ಸೋಮವಾರ, ಜನವರಿ 9, 2012

ಹೇಗಿದ್ದರೂ ಸಾಗುತ್ತದೆ...

ಮನುಷ್ಯನಿಗೆ ಎಲ್ಲಿಯು ನಿಲ್ಲರಾದಂತಹ ಮನಸ್ಸು ಮತ್ತು ಸ್ವಭಾವ. ಅವನು ನಿತ್ಯ ಏನಾದರೂ ಹೊಸದನ್ನು ಕಂಡುಕೊಳ್ಳುವ ತವಕ.

ಯೋಚಿಸಿ ಸುಮ್ಮನೇ ಕೂತರೂ ಸಹ ಕುಳಿತ ಜಾಗದಿಂದ ಇಡೀ ಜಗತ್ತನ್ನೇ ತನ್ನ ಮನಸ್ಸಿನ ಮೊಲಕ ಒಂದು ಸುತ್ತು ಹಾಕಿ ಕೊಂಡು ಬಂದಿರುತ್ತಾನೆ.

ನಿಶ್ಚಲವಾಗಿ ಒಂದು ಕ್ಷಣವು ಇರಲು ಸಾಧ್ಯವಿಲ್ಲ!

ಎಂದು ತಾಯಿಯ ಗರ್ಭದಲ್ಲಿ ಒಂದು ಕಣವಾಗಿ ಜೀವದ ಅಂಕುರವಾಗುತ್ತದೋ.. ಅಂದಿನಿಂದ ನಿರಂತರವಾಗಿ ಚಲಿಸುತ್ತಾ ಚಲಿಸುತ್ತಲೇ ಇರುತ್ತಾನೆ. ಅದೇ ಅವನ ಬೆಳವಣಿಗೆ ಅನಿಸುತ್ತದೆ.

ನನಗೆ ಅನಿಸುತ್ತದೆ ಯಾರೂ ಅರಿಯಲಾರದಂತಹ ಒಂದು ಉತ್ಕೃಷ್ಟವಾದ ಶಕ್ತಿಯನ್ನು ಈ ಮಾನವ ಜೀವ ಸಂಪಾಧಿಸಿದೆ ಅದಕ್ಕೆ ಎಷ್ಟೊಂದು ಕ್ಲಿಷ್ಟಕರವಾದ ಸಂಗತಿಗಳನ್ನು ಯೋಚಿಸುತ್ತಾನೆ, ಬಿಡಿಸುತ್ತಾನೆ, ಅನ್ವೇಷಿಸುತ್ತಾನೆ, ಎಷ್ಟೊಂದು ವಿಷಯಗಳನ್ನು ತನ್ನ ನೆನಪಿನಾಳದಲ್ಲಿ ಶೇಕರಿಸಿಟ್ಟುಕೊಂಡಿರುತ್ತಾನೆ, ಎಷ್ಟೊಂದು ಭಾವನೆಗಳನ್ನು ಒಂದೇ ಸಮಯದಲ್ಲಿ ವ್ಯಕ್ತಪಡಿಸುತ್ತಾನೆ, ಕ್ರೌರ್ಯ, ಹಿಂಸೆ, ರೋಷ.. ಹೀಗೆ ಬೇರೊಂದು ಯಾವ ಜೀವಿಯು ಇವನ ಹಂತಕ್ಕೆ ಯೋಚಿಸಿ ವರ್ತಿಸಲು ಸಾಧ್ಯವಿಲ್ಲ ಬಿಡಿ.

ಗಮನಿಸಿ ಮನುಷ್ಯ ಓಡಾಡುವ ಜಾಡಿನಲ್ಲಿ ಒಂದು ಹುಲ್ಲು ಗರಿಕೆಯು ಬೆಳೆಯಲು ಸಾಧ್ಯವಿಲ್ಲ. ಅಷ್ಟೊಂದು ಪ್ರಭಾವಳಿ ಅವನ ಸುತ್ತಾ ಪಸರಿಸಿರುತ್ತೇನೋ?

ಅವನ ಸಂಗತಿಗಳೆ ಮನುಷ್ಯರಾದ ಮನುಷ್ಯರಿಗೆ ಅರಿಯಲಾರದಂತಹ ಸ್ಥಿತಿಯಾಗಿದೆ. ಒಬ್ಬೊಬ್ಬರದು ಒಂದೊಂದು ರೀತಿ ನೀತಿ. ವೈವಿಧ್ಯಮಯವಾದ ನಡಾವಳಿಯೇ ಮನುಷ್ಯನನ್ನು ಈ ಜೀವ ಗೋಳದಲ್ಲಿ ಅತಿ ಉನ್ನತಿಗೇರಿಸಿದೆ ಅನಿಸುತ್ತದೆ.

ಅವನ(ಳ) ಸುಖ ದುಃಖಗಳನ್ನು ತನ್ನ ಜೀವನದ ಹಾದಿಯಲ್ಲಿ ನಿತ್ಯ ನಿರಂತರ ಕಂಡುಕೊಳ್ಳುತ್ತಲೆ ಇರುತ್ತಾರೆ. ಮುಂದಾಲೊಚನೆ, ದೂರದೃಷ್ಟಿ ಮನುಷ್ಯ ಜಾತಿಗೆ ಮಾತ್ರ ಇದೆ ಅನಿಸುತ್ತದೆ. ಇದು ಒಂದು ವರವೇ ಸರಿ.

ಮತ್ತು ಇಂದಿನ ಈ ಇಷ್ಟೊಂದು ವೇಗದ ಬದುಕಿನ ರೋವಾರಿ ಅವನಾಗಿರುವುದಕ್ಕೆ ಇದೆ ಮುಖ್ಯವಾಗಿದೆ.

ಯೋಚಿಸಿ ಮನುಷ್ಯ ತಾನು ತನ್ನ ಸಂಸಾರವನ್ನು ಕಟ್ಟಿಕೊಳ್ಳುವ ಬಗೆಯನ್ನು ಅಲ್ಲಿರುವ ಬಿಡಿಸಿಲಾರದ ಅನುಬಂಧವನ್ನು ಯಾರೊಬ್ಬರೂ ಯೋಚಿಸಲಾರದಂತದ್ದು. ಅದೇ ಅವನ ಏಳ್ಗೆಗೆ ದಿಕ್ಕಾಗಿರುತ್ತದೆ. ತಾನು ತನ್ನವರು ತನ್ನ ಮುಂದಿನ ಪೀಳಿಗೆ.

ಅವನ ಒಂದು ವಿದ್ಯುತ್ ಸಂಚಲನದ ಜೀವ ರಸವನ್ನು ತನ್ನವರೆಲ್ಲಾರೊಡನೆ ಪಸರಿಸಿಕೊಂಡಿರುತ್ತಾನೆ. ತಾನು ನೋವುಂಡಾಗ ತನ್ನವರು ವ್ಯಥೆಪಡುವರು. ತಾನು ಖುಷಿಪಟ್ಟಾಗ ತನ್ನವರು ಸಂತೋಷಪಡುವರು. ಈ ರೀತಿಯ ಒಂದು ಹಂದರವನ್ನು ಕಟ್ಟಿಕೊಂಡಿರುವುದರಿಂದಲೇ ಸಮಷ್ಟಿಯಲ್ಲಿ ತಾನು ಶ್ರೇಷ್ಠ ಎಂಬ ಭಾವನೆಯಿಂದ ತನ್ನ ಬೆಳವಣಿಗೆಯಲ್ಲಿ ದಾಪುಗಾಲು ಹಾಕುತ್ತಾ ಸಾಗುತ್ತಿರುವುದು.

ಈ ರೀತಿಯ ಒಂದು ಬಂಧನವು ಪ್ರತಿಯೊಂದು ಕುಟುಂಬದಿಂದ ಪ್ರಾರಂಭವಾಗಿ, ಕುಟುಂಬ-ಕುಟುಂಬ, ಊರು-ಊರು, ರಾಜ್ಯ-ರಾಜ್ಯ, ದೇಶ-ದೇಶ ಹೀಗೆ ಹರಿಯುವ ನಿತ್ಯ ಜೀವಂತಿಕೆಯ ನಾವೆಲ್ಲಾ ಒಂದೇ ಎಂಬ ಭಾವನೆಯ ಜೀವನದಿಯಾಗಿದೆ.

ಮನುಷ್ಯ ಯಾವಾಗ ಅತಿ ಸಂತೋಷಪಡುತ್ತಾನೆ ಎಂದರೇ? ನನಗೆ ಅನಿಸುತ್ತದೆ.. ತನ್ನ ತದ್ರೊಪದ ಒಂದು ಜೀವಂತ ಜೀವಿಗೆ ಜೀವದಾರಣೆ ಮಾಡಿದಾಗ ಮಾತ್ರ. ತನ್ನ ನಂತರದ ಜೀವನ ಹೊರಾಟಕ್ಕೆ ಪಕೃತಿದತ್ತವಾದ ಕಾಯಕವನ್ನು ಮಾಡಿದಾಗ ಇಡೀ ಪ್ರಕೃತಿಯೇ ಅಸ್ತು ಅನ್ನುತ್ತಿರುತ್ತದೆ ಮತ್ತು ನಲ್ಮಮೆಯ ಆನಂದದಲ್ಲಿ ತೇಲುತ್ತಿರುತ್ತದೆ.ಇದರಿಂದಾಗಿ ಅವನು ತನಗೆ ಗೊತ್ತಿಲ್ಲದ ರೀತಿಯಲ್ಲಿ ಅತಿ ಹೆಚ್ಚು ಸಂತೋಷವನ್ನು ಜೀವಮಾನದ ಒಂದು ಸಾಧನೆ ಅನಿಸುತ್ತದೆ. ಜೀವಾರ್ಪಣೆ ಅಂದ್ರೇ?

ಜೀವದ ಹುಟ್ಟು, ಬೆಳವಣಿಗೆ, ವಯಸ್ಸು ಹೀಗೆ ಕಾಲ ಚಕ್ರದ ಸುಳಿಯಲ್ಲಿ ತಾನು ಪಯಣಿಸುವಾಗ ತಾನು ಮಾಡಬೇಕಾದ ನೈಸರ್ಗಿಕ ಕ್ರಿಯೆಗಳನ್ನು ಮಾಡಿ ಅದರಲ್ಲಿ ತನ್ನ ಕರ್ತವ್ಯವನ್ನು ನಿರೂಪಿಸಿದಾಗ ಅವನ ಹಿರಿಮೆಯ ಮಹತ್ವವನ್ನು ಪೂರ್ಣವಾಗಿ ಕಾಣಬಹುದಾಗಿದೆ.

ಪ್ರತಿಯೊಬ್ಬರೂ ಈ ಬದುಕು ಜಟಕಾ ಬಂಡಿಯಲ್ಲಿ ಪ್ರಯಾಣಿಸುತ್ತಿರುವುದು ಆ ಒಂದು ಸ್ಥಳವನ್ನು ಸೇರಲು ಅನಿಸುತ್ತಿಲ್ಲವಾ? ಯೋಚಿಸಿ.




ಯಾವುದಕ್ಕಾಗಿ ಈ ರೀತಿಯಲ್ಲಿ ತನ್ನ ಎಲ್ಲಾ ದುಡಿಮೆಯನ್ನು, ಶಕ್ತಿಯನ್ನು ಪರಿಪೂರ್ಣವಾಗಿ ವ್ಯಯಿಸುತ್ತಿರುವುದು?

ತನ್ನ ಸುಖ, ದುಃಖದ ಮೊತ್ತವನ್ನು ಮುಡಿಪಾಗಿಡುತ್ತಿರುವುದು ಯಾವುದಕ್ಕಾಗಿ?

ಜೀವನ ಚಕ್ರದ ರೂಪದಲ್ಲಿ ಯಾವಾ ಯಾವ ಸಮಯಕ್ಕೆ ಏನೇನು ಮಾಡಬೇಕೋ, ಸುಖಿಸಬೇಕೋ ಆ ಎಲ್ಲಾ ಕಾರ್ಯಗಳನ್ನು ಚಾಚೂ ತಪ್ಪದೆ, ಗೊತ್ತಾಗದಾ ರೀತಿಯಲ್ಲಿ ನಮ್ಮಲ್ಲಿ ನಿತ್ಯ ಘಟಿಸುತ್ತಾ ಸಾಗುತ್ತಲೇ ಸಾಗಿರುತ್ತದೆ.

ಟೈಮ್ ಯಾರಿಗೂ ಎಂದು ಕಾಯುವುದಿಲ್ಲ. ನಮ್ಮ ನಮ್ಮ ನಿಲ್ದಾಣಕ್ಕೆ ಬಂದಾಗ ನಾವುಗಳು ಹತ್ತಬೇಕು. ಸಿಗುವವರ ಜೋತೆಯಲ್ಲಿ, ಸಿಗುವವ ಸಮಯದಲ್ಲಿ ಹೇಗೆ ಹೇಗೆ ಜೀವನವನ್ನು ಸವಿಯಬೇಕೋ ಸವಿಯಬೇಕು, ನಮ್ಮ ತಾಣ ಬಂದಾಗ ಇಳಿಯಲೇಬೇಕು.

ಹೇಗಿದ್ದರೂ ಸಾಗುತ್ತದೆ ಎಂಬುದು ಏನೂ ಮಾಡಲಾರದವನ ಮಾತಾಗುತ್ತದೆ. ನಮ್ಮ ಚೊಕ್ಕ ಜೀವನಕ್ಕೆ ಬೇಕಾದ ಅಲೋಚನೆ, ದುಡಿಮೆ, ಸಂಬಂಧಗಳ ಬಗ್ಗೆ ಕೊಂಚ ಕಾಳಜಿಯನ್ನು ಹೊಂದಿಬಿಟ್ಟರೆ ಯಾರು ಕಾಣಲಾರದಂತಹ ಸ್ವಂತಿಕೆಯ ಸ್ವರ್ಗಮಯ ಜೀವನವನ್ನು ಈ ಭೂಮಿಯ ಮೇಲೆ ಕಾಣಬಹುದು.

ಏನಂತಿರೀ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ