ಸೋಮವಾರ, ನವೆಂಬರ್ 30, 2009

ಬೆಂದಕಾಳೂರಿನ ಬೆವರ ಸೆಲೆ

ಇತ್ತೀಚೆಗೆ ಆ ಫೀಲ್ ಆಗುತ್ತಿದೆ ನಾನೇಷ್ಟು ದೈಹಿಕ ಶ್ರಮವನ್ನು ಪಡುತ್ತಿದ್ದೇನೆ ಎಂದು. ಪೂರಾ ಯಾಂತ್ರಿಕ ಜೀವನದ ಚಕ್ರಕ್ಕೆ ಸಿಕ್ಕು ಕೇವಲ ಕಡಿಮೆ ದೈಹಿಕ ಶ್ರಮದ ಕೆಲಸಗಳನ್ನು ಮಾಡುತ್ತಿರುವುದರಿಂದ ಸುಸ್ತಾದ ಕೆಲಸಗಳನ್ನು ಮಾಡಿ ಮೈ ಬೆವರು ಕೀಳುವಂತೆ ಯಾವುದೇ ಚಟುವಟಿಕೆ ಅಥಾವ ಸರಿಸುಮಾರು ದೂರದ ನಡೆಯುವಿಕೆಯನ್ನೇ ಮರೆತಂತಾಗಿದೆ. ಇನ್ನೂ ಯಾವುದೇ ರೀತಿಯ ದೈಹಿಕವಾಗಿ ರಿಸ್ಕ್ ಇರುವಂತ ಮೈ ನೋವು ಮಾಡುವಂತ ಕೆಲಸಗಳನ್ನು ಅಟ್ ಲೀಸ್ಟ್ ಆಟಗಳನ್ನು ಆಡಿ ಜಮಾನವೇ ಕಳೆದಂತಾಗಿದೆಯೇನೋ. ಒಂದು ರೀತಿಯ ಮೈ ಆಲಸ್ಯವನ್ನು ನನ್ನ ದೇಹ ಪ್ರತಿಪಲಿಸುತ್ತಿರುವಂತೆ ಕಾಣುತ್ತೀದೆ.

ಕೇವಲ ಕೇವಲ ಮನಸ್ಸಿಗೆ ಸಂಬಂಧಿಸಿದ ಕಠಿಣ ಕಸರತ್ತುಗಳನ್ನು ಮಾಡುವಲ್ಲಿ ಸಮಯವನ್ನು ಕಳೆಯುತ್ತಿದ್ದೇನೆ ಅನಿಸುತ್ತಿದೆ. ಆದರೆ ಬರೀ ಮನಸ್ಸಿಗೆ ಹೆಚ್ಚು ಕೆಲಸ ಕೊಟ್ಟಾಗ ಅದು ಸಹ ಮೊಂಡಾತ ಮಾಡಿ ವಿವಿಧ ರೀತಿಯ ದೇಹ ವೈಪರಿತ್ಯಗಲನ್ನು ಅದು ತನ್ನ ಮುನಿಸಿನೋಪಾದಿಯಲ್ಲಿ ಮೈ ಮೇಲೆ ತೋರುತ್ತದೆ. ಅದಕ್ಕೆ ಸ್ವಲ್ಪ ದಪ್ಪನಾದೇನೋ ಅನಿಸುವುದು, ಕತ್ತು, ಬೆನ್ನು, ಕಾಲು ನೋವು, ಕಣ್ಣು ಸ್ಟ್ರೈನ್ ಆಗಿದೆಯೇನೋ ಎಂಬ ಫೀಲ್ ಆಗುವುದು. ಈ ರೀತಿಯ ನಾನಾ ಕಾಟಗಳನ್ನು ಮನಸ್ಸು ಮುನಿಸಿಕೊಂಡು ಅನುಭವಿಸು ಎಂದು ಅಣಿಕಿಸುತ್ತೀದೆ.

ಇದಕ್ಕೆಲ್ಲಾ ವಿರಾಮ ಕಾಣಿಸಬೇಕು ದೇಹ - ಮನಸ್ಸು ಎರಡನ್ನು ಸಮತೋಲನದಲ್ಲಿ ಕಾಣುತ್ತಿನಪ್ಪಾ ಎಂದು ಇತ್ತೀಚೆಗೆ ಮುಂಜಾನೆಯೇ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಹತ್ತಿರದ ಪಾರ್ಕಿನಲ್ಲಿ ನಮ್ಮ ನಗರದ ಖಾಯಂ ಜಾಗಿಂಗ್ ಮಂದಿಯ ಜೋತೆ ನಾನು ಬಿರುಸಿನ ಹೆಜ್ಜೆ ಹಾಕುತ್ತಿದ್ದೇನೆ.

ಮಕ್ಕಳಿಂದ - ವೃದ್ಧರವರಿಗೆ ವಿವಿಧ ರೀತಿಯ ವಯೋಮಾನದ ಎಲ್ಲಾ ಆಪರ್ಟಮೆಂಟ್ ಜೀವಗಳು ಮುಂಜಾನೆಯೇ ಚುಮು ಚುಮು ಬಿಸಿಲಿನ ನಡುವೆ ಯಾವುದು ಒಂದು ಯುದ್ಧಕ್ಕೆ ತಯಾರಿ ನಡೆಸಲು ಮಾಸ್ಟ್ ಪಾರ್ಟ್ ಮಾಡುತ್ತಿದ್ದಾರೇನೋ ಅನಿಸುವಂತೆ ಹಲವಾರು ಸುತ್ತುಗಳನ್ನು ಸುಸ್ತಾಗಿ ಸುತ್ತುತ್ತಾ ಇರುತ್ತಾರೆ.

ಹೌದು! ಅತಿ ಅನುಕೂಲಕರವಾದ ನಮ್ಮ ನಗರ ಜೀವನ ಎಷ್ಟರ ಮಟ್ಟಿಗೆ ಮಂದಿಯನ್ನು ಸೋಮಾರಿಗಳನ್ನಾಗಿ ಮಾಡಿದೆಯೆಂಬುದನ್ನು, ಬೆವರಿನ ಬೆಲೆ ಏನು ಎಂಬುದನ್ನು ಕಲ್ಪಿಸಲೂ ಸಾಧ್ಯವಾಗುವುದಿಲ್ಲ. ಅದಕ್ಕೆ ಸಾಕ್ಷಿ ನಮ್ಮ ಎಲ್ಲಾ ಕೃತಕ ನಗರ ಉದ್ಯಾನ ವನಗಳಲ್ಲಿನ ನಮ್ಮ ಮುಂಜಾನೆಯ ಜನ ಜಾತ್ರೆ.

ಅದು ಅಗತ್ಯವಾಗಿ ಬೇಕೆ ಬೇಕು ದಿನಕ್ಕೆ ೨ ಕಿ.ಮೀ ನಡೆಯಬೇಕು ಆಗ ಮಾತ್ರ ನೀವು ಆರೋಗ್ಯವಾಗಿರುತ್ತೀರಿ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ. ಈ ಯಾವುದೇ ವಿಚಾರ ನಮ್ಮ ಹಳ್ಳಿಯ ಜನಕ್ಕೆ ಗೊತ್ತಿಲ್ಲ ಬಿಡಿ. ವಾಕಿಂಗ್ ಅಂದರೆ ಏನೋ ಎಂದು ಎಕಾ ಮಕಾ ನೋಡುತ್ತಾರೆ. ಸುಮ್ಮ ಸುಮ್ಮನೆ ಸುತ್ತಲು, ನಡೆದಾಡಲು ನಮಗೇನು ಹುಚ್ಚ ಅನ್ನುತ್ತಾರೆ. ಅದು ಹಳ್ಳಿ ಜಗತ್ತು!

ಹೌದು ಅಲ್ಲಿ ಮೈ ಮುರಿಯುವಷ್ಟು ಕೆಲಸ ಮತ್ತು ಹೊಟ್ಟೆ ತುಂಬುವಷ್ಟು ಪೌಷ್ಟಿಕ ಹಿಟ್ಟು ಸಿಗುತ್ತದೆ. ಕಣ್ಣು ತುಂಬ ನಿದ್ದೆ ಬರುತ್ತದೆ. ಇದನ್ನು ಸುಖ ಎನ್ನೂಣವಾ ಅಂದರೆ ಅಲ್ಲಿಯ ಜನ ಏನು ಸುಖನೋ ಏನೋ ಮಹಾರಾಯ ನಮ್ಮ ಗೋಳು ನಮಗೆ ದಿನ ಇದ್ದುದ್ದೇ ಎಂದು ನಮ್ಮ ನಗರ ಮಂದಿಯ ಅದೃಷ್ಟವನ್ನು ಕೊಂಡಾಡುತ್ತಾರೆ. ಆದರೆ ಈ ನಗರ ಸುಖದ ನಗರ ಮಂದಿಯ ಪಡಿಪಾಟಲು ಮುಂಜಾನೆಯ ಸಮಯದಲ್ಲಿ ನಗರದ ಎಲ್ಲಾ ಉದ್ಯಾನವನಗಳನ್ನು ಕಂಡಾಗ ಹಳ್ಳಿಯವನ ಪ್ರತಿಕ್ರೀಯೇ ಏನು ಎಂಬುದೇ ನನಗೆ ನಿತ್ಯ ದೂಡ್ಡ ಪ್ರಶ್ನಾರ್ಥಾಕ ಚಿಹ್ನೆ!

ದಿನದ ಮುಕ್ಕಾಲು ಪಾಲು ಸಮಯವನ್ನು ಕೇವಲ ನಾಲ್ಕು ಗೋಡೆಗಳಲ್ಲಿ - ಮನೆ - ಆಫೀಸ್ ನಲ್ಲಿ ಕಳೆಯುವ ಮಂದಿಯ ದೇಹ ಸ್ಥಿತಿ ಎಷ್ಟರ ಮಟ್ಟಿಗೆ ಜಡವಾಗಿರುತ್ತದೆ ಅಂದರೆ ಅವರ ದೇಹದ ವಾಲ್ಯುಮ್ ನೋಡಿದರೆ ನಿರ್ದರಿಸಬಹುದು. ಇದೇನೂ ಸುಖವಾಪ್ಪಾ ಎನ್ನುವಂತಾಗುತ್ತದೆ.

ಪರಸ್ಪರರ ನಡುವಿನ ಸ್ನೇಹ ಸಂಬಂಧ, ಬಂದುತ್ವಗಳು ನಗಣ್ಯವಾಗಿ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ದುಡಿಯುವ ಯಂತ್ರಗಳಾಗಿರುತ್ತಾರೆ. ಇದಕ್ಕೆ ಯಾವುದೇ ಬೇದ ಭಾವವಿಲ್ಲವೇನೋ ಎಂಬಂತೆ ಎಲ್ಲಾ ವಯಸ್ಸಿನವರು, ಮನಸ್ಸಿನವರು ತಮ್ಮ ತಮ್ಮ ಚಟುವಟಿಕೆಗಳಲ್ಲಿ ಲೀನವಾಗಿ ತಮ್ಮ ಮುಂದುವರಿಕೆಯೇ ಅಭಿವೃದ್ಧಿಯನ್ನು ಹೊಂದುವ ಪಾಥ್ ಟ್ರ್ಯಾಕ್ ಅಕ್ಟೀವಿಟಿ ಬಿಟ್ಟು ಬೇರೊಂದನ್ನು ಯೋಚಿಸಲಾರರು.

ಅದಕ್ಕೆ ಇರಬೇಕರ್ರಿ ಕೆಲಸ ಅಥವಾ ಯಾವುದೇ ಬದುಕು ನಿಂತ ನೀರಾಗಬಾರದು ಅದು ನಿರಂತರವಾಗಿ ಹರಿಯುವ ಝರಿಯಾಗಿರಬೇಕು ಆಗಲೇ ಅದಕ್ಕೆ ಒಳಪು ಮತ್ತು ಬಿಳುಪಿನ ಬಿಂಬವನ್ನು ಅದರಲ್ಲಿ ಕಾಣಬಹುದು.

ನಮ್ಮ ಹಳ್ಳಿಗಾಡಿನ ಜನಗಳ ಬದುಕಿನಲ್ಲಿ ಎಲ್ಲಾ ಇದೆ. ತಮ್ಮ ನೋವು, ನಲಿವು, ಸಂತಸ, ಕಾತರ, ಬಡತನ ಇತ್ಯಾದಿ ಎಲ್ಲವನ್ನು ತಾವೇ ಹಾಡುಗಳನ್ನು ಕಟ್ಟಿ ಹಾಡಿದರು. ಅದು ಒಬ್ಬರಿಂದ ಮತ್ತೋಬ್ಬರಿಗೆ ಸಂಹವನದ ಮೊಲಕ ಪ್ರಸರವಾಯಿತು ಮತ್ತು ಇಂದಿಗೂ ಅದು "ಜನಪದ"ವಾಗಿ ಜೀವಂತವಾಗಿದೆ. ಗಾದೆಗಳಾಗಿ ವೇದ ಸುಳ್ಳದರೂ ಗಾದೆ ಸುಳ್ಳಾಗದು ಎಂದು ಪ್ರತಿಬಿಂಬಿಸುತ್ತಿದೆ. ಹಲವು ಹಬ್ಬ ಆಚರಣೆಗಳಾಗಿ ನಮ್ಮ ದಿನಚರಿಯಲ್ಲಿ ಸ್ಥಾಪಿತವಾಗಿ ಇಂದಿಗೂ ಆಚರಿಸಲ್ಪಡುತ್ತವೆ. ಇಂಥ ಯಾವುದೇ ಒಂದು ಕ್ರೀಯಶೀಲವಾದ ಕೆಲಸವಲ್ಲದ ಘಳೀಗೆ ನಗರ ಬದುಕಿನಲ್ಲಿ ಬೋರ್ ಎನಿಸದಿರಲಾರದೇ? ಹೆಳಲಾರರು!

-ತಿಪುಟಪ್ರಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ