ಭಾನುವಾರ, ಸೆಪ್ಟೆಂಬರ್ 6, 2015

ಸ್ನೇಹಶೀಲರು?

ಅವರು ಇಬ್ಬರೂ ಒಂದೇ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೇ ಟೀಂ. ಕೆಲಸ ಮಾಡುವ ಜಾಗದಲ್ಲಿ ಗಳಸ್ಯ ಕಂಠಸ್ಯ. ಆದರೂ ಏನೋ ಒಂದು ಭಾವನೆ ನಮ್ಮ ಈ ಹುಡುಗನಲ್ಲಿ. ಅವನ ಈ ಕಂಠಸ್ಯ ಗೆಳೆಯನ ಬಗ್ಗೆ. ಮಾತಿಗೆ ಎಲ್ಲಾ ರೀತಿಯಲ್ಲಿ ಮಾತಾಡುತ್ತಾರೆ. ಅದು ಪ್ರೋಪೆಶನಲ್ ಆಗಿ ಅನಿಸುತ್ತದೆ.

ಮಾತು ಕಥೆಯೆಲ್ಲಾ ಇಂಗ್ಲೀಷ್ ನಲ್ಲಿ. ಯಾಕೆಂದರೆ ಇವನ ಆ ಟೀಂ ಮೇಟ್ ಮಾತೃ ಭಾಷೆ ಪರಭಾಷೆ. ನಿಮಗೂ ಗೊತ್ತಿರಬಹುದು. ಆ ನಾಡಿನ ಜನರ ಭಾಷಾಭಿಮಾನವನ್ನು ಎಷ್ಟು ಹೊಗಳಿದರೂ ಸಾಲದು. ಆದರ ಅನುಭವವನ್ನು ಅವರ ರಾಜಾಧಾನಿಗೆ ಮನ್ನೆ ಹೋದ ಇವನು ನೋಡಿದ್ದಾನೆ.

ಏನೇ ಕೇಳಿದರೂ ಆ ಭಾಷೆಯನ್ನು ಬಿಟ್ಟು ಬೇರೆಯ ಭಾಷೆಯನ್ನು ಅಲ್ಲಿಯ ಆಟೋ, ಅಂಗಡಿಯವರು, ಟ್ಯಾಕ್ಸಿಯವರು ಯಾರೇಂದರೇ ಯಾರು ಮಾತನಾಡುವುದಿಲ್ಲ. ಅಷ್ಟರ ಮಟ್ಟಿಗೆ ಕಟ್ಟರ್ ಭಾಷಾಭಿಮಾನಿಗಳು.

ಇಲ್ಲಿ ನಮ್ಮ ಬೆಂಗಳೂರಿನ ಜನಗಳನ್ನು ಕೇಳಬೇಕು ಎಷ್ಟೊಂದು ಸುಲಭವಾಗಿ ಎಂಥ ಭಾಷೆಯವರ ಜೊತೆಗೂ ಹೊಂದಿಕೊಂಡು ಬಿಡುತ್ತಾರೆ. ಅವರವರ ಭಾಷೆಯಲ್ಲಿಯೇ ಗೊತ್ತಿಲ್ಲದಿದ್ದರೂ ಪ್ರಯತ್ನಿಸಿ ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ಸ್ನೇಹಶೀಲರು?

ಈ ರೀತಿಯಲ್ಲಿರಬೇಕಾದರೇ ಈ ನಮ್ಮ ಗೆಳೆಯನಿಗೆ ಆ ಗೆಳೆಯನ ಬಗ್ಗೆ ಬಹಳವಾದ ಅಸಹನೆ. ಅದರೇ ಎದುರಿಗೆ ಇರುವಾಗ ಅದನ್ನು ಎಂದು ತೋರಿಸಿಕೊಳ್ಳುವುದಿಲ್ಲ. ನೋಡುವವರಿಗೆ ಏನೂ ಅಪರೂಪದ ಸ್ನೇಹಿತರು ಅನ್ನುವಂತೆ ಎಲ್ಲಿಗೆ ಹೋದರೂ ಇಬ್ಬರೂ ಜೊತೆಯಲ್ಲಿಯೇ ಹೋಗುತ್ತಾರೆ. ಯಾವಾಗ ಎಂದರೇ ಆ ಭಾಷೆಯ ಗೆಳೆಯನಿಗೆ ಕಂಪನಿಯಲ್ಲಿ ಯಾರೂ ಅವನ ಭಾಷೆಯ ಸ್ನೇಹಿತರು ಜೊತೆಗೆ ಸಿಗದೇ ಇದ್ದಾಗ.

ಅದರ ಬಗ್ಗೆಯು ನಮ್ಮ ಈ ಸ್ನೇಹಿತನಿಗೆ ಅಸಹನೆ. "ನನ್ನ ಮಗಾ ಯಾರೂ ಸ್ನೇಹಿತರು ಇಲ್ಲಾಂತ ನನ್ನ ಜೊತೆ ಬರುತ್ತಿದ್ದಾನೆ". ಅನ್ನುತ್ತಾನೆ.

ನೀವು ಗಮನಿಸರಬಹುದು. ಆ ಭಾಷೆಯ ಜನ ತಮ್ಮವರ ಬಗ್ಗೆ ಉತ್ಕಟವಾದ ಅಭಿಮಾನವನ್ನು ಹೊಂದಿರುತ್ತಾರೆ. ಅವರುಗಳು ಎಲ್ಲಿಯೇ ಹೋಗಲಿ ಅಲ್ಲಿಯೇ ಇರುವ ತಮ್ಮವರ ಬಗ್ಗೆ ಒಂದು ಅಕೌಂಟ್ ನೋಡಿಕೊಂಡು ಎಲ್ಲರೂ ಒಂದು ದಿನವಾದರು ಒಂದು ಕಡೆ ಸೇರಿ ತಮ್ಮ ಮಾತೃ ಭಾಷೆಯಲ್ಲಿಯೇ ಮಾತನಾಡಿ ಏನೋ ಮನಸಿನ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

ಈ ರೀತಿಯಲ್ಲಿರುವಾಗ ನಮ್ಮ ಸ್ನೇಹಿತನನ್ನು ಆ ಸ್ನೇಹಿತ ಒಂದು ಈ ವಾರದ ವಿಕೇಂಡ್ ಗೆ ನಮ್ಮ ರೂಮಿಗೆ ಬಾ ನಾವಿಬ್ಬರೂ ಸೇರಿ ಸಂಜೆಯ ಐ.ಪಿ.ಎಲ್ - ಸೂಪರ್ಸ್ ಕಿಂಗ್ ಮತ್ತು ಬೆಂಗಳೂರು ಚಾಲೆಂಜರ್ ಮ್ಯಾಚ್ ದೊಡ್ಡ ಟಿ.ವಿ ಯಲ್ಲಿ ನೋಡೂಣ. ಅಂದು ಕೇಳುತ್ತಾನೆ.

ಈ ನಮ್ಮ ಸ್ನೇಹಿತನಿಗೆ ಇಷ್ಟ ಇರುವುದಿಲ್ಲ. ಅವನಿಗೆ ಗೊತ್ತು ಇವನ ಬಗ್ಗೆ. ಅವನ ರೊಂ ಪಕ್ಕನೋ ಬರೀ ಅವರ ಕಡೆಯವರೇ.

ಒಮ್ಮೆ ಅವನ ರೊಂ ಗೆ ಹೋಗಿದ್ದಾ. ಯಾಕಾದರೂ ಬಂದೇನೋ ಅನ್ನುವ ಮಟ್ಟಿಗೆ ಕೇವಲ ಐದು ನಿಮಿಷಗಳಲ್ಲಿ ಮಹಾ ಬೋರ್ ಅನಿಸಿಬಿಟ್ಟಿತು. ಕಾರಣ ಅದೇ ಅವನ ಭಾಷೆಯ ಅಭಿಮಾನ. ಅವನ ರೋಂ ನಲ್ಲಿ ಆ ಭಾಷೆಯಲ್ಲಿಯೇ ಪ್ರತಿಯೊಂದು ಮಾತುಕತೆ. ಈ ನಮ್ಮ ಸ್ನೇಹಿತನಿಗೆ ತಲೆ ಚಿಟ್ಟು ಹಿಡಿದು ಹೋಗಿ ಬಿಟ್ಟಿತು.

ಅಲ್ಲಾ ನಾವುಗಳು ನಮ್ಮ ಮಾತೃ ಭಾಷೆಯನ್ನು ಎಲ್ಲಿ ಎಷ್ಟರ ಮಟ್ಟಿಗೆ ಉಪಯೋಗಿಸುತ್ತಿದ್ದೇವೆ. ಅದು ನಿತ್ಯ ಜೀವನದಲ್ಲಿ ಅನಿಸಿಬಿಟ್ಟಿತ್ತು. ಕೇವಲ ನನ್ನ ಹಳ್ಳಿಯ ಅಮ್ಮನ ಜೊತೆಯಲ್ಲಿ ಮಾತನಾಡಲು ಮಾತ್ರ ಎಂದು ನೆನಪಾಯಿತು.

ಆದರೂ ಏನೂ ಮಾಡುವುದು ಈ ವಾರ ಅವನ ರೋಂ ಗೆ ಹೋಗಿ ಅಲ್ಲಿಯೇ ಕ್ರೀಕೆಟ್ ಮ್ಯಾಚ್ ನೋಡಿದಾರಾಯಿತು ಅಂದುಕೊಂಡ.

ತಮಿಳು ಗೆಳೆಯನು ಖುಷಿಪಟ್ಟ.

ಅಂದು ಸಂಜೆ ಅವನ ರೋಂ ಗೆ ಹೋದ. ಆಗಲೇ ಅಲ್ಲಿ ಅವನ ಇಬ್ಬರೂ ಗೆಳೆಯರು ಸೇರಿದ್ದರು. ಇವನು ಒಳಗಡೆ ಹೆಜ್ಜೆ ಇಟ್ಟಾಗ ಅವರಿಗೆ ಇವನು ಅವನ ಭಾಷೆಯಲ್ಲಿಯೇ ಪರಿಚಯ ಮಾಡಿಕೊಟ್ಟ. ಇವನು ಅವರಿಗೆ ಇಂಗ್ಲಿಷ್ ನಲ್ಲಿಯೆ ಹಲೋ ಅಂದು. ಅಲ್ಲಿಯೆ ಇದ್ದ ಚೇರ್ ನಲ್ಲಿ ಕುಳಿತುಕೊಂಡಾ.

ಟಿವಿಯಲ್ಲಿ ಇನ್ನೂ ಅದು ಇದು ಆಡ್ಸ್ ಬರುತ್ತಿತ್ತು. ಮ್ಯಾಚ್ ಶುರುವಾಗಲೂ ಇನ್ನೂ ಐದು ನಿಮಿಷಗಳು ಇದ್ದವು. ಹಾಗೆಯೇ ಕ್ಯಾಸವಲ್ ಆಗಿ ಬೆಳೆಗ್ಗೆ ಏನೂ ಮಾಡಿದೆ ಇತ್ಯಾದಿ ಒಂದೇರಡು ಪ್ರಶ್ನೇಗಳ ವಿನಿಮಯ ಇಬ್ಬರ ಮಧ್ಯೆದಲ್ಲಿ ಜರುಗಿತು.

ಮ್ಯಾಚ್ ಶುರುವಾಯಿತು. ಅವನ ರಾಜ್ಯದವರ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೆಂಗಳೂರಿನವರ ಬೋಲಿಂಗ್ ಶುರುವಾಯಿತು. ಮ್ಯಾಚ್ ನಡೆಯುತ್ತಿದ್ದ ಸ್ಥಳ ಅವರ ರಾಜಾಧಾನಿ. ಏನೂ ಅಷ್ಟೊಂದು ಅವರ ಅಭಿಮಾನಿಗಳು ಸ್ಟೇಡಿಯಂ ಪೂರ್ತಿ ಸೇರಿದ್ದರೂ.

ಇವನಿಗೆ ಅನಿಸಿತು. ಏನೂ ಜನ, ಎಷ್ಟೊಂದು ಕ್ರೌಡ್! ಅದರೂ ಎನೂ ಎಷ್ಟೊಂದು ಉತ್ಸಹ. ಪ್ಲೇ ಕಾರ್ಡುಗಳು ಸಹ ಅವರ ಭಾಷೆಯಲ್ಲಿಯೇ ಇದ್ದವಲ್ಲಾ ಅಪ್ಪ ಅನಿಸಿತು.

ಹೀಗೆ ಶುರುವಾಯಿತು. ಮುತ್ತಯ್ಯ ಮುರುಳಿಧರನ್ ಬೆಂಗಳೂರಿನ ಪರ ಬೋಲಿಂಗ ಮಾಡುತ್ತಿದ್ದ. ಮೊದಲನೆ ಬಾಲ್ ನಲ್ಲಿ ಒಂದು ವಿಕೇಟ್ ಪಡೆದುಬಿಟ್ಟ. ಇವನಿಗೆ ಖುಷಿಯಾಯಿತು. ಮುಖದಲ್ಲಿ ನಗುವಿನ ಅಲೆ ಹಾಗೆಯೇ ಹಾದು ಹೋಯಿತು.

ಅನಂತರದ ಒವರ್ ಗೇಲ್ ಮಾಡಿದ ಅವನ ಬಾಲನ್ನು ದೋನಿ ಅಪ್ಪಚ್ಚಿ ಮಾಡುವ ರೀತಿಯಲ್ಲಿ ನಾಲ್ಕು ಸಿಕ್ಸ್ ರ್ ಗಳನ್ನು ಸಿಡಿಸಿದ.

ಆಗ ಶುರುವಾಯಿತು ನೋಡಿ ಈ ಸ್ನೇಹಿತನ ಗೆಳೆಯನ ಅಬ್ಬಾರ.. ಏನೂ ಪ್ರತಿಯೊಂದು ಸಿಕ್ಸರಗೂ ಕುಣಿದು ಕುಪ್ಪಳಿಸಿದ. ಕುರ್ಚಿಯಿಂದ ಎದ್ದು ಎದ್ದು ಎಗರಿ ನಿಂತು. ಅವನ ಭಾಷೆಯಲ್ಲಿಯೇ ಏನೋ ಜೈ ರೀತಿಯಲ್ಲಿ ಅಂದ. ನಮ್ಮ ಸ್ನೇಹಿತನಿಗೆ ಬೇಜರಾಯಿತು. ಏನೂ ಇವನು ಹೀಗೆ ಮಾಡುತ್ತಿದ್ದನಲ್ಲಾ ಎಂದು ಒಮ್ಮೆ ಅವನ ಕಡೆ ನೋಡಿದಾ. ಅವನು ಇವನ ಕಡೆ ನೋಡಿ ಚೇಡಿಸುವ ರೀತಿಯಲ್ಲಿ ಕೈಯನ್ನು ಮೇಲೆ ಎತ್ತಿದ. "ಮೈ ಟೀಂ ಇಸ್ ಸೂಪರ್ ಕಿಂಗ್" ಎಂದು ಇವನ ಕಡೆ ನೋಡುತ್ತಾ ಹೇಳಿದ.

ನಂತರದ ಒವರ್ ಮಾಡಲು ಮತ್ತೇ ಮುತ್ತಯ್ಯ ಮುರುಳಿಧರ್ ಬಂದ. ಎರಡನೇ ಬಾಲಿನಲ್ಲಿಯೇ ಧೋನಿಯ ವಿಕೇಟ್ ಪಡೆಯುವ ಅವಕಾಶ ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. ಬಾಲು ನೇರವಾಗಿ ಗೇಲ್ ಕೈಗೆ ಬಂದಿತ್ತು ಸ್ವಲ್ಪದರಲ್ಲಿಯೇ ಜಾರಿಬಿಟ್ಟಿತು. ಆದರೂ ಮುರುಳಿಧರ್ ಔಟ್ ಗೆ ಅಫಿಲ್ ಮಾಡಿದ.. ಅದನ್ನು ಕಂಡು ಈ ಸ್ನೇಹಿತನ ಸ್ನೇಹಿತನ ಸ್ನೇಹಿತರಿಗೆ ಏನಾಯಿತೂ ಏನೇನೋ ಬಯ್ಯುವ ಮಾತುಗಳನ್ನು ಬೇಸರದ ನುಡಿಗಳನ್ನು ಈ ಸ್ನೇಹಿತನ ಕಡೆ ನೋಡುತ್ತಾ ಹೇಳಲು ಶುರು ಮಾಡಿದರು.

ಇವನಿಗೂ ರೇಗುವಂತಾಯಿತು. ಇವನು ಇಂಗ್ಲಿಷನಲ್ಲಿ ಏನೇನೂ ಎದುರು ಮಾತು ಆಡಿದ. "ನಿಮ್ಮ ಟೀಂ ಏನೂ ಮಹಾ ನಮ್ಮದು ಸೂಪರ್ ಪವರ್ ಟೀಂ. ಈ ಮ್ಯಾಚ್ ನಾವೇ ಗೆಲ್ಲುವುದು ಇತ್ಯಾದಿ..".

ಇದಕ್ಕೆ ಆವನ ಸ್ನೇಹಿತನಿಗೆ ಸಿಟ್ಟು ಬಂದಿತು. ಅದು ಆದ ನಂತರದ ಬಾಲಿನಲ್ಲಿಯೇ ದೋನಿ ಮುತ್ತಯ್ಯನಿಗೆ ಕ್ಲೀನ್ ಬೋಲ್ಡ್ ಆಗಿ ಪೇವಿಲಿನ್ ಕಡೆಮುಖ ಮಾಡಿದ. ಸ್ಟೇಡಿಯಂ ನಲ್ಲಿ ಇದ್ದ ಕೇಲವೆ ಕೆಲವು ಬೆಂಗಳೂರಿಗರು ಹೋ ಎಂದು ಕಿರುಚಿದರೂ ಅದನ್ನೂ ನೋಡಿದ ನಮ್ಮ ಸ್ನೇಹಿತನು ಅಲ್ಲಿಯೇ ಇದ್ದ ಮೇಜನ್ನು ಒಮ್ಮೆ ಗುದ್ದಿ ಹೇ ಕಮಾನ್ ಬೆಂಗಳೂರು ಅಂದ.

ಇದನ್ನೂ ಕಂಡ ಆ ಎಲ್ಲಾ ಅವನ ಸ್ನೇಹಿತರಿಗೆ ತಡೆಯಲಾರದ ಸಿಟ್ಟು ಬಂದಿತು.ಏನೇನೋ ಮಾತನ್ನು ಆಡಿದರು. ಇವನಿಗೂ ತಡೆಯಲಾರದ ಸಿಟ್ಟು ಬಂದಿತು. ಇವನು ತನ್ನ ಗೆಳೆಯ ಅನ್ನುವುದನ್ನು ಮರೆತು ಸಿಕ್ಕಪಟ್ಟೆ ಜಗಳವಾಡುವಂತಹ ನುಡಿಗಳನ್ನು ಕೈ ಕೈ ಎತ್ತಿ ಎತ್ತಿ ಜಟಪಟಿ ಮಾಡಿದರು. (ಅದು ನನ್ನ ಕಿವಿಗೆ ಗಲಾಟೆಯಲ್ಲಿ ಕೇಳಿಸಲಿಲ್ಲ. ಅದ್ದರಿಂದ ಅದನ್ನು ಇಲ್ಲಿ ದಾಖಲಿಸಲು ಆಗುತ್ತಿಲ್ಲ.)

ಇದನ್ನೂ ಗಮನಿಸಿ ಏನೋ ಅಗುತ್ತಿದೆ ಪಸ್ಟ್ ಪ್ಲೋರ್ ನಲ್ಲಿ ಎಂದು, ಗ್ರೌಂಡ್ ಪ್ಲೋರ್ ನಲ್ಲಿದ್ದ ಮನೆಯ ಯಜಮಾನರು ಅವರು ಕನ್ನಡಿಗರು ಆದರೂ ಪ್ರತಿಯೊಬ್ಬರ ಬಗ್ಗೆಯು ಅಭಿಮಾನ. ಅದಕ್ಕೆ ಕಾರಣ ಅವರು ಈ ನಮ್ಮ ಸ್ನೇಹಿತನ ಸ್ನೇಹಿತನಿಗೆ ಮನೆಯನ್ನು ಬಾಡಿಗೆಗೆ ಕೊಟ್ಟಿರುವುದು.

ಅವರು ಮೇಲೆ ಬಂದು ನೋಡುತ್ತಾರೆ. ಅವರ ಕಿರುಚಾಟ ಮುಖದಲ್ಲಿಯನ್ ಸಿಟ್ಟುಗಳನ್ನು ಗಮನಿಸಿ ದಂಗಾದರೂ. ನಮ್ಮ ಈ ಸ್ನೇಹಿತ ಒಂಟಿ ಆದರೂ ಸಾಧ್ಯವಾದಷ್ಟು ಸಮರ್ಥಿಸುವ ಮಟ್ಟಿಗೆ ವಾದಿಸುತ್ತಿದ್ದಾ.

ಅವರು ಕಿವಿ ಮುಚ್ಚಿಕೊಂಡು "ಸ್ಟಾಪಿಟ್" ಅಂದರು. ಅಷ್ಟರ ಹೊತ್ತಿಗೆ ಪರ ರಾಜ್ಯದವರು ೬ ವಿಕೇಟ್ ಗೆ ೧೮೫ ದಾಖಲಿಸಿ ಎಲ್ಲಾ ೨೦ ಓವರ್ ಪೂರ್ತಿ ಮಾಡಿತ್ತು.

ಮನೆಯ ಯಜಮಾನರು ಇಬ್ಬರಿಗೂ ತಿಳಿಯುವಂತೆ ಇಂಗ್ಲೀಷನಲ್ಲಿಯೇ ಕೇಳಿದರು. ಅದರ ಕನ್ನಡ ಅನುವಾದ ಇಲ್ಲಿದೆ.

"ಅಲ್ಲಾ! ನೀವುಗಳು ಯಾಕೆ ಈ ರೀತಿಯಲ್ಲಿ ಕಿತ್ತಾಡುತ್ತಿದ್ದೀರಾ? ಅದು ಕೇವಲ ಆಟ. ಆಟವನ್ನು ಆಟದ ರೀತಿಯಲ್ಲಿ ನೋಡಿ"

ಅದಕ್ಕೆ ನಮ್ಮ ಸ್ನೇಹಿತ ಹೇಳಿದ. "ಸಾರ್! ಇವನಿಗೆ ಮಹಾ ಕೊಬ್ಬು ನಮ್ಮ ಜಾಗಕ್ಕೆ ಬಂದು ನಮ್ಮನ್ನೇ ಕೇವಲವಾಗಿ ನೋಡುತ್ತಾನೆ" ಎಂದು ಕನ್ನಡದಲ್ಲಿ ಹೇಳಿದ.

ಅದಕ್ಕೆ ಅವನ ಸ್ನೇಹಿತ ಅರ್ಥವಾಗದ ರೀತಿಯಲ್ಲಿಯೇ ಯಜಮಾನರ ಮುಖವನ್ನು ಇವನ ಮುಖವನ್ನು ನೋಡಿದ.

ಯಜಮಾನರು ಹೇಳಿದರು. "ಅದು ಏನೇ ಆಗಲಿ ನಮ್ಮದು ವೈವಿಧ್ಯಮಯವಾದ ದೇಶ. ಇಲ್ಲಿ ಹತ್ತು ಹಲವು ಭಾಷೆಗಳ, ಸಂಸ್ಕೃತಿಯ ಜನರುಗಳು ಇದ್ದಾರೆ. ಇಲ್ಲಿಯೇ ನೋಡು ಬೆಂಗಳೂರು ಎಂಬುದು ಮಿನಿ ಭಾರತವಾಗಿದೆ. ಹಾಗಂತ ಅವರು ಬೇರೆ ನಾವು ಬೇರೆ ಎಂದು ಜೀವಿಸಲು ಸಾಧ್ಯವಿಲ್ಲ."

"ಈ ಐ.ಪಿ.ಎಲ್ ಆದರೂ ಅಷ್ಟೇ ಗಮನಿಸಿ ಪ್ರತಿಯೊಂದು ಟೀಂ ನಲ್ಲೂ ವಿವಿಧ ದೇಶ, ನಮ್ಮ ದೇಶದ ವಿವಿಧ ರಾಜ್ಯದ ಆಟಗಾರರು ಆಟವನ್ನು ಆಡುತ್ತಿದ್ದಾರೆ. ಯಾಕೆ ಈ ರೀತಿಯ ಟೀಂ ರಚಿಸಿದ್ದಾರೆ ಗೊತ್ತಾ?" ಎಂದು ಈ ಇವರುಗಳಿಗೆ ಕೇಳಿದರು.

ಇವರುಗಳು ಏನೂ ತಿಳಿಯದ ರೀತಿಯಲ್ಲಿ ಕಣ್ಣು ಕಣ್ಣು ಬಿಟ್ಟರು.

ಯಜಮಾನರು " ಪ್ರತಿಯೊಬ್ಬರೂ ಎಲ್ಲಾ ಒಂದೇ ಎಂಬ ರೀತಿಯಲ್ಲಿ ಬೆರೆಯಲಿ ಮತ್ತು ಪ್ರತಿಯೊಂದು ಮನಸ್ಸುಗಳಲ್ಲೂ ಸ್ನೇಹ ಸಾಮರಸ್ಯ ಬೆಳೆಯಲಿ. ಅದು ರಾಜ್ಯ ಮತ್ತು ದೇಶ ದೇಶಗಳ ಮಧ್ಯದ ಬಾಂಧವ್ಯಕ್ಕೆ ಕಾರಣವಾಗಲಿ ಎಂದು."

"ಅದು ಬಿಟ್ಟು ವೈರಿಗಳ ರೀತಿಯಲ್ಲಿ ನೋಡಲಿ ಎಂಬುದಾಗಿದ್ದಾರೇ ಈ ಆಟೋಪಾಟಗಳನ್ನು ಯಾರೊಬ್ಬರೂ ಇಷ್ಟರ ಮಟ್ಟಿಗೆ ಪ್ರೊತ್ಸಾಹಿಸುತ್ತಿರಲಿಲ್ಲ. ನೋಡಿ ಒಲಂಪಿಕ್ಸ್ ಸಹ ಇದೇ ಒಂದು ಮುಖ್ಯಾಂಶದ ಮೇಲೆ ನಾಲ್ಕು ವರುಷಗಳಿಗೊಮ್ಮೆ ವೇದಿಕೆಯಾಗಿ ಜಗತ್ತಿನಲ್ಲಿನ ಎಲ್ಲಾ ಕ್ರಿಡಾಪಟುಗಳ ಸಾಮರ್ಥ್ಯವನ್ನು ಜಗತ್ತಿನ ಮುಂದಿಡಲು ಅವಕಾಶ ಮಾಡಿಕೊಡುತ್ತಾದೆ."

ಈ ಮಾತುಗಳನ್ನು ಕೇಳಿದಾಗ ಸ್ವಲ್ಪ ಕೂಲ್ ಅದರು ಅನಿಸುತ್ತದೆ. ಬುದ್ಧಿವಂತರಾಗಿ ವೈರಿಗಳ ರೀತಿಯಲ್ಲಿ ನಡೆದುಕೊಂಡಿದ್ದಕ್ಕೆ ಅವರುಗಳಿಗೆ ಅವಮಾನವಾದ ರೀತಿಯಲ್ಲಿ ತಲೆ ತಗ್ಗಿಸಿಕೊಂಡು ನಿಂತಿದ್ದರು.

ಯಜಮಾನರು ಮುಂದುವರಿಸುತ್ತಾ "ಇಲ್ಲಿ ಯಾವೊಬ್ಬ ಆಟಗಾರನು ನಮ್ಮವನು ಅವರವನು, ಯಾವೊಂದು ಟೀಂ ನಮ್ಮದು ಅವರದು ಎಂಬ ರೀತಿಯಲ್ಲಿ ನೋಡಬಾರದು. ಮತ್ತು ಅವರು ನಮ್ಮವರು ಆದ್ದರಿಂದ ಗೆಲ್ಲಲೇ ಬೇಕು ಎಂಬ ಹುಚ್ಚು ಅಭಿಮಾನವಿರಬಾರದು. ಇದು ಆಟ ಆಟವನ್ನು ಮಾತ್ರ ಕಾಣಬೇಕು. ಅದನ್ನು ಮಾತ್ರ ಸಂತೋಷದಿಂದ ನೋಡಿ ಸಂತಸಪಡಬೇಕು. ಸೋತವರು ನಮ್ಮವರೇ ಗೆದ್ದವರು ನಮ್ಮವರೇ ಎಂದುಕೊಳ್ಳಬೇಕು. ಗಮನಿಸಿ ದೋನಿ,ಮುರುಳಿಧರನ್,ಗೇಲ್ ಎಲ್ಲಿಯವರು? ಅವರುಗಳೇ ಆಟ ಎಂಬ ರೀತಿಯಲ್ಲಿ ಆಟವಾಡುತ್ತಿದ್ದಾರೆ. ಆದರೇ ಪ್ರೇಕ್ಷಕರಾದ ನಾವುಗಳು ಹೀಗೆ ಕಿತ್ತಾಡುವುದು ಎಷ್ಟು ಸರೀ?"

ನಮ್ಮ ಸ್ನೇಹಿತನಿಗೆ ಅವರು ಹೇಳಿದರು. "ನಾವುಗಳು ಪ್ರತಿಯೊಂದನ್ನು ಬೇರೊಬ್ಬರಿಂದ ಕಲಿಯುವುದು ಬಹಳ ಇರುತ್ತದೆ. ನಮ್ಮದರ ಬಗ್ಗೆ ಅಭಿಮಾನ ಪಡುವುದು ಆರೋಗ್ಯಕರ ಅದೇ ರೀತಿಯಲ್ಲಿ ದುರಾಭಿಮಾನಪಡುವುದು ಅಷ್ಟೇ ಅಪಾಯಕಾರಿ" ಎಂದು ತಮಿಳು ಸ್ನೇಹಿತರ ಕಡೆ ಮುಖ ಮಾಡಿದರು.

"ಬನ್ನಿ ಕೈ ಕೈ ಜೋಡಿಸಿ. ಬೆಂಗಳೂರಿನ ಬ್ಯಾಟಿಂಗ್ ನ್ನು ಆಟ ಎನ್ನುವ ರೀತಿಯಲ್ಲಿ ಎಲ್ಲಾರೂ ಒಟ್ಟಿಗೆ ಸೇರಿ ನೋಡಿ ಆನಂದಿಸಿ. ನಮ್ಮೆಲ್ಲಾರಿಗಿಂತ ನಮ್ಮ ದೇಶ ದೊಡ್ಡದು. ಇದನ್ನು ಗಮನದಲ್ಲಿ ಇಡೀ. ಜೈ ಭಾರತ್!"

ಎಂದು ಹೇಳಿ ಅವರುಗಳು ನಗು ನಗುತ್ತಾ ರೋಂ ಹೊರಗಡೆ ಹೋದರೂ.

ಇವರುಗಳು ಎಲ್ಲಾದನ್ನು ಮರೆತು ಖುಷಿಯಾಗಿ ಹೆಗಲ ಮೇಲೆ ಕೈ ಹಾಕಿಕೊಂಡು ಪೇಪ್ಸಿ ಕುಡಿಯುತ್ತಾ ಥಂಡಾ ಥಂಡಾ ಆಗಿಬಿಟ್ಟರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ