ಭಾನುವಾರ, ಫೆಬ್ರವರಿ 28, 2016

ಕೇವಲ ವಿರೋದಿಸುವುದಕ್ಕಾಗಿ..?

ದೇಶದ ವಿಷಯ ಬ್ಯಾಡಮ್ಮ ಶಿಶ್ಯ! ಅನ್ನುವಂತಾಗಿದೆ.

ಇಂದು ಎರಡು ದೊಡ್ಡ ಗುಂಪುಗಳು ದೇಶದಲ್ಲಿ ಹುಟ್ಟಿಕೊಂಡಿವೆ.
೧.ಮೋದಿ ಸರ್ಕಾರ.
೨. ಮೋದಿಯನ್ನು ಕಂಡರೇ ಮೈ ಪರಚಿಕೊಳ್ಳುವವರೆಲ್ಲಾ ಯಾವುದೇ ಪಕ್ಷ ಬೇದ ಮರೆತು ವಿರೋಧಿಗಳ ಬಣ ಮಾಡಿಕೊಂಡಿದ್ದಾರೆ.

ದೇಶದ ಯಾವುದೇ ಮೊಲೆಯಲ್ಲಿ ಸಣ್ಣದೂಂದು ಘಟನೆ ಜರುಗಿದರೂ ಅದಕ್ಕೆ ಮೋದಿ ಕಾರಣ ಎನ್ನುವಂತಾಗಿದೆ. ಇದಕ್ಕೆ ಮೋದಿಯ ಜನಪ್ರೀಯತೆ ಕಾರಣವೋ? ಅಥವಾ ಮೋದಿ ಹಾಗೆಲ್ಲಾ ಕೊಚ್ಚಿಕೊಂಡು ಅಧಿಕಾರಕ್ಕೆ ಬಂದಿದ್ದಾರಲ್ಲಾ ಅದಕ್ಕೆ ಇದರ ಹೊಣೆ ನೀ ಹೊರು ಎನ್ನುವಂತಾಗಿದೆ.

ಮೋದಿಯ ಇತಿಹಾಸ ಎಲ್ಲರೂ ಬಲ್ಲರು. ಅವರು ಸತತ ಮೂರು ವರುಷ ಗುಜರಾತ್ ನಲ್ಲಿ ಆಡಳಿತ ನಡೆಸಿರುವವರು. ಗುಜರಾತ್ ಅಭಿವೃದ್ಧಿಗಿಂತ, ಗುಜರಾತ್ ನಲ್ಲಿ ಜರುಗಿದ ಗೋದ್ರ ರೂವಾರಿ ಮೋದಿ, ವಿರೋಧಿಗಳಿಂದ ಪ್ರಸಿದ್ಧರಾಗಿರುವುದೇ, ಮೋದಿಯ ಬಗ್ಗೆ ಪ್ರತಿಯೊಬ್ಬರೂ ನೇಗೆಟಿವ್ ಆಗಿ ಚಿಂತಿಸುವಂತಾಗಿರುವುದು.

ಕೋರ್ಟ ನಲ್ಲಿ ಗೋದ್ರ ಘಟನೆಯಲ್ಲಿ ಮೋದಿಯ ಕೈ ಏನೂ ಇಲ್ಲ ಎಂದು ಕ್ಲೀನ್ ಚೀಟ್ ಪಡೆದಿದ್ದರೂ ವಿರೋಧಿಗಳು ಇನ್ನೂ ಅದನ್ನು ನೆಪಮಾಡಿ ಯಾವುದೇ ವಿಚಿತ್ರ ಘಟನೆ ನಡೆದರೂ ಮೋದಿಯಿಂದ ಇಷ್ಟು ಅದ್ವಾನವಾಗುತ್ತಿದೆ ಎನ್ನುತ್ತಿದ್ದಾರೆ.

ಇಂದು ದೇಶದಲ್ಲಿ ಮೇಲೆ ಹೇಳಿದ ಎರಡೇ ಎರಡು ಬಣಗಳಿವೆ. ಒಂದು ಮೋದಿ ಲೈಕ್ ಮಾಡುವವರು. ಇನ್ನೊಂದು ಮೋದಿ ವಿರೋಧಿಸುವವರದು.

ಪ್ರತಿಯೊಂದು ರಾಜಕೀಯ, ಸಂಘಟನೆ, ಸಾಹಿತಿಗಳು, ನಾಯಕರು, ವಿದ್ಯಾರ್ಥಿಗಳು ಹೀಗೆ ಪ್ರತಿಯೊಬ್ಬರೂ ಈ ಎರಡು ಬಣಗಳಲ್ಲಿ ಯಾವುದೇ ಬೇದವಿಲ್ಲದೇ ತಮ್ಮನ್ನು ಗುರುತಿಸಿಕೊಳ್ಳುವ ಮಟ್ಟಿಗೆ ಈ ಎರಡು ವರುಷದಲ್ಲಿ ಅಸಹಿಷ್ಣುತೆಯ ಗುಲ್ಲು ಗುಲ್ಲೇ ಎದ್ದಿದೆ.

ಪಾಪ ಏನೂ ಬಾಯಿಬಿಟ್ಟರು ಕಷ್ಟ ಎನ್ನುವಂತಾಗಿದೆ.

ಒಂದು ಹಳ್ಳಿಯ ಯಾವುದೋ ಒಂದು ಮೊಲೆಯಲ್ಲಿ ಏನಾದರೂ ಅಹಿತಕರ ಘಟನೆ ನೆಡೆದರೆ ಮೋದಿಯ ಎಪೇಕ್ಟ್ ಅನ್ನುವಂತಾಗಿದೆ. ಬಿ.ಜೆ.ಪಿ ತನ್ನ ಹಿಡನ್ ಅಜೆಂಡವನ್ನು ಭಾರತದ ಪ್ರತಿಯೊಬ್ಬರ ಮೇಲೂ ಹೇರುತ್ತಿದೆ. ಈ ದೇಶದಲ್ಲಿ ಯಾವುದೂ ಸರಿಯಿಲ್ಲ! ನಮಗೆ ಹಿಂದೆ ಇದ್ದ ಸಾಮಾಜಿಕ ಕಾಳಜಿ, ಸಮಾಜ ವಾದ, ಬಡವರ ಪರವಾದ, ಬಿ.ಜೆ.ಪಿ ವಿರೋಧಿ ಸರ್ಕಾರಗಳೇ ಕ್ಷೇಮವೆನ್ನುತ್ತಿದ್ದಾರೆ.

ದೇಶದ ಒಳ್ಳೆಯದು , ಅಭಿವೃದ್ಧಿ ಈ ವಿಷಯಗಳ ಚರ್ಚೆಗಿಂತ ಹೇಗಾದರೂ ಮಾಡಿ ಮುಂದಿನ ಸಂಸತ್ತು ಚುನಾವಣೆಯ ಹೊತ್ತಿಗೆ ಮೋದಿ ನೇಮ್ ಪೂರ ಬರಬಾದ್ ಮಾಡಲೇಬೇಕು ಎನ್ನುವಂತೆ ಮೋದಿ ವಿರೋಧಿ ಸೇನೆಯೇ ನಿಂತಿದೆ.

ಮೋದಿ ರೂಪಿಸಿರುವ ಎಲ್ಲಾ ಯೋಜನೆಗಳನ್ನು ಅನುಮಾನದ ಹುತ್ತದಲ್ಲಿ ಜನಗಳು ಕಾಣುವಂತೆ ಮೀಡಿಯಾಗಳು ಬಿತರಿಸುತ್ತಿವೆ. ಮೋದಿ ಕೊಟ್ಟ ಆಶ್ವಾಸನೆಗಳು ಈಗ ಎಲ್ಲಿ ಕೆಲಸ ಮಾಡುತ್ತಿವೆ ಎಂದು ಕೇಳುತ್ತಿದ್ದಾರೆ.

ಮೋದಿ ಪುಲ್ ಮೇಜಾರಟಿಯಲ್ಲಿ ಗೆದ್ದರೆ ಸಾಕೇ..? ಎಲ್ಲಾ ಸುಳ್ಳು ಪೊಳ್ಳು ಭರವಸೆಗಳಿಂದ ಅಧಿಕಾರ ಹಿಡಿದರೇ ಸಾಕೇ..?  ಭಾರತವನ್ನು ಸ್ವರ್ಗ ಮಾಡುತ್ತಿನಿ ಎಂದೆ. ಎಲ್ಲಿ ಸ್ವಚ್ಛ ಭಾರತ? ಯಾವ ಡಿಜಿಟಲ್? ಅದು ಏನೂ ಬಡವರ ಹೊಟ್ಟೆ ತುಂಬಿಸುತ್ತಾ?

ಭಾ ಮೋದಿ ನಮ್ಮೊರಿಗೆ ನೀ ಬಂದು ಪೊರಕೆ ಹಿಡಿದು ಗುಡಿಸು ಎನ್ನುತ್ತಿದ್ದಾರೆ.

ನೀ ರೂಪಿಸಿದ ಯೋಜನೆಗೆ ನೀನೆ ಹೊಣೆ ಅನ್ನುತ್ತಿದ್ದಾರೆ.

ಒಬ್ಬ ಮೋದಿ ಎಲ್ಲ ಕಡೆ ಅದು ಹೇಗೆ ಕೈ ಹಾಕುವುದು ನೀವೆ ಹೇಳಿ?

ಇಷ್ಟರ ಮಟ್ಟಿಗೆ ಜನ ಮೋದಿಯನ್ನು ದ್ವೇಷಿಸುವುದು0ಟ ಎಂದೆನಿಸುತ್ತಿದೆ.

ಮೋದಿ ಏನಾದರೂ ದೇಶದ ಶತ್ರುವನ್ನು ವಿರೋಧಿಸಿದರೇ.. ಇವರುಗಳು ಅವನನ್ನೇ ಜೈ ಅಂದು ಬಿಡುತ್ತಾರೆ. ಹಿಂದೆ ಮುಂದೆ ನೋಡದೆ.

ಯಾರೊಬ್ಬರೂ ಅವರ ನಿಜವಾದ ಕನಸು ಹೋರಾಟವನ್ನು ಮನನ ಮಾಡಿಕೊಳ್ಳುತ್ತಿಲ್ಲ. ಕೇವಲ ಮೀಡಿಯಾದಲ್ಲಿ ಬರುತ್ತಿರುವುದೇ ನಿಜವೆಂದುಕೊಂಡಿದ್ದಾರೆ. ಪ್ರತಿಯೊಂದಕ್ಕೂ ವಿರೋಧ ವಿರೋಧ. ಮೋದಿಗೂ ತಾನು ಯಾಕಾದರೂ ಪ್ರದಾನಿಯಾದೇನೂ ಎಂದು ಅನಿಸಿರಬೇಕು.

ಆದರೇ ಮೋದಿಯ ಮಾತಿಗೆ ವಿಶ್ವವೇ ಕಿವಿಯಾಗಲು ಕಾತುರವಾಗಿದೆ.

ಭಾರತದಲ್ಲಿ ಮಾತ್ರ ಸಾಕಷ್ಟು ವಿರೋಧಿಗಳಿಗೆ ಮೋದಿಯ ಹೆಸರೇ ದುಃಸ್ವಪ್ನವಾಗಿದೆ.

ಯಾವುದೇ ವೀಕ್ ನೆಸ್ ಇಲ್ಲದ ಮನುಷ್ಯರನ್ನು ಸೋಲಿಸುವುದು ಸುಲಭವಲ್ಲ! ಅದಕ್ಕೆ ಈ ರೀತಿಯ ಜಾತಿ, ಧರ್ಮ, ಶಿಕ್ಷಣ ರಂಗಗಳನ್ನು ಬಳಸಿಕೊಂಡು ಸರಕಾರವನ್ನು ರಾಜಕೀಯವಾಗಿ ಬಡಿಯಲು ಸನ್ನದ್ಧರಾಗಿದ್ದಾರೆ.

ಐದು ವರುಷ ಕಾದು ನೋಡುವ ತಾಳ್ಮೆಯನ್ನು ಭಾರತ ಕಳೆದುಕೊಂಡುಬಿಟ್ಟಿದೆ ಅನಿಸುತ್ತದೆ. ಅದು ಸರಿ! ಸುಮಾರು ಅರುವತ್ತು ವರ್ಷ ಒಳ್ಳೆಯ ದಿನಗಳಿಗೆ ಕಾದು ಕಾದು ಸುಸ್ತಾದ ಮಂದಿ ಮೋದಿಯನ್ನು ಈ ರೀತಿಯ ಭರ್ಜರಿ ಜಯದಲ್ಲಿ ಆರಿಸಿರುವುದು ಯಾಕೆ..? ಅದಕ್ಕೆ ಅವರು ಮೋದಿಯಿಂದ ಮ್ಯಾಜಿಕ್ ಕನಸು ಕಾಣುತ್ತಿದ್ದಾರೆ.

ಅದು ಅಷ್ಟು ಸುಲಭವಲ್ಲ!

ಬೀಜ ಬಿತ್ತಬೇಕು, ನೀರು ಎರೆಯಬೇಕು, ಬಳ್ಳಿ ಜೋಪಾನ ಮಾಡಬೇಕು. ಆ ಬಳಿಕ ನಿಜವಾದ ಫಲ ದೊರೆಯುವುದು.

ಆದರೇ ಈ ವಿರೋಧಿ ಪಾಳ್ಯ ದೇಶ ದ್ರೋಹಿಗಳು ಈ ಮೋದಿ ಕಡೆಯವರು ಎನ್ನುವ ಮಟ್ಟಿಗೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಸಾಮಾಜಿಕ ನ್ಯಾಯವೆಲ್ಲ ಸತ್ತು ಹೋಗಿದೆ. ಕೇವಲ ಹಣವುಳ್ಳವರು ಮಾತ್ರ ಭಾರತದಲ್ಲಿ ಬದುಕಬಹುದೆಂದು ಮಾತನಾಡುತ್ತಿದ್ದಾರೆ.

ಅದಕ್ಕಾಗಿಯೇ ಕೆಲವು ಮಂದಿ ಸಜ್ಜಾಗಿ ತಮ್ಮ ಬಾಯಿಗಳನ್ನು ತೆರೆದುಕೊಂಡು ನಿಂತಿದ್ದಾರೆ. ಇದರ ಬಗ್ಗೆ ಏನಾದರೂ ಎಲ್ಲಾದರೂ ಹೇಳದಿದ್ದರೇ ನಾವೇನೋ ಕಳೆದುಕೊಳ್ಳುತ್ತಿದ್ದೇವೆನೋ ಅನ್ನುವ ಮಟ್ಟಿಗೆ ಜನರ ಭಾವನೆಗಳನ್ನು ಕೆರಳಿಸುವವ ಮಟ್ಟಿಗೆ ಇವರುಗಳು ಮುಂದುವರಿಯುತ್ತಿದ್ದಾರೆ.

ಮೋದಿ ಮುಂದುವರಿದ ಜನರ ನಾಯಕ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಅಲ್ಲಾ ಹಾಗೆಲ್ಲಾ ಒಂದೇ ಪಂಗಡದ ಜನ ಓಟು ಓತ್ತಿದ್ದರೆ ಮೋದಿ ಅಷ್ಟೊಂದು ಸೀಟು ಗೆದ್ದು ಅಧಿಕಾರ ಹಿಡಿಯುತ್ತಿದ್ದರಾ ಎಂದು ಚಿಕ್ಕದಾಗಿಯೂ ಯೋಚಿಸುತ್ತಿಲ್ಲ!

ಬಿ.ಜೆ.ಪಿ ಹೊರೆತೂ ಯಾವುದೇ ಪಕ್ಷ ಅಧಿಕಾರ ನಡೆಸಿದರೂ ಪರವಾಗಿಲ್ಲ! ಅದು ಕೇಸರಿ! ಅದು ಎಷ್ಟೇ ಪರಮ ಭ್ರಷ್ಟ ಪಕ್ಷವಾದರೂ/ಸರ್ಕಾರವದರೂ ಪರವಾಗಿಲ್ಲ, ಅನ್ನುವಷ್ಟು ಬಾಲಿಶ ಮನಸ್ಸು ಹಿರಿ, ಕಿರಿ ಬುದ್ಧಿ ಜೀವಿಗಳಿಗ್ಯಾಕೆ?

ನಿತ್ಯ ಒಂದಲ್ಲಾ ಒಂದು ಹೊಸ ಹೊಸ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತಿದ್ದಾರೆ. ಅವುಗಳನ್ನೇಲ್ಲಾ ಪ್ರಸ್ತುತ ಕೇಂದ್ರ ಸರ್ಕಾರದ ಕೊರಳಿಗೆ ಕಟ್ಟುತ್ತಿದ್ದಾರೆ.

ಆಗುತ್ತಿರುವ ಒಳ್ಳೆಯ ಕೆಲಸಗಳನ್ನೆಲ್ಲಾ ನಗಣ್ಯ ಮಾಡಿ, ಕೆಟ್ಟ ಘಟನೆಗಳನ್ನೇ ಎಂಜಾಯ್ ಮಾಡುತ್ತಾ ದೇಶವನ್ನು ಅಭದ್ರತೆಯ ಸಂಚಿಗೆ ಸಿಲುಕಿಸುತ್ತಿರುವ ಈ ವಿರೋಧಿ ನಾಯಕರುಗಳು ನಿಜವಾದ ದೇಶದ ಬಗ್ಗೆ ಹೇಗೆ ಇವರು ಚಿಂತಿಸುವವರು? ಎಂದು ನಾವೆಲ್ಲಾ ಯೋಚಿಸಬೇಕು.

ಈ ವಿರೋದಿಸುವ ಭರದಲ್ಲಿ ದೇಶಕ್ಕೆ ಕಂಟಕವಾಗಿದ್ದ ಭಯೋತ್ವಾದಕರನ್ನು, ಶತ್ರು ದೇಶವಾಗಿರುವ ಪಾಕಿಸ್ತಾನವನ್ನು ಕೊಂಡಾಡುವ ಮಟ್ಟಿಗೆ ನಮ್ಮ ಜನಗಳು ಮುಂದುವರಿದಿರುವುದು ಯಾವುದರ ಸೂಚನೆ? ಇದಂತೂ ತುಂಬ ಅಘಾತಕಾರಿ ವಿಷಯವಾಗಿದೆ.

ಯಾರನ್ನೋ ಒಲೈಸುವ ಸಲುವಾಗಿ ಎಂಥವರನ್ನಾದರೂ ನಾವು ತಿಪ್ಪೇ ಸಾರಿಸಿ ಒಳ್ಳೆಯವರನ್ನಾಗಿ ಮಾಡುವವರಾಗಿದ್ದೇವೆ.

ಯಾವುದನ್ನು ಖಂಡಿಸಬೇಕು, ಯಾವುದನ್ನು ಮೆಚ್ಚಬೇಕು ಎಂಬ ಸೂಕ್ಷ್ಮ ಮನಸ್ಸನ್ನೇ ಕಳೆದುಕೊಂಡಿದ್ದೇವೆ.

ಇದು ಹೀಗಾಗಬಾರದು. ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು. ಇಂದು ದೇಶಕ್ಕೆ ರಕ್ಷಣೆಯಾಗಿ ನಿಂತು ಗಡಿ ಕಾಯುತ್ತಿರುವ ನಮ್ಮೆಲ್ಲರ ಪ್ರೀತಿಯ ಸೈನಿಕರ ಜೀವ ತ್ಯಾಗಕ್ಕೆ ನಾವೆಲ್ಲಾ ಅವಮಾನ ಮಾಡಿದಂತೆ ಸರಿ.

ಅಷ್ಟೇಲ್ಲಾ ಹೋರಾಡಿ ಅವರುಗಳು ದೇಶ ಕಾಯುತ್ತಿರುವುದರಿಂದಲೇ ನಾವುಗಳು ಇಂದು ಹೀಗೆ ಆರಾಮಾಗಿ ಬಾಳುತ್ತಿರುವುದು. ನಾವು ಆರಾಮಾಗಿ ಪುರುಸೊತ್ತಾಗಿದ್ದೇವೆ ಎಂದು ಏನೆಲ್ಲಾ ಅನಾಹುತಗಳನ್ನು ಮಾಡಿದರೇ ಯಾರೊಬ್ಬರೂ ಸಹಿಸುವುದಿಲ್ಲ.

ದೇಶಕ್ಕೆ ದಕ್ಕೆ ಬರುವಂತೆ - ದೇಶವಾಸಿಗಳ ಭಾವನೆಗಳನ್ನು ಕಡೆಗಣಿಸುವಂತ ವಿಚಾರ ವಿಷಯಗಳು, ಹೇಳಿಕೆಗಳನ್ನು ನೀಡುವವರಿಗೆ ಕಠಿಣ ಶಿಕ್ಷೆಯಾದರೇ ಮಾತ್ರ ಈ ರೀತಿಯ ದೊಂಬಿಗಳು ನಿಯಂತ್ರಣಕ್ಕೆ ಬರುವುದು ಸಾಧ್ಯ.

ವಿರೋಧಿಸುವುದಕ್ಕಾಗಿ ಎಲ್ಲಾದನ್ನೂ ವಿರೋಧಿಸಲು ಹೋಗಬಾರದು!

ಅಲ್ಲವಾ?



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ