಕಳೆದು ಹೋಗುತ್ತಿದೆ
ಪ್ರತಿಯೊಂದರಲ್ಲೂ ’ದಿ ಬೇಸ್ಟ" ನೀ ಆಗಬೇಕು ಎಂಬ ಈ ಸುಸ್ತು ಮಕ್ಕಳ ಮನಸ್ಸಿನಲ್ಲಿ ಕಾಣುತ್ತಿದೇವೆಂದು ಅನಿಸುತ್ತದೆ.
ನನಗಂತೂ ಅಯ್ಯೋ ಪುಟ್ಟ ಪಾಪುವೇ ಎಂದೆನಿಸುತ್ತದೆ.
ಅಂಕ, ಸ್ಥಾನ, ಹುದ್ದೆ ಎಂಬ ಶಬ್ಧಗಳೇ ಅವುಗಳ ಗುರಿ ಮಾಡಿಬಿಟ್ಟಿದ್ದೇವೆನೋ.
ನೆನಸಿಕೊಂಡರೇ ಮೈ ಜುಂ ಅನಿಸುತ್ತದೆ.
ಈ ರೀತಿಯ ಭಾರಿ ಭರವಸೆಗಳ, ಕನಸುಗಳ, ಭವಿಷ್ಯದ ಬಾರವಾದ ಚೀಲಗಳನ್ನು ಹೊತ್ತುಕೊಂಡು ಮಕ್ಕಳು ತನ್ನ ಮೊದಲ ಹೆಜ್ಜೆಗಳನ್ನು ಶಾಲೆಗಳ ಕಡೆಗೆ ಈ ತಿಂಗಳು ಹಾಕಿಬಿಟ್ಟಿವೆ.
ಮುಂದಿನ ಒಂದು ವರುಷ ಓದುವುದೊಂದೆ ಅವುಗಳ ಕೆಲಸ. ಓದು ಓದು ಮತ್ತು ಓದು. ಹೆತ್ತವರಿಗೂ ಒತ್ತಡ ಮಕ್ಕಳಿಗೂ ಒತ್ತಡ.
ಇಂದಿನ ಪೋಷಕರು ತಮ್ಮ ಮಕ್ಕಳ ಓದುವುದರ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಮತ್ಯಾವುದರ ಬಗ್ಗೆಯು ಯೋಚಿಸಿರುವುದಿಲ್ಲ.
ಎಲ್ಲಾ ದುಭಾರಿ. ಒಂದು ಮಗು ಜನಿಸಿದರೇ ಸಾಕು ಹೆತ್ತವರ ಯೋಚನೆ ದುಪ್ಪಟ್ಟಾಗುತ್ತದೆ.
ಮಕ್ಕಳಾದ ಮೇಲೆ ತಂದೆ ತಾಯಿಗಳ ಜೀವನ ಅಷ್ಟೇ. ಮಕ್ಕಳನ್ನು ಒಂದು ದಡ ಸೇರಿಸುವುದರಲ್ಲಿಯೇ ತಮ್ಮ ಪೂರ್ತಿ ಅಯುಷ್ಯವನ್ನು ಕಳೆದುಬಿಡುತ್ತಾರೆ.
ನಮ್ಮ ಹಿಂದಿನವರು ಹೀಗೆಲ್ಲಾ ಎಂದು ಚಿಂತಿಸಿರಲಾರರು. ಆದರೇ ಇದರ ಜರೂರತೂ ಇಂದು ಹೆಚ್ಚು. ಏನೂ ಮಾಡುವ ಆಗಿಲ್ಲ! ಕಾಲಕ್ಕೆ ತಕ್ಕಂತೆ ಬದುಕಬೇಕು. ಈಗ ಸುಮ್ಮನೇ ಓದಿದರೇ ಯಾರು ಮೂಸಿಯು ನೋಡುವುದಿಲ್ಲ. ಎಲ್ಲಾದರಲ್ಲೂ ಚ್ಯೂಟಿ ಇರುವವರೇ ಬೇಕು. ಅದಕ್ಕಾಗಿಯೇ ಪ್ರತಿಯೊಬ್ಬರೂ ಶಿಕ್ಷಣವನ್ನು ತಪಸ್ಸಿನಂತೆ ಜಪಿಸುತ್ತಾರೆ.
ಇದಕ್ಕಾಗಿ ನಮ್ಮ ಎಲ್ಲಾ ಖಾಸಗಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಕಟಿ ಬದ್ಧವಾಗಿವೆ!
ಓದು ಒಂದು ವ್ಯಾಪಾರವನ್ನಾಗಿ ಮಾಡಿತ್ತಿದ್ದೇವೆನೋ ಅನಿಸುತ್ತಿದೆ. ಅದು ಆಗಬಾರದು. ಎಂದೆಂದಿಗೂ. ಎಂಬುದೇ ನನ್ನ ಆಶಯ!
ಕಾನ್ವೇಂಟ್ ಗಳಂತೂ ಒಂದು ತಿಂಗಳು ಮುಂಚೆಯೇ ಪ್ರಾರಂಭವಾಗಿವೆ. ಅಷ್ಟರ ಮಟ್ಟಿಗೆ ಕಾನ್ವೇಂಟ್ ಗಳು ಜನರ ಮನಸ್ಸನ್ನು ಸೆಳೆದಿವೆ.
ಸರ್ಕಾರಿ ಶಾಲೆಗಳನ್ನು ಕೇಳುವವರು ಯಾರು?
ಅವುಗಳು ಅದೇ ಹಳೆ ಸ್ಟೈಲ್ ನಲ್ಲಿ ಈ ತಿಂಗಳು ಶುರುವಾಗಿವೆ. ಆದರೇ ಶುರುವಾಗುವ ಸಮಯದಲ್ಲಿ ಕೆಟ್ಟ ಸುದ್ಧಿಯಂತೆ: ಸುಮಾರು ಮೂರು ಸಾವಿರ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚುವೆವು.. ಎಂಬ ಸುದ್ಧಿ, ಕನ್ನಡ ಮನಗಳನ್ನು ಕಲಿಕಿತು(?)
ಇದರ ಬಗ್ಗೆ ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಅಕ್ರೋಶವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಮತ್ತು ಶೇರ್ ಮಾಡುವ ಮೊಲಕ ಮಮ್ಮಲು ಮರುಗಿದರು.
ಕನ್ನಡದ ಬಗ್ಗೆ ಇಷ್ಟರ ಮಟ್ಟಿಗೆ ಹೋರಾಡುವ ಮನಸ್ಸುಗಳಾದರೂ ಇದ್ದಾವಲ್ಲ, ಕನ್ನಡಮ್ಮ ನೀ ಧನ್ಯ!!
ಪ್ರತಿ ವರುಷ ಹೀಗೆ ಕಂತು ಕಂತಿನಲ್ಲಿ ಸರ್ಕಾರಿ ಶಾಲೆಗಳು ಕಣ್ಣು ಮುಚ್ಚುತ್ತಿರುವುದು ಯಾವುದರ ಮುನ್ಸೂಚನೆಯೆಂಬುದು ಗೊತ್ತಾಗುತ್ತಿಲ್ಲ.
ಆದರೇ ಅಷ್ಟರ ಮಟ್ಟಿಗೆ ನಮ್ಮ ಕನ್ನಡಿಗರ ಮನಸ್ಸು ಕಾನ್ವೇಂಟ್ - ಇಂಗ್ಲೀಷ್ ಮಾಧ್ಯಮದ ಕಡೆ ಹರಿಯುತ್ತಿರುವ ದಿಕ್ಸೊಚಿ ಇದು, ಅಂದರೇ ತಪ್ಪಲ್ಲ.
ಪೇಸ್ ಬುಕ್ ಮತ್ತು ಸೋಷಿಯಲ್ ಮೀಡಿಯದಲ್ಲಿ ಲೈಕ್, ಶೇರ್ ಮಾಡಿದ ಮಂದಿಯೇ ತಮ್ಮ ಮಕ್ಕಳನ್ನು ಕಾನ್ವೇಂಟ್ ಗಳಿಗೆ ಇಂದಿಗೂ ಕಳಿಸುತ್ತಿದ್ದಾರೆ.
Why? ಎಂದರೇ.. ಅದು ಬೇರೆ.. ನಾವು ಹೀಗೆ ಮರುಗುವುದು ಬೇರೆ.. ಎಂದು ಮೂಗು ಮುರಿಯುವವರು.
ಹೌದು ಸರ್ಕಾರಿ ಸ್ಕೋಲ್ ಮಾತ್ರ ಬೇಡ. ಸರ್ಕಾರಿ ಕೆಲಸ ಮಾತ್ರ ಇರಲಿ. ಎಂಬ ಮನೋಭಾವ ನಮ್ಮಲ್ಲಿ ಬೆಳೆಯುತ್ತಿರುವುದು ಯಾಕೋ ಸರಿ ಕಾಣುತ್ತಿಲ್ಲ.
ಹೆಚ್ಚು ಹೆಚ್ಚು ವಸೂಲಿ ಮಾಡುವ ಖಾಸಗಿ ಶಾಲೆಗಳೇ ನಮ್ಮ ಕಣ್ಣುಗಳಿಗೆ ನಕ್ಷತ್ರಗಳಂತೆ ಹೊಳೆಯುತ್ತಿವೆ.
ಈಗಂತೂ ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗಲಿ ಎಂಬ ಪ್ರಾರ್ಥನೆಯೇ...?
ಹೇಗಾದರೂ ಸರಿ, ಎಷ್ಟೇ ಕಷ್ಟವಾದರೂ ಸರಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಸೂಲ ಮಾಡಿಯಾದರೂ, ಡೊನೇಷನ್ ಕಟ್ಟಿ ಸಾವಿರ ಸಾವಿರ ಸುರಿದು ಮಕ್ಕಳ ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಾರೆ.
ಸರ್ಕಾರಿ ಶಾಲೆಗಳು ಉಪಯೋಗವಿಲ್ಲದ್ದವೂ ಎಂಬ ಕೀಳು ಮನೋಭಾವನೆ ಎಲ್ಲಿಂದ ಬಂತೋ ದೇವರೇ ಬಲ್ಲ! ಬಡವರಿಗೆ ಮಾತ್ರ. ಕೈಲಿ ಏನೂ ಸಾಧ್ಯವಿಲ್ಲದವರಿಗೆ ಮಾತ್ರ ಈ ಶಾಲೆಗಳು.
ಅಯ್ಯೋ ಪಾಪ!
ಸರ್ಕಾರದವರೂ ಸಹ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಅದಕ್ಕೆ ಒಂದು ದೊಡ್ಡ ಇಲಾಖೆ, ಮಂತ್ರಿಗಳು ,
ದೊಡ್ಡ ಅಧಿಕಾರಿಗಳು, ಮಾಸ್ತರುಗಳು ಎಲ್ಲ ಇದ್ದಾರೆ. ಆದರೇ ಮಕ್ಕಳು ಮಾತ್ರ ಕಡಿಮೆ.
ಅದಕ್ಕೆ ಪ್ರತಿ ವರುಷ ಸಾವಿರ ಸಾವಿರ ಶಾಲೆಗಳು ಶಾಶ್ವತ ಬೀಗ ಜಡಿಸಿಕೊಳ್ಳುತ್ತಿವೆ.
ನಮ್ಮ ಜನಗಳ ಕ್ರೇಜ್ ಇಷ್ಟರ ಮಟ್ಟಿಗೆ ಕಾನ್ವೇಂಟ್ ಮಯವಾಗಿದೆ. ಚಿಕ್ಕ ಚಿಕ್ಕ ಮಕ್ಕಳ ಬಾಯಲ್ಲಿ ಅಸ್ಪಷ್ಟ ಇಂಗ್ಲೀಷ್ ಕೇಳಿದರೇ ಅದು ಏನೋ ಸಂಭ್ರಮ. ತೂದಲು ಮಾತಿನ ಇಂಗ್ಲೀಷ್ ಆ ಮಗುವಿನ ಮುಂದಿನ ಭವಿಷ್ಯ ರೂಪಿಸುವುದು ಎಂಬ ಭ್ರಮೆಯಲ್ಲಿ ಪ್ರತಿಯೊಬ್ಬ ಪೋಷಕರು ಬಂದಿಯಾಗಿರುವವರು.
ಹೆಚ್ಚು ಹಣ ಪಡೆಯುವುದು ಇದಕ್ಕೆ. ಅವರು ಅಷ್ಟು ದುಡ್ಡು ವಸೂಲಿ ಮಾಡುತ್ತಾರೆ ಎಂದರೇ ಅಷ್ಟು ಚೆನ್ನಾಗಿ ಕಲಿಸಿಯೇ ಕಲಿಸುತ್ತಾರೆ ಎನ್ನುತ್ತಾರೆ. ಈ ಸರ್ಕಾರಿ ಶಾಲೆಗಳಲ್ಲಿ ಏನೂ ಕಲಿಸುತ್ತಾರೆ ಗುರು? ಅಲ್ಲಿ ನೆಟ್ಟಗೆ ಒಬ್ಬ ಮೇಷ್ಟ್ರೇ ಇಲ್ಲ ಎನ್ನುತ್ತಾರೆ.
ನಮ್ಮ ದೇಶದ ಸರ್ಕಾರಿ ಶಾಲೆಗಳನ್ನು ಮುಂದೆ ಇತಿಹಾಸದಲ್ಲಿ ಓದುವ ಕಾಲ ಬಂದರೇ ಸೋಜಿಗವಲ್ಲ.
ಈ ತಿಂಗಳಂತೂ ಮಕ್ಕಳಿಗೆ ಮತ್ತು ಹೆತ್ತವರಿಗೆ ಬ್ಯುಸಿ ತಿಂಗಳು. ಮಕ್ಕಳನ್ನು ಹೊಸ ಹೊಸ ಶಾಲೆಗಳಿಗೆ ಸೇರಿಸಲು ಎಷ್ಟೊಂದು ಕಷ್ಟಪಟ್ಟಿರುತ್ತಾರೆ. ಖಾಸಗಿ ಶಾಲೆಗಳಲ್ಲಿ ಸೀಟು ಸಿಗುವುದು ಅಷ್ಟು ಸುಲಭದ ಮಾತಲ್ಲ. ಅದರ ಪುರಾಣವೇ ಬೇರೆ. ಅದಕ್ಕಾಗಿ ವರುಷದಿಂದ ಕಾಯುತ್ತಿರುತ್ತಾರೆ.
ಅಂತೂ ಈ ತಿಂಗಳಿಂದ ಮಗು ಸ್ಕೊಲಿಗೆ ಹೋಯ್ತು ಎಂದು ನಿಟ್ಟುಸಿರುಬಿಟ್ಟಿರುತ್ತಾರೆ.
ಈ ಬದಲಾದ ಕಾಲ ಮತ್ತು ಜನಗಳ ಮನೋಭಾವ ಮಕ್ಕಳನ್ನು ಮಕ್ಕಳಾಗಿ ನೋಡಲಾರದಂತಾಗಿದೆ. ಚಿಕ್ಕ ಮಕ್ಕಳೇ ಸಿರಿಯ್ಸ್ ಆದ ದೊಡ್ಡವರಂತೆ ವರ್ತಿಸುತ್ತಿದ್ದಾರೆ. ಹೆತ್ತವರ ದುಡಿಮೆ ಮತ್ತು ಹಂಬಲ ತಮ್ಮ ಮುದ್ದು ಮಕ್ಕಳ ಮುಖದ ಮೇಲೆ ಕಾಣುತ್ತಿದೆಂಬಂತೆ ಭಾಸವಾಗುತ್ತಿದೆ.
ವಯಸ್ಸಿಗೆ ಮೀರಿದ ಮಾತು, ವಯಸ್ಸಿಗೆ ಮೀರಿದ ನಡಾವಳಿಕೆ ಮತ್ತು ಗಂಭೀರತೆ ಇಂದಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.
ನೀವು ನೋಡಿರಬಹುದು.. ಇಂದಿನ ನಮ್ಮ ಮನೆಯ ಟಿ.ವಿಯಲ್ಲಿ ಬರುವ ರೀಯಾಲಿಟಿ ಶೋ ನಲ್ಲಿ ಬಾಗಿಯಾಗುವ ಪುಟ್ಟ ಪುಟ್ಟ ಕಂದಮ್ಮಗಳ ಬಾಯಲ್ಲಿ ದೊಡ್ಡವರು ಮಾತನಾಡುವ ಮಾತುಗಳು.ಮಕ್ಕಳ ನಡೆ ನುಡಿಗಳು ಕಂಡು ದೊಡ್ಡವರೇ ನಾಚುವಂತಾಗಿದೆ.
ಪ್ರತಿಯೊಂದರಲ್ಲೂ ಸ್ವರ್ದೆ. ಮಕ್ಕಳು ಮಕ್ಕಳಾಗಿ ದೊಡ್ಡವರು ಬಿಟ್ಟೇ ಇಲ್ಲವೆಂದು ಅನಿಸುತ್ತದೆ.
ಆ ತುಂಟತನ, ಆಟ- ಪಾಠ ಎಲ್ಲಾ ಮಾಯವಾಗಿಬಿಟ್ಟಿದೆ! ಬಾಲ್ಯವೇ ಎಲ್ಲೋ ಕಳೆದು ಹೋಗುತ್ತಿದೆ
ಪ್ರತಿಯೊಂದರಲ್ಲೂ ’ದಿ ಬೇಸ್ಟ" ನೀ ಆಗಬೇಕು ಎಂಬ ಈ ಸುಸ್ತು ಮಕ್ಕಳ ಮನಸ್ಸಿನಲ್ಲಿ ಕಾಣುತ್ತಿದೇವೆಂದು ಅನಿಸುತ್ತದೆ.
ನನಗಂತೂ ಅಯ್ಯೋ ಪುಟ್ಟ ಪಾಪುವೇ ಎಂದೆನಿಸುತ್ತದೆ.
ಅಂಕ, ಸ್ಥಾನ, ಹುದ್ದೆ ಎಂಬ ಶಬ್ಧಗಳೇ ಅವುಗಳ ಗುರಿ ಮಾಡಿಬಿಟ್ಟಿದ್ದೇವೆನೋ.
ನೆನಸಿಕೊಂಡರೇ ಮೈ ಜುಂ ಅನಿಸುತ್ತದೆ.
ಈ ರೀತಿಯ ಭಾರಿ ಭರವಸೆಗಳ, ಕನಸುಗಳ, ಭವಿಷ್ಯದ ಬಾರವಾದ ಚೀಲಗಳನ್ನು ಹೊತ್ತುಕೊಂಡು ಮಕ್ಕಳು ತನ್ನ ಮೊದಲ ಹೆಜ್ಜೆಗಳನ್ನು ಶಾಲೆಗಳ ಕಡೆಗೆ ಈ ತಿಂಗಳು ಹಾಕಿಬಿಟ್ಟಿವೆ.
ಮುಂದಿನ ಒಂದು ವರುಷ ಓದುವುದೊಂದೆ ಅವುಗಳ ಕೆಲಸ. ಓದು ಓದು ಮತ್ತು ಓದು. ಹೆತ್ತವರಿಗೂ ಒತ್ತಡ ಮಕ್ಕಳಿಗೂ ಒತ್ತಡ.
ಇಂದಿನ ಪೋಷಕರು ತಮ್ಮ ಮಕ್ಕಳ ಓದುವುದರ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಮತ್ಯಾವುದರ ಬಗ್ಗೆಯು ಯೋಚಿಸಿರುವುದಿಲ್ಲ.
ಎಲ್ಲಾ ದುಭಾರಿ. ಒಂದು ಮಗು ಜನಿಸಿದರೇ ಸಾಕು ಹೆತ್ತವರ ಯೋಚನೆ ದುಪ್ಪಟ್ಟಾಗುತ್ತದೆ.
ಮಕ್ಕಳಾದ ಮೇಲೆ ತಂದೆ ತಾಯಿಗಳ ಜೀವನ ಅಷ್ಟೇ. ಮಕ್ಕಳನ್ನು ಒಂದು ದಡ ಸೇರಿಸುವುದರಲ್ಲಿಯೇ ತಮ್ಮ ಪೂರ್ತಿ ಅಯುಷ್ಯವನ್ನು ಕಳೆದುಬಿಡುತ್ತಾರೆ.
ನಮ್ಮ ಹಿಂದಿನವರು ಹೀಗೆಲ್ಲಾ ಎಂದು ಚಿಂತಿಸಿರಲಾರರು. ಆದರೇ ಇದರ ಜರೂರತೂ ಇಂದು ಹೆಚ್ಚು. ಏನೂ ಮಾಡುವ ಆಗಿಲ್ಲ! ಕಾಲಕ್ಕೆ ತಕ್ಕಂತೆ ಬದುಕಬೇಕು. ಈಗ ಸುಮ್ಮನೇ ಓದಿದರೇ ಯಾರು ಮೂಸಿಯು ನೋಡುವುದಿಲ್ಲ. ಎಲ್ಲಾದರಲ್ಲೂ ಚ್ಯೂಟಿ ಇರುವವರೇ ಬೇಕು. ಅದಕ್ಕಾಗಿಯೇ ಪ್ರತಿಯೊಬ್ಬರೂ ಶಿಕ್ಷಣವನ್ನು ತಪಸ್ಸಿನಂತೆ ಜಪಿಸುತ್ತಾರೆ.
ಇದಕ್ಕಾಗಿ ನಮ್ಮ ಎಲ್ಲಾ ಖಾಸಗಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಕಟಿ ಬದ್ಧವಾಗಿವೆ!
ಓದು ಒಂದು ವ್ಯಾಪಾರವನ್ನಾಗಿ ಮಾಡಿತ್ತಿದ್ದೇವೆನೋ ಅನಿಸುತ್ತಿದೆ. ಅದು ಆಗಬಾರದು. ಎಂದೆಂದಿಗೂ. ಎಂಬುದೇ ನನ್ನ ಆಶಯ!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ