ಸೋಮವಾರ, ಸೆಪ್ಟೆಂಬರ್ 7, 2015

ಕಾಲಯಾ ತಸ್ಮಯ ನಮಃ!

ಇಲ್ಲ ಬಿಡಿ! ನಮ್ಮ ಕಾಲದಲ್ಲಿ ರೀತಿ ಇರಲಿಲ್ಲ ಬಿಡಿ! ಕಾಲನೆ ಬೇರೆ ಕಾಲನೆ ಬೇರೆ ಏನು ಬೆಲೆ ಎಲ್ಲಾರಿಗೂ ಎಲ್ಲದಕ್ಕೂ , ತುಂಬ ಸಂತೋಷದ ದಿನಗಳು ಅವು, ಈಗ ಅವು ಬರಿ ಮೆಲುಕು ಅಷ್ಟೆ! ಎಂದು, ಇಂದು ನಮ್ಮ ಹಿರಿಯರು ನಿಟ್ಟುಸಿರು ಬಿಡುತ್ತಾ ನಮ್ಮ ಕಾಲವನ್ನು ತಮ್ಮ ಹಿಂದಿನ ಗತ ನೆನಪುಗಳನ್ನು ಕಷ್ಟ ನಷ್ಟಗಳ ಸಂಕಲನ, ವ್ಯವಕಲನ ಮಾಡುತ್ತಾ ಕಿರಿಯರಿಗೆ ಒಂದಿಷ್ಟು ಬುದ್ಧಿ ಹೇಳುತ್ತಾ ಜಗತ್ತಿನ ಮರ್ಮವನ್ನು ನೆನಪು ಮಾಡುತ್ತಾ ನಮ್ಮ ನಿಮ್ಮೆಲ್ಲರ ಬದುಕಿನ ಬಂಡಿಯನ್ನು ಸರಿಯಾದ ಪಥದಲ್ಲಿ ಚಲಿಸಲು ಸಹಾಯ ಮಾಡುತ್ತಿರುವ ಎಲ್ಲಾ ನಮ್ಮ ನಿಮ್ಮ ಹಿರಿಯರಿಗೆ ಒಂದು ಪ್ರಣಾಮ!


ಹೌದು ಕಣ್ರೀ, ಅವರ ಅಂದಿ ದಿನಗಳ ಮುಂದೆ ಇಂದಿನ ಎಲ್ಲಾ ಅನುಕೂಲತೆಯ ಹೈಟೆಕ್ ಬದುಕು ಕೊಂಚ ನೀರಸ ಅನಿಸದೆ ಇರದು. ಇಂದು ಕೇವಲ ಯಾಂತ್ರಿಕ ಏನು ಮಾಡಬೇಕು ಎಂಬಂತೆ ಮನಸೆಲ್ಲೂ, ಗುರಿಯೇಲ್ಲೂ ಎಂಬಂತೆ ಸಂಭ್ರಮದ ಕೊರತೆಡಾಳಾಗಿ ಕಾಣಿಸುತ್ತಿದೆ.


ಮುನ್ನೂರ ಮುವತ್ತು ಕಾಲ ಅಕ್ಕ ಪಕ್ಕ ಇದ್ದರು ನಗರ ಜೀವನವೆಂಬ ಗಾಂಭಿರ್ಯಕ್ಕೆ ಬಂಧಿಯಾಗಿ ಶಿಸ್ತಿನ ಸಿಪಾಯಿಯ ರೀತಿ ನಾವಾಯ್ತ್ ನಮ್ಮ ಕೆಲಸವಾಯ್ತ್ ಎಂಬಂತೆ ಪಕ್ಕದಲ್ಲಿ ಯಾರ್ ಏನಾದರು ಅದರ ಸಹವಾಸ ವೆ ಬೇಡ ಎನ್ನುವ ರೀತಿ ಅಲ್ಪ ಖುಷಿಯಲ್ಲಿ ನಾಲ್ಕು ಗೋಡೆಯ ಮದ್ಯದಲ್ಲಿ ನಮ್ಮ ಪ್ರೀತಿ ಮಾನವ ಸಹಜ ವರ್ತನೆಯನ್ನು ಬಲಿಕೊಟ್ಟು ಬಧುಕುವುದೇ ದೊಡ್ಡಸ್ತಿಕೆ ಎಂದು ಬಾವಿಸಿರುವುದು ವಿಪರ್ಯಾಸ!

ಮಾತನಾಡಿದರೇ ಇವನು ಎಲ್ಲಿ ನನ್ನ ಮೈ ಮೇಲೆ ಬರುವನು ಅನಿಸುವಂತೆ ಪರಿಚಿತರಾಗಿದ್ದರು ಅಪರಿಚಿತರಂತೆ ಎದುರು ಕಂಡರೂ ಕಣ್ಣು ಕಾಣದವರಂತೆ ನಾವುಗಳು ತರ್ತಿಸುತ್ತಿದ್ದೇವೆ.

ಹಳ್ಳಿಯ ಹಳೆಯ ಬದುಕು ಯಾಕೋ ಇಂದು ಬೇಕೂ ಬೇಕೂ ಅನಿಸುತ್ತದೆ. ನಮ್ಮ ಮನೆಯರಲ್ಲದದ್ದಿದ್ದರೂ ಯಾಕೋ ಅವರೆಲ್ಲಾ ನಮ್ಮವರೇ ಎಂಬ ಆತ್ಮೀಯ ಭಾವನೆಯನ್ನು ಕೊಡುತ್ತಿದೆ.

ನಮ್ಮ ಅಕ್ಕಪಕ್ಕದ ನೆರೆಹೊರೆಯ ಜನಗಳ ಪ್ರತಿಯೊಂದು ನಡೆನುಡಿ ನಮ್ಮದೇ ಅನಿಸುತ್ತಿತ್ತು. ಇಲ್ಲಿ ನೆರೆ ಹೊರೆ ಯಾಗುತ್ತಿದೆ. ನಗರದಲ್ಲಿ ನಮ್ಮ ನಮ್ಮ ಮನೆಯವರು ಮಾತ್ರ ನಮ್ಮವರು ಅನಿಸಿ ಒಬ್ಬಂಟಿ ಅನಿಸುತ್ತಿದೆ. ಇಷ್ಟೊಂದು ದೊಡ್ಡ ಶಹಾರ್ ದಲ್ಲಿ ಅಕೇಲೇ ಅನಿಸುತ್ತಿದೆ.

ಇದು ಇಂದು ಎಂದಿಗೂ ಮುಗಿಯದ ಗೋಳು ಅನಿಸಲು ಪ್ರಾರಂಭಿಸುತ್ತಿದೆ. ನಮ್ಮ ಮಕ್ಕಳು ನಮ್ಮ ಮನೆಯ ನಾಲ್ಕು ಗೋಡೆಯಲ್ಲಿ ತಮ್ಮದೇ ಪ್ರಪಂಚದಲ್ಲಿ ಎಲ್ಲವನ್ನು ಕಾಣಬೇಕಾಗಿರುವುದು ಇಂದಿನ ದೌರ್ಭಾಗ್ಯ.

ಮನುಷ್ಯ ಸಂಘ ಜೀವಿ ಎಂಬುದನ್ನೇ ಮರೆತು ಅತಿ ವೇಗವಾಗಿ ಮನುಷ್ಯ ಒಂಟಿಯಾಗುತ್ತಿದ್ದಾನೆ. ಇನ್ನೊಬ್ಬರ ಜೊತೆಯಲ್ಲಿ ಮಾತಾನಾಡುವುದೇ ಟೈಂ ವೇಸ್ಟ್ ಎಂಬ ಮನೋಭಾನೆಯನ್ನು ಹೊಂದಿರುವಂತಿದೆ. ಹೆಚ್ಚು ಹೆಚ್ಚು ನಾಗರಿಕರಾದಂತೆ ನಾವುಗಳು ಹೆಚ್ಚು ಹೆಚ್ಚು ಮೌನಿಗಳಾಗುತ್ತಿದ್ದೆವೆ.

ನಾವಾಯಿತು ನಮ್ಮ ಕೆಲಸವಾಯಿತು ಎಂಬಂತಿರು ಮತ್ತೊಬ್ಬರ ಗೊಜಲೇ ಬೇಡ ಎಂಬುದನ್ನು ಕಿರಿಯರಿಗೆ ನಮ್ಮ ಇಂದಿನ ಹಿರಿಯರು ಉಪದೇಶ ಕೊಡುತ್ತಿರುವಂತಾಗಿದೆ.

ಹೆಚ್ಚು ಹೆಚ್ಚು ಗಂಭೀರವಾಗಿರುವುದೇ ಉನ್ನತ ಬದುಕಿಗೆ ಮುನ್ನುಡಿಯಾಗಿದೆ. ಅದು ನಮ್ಮ ಚಿಕ್ಕ ವಯಸ್ಸಿನ ಕಾನ್ವೇಂಟಗಳಿಂದಲೇ ಶುರುವಾಗುತ್ತಿದೆ. ಕಡಿಮೆ ಗೆಳೆಯರನ್ನು ಹೊಂದಿರುವುದೇ ಏಳ್ಗೆಯಾಗಿದೆ. ಮಕ್ಕಳ ಮನಸ್ಸಿಗೆ ಗೊತ್ತೂ ಗೊತ್ತಿಲ್ಲದೇ ನಾವುಗಳು ವಯಸ್ಸಿಗೆ ಮೀರಿದ ನಡೆಯನ್ನು ಕಲಿಸುತ್ತಿದ್ದೇವೆ. ಇದು ಎಲ್ಲಿಗೆ ಹೋಗಿ ನಿಲ್ಲುವುದೋ ದೇವರಿಗೆ ಮಾತ್ರ ಗೊತ್ತು.

ದಿನೇ ದಿನೇ ಸಂಬಂಧಗಳು ಈ ಟೆಕ್ನಾಲಿಜಿ ಮತ್ತು ಗಜಿಬಿಜಿ ಬದುಕಿನಲ್ಲಿ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಿವೆ. ಯಾವುದಕ್ಕೊ ಉತ್ತರವಿಲ್ಲದ ಮನಸ್ಸುಗಳಾಗುತ್ತಿವೆ.

ನಮ್ಮ ಹಿರಿಯರಿಗೆ ಒಂದು ಆದರ್ಶ, ಹೀಗೆ ಎಲ್ಲರನ್ನು ನಮ್ಮವರು ಎಂದು ಕಾಣುವ ನೋಟವಿತ್ತು. ಅದಕ್ಕೆ ಅವರ ಬದುಕು ಕೊಡಿ ಬಾಳುತ್ತಾ ಬಾಳು ಬೆಳಕು ಕಂಡಿದ್ದರು. ಇಂದಿನ ನಮ್ಮ ಎಡವಟ್ಟು ಕುರುಡು ಕಾಂಚಾಣದ ಓಟವನ್ನು ಕಂಡು ಮೊದಲಿಸುವುದು ಅವರ ದಿನ ನಿತ್ಯದ ಕರ್ಮವಾಗಿದೆ. ಹಾಗೆ ಅವರ ಅಂದಿನ ದಿನಗಳ ಮೆಲುಕು ನಮಗಳಿಗೆ ಮೊಸರಲ್ಲಿ ಕಲ್ಲು ಸಿಕ್ಕಂತೆ ಆಗಿದೆ.


ನಾವು ನಮ್ಮ ಮುಂದಿನ ಪೀಳಿಗೆಗೆ ಇದೆ ರೀತಿ ಉಪದೇಶವನ್ನು ಕೊಡಲು ಇದು ಉಪಯೋಗಕ್ಕೆ ಬರುತ್ತೆ ಎಂಬಂತೆ ಕೇಳಲಾರದ ರೀತಿ ಕಿವಿಗೊಡಬೇಕಾಗಿದೆ.


ಕಾಲಯಾ ತಸ್ಮಯ ನಮಃ!



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ